ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರ ಸಂದರ್ಶನ
Wednesday, June 28th, 2006ಋಷಿವಾಕ್ಯದೊಡನೆ ವಿಜ್ಞಾನ ಎಂಬ ಧ್ಯೇಯದೊಂದಿಗೆ ವಿಶ್ವಕನ್ನಡವು ಸುಮಾರು ಹತ್ತು ವರ್ಷಗಳ ಹಿಂದೆ ಅಂದರೆ ೧೯೯೬ರಲ್ಲಿ ಪ್ರಾರಂಭವಾಯಿತು. ಜೀವನದ ಅಂತಿಮ ಗುರಿ ಮೋಕ್ಷಸಾಧನೆ. ಮೋಕ್ಷಕ್ಕೆ ಸಾಧನೆ ಮಾಡಲು ದೇಹದ ಅಗತ್ಯ ಇದೆ. ದೇಹವನ್ನು ಸುಸ್ಥಿತಿಯಲ್ಲಿಡಲು ವಿಜ್ಞಾನ ಬೇಕು. ಇದನ್ನೇ ಡಿವಿಜಿಯವರು ಹೇಳಿದ್ದು. ಜನಸಾಮಾನ್ಯರಿಗೆ ದಾರಿದೀಪವಾಗಿ ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಸ್ವಾಮೀಜಿಯವರಿದ್ದಾರೆ. ಇವರು ಮಠದ, ಪೀಠದ ಸ್ವಾಮಿಯಾಗಿ ಮಾತ್ರವಲ್ಲ, ಹಲವು ಜನಪರ, ಪರಿಸರಪರ ಕಾರ್ಯಗಳಿಂದ ಖ್ಯಾತರಾಗಿದ್ದಾರೆ. ಹೊಸನಗರ ರಾಮಚಂದ್ರಾಪುರ ಮಠ, ಶ್ರೀ ಗುರುಗಳ ಕ್ರಿಯಾಯೋಜನೆಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ಮಠದ ಜಾಲತಾಣದಲ್ಲಿ ಓದಬಹುದು. ಶ್ರೀ ಶ್ರೀ ರಾಘವೇಶ್ವರ ಸ್ವಾಮೀಜಿಯವರನ್ನು ಸಂದರ್ಶಿಸಿ ವಿಶ್ವಕನ್ನಡದ ಓದುಗರ ಪರವಾಗಿ ಕೆಲವು ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಬೇಕೆಂದು ಬಹುದಿನಗಳಿಂದ ಅಂದುಕೊಂಡಿದ್ದೆ. ಅದು ಇತ್ತೀಚೆಗೆ ಈಡೇರಿತು. ಸಂದರ್ಶನ ಇಲ್ಲಿದೆ.