ನಾನು ಉಷಾಕಿರಣ ಪತ್ರಿಕೆಗೆ ಒಂದು ಲೇಖನ ಕೊಟ್ಟಿದ್ದೆ. ಅದರ ಶೀರ್ಷಿಕೆ "ಮಾಹಿತಿ ತಂತ್ರಜ್ಞಾನ ಮತ್ತು ಇಂಗ್ಲೀಷಿನ ಪಿತ್ತ". ಅದನ್ನು ವಿಶ್ವ ಕನ್ನಡದಲ್ಲೂ ಓದಬಹುದು. ಉಷಾಕಿರಣ ಪತ್ರಿಕೆಯವರು ಕನ್ನಡ ಮಾಧ್ಯಮ ಮತ್ತು ಇಂಗ್ಲೀಷ್ ಮಾದ್ಯಮ ಚರ್ಚೆ ಬಗ್ಗೆ ಹಲವರಿಂದ ಲೇಖನ ತರಿಸಿ ಪ್ರಕಟಿಸಿದ್ದರು. ಆ ಮಾಲೆಯಲ್ಲಿ ನನ್ನ ಲೇಖನವೂ ಪ್ರಕಟವಾಗಿತ್ತು. ಸರಿ. ಈಗೇನು ಅಂತೀರಾ? ಎಷ್ಟೋ ಸಮಯದ ನಂತರ ಪತ್ರಿಕೆಯಿಂದ ಸಂಭಾವನೆ ಬಂತು. ಅದರ ಜೊತೆ ಪತ್ರವೂ ಇತ್ತು. ಆದರೆ ಆ ಪತ್ರ ಇಂಗ್ಲೀಷ್ ಭಾಷೆಯಲ್ಲಿ ಇತ್ತು!
Posts published in “Year: 2006”
- ಡಾ. ಯು. ಬಿ. ಪವನಜ
- ಬೇಳೂರು ಸುದರ್ಶನ
ಸೀಟಿಲ್ವಾ ಎಂದು ಆವಳು ನನ್ನ ಕೇಳುವ ಹೊತ್ತಿಗಾಗಲೇ ನಾನು ಆ ಬಸ್ಸಿನ ಡ್ರೈವರ್ ಬಾಗಿಲಿನ ಮೂಲಕ ಒಳಗೆ ಬಂದು ಇಂಜಿನ್ ಬಳಿ ಇದ್ದ ಖಾಲಿ ಸೀಟಿನಲ್ಲಿ ಬ್ಯಾಗು ಬಿಸಾಕಿದ್ದೆ. ಬಳ್ಳಾರಿಯ ಆ ತಣ್ಣನೆ ರಾತ್ರಿಯಲ್ಲಿ ಜನ ಪುತುಪುತು ಬಸ್ಸಿನೊಳಗೆ ಹೊರಗೆ ಅಡ್ಡಾಡುತ್ತ ಗಾಳಿಯನ್ನು ಬಿಸಿ ಮಾಡುತ್ತಿದ್ದರು. ಇಲ್ಲಿ ಅವಳು ತನ್ನೊಳಗೇ ಏನೋ ಯೋಚಿಸುತ್ತ ವಿಮನಸ್ಕಳಾಗಿ ನಿಂತಿದ್ದಳು. ನಾನು ಅವಳ ಕೈ ಹಿಡಿದು ಒಳಗೆ ಎಳೆದುಕೊಂಡೆ. ಇಡೀ ದಿನ ಅತ್ತು ಅತ್ತು ಅವಳ ಕಣ್ಣುಗಳು ಊದಿಕೊಂಡಿದ್ದರೂ ಎಷ್ಟೆಲ್ಲ ಛಂದ ಇದ್ದಾಳಲ್ಲ ಎಂದೆನ್ನಿಸಿ ನನಗೆ ಅವಳನ್ನು ಅಲ್ಲೇ ಭುಜಕ್ಕೆ ಒರಗಿಸಿಕೊಳ್ಳಬೇಕು ಎನಿಸಿತು. ಆದರೆ ಕೊಳಕು ಕಾಡ್ರಾ ಧರಿಸಿ ಅಂಡಲೆಯುವ ನಾನು ಯಾರು, ಡಿಗ್ರಿ ಮುಗಿಸಿ ಇಲ್ಲಿ ಅವನನ್ನು ಪ್ರೀತಿಸುತ್ತ ಇರೋ ಅವಳೆಲ್ಲಿ .....
ಹೊಸ ಮುಖ್ಯ ಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಹಣಕಾಸು ಮಂತ್ರಿಯವರಲ್ಲಿ ನನ್ನದೊಂದು ವಿನಂತಿ. ದಯವಿಟ್ಟು ಸ್ಥಳೀಯ ತಂತ್ರಾಂಶ (ಸಾಫ್ಟ್ವೇರ್) ಉತ್ಪನ್ನ ಮತ್ತು ಸೇವೆಗಳಿಗೆ ವಿಧಿಸಿರುವ ೧೨.೫% ಮಾರಾಟ ತೆರಿಗೆಯನ್ನು (VAT) ರದ್ದು ಮಾಡಿ. ಈ ತೆರಿಗೆಯಿಂದ ಸರಕಾರಕ್ಕೆ ಯಾವ ಲಾಭವೂ ಇಲ್ಲ. ಇದು ಕನ್ನಡಕ್ಕೆ ಮಾತ್ರ ದೊಡ್ಡ ಕಂಟಕಪ್ರಾಯವಾಗಿದೆ.
- ಮರ್ಕಟ
`ನಾನು ಪೆಪ್ಸಿಯನ್ನು ಪ್ರತಿಸ್ಫರ್ಧಿ ಎಂದು ಪರಿಗಣಿಸಿಯೇ ಇಲ್ಲ. ನಮ್ಮ ನಿಜವಾದ ಪ್ರತಿಸ್ಫರ್ಧಿ ಎಂದರೆ ನೀರು' -ಕೋಕೋ ಕೋಲಾ ಕಂಪೆನಿಯ ರಿಚರ್ಡ್ ನಿಕೊಲ್ಸನ್.
- ಮರ್ಕಟ
`ನಾನು ಮುಟ್ಟಿದರೆ ನೀವು ಭಸ್ಮವಾಗಿ ಬಿಡುತ್ತೀರಿ' - ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲರಿಗೆ.
- ಡಾ| ಶ್ರೀನಿವಾಸ ಹಾವನೂರ
ಮೂರು ಮೊನೆಗಳುಳ್ಳ ಆಯುಧ -ತ್ರಿಶೂಲವನ್ನು ಬಲ್ಲೆವು. ಬೆಂಗಳೂರಿನದಕ್ಕೆ ಐದು ಮೊನೆಗಳು. ಆದರೆ ಇದರಿಂದ ಮನುಷ್ಯ ಸಾಯಲಿಕ್ಕಿಲ್ಲ. ಬದಲಾಗಿ ವಿಲಿವಿಲಿ ಒದ್ದಾಡುತ್ತಾನೆ. ಈ ಪಂಚಶೂಲದ ಪ್ರಹಾರವನ್ನು ನನ್ನ ಹಾಗೆ ಬೆಂಗಳೂರು ವಾಸಿಗಳೆಲ್ಲ ನಿತ್ಯ ಅನುಭವಿಸುತ್ತಿದ್ದಾರೆ. ಏನೋ, ರಾಜಧಾನಿಯಲ್ಲಿ ಜನ ಸುಖವಾಗಿದ್ದಾರೆ? ಎಂದು ಹೊರಗಿನವರು ತಿಳಿದಿರಬಹುದು. ಆ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು, ಈ ಲೇಖ.
ಈ ವಾಕ್ಯವನ್ನು ಗಮನಿಸಿ - "ಶ್ರೀ .... ಅವರು .... ಕ್ಷೇತ್ರದಲ್ಲಿ ಪ್ರಾವೀಣ್ಯತೆಯನ್ನು ಮೆರೆದು ತಮ್ಮ ವೈಶಿಷ್ಟ್ಯತೆಯನ್ನು ತೋರಿ ಈ ಕ್ಷೇತ್ರದಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದ್ದಾರೆ". ಏನಿದೆ ಈ ವಾಕ್ಯದಲ್ಲಿ? ಅದೇನಪ್ಪಾ ಎಂದರೆ ಈ ವಾಕ್ಯವನ್ನು ಬಳಸಿದ ಮಹನೀಯರು ಗಳಿಸಿದ ಹೆಚ್ಚಿನ "ತೆ".
- ಕೆ. ವಿ. ಸುಬ್ರಹ್ಮಣ್ಯಂ
ಹಲವು ನೆಲೆಗಳಲ್ಲಿ ನಡೆದು ಬಂದ ನಮ್ಮ ವಾಸ್ತುಶಿಲ್ಪ
ಕೆಂಪು ಹಾಗೂ ಬಿಳಿ ಬಣ್ಣಗಳೇ ಹೆಚ್ಚು ಬಳಸಲ್ಪಟ್ಟಿರುವ ನಮ್ಮ ದೇಶದ ಬಂಡೆ-ಗುಹಾಶ್ರಯ ಚಿತ್ರಗಳಂತೆ, ಕರ್ನಾಟಕದ ಚಿತ್ರಗಳೂ ಮೂಡಿಬಂದಿವೆ. ಸಾಂಕೇತಿಕ ರೂಪಗಳನ್ನು ಗುಲ್ಬರ್ಗದ ಯಾದಗೀರ್ ಬಳಿಯ ಬಿಳಿಚಕ್ರದ ಎತ್ತರದ ಬೆಟ್ಟದ ತುದಿಯ ಬಂಡೆಯಾಶ್ರಯ, ಆನೆಗೊಂದಿಯ ಚಿತ್ರ ಸಮೂಹಗಳಲ್ಲಿ ಕಾಣಬಹುದು. ಈ ಚಿತ್ರಭಾಷೆಯ ಬಗೆಗೆ ಇಂದಿಗೂ ಆ ಹಳ್ಳಿಗಳ ಜನರಿಗೆ ಕುತೂಹಲವಿದೆ. ಈಗಾಗಲೇ ಹೇಳಿರುವ ಬಹುತೇಕ ಶಿಲಾಶ್ರಯಗಳಲ್ಲಿ ಆದಿಯ ಜನರು (ಕಲಾವಿದರು) ಕಂದು ಅಥವಾ ಕಪ್ಪುಬಣ್ಣದ ಕಬ್ಬಿಣದ ಅದಿರನ್ನು ಬಳಸಿದ್ದಾರೆ. ಮಣ್ಣಿನ ಮೂಲದ ಬಣ್ಣಗಳನ್ನು ದುಡಿಸಿಕೊಂಡಿದ್ದಾರೆ. ನೂತನ ಶಿಲಾಯುಗಕ್ಕಿಂತಲೂ ಸ್ವಲ್ಪ ಹಿಂದಿನ, ಬಾದಾಮಿಯ ಬಳಿಯ ಕುಟಕನ ಕೇರಿ ಹತ್ತಿರದ ಅರೆಗುಡ್ಡ ಮತ್ತು ಹಿರೇಗುಡ್ಡಗಳ ಶಿಲಾಶ್ರಯಗಳಲ್ಲಿನ ಕೆಮ್ಮಣ್ಣು ಬಣ್ಣದ ಚಿತ್ರಗಳಲ್ಲಿ ಮಾನವ ರೂಪಗಳೇ ಹೆಚ್ಚು. ಸಾಮಾನ್ಯ ಕಣ್ಣಿಗೆ ತಟಕ್ಕನೆ ಕಾಣದ, ತರಬೇತಾದ ಕಣ್ಣಿಗೆ ಕಾಣುವ ಈ ಚಿತ್ರಗಳು ಉದ್ದನೆಯ ಮುಂಡ, ಉರುಟಾದ ಕೈಕಾಲುಗಳನ್ನು ಹೊಂದಿವೆ.
