Press "Enter" to skip to content

Posts published in “ಲೇಖನ”

ವೈವಿಧ್ಯಮಯ ವಿಷಯಗಳ ಬಗ್ಗೆ ವೈವಿಧ್ಯಮಯ ಲೇಖನಗಳು

ಲಂಡನ್ನಿಂದ…

- ಟಿ. ಜಿ. ಶ್ರೀನಿಧಿ

ಈ ಊರಲ್ಲಿ ನ್ಯೂಸ್ ಪೇಪರ್ ಅನ್ನೋದು ಒಂದು ವಿಚಿತ್ರ ವ್ಯವಹಾರ. ಒಂದಷ್ಟು ಪೇಪರ್ಗಳು ಐವತ್ತು ಪೆನ್ನಿಗೋ ಒಂದು ಪೌಂಡಿಗೋ ಮಾರಾಟವಾದರೆ ಮಿಕ್ಕ ಇನ್ನೊಂದಷ್ಟು ಪತ್ರಿಕೆಗಳನ್ನು ನಿಮಗೆ ಫ್ರೀಯಾಗಿ ಕೊಡೋದಕ್ಕೆ ಜನ ಮೈಮೇಲೇ ಬೀಳ್ತಾರೆ. ಮೆಟ್ರೋ, ಸಿಟಿ ಎಎಂ, ಲಂಡನ್ಪೇಪರ್, ಲೈಟ್ - ಇವೆಲ್ಲ ಫ್ರೀ ಜಾತಿಗೆ ಸೇರಿದ, ಟ್ಯಾಬ್ಲಾಯ್ಡ್ ಗಾತ್ರದ ಪೇಪರ್ಗಳು (ದುಡ್ಡು ಕೊಟ್ಟು ಕೊಳ್ಳುವ ಪತ್ರಿಕೆಗಳಲ್ಲೂ ಬಹಳಷ್ಟು ಇದೇ ಸೈಜಿನಲ್ಲಿ ಪ್ರಕಟವಾಗುವುದು ವಿಶೇಷ). ಐವತ್ತರಿಂದ ಅರುವತ್ತು ಪೇಜು - ದಿನಾ ಬೆಳಿಗ್ಗೆ, ಸಂಜೆ.

ಅವಧಾನ ಒಂದು ಕಲೆ, ವಿಜ್ಞಾನ….

- ವಿ. ಕೃಷ್ಣಾನಂದ

ನಮ್ಮಲ್ಲಿ ಅನೇಕರು ಈ ಹೆಸರನ್ನು ಕೇಳಿರಬಹುದು. ಅದರ ಬಗೆಗೆ ಚಿಂತಿಸುವ ಅಥವಾ ತಿಳಿದುಕೊಳ್ಳುವ ವ್ಯವಧಾನ, ಅವಕಾಶ ಕಾರಣಾಂತರಗಳಿಂದ ಒದಗಿ ಬರದೇ ಇರಬಹುದು. ಕೆಲವೊಮ್ಮೆ ಕೃಷ್ಣ ಅವಧಾನಿ ನರಸಿಂಹ ಅವಧಾನಿ ಎಂಬ ಹೆಸರೋ ಅಥವಾ ಪೂಜಾ ಕಾರ್ಯಕ್ಕೆ, ಜ್ಯೋತಿಷ್ಯಕ್ಕೆ, ಪೌರೋಹಿತ್ಯಕ್ಕೆ ಅವಧಾನಿಗಳನ್ನು `ಕಾಣುವ' ಪರಿಪಾಠವೂ ಇರಬಹುದು. ಇನ್ನೂ ಆಶ್ಚರ್ಯದ ಸಂಗತಿಯೆಂದರೆ ಅದೇ ಹೆಸರಿನವರಿಗೆ ಕೆಲವೊಮ್ಮೆ ಅದರ ಅರ್ಥ ತಿಳಿಯದೆ ಇರುವುದು. ಏನೋ ಶತಪಾಠಿ, ತ್ರಿವೇದಿಯಂತೆ ನಂದೂ ಒಂದು ಹೆಸರಿರಬಹುದು ಎಂಬ ಧೋರಣೆ ಅಷ್ಟೇ.

ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ ಮಾಹಿತಿ

- ನಾಗೇಶ ಹೆಗಡೆ

ಈ ಲೇಖನವನ್ನು ನಾನು ಮಾರುಗೊಂಡನಹಳ್ಳಿಯ ಒಂದು ಕುಟೀರದಲ್ಲಿ ಕೂತು ಬರೆದು ಇಂದೇ ಬೆಂಗಳೂರಿನಲ್ಲಿರುವ ಮಾಧ್ಯಮ ಅಕಾಡೆಮಿಗೆ ರವಾನಿಸಬೇಕಿದೆ. ಕೈಬರಹದ ರೂಢಿ ಎಂದೋ ತಪ್ಪಿ ಹೋಗಿದೆ. ಹಾಗೆ ಒಂದೊಮ್ಮೆ ಪೆನ್ ಹಿಡಿದು ಬರೆದರೂ ಇಲ್ಲಿ ಕೊರಿಯರ್ ಸೇವೆ ಇಲ್ಲ. ಕಂಪ್ಯೂಟರ್ ಕೀಬೋರ್ಡ್ನಲ್ಲಿ ಬರೆಯೋಣವೆಂದರೆ ವಿದ್ಯುತ್ ಇಲ್ಲ. ಆದ್ದರಿಂದ ಲ್ಯಾಪ್ಟಾಪ್ನಲ್ಲಿ ಬ್ಯಾಟರಿ ಸಹಾಯದಿಂದ ಬರೆಯಬೇಕಿದೆ.

ತುಳುಕ್ಲಾ ಒಂತೆ ಜಾಗೆ ಕೊರ್ಲೆ

- ಡಾ. ಯು. ಬಿ. ಪವನಜ

ದಕ್ಷಿಣ ಕನ್ನಡದ ಬಸ್ಸುಗಳಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಮಾತು “ಒಂತೆ ಜಾಗೆ ಕೊರ್ಲೆ” (ಸ್ವಲ್ಪ ಜಾಗ ನೀಡಿ). ಈ ಮಾತನ್ನು ತುಳು ಭಾಷಿಗರು ಈಗ ಜಗತ್ತಿನ ಮುಂದೆ ಕೇಳಬೇಕಾಗಿದೆ. ಗಣಕದಲ್ಲಿ ಜಗತ್ತಿನ ಎಲ್ಲ ಭಾಷೆಗಳ ಪ್ರತಿ ಅಕ್ಷರಕ್ಕೂ ಸಂಕೇತ ನೀಡುವ ವ್ಯವಸ್ಥೆ ಯುನಿಕೋಡ್. ಈ ಯುನಿಕೋಡ್‌ನಲ್ಲಿ ತುಳು ಭಾಷೆಗೂ ತನ್ನದೇ ಆದ ಸ್ಥಾನ ಬೇಕಾಗಿದೆ.

ಮಾಹಿತಿ ತಂತ್ರಜ್ಞಾನ, ಶಿಕ್ಷಣ ಮತ್ತು ಕನ್ನಡ

- ಡಾ. ಯು. ಬಿ. ಪವನಜ

ಗಣಕ ಮತ್ತು ಮಾಹಿತಿ ತಂತ್ರಜ್ಞಾನ ನಮ್ಮ ದೈನಂದಿನ ಬದುಕಿನ ಎಲ್ಲ ಮಜಲುಗಳನ್ನು ಪ್ರವೇಶಿಸುತ್ತಿದೆ. ಗಣಕೀಕರಣದಿಂದಾಗಿ ನಮ್ಮ ಭಾಷೆ ಅಳಿಯುತಿದೆ ಎಂಬ ಕೂಗು ದೊಡ್ಡದಾಗಿಯೇ ಕೇಳಿಬರುತ್ತಿದೆ. ಈ ಸಂದರ್ಭದಲ್ಲಿ ಗಣಕಗಳನ್ನು ದೂರುವ ಬದಲು ಅವುಗಳನ್ನು ಹೇಗೆ ನಮ್ಮ ಭಾಷೆಗೆ ಅಳವಡಿಸಿಕೊಳ್ಳಬೇಕು ಎಂದು ಚಿಂತನೆ ನಡೆಸಿ ಅದನ್ನು ಕಾರ್ಯರೂಪಕ್ಕೆ ತರುವುದೇ ಬುದ್ಧಿವಂತರ ಲಕ್ಷಣ. ನಮ್ಮ ಕನ್ನಡ ಭಾಷೆಯನ್ನು ಮಾಹಿತಿ ತಂತ್ರಜ್ಞಾನದಲ್ಲಿ ಅಳವಡಿಸಲು ಹಲವು ಕೆಲಸಗಳು ನಡೆದಿವೆ. ಅವುಗಳ ಫಲವಾಗಿ ಈಗ ಗಣಕಗಳಲ್ಲಿ ಕನ್ನಡವನ್ನು ಸುಲಭವಾಗಿ ಯಾವುದೇ ತೊಂದರೆಯಿಲ್ಲದೆ ಬಳಸಬಹುದಾಗಿದೆ. ಈ ಬಗ್ಗೆ ಪ್ರತ್ಯೇಕ ಲೇಖನ ಬರೆಯಬೇಕಾಗಿರುವುದರಿಂದ ಅದನ್ನು ಇಲ್ಲಿ ವಿವರಿಸುತ್ತಿಲ್ಲ. ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂಬ ಘೋಷಣೆ ತುಂಬ ಹಳೆಯದು ಮತ್ತು ಕ್ಲೀಷೆಯಾಗಿದೆ. ಆದರೂ ಶಿಕ್ಷಣದಲ್ಲಿ ಗಣಕದ ಬಳಕೆ ಬಗ್ಗೆ ನಾವು ಗಮನ ಹರಿಸಲೇಬೇಕಾಗಿದೆ. ಅದರಲ್ಲೂ ಮುಖ್ಯವಾಗಿ ಕನ್ನಡ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಬಂದಾಗ ಹೇಗೆ ಮಾಹಿತಿ ತಂತ್ರಜ್ಞಾನದ ಬಳಕೆ ಮಾಡಬಹುದು ಎಂಬುದನ್ನು ನೋಡೋಣ. ಇವುಗಳನ್ನು ಒಂದೊಂದಾಗಿ ಗಮನಿಸೋಣ.

ಯುನಿಕೋಡ್ -ಮಿಥ್ಯೆ ಮತ್ತು ವಾಸ್ತವ

- ಡಾ. ಯು. ಬಿ. ಪವನಜ

“ಕನ್ನಡ ಯುನಿಕೋಡ್ ಸರಿಯಿಲ್ಲ. ಆದುದರಿಂದ ಸದ್ಯಕ್ಕೆ ಅದನ್ನು ಕನ್ನಡ ಭಾಷೆಗೆ ಬಳಸಲು ಸಾಧ್ಯವಿಲ್ಲ” ಎಂಬುದಾಗಿ ಕೆಲವು ಮಂದಿ ಹೇಳುತ್ತ ತಿರುಗಾಡುತ್ತಿದ್ದಾರೆ. ಇಂತಹ ತಪ್ಪು ಅಭಿಪ್ರಾಯಗಳನ್ನು ಸರಿಪಡಿಸುವುದು ಈ ಲೇಖನದ ಉದ್ದೇಶ.

ಅಕ್ಷರಗಳಿಂದ ಮಾಹಿತಿಯೆಡೆಗೆ

- ಡಾ. ಯು.ಬಿ. ಪವನಜ

“ಗಣಕದಲ್ಲಿ ಕನ್ನಡ ಸಾಧ್ಯವಿದೆ ಎಂದು ನಿಮಗೆ ಗೊತ್ತಿದೆಯೆ?”
“ಯಾಕೆ ಗೊತ್ತಿಲ್ಲ? ನಾನು ಕಂಪ್ಯೂಟರ್‌ನಲ್ಲಿ ಈಗಾಗಲೇ ಕನ್ನಡ ಬಳಸುತ್ತಿದ್ದೇನೆ. ನನ್ನನ್ನು ಏನೂ ಅರಿಯದವನು ಅಂದುಕೊಂಡಿದ್ದೀರಾ”

ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ- ಭಾಗ-೫

- ಡಾ| ಎಂ. ಚಿದಾನಂದ ಮೂರ್ತಿ

ಕರ್ನಾಟಕ - ಸಂಸ್ಕೃತಿ ಸಂಪನ್ನ ದೇಶ

ಈ ಮುಂಚಿನ ಪುಟಗಳಲ್ಲಿ ಕರ್ನಾಟಕ ಸಂಸ್ಕೃತಿಯ ಮುಖ್ಯ ಲಕ್ಷಣಗಳನ್ನು ತಿಳಿಸಿಕೊಟ್ಟಿದ್ದೇನೆ. ಭಾರತೀಯ ಅಥವಾ ವಿಶ್ವ ಸಂಸ್ಕೃತಿಗೆ ಕರ್ನಾಟಕವು ಕೊಟ್ಟಿರುವ ಮೌಲಿಕ ಕೊಡುಗೆಗಳನ್ನು ಸೂಕ್ಷ ವಾಗಿ ಪರಿಚಯಿಸಿಕೊಟ್ಟಿದ್ದೇನೆ. ಕನ್ನಡ ಜನ ತಮ್ಮ ಪರಂಪರೆಯ ನಿಜವಾದ ಅರಿವನ್ನು ಪಡೆದಾಗ ಅವರ ಕೀಳರಿಮೆ ತೊಲಗಿ ಅವರು ಸ್ವಾಭಿಮಾನಿಗಳಾಗುತ್ತಾರೆ. ಈಗೀಗ ಕನ್ನಡ ಜನ ಹೆಚ್ಚು ಹೆಚ್ಚಾಗಿ ಕರ್ನಾಟಕದ ಬಗ್ಗೆ ತಿಳಿಯಲು ಕಾತರರಾಗುತ್ತಿದ್ದಾರೆ. ಕಾರ್ಖಾನೆ, ಕಛೇರಿ, ಸಿನಿಮಾ ಮಂದಿರ, ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅಕ್ಷರಸ್ಥ ಕನ್ನಡಿಗರಿಗೆ ಕರ್ನಾಟಕದ ಪರಂಪರೆಯನ್ನು ತಿಳಿಯುವ ಹಸಿವು ಹೆಚ್ಚುತ್ತಿದೆ. ಆ ಹೆಮ್ಮೆ ಅವರನ್ನು ಮುಂದಿನ ಭವಿಷ್ಯದತ್ತ ಉತ್ಸಾಹದಿಂದ ಹೆಜ್ಜೆಹಾಕಲು ಸ್ಫೂರ್ತಿಕೇಂದ್ರವೂ ಆಗುತ್ತದೆ. ಇತಿಹಾಸದ ಅರಿವು ಅತ್ಯಂತ ಅಗತ್ಯ. ಇತಿಹಾಸದ ಅರಿವು ಮನುಷ್ಯನಿಗೆ ಮಾತ್ರ ಇದೆ -ಆ ಕಾರಣದಿಂದಲೇ ಅವನಿಗೊಂದು ಸಂಸ್ಕೃತಿ ನಾಗರಿಕತೆ ಉಂಟು. ಪ್ರಾಣಿಗಳಿಗೆ ಇತಿಹಾಸದ ಅರಿವಿಲ್ಲ -ಆ ಕಾರಣದಿಂದಲೇ ಅವುಗಳಲ್ಲಿ ಪ್ರಗತಿ ಇಲ್ಲ.

ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ- ಭಾಗ-೪

- ಡಾ| ಎಂ. ಚಿದಾನಂದ ಮೂರ್ತಿ

ಧರ್ಮ ಸಮನ್ವಯ

ಕರ್ನಾಟಕ ಸಂಸ್ಕೃತಿಯು ತನ್ನ ಬದುಕು, ಸಾಹಿತ್ಯ, ಕಲೆ ಇವುಗಳಲ್ಲಿ ಸಮನ್ವಯವನ್ನು ಸಾಧಿಸಿರುವುದನ್ನು ಹಿಂದಿನ ಪುಟಗಳಲ್ಲಿ ನೋಡಿದ್ದೇವೆ. ಈ ಸಮನ್ವಯವು ಸಂಸ್ಕೃತಿಯ ಇತರ ಶಾಖೆಗಳಲ್ಲಿ ಹೇಗೋ ಅಂತೆಯೇ ಇನ್ನೊಂದು ಪ್ರಮುಖ ಶಾಖೆಯಾದ ಧರ್ಮದಲ್ಲಿಯೂ ಕಾಣಿಸಿಕೊಂಡ ಪರಿಯೂ ಗಮನಾರ್ಹವಾಗಿದೆ. ಕರ್ನಾಟಕ ಹಲವು ವಿಭಿನ್ನ ಧರ್ಮಗಳ, ವಿಭಿನ್ನ ಆಲೋಚನೆಗಳ ನಾಡು; ಸಂತರ ನಾಡು. ಒಂದು ಶಾಸನವು ಕರ್ನಾಟಕವನ್ನು ``ಸರ್ವಧರ್ಮಧೇನುನಿವಹಕ್ಕಾಡುಂಬೊಲಂ" ಎಂದು ವರ್ಣಿಸಿದೆ. ಅದು ಎಲ್ಲ ಧರ್ಮಗಳೆಂಬ ಹಸುಗಳು ಆಡುವ ಬಯಲು ಪ್ರದೇಶ ಎಂದು ಕರ್ನಾಟಕವನ್ನು ವರ್ಣಿಸಿರುವುದು ಉಚಿತವಾಗಿದೆ. ಕ್ರಿ. ಪೂ. ಮೂರನೇ ಶತಮಾನದಲ್ಲಿ ಬಂದ ಬೌದ್ಧ ಧರ್ಮದಿಂದ ಏನಿಲ್ಲವೆಂದರೂ ಪರೋಕ್ಷವಾಗಿಯಾದರೂ ಹನ್ನೆರಡನೆಯ ಶತಮಾನದ ಬೆಡಗಿನ ವಚನಗಳು ರೂಪುಗೊಂಡವು. ಕ್ರಿ. ಪೂ. ಎರಡನೇ ಶತಮಾನದಲ್ಲಿ ಕರ್ನಾಟಕಕ್ಕೆ ಬಂದ ಜೈನಧರ್ಮವಂತೂ ಕರ್ನಾಟಕ ಸಂಸ್ಕೃತಿಗೆ ತನ್ನ ಸಾಹಿತ್ಯ, ಬೌದ್ಧಿಕಶಾಸ್ತ್ರಸಾಹಿತ್ಯ, ಶಿಲ್ಪ ವಾಸ್ತುಗಳ ಮೂಲಕ ಅಪೂರ್ವ ಕೊಡುಗೆಗಳನ್ನು ಕೊಟ್ಟಿತು. ವೀರಶೈವ ಧರ್ಮವು ವಚನ ಸಾಹಿತ್ಯದ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕರ್ನಾಟಕಕ್ಕೆ ಬಂದ ಶ್ರೀವೈಷ್ಣವ ಧರ್ಮವು ಹಲವು ಸುಂದರ ದೇವಾಲಯಗಳಿಗೆ ಸ್ಫೂರ್ತಿಯನ್ನು ನೀಡಿತು. ಬೌದ್ಧ, ಜೈನ, ಶೈವ, ವೈಷ್ಣವ ಮತಗಳಲ್ಲದೆ ಇನ್ನೂ ಹಲವಾರು ಪಂಥಗಳು ಜಾತಿಗಳು ಕರ್ನಾಟಕದಲ್ಲಿ ಶಾಂತಿ ಸೌಹಾರ್ದಗಳಿಂದ ಬಾಳಿದವು.