ನಾನು ಗ್ಯಾಜೆಟ್ ಬಿಡುಗಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಕ್ಕಾಗಿ ಆಗಾಗ ದೆಹಲಿಗೆ ಹೋಗುತ್ತಿರುತ್ತೇನೆ. ಹಾಗೆ ಹೋದಾಗಲೆಲ್ಲ ಅಲ್ಲಿನ ಟ್ಯಾಕ್ಸಿ ಚಾಲಕರೊಡನೆ ಮಾತನಾಡುವುದು ನನ್ನ ಹವ್ಯಾಸ. ಇದರಿಂದಾಗಿ ಅಲ್ಲಿಯ ಜನಸಾಮಾನ್ಯರ ಅಭಿಪ್ರಾಯ ಏನು ಎಂದು ತಿಳಿಯುತ್ತದೆ. ಸಾಮಾನ್ಯವಾಗಿ ನಾನು…
Posts published in “General”
ತೆರೆದ ಪುಸ್ತಕ ಪರೀಕ್ಷೆ ಮಾಡುತ್ತೇವೆ ಎಂದು ಸರಕಾರದ ಮಂತ್ರಿಯೋರ್ವರು ಹೇಳಿದ್ದಕ್ಕೆ ನಾನು ಸ್ವಲ್ಪ ವಿಡಂಬನಾತ್ಮಕವಾಗಿ ಬರೆದ ಫೇಸ್ಬುಕ್ ಪೋಸ್ಟ್ ವೈರಲ್ ಆದುದನ್ನು ಗಮನಿಸಿದೆ. ಒಂದು ಜಾಲತಾಣವಂತೂ ನಾನು ಆ ಪೋಸ್ಟನ್ನು ಅಳಿಸಿ ಹಾಕಿದ್ದೇನೆ ಎಂದು…
ಅಲ್ಲ ಮಾರಾಯ್ರೆ, ತಮ್ಮ ಹೆಸರಿನ ಬಗ್ಗೆ ತುಂಬ ಜನ ಏನೇನೋ ಲೇಖನ ಬರೆದಿದ್ದಾರಂತೆ. ಈ ಲೇಖನ ಬರೆಯುವುದು, ಪತ್ರಿಕೆಗೆ ಕಳುಹಿಸುವುದು, ಸಂಪಾದಕರು ಇಷ್ಟ ಪಟ್ಟರೆ ಪ್ರಕಟಿಸುವುದು ಎಲ್ಲ ಈಗ ಓಲ್ಡ್ ಫ್ಯಾಶನ್ ಆಗೋಯ್ತು. ಈಗ…
ಭೈರಪ್ಪನವರ “ಯಾನ” ಓದಿ ಮುಗಿಸಿದೆ. ಭೈರಪ್ಪ ಎಂದೊಡನೆ ಪುಸ್ತಕದ ಬಗ್ಗೆ ನಮ್ಮ ಊಹೆ, ಕಲ್ಪನೆ ತುಂಬ ಮೇಲ್ಮಟ್ಟದಲ್ಲಿರುತ್ತದೆ. ಅದರಲ್ಲೂ ಈ ಕಾದಂಬರಿ ಬರೆಯಲು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಾಲ ಕಳೆದುದು, ಇಸ್ರೋಗೆ ಹೋಗಿದ್ದು, ಪೈಲಟ್ಗಳ…
ಕೇಂದ್ರ ಸರಕಾರದಲ್ಲೊಬ್ಬ ಪಿತ್ತ ಸಚಿವ ಇರುವುದು ನಿಮಗೆ ಗೊತ್ತೆ? ಆಶ್ಚರ್ಯವಾಯಿತೇ? ಹಾಗಿದ್ದರೆ ಜೊತೆಗೆ ಇರುವ ಭಾವಚಿತ್ರ ನೋಡಿ. ಇದು ದೂರದರ್ಶನದ ಕನ್ನಡ ವಾಹಿನಿ ಚಂದನದಲ್ಲಿ ವಾರ್ತಾಪ್ರಸಾರ ಆಗುತ್ತಿದ್ದಾಗ ತೆಗೆದ ಚಿತ್ರ (೩೦-೯-೨೦೦೮)
ಕನ್ನಡ ಭಾಷೆಯಲ್ಲಿ ಬ್ಲಾಗಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ನಿಜಕ್ಕೂ ಸಂತಸದ ಸುದ್ದಿ. ಈ ಎಲ್ಲ ಬ್ಲಾಗೋತ್ತಮರುಗಳು ಎಂದಾದರೂ ಮುಖಾಮುಖಿ ಭೇಟಿಯಾದುದು ಇದೆಯೇ? ಬಹುಶಃ ಇಲ್ಲ. ಕೆಲವು ಮಂದಿ ಅಲ್ಲಿ ಇಲ್ಲಿ ಭೇಟಿಯಾಗಿರಬಹುದು. ಆದರೆ ಬ್ಲಾಗಿಗಳೇ ಪ್ರತ್ಯೇಕವಾಗಿ ಸಭೆ ಸೇರಿದ್ದು ಇಲ್ಲ. ಭಾರತೀಯ ಬ್ಲಾಗಿಗಳ ಸಭೆ ಹಲವು ಬಾರಿ ಬೇರೆ ಬೇರೆ ನಗರಗಳಲ್ಲಿ ಜರುಗಿವೆ. ಆದರೆ ಕನ್ನಡ ಬ್ಲಾಗಿಗಳ ಸಭೆ ಇದುವರೆಗೆ ಜರುಗಿಲ್ಲ.
ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ಒಂದು ವೈಶಿಷ್ಟ್ಯವಿದೆ. ಸರಕಾರವಿಲ್ಲದೆ ಯಾವುದೇ ರಾಜಕಾರಣಿಯ ವಶೀಲಿಯಿಲ್ಲದೆ ನೀಡಿದ ಪ್ರಶಸ್ತಿಯಿದು. ಈ ಸಲದ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದ್ದು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರು. ಹೀಗಾಗಿ ಈ ಸಲದ ಪ್ರಶಸ್ತಿಗೆ ಭಾಜನರಾದವರ ಹೆಸರುಗಳಿಗೆ ಯಾವುದೇ ಕಳಂಕವಿಲ್ಲ.
ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರು ಭಾರತೀಯ ಗೋತಳಿಗಳ ಸಂರಕ್ಷಣೆಗೆ ಕಂಕಣಬದ್ಧರಾಗಿ ದುಡಿಯುತ್ತಿರುವುದು ಎಲ್ಲರಿಗೂ ತಿಳಿದಿರಬಹುದು. ವಿದೇಶಿ ತಳಿಯ ಹಸುಗಳು ನಮ್ಮ ಹವಾಮಾನಕ್ಕೆ ಒಗ್ಗುವುದಿಲ್ಲ, ಅವುಗಳಿಗೆ ತುಂಬ ಔಷಧೋಪಚಾರ, ನಿಯಂತ್ರಿತ ಹವೆ ಎಲ್ಲ ಅಗತ್ಯ ಎಂಬುದಾಗಿ ನಾವೆಲ್ಲ ಕೇಳಿದ್ದೇವೆ. ಭಾರತೀಯ ಗೋತಳಿಗಳು ಇಲ್ಲಿಯ ಹವಾಮಾನಕ್ಕೆ ಒಗ್ಗಿದವು. ಅವುಗಳಿಗೆ ಈ ಉಪಚಾರಗಳ ಅಗತ್ಯವಿಲ್ಲ. ನಾವು ಚಿಕ್ಕವರಿದ್ದಾಗ ಭಾರತೀಯ ಹಸುಗಳ ಹಾಲನ್ನೇ ಕುಡಿದವರು. ಆಗ ಯಾವ ಹಸುವಿಗೂ ದೊಡ್ಡ ಖಾಯಿಲೆ ಬಾಧಿಸಿದ್ದು ನನಗೆ ನೆನಪಿಲ್ಲ. ಚಿಕ್ಕಪುಟ್ಟ ಖಾಯಿಲೆಗಳು ಬಾಧಿಸಿದರೂ ಹಳ್ಳಿ ಔಷಧಿಂದಲೇ ಅವು ಗುಣವಾಗುತ್ತಿದ್ದವು. ಈಗ ಎಲ್ಲರೂ ಸಾಕುತ್ತಿರುವ ವಿದೇಶೀ ಮೂಲದ ತಳಿಸಂಕರದಿಂದ ಹುಟ್ಟಿದ ಹಸುಗಳಿಗೆ ದೊಡ್ಡ ದೊಡ್ಡ ಖಾಯಿಲೆಗಳೇ ಬಾಧಿಸುತ್ತವೆ. ಅವಕ್ಕೆ ನೀಡಬೇಕಾದ ಔಷಧಿಗೂ ಸಾವಿರಾರು ರೂಪಾಯಿ ನೀಡಬೇಕಾಗುತ್ತದೆ. ಇದೆಲ್ಲ ಯಾಕೆ ಹೇಳಿದ್ದೆಂದರೆ ಒಂದು ಉದಾಹರಣೆ ನನ್ನಲ್ಲೇ ಇದೆ.
ಚೀನಾದಲ್ಲಿ ಒಬ್ಬ ಲಾಯರ್ ಮೆಕ್ಡೊನಾಲ್ಡ್ ಕಂಪೆನಿಯ ಮೇಲೆ ಕೇಸು ಹಾಕಿರುವುದು ವರದಿಯಾಗಿದೆ. ಮೆಕ್ಡೊನಾಲ್ಡ್ನವರು ಬಿಸಿಯಾದ ಕಾಫಿ ನೀಡುವುದರ ವಿರುದ್ಧ, ಪ್ರಾಣಿ ಮಾಂಸದಿಂದ ತಯಾರಿಸಿದ ಎಣ್ಣೆಯನ್ನು ಬಳಸುವುದರ ವಿರುದ್ಧ ಎಲ್ಲ ಈ ಹಿಂದೆ ಕೇಸುಗಳು ದಾಖಲಾಗಿದ್ದವು. ಆದರೆ ಈ ಕೇಸು ಸ್ವಲ್ಪ ವಿಶೇಷವಾಗಿದೆ. ಚೀನಾದ ಭಾಷೆಯನ್ನು ಬಳಸದಿರುವುದರ ವಿರುದ್ಧ ಈ ಕೇಸು ಹಾಕಲಾಗಿದೆ.
ಜೂನ್ ೨೨ರಂದು ಎಲ್ಲ ಪತ್ರಿಕೆಗಳಲ್ಲಿ ಚಿತ್ರ ಸಮೇತ ಒಂದು ಸುದ್ದಿ ಪ್ರಕಟವಾಗಿತ್ತು. ಡೆಕ್ಕನ್ ಹೆರಾಲ್ಡ್ನ ಅಂತರಜಾಲ ಆವೃತ್ತಿಯಲ್ಲಿ ಅದನ್ನು ಈಗಲೂ ಓದಬಹುದು. ಆ ಸುದ್ದಿ ಏನೆಂದರೆ ಕರ್ನಾಟಕ ಸರಕಾರದ ಅಬಕಾರಿ ಇಲಾಖೆಯವರು ಬೆಂಗಳೂರಿನ ಸುತ್ತಮುತ್ತ ಕಳ್ಳಭಟ್ಟಿ ತಯಾರಿಸುವ ಸ್ಥಳಗಳಿಗೆ ಧಾಳಿ ಇತ್ತು ಕಳ್ಳಭಟ್ಟಿ ದಾಸ್ತಾನುಗಳನ್ನು ನಾಶ ಮಾಡಿದರು ಎಂಬುದಾಗಿ. ಸುದ್ದಿಯಲ್ಲಿ ಬರುವ ಒಂದು ಪ್ಯಾರವನ್ನು ಗಮನಿಸಿ-