Press "Enter" to skip to content

Vishva Kannada

Date Change in your website.

After logging into your website, i noticed that in the date column it is still displaying the previous day's date. Kindly look into this and correct the same.

Will revert back with further suggestions if any

ಪುತ್ರಿಯರ ದಿನ

ಈಗಾಗಲೇ ಆಚರಣೆಯಲ್ಲಿರುವ ಹಲವಾರು ದಿನಾಚರಣೆಗಳಿಗೆ ಮತ್ತೊಂದು ಸೇರ್ಪಡೆ -"ಪುತ್ರಿಯರ ದಿನ". ಇದನ್ನು ದಿವಂಗತ ಕಲ್ಪನಾ ಚಾವ್ಲರ ನೆನಪಿಗೆ ಆಚರಿಸಲಾಗುತ್ತಿದೆ (ನೋಡಿ: , ). ನನ್ನ ಮಗಳ ಶಾಲೆಯಲ್ಲಿ ನನಗೆ ಒಂದು "ಹೋಂವರ್ಕ್‌" ಕೊಟ್ಟಿದ್ದರು. ಈ ಪುತ್ರಿಯರ ದಿನದ ಅಂಗವಾಗಿ ನಾನು ಮಗಳಿಗೆ ಒಂದು ಪತ್ರ ಬರೆಯಬೇಕಿತ್ತು. ನಾನು ಬರೆದ ಪತ್ರ ಇಲ್ಲಿದೆ:-

ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರ ಸಂದರ್ಶನ

ಋಷಿವಾಕ್ಯದೊಡನೆ ವಿಜ್ಞಾನ ಎಂಬ ಧ್ಯೇಯದೊಂದಿಗೆ ವಿಶ್ವಕನ್ನಡವು ಸುಮಾರು ಹತ್ತು ವರ್ಷಗಳ ಹಿಂದೆ ಅಂದರೆ ೧೯೯೬ರಲ್ಲಿ ಪ್ರಾರಂಭವಾಯಿತು. ಜೀವನದ ಅಂತಿಮ ಗುರಿ ಮೋಕ್ಷಸಾಧನೆ. ಮೋಕ್ಷಕ್ಕೆ ಸಾಧನೆ ಮಾಡಲು ದೇಹದ ಅಗತ್ಯ ಇದೆ. ದೇಹವನ್ನು ಸುಸ್ಥಿತಿಯಲ್ಲಿಡಲು ವಿಜ್ಞಾನ ಬೇಕು. ಇದನ್ನೇ ಡಿವಿಜಿಯವರು ಹೇಳಿದ್ದು. ಜನಸಾಮಾನ್ಯರಿಗೆ ದಾರಿದೀಪವಾಗಿ ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಸ್ವಾಮೀಜಿಯವರಿದ್ದಾರೆ. ಇವರು ಮಠದ, ಪೀಠದ ಸ್ವಾಮಿಯಾಗಿ ಮಾತ್ರವಲ್ಲ, ಹಲವು ಜನಪರ, ಪರಿಸರಪರ ಕಾರ್ಯಗಳಿಂದ ಖ್ಯಾತರಾಗಿದ್ದಾರೆ. ಹೊಸನಗರ ರಾಮಚಂದ್ರಾಪುರ ಮಠ, ಶ್ರೀ ಗುರುಗಳ ಕ್ರಿಯಾಯೋಜನೆಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ಮಠದ ಜಾಲತಾಣದಲ್ಲಿ ಓದಬಹುದು. ಶ್ರೀ ಶ್ರೀ ರಾಘವೇಶ್ವರ ಸ್ವಾಮೀಜಿಯವರನ್ನು ಸಂದರ್ಶಿಸಿ ವಿಶ್ವಕನ್ನಡದ ಓದುಗರ ಪರವಾಗಿ ಕೆಲವು ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಬೇಕೆಂದು ಬಹುದಿನಗಳಿಂದ ಅಂದುಕೊಂಡಿದ್ದೆ. ಅದು ಇತ್ತೀಚೆಗೆ ಈಡೇರಿತು. ಸಂದರ್ಶನ ಇಲ್ಲಿದೆ.

ಬೆಂಗಳೂರಿನಲ್ಲಿ ಖಜಾನ ಜುವೆಲರಿಯಿಂದ ಹೊಸ ಮಳಿಗೆಗಳು

ಬೆಂಗಳೂರು, ಜೂನ್ ೨೩, ೨೦೦೬: ಚೆನ್ನೈನ ಖಜಾನ ಜುವೆಲ್ಲರಿ ಸಂಸ್ಥೆ ಬೆಂಗಳೂರಿನ ಕಮರ್ಶಿಯಲ್ ರಸ್ತೆ ಮತ್ತು ಜಯನಗರಗಳಲ್ಲಿ ಎರಡು ಹೊಸ ಮಳಿಗೆಗಳನ್ನು ಆರಂಭಿಸಲಿದೆ.

ಪದವೀಧರರಿಗೆ ಮತ ಚಲಾಯಿಸಲು ಗೊತ್ತಿಲ್ಲವೇ?

ಇತ್ತೀಚೆಗೆ ಕರ್ನಾಟಕದ ವಿಧಾನ ಪರಿಷತ್ತಿನ ಪದವೀಧರ ಕ್ಷೇತ್ರಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಚುನಾವಣೆಗಳು ಜರುಗಿದವು. ಅದರ ಫಲಿತಾಂಶಗಳನ್ನು ನೋಡಿದಾಗ ಒಂದು ಅಂಶ ನನಗೆ ತುಂಬ ಆಶ್ಚರ್ಯ ಮತ್ತು ದುಃಖವನ್ನುಂಟು ಮಾಡಿದವು. ಅದೆಂದರೆ ಈ ಚುನಾವಣೆಯಲ್ಲಿ ಹಾಕಿದ ಮತಗಳಲ್ಲಿ ಸುಮಾರು ಶೇಕಡ ೧೦ರಷ್ಟು ಮತಗಳು ಅಸಿಂಧು ಎಂದು ಪರಿಗಣಿಸಲ್ಪಟ್ಟಿದ್ದು. ಈ ಚುನಾವಣೆಗಳಲ್ಲಿ ಮತ ಚಲಾಯಿಸುವವರು ಜನಸಾಮಾನ್ಯರಲ್ಲ. ಅನಕ್ಷರಸ್ಥರಂತೂ ಅಲ್ಲವೇ ಅಲ್ಲ. ಅವರೆಲ್ಲರೂ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು. ಹೀಗದ್ದೂ ಮತ ಚಲಾಯಿಸುವುದು ಹೇಗೆ ಎಂದು ಅವರಿಗೆ ತಿಳಿದಿಲ್ಲ ಎಂದರೆ ಅಶ್ಚರ್ಯ ಆಗಬೇಡವೇ? ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಶಿಕ್ಷಕರಾಗಿದ್ದಾರೆ. ಇವರಿಂದ ಶಿಕ್ಷಣ ಪಡೆದರೆ ಆ ವಿದ್ಯಾರ್ಥಿಗಳ ಮಟ್ಟ ಹೇಗಿರಬೇಕು? ನಮ್ಮ ಶಾಲಾ ಕಾಲೇಜುಗಳಲ್ಲಿ ಶಿಕ್ಷಣದ ಮಟ್ಟ ತುಂಬ ಕುಸಿದಿದೆ ಎಂದರೆ ಅದಕ್ಕೆ ಪ್ರತ್ಯೇಕ ಕಾರಣ ಹುಡುಕಬೇಕಾಗಿಲ್ಲ ಅಲ್ಲವೇ?

ವಿಶುವಲ್ ಸ್ಟುಡಿಯೋದಲ್ಲಿ ಕನ್ನಡದ ಅಕಾರಾದಿ ವಿಂಗಡಣೆ

ಗಣಕದಲ್ಲಿ ಕನ್ನಡ ಎಂದರೆ ಗಣಕದಲ್ಲಿ ಕನ್ನಡವನ್ನು ಬೆರಳಚ್ಚು ಮಾಡುವುದು ಎಂದೇ ಬಹುಪಾಲು ಮಂದಿ ಇನ್ನೂ ತಿಳಿದುಕೊಂಡಿದ್ದಾರೆ. ಗಣಕದಲ್ಲಿ ಕನ್ನಡದ ಆನ್ವಯಿಕ ತಂತ್ರಾಂಶಗಳನ್ನು (application software) ಸುಲಭವಾಗಿ ತಯಾರಿಸಬಹುದು. ಇಂಗ್ಲೀಶ್ ಭಾಷೆಯಲ್ಲಿ ಏನೇನು ಸಾಧ್ಯವೋ ಅವೆಲ್ಲವೂ ಕನ್ನಡದಲ್ಲೂ ಸಾಧ್ಯ. ಮುಖ್ಯವಾಗಿ ದತ್ತ ಸಂಸ್ಕರಣೆ (data processing). ಕನ್ನಡದಲ್ಲಿ ಆನ್ವಯಿಕ ತಂತ್ರಾಂಶ ತಯಾರಿಸಲು ಮುಖ್ಯ ಆವಶ್ಯಕತೆಯೆಂದರೆ ಕನ್ನಡದ ಅಕಾರಾದಿ ವಿಂಗಡಣೆ. ಮೈಕ್ರೋಸಾಫ್ಟ್‌ನವರ ಆಕ್ಸೆಸ್ ಮತ್ತು ಎಸ್‌ಕ್ಯೂಎಲ್ ಸರ್ವರ್‌ಗಳು ಕನ್ನಡದ ಅಕಾರಾದಿ ವಿಂಗಡಣೆಯನ್ನು ಸರಿಯಾಗಿ ನಿರ್ವಹಿಸುತ್ತವೆ. ಅವು ಮಾತ್ರವಲ್ಲ. ವಿಶುವಲ್ ಸ್ಟುಡಿಯೋ ಕೂಡ ಕನ್ನಡದ ಅಕಾರಾದಿ ವಿಂಗಡಣೆಯನ್ನು ಸರಿಯಾಗಿ ನಿರ್ವಹಿಸುತ್ತವೆ. ಒಂದು ಉದಾಹರಣೆಯನ್ನು ಕೆಳಗೆ ಕೊಟ್ಟಿದ್ದೇನೆ.

ರೇಡಿಯೋ ಸಿಟಿಯಲ್ಲಿ ಕನ್ನಡದ ಚೌಚೌ ಬಾತ್

ಬೆಂಗಳೂರಿನ ರೇಡಿಯೋ ಸಿಟಿ (91FM) ಯಲ್ಲಿ ಕನ್ನಡ ಕಾರ್ಯಕ್ರಮಗಳಿಲ್ಲ ಎಂದು ಹಲವಾರು ಕನ್ನಡ ಪ್ರೇಮಿಗಳು ಆಗಾಗ ದೂರು ನೀಡುತ್ತಿದ್ದಾರೆ. ಇತ್ತೀಚೆಗೆ ನಾನು ಒಮ್ಮೆ ಯಾಕೋ ರೇಡಿಯೋ ಸಿಟಿ ಹಾಕಿದಾಗ ಆಶ್ಚರ್ಯವಾಯಿತು. ಕನ್ನಡ ಹಾಡು ಕೇಳಿ ಬರುತ್ತಿತ್ತು. ನಂತರ ಒಂದೆರಡು ದಿನ ಗಮನಿಸಿದಾಗ ಕಂಡು ಬಂದುದೇನೆಂದರೆ ರೇಡಿಯೋ ಸಿಟಿಯಲ್ಲಿ ಕನ್ನಡ ಕಾರ್ಯಕ್ರಮಗಳು ಬರುತ್ತಿವೆ ಎಂದು. ಬೆಳಿಗ್ಗೆ ಏಳು ಘಂಟೆಯ ಮೊದಲು ಭಕ್ತಿ ಗೀತೆ, ಮಧ್ಯಾಹ್ನ ಒಂದರಿಂದ ಮೂರು ಘಂಟೆ ವರೆಗೆ "ಮಲ್ಲಿಗೆ ಸರ್ಕಲ್", ಶನಿವಾರ ಬೆಳಿಗ್ಗೆ "ಬೆಂಗಳೂರು ಟಾಕೀಸ್", ಮತ್ತು ಭಾನುವಾರ ಬೆಳಿಗ್ಗೆ ಏಳರಿಂದ ಹತ್ತರ ವರೆಗೆ "ಚೌ ಚೌ ಬಾತ್" - ಇಷ್ಟು ನಾನು ಗಮನಿಸಿರುವ ಕನ್ನಡ ಕಾರ್ಯಕ್ರಮಗಳು. ಮೊನ್ನೆ ಭಾನುವಾರ (ಜೂನ್ ೧೧ರಂದು) ಚೌಚೌ ಬಾತ್ ಕಾರ್ಯಕ್ರಮದಲ್ಲಿ ನಾನು ಅತಿಥಿಯಾಗಿ ಭಾಗವಹಿಸಿದ್ದೆ. ನಂದಕುಮಾರ್ ಉತ್ತಮವಾಗಿ ಕಾರ್ಯಕ್ರಮ ನಡೆಸಿಕೊಟ್ಟರು -ಇದು ನಾನು ಹೇಳುತ್ತಿರುವುದಲ್ಲ, ಕಾರ್ಯಕ್ರಮ ಕೇಳಿದ ಹಲವು ಜನ ಹೇಳಿದ್ದು ಮತ್ತು ಫೋನು ಹಾಗೂ ಇ-ಮೈಲ್ ಮೂಲಕ ತಿಳಿಸಿದ್ದು.

Google spreadsheet

Recently Google released [http://spreadsheets.google.com|Google Spreadsheets]. It is the online version of spreadsheets. The advantage is that one can keep his spreadsheet on the web and access it from anywhere. I took a first look at it. It was not very impressive. One simple feature -exiting without saving the modifications -is missing. If you make a mistake, then you had it. There are some good features though, like able to import and export Microsoft Excel spreadsheets. A group of people can acess the spreadsheet, etc. As usual with Google, this is also called beta. Sometimes I wonder why don't they call Google itself as Google Beta as they do with Gmail.

ನಾನು ಬ್ಲಾಗಿಸುವುದು ನನಗೆಂದು

ಸುಧಾ ಪತ್ರಿಕೆಯಲ್ಲಿ ಬ್ಲಾಗ್‌ ಬಗ್ಗೆ ರಘುನಾಥ ಚ ಹ ಅವರ ಲೇಖನ ಪ್ರಕಟವಾಗಿತ್ತು. ಆ ಲೇಖನದ ಜೊತೆ ನನ್ನದೊಂದು ಕಿರು ಸಂದರ್ಶನ -ಬ್ಲಾಗಿಂಗ್ ಬಗ್ಗೆ - ಪ್ರಕಟವಾಗಿತ್ತು. ಅದನ್ನು ಇಲ್ಲಿ ನೀಡುತ್ತಿದ್ದೇನೆ.

ಕನ್ನಡ ತ೦ತ್ರಾಶ ತ೦ತ್ರಜ್ಞಾನ ಯಾವ ಹ೦ತದಲ್ಲಿದೆ?

ಕನ್ನಡಿಗರಾಗಿ, ನಾವು ಕನ್ನಡ ತ೦ತ್ರಜ್ಞಾನಕ್ಕಾಗಿ ಏನೇನಾಗಬೇಕಿದೆ ಎಂಬುದನ್ನು ಒ೦ದು ಲೇಖನದ ಮೂಲಕ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು. ಬಲ್ಲವರಲ್ಲಿ ನಾನು, ಈ ಬಗ್ಗೆ ಒ೦ದು ಲೇಖನ ಬರೆಯಿರೆ೦ದು ವಿನ೦ತಿಸಿಕೊಳುತ್ತೇನೆ.