Press "Enter" to skip to content

Posts published in “ಮನೋರಂಜನೆ”

ಸಿನಿಮಾ, ನಾಟಕ, ಸಂಗೀತ, ಇತ್ಯಾದಿ

ಮೂಕಜ್ಜಿಯ ಕನಸುಗಳು ಚಲನಚಿತ್ರ

– ಸುಶ್ರುತ ದೊಡ್ಡೇರಿ ಕಾದಂಬರಿ ಆಧಾರಿತ ಸಿನೆಮಾಗಳನ್ನು ನೋಡಲು ಹೋಗಲು ಹಿಂಜರಿಕೆಯಾಗುತ್ತದೆ. ಅದೂ ನಾವು ಇಷ್ಟ ಪಟ್ಟು ಓದಿದ ಕಾದಂಬರಿ/ಕೃತಿಯಾಗಿದ್ದರೆ, ಸಿನೆಮಾದಲ್ಲಿ ಎಲ್ಲಿ ಅದನ್ನು ಹಾಳು ಮಾಡಿಬಿಟ್ಟಿರುತ್ತಾರೋ ಎಂಬ ಭಯ. ಓದುವಾಗ ನಮಗೆ ಆದ…

ಬೆಳ್ಳಿ ಪರದೆಯ "ತುತ್ತೂರಿ"

ಸದಭಿರುಚಿಯ ಚಿತ್ರಗಳು ಮಾಲಿಕೆ - ೭

ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸುವ ಬೆರಳೆಣಿಕೆಯ ನಿರ್ದೇಶಕರಲ್ಲಿ ಪಿ. ಶೇಷಾದ್ರಿ ಒಬ್ಬರು. ಮುನ್ನುಡಿ, ಅತಿಥಿ, ಬೇರು, ಇತ್ಯಾದಿ ಉತ್ತಮ ಸದಭಿರುಚಿಯ ಚಿತ್ರಗಳನ್ನು ನೀಡಿರುವ ಶೇಷಾದ್ರಿಯವರಿಂದ ನಿರ್ದೇಶಿಸಲ್ಪಟ್ಟ ಮತ್ತೊಂದು ಉತ್ತಮ ಚಿತ್ರ "ತುತ್ತೂರಿ". ಇದು ಮಕ್ಕಳ ಚಿತ್ರ. ಮಕ್ಕಳು ಮಾತ್ರವಲ್ಲ, ಮಕ್ಕಳ ಮನಸ್ಸಿನ ದೊಡ್ಡವರು, ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಲಾರದ ದೊಡ್ಡವರು - ಹೀಗೆ ಎಲ್ಲರೂ ನೋಡಬಹುದಾದ ಮತ್ತು ನೋಡಲೇ ಬೇಕಾದ ಚಿತ್ರ -"ತುತ್ತೂರಿ".

ನಗರಗಳಲ್ಲಿ ಮಕ್ಕಳಿಗೆ ಆಟದ ಮೈದಾನಗಳು ಇಲ್ಲವೇ ಇಲ್ಲ ಎನ್ನಬಹುದು. ಇರುವ ಕೆಲವೇ ಮೈದಾನಗಳನ್ನು ಪಾರ್ಕುಗಳಾಗಿ ಬದಲಾಯಿಸುತ್ತಿದ್ದಾರೆ. ಹಿಗಾದರೆ ಮಕ್ಕಳು ಎಲ್ಲಿ ಆಡಬೇಕು? ಮನೆಯೊಳಗೇ ಕುಳಿತುಕೊಂಡು ಟಿವಿ ನೋಡುವುದು ಮತ್ತು ಕಂಪ್ಯೂಟರ್‍ ಗೇಮ್ ಆಡುತ್ತ ಕುಳಿತುಕೊಳ್ಳಬೇಕೇ? ಇಂತಹ ಒಂದು ಸಮಕಾಲೀನ ಸಮಸ್ಯೆಯನ್ನು ಕೈಗೆತ್ತಿಕೊಂಡು ಶೇಷಾದ್ರಿಯವರು ಚಿತ್ರ ನಿರ್ಮಿಸಿದ್ದಾರೆ. ಚಿತ್ರದ ಕಥೆಯ ಸಾರಾಂಶವನ್ನು ಅದರ ಅಂತರಜಾಲ ತಾಣದಲ್ಲಿ ಓದಬಹುದು (ಅದು ಇಂಗ್ಲೀಶಿನಲ್ಲಿದೆ. ಕನ್ನಡ ಚಿತ್ರಕ್ಕೆ ಕನ್ನಡದಲ್ಲಿ ತಾಣ ನಿರ್ಮಿಸಬಹುದಿತ್ತು). ಆದುದರಿಂದ ಕಥೆಯನ್ನು ಇಲ್ಲಿ ನೀಡುತ್ತಿಲ್ಲ.

ಚಿತ್ರದ ನಿರ್ಮಾಪಕಿ ಶ್ರೀಮತಿ ಜಯಮಾಲ. ಛಾಯಾಗ್ರಹಣ ರಾಮಚಂದ್ರ. ಸಂಗೀತ ಹಂಸಲೇಖ. ಕಥೆ ಜೆ ಎಂ ಪ್ರಹ್ಲಾದ. ಎಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಚೊಕ್ಕವಾಗಿ ದುಡಿದಿದ್ದಾರೆ. ಚಿತ್ರಕ್ಕೆ ಈಗಾಗಲೇ ಪ್ರಶಸ್ತಿ, ಹೊಗಳಿಕೆಗಳು ಬಂದಿವೆ. ಕಳೆದ ಮೇ ತಿಂಗಳಿನಲ್ಲೇ ಚಿತ್ರ ತಯಾರಾಗಿದ್ದರೂ ಶಾಲೆಗಳಿಗೆ ರಜೆ ಮತ್ತು ಅದೇ ಸಮಯಕ್ಕೆ ಸರಿಯಾಗಿ ಚಿತ್ರ ಮಂದಿರ ಹೊಂದಿಸಿಕೊಳ್ಳುವುದಕ್ಕಾಗಿ ಇದರ ಬಿಡುಗಡೆ ಒಂದು ವರ್ಷ ತಡವಾಗಿ ಆಗಿದೆ.

ಚಿತ್ರದ ಸಂಗೀತ ಮಕ್ಕಳಿಗೆ ಖುಶಿ ಕೊಡುವಂತಿದೆ. ಎರಡು ಹಾಡುಗಳು ಮತ್ತೆ ಕೇಳುವಂತಿವೆ. ರಾಮಚಂದ್ರರ ಛಾಯಾಗ್ರಹಣ ಚೆನ್ನಾಗಿದೆ. ಆದರೆ ತಾಯಿ ಸಾಹೇಬದಲ್ಲಿ ತೋರಿದ ಪ್ರತಿಭೆ ಕಾಣಿಸಲಿಲ್ಲ.

ವಿರಾಮದ ತನಕ ಚಿತ್ರದ ಓಟ ಸೊಗಸಾಗಿದೆ. ನಂತರ ನಿರ್ದೇಶನದಲ್ಲಿ ಸ್ವಲ್ಪ ಹಿಡಿತ ಕಡಿಮೆ ಆದಂತೆ ಕಂಡು ಬರುತ್ತದೆ. ಶೇಷಾದ್ರಿಯವರು ಪ್ರಹ್ಲಾದರ ಕಥೆಯನ್ನು ನೇರವಾಗಿ ನಿರೂಪಿಸುತ್ತಾ ಹೋಗುತ್ತಾರೆ. ಯಾವುದೇ ತಂತ್ರದ ಬಳಕೆ ಮಾಡಿಲ್ಲ. ನಿರೂಪಣಾ ವಿಧಾನದ ಬಳಕೆಯಿಂದ ಮಕ್ಕಳಿಗೆ ಚಿತ್ರ ನೋಡಲು ಯಾವುದೇ ತೊಡಕು ಉಂಟಾಗದು. ಮಕ್ಕಳಿಗೆ ಖಂಡಿತವಾಗಿಯೂ ಮುದ ನೀಡುವ ಚಿತ್ರ.

ತುತ್ತೂರಿ ಚಿತ್ರದ ತಂಡ

ಡಾ| ರಾಜ್‌ಕುಮಾರ್‌ರವರ ವಿಶೇಷ ಪರಿಚಯ

- ಗಂಗಾಧರ ಮೊದಲಿಯಾರ್

ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ಡಾ| ರಾಜ್‌ಕುಮಾರ್ ಅವರದೇ ಒಂದು ಪ್ರತ್ಯೇಕ ಅಧ್ಯಾಯ. ಕನ್ನಡ ಚಿತ್ರರಂಗದ ಪುಟಪುಟವನ್ನೂ ಆವರಿಸಿಕೊಂಡಿರುವ ಡಾ| ರಾಜ್‌ಕುಮಾರ್ (ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ) ಕನ್ನಡ ಚಿತ್ರರಂಗ ಕಂಡ ವರ್ಣರಂಜಿತ ನಾಯಕ ನಟ. ೧೨ ವರ್ಷದ ಬಾಲ ನಟನಾಗಿರುವಾಗಲೇ ಚಲನಚಿತ್ರರಂಗ ಪ್ರವೇಶಿಸಿದ ಡಾ|ರಾಜ್‌ಕುಮಾರ್ ೬೩ ವರ್ಷ ತುಂಬಿರುವ ಕನ್ನಡ ಚಿತ್ರರಂಗದಲ್ಲಿ ೪೩ ವರ್ಷಗಳಿಂದ ಹಾಸುಹೊಕ್ಕಾಗಿದ್ದಾರೆ. ಅವರು ಅಭಿನಯಿಸದ ಪಾತ್ರವೇ ಇಲ್ಲ. ಅವರು ನಡೆದು ಬಂದ ಹಾದಿಯೇ ಒಂದು ಚರಿತ್ರೆ. ಹೀಗಾಗಿ ಭಾರತ ಸರ್ಕಾರ, ಚಲನಚಿತ್ರ ಪಿತಾಮಹ ದಾದಾಸಾಹೇಬ ಫಾಲ್ಕೆ ಅವರ ಹೆಸರಿನಲ್ಲಿ ನೀಡುವ, ರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿ ``ಫಾಲ್ಕೆ ಪ್ರಶಸ್ತಿ" ಯನ್ನು ೧೯೯೬ರಲ್ಲಿ ಡಾ| ರಾಜ್‌ಕುಮಾರ್ ಅವರಿಗೆ ನೀಡಿ ಗೌರವಿಸಿದೆ. ಕನ್ನಡ ಚಲನಚಿತ್ರರಂಗದಲ್ಲಿ ಈ ಪ್ರಶಸ್ತಿ ಪಡೆದ ಮೊದಲಿಗರು ಡಾ| ರಾಜ್‌ಕುಮಾರ್.