Press "Enter" to skip to content

Posts published in “Year: 2006

ಕರ್ನಾಟಕ ಚಿತ್ರಕಲಾ ಪರಂಪರೆ : ಭಾಗ ೧

- ಕೆ. ವಿ. ಸುಬ್ರಹ್ಮಣ್ಯಂ

ಕನ್ನಡ ದೃಶ್ಯಕಲೆಯ ಪ್ರಾರಂಭದ ಚಹರೆಗಳು

ವ್ಯಕ್ತಿ ವಿಶಿಷ್ಟ ಸಾಧನೆಯ ಪರಮಾರಾಧಕರಂತೆ ಸೃಷ್ಟಿಸುತ್ತಿರುವ, ೨೧ನೇ ಶತಮಾನದ ಪ್ರಾರಂಭದ ಇಂದಿನ ದಿನಗಳ ಕನ್ನಡ ಸಂಸ್ಕೃತಿಯ ದೃಶ್ಯಕಲೆಯ ಕಲಾವಿದ/ ಕಲಾವಿದೆಯರ ಅಪೂರ್ಣ ವರ್ತಮಾನ, ಇತಿಹಾಸವಾಗಲಿರುವ ಭವಿಷ್ಯದಲ್ಲಿ ವಿಶಿಷ್ಟ ಆಯಾಮಗಳನ್ನು ಪಡೆದುಕೊಳ್ಳಬಹುದು. ಆದರೆ ಈ ಹಿಂದಿನ ನಮ್ಮ ದೃಶ್ಯಕಲೆಯ ಇತಿಹಾಸ ನಮಗೆ ತೆರೆದುಕೊಟ್ಟಿರುವ ಕೌತುಕದ ಕಿಟಕಿಗಳೇನೂ ಸಾಮಾನ್ಯವಲ್ಲ! ಆ ದೃಶ್ಯಕಲೆಯ ರೂಪ, ಅಂಶಗಳ ಸೃಷ್ಟಿ ಪ್ರಕ್ರಿಯೆಯ ಮೊದಲ ಹೆಜ್ಜೆಗಳು ನಿಗೂಢವೂ ಹೌದು. ಆ ಮೊದಲ ಹೆಜ್ಜೆಗಳ, ಆದಿಮಾನವನ ಕಲೆಯನ್ನು ಇತಿಹಾಸ ಪೂರ್ವಕಲೆ, ಪ್ರಾಗೈತಿಹಾಸಿಕ ಕಲೆ ಎಂದೂ ಕರೆಯಲಾಗಿದೆ.

ಸಾಪ್ತಾಹಿಕ ಪುರವಣಿಗಳು ಮತ್ತು ಸಾಹಿತ್ಯದ ಕೆಲಸ

- ಬೇಳೂರು ಸುದರ್ಶನ

ಸಾಪ್ತಾಹಿಕ ಪುರವಣಿಗಳು ಅಂದಕೂಡ್ಲೇ ನಮಗೆ ಸಾಮಾನ್ಯವಾಗಿ ನೆನಪಾಗೋದು ಒಂದು ಒಳ್ಳೆ ಮುಖಪುಟ ಲೇಖನ, ಒಂದು ದೊಡ್ಡ ಕಥೆ ಜೊತೆಗೆ ಒಂದು ಕವನ. ಇದೊಂಥರ ಸಿದ್ಧ ಮಾದರಿ ಅನ್ನೋ ಭಾವನೆ ಬರೋದಕ್ಕೇ ಸಾಧ್ಯವಿಲ್ಲದ ಹಾಗೆ ಈ ಸಾಪ್ತಾಹಿಕ ಪುರವಣಿಗಳನ್ನು ನಾವು ನೋಡ್ತಾ ಇದ್ದೇವೆ.

'ಮಾಯಾಲೋಕ'ದ ಮೊದಲನೋಟ

- ಬೇಳೂರು ಸುದರ್ಶನ

ಹಿರಿಯ ತಲೆಮಾರಿನ ಲೇಖಕರೆಲ್ಲ ಇನ್ನೂ A4 ಹಾಳೆಗಳ ನಡುವೆಯೇ ಬರವಣಿಗೆಯನ್ನು ನಡೆಸುತ್ತಾ ಇರೋ ಕಾಲದಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್‌ಗೂ ಕೈ ಹಾಕಿದ ಸಾಹಿತಿ ನಮ್ಮ ಪ್ರೀತಿಯ ಪೂರ್ಣಚಂದ್ರ ತೇಜಸ್ವಿಯವರು. ಎಲ್ಲರೂ ಕಥೆ ಕಾದಂಬರಿ ಬರೀತಾ ಇದ್ದರೆ ಅವರು ಅದೆಲ್ಲವನ್ನೂ ಬರೆದು ಮಾಹಿತಿ ಸಾಹಿತ್ಯಕ್ಕೂ ಬಂದರು; ಕಿರಗೂರಿನ ಗಯ್ಯಾಳಿಗಳೂ ಬೆದರುವಂಥ ಮಿಲೆನಿಯಮ್ ಬಿರುಗಾಳಿ ಬೀಸಿದರು. ಕಂಪ್ಯೂಟರಿನಲ್ಲಿ ಕನ್ನಡವು ಅರಳಬೇಕೆಂದು ಬೆಂಗಳೂರಿಗೆ ಬಂದು ಪ್ರೆಸ್‌ಮೀಟ್ ಮಾಡಿದರು. ಪಂಪ ಪ್ರಶಸ್ತಿ ಬಂದರೂ ಬನವಾಸಿಯನ್ನು ನೆನೆಯಲಿಲ್ಲ. ಅಪ್ಪನಿಗಿಂತ ಶಿವರಾಮ ಕಾರಂತರೇ ನನ್ನ ಎದುರಿನ ಮಾದರಿ ಎಂದಿದ್ದೂ ಇದೆ.

ಬಿಲ್ ಗೇಟ್ಸ್‌ಗೂ ಉಪ್ಪಿಟ್ಟೇ?

ನಾನು ಮೊದಲೇ ಎಚ್ಚರಿಸುತ್ತೇನೆ. ನೀವು ಉಪ್ಪಿಟ್ಟು ಪ್ರಿಯರಾದರೆ ಈ ಬ್ಲಾಗನ್ನು ಓದಬೇಡಿ. ಓದಿದ ನಂತರ ಮೆಣಸು ಜಾಸ್ತಿ ಹಾಕಿದ ಉಪ್ಪಿಟ್ಟನ್ನು ತಿಂದವರಂತೆ ಮುಖ ಸಿಂಡರಿಸಿಕೊಂಡರೆ ನಾನು ಹೊಣೆಯಲ್ಲ.

Malayalam transliteration tool from Microsoft

Microsoft has released a transliteration tool. It can transliterate between many languages. From Indian point of view, I noticed that it can do these transliterations - "Malayalam to Romanization" and "Romanization to Malayalam". I downloaded it, installed and tested. I typed "pavanaja" in English letters and it converted it to Malayalam correctly as പവനജ. I hope very soon Microsoft will update the tool to include other Indic scripts. I wish they also relase the source code. Interested people can read more about it and download the tool from here.

ಛಂದ ಪುಸ್ತಕ ಬಿಡುಗಡೆ

ಬೆಂಗಳೂರು, ಜನವರಿ ೨೯, ೨೦೦೬: ವಸುಧೇಂದ್ರ ಅವರು ನಡೆಸಿಕೊಂಡು ಬರುತ್ತಿರುವ ಛಂದ ಪುಸ್ತಕ ಮಾಲಿಕೆಯ ಮೂರು ಪುಸ್ತಕಗಳನ್ನು ಜಯಂತ ಕಾಯ್ಕಿಣಿಯವರು ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಪುಸ್ತಕ ಬಿಡುಗಡೆ ಎನ್ನವ ಪ್ರಯೋಗವೇ ಸರಿಯಿಲ್ಲ. ಪುಸ್ತಕಗಳನ್ನು ಓದುಗರಿಗೆ ಅರ್ಪಿಸುವ ಕಾರ್ಯಕ್ರಮ ಎನ್ನುವ ಪ್ರಯೋಗವೇ ಸೂಕ್ತ ಎಂದು ಅವರು ತಮ್ಮ ಭಾಷಣದಲ್ಲಿ ತಿಳಿಸಿದರು. ಬಿಡುಗಡೆಯಾದ ಪುಸ್ತಕಗಳು -ಅಲಕ ತೀರ್ಥಹಳ್ಳಿಯವರ "ಈ ಕತೆಗಳ ಸಹವಾಸವೇ ಸಾಕು", ಎಂ ಆರ್ ದತ್ತಾತ್ರಿಯವರ "ಪೂರ್ವ ಪಶ್ಚಿಮ", ಜಾನಕಿಯವರ "ಜಾನಕಿ ಕಾಲಂ". ಪುಸ್ತಗಳ ಬಗ್ಗೆ ವಿಕ್ರಮ ವಿಸಾಜಿ, ಅಶೋಕ ಹೆಗಡೆ ಮತ್ತು ಜಿ ಬಿ ಹರೀಶ ಮಾತನಾಡಿದರು. ವಸುಧೇಂದ್ರ ವಂದನಾರ್ಪಣೆ ಸಲ್ಲಿಸಿದರು. ಸುಮಂಗಲ ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು.

technical words for writing on mathematics in Kannada

I am interesting in choosing appropriate kannada, sanskrit words for vocabulary specific to mathematics.Appropriate Kannada/sanskrit words are required for translating words such as "natural number", "numeral", "rational number", "imaginary number" etc.

ಸ್ಫೂರ್ತಿವನ ಜಾಲತಾಣದ ಉದ್ಘಾಟನೆ

ಬೆಂಗಳೂರು, ಜನವರಿ ೨೬, ೨೦೦೬: ಪರಿಸರ ಮತ್ತು ಬೆಂಗಳೂರು ಜಲಮಂಡಳಿ ಸಂಯುಕ್ತವಾಗಿ ನಡೆಸುತ್ತಿರುವ "ಸ್ಫೂರ್ತಿವನ" ಯೋಜನೆಯ ಜಾಲತಾಣವನ್ನು ಶ್ರೀ ಚಿರಂಜೀವಿ ಸಿಂಗ್ ಅವರು ಬೆಂಗಳೂರಿನಲ್ಲಿ ಇಂದು ಉದ್ಘಾಟಿಸಿದರು. ಅವರು ಮಾತನಾಡುತ್ತ "ಇಂದು ಅಂದರೆ ಗಣರಾಜ್ಯೋತ್ಸವದ ದಿನ ಎಲ್ಲರಿಗೂ ಸ್ಫೂರ್ತಿಯ ದಿನ. ಇಂದೇ ಸ್ಫೂರ್ತಿವನದ ಜಾಲತಾಣದ ಉದ್ಘಾಟನೆಯಾಗುತ್ತಿರುವುದು ಸಂತಸದ ವಿಷಯ" ಎಂದರು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ಶ್ರೀ ಅಶೋಕ ಕುಮಾರ ಮನೋಲಿಯವರು ಅಧ್ಯಕ್ಷ ಭಾಷಣ ಮಾಡಿ "ಸ್ಫೂರ್ತಿವನ ಒಂದು ಒಳ್ಳೆಯ ಕೆಲಸ. ನಮ್ಮ ಉದ್ಯೋಗಿಗಳು ಕೂಡ ತಮ್ಮ ನಿವೃತ್ತಿ, ಮಕ್ಕಳಿಂದ ಪರೀಕ್ಷೆಯಲ್ಲಿ ಉತ್ತಮ ಸಾಧನೆ, ಹೀಗೆ ಯಾವುದೇ ಕಾರಣಕ್ಕೂ ಸ್ಫೂರ್ತಿವನದಲ್ಲಿ ಮರಗಳನ್ನು ಪ್ರಾಯೋಜಿಸಬಹುದು" ಎಂದರು. ಪರಿಸರದ ಮತ್ತು ಸ್ಫೂರ್ತಿವನದ ಸಂಚಾಲಕ ಶ್ರೀ ಈಶ್ವರ ಪ್ರಸಾದ ಅವರು ಸ್ಫೂರ್ತಿವನ ಯೋಜನೆಯ ಬಗ್ಗೆ ವಿವರ ನೀಡಿದರು.

ದೇವೇಗೌಡರಿಗೆ ಆಸ್ಕರ್?

ಬೆಂಗಳೂರು, ಜನವರಿ ೨೪, ೨೦೦೬: ಕರ್ನಾಟಕದ ರಾಜಕೀಯದ ಇತ್ತೀಚೆಗಿನ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸಿದವರಿಗೆ ದೇವೇಗೌಡರ ನಟಿಸುವ ಸಾಮರ್ಥ್ಯ ವೇದ್ಯವಾಗಿರಬೇಕು.