- ಮರ್ಕಟ
ಬೆಂಗಳೂರಿನ ರಸ್ತೆಗಳು ತುಂಬಾ ಕೆಟ್ಟಿವೆ ಎಂದು ನನಗೆ ಯುರೋಪಿನ ರಸ್ತೆಗಳನ್ನು ನೋಡಿದ ನಂತರ ಮನವರಿಕೆಯಾಗಿದೆ. -ಸಚಿವ ಅನಂತನಾಗ್.
February 1, 2026
ಬೆಂಗಳೂರಿನ ರಸ್ತೆಗಳು ತುಂಬಾ ಕೆಟ್ಟಿವೆ ಎಂದು ನನಗೆ ಯುರೋಪಿನ ರಸ್ತೆಗಳನ್ನು ನೋಡಿದ ನಂತರ ಮನವರಿಕೆಯಾಗಿದೆ. -ಸಚಿವ ಅನಂತನಾಗ್.
೦೬-೪-೨೦೦೬ - ಗುರುವಾರ - ಮಧ್ಯಾನ್ಹ ೧-೦೦ ಗಂಟೆ ಆತ್ಮೀಯ ವಿಶ್ವಕನ್ನಡ ಸ್ನೇಹಿತರೇ, ಬೇಸಿಗೆ ಬಂದಿದೆ.
ಕರ್ನಾಟಕ - ಸಂಸ್ಕೃತಿ ಸಂಪನ್ನ ದೇಶ
ಈ ಮುಂಚಿನ ಪುಟಗಳಲ್ಲಿ ಕರ್ನಾಟಕ ಸಂಸ್ಕೃತಿಯ ಮುಖ್ಯ ಲಕ್ಷಣಗಳನ್ನು ತಿಳಿಸಿಕೊಟ್ಟಿದ್ದೇನೆ. ಭಾರತೀಯ ಅಥವಾ ವಿಶ್ವ ಸಂಸ್ಕೃತಿಗೆ ಕರ್ನಾಟಕವು ಕೊಟ್ಟಿರುವ ಮೌಲಿಕ ಕೊಡುಗೆಗಳನ್ನು ಸೂಕ್ಷ ವಾಗಿ ಪರಿಚಯಿಸಿಕೊಟ್ಟಿದ್ದೇನೆ. ಕನ್ನಡ ಜನ ತಮ್ಮ ಪರಂಪರೆಯ ನಿಜವಾದ ಅರಿವನ್ನು ಪಡೆದಾಗ ಅವರ ಕೀಳರಿಮೆ ತೊಲಗಿ ಅವರು ಸ್ವಾಭಿಮಾನಿಗಳಾಗುತ್ತಾರೆ. ಈಗೀಗ ಕನ್ನಡ ಜನ ಹೆಚ್ಚು ಹೆಚ್ಚಾಗಿ ಕರ್ನಾಟಕದ ಬಗ್ಗೆ ತಿಳಿಯಲು ಕಾತರರಾಗುತ್ತಿದ್ದಾರೆ. ಕಾರ್ಖಾನೆ, ಕಛೇರಿ, ಸಿನಿಮಾ ಮಂದಿರ, ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅಕ್ಷರಸ್ಥ ಕನ್ನಡಿಗರಿಗೆ ಕರ್ನಾಟಕದ ಪರಂಪರೆಯನ್ನು ತಿಳಿಯುವ ಹಸಿವು ಹೆಚ್ಚುತ್ತಿದೆ. ಆ ಹೆಮ್ಮೆ ಅವರನ್ನು ಮುಂದಿನ ಭವಿಷ್ಯದತ್ತ ಉತ್ಸಾಹದಿಂದ ಹೆಜ್ಜೆಹಾಕಲು ಸ್ಫೂರ್ತಿಕೇಂದ್ರವೂ ಆಗುತ್ತದೆ. ಇತಿಹಾಸದ ಅರಿವು ಅತ್ಯಂತ ಅಗತ್ಯ. ಇತಿಹಾಸದ ಅರಿವು ಮನುಷ್ಯನಿಗೆ ಮಾತ್ರ ಇದೆ -ಆ ಕಾರಣದಿಂದಲೇ ಅವನಿಗೊಂದು ಸಂಸ್ಕೃತಿ ನಾಗರಿಕತೆ ಉಂಟು. ಪ್ರಾಣಿಗಳಿಗೆ ಇತಿಹಾಸದ ಅರಿವಿಲ್ಲ -ಆ ಕಾರಣದಿಂದಲೇ ಅವುಗಳಲ್ಲಿ ಪ್ರಗತಿ ಇಲ್ಲ.
೧೦ ವರ್ಷದ ನಂತರ ಹಳ್ಳಿಯಲ್ಲಿ ಕಂಡ ಹುಡುಗಿಯರು.
ಶ್ರೀ. ಎಚ್.ಎಸ್. ವೆಂಕಟೇಶ ಮೂರ್ತಿ.
ಧರ್ಮ ಸಮನ್ವಯ
ಕರ್ನಾಟಕ ಸಂಸ್ಕೃತಿಯು ತನ್ನ ಬದುಕು, ಸಾಹಿತ್ಯ, ಕಲೆ ಇವುಗಳಲ್ಲಿ ಸಮನ್ವಯವನ್ನು ಸಾಧಿಸಿರುವುದನ್ನು ಹಿಂದಿನ ಪುಟಗಳಲ್ಲಿ ನೋಡಿದ್ದೇವೆ. ಈ ಸಮನ್ವಯವು ಸಂಸ್ಕೃತಿಯ ಇತರ ಶಾಖೆಗಳಲ್ಲಿ ಹೇಗೋ ಅಂತೆಯೇ ಇನ್ನೊಂದು ಪ್ರಮುಖ ಶಾಖೆಯಾದ ಧರ್ಮದಲ್ಲಿಯೂ ಕಾಣಿಸಿಕೊಂಡ ಪರಿಯೂ ಗಮನಾರ್ಹವಾಗಿದೆ. ಕರ್ನಾಟಕ ಹಲವು ವಿಭಿನ್ನ ಧರ್ಮಗಳ, ವಿಭಿನ್ನ ಆಲೋಚನೆಗಳ ನಾಡು; ಸಂತರ ನಾಡು. ಒಂದು ಶಾಸನವು ಕರ್ನಾಟಕವನ್ನು ``ಸರ್ವಧರ್ಮಧೇನುನಿವಹಕ್ಕಾಡುಂಬೊಲಂ" ಎಂದು ವರ್ಣಿಸಿದೆ. ಅದು ಎಲ್ಲ ಧರ್ಮಗಳೆಂಬ ಹಸುಗಳು ಆಡುವ ಬಯಲು ಪ್ರದೇಶ ಎಂದು ಕರ್ನಾಟಕವನ್ನು ವರ್ಣಿಸಿರುವುದು ಉಚಿತವಾಗಿದೆ. ಕ್ರಿ. ಪೂ. ಮೂರನೇ ಶತಮಾನದಲ್ಲಿ ಬಂದ ಬೌದ್ಧ ಧರ್ಮದಿಂದ ಏನಿಲ್ಲವೆಂದರೂ ಪರೋಕ್ಷವಾಗಿಯಾದರೂ ಹನ್ನೆರಡನೆಯ ಶತಮಾನದ ಬೆಡಗಿನ ವಚನಗಳು ರೂಪುಗೊಂಡವು. ಕ್ರಿ. ಪೂ. ಎರಡನೇ ಶತಮಾನದಲ್ಲಿ ಕರ್ನಾಟಕಕ್ಕೆ ಬಂದ ಜೈನಧರ್ಮವಂತೂ ಕರ್ನಾಟಕ ಸಂಸ್ಕೃತಿಗೆ ತನ್ನ ಸಾಹಿತ್ಯ, ಬೌದ್ಧಿಕಶಾಸ್ತ್ರಸಾಹಿತ್ಯ, ಶಿಲ್ಪ ವಾಸ್ತುಗಳ ಮೂಲಕ ಅಪೂರ್ವ ಕೊಡುಗೆಗಳನ್ನು ಕೊಟ್ಟಿತು. ವೀರಶೈವ ಧರ್ಮವು ವಚನ ಸಾಹಿತ್ಯದ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕರ್ನಾಟಕಕ್ಕೆ ಬಂದ ಶ್ರೀವೈಷ್ಣವ ಧರ್ಮವು ಹಲವು ಸುಂದರ ದೇವಾಲಯಗಳಿಗೆ ಸ್ಫೂರ್ತಿಯನ್ನು ನೀಡಿತು. ಬೌದ್ಧ, ಜೈನ, ಶೈವ, ವೈಷ್ಣವ ಮತಗಳಲ್ಲದೆ ಇನ್ನೂ ಹಲವಾರು ಪಂಥಗಳು ಜಾತಿಗಳು ಕರ್ನಾಟಕದಲ್ಲಿ ಶಾಂತಿ ಸೌಹಾರ್ದಗಳಿಂದ ಬಾಳಿದವು.
ಸಹಕಾರ ರಂಗದ ರಚನಾತ್ಮಕ ಕಾರ್ಯಗಳ ದಾಖಲೀಕರಣ ಹಾಗೂ ಸಾಮಾಜಿಕ ಅಭಿಪ್ರಾಯ ರೂಪಿಸಲು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು ಸೌಹಾರ್ದ ಸಹಕಾರ ಅಧ್ಯಯನ ಫೆಲೋಶಿಪ್ ಆರಂಭಿಸಿದೆ. ಈ ವಿಷಯವನ್ನು ಸಂಯುಕ್ತ ಸಹಕಾರಿ ಪುನರಾಯ್ಕೆಗೊಂಡ ಅಧ್ಯಕ್ಷ ಶ್ರೀ ಮನೋಹರ ಮಸ್ಕಿಯವರು ಪ್ರಕಟಿಸಿದ್ದಾರೆ.
ಬೆಂಗಳೂರು, ಮಾರ್ಚ್ ೩೧, ೨೦೦೬: ಏರ್ಟೆಲ್ ಕಂಪೆನಿ ಸಪ್ಪೋರ್ಟ್ಸಾಫ್ಟ್ ಕಂಪೆನಿಯೊಂದಿಗೆ ಸಹಯೋಗದಲ್ಲಿ ನೆಟ್ ಎಕ್ಸ್ಪರ್ಟ್ ಎಂಬ ತಂತ್ರಾಂಶವನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿತು. ಈ ತಂತ್ರಾಂಶವು ಏರ್ಟೆಲ್ನವರ ಬ್ರಾಡ್ಬಾಂಡ್ ಅಂತರಜಾಲ ಸಂಪರ್ಕ ಹೊಂದಿದವರಿಗೆ ಉಪಯುಕ್ತವಾಗಿದೆ. ಏರ್ಟೆಲ್ ಗ್ರಾಹಕರಿಗೆ ಈ ತಂತ್ರಾಂಶವನ್ನು ಉಚಿತವಾಗಿ ನೀಡಲಾಗುವುದು ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ. ಏರ್ಟೆಲ್ನ ಬ್ರಾಡ್ಬಾಂಡ್ ಸಂಪರ್ಕದಲ್ಲಿ ಏನಾದರೂ ಅಡಚಣೆಯಾದರೆ ಈ ತಂತ್ರಾಂಶದ ಮೂಲಕ ಅದನ್ನು ಪತ್ತೆಹಚ್ಚಿ ದುರಸ್ತಿ ಮಾಡಬಹುದು. ಗ್ರಾಹಕ ಸೇವಾ ಅಧಿಕಾರಿ ಜೊತೆ ಆನ್ಲೈನ್ನಲ್ಲಿ ಚಾಟ್ ಮಾಡುವ ಮೂಲಕವೂ ದೋಷ ಪರಿಹಾರ ಮಾಡಿಕೊಳ್ಳಬಹುದು.
ಮಾವು ನಾವು, ಬೇವು ನಾವು;
ನೋವು ನಲಿವು ನಮ್ಮವು.
ಹೂವು ನಾವು, ಹಸಿರು ನಾವು,

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಎಂಟೆಲೆ ಮಾವೀನ ದಂಟೀನಾಗಿರುವೋಳೆ
ಗಂಟೆ ನಾದಾಕೆ ಬರುವೋಳೆ
ಗಂಟೆ ನಾದಾಕೆ ಬರುವೋಳೆ ಸರಸೋತಿ
ಗಂಟಾಲ ತೊಡರ ಬಿಡಿಸಮ್ಮ