ಬೆಂಗಳೂರು, ಜನವರಿ ೨೯, ೨೦೦೬: ವಸುಧೇಂದ್ರ ಅವರು ನಡೆಸಿಕೊಂಡು ಬರುತ್ತಿರುವ ಛಂದ ಪುಸ್ತಕ ಮಾಲಿಕೆಯ ಮೂರು ಪುಸ್ತಕಗಳನ್ನು ಜಯಂತ ಕಾಯ್ಕಿಣಿಯವರು ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಪುಸ್ತಕ ಬಿಡುಗಡೆ ಎನ್ನವ ಪ್ರಯೋಗವೇ ಸರಿಯಿಲ್ಲ. ಪುಸ್ತಕಗಳನ್ನು ಓದುಗರಿಗೆ ಅರ್ಪಿಸುವ ಕಾರ್ಯಕ್ರಮ ಎನ್ನುವ ಪ್ರಯೋಗವೇ ಸೂಕ್ತ ಎಂದು ಅವರು ತಮ್ಮ ಭಾಷಣದಲ್ಲಿ ತಿಳಿಸಿದರು. ಬಿಡುಗಡೆಯಾದ ಪುಸ್ತಕಗಳು -ಅಲಕ ತೀರ್ಥಹಳ್ಳಿಯವರ "ಈ ಕತೆಗಳ ಸಹವಾಸವೇ ಸಾಕು", ಎಂ ಆರ್ ದತ್ತಾತ್ರಿಯವರ "ಪೂರ್ವ ಪಶ್ಚಿಮ", ಜಾನಕಿಯವರ "ಜಾನಕಿ ಕಾಲಂ". ಪುಸ್ತಗಳ ಬಗ್ಗೆ ವಿಕ್ರಮ ವಿಸಾಜಿ, ಅಶೋಕ ಹೆಗಡೆ ಮತ್ತು ಜಿ ಬಿ ಹರೀಶ ಮಾತನಾಡಿದರು. ವಸುಧೇಂದ್ರ ವಂದನಾರ್ಪಣೆ ಸಲ್ಲಿಸಿದರು. ಸುಮಂಗಲ ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು.
Vishva Kannada
I am interesting in choosing appropriate kannada, sanskrit words for vocabulary specific to mathematics.Appropriate Kannada/sanskrit words are required for translating words such as "natural number", "numeral", "rational number", "imaginary number" etc.
ಬೆಂಗಳೂರು, ಜನವರಿ ೨೬, ೨೦೦೬: ಪರಿಸರ ಮತ್ತು ಬೆಂಗಳೂರು ಜಲಮಂಡಳಿ ಸಂಯುಕ್ತವಾಗಿ ನಡೆಸುತ್ತಿರುವ "ಸ್ಫೂರ್ತಿವನ" ಯೋಜನೆಯ ಜಾಲತಾಣವನ್ನು ಶ್ರೀ ಚಿರಂಜೀವಿ ಸಿಂಗ್ ಅವರು ಬೆಂಗಳೂರಿನಲ್ಲಿ ಇಂದು ಉದ್ಘಾಟಿಸಿದರು. ಅವರು ಮಾತನಾಡುತ್ತ "ಇಂದು ಅಂದರೆ ಗಣರಾಜ್ಯೋತ್ಸವದ ದಿನ ಎಲ್ಲರಿಗೂ ಸ್ಫೂರ್ತಿಯ ದಿನ. ಇಂದೇ ಸ್ಫೂರ್ತಿವನದ ಜಾಲತಾಣದ ಉದ್ಘಾಟನೆಯಾಗುತ್ತಿರುವುದು ಸಂತಸದ ವಿಷಯ" ಎಂದರು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ಶ್ರೀ ಅಶೋಕ ಕುಮಾರ ಮನೋಲಿಯವರು ಅಧ್ಯಕ್ಷ ಭಾಷಣ ಮಾಡಿ "ಸ್ಫೂರ್ತಿವನ ಒಂದು ಒಳ್ಳೆಯ ಕೆಲಸ. ನಮ್ಮ ಉದ್ಯೋಗಿಗಳು ಕೂಡ ತಮ್ಮ ನಿವೃತ್ತಿ, ಮಕ್ಕಳಿಂದ ಪರೀಕ್ಷೆಯಲ್ಲಿ ಉತ್ತಮ ಸಾಧನೆ, ಹೀಗೆ ಯಾವುದೇ ಕಾರಣಕ್ಕೂ ಸ್ಫೂರ್ತಿವನದಲ್ಲಿ ಮರಗಳನ್ನು ಪ್ರಾಯೋಜಿಸಬಹುದು" ಎಂದರು. ಪರಿಸರದ ಮತ್ತು ಸ್ಫೂರ್ತಿವನದ ಸಂಚಾಲಕ ಶ್ರೀ ಈಶ್ವರ ಪ್ರಸಾದ ಅವರು ಸ್ಫೂರ್ತಿವನ ಯೋಜನೆಯ ಬಗ್ಗೆ ವಿವರ ನೀಡಿದರು.
ಬೆಂಗಳೂರು, ಜನವರಿ ೨೪, ೨೦೦೬: ಕರ್ನಾಟಕದ ರಾಜಕೀಯದ ಇತ್ತೀಚೆಗಿನ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸಿದವರಿಗೆ ದೇವೇಗೌಡರ ನಟಿಸುವ ಸಾಮರ್ಥ್ಯ ವೇದ್ಯವಾಗಿರಬೇಕು.
ಜಗತ್ತಿನ ಪ್ರಮುಖ ಜಡವಸ್ತುಗಳಲ್ಲಿ "ಕನ್ನಡಿಗ" ಕೂಡ ಇದೆ ಎಂದು ಇತ್ತೀಚೆಗೆ ನಡೆಸಿದ someಶೋಧನೆಗಳಿಂದ ಪತ್ತೆಹಚ್ಚಲಾಗಿದೆ. ವಿಜ್ಞಾನಿಗಳ ಪ್ರಕಾರ ಈ ಜಡವಸ್ತು ಬಹು ವರ್ಷಗಳಿಂದಲೇ ಇತ್ತು. ಆದರೆ ಇತ್ತೀಚೆಗಷ್ಟೆ ಅದರ ಅಸ್ತಿತ್ವ ತುಂಬ ಪ್ರಭಾವಶಾಲಿಯಾಗತೊಡಗಿದೆ. ಈ ಹೊಸ ಜಡವಸ್ತುವನ್ನು ಸೇರಿಸಿದ ಪರಿಷ್ಕೃತ ಆವರ್ತಕೋಷ್ಟಕವನ್ನು (peridotic table) ಇಲ್ಲಿ ನೀಡಲಾಗಿದೆ.
ಮತ್ತೊಮ್ಮೆ ಸಾಹಿತ್ಯ ಸಮ್ಮೇಳನ ಬರುತ್ತಿದೆ. ಮತ್ತೊಮ್ಮೆ ಅದರ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಡಾಗುವ ಗೋಷ್ಠಿಗಳನ್ನು ವರ್ಷಗಳಿಂದ ಗಮನಿಸುತ್ತಿದ್ದೇನೆ. ಮೂಡುಬಿದಿರೆಯಲ್ಲಿ ಜರುಗಿದ ಸಮ್ಮೇಳನವನ್ನು ಹೊರತುಪಡಿಸಿದರೆ ಬೇರೆ ಯಾವ ಸಮ್ಮೇಳನದಲ್ಲೂ “ವಿಷಯ ಸಾಹಿತ್ಯ”ದ ಬಗ್ಗೆ ಯಾವುದೇ ಗೋಷ್ಠಿ ಇರಲಿಲ್ಲ. ಬಹುತೇಕ ಸಾಹಿತಿಗಳು ಬಳಸುವ “ಸೃಜನೇತರ ಸಾಹಿತ್ಯ” ಎಂಬ ಪದಕ್ಕೆ ಪರ್ಯಾಯವಾಗಿ ನಾನು ಇಲ್ಲಿ ವಿಷಯ ಸಾಹಿತ್ಯ ಎಂಬ ಪದವನ್ನು ಬಳಸಿದ್ದೇನೆ. ಹಾಗೆ ನೋಡಿದರೆ ಈ ಪದ ನನ್ನದೇನೂ ಅಲ್ಲ. ನವಕರ್ನಾಟಕ ಪ್ರಕಾಶನದ ಆರ್. ಎಸ್. ರಾಜಾರಾಂ ಅವರು ಈ ಪದವನ್ನು ಎಂದೋ ಬಳಸಿದ್ದಾರೆ.
ಖ್ಯಾತ ಸಾಹಿತಿ ಡಾ. ಎಸ್. ಎಲ್. ಭೈರಪ್ಪನವರಿಗೆ ಪಂಪ ಪ್ರಶಸ್ತಿ ಘೋಷಿಸಲಾಗಿದೆ. ಭೈರಪ್ಪನವರಿಗೆ ನನ್ನ ಅಭಿನಂದನೆಗಳು. ನಾನು ಭೈರಪ್ಪನವರ ಎಲ್ಲ ಕಾದಂಬರಿಗಳನ್ನು ಕನಿಷ್ಠ ಒಂದು ಬಾರಿ ಓದಿದ್ದೇನೆ. ಪರ್ವ, ಧರ್ಮಶ್ರೀ, ವಂಶವೃಕ್ಷ, ಮತ್ತು ಇನ್ನೂ ಕೆಲವನ್ನು ಒಂದಕ್ಕಿಂತ ಹೆಚ್ಚು ಬಾರಿ ಓದಿದ್ದೇನೆ. ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಎಂದೋ ಬರಬೇಕಿತ್ತು. ಅದು ಆದಷ್ಟು ಬೇಗನೇ ಅವರಿಗೆ ಬರಲಿ ಎಂದು ಆಶಿಸುತ್ತೇನೆ. ಭೈರಪ್ಪನವರ ಕಾದಂಬರಿಗಳಲ್ಲದೆ ಅವರ ಆತ್ಮ ಚರಿತ್ರೆ "ಭಿತ್ತಿ"ಯನ್ನೂ ನಾನು ಓದಿದ್ದೇನೆ. ಅದರಲ್ಲಿ ಮತ್ತೆ ಮತ್ತೆ ಬರುವ ಒಂದು ಸಾಲು ನನಗೆ ಚೆನ್ನಾಗಿ ನೆನಪಿದೆ -"ನಿನ್ನ ಸಮಸ್ಯೆಯನ್ನು ನೀನೇ ಪರಿಹರಿಸಿಕೊಳ್ಳಬೇಕು". ನನಗೆ ಈ ಸಾಲು ಕೇವಲ ನೆನಪು ಮಾತ್ರವಲ್ಲ, ಒಂದು ರೀತಿಯ ಆದರ್ಶವೂ ಹೌದು. ಅವರ ಮೇರುಕೃತಿ "ಪರ್ವ"ವನ್ನು ಎಲ್ಲರೂ ಓದಬೇಕು.
Part-II: The Solution
- Dr U B Pavanaja
Introduction
In Part-I of this article we have seen how hacked proprietary font based solutions hampered the growth of Indian language solutions on computers. All these solutions added a layer to the Operating System (OS) and did not gel well with the OS. All over the world computer users have started adapting the 16-bit data-encoding standard called Unicode. Systems that have in-built support for Unicode at the OS level need not have an added layer for Indic support.
ಬೆಂಗಳೂರು, ಜನವರಿ ೯, ೨೦೦೬: ರಮ್ಯ ಕಲ್ಚರಲ್ ಅಕಾಡೆಮಿ (ರಿ) ಬೆಂಗಳೂರು ಇವರು ಹೊರತಂದಿರುವ "ತರಂಗ ಲೀಲೆ" ಭಾವಗೀತೆಗಳ ಧ್ವನಿಸುರುಳಿ ಮತ್ತು ಸಿ.ಡಿ.ಗಳ ಬಿಡುಗಡೆ ನಗರದ ಸುಚಿತ್ರ ಫಿಲ್ಮ್ ಸೊಸೈಟಿಯ ಆವರಣದಲ್ಲಿರುವ ಪೀರ್ ಬಯಲುರಂಗ ಮಂದಿರದಲ್ಲಿ ಜರುಗಿತು. ಧ್ವನಿಸುರುಳಿ ಮತ್ತು ಸಿಡಿಗಳನ್ನು ಖ್ಯಾತ ಕವಿ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಲೋಕಾರ್ಪಣೆ ಮಾಡಿ ಮಾತನಾಡಿದರು. ವೇದಿಕೆಯಲ್ಲಿ ಮಾ. ಹಿರಣ್ಣಯ್ಯ, ಸಿ.ಡಿ.-ಧ್ವನಿಸುರುಳಿಯಲ್ಲಿ ಅಳವಡಿಸಿರುವ ಹಾಡುಗಳನ್ನು ರಚಿಸಿದ ಕವಿ ಡಾ. ಲಕ್ಷ್ಮೀನಾರಾಯಣ ಭಟ್ಟ, ಮಿಮಿಕ್ರಿ ದಯಾನಂದ, ರಮ್ಯ ಅಕಾಡೆಮಿಯ ಬಾಲಿ ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ಸಂಚಾರಿ ಪೋಲೀಸರು ರಸ್ತೆ ಸುರಕ್ಷ ಸಪ್ತಾಹ ಆಚರಿಸಿದ್ದರು. ಅದರ ಅಂಗವಾಗಿ ಅವರು ವಿಜಯನಗರದಲ್ಲಿ ಹಾಕಿದ್ದ ಬ್ಯಾನರ್ ನೋಡಿ.
