<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ತಂತ್ರಾಂಶ | Vishva Kannada</title>
	<atom:link href="http://vishvakannada.com/tag/%e0%b2%a4%e0%b2%82%e0%b2%a4%e0%b3%8d%e0%b2%b0%e0%b2%be%e0%b2%82%e0%b2%b6/feed/" rel="self" type="application/rss+xml" />
	<link>http://vishvakannada.com</link>
	<description></description>
	<lastBuildDate>Sat, 25 Apr 2026 19:49:55 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>
	<item>
		<title>ಬುದ್ಧಿವಂತ ಮಾತುಗಾರ</title>
		<link>http://vishvakannada.com/%e0%b2%b2%e0%b3%87%e0%b2%96%e0%b2%a8/chatgpt/</link>
					<comments>http://vishvakannada.com/%e0%b2%b2%e0%b3%87%e0%b2%96%e0%b2%a8/chatgpt/#respond</comments>
		
		<dc:creator><![CDATA[Prajna Devadiga]]></dc:creator>
		<pubDate>Fri, 17 Jan 2025 16:28:13 +0000</pubDate>
				<category><![CDATA[ಲೇಖನ]]></category>
		<category><![CDATA[ChatGPT]]></category>
		<category><![CDATA[artificial intelligence]]></category>
		<category><![CDATA[chatbot]]></category>
		<category><![CDATA[e-vishva]]></category>
		<category><![CDATA[e-ವಿಶ್ವ]]></category>
		<category><![CDATA[openAI]]></category>
		<category><![CDATA[technology]]></category>
		<category><![CDATA[ಕೃತಕ ಬುದ್ಧಿಮತ್ತೆ]]></category>
		<category><![CDATA[ಚಾಟ್‌ಜಿಪಿಟಿ]]></category>
		<category><![CDATA[ಚಾಟ್‌ಬೋಟ್]]></category>
		<category><![CDATA[ತಂತ್ರಾಂಶ]]></category>
		<category><![CDATA[ಬುದ್ಧಿವಂತ ಮಾತುಗಾರ]]></category>
		<category><![CDATA[ಮಾಹಿತಿ ತಂತ್ರಜ್ಞಾನ]]></category>
		<guid isPermaLink="false">https://vishvakannada.com/?p=2542</guid>

					<description><![CDATA[<p>“ನನಗೊಂದು ಪೈಥೋನ್ ಪ್ರೋಗ್ರಾಂ ಬರೆದುಕೊಡು” “ನನಗೆ ಬೋರ್ ಆಗಿದೆ, ಏನು ಮಾಡಲಿ?” “ಇಡ್ಲಿ ಯಾಕೆ ಜಗತ್ತಿನ ಸರ್ವಶ್ರೇಷ್ಠ ತಿಂಡಿಯಾಗಿದೆ?” “ನನಗೊಂದು ಕವನ ಸೃಷ್ಠಿಸಿ ಕೊಡು” ಇವೆಲ್ಲ ಆದೇಶಗಳನ್ನು ನೀವು ನಿಮ್ಮ ಸಹಾಯಕನಿಗೆ ನೀಡುತ್ತಿಲ್ಲ. ಬದಲಿಗೆ&#8230;</p>
<p>The post <a href="http://vishvakannada.com/%e0%b2%b2%e0%b3%87%e0%b2%96%e0%b2%a8/chatgpt/">ಬುದ್ಧಿವಂತ ಮಾತುಗಾರ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p class="wp-block-paragraph">“ನನಗೊಂದು ಪೈಥೋನ್ ಪ್ರೋಗ್ರಾಂ ಬರೆದುಕೊಡು”</p>



<p class="wp-block-paragraph">“ನನಗೆ ಬೋರ್ ಆಗಿದೆ, ಏನು ಮಾಡಲಿ?”</p>



<p class="wp-block-paragraph">“ಇಡ್ಲಿ ಯಾಕೆ ಜಗತ್ತಿನ ಸರ್ವಶ್ರೇಷ್ಠ ತಿಂಡಿಯಾಗಿದೆ?”</p>



<p class="wp-block-paragraph">“ನನಗೊಂದು ಕವನ ಸೃಷ್ಠಿಸಿ ಕೊಡು”</p>



<p class="wp-block-paragraph">ಇವೆಲ್ಲ ಆದೇಶಗಳನ್ನು ನೀವು ನಿಮ್ಮ ಸಹಾಯಕನಿಗೆ ನೀಡುತ್ತಿಲ್ಲ. ಬದಲಿಗೆ ಕೃತಕ ಬುದ್ಧಿಮತ್ತೆಯ ಮೂಲಕ ಕೆಲಸ ಮಾಡುವ ಒಂದು ಅತ್ಯಾಧುನಿಕ ಚಾಟ್ ಇಂಜಿನ್‌ಗೆ ಹೇಳುತ್ತೀರಿ. ಅದು ಸಂದರ್ಭಕ್ಕೆ ಸರಿಯಾಗಿ ಬಹುಮಟ್ಟಿಗೆ ಸರಿಯೆನಿಸುವಂತಹ ಪ್ರತಿಕ್ರಿಯೆ ನೀಡುತ್ತದೆ. ಈ ಕೃತಕ ಬುದ್ಧಿಮತ್ತೆಯ ಚಾಟ್ ಇಂಜಿನ್ ಸದ್ಯಕ್ಕೆ ಅಂತರಜಾಲದಲ್ಲಿ ಬಹುದೊಡ್ಡ ಸುದ್ದಿಯಾಗಿದೆ. ಇದರ ಹೆಸರು ಚಾಟ್‌ಜಿಪಿಟಿ (ChatGPT). ಏನಿದು ಎಂದು ಈ ಸಂಚಿಕೆಯಲ್ಲಿ ತಿಳಿಯೋಣ.</p>



<figure class="wp-block-image size-full is-resized"><a href="https://vishvakannada.com/wp-content/uploads/2025/01/Chatgpt-logo.webp"><img fetchpriority="high" decoding="async" width="256" height="256" src="https://vishvakannada.com/wp-content/uploads/2025/01/Chatgpt-logo.webp" alt="" class="wp-image-2544" style="aspect-ratio:1;width:279px;height:auto" srcset="http://vishvakannada.com/wp-content/uploads/2025/01/Chatgpt-logo.webp 256w, http://vishvakannada.com/wp-content/uploads/2025/01/Chatgpt-logo-150x150.webp 150w" sizes="(max-width: 256px) 100vw, 256px" /></a><figcaption class="wp-element-caption"><strong>ಚಾಟ್ ಜಿಪಿಟಿಯ ಲೋಗೊ</strong></figcaption></figure>



<p class="wp-block-paragraph">ಆನ್‌ಲೈನ್ ಮೂಲಕ ಯಾವುದಾದರೂ ಉತ್ಪನ್ನ ಕೊಳ್ಳುವ ಮೊದಲು ಆ ಜಾಲಮಳಿಗೆಯಲ್ಲಿ ನಮ್ಮೊಡನೆ ಮಾತುಕತೆ ನಡೆಸಿ ಎಂದು ಒಂದು ಮೂಲೆಯಲ್ಲಿ ಬರೆದುದನ್ನು ಗಮನಿಸಿ ಅಲ್ಲಿ ಕ್ಲಿಕ್ ಮಾಡಿ ಮಾತುಕತೆ ನಡೆಸಿದ ನೆನಪಿರಬಹುದು. ಬಹುತೇಕ ಸಂದರ್ಭಗಳಲ್ಲಿ ಇದು ಜೀವಂತ ವ್ಯಕ್ತಿಯಾಗಿರದೆ ಒಂದು ಸ್ವಯಂಚಾಲಿತ ತಂತ್ರಾಂಶ ಆಗಿರುತ್ತದೆ. ಇಂತಹ ತಂತ್ರಾಂಶಗಳಿಗೆ ಚಾಟ್‌ಬೋಟ್ (chatbot) ಎನ್ನುತ್ತಾರೆ. ಇಲ್ಲಿ ಬೋಟ್ ಎನ್ನುವುದು ರೋಬೋಟ್ ಎನ್ನುವುದರ ಕಿರುರೂಪ. ಇಲ್ಲಿ ರೋಬೋಟ್ ಎನ್ನುವುದು ನೀವು ಅಂದುಕೊಂಡ ಯಂತ್ರಮಾನವ ಅಲ್ಲ. ಬದಲಿಗೆ ಒಂದು ತಂತ್ರಾಂಶ. ಚಿಕ್ಕದಾಗಿ ಹೇಳುವುದಾದರೆ ಸಾಫ್ಟ್‌ವೇರ್ ರೋಬೋಟ್‌ಗೆ ಬೋಟ್ ಎನ್ನುತ್ತಾರೆ. ಚಾಟ್ (ಮಾತುಕತೆ) ಮಾಡಲು ಬಳಸುವ ಸಾಫ್ಟ್‌ವೇರ್ ರೋಬೋಟ್‌ಗೆ ಚಾಟ್‌ಬೋಟ್ ಎನ್ನುತ್ತಾರೆ. ಈ ಚಾಟ್‌ಬೋಟ್‌ಗಳು ಅಷ್ಟೇನು ಬುದ್ಧಿವಂತವಾಗಿಲ್ಲ. ಬಹುತೇಕ ಸಂದರ್ಭಗಳಲ್ಲಿ ಎಲ್ಲೆಲ್ಲೋ ಸುತ್ತಿಸಿ ಕೊನೆಗೂ ನಮಗೆ ಬೇಕಾದ ಮಾಹಿತಿ ದೊರೆಯುವುದಿಲ್ಲ. ಈ ಸಮಸ್ಯೆಗೆ ಒಂದು ಮಟ್ಟಿನ ಪರಿಹಾರವಾಗಿ ಈ ಚಾಟ್‌ಜಿಪಿಟಿ ಬಂದಿದೆ. ಏನದು ಎಂದು ತಿಳಿಯೋಣ.</p>



<p class="wp-block-paragraph">ಚಾಟ್‌ಜಿಪಿಟಿ ಎಂಬುದು ಒಂದು ಕೃತಕ ಬುದ್ಧಿಮತ್ತೆ ಮೂಲಕ ಮಾತುಕತೆ ನಡೆಸುವ ಒಂದು ತಂತ್ರಾಂಶ, ಅಥವಾ ಕೃತಕಬುದ್ಧಿವಂತ ಚಾಟ್‌ಬೋಟ್. ಕೃತಕ ಬುದ್ಧಿಮತ್ತೆ (artificial intelligence) ಎನ್ನುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗೆ ತುಂಬ ಸುದ್ದಿ ಮಾಡುತ್ತಿರುವ ವಿಷಯ. ಇದರಲ್ಲಿ ಯಂತ್ರಗಳು ತಾವೇ ವಿಷಯಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಸ್ಪಂದಿಸಿ, ತಾವೇ ತೀರ್ಮಾನ ತೆಗೆದುಕೊಂಡು ಕೆಲಸ ಮಾಡುತ್ತವೆ. ಕೆಲವು ಪ್ರಮುಖ ಉದಾಹರಣೆಗೆಳು – ಯಂತ್ರಾನುವಾದ, ಪಠ್ಯದಿಂದ ಧ್ವನಿಗೆ ಹಾಗೂ ಧ್ವನಿಯಿಂದ ಪಠ್ಯಕ್ಕೆ ಪರಿವರ್ತನೆ, ಚಿತ್ರದಿಂದ ಪಠ್ಯಕ್ಕೆ, ಇತ್ಯಾದಿ.</p>



<p class="wp-block-paragraph">ಚಾಟ್‌ಜಿಪಿಟಿಯಲ್ಲಿ ಜಿಪಿಟಿ ಎಂದರೆ Generative Pre-trained Transformer. ಇದೊಂದು ಚಾಟ್‌ಬೋಟ್ ಅಂದರೆ ಕೃತಕ ಬುದ್ಧಿಮತ್ತೆ ಮೂಲಕ ಮಾತುಕತೆ ನಡೆಸುವ ಒಂದು ತಂತ್ರಾಂಶ. ಇತರೆ ಚಾಟ್‌ಬೋಟ್‌ಗಳಿಗಿಂತ ಇದು ತುಂಬ ವಿಭಿನ್ನ. ಅವುಗಳೆಲ್ಲ ಮಾಮೂಲಿ ಪ್ರಶ್ನೆ – ಉತ್ತರ ಮಾದರಿಯಲ್ಲಿ ಕೆಲಸ ಮಾಡುತ್ತವೆ. ಅವುಗಳ ದತ್ತಾಂಶಸಂಗ್ರಹದಲ್ಲಿರುವ ಪ್ರಶ್ನೆಗಳಿಗೆ ಮಾತ್ರ ಅವು ಅಲ್ಲಿರುವ ಉತ್ತರಗಳ ಸಂಗ್ರಹದಿಂದ ಆರಿಸಿ ಉತ್ತರಿಸಬಲ್ಲವು. ಆದರೆ ಚಾಟ್‌ಜಿಪಿಟಿ ಹಾಗಲ್ಲ. ಅದರಲ್ಲಿ ಈಗಾಗಲೇ ಲಕ್ಷಾಂತರ ಮಾಹಿತಿ ಇರುವುದೇನೋ ಸರಿಯೇ. ಅದು ಅಲ್ಲಿಂದ ಮುಂದುವರೆದು ಪ್ರಶ್ನೆಗಳಿಗೆ ತಾನೇ ವಿಶ್ಲೇಷಿಸಿ ಬಹುಮಟ್ಟಿಗೆ ಮನುಷ್ಯರು ಉತ್ತರಿಸುವ ಮಾದರಿಯಲ್ಲೇ ಉತ್ತರಿಸಬಲ್ಲುದು. &nbsp;</p>



<p class="wp-block-paragraph">ಚಾಟ್‌ಜಿಪಿಟಿ ಮುಕ್ತ ಕೃತಕಬುದ್ಧಿಮತ್ತೆಯ ಒಕ್ಕೂಟದ ಉತ್ಪನ್ನ ಎನ್ನಬಹುದು. ಇದನ್ನು OpenAI ಎನ್ನುತ್ತಾರೆ. ಇದು ಬಹುಮಟ್ಟಿಗೆ ಮುಕ್ತ ತಂತ್ರಾಂಶ ಮತ್ತು ಮುಕ್ತಜ್ಞಾನದ ಸಮೀಪವರ್ತಿ ಎನ್ನಬಹುದು. ಮುಕ್ತಜ್ಞಾನದ ವಿಕಿಪೀಡಿಯ ನಿಮಗೆಲ್ಲರಿಗೂ ತಿಳಿದೇ ಇರಬಹುದು. ಈ ಓಪನ್‌ಏಐಗೆ ಹಲವರು ಹಣ ಹಾಕಿದ್ದಾರೆ. ಇದನ್ನು ಪ್ರಾರಂಭಿಸಿದವರಲ್ಲಿ ಎಲೊನ್ ಮಸ್ಕ್ ಕೂಡ ಒಬ್ಬರು. ಜಗತ್ತಿನ ಅತಿ ಶ್ರೀಮಂತರಲ್ಲೊಬ್ಬರಾದ ಎಲೊನ್ ಮಸ್ಕ್ ಗೊತ್ತಿರಬಹುದು. ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾಗಳಿಂದ ಮತ್ತು ಇತ್ತೀಚೆಗೆ ಟ್ವಿಟ್ಟರ್ ಕೊಳ್ಳುವುದರ ಮೂಲಕ ಅವರ ಹೆಸರು ಪ್ರಖ್ಯಾತವಾಗಿದೆ. ಎಲೊನ್ ಮಸ್ಕ್ ಈಗ ಓಪನ್‌ಏಐಯ ನಿರ್ದೇಶಕ ಮಂಡಳಿಯಲ್ಲಿಲ್ಲ. ಆದರೆ ಅದಕ್ಕೆ ಹಣ ಹಾಕಿದ್ದಾರೆ. ಓಪನ್‌ಏಐಗೆ ಮೈಕ್ರೋಸಾಫ್ಟ್‌ನಂತಹ ದೈತ್ಯ ಕೂಡ ಹಣ ಹಾಕಿದೆ. ಇದು ಭವಿಷ್ಯದಲ್ಲಿ ದೊಡ್ಡ ಹೆಸರು ಮಾಡಲಿದೆ. ಚಾಟ್‌ಜಿಪಿಟಿ ಪ್ರಾರಂಭ ಎನ್ನಬಹುದು.</p>



<p class="wp-block-paragraph">ಚಾಟ್‌ಜಿಪಿಟಿಯು ಮನುಷ್ಯರು ನಡೆಸುವ ಸಂಭಾಷಣೆಯನ್ನು ಅನುಕರಿಸಲು ತಯಾರಾದುದು. ಅದು ಬಹುಮಟ್ಟಿಗೆ ಇದರಲ್ಲಿ ಯಶಸ್ವಿಯೂ ಆಗಿದೆ. ಪತ್ರಕರ್ತರು ಇದನ್ನು ತಮಗೆ ತಿಳಿಯದ ಹಲವು ವಿಷಯಗಳನ್ನು ತಿಳಿಯಲು ಬಳಸುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಗೂಗ್ಲ್ ಅನುವಾದದಂತೆ. ಇದು ನೀಡುವ ಉತ್ತರಗಳು ಸಂಪೂರ್ಣ ಸತ್ಯವಾಗಿರಬೇಕಾಗಿಲ್ಲ. ಆದರೂ ಆ ಉತ್ತರಗಳನ್ನು ಪ್ರಾರಂಭದ ಹೆಜ್ಜೆಯಂತೆ ಬಳಸಬಹುದು. ಗೂಗ್ಲ್ ಅನುವಾದವೂ ಅಂತೆಯೇ. ಅದನ್ನು ಪ್ರಾರಂಭದ ಹಂತದಂತೆ ಬಳಸಬಹುದು. ಚಾಟ್‌ಜಿಪಿಟಿ ಬುದ್ಧಿವಂತ ಎಂದೆನಲ್ಲ. ಅದು ಮಾತುಕತೆ ನಡೆಸುತ್ತ ತನ್ನನ್ನು ತಾನೆ ಸುಧಾರಿಸಿಕೊಳ್ಳುತ್ತದೆ. ಈ ಒಂದು ಗುಣವೈಶಿಷ್ಟ್ಯವು ಚಾಟ್‌ಜಿಪಿಟಿಯನ್ನು ತುಂಬ ಉಪಯುಕ್ತ ಮಾಡಲಿದೆ. ಈಗಾಗಲೇ ಅದು ತುಂಬ ಕಲಿತಿದೆ. ಒಂದು ವಾರದ ಹಿಂದೆ ನಾನು ಅದಕ್ಕೆ ಕೇಳಿದ ಪ್ರಶ್ನೆಗಳಿಗೆ ಅದು ನೀಡಿದ ಉತ್ತರಗಳಿಗಿಂತ ಅದು ಈಗ ನೀಡುತ್ತಿರುವ ಉತ್ತರಗಳು ಹೆಚ್ಚು ಉಪಯುಕ್ತವಾಗಿವೆ. </p>



<p class="wp-block-paragraph">ಚಾಟ್‌ಜಿಪಿಟಿಗೆ ನಾನು ಕೇಳಿದ ಕೆಲವು ಪ್ರಶ್ನೆಗಳು ಮತ್ತು ಅದು ನೀಡಿದ ಉತ್ತರಗಳು ಇಲ್ಲಿವೆ. ಅದು ಇನ್ನೂ ಕನ್ನಡ ಕಲಿತಿಲ್ಲ. ಇಂಗ್ಲಿಷಿನಲ್ಲಿ ನಡೆದ ಮಾತುಕತೆಗಳ ಸಾರಾಂಶವನ್ನು ಕನ್ನಡದಲ್ಲಿ ನೀಡುತ್ತಿದ್ದೇನೆ.</p>



<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">“ಇಡ್ಲಿ ಯಾಕೆ ಜಗತ್ತಿನ ಸರ್ವಶ್ರೇಷ್ಠ ತಿಂಡಿಯಾಗಿದೆ?”</p>



<p class="wp-block-paragraph">“ಇಡ್ಲಿ ಒಂದು ದಕ್ಷಿಣಭಾರತೀಯ ಪಾರಂಪರಿಕ ತಿಂಡಿಯಾಗಿದೆ. ಇದು ತುಂಬ ಆರೋಗ್ಯದಾಯಕ ಮತ್ತು ಪೌಷ್ಠಿಕಾಂಶಗಳಿಂದ ಕೂಡಿದ್ದು ಎಂದು ಭಾವಿಸಲಾಗುತ್ತಿದೆ. ಯಾಕೆಂದರೆ ಅದರಲ್ಲಿ ಪ್ರೊಟೀನ್ ತುಂಬ ಇದೆ ಹಾಗೂ ಜಿಡ್ಡಿನ ಅಂಶಗಳಿಲ್ಲ. ಅದು ಸುಲಭವಾಗಿ ಜೀರ್ಣವಾಗುತ್ತದೆ. ಅದು ಸಂಪೂರ್ಣ ಸಸ್ಯಾಹಾರವಾಗಿದ್ದು ಯಾವುದೇ ಪ್ರಾಣಿಜನ್ಯ ಆಹಾರ ಅದರಲ್ಲಿಲ್ಲ.”</p>



<p class="wp-block-paragraph">“ನ್ಯೂಟನ್‌ಗೆ ಯಾಕೆ ನೋಬೆಲ್ ಪುರಸ್ಕಾರ ದೊರೆಯಲಿಲ್ಲ?”</p>



<p class="wp-block-paragraph">“ನೋಬೆಲ್ ಪುರಸ್ಕಾರವನ್ನು 1901ರಲ್ಲಿ ಸ್ಥಾಪಿಸಲಾಯಿತು. ನ್ಯೂಟನ್ 1727ರಲ್ಲೇ ಮರಣ ಹೊಂದಿದ್ದರು. ನ್ಯೂಟನ್ ಕಾಲದಲ್ಲಿ ನೋಬೆಲ್ ಪುರಸ್ಕಾರ ಇರಲಿಲ್ಲ.”</p>



<p class="wp-block-paragraph">“5 ಶ್ರೇಷ್ಠ ದಕ್ಷಿಣಭಾರತೀಯ ಆಹಾರಗಳನ್ನು ಹೆಸರಿಸು”</p>



<p class="wp-block-paragraph"> “ದೋಸೆ, ಇಡ್ಲಿ, ಒಡೆ, ಉಪ್ಪಿಟ್ಟು, ಸಾಂಬಾರು”. (<a href="https://mountainspringsdental.com/ativan-lorazepam/" target="_blank" rel="noopener" title="">lorazepam Canada</a>)</p>
</blockquote>



<p class="wp-block-paragraph">ಕನ್ನಡದಲ್ಲೇ ಪ್ರಶ್ನೆ ಕೇಳಿದರೆ ಅದು ಅದನ್ನು ಗೂಗ್ಲ್ ಅನುವಾದ ಬಳಸಿ ಇಂಗ್ಲಿಷಿಗೆ ಅನುವಾದಿಸಿ ದೊರೆತ ಉತ್ತರವನ್ನು ಮತ್ತೆ ಕನ್ನಡಕ್ಕೆ ಅನುವಾದಿಸಿ ನೀಡುತ್ತದೆ. ಬಹುತೇಕ ಸಂದರ್ಭಗಳಲ್ಲಿ ಇದು ಅಸಂಬದ್ಧವಾಗಿರುತ್ತದೆ. ಅದು ಕನ್ನಡವನ್ನೂ ಕಲಿಯುವ ಕಾಲ ದೂರವಿಲ್ಲ.<strong></strong></p>



<p class="has-text-align-right wp-block-paragraph"><strong>&#8211;</strong>ಡಾ<strong>| </strong>ಯು<strong>.</strong>ಬಿ<strong>. </strong>ಪವನಜ<strong></strong></p>



<p class="has-text-align-right wp-block-paragraph">gadgetloka @ gmail . com</p>



<p class="has-text-align-right wp-block-paragraph">ದಿ : 07-01-2023</p><p>The post <a href="http://vishvakannada.com/%e0%b2%b2%e0%b3%87%e0%b2%96%e0%b2%a8/chatgpt/">ಬುದ್ಧಿವಂತ ಮಾತುಗಾರ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%b2%e0%b3%87%e0%b2%96%e0%b2%a8/chatgpt/feed/</wfw:commentRss>
			<slash:comments>0</slash:comments>
		
		
			</item>
		<item>
		<title>ರಷ್ಯಾದ ಗೂಬೆ ಬರುತ್ತಿದೆ ಎಚ್ಚರಿಕೆ</title>
		<link>http://vishvakannada.com/%e0%b2%b2%e0%b3%87%e0%b2%96%e0%b2%a8/sova-malware/</link>
					<comments>http://vishvakannada.com/%e0%b2%b2%e0%b3%87%e0%b2%96%e0%b2%a8/sova-malware/#respond</comments>
		
		<dc:creator><![CDATA[Prajna Devadiga]]></dc:creator>
		<pubDate>Fri, 17 Jan 2025 15:57:17 +0000</pubDate>
				<category><![CDATA[ಲೇಖನ]]></category>
		<category><![CDATA[Android]]></category>
		<category><![CDATA[cheating]]></category>
		<category><![CDATA[e-vishva]]></category>
		<category><![CDATA[e-ವಿಶ್ವ]]></category>
		<category><![CDATA[fraud]]></category>
		<category><![CDATA[malware]]></category>
		<category><![CDATA[sova-malware]]></category>
		<category><![CDATA[technology]]></category>
		<category><![CDATA[ತಂತ್ರಾಂಶ]]></category>
		<category><![CDATA[ಮಾಹಿತಿ ತಂತ್ರಜ್ಞಾನ]]></category>
		<category><![CDATA[ರಷ್ಯಾದ ಗೂಬೆ ಬರುತ್ತಿದೆ ಎಚ್ಚರಿಕೆ]]></category>
		<category><![CDATA[ವಂಚನೆ]]></category>
		<category><![CDATA[ಸ್ಮಾರ್ಟ್‌ಫೋನ್]]></category>
		<guid isPermaLink="false">https://vishvakannada.com/?p=2536</guid>

					<description><![CDATA[<p>ಪೋಕರಿ ತಂತ್ರಾಂಶದ ಹೊಸ ರೂಪ ನೀವು ನಿಮ್ಮ ಆಂಡ್ರೋಯಿಡ್ ಮೊಬೈಲ್ ಫೋನ್ ಬಳಸಿ ಬ್ಯಾಂಕ್ ವ್ಯವಹಾರ ಮಾಡುವವರಾ? ಹಾಗಿದ್ದರೆ ನೀವು ಎಚ್ಚರವಾಗಿರಬೇಕು. ಸೋವಾ (SOVA) ಹೆಸರಿನ ಪೋಕರಿ ತಂತ್ರಾಂಶವೊಂದು (malware) ಭಾರತದಲ್ಲಿ ಆಂಡ್ರೋಯಿಡ್ ಫೋನ್&#8230;</p>
<p>The post <a href="http://vishvakannada.com/%e0%b2%b2%e0%b3%87%e0%b2%96%e0%b2%a8/sova-malware/">ರಷ್ಯಾದ ಗೂಬೆ ಬರುತ್ತಿದೆ ಎಚ್ಚರಿಕೆ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<h2 class="wp-block-heading"><strong>ಪೋಕರಿ ತಂತ್ರಾಂಶದ ಹೊಸ ರೂಪ</strong></h2>



<p class="wp-block-paragraph">ನೀವು ನಿಮ್ಮ ಆಂಡ್ರೋಯಿಡ್ ಮೊಬೈಲ್ ಫೋನ್ ಬಳಸಿ ಬ್ಯಾಂಕ್ ವ್ಯವಹಾರ ಮಾಡುವವರಾ? ಹಾಗಿದ್ದರೆ ನೀವು ಎಚ್ಚರವಾಗಿರಬೇಕು. ಸೋವಾ (SOVA) ಹೆಸರಿನ ಪೋಕರಿ ತಂತ್ರಾಂಶವೊಂದು (malware) ಭಾರತದಲ್ಲಿ ಆಂಡ್ರೋಯಿಡ್ ಫೋನ್ ಬಳಸುವವರನ್ನು ಗುರಿಯಾಗಿರಿಸಿ ಧಾಳಿ ಮಾಡಲು ಬರುತ್ತಿದೆ. ಸೋವಾ ಎಂದರೆ ರಷ್ಯನ್ ಭಾಷೆಯಲ್ಲಿ ಗೂಬೆ ಎಂದರ್ಥ. ಆದರೆ ಈ ಪೋಕರಿ ತಂತ್ರಾಂಶ ರಷ್ಯಾದಿಂದ ಬರುತ್ತಿಲ್ಲ. ಅಥವಾ ಅದು ಅಲ್ಲಿಂದ ಬರುತ್ತಿದೆ ಎಂದು ಸಿದ್ಧವಾಗಿಲ್ಲ. ಬಹುತೇಕ ಕೆಟ್ಟ ತಂತ್ರಾಂಶಗಳಂತೆ ಇದೂ ಚೈನಾ ದೇಶದಲ್ಲಿ ಹುಟ್ಟಿದ್ದಿರಲೂಬಹುದು. ಏನು ಈ ಪೋಕರಿ ತಂತ್ರಾಂಶ? ಅದು ಏನು ಮಾಡುತ್ತದೆ? ಈ ಸಂಚಿಕೆಯಲ್ಲಿ ಅದರ ಬಗ್ಗೆ ತಿಳಿದುಕೊಳ್ಳೋಣ.</p>



<p class="wp-block-paragraph">ಸೋವಾ ಒಂದು ಟ್ರೋಜನ್ ತಂತ್ರಾಂಶ. ಏನು ಹಾಗಂದರೆ? ಈ ಹೆಸರಿನ ಮೂಲ ಗ್ರೀಕರು ಟ್ರೋಯ್ ನಗರವನ್ನು ಗೆದ್ದ ಟ್ರೋಜನ್ ಕುದುರೆಯಲ್ಲಿದೆ. ಟ್ರೋಯ್ ನಗರವನ್ನು ಎಷ್ಟೇ ಯುದ್ಧ ಮಾಡಿದರೂ ಗ್ರೀಕರಿಗೆ ಗೆಲ್ಲಲು ಆಗಲಿಲ್ಲ. ಕೊನೆಗೆ ಸೋತು ಹಿಂತೆಗೆವವರಂತೆ ನಟಿಸಿ ಒಂದು ದೊಡ್ಡ ಮರದ ಕುದುರೆಯನ್ನು ಗೆಲುವಿನ ಸಂಕೇತವಾಗಿ ನಗರದೊಳಕ್ಕೆ ಕಳುಹಿದರು. ಆ ಕುದರೆಯೊಳಗೆ ಕೆಲವು ಆಯ್ದ ಯೋಧರಿದ್ದರು. ಅವರು ರಾತ್ರಿ ಹೊತ್ತಿನಲ್ಲಿ ನಗರದ ಕೋಟೆ ಬಾಗಿಲನ್ನು ತೆರೆದು ಇತರೆ ಸೈನಿಕರನ್ನು ಒಳ ಸೇರಿಸಿ ಅಂತಿಮವಾಗಿ ಗ್ರೀಕರು ಯುದ್ಧವನ್ನು ಗೆದ್ದರು.</p>



<p class="wp-block-paragraph">ಟ್ರೋಜನ್ ತಂತ್ರಾಂಶವು ಬಹುಮಟ್ಟಿಗೆ ಇದೇ ರೀತಿ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಇಮೈಲ್ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಇದನ್ನು ಆಹ್ವಾನಿಸುತ್ತಾರೆ ಅಥವಾ ಅದು ಆಹ್ವಾನಗೊಳ್ಳುತ್ತದೆ. ಉದಾಹರಣೆಗೆ ಇಮೈಲ್‌ಗೆ ಒಂದು ಲಗತ್ತು ಇರುತ್ತದೆ. ಅದನ್ನು ತೆರೆದರೆ ಈ ಪೋಕರಿ ತಂತ್ರಾಂಶವು ನಿಮ್ಮ ಗಣಕದೊಳಗೆ ಪ್ರವೇಶಿಸುತ್ತದೆ. ಇನ್ನೊಂದು ನಮೂನೆಯಲ್ಲಿ ನೀವು ಸಾಮಾಜಿಕ ಮಾಧ್ಯಮದಲ್ಲಿ (ಉದಾ – ಫೇಸ್‌ಬುಕ್) ಯಾವುದೋ ಒಂದು ಕೊಂಡಿಯನ್ನು ಒತ್ತುತ್ತೀರಿ. ಆಗ ಒಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಏನೇನೋ ಮಾಹಿತಿ ನೀಡಿ ನಂತರ ಯಾವುದೋ ಗುಂಡಿ ಒತ್ತಿದಾಗ ಆ ಪೋಕರಿ ತಂತ್ರಾಂಶವು ನಿಮ್ಮ ಗಣಕ ಅಥವಾ ಮೊಬೈಲನ್ನು ಪ್ರವೇಶಿಸುತ್ತದೆ. ಹಾಗೆ ಬಂದ ಕೂಡಲೆ ಅದು ನಿಮ್ಮ ಗಣಕ ಅಥವಾ ಮೊಬೈಲನ್ನು ಇತರೆ ವೈರಸ್‌ಗಳಂತೆ ಕೆಡಿಸುವುದಿಲ್ಲ. ಬದಲಿಗೆ&nbsp; ಅದು ತನ್ನ ಒಡೆಯನಿಂದ ಅಪ್ಪಣೆಗಾಗಿ ಕಾಯುತ್ತಿರುತ್ತದೆ. ಸಾಮಾನ್ಯವಾಗಿ ಬಹುತೇಕ ಟ್ರೋಜನ್‌ಗಳು ಪಾಸ್‌ವರ್ಡ್ ಕದಿಯುವವಾಗಿರುತ್ತವೆ.</p>



<p class="wp-block-paragraph">ಈಗ ಬರುತ್ತಿರುವ ಸೋವಾ ಕೂಡ ಒಂದು ಟ್ರೋಜನ್. ಅದು ಆಂಡ್ರೋಯಿಡ್ ಫೋನ್‌ಗಳಿಗೆ ಪ್ರವೇಶೀಸುತ್ತದೆ. ಪ್ರಮುಖವಾಗಿ ಬ್ಯಾಂಕಿಂಗ್ ಮಾಡುವವರನ್ನು ಅದು ತನ್ನ ಗುರಿಯನ್ನಾಗಿಸಿದೆ. ಮೊಬೈಲ್ ಮೂಲಕ ಬ್ಯಾಂಕಿಂಗ್ ಮಾಡುವಾಗ ಲಾಗಿನ್ ಹೆಸರು, ಪಾಸ್‌ವರ್ಡ್ ನೀಡಬೇಕು. ಈ ಟ್ರೋಜನ್ ತಂತ್ರಾಂಶವು ಅದನ್ನು ಕದ್ದು ತನ್ನನ್ನು ತಯಾರಿಸಿದವರಿಗೆ ಅಂತರಜಾಲದ ಮೂಲಕ ರವಾನಿಸುತ್ತದೆ. ನಂತರ ಒಂದು ದಿನ ಬ್ಯಾಂಕಿನಿಂದ ಹಣ ಕಳವಾಗಿರುತ್ತದೆ. ಮಾರ್ಚ್ 2022 ಮೊದಲು ಬಂದ ಸೋವಾ ಟ್ರೋಜನ್ ತಂತ್ರಾಂಶವು ಅಮೆರಿಕ, ರಷ್ಯಾ, ಸ್ಪೈನ್ ಮತ್ತು ಇತರೆ ಯುರೋಪಿನ ದೇಶಗಳನ್ನು ಗುರಿಯಾಗಿಸಿತ್ತು. ಜುಲೈ ತಿಂಗಳಲ್ಲಿ ಅದರ ಹೊಸ ಆವೃತ್ತಿ ಬಂತು. ಸಪ್ಟೆಂಬರ್ ತಿಂಗಳಲ್ಲಿ ಅದು ಭಾರತವನ್ನು ಗುರಿಯನ್ನಾಗಿಸಿದೆ ಎಂದು ಸಂಶೋಧಕರಿಗೆ ತಿಳಿದುಬಂತು. ಭಾರತ ಸರಕಾರವು ಆಂಡ್ರೋಯಿಡ್ ಮೊಬೈಲ್ ಫೋನ್ ಮೂಲಕ ಬ್ಯಾಂಕಿಂಗ್ ಮಾಡುವ ಎಲ್ಲರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದೆ.</p>



<p class="wp-block-paragraph">ಈ ಸೋವಾ ಟ್ರೋಜನ್ ಪೋಕರಿ ತಂತ್ರಾಂಶವು ತುಂಬ ಅಪಾಯಕಾರಿ. ಒಮ್ಮೆ ಬಂದರೆ ಅದನ್ನು ಅಳಿಸಲು ಆಗುವುದಿಲ್ಲ. ಫೋನಿನಲ್ಲಿರುವ ಎಲ್ಲ ಮಾಹಿತಿಗಳನ್ನು ಗೂಢಲಿಪೀಕರಿಸುವ ತಾಕತ್ತು ಅದಕ್ಕಿದೆ. ಒಮ್ಮೆ ಹಾಗೆ ಮಾಡಿದರೆ ಅದನ್ನು ವಾಪಸು ಪಡೆಯಬೇಕಿದ್ದರೆ ತಂತ್ರಾಂಶವನ್ನು ತಯಾರಿಸಿದವರಿಂದ ಮಾತ್ರ ಸಾಧ್ಯ. ಅಂತಹ ಸಂದರ್ಭದಲ್ಲಿ ಅವರು ಸಾಮಾನ್ಯವಾಗಿ ಇಂತಿಷ್ಟು ಹಣ ನೀಡು ಎಂದು ಬ್ಲ್ಯಾಕ್‌ಮೈಲ್ ಮಾಡುತ್ತಾರೆ. ಅಗತ್ಯ ಮತ್ತು ಸೂಕ್ಷ್ಮ ಮಾಹಿತಿಗಳನ್ನು ಈ ರೀತಿ ಕಳಕೊಳ್ಳುವ ಸಾಧ್ಯತೆಯಿದ್ದಾಗ ಅವರು ಹೇಳಿದಷ್ಟು ಹಣ ನೀಡಿದವರಿದ್ದಾರೆ. ಇಂತಹ ಕಳ್ಳರು ನೇರವಾಗಿ ಹಣ ಕೇಳುವುದಿಲ್ಲ. ಬದಲಿಗೆ <a href="https://vishvakannada.com/article/bitcoin/" target="_blank" rel="noopener" title="ಗೂಢನಾಣ್ಯ ">ಗೂಢನಾಣ್ಯ </a>(ಉದಾ – ಬಿಟ್‌ಕಾಯಿನ್) ಮೂಲಕ ಹಣ ಕೇಳುತ್ತಾರೆ.</p>



<p class="wp-block-paragraph">ಈ ಪೋಕರಿ ತಂತ್ರಾಂಶವು ಹೆಚ್ಚಾಗಿ ಬಳಕೆಯಲ್ಲಿರುವ ಕ್ರೋಮ್ ಅಥವಾ ಅದೇ ರೀತಿಯ ತಂತ್ರಾಂಶಗಳ ಹಾಗೂ ಜನಪ್ರಿಯ ಬ್ಯಾಂಕಿಂಗ್ ತಂತ್ರಾಂಶಗಳ ರೂಪ ಮತ್ತು ಲಾಂಛನವನ್ನು ಬಳಸುತ್ತವೆ. ನನ್ನನ್ನು ಇನ್‌ಸ್ಟಾಲ್ ಮಾಡು ಎಂದು ಹೇಳುತ್ತದೆ. ಬಳಕೆದಾರರು ಇದು ನಿರುಪದ್ರವಿ, ನಂಬಿಕಸ್ತ, ಕ್ರೋಮ್ ಅಥವಾ ಬ್ಯಾಂಕಿಂಗ್ ತಂತ್ರಾಂಶ ಎಂದು ನಂಬಿ ಅದನ್ನು ಇನ್‌ಸ್ಟಾಲ್ ಮಾಡುತ್ತಾರೆ. ನಂತರ ಪೋಕರಿ ತಂತ್ರಾಂಶವು ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಳ್ಳುತ್ತದೆ. &nbsp;&nbsp;</p>



<p class="wp-block-paragraph">ಈ ಪೋಕರಿ ತಂತ್ರಾಂಶವು ಒಮ್ಮೆ ಪ್ರವೇಶಿಸಿದರೆ ತಂತ್ರಾಂಶಗಳ ಇನ್‌ಸ್ಟಾಲ್ ಮತ್ತು ಅನ್‌ಇನ್‌ಸ್ಟಾಲ್‌ಗಳನ್ನು ಮಾಡುವ ತಂತ್ರಾಂಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಈ ತಂತ್ರಾಂಶವು ಇದೆ ಎಂದು ಗೊತ್ತಾಗಿ ಅದನ್ನು ಅಳಿಸಲು ಅಂದರೆ ಅನ್‌ಇನ್‌ಸ್ಟಾಲ್ ಮಾಡಲು ಹೋದರೆ ಅದು ಬಿಡುವುದಿಲ್ಲ. ಈ ತಂತ್ರಾಂಶವನ್ನು ಅಳಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ತೋರಿಸುತ್ತದೆ.</p>



<p class="wp-block-paragraph">ಇದರಿಂದ ಬಚಾವಾಗುವುದು ಹೇಗೆ? ಅಧಿಕೃತ ಗೂಗ್ಲ್ ಪ್ಲೇ ಸ್ಟೋರ್ ಹೊರತುಪಡಿಸಿ ಬೇರೆ ಎಲ್ಲಿಂದಲೂ ಯಾವುದೇ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಬಾರದು. ಕೆಲವೊಮ್ಮೆ ತಂತ್ರಾಂಶವು ಇಮೈಲ್ ಅಥವಾ ವಾಟ್ಸ್‌ಆಪ್ ಮೂಲಕ ಬಂದಿರುತ್ತದೆ. ಆಗ ಅದನ್ನು ಇನ್‌ಸ್ಟಾಲ್ ಮಾಡಲು ನಂಬಿಕೆಗೆ ಅನರ್ಹವಾದ ಆಕರಗಳಿಂದ ಬಂದ ತಂತ್ರಾಂಶವನ್ನೂ ಇನ್‌ಸ್ಟಾಲ್ ಮಾಡು ಎಂಬ ಅಯ್ಕೆಯನ್ನು ಮಾಡಬೇಕಾಗುತ್ತದೆ. ಹೀಗೆ ಮಾಡಿದರೆ ಅದು ಇನ್‌ಸ್ಟಾಲ್ ಅಗುತ್ತದೆ. ಆದುದರಿಂದ ಪ್ಲೇ ಸ್ಟೋರಿನಿಂದ ಮಾತ್ರವೇ ಇನ್‌ಸ್ಟಾಲ್ ಮಾಡಬೇಕು. ಫೋನ್ ಕಂಪೆನಿಯವರು ಸಮಯ ಸಮಯಕ್ಕೆ ನೀಡುವ ನವೀಕರಣವನ್ನು ತಪ್ಪದೇ ಮಾಡುತ್ತಿರಬೇಕು.</p>



<p class="has-text-align-right wp-block-paragraph"><strong>&#8211;</strong>ಡಾ<strong>| </strong>ಯು<strong>.</strong>ಬಿ<strong>. </strong>ಪವನಜ<strong></strong></p>



<p class="has-text-align-right wp-block-paragraph">gadgetloka @ gmail . com</p>



<p class="has-text-align-right wp-block-paragraph">ದಿ : 17-09-2022</p><p>The post <a href="http://vishvakannada.com/%e0%b2%b2%e0%b3%87%e0%b2%96%e0%b2%a8/sova-malware/">ರಷ್ಯಾದ ಗೂಬೆ ಬರುತ್ತಿದೆ ಎಚ್ಚರಿಕೆ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%b2%e0%b3%87%e0%b2%96%e0%b2%a8/sova-malware/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಕ್ಲಬ್‌ಹೌಸ್</title>
		<link>http://vishvakannada.com/article/clubhouse/</link>
					<comments>http://vishvakannada.com/article/clubhouse/#respond</comments>
		
		<dc:creator><![CDATA[pavanaja]]></dc:creator>
		<pubDate>Wed, 18 Dec 2024 12:25:18 +0000</pubDate>
				<category><![CDATA[ಲೇಖನ]]></category>
		<category><![CDATA[App]]></category>
		<category><![CDATA[clubhouse]]></category>
		<category><![CDATA[e-vishva]]></category>
		<category><![CDATA[e-ವಿಶ್ವ]]></category>
		<category><![CDATA[social media]]></category>
		<category><![CDATA[ಕ್ಲಬ್‌ಹೌಸ್]]></category>
		<category><![CDATA[ತಂತ್ರಾಂಶ]]></category>
		<category><![CDATA[ಮಾಹಿತಿ ತಂತ್ರಜ್ಞಾನ]]></category>
		<category><![CDATA[ವೇದಿಕೆ]]></category>
		<category><![CDATA[ಸಾಮಾಜಿಕ ಮಾಧ್ಯಮ]]></category>
		<guid isPermaLink="false">https://gadgetloka.net/?p=1017</guid>

					<description><![CDATA[<p>ವಾಚಾಳಿಗಳಿಗೊಂದು ವೇದಿಕೆ ಮಾನವ ಸಾಮಾಜಿಕ ಪ್ರಾಣಿ, ಸಂಘಜೀವಿ. ಆತನಿಗೆ ಸದಾ ಇನ್ನೊಬ್ಬರೊಡನೆ ಮಾತನಾಡುತ್ತಿರಬೇಕು. ಸದಾ ಸಂಪರ್ಕದಲ್ಲಿರಬೇಕು. ನಮ್ಮ ಸಾಹಿತಿ ಕಲಾವಿದರಿಗೆ ಇದು ಇನ್ನೂ ಸ್ವಲ್ಪ ಜಾಸ್ತಿ. ಅವರಿಗೆ ಯಾವತ್ತೂ ತಮ್ಮ ಮಾತುಗಳನ್ನು ಕೇಳಲು ಜನ&#8230;</p>
<p>The post <a href="http://vishvakannada.com/article/clubhouse/">ಕ್ಲಬ್‌ಹೌಸ್</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<h2 class="wp-block-heading"><strong>ವಾಚಾಳಿಗಳಿಗೊಂದು ವೇದಿಕೆ</strong></h2>



<p class="wp-block-paragraph">ಮಾನವ ಸಾಮಾಜಿಕ ಪ್ರಾಣಿ, ಸಂಘಜೀವಿ. ಆತನಿಗೆ ಸದಾ ಇನ್ನೊಬ್ಬರೊಡನೆ ಮಾತನಾಡುತ್ತಿರಬೇಕು. ಸದಾ ಸಂಪರ್ಕದಲ್ಲಿರಬೇಕು. ನಮ್ಮ ಸಾಹಿತಿ ಕಲಾವಿದರಿಗೆ ಇದು ಇನ್ನೂ ಸ್ವಲ್ಪ ಜಾಸ್ತಿ. ಅವರಿಗೆ ಯಾವತ್ತೂ ತಮ್ಮ ಮಾತುಗಳನ್ನು ಕೇಳಲು ಜನ ಬೇಕು. ಅದಕ್ಕೇ ಅವರು ಸದಾ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿರುತ್ತಾರೆ. ಈ ಕೋವಿಡ್-19 ಎಂಬ ಪಿಡುಗು ಇಂತಹವರಿಗೆ ಒಂದು ದೊಡ್ಡ ತೊಂದರೆಯನ್ನು ತಂದಿತ್ತಿದೆ. ಎಲ್ಲರೂ ಮನೆಯ ಒಳಗೇ ಬಂಧಿಯಾಗಿದ್ದಾರೆ. ಸುಮಾರು ಒಂದೂವರೆ ವರ್ಷಗಳಿಂದ ಯಾವ ಕಾರ್ಯಕ್ರಮವೂ ಇಲ್ಲದೆ ತೊಂದರೆಯಾಗಿದೆ. ಇಂತಹವರಿಗೆ ಒಂದು ವರದಾನವಾಗಿ ಕ್ಲಬ್‌ಹೌಸ್ ಬಂದಿದೆ. ಏನದು? ಅದೊಂದು ಹೊಸ ರೀತಿಯ ಸಾಮಾಜಿಕ ಮಾಧ್ಯಮ. ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್ ಇತ್ಯಾದಿಗಳ ಸಾಲಿಗೆ ಹೊಸ ಸೇರ್ಪಡೆ. ಆದರೆ ಇತರೆ ಸಾಮಾಜಿಕ ಮಾಧ್ಯಮಗಳಿಗೂ ಇದಕ್ಕೂ ಇರುವ ಪ್ರಮುಖ ವ್ಯತ್ಯಾಸವೆಂದರೆ ಇದು ಧ್ವನಿ ಮಾತ್ರ. ಇದರಲ್ಲಿ ಪಠ್ಯ, ಚಿತ್ರ, ವಿಡಿಯೋಗಳಿಲ್ಲ.</p>



<p class="wp-block-paragraph">ಕ್ಲಬ್‌ಹೌಸ್ ಅನ್ನು ನಮ್ಮ ಹಳ್ಳಿಗಳಲ್ಲಿ ಸಾಮಾನ್ಯವಾಗಿರುವ ಅರಳಿಕಟ್ಟೆಗಳಿಗೆ ಹೋಲಿಸಬಹುದು. ನಿಮ್ಮೂರಲ್ಲಿ ಹಲವು ಅರಳಿಕಟ್ಟೆಗಳಿದ್ದಲ್ಲಿ ನೀವು ಯಾವುದೇ ಅರಳಿಕಟ್ಟೆಗೆ ಸೇರಿ ಅಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಭಾಗವಹಿಸಬಹುದು. ಇಲ್ಲೂ ಹಾಗೆಯೇ. ಕ್ಲಬ್‌ಹೌಸ್‌ನಲ್ಲಿ ರೂಮುಗಳಿವೆ. ಯಾರು ಯಾವ ರೂಮಿಗೆ ಬೇಕಾದರೂ ಸೇರಿಕೊಳ್ಳಬಹುದು. ರೂಮನ್ನು ಯಾರು ಸೃಷ್ಟಿಸುತ್ತಾರೋ ಅವರು ತನ್ನಿಂದ ತಾನೇ ಆ ರೂಮಿನ ಮೋಡರೇಟರ್ ಆಗುತ್ತಾರೆ. ಅವರು ಇತರರನ್ನೂ ಮೋಡರೇಟರ್ ಆಗಿ ಮಾಡಬಹುದು. ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವವರಲ್ಲಿ ಯಾರಿಗಾದರೂ ಮಾತನಾಡಬೇಕು ಎಂದು ಅನ್ನಿಸಿದರೆ ಅವರು ಕೈ ಎತ್ತಬಹುದು. ಅಂದರೆ ಕೈ ಎತ್ತುವ ಚಿತ್ರಿಕೆಯ ಮೇಲೆ ಕ್ಲಿಕ್ ಮಾಡಬಹುದು. ಮೋಡರೇಟರ್ ಅವರನ್ನು ಮಾತುಗಾರರನ್ನಾಗಿ (ಸ್ಪೀಕರ್) ಆಗಿ ಪರಿವರ್ತಿಸಬಹುದು. ಹೀಗೆ ಇದು ನಡೆಯುತ್ತದೆ. ಕ್ಲಬ್‌ಹೌಸ್‌ನಲ್ಲಿ ಯಾರು ಬೇಕಾದರೂ ಕ್ಲಬ್‌ಗಳನ್ನು ಸೃಷ್ಟಿ ಮಾಡಬಹುದು. ಈ ಕ್ಲಬ್‌ಹೌಸ್‌ಗಳು ಒಂದು ರೀತಿಯಲ್ಲಿ ಫೇಸ್‌ಬುಕ್‌ನ ಗ್ರೂಪ್‌ಗಳಂತೆ. ಯಾರು ಬೇಕಾದರೂ ಈ ಕ್ಲಬ್‌ಗಳಿಗೆ ಸೇರಿಕೊಳ್ಳಬಹುದು. ಕ್ಲಬ್‌ನ ಯಜಮಾನ ನಿರ್ದಿಷ್ಟ ಸಮಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಬಹುದು. ಕ್ಲಬ್‌ನ ಸದಸ್ಯರು ಆ ಕಾರ್ಯಕ್ರಮಕ್ಕೆ ಆ ಹೊತ್ತಿಗೆ ಸೇರಿಕೊಳ್ಳಬಹುದು.</p>



<figure class="wp-block-image size-full is-resized"><img decoding="async" src="https://gadgetloka.net/wp-content/uploads/2024/12/Clubhouse_App_Logo.svg_.png" alt="" class="wp-image-1019" style="aspect-ratio:1.2144212523719164;width:255px;height:auto"/><figcaption class="wp-element-caption"><strong>ಕ್ಲಬ್&#x200d;ಹೌಸ್&#x200d;ನ ಲೊಗೊ</strong></figcaption></figure>



<p class="wp-block-paragraph">ಕ್ಲಬ್‌ಹೌಸ್ 2019ರ ಕೊನೆಯ ಹೊತ್ತಿಗೆ ರೂಪುಗೊಂಡಿತು. ಅದನ್ನು ಪ್ರಾರಂಭಿಸಿದವರು ಪೌಲ್ ಡೇವಿಸನ್ ಮತ್ತು ರೋಹನ್ ಸೇಠ್. ಎಪ್ರಿಲ್ 2020ರಲ್ಲಿ ಅದು ಮೊದಲ ಬಾರಿಗೆ ಐಫೋನ್ ಬಳಕೆದಾರರಿಗೆ ಲಭ್ಯವಾಯಿತು. ಆರಂಭದಲ್ಲಿ ಇದು ಆಹ್ವಾನದ ಮೂಲಕ ಮಾತ್ರ ಲಭ್ಯವಿತ್ತು. ಅಂದರೆ ಈಗಾಗಲೇ ಕ್ಲಬ್‌ಹೌಸ್ ಸದಸ್ಯರಾದವರು ನಿಮ್ಮನ್ನು ಆಹ್ವಾನಿಸಿದರೆ ಮಾತ್ರ ನಿಮಗೆ ಅದಕ್ಕೆ ಪ್ರವೇಶ ಸಾಧ್ಯವಿತ್ತು. ಖ್ಯಾತನಾಮರಾದ ಎಲೋನ್ ಮಸ್ಕ್, ಮಾರ್ಕ್ ಝುಕರ್‌ಬರ್ಗ್ ಅಂತಹವರು ಅದಕ್ಕೆ ಸೇರಿ ಮಾತನಾಡಿ ಅದರ ಜನಪ್ರಿಯತೆಯನ್ನು ಮೇಲಕ್ಕೊಯ್ದರು. ಮೇ 2021ರಲ್ಲಿ ಕ್ಲಬ್‌ಹೌಸ್ ಆಂಡ್ರೋಯಿಡ್ ಬಳಕೆದಾರರಿಗೂ ಲಭ್ಯವಾಯಿತು. ಆಂಡ್ರೋಯಿಡ್‌ಗೆ ಲಭ್ಯವಾಗುತ್ತಿದ್ದಂತೆ ಅದರ ಬಳಕೆ ಮತ್ತು ಜನಪ್ರಿಯತೆ ಆಕಾಶಕ್ಕೇರಿತು. ಇದಕ್ಕೆ ಕೋವಿಡ್-19 ಪಿಡುಗಿನಿಂದಾಗಿ ಜನರು ಮನೆಗಳಿಗೇ ಸೀಮಿತವಾಗಿದ್ದೂ ಒಂದು ಪ್ರಮುಖ ಕಾರಣ.</p>



<p class="wp-block-paragraph">ಕ್ಲಬ್‌ಹೌಸ್‌ಗೆ ಪ್ರತಿ ವಾರ ಸರಾಸರಿ ಸುಮಾರು 1 ಕೋಟಿ ಬಳಕೆದಾರರಿದ್ದಾರೆ. ಭಾರತದಲ್ಲಂತೂ ಅದು ಆಂಡ್ರೋಯಿಡ್‌ಗೆ ಲಭ್ಯವಾದ ನಂತರ ಅದರ ಬಳಕೆ ತುಂಬ ಹೆಚ್ಚಿದೆ. ಹಲವಾರು ಮಂದಿ ಅದರಲ್ಲಿ ಮಾತನಾಡುತ್ತಿದ್ದಾರೆ. ಹಲವಾರು ಕ್ಲಬ್‌ಗಳು ಹುಟ್ಟಿಕೊಂಡಿವೆ. ವಿಶ್ವವಾಣಿಯ ಕ್ಲಬ್‌ಗೆ ಸದ್ಗುರು ಜಗ್ಗಿ ವಾಸುದೇವ್ ಬಂದಾಗ ಕ್ಲಬ್‌ಹೌಸ್ ತನ್ನ ಮಿತಿಯನ್ನು ಮೀರಿತ್ತು. ಒಂದು ಕೋಣೆಯ ಮಿತಿ ಅದು ತನಕ 8000 ಇತ್ತು. ಸದ್ಗುರು ಬಂದಾಗ ಕ್ಲಬ್‌ಹೌಸ್‌ನ ಅಧಿಕಾರಿಗಳೂ ಭಾಗವಹಿಸಿ ಸರ್ವರ್ ಹೇಗೆ ಕೆಲಸ ಮಾಡುತ್ತಿದೆ ಎಂದು ನೋಡಿಕೊಳ್ಳುತ್ತಿದ್ದರು. ಅದರ ಮಿತಿ ಮೀರಿದಾಗ ಕೋಣೆಯ ಮಿತಿಯನ್ನು ಹೆಚ್ಚಿಸಿದರು. ಆದರೂ ಹಲವರಿಗೆ ಆ ಕೋಣೆಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಆ ದಿನ 11,700 ಜನ ಒಂದು ಕೋಣೆಯಲ್ಲಿ ಒಂದು ಸಮಯದಲ್ಲಿದ್ದು ಇದು ಕ್ಲಬ್‌ಹೌಸ್‌ನ ದಾಖಲೆಯಾಯಿತು. ಕ್ಲಬ್‌ಹೌಸ್‌ನಲ್ಲಿ ಹಲವರು ಇನ್ನೂ ಹಲವು ರೀತಿಯ ಕ್ಲಬ್‌ಗಳನ್ನು ತೆರೆದು ಮಾತನಾಡುತ್ತಿದ್ದಾರೆ. ಅದರಲ್ಲಿ ಯಕ್ಷಗಾನ ತಾಳಮದ್ದಳೆ, ಸಂಗೀತದ ಪರಿಚಯ, ಭಾರತ ದರ್ಶನ, ಇತ್ಯಾದಿ ಹಲವು ವಿಷಯಗಳ ಬಗ್ಗೆ ಚರ್ಚೆಗಳು ಆಗಿಹೋಗಿವೆ. ಕ್ಲಬ್‌ಹೌಸ್ ಕ್ರಿಯೇಟರ್ ಯೋಜನೆಯ ಮೂಲಕ ಸೇರಿಕೊಂಡರೆ ಮುಂದಕ್ಕೆ ಹಣ ಸಂಪಾದಿಸುವ ಸಾಧ್ಯತೆಗಳೂ ಇವೆ. &nbsp;&nbsp;</p>



<p class="wp-block-paragraph">ಕ್ಲಬ್‌ಹೌಸ್‌ನವರು ತನ್ನ ಗ್ರಾಹಕರ ಕೋರಿಕೆಯ ಮೇರೆಯಂತೆ ಇತ್ತೀಚೆಗೆ ಬಳಕೆದಾರರು ಒಬ್ಬರಿನ್ನೊಬ್ಬರ ಜೊತೆ ಚಾಟ್ ಮಾಡುವ ಹಾಗೂ ಸಂದೇಶ ಕಳುಹಿಸುವ ಸೌಲಭ್ಯ ನೀಡಿದ್ದಾರೆ. ಮೊದಲು ಈ ಸೌಲಭ್ಯವಿರಲಿಲ್ಲ. ಕ್ಲಬ್‌ಹೌಸ್‌ನಲ್ಲಿ ಕೆಲವು ಬಳಕೆದಾರರು ಸೇರಿಕೊಂಡು ತಮ್ಮದೇ ಮುಚ್ಚಿದ ಕೋಣೆ ತಯಾರಿಸಿ ಮಾತನಾಡಿಕೊಳ್ಳಬಹುದು. ಅದಕ್ಕೆ ಬೇರೆಯವರಿಗೆ ಪ್ರವೇಶವಿರುವುದಿಲ್ಲ. ಆದರೆ ಇಂತಹ ಕೋಣೆಗಳ ಉಪಯೋಗ ಕಡಿಮೆ. ಯಾಕೆಂದರೆ ಇದನ್ನು ಟೆಲಿಗ್ರಾಂ ಬಳಸಿ ಕೂಡ ಮಾಡಬಹುದು.</p>



<p class="wp-block-paragraph">ಕ್ಲಬ್‌ಹೌಸ್‌ನ ನಿಯಮಗಳ ಪ್ರಕಾರ ಅದರಲ್ಲಿ ನಡೆಯುವ ಮಾತುಕತೆಗಳನ್ನು ಧ್ವನಿಮುದ್ರಿಸಿಕೊಳ್ಳುವಂತಿಲ್ಲ. ಯಾವುದಾದರೂ ಚರ್ಚೆಯಲ್ಲಿ ಯಾರಾದರೂ ಮಾತನಾಡುತ್ತಿರುವುದು ಸಭ್ಯತೆಯ ಎಲ್ಲೆ ಮೀರುತ್ತಿದೆ ಅಥವಾ ಯಾರಿಗಾದರೂ ಅವಮಾನವಾಗುವಂತಿದೆ ಎಂದು ನಿಮಗೆ ಅನ್ನಿಸಿದರೆ ಆ ಚರ್ಚೆ ನಡೆಯುತ್ತಿರುವಾಗಲೇ ಕ್ಲಬ್‌ಹೌಸ್‌ನವರಿಗೆ ದೂರು ಸಲ್ಲಿಸಿದರೆ ಅವರು ಅದನ್ನು ರೆಕಾರ್ಡ್ ಮಾಡಿಕೊಂಡು ನಂತರ ವಿಶ್ಲೇಷಿಸುತ್ತಾರೆ. ಕ್ಲಬ್‌ಹೌಸ್‌ನಲ್ಲಿ ಯಾರ ಬಗ್ಗೆಯಾದರೂ ಕೆಟ್ಟದಾಗಿ ಮಾತನಾಡಿದರೆ ಸದ್ಯ ಕಾನೂನು ಪ್ರಕಾರ ಕೈಗೊಳ್ಳುವುದು ಕಷ್ಟ. ನಮ್ಮ ಸರಕಾರವು ಇದರ ಮೇಲೆ ಯಾವುದೇ ನಿಯಂತ್ರಣ ಹೇರಿಲ್ಲ. ಮಾಹಿತಿ ತಂತ್ರಜ್ಞಾನದ ಹೊಸ ನಿಯಮಗಳ ಪ್ರಕಾರ ಕ್ಲಬ್‌ಹೌಸ್‌ನವರು ಭಾರತದಲ್ಲೇ&nbsp; ಸರ್ವರ್ ಇಟ್ಟಿರಬೇಕು, ಭಾರತೀಯರ ವೈಯಕ್ತಿಕ ಮಾಹಿತಿಗಳನ್ನು ದೇಶದಿಂದ ಹೊರಗೆ ಯಾರಿಗೂ ಲಭ್ಯ ಮಾಡಿಸಬಾರದು, ಬಳಕೆದಾರರ ದೂರುಗಳ ಇತ್ಯರ್ಥಕ್ಕೆ ಭಾರತದಲ್ಲೇ ಒಬ್ಬ ಅಧಿಕಾರಿಯ ನೇಮಕ ಮಾಡಬೇಕು. ಕ್ಲಬ್‌ಹೌಸ್‌ನವರು ಇವುಗಳಲ್ಲಿ ಯಾವುದನ್ನೂ ಮಾಡಿಲ್ಲ. &nbsp;</p>



<p class="wp-block-paragraph">ಕ್ಲಬ್‌ಹೌಸ್ ಇನ್ನೂ ಬಳಸಿಲ್ಲವೇ? ಅದು ಹೇಗೆ ಲಭ್ಯ ಎನ್ನುತ್ತೀರಾ? ಗೂಗ್ಲ್ ಪ್ಲೇ ಅಥವಾ ಆಪಲ್ ಆಪ್ ಸ್ಟೋರ್‌ಗೆ ಭೇಟಿ ನೀಡಿ Clubhouse: The Social Audio App ಎಂಬ ಹೆಸರಿನ ಆಪ್ ಅನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ. ಕ್ಲಬ್‌ಹೌಸ್‌ನಲ್ಲಿ ನಡೆಯುವ ಮಾತುಕತೆಗಳನ್ನು ರೆಕಾರ್ಡ್‌ಮಾಡಿಕೊಳ್ಳಬೇಕಾದರೆ ನಿಮ್ಮ ಫೋನಿನಲ್ಲೇ ಇರುವ ಸ್ಕ್ರೀನ್ ರೆಕಾರ್ಡರ್ ಅನ್ನು ಬಳಸಬಹುದು. ಹಲವು ಫೋನ್‌ಗಳಲ್ಲಿ ಈ ಸೌಲಭ್ಯ ಇರುವುದಿಲ್ಲ. ಅಂತಹವರು Club Record ಎಂಬ ಆಪ್‌ಅನ್ನು ಬಳಸಬಹುದು (ಇದು ಆಂಡ್ರೋಯಿಡ್‌ಆಪ್). ಗಣಕ ಅಥವಾ ಲ್ಯಾಪ್‌ಟಾಪ್ ಮೂಲಕ ಕ್ಲಬ್‌ಹೌಸ್ ಬಳಸಬೇಕಿದ್ದರೆ Clubdeck ಎಂಬ ತಂತ್ರಾಂಶವನ್ನು (ಇದು ವಿಂಡೋಸ್‌ಗೆ) ಬಳಸಬಹುದು. ಇದರಲ್ಲೂ ರೆಕಾರ್ಡಿಂಗ್ ಸೌಲಭ್ಯವಿದೆ. &nbsp;</p>



<p class="has-text-align-right wp-block-paragraph"><strong>&#8211;</strong>ಡಾ<strong>| </strong>ಯು<strong>.</strong>ಬಿ<strong>. </strong>ಪವನಜ<strong></strong></p>



<p class="has-text-align-right wp-block-paragraph">gadgetloka @ gmail . com</p><p>The post <a href="http://vishvakannada.com/article/clubhouse/">ಕ್ಲಬ್‌ಹೌಸ್</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/article/clubhouse/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಡಿಜಿಟಲ್ ಜಗತ್ತಿನ ಮುಕ್ತ ಮಾರುಕಟ್ಟೆ</title>
		<link>http://vishvakannada.com/article/open-network-for-digital-commerce-ondc/</link>
					<comments>http://vishvakannada.com/article/open-network-for-digital-commerce-ondc/#respond</comments>
		
		<dc:creator><![CDATA[pavanaja]]></dc:creator>
		<pubDate>Wed, 11 Dec 2024 15:41:51 +0000</pubDate>
				<category><![CDATA[ಲೇಖನ]]></category>
		<category><![CDATA[ಜಾಲಮಳಿಗೆ]]></category>
		<category><![CDATA[ಟೆಕ್ಕಿರಣ]]></category>
		<category><![CDATA[ಡಿಜಿಟಲ್ ಜಗತ್ತಿನ ಮುಕ್ತ ಮಾರುಕಟ್ಟೆ]]></category>
		<category><![CDATA[ಡಿಜಿಟಲ್ ಮಾರುಕಟ್ಟೆ]]></category>
		<category><![CDATA[ತಂತ್ರಾಂಶ]]></category>
		<category><![CDATA[ಮಾಹಿತಿ ತಂತ್ರಜ್ಞಾನ]]></category>
		<category><![CDATA[ಮುಕ್ತ ಜಾಲ]]></category>
		<category><![CDATA[ವ್ಯಾಪಾರ]]></category>
		<guid isPermaLink="false">https://gadgetloka.net/?p=934</guid>

					<description><![CDATA[<p>ಅಮೆಝಾನ್, ಫ್ಲಿಪ್‌ಕಾರ್ಟ್ ಎಲ್ಲರಿಗೂ ಗೊತ್ತು. ಈ ಎರಡು ಕಂಪೆನಿಗಳು ಜಾಲಮಳಿಗೆಗಗಳ ಕ್ಷೇತ್ರವನ್ನು ಬಹುಮಟ್ಟಿಗೆ ಸಂಪೂರ್ಣವಾಗಿ ಆಕ್ರಮಿಸಿವೆ ಎನ್ನಬಹುದು. ಸಣ್ಣಪುಟ್ಟ ಜಾಲಮಳಿಗೆಗಳು ಯಾವಾಗಲೋ ಬಾಗಿಲು ಹಾಕಿವೆ. ಅದರಿಂದ ನಮಗೇನು ಎನ್ನುತ್ತೀರಾ? ಈ ಎರಡೂ ಕಂಪೆನಿಗಳ ಒಡೆತನ&#8230;</p>
<p>The post <a href="http://vishvakannada.com/article/open-network-for-digital-commerce-ondc/">ಡಿಜಿಟಲ್ ಜಗತ್ತಿನ ಮುಕ್ತ ಮಾರುಕಟ್ಟೆ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p class="wp-block-paragraph">ಅಮೆಝಾನ್, ಫ್ಲಿಪ್‌ಕಾರ್ಟ್ ಎಲ್ಲರಿಗೂ ಗೊತ್ತು. ಈ ಎರಡು ಕಂಪೆನಿಗಳು ಜಾಲಮಳಿಗೆಗಗಳ ಕ್ಷೇತ್ರವನ್ನು ಬಹುಮಟ್ಟಿಗೆ ಸಂಪೂರ್ಣವಾಗಿ ಆಕ್ರಮಿಸಿವೆ ಎನ್ನಬಹುದು. ಸಣ್ಣಪುಟ್ಟ ಜಾಲಮಳಿಗೆಗಳು ಯಾವಾಗಲೋ ಬಾಗಿಲು ಹಾಕಿವೆ. ಅದರಿಂದ ನಮಗೇನು ಎನ್ನುತ್ತೀರಾ? ಈ ಎರಡೂ ಕಂಪೆನಿಗಳ ಒಡೆತನ ಭಾರತೀಯವಲ್ಲ. ಭಾರತದ ಅಮೆಝಾನ್‌ನ ಒಡೆತನ ಅಮೆರಿಕದ ಅಮೆಝಾನ್ ಕಂಪೆನಿಯದು. ಫ್ಲಿಪ್‌ಕಾರ್ಟ್ ಮೊದಲು ಭಾರತೀಯವಾಗಿದ್ದರೂ ಈಗ ಅದರ ಒಡೆತನ ಭಾರತೀಯರದ್ದಲ್ಲ.</p>



<p class="wp-block-paragraph">ಮಾಹಿತಿಯು ಈಗ ಹೊಸ ಎಣ್ಣೆ ಎಂಬ ಮಾತಿದೆ. ಅಂದರೆ ಈ ಜಾಲಮಳಿಗೆಗಗಳು ತಮ್ಮ ಲಕ್ಷಾಂತರ ಗ್ರಾಹಕರ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಂಡಿವೆ. ಈ ಮಾಹಿತಿಯ ಬೆಲೆ ಬಹುಕೋಟಿಯಲ್ಲಿದೆ. ಈ ಜಾಲಮಳಿಗೆಗಗಳು ಕೃತಕಬುದ್ಧಿಮತ್ತೆಯನ್ನು ಬಳಸಿ ತನ್ನ ಗ್ರಾಹಕರು ವ್ಯಾಪಾರ ಮಾಡುವ ರೀತಿಯನ್ನು ವಿಶ್ಲೇಷಿಸಿಟ್ಟುಕೊಂಡಿವೆ. ಒಂದು ಉದಾಹರಣೆ ನೋಡೋಣ – ಪುಣೆ ನಗರದ ಜನರು ಶುಕ್ರವಾರ ಮಧ್ಯಾಹ್ನದ ನಂತರ ವ್ಯಾಪಾರ ಮಾಡುತ್ತಾರೆ. ಅವರಿಗೆ ಬಿಳಿ ಬಣ್ಣದ ಫ್ರಂಟ್ ಲೋಡಿಂಗ್ ವಾಶಿಂಗ್ ಮೆಶಿನ್ ಇಷ್ಟವಾಗುತ್ತದೆ. ಈ ಮಾಹಿತಿಯಿಂದೇನು ಲಾಭ ಎನ್ನುತ್ತೀರಾ? ಫ್ಲಿಪ್‌ಕಾರ್ಟ್ ವಾಶಿಂಗ್ ಮೆಶಿನ್ ತಯಾರಿಸುವ ಒಂದು ಚಿಕ್ಕ ಕಂಪೆನಿಯನ್ನು ಕೊಳ್ಳುತ್ತದೆ. ಇತರೆ ದೊಡ್ಡ ಹೆಸರಿನ ವಾಶಿಂಗ್ ಮೆಶಿನ್‌ಗಳಿಗಿಂತ ತನ್ನ ವಾಶಿಂಗ್ ಮೆಶಿನ್‌ನ ಬೆಲೆಯನ್ನು ಸ್ವಲ್ಪ ಕಡಿಮೆ ಇಡುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ ವಾಶಿಂಗ್ ಮೆಶಿನ್ ಎಂದು ಹುಡುಕಿದರೆ ತನ್ನ ಕಂಪೆನಿಯ ಉತ್ಪನ್ನವೇ ಮೊದಲು ಬರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಅದರ ಪಕ್ಕದಲ್ಲಿ ಫ್ಲಿಪ್‌ಕಾರ್ಟ್‌ಸಲಹೆ ಮಾಡಿದ ಉತ್ಪನ್ನ ಎಂಬ ಘೋಷಣೆಯೂ ಇರುತ್ತದೆ. ಈ ಮೂಲಕ ಅದು ತನ್ನ ಗಿರಾಕಿಗಳಿಗೆ ಇತರೆ ಕಂಪೆನಿಗಳ ಉತ್ಪನ್ನದ ಬದಲು ತನ್ನ ಉತ್ಪನ್ನವನ್ನೇ ಮಾರಾಟ ಮಾಡುತ್ತದೆ. ಇದು ಒಂದು ಉದಾಹರಣೆ ಮಾತ್ರ. ಇಂತಹ ಇನ್ನೂ ಹಲವಾರು ಉದಾಹರಣೆಗಳಿವೆ. ಇವೆಲ್ಲವೂ ಮಾರುಕಟ್ಟೆಯ ಮೇಲಿನ ಏಕಸ್ವಾಮ್ಯದಿಂದಾಗಿ ಬರುವಂತಹವು. ಈ ಏಕಸ್ವಾಮ್ಯವನ್ನು ಕತ್ತರಿಸಲು ಹೊಸ ಉಪಾಯವನ್ನು ಭಾರತ ಸರಕಾರ ಮಾಡಿದೆ.</p>



<p class="wp-block-paragraph">ಭಾರತ ಸರಕಾರವು ಹೊಸದಾದ ಒಂದು ಡಿಜಿಟಲ್ ಮಾರುಕಟ್ಟೆಯ ವೇದಿಕೆಯನ್ನು ನಿರ್ಮಿಸಿದೆ. ಇದಕ್ಕೆ Open Network for Digital Commerce (ONDC) ಎಂದು ನಾಮಕರಣ ಮಾಡಿದೆ. ಇದನ್ನು ಕನ್ನಡದಲ್ಲಿ ಡಿಜಿಟಲ್ ವ್ಯಾಪಾರಕ್ಕಾಗಿ ಮುಕ್ತ ಜಾಲ ಎಂದು ಕರೆಯಬಹುದು. ಇದನ್ನು ಸ್ವಲ್ಪ ಮಟ್ಟಿಗೆ ಈಗ ಹಣಕಾಸು ವ್ಯವಹಾರಕ್ಕಾಗಿ ಬಳಕೆಯಲ್ಲಿರುವ ಯುಪಿಐಗೆ ಹೋಲಿಸಬಹುದು. ಯಾವ ಬ್ಯಾಂಕಿನಿಂದ ಯಾವ ವ್ಯಾಪಾರಿಗೂ ಈ ವ್ಯವಸ್ಥೆ ಮೂಲಕ ಹಣ ವರ್ಗಾಯಿಸಬಹುದು. ಡಿಜಿಟಲ್ ವ್ಯಾಪಾರಕ್ಕಾಗಿ ಮುಕ್ತ ಜಾಲವು ಅದರ ಹೆಸರೇ ಹೇಳುವಂತೆ ಅದೊಂದು ಮುಕ್ತ ಜಾಲ. ಅದಕ್ಕೆ ಹಲವು ವ್ಯಾಪಾರಿಗಳನ್ನು ಜೋಡಿಸಬಹುದು. ಅದೇ ರೀತಿ ಹಲವು ಕೋರಿಯರ್ ಕಂಪೆನಿಗಳನ್ನೂ ಜೋಡಿಸಬಹುದು. ಈ ಕಂಪೆನಿಗಳು ದೊಡ್ಡ ಕಂಪೆನಿಗಳಾಗಿಬೇಕಾಗಿಲ್ಲ. ಚಿಕ್ಕ ಚಿಕ್ಕ ಕಂಪೆನಿಗಳೂ ಈ ಸವಲತ್ತನ್ನು ಬಳಸಬಹುದು. ಕಂಪೆನಿಗಳು ಈ ಜಾಲದಲ್ಲಿ ನೋಂದಾಯಿಸಬಹುದು. ಅದೇ ರೀತಿ ಕೋರಿಯರ್ ಕಂಪೆನಿಗಳೂ ನೋಂದಾಯಿಸಿಕೊಳ್ಳಬಹುದು. ನೀವು ಹರ್ಷ ಎಂಬ ಕಂಪೆನಿಯಿಂದ ನೀರುಶುದ್ಧೀಕರಣ ಯಂತ್ರವನ್ನು ಕೊಂಡು ಅದನ್ನು ಪ್ರೊಫೆಶನಲ್ ಕೋರಿಯರ್ ಮೂಲಕ ತರಿಸಿಕೊಳ್ಳಬಹುದು. ನೀವು ಕೊಳ್ಳುವ ವಸ್ತು ಅತಿ ದೊಡ್ಡ ವಸ್ತುವಿನಿಂದ ಹಿಡಿದು ಅತಿ ಚಿಕ್ಕ ವಸ್ತುವಿನ ತನಕ ಯಾವುದೂ ಆಗಿರಬಹುದು. ಒಂದು ಕಂಪೆನಿ ಅಥವಾ ಅಂಗಡಿ ನಿಮಗೆ ಇಷ್ಟ. ಅದೇ ರೀತಿ ಕೋರಿಯರ್ ಕಂಪೆನಿ. ಒಂದು ಕೋರಿಯರ್ ಕಂಪೆನಿ ನೀವಿರುವ ಸ್ಥಳಕ್ಕೆ ಬರುವುದಿಲ್ಲ, ಇನ್ನೊಂದು ಬರುತ್ತದೆ. ಆದುದರಿಂದ ನಿಮಗೆ ಆ ಕಂಪೆನಿಯೇ ಆಗಬೇಕು. ಇತ್ಯಾದಿ ಬೇಕುಗಳನ್ನೆಲ್ಲ ಈ ವ್ಯವಸ್ಥೆ ಪೂರೈಸುತ್ತದೆ.</p>



<p class="wp-block-paragraph">ಈಗಾಗಲೇ ತಿಳಿಸಿದಂತೆ ಇದೊಂದು ವೇದಿಕೆ. ಇದರಲ್ಲಿ ಯಾರು ಬೇಕಾದರೂ ತಮ್ಮ ಜಾಲಮಳಿಗೆಯನ್ನು ನೋಂದಾಯಿಸಿಕೊಳ್ಳಬಹುದು. ಇದರಿಂದ ಗ್ರಾಹಕರಿಗೆ ಲಾಭವಿದೆ. ಯಾವುದಾದರೊಂದು ಉತ್ಪನ್ನವನ್ನು ಕೊಳ್ಳಲು ಹೊರಟಾಗ ಆ ಉತ್ಪನ್ನವು ಬೇರೆ ಬೇರೆ ಮಳಿಗೆಗಗಳಲ್ಲಿ ಯಾವ ಯಾವ ಬೆಲೆಗೆ ಲಭ್ಯವಿದೆ ಎಂದು ಆತ ಹೋಲಿಕೆ ಮಾಡಿ ನೋಡಬಹುದು. ಈಗ ಹೋಟೆಲುಗಳ ಬೆಲೆಗಳ ಹೋಲಿಕೆಗೆ ಟ್ರಿಯಾಗೊ ಎಂಬ ಒಂದು ಜಾಲತಾಣ ಇದೇ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಬರಿಯ ಬೆಲೆಗಳನ್ನು ಮಾತ್ರವಲ್ಲ, ಉತ್ಪನ್ನಗಳ ಗುಣವೈಶಿಷ್ಟ್ಯಗಳನ್ನೂ ಹೋಲಿಸಿ ನೋಡಬಹುದು.</p>



<p class="wp-block-paragraph">ಓಎನ್‌ಡಿಸಿಯನ್ನು ಪ್ರಾಯೋಗಿಕವಾಗಿ ದೇಶದ 5 ನಗರಗಳಲ್ಲಿ ಚಾಲನೆಗೊಳಿಲಾಗಿದೆ. ಈ ಮೊದಲ ಹಂತದಲ್ಲಿ ದೆಹಲಿ, ಭೋಪಾಲ, ಬೆಂಗಳೂರು, ಶಿಲಾಂಗ್ ಮತ್ತು ಕೊಯಂಬತ್ತೂರುಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. ಮುಂದಕ್ಕೆ ಇತರೆ ನಗರಗಳಿಗೆ ಹಂತ ಹಂತವಾಗಿ ವಿಸ್ತರಿಸಲಾಗುವುದು. ಅಂತಿಮವಾಗಿ ಇಡಿಯ ದೇಶಕ್ಕೇ ಇದನ್ನು ಹಬ್ಬಿಸಲಾಗುವುದು. ಈ ವ್ಯವಸ್ಥೆಯ ಉಸ್ತುವಾರಿಗೆ ಮಾಡಿರುವ ಸಲಹಾ ಮಂಡಳಿಯಲ್ಲಿ ನಂದನ್ ನೀಲೆಕಣಿಯವರೂ ಇದ್ದಾರೆ.</p>



<p class="wp-block-paragraph">ಇದರ ಹೆಸರಿನಲ್ಲಿರುವ ಮುಕ್ತ (open) ಪದವನ್ನು ಗಮನಿಸಿ. ಇದು ಬಹುಮಟ್ಟಿಗೆ ಮುಕ್ತ ತಂತ್ರಾಂಶದ (opensource software) ಮಾದರಿಯಲ್ಲಿ ಕೆಲಸ ಮಾಡುತ್ತದೆ. ಇದು ಕೆಲಸ ಮಾಡಲು ಬೇಕಾದ ಮೂಲ ಘಟಕಗಳು ಮುಕ್ತವಾಗಿ ಲಭ್ಯವಿರುತ್ತವೆ. ಯಾವುದೇ ಕಂಪೆನಿ ಅದನ್ನು ತನ್ನ ಉತ್ಪನ್ನಗಳಿಗೆ ಬದಲಾಯಿಸಿ ಅಳವಡಿಸಿಕೊಳ್ಳಬಹುದು. ಉದಾಹರಣೆಗೆ ಶಿಯೋಮಿ, ನೋಕಿಯ, ಸ್ಯಾಮ್‌ಸಂಗ್ ಇತ್ಯಾದಿ ಫೋನ್ ಕಂಪೆನಿಗಳು ತಮ್ಮ ಫೋನ್‌ಗಳನ್ನು ಮಾರಲು ಬೇಕಾದ ರೀತಿಯಲ್ಲಿ ಅದನ್ನು ಬದಲಾಯಿಸಿ ಅಳವಡಿಸಿಕೊಳ್ಳಬಹುದು. ಎಂಟಿಆರ್, ಮಯ್ಯಾಸ್, ಹಳದಿರಾಂ, ಇತ್ಯಾದಿಯವರು ತಮ್ಮ ಆಹಾರ ಉತ್ಪನ್ನಗಳಿಗೆ ಬೇಕಾದ ರೀತಿಯಲ್ಲಿ ಬದಲಾಯಿಸಿ ಅಳವಡಿಸಿಕೊಳ್ಳಬಹುದು.</p>



<p class="wp-block-paragraph">ಎಲ್ಲ ಜಾಲಮಳಿಗೆಗಳು ಈ ವ್ಯವಸ್ಥೆಗೆ ತಮ್ಮ ತಂತ್ರಾಂಶಗಳನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಆಗ ಇದರ ಲಾಭ ಚಿಕ್ಕಪುಟ್ಟ ವ್ಯಾಪಾರಿಗಳಿಗೂ ದೊರೆಯುತ್ತದೆ. ದೊಡ್ಡ ದೊಡ್ಡ ಜಾಲಮಳಿಗೆಗಳ ಜೊತೆ ಅವೂ ಸ್ಪರ್ಧೆ ನೀಡಬಹುದು. ಕೊಳ್ಳುವವರಿಗೂ ಆಗ ಲಾಭವಿದೆ. ಕೇವಲ ಎರಡು ದೊಡ್ಡ ವ್ಯಾಪಾರಿಗಳಲ್ಲದೆ ಸಣ್ಣ ಸಣ್ಣ ವ್ಯಾಪಾರಿಗಳಿಂದಲೂ ಕೊಳ್ಳಬಹುದು. ಕೆಲವು ಉತ್ಪನ್ನಗಳನ್ನು ಕೆಲವೇ ಚಿಕ್ಕ ಪುಟ್ಟ ಕಂಪೆನಿಗಳು ತಯಾರಿಸುತ್ತವೆ. ಅವುಗಳಿಗೆ ದೊಡ್ಡ ಮಟ್ಟದ ಜಾಲತಾಣ ನಿರ್ಮಿಸಿ ಮಾರುವಷ್ಟು ತಾಕತ್ ಇರುವುದಿಲ್ಲ. ಅಂತಹವರು ಈ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು. ಆಗ ಕೊಳ್ಳುವವರಿಗೂ ಲಾಭವೇ.</p>



<p class="has-text-align-right wp-block-paragraph"><strong>–</strong>ಡಾ<strong>|&nbsp;</strong>ಯು<strong>.</strong>ಬಿ<strong>.&nbsp;</strong>ಪವನಜ</p>



<p class="has-text-align-right wp-block-paragraph">gadgetloka @ gmail . com</p><p>The post <a href="http://vishvakannada.com/article/open-network-for-digital-commerce-ondc/">ಡಿಜಿಟಲ್ ಜಗತ್ತಿನ ಮುಕ್ತ ಮಾರುಕಟ್ಟೆ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/article/open-network-for-digital-commerce-ondc/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಕೃತಕ ಬುದ್ಧಿಮತ್ತೆಯ ಕಾಲ</title>
		<link>http://vishvakannada.com/article/ai/</link>
					<comments>http://vishvakannada.com/article/ai/#respond</comments>
		
		<dc:creator><![CDATA[pavanaja]]></dc:creator>
		<pubDate>Wed, 11 Dec 2024 09:37:09 +0000</pubDate>
				<category><![CDATA[ಲೇಖನ]]></category>
		<category><![CDATA[AI]]></category>
		<category><![CDATA[App]]></category>
		<category><![CDATA[chatbot]]></category>
		<category><![CDATA[openAI]]></category>
		<category><![CDATA[technology]]></category>
		<category><![CDATA[ಉತ್ಪನ್ನ]]></category>
		<category><![CDATA[ಓಪನ್‌ಏಐ]]></category>
		<category><![CDATA[ಕೃತಕ ಬುದ್ಧಿಮತ್ತೆ]]></category>
		<category><![CDATA[ಚಾಟ್‌ಬೋಟ್]]></category>
		<category><![CDATA[ಟೆಕ್ಕಿರಣ]]></category>
		<category><![CDATA[ತಂತ್ರಾಂಶ]]></category>
		<category><![CDATA[ಮಾಹಿತಿ ತಂತ್ರಜ್ಞಾನ]]></category>
		<guid isPermaLink="false">https://gadgetloka.net/?p=899</guid>

					<description><![CDATA[<p>2022ರಲ್ಲಿ ಹಾಗೂ 2023ರಲ್ಲಿ ಅತ್ಯಂತ ಸುದ್ಧಿಯಲ್ಲಿರುವ ತಂತ್ರಜ್ಞಾನ ಕೃತಕ ಬುದ್ಧಿಮತ್ತೆ. ಕೃತಕ ಬುದ್ಧಿಮತ್ತೆ (artificial intelligence) ಎನ್ನುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗೆ ತುಂಬ ಸುದ್ದಿ ಮಾಡುತ್ತಿರುವ ವಿಷಯ. ಇದರಲ್ಲಿ ಯಂತ್ರಗಳು ಅಥವಾ ತಂತ್ರಾಂಶಗಳು&#8230;</p>
<p>The post <a href="http://vishvakannada.com/article/ai/">ಕೃತಕ ಬುದ್ಧಿಮತ್ತೆಯ ಕಾಲ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p class="wp-block-paragraph">2022ರಲ್ಲಿ ಹಾಗೂ 2023ರಲ್ಲಿ ಅತ್ಯಂತ ಸುದ್ಧಿಯಲ್ಲಿರುವ ತಂತ್ರಜ್ಞಾನ ಕೃತಕ ಬುದ್ಧಿಮತ್ತೆ. ಕೃತಕ ಬುದ್ಧಿಮತ್ತೆ (artificial intelligence) ಎನ್ನುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗೆ ತುಂಬ ಸುದ್ದಿ ಮಾಡುತ್ತಿರುವ ವಿಷಯ. ಇದರಲ್ಲಿ ಯಂತ್ರಗಳು ಅಥವಾ ತಂತ್ರಾಂಶಗಳು ತಾವೇ ವಿಷಯಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಸ್ಪಂದಿಸಿ, ತಾವೇ ತೀರ್ಮಾನ ತೆಗೆದುಕೊಂಡು ಕೆಲಸ ಮಾಡುತ್ತವೆ. ಕೆಲವು ಪ್ರಮುಖ ಉದಾಹರಣೆಗೆಳು – ಯಂತ್ರಾನುವಾದ, ಪಠ್ಯದಿಂದ ಧ್ವನಿಗೆ ಹಾಗೂ ಧ್ವನಿಯಿಂದ ಪಠ್ಯಕ್ಕೆ ಪರಿವರ್ತನೆ, ಚಿತ್ರದಿಂದ ಪಠ್ಯಕ್ಕೆ, ಪಠ್ಯದ ಪ್ರಕಾರ ಕೃತಕವಾಗಿ ಚಿತ್ರಗಳ ರಚನೆ, ಚಿತ್ರಗಳನ್ನು ಅರ್ಥಮಾಡಿಕೊಳ್ಳುವುದು, ಇತ್ಯಾದಿ. ಈ ಸಂಚಿಕೆಯಲ್ಲಿ ಇತ್ತೀಚೆಗೆ ತುಂಬ ಸುದ್ಧಿ ಮಾಡಿದ/ಮಾಡುತ್ತಿರುವ ಕೃತಕ ಬುದ್ಧಿಮತ್ತೆಯ ಎರಡು ತಂತ್ರಾಂಶಗಳ ಬಗ್ಗೆ ನೋಡೋಣ.</p>



<h2 class="wp-block-heading"><strong>ಚಾಟ್‌ಜಿಪಿಟಿ (ChatGPT)</strong></h2>



<div class="wp-block-media-text is-stacked-on-mobile" style="grid-template-columns:42% auto"><figure class="wp-block-media-text__media"><img decoding="async" src="https://gadgetloka.net/wp-content/uploads/2024/12/ChatGPT-Logo.svg_.png" alt="" class="wp-image-901 size-full"/></figure><div class="wp-block-media-text__content">
<p class="wp-block-paragraph">ಚಾಟ್‌ಜಿಪಿಟಿ ಎಂಬುದು ಒಂದು ಕೃತಕ ಬುದ್ಧಿಮತ್ತೆ ಮೂಲಕ ಮಾತುಕತೆ ನಡೆಸುವ ಒಂದು ತಂತ್ರಾಂಶ, ಅಥವಾ ಕೃತಕಬುದ್ಧಿವಂತ ಚಾಟ್‌ಬೋಟ್. ಸಾಫ್ಟ್‌ವೇರ್ ರೋಬೋಟ್‌ಗೆ ಬೋಟ್ ಎನ್ನುತ್ತಾರೆ. ಚಾಟ್ (ಮಾತುಕತೆ) ಮಾಡಲು ಬಳಸುವ ಸಾಫ್ಟ್‌ವೇರ್ ರೋಬೋಟ್‌ಗೆ ಚಾಟ್‌ಬೋಟ್ ಎನ್ನುತ್ತಾರೆ. ಚಾಟ್‌ಜಿಪಿಟಿ ಒಂದು ಚಾಟ್‌ಬೋಟ್ ಅಂದರೆ ಕೃತಕ ಬುದ್ಧಿಮತ್ತೆ ಮೂಲಕ ಮಾತುಕತೆ ನಡೆಸುವ ಒಂದು ತಂತ್ರಾಂಶ. </p>
</div></div>



<p class="wp-block-paragraph">ಇತರೆ ಚಾಟ್‌ಬೋಟ್‌ಗಳಿಗಿಂತ ಇದು ತುಂಬ ವಿಭಿನ್ನ. ಅವುಗಳೆಲ್ಲ ಮಾಮೂಲಿ ಪ್ರಶ್ನೆ – ಉತ್ತರ ಮಾದರಿಯಲ್ಲಿ ಕೆಲಸ ಮಾಡುತ್ತವೆ. ಅವುಗಳ ದತ್ತಾಂಶಸಂಗ್ರಹದಲ್ಲಿರುವ ಪ್ರಶ್ನೆಗಳಿಗೆ ಮಾತ್ರ ಅವು ಅಲ್ಲಿರುವ ಉತ್ತರಗಳ ಸಂಗ್ರಹದಿಂದ ಆರಿಸಿ ಉತ್ತರಿಸಬಲ್ಲವು. ಆದರೆ ಚಾಟ್‌ಜಿಪಿಟಿ ಹಾಗಲ್ಲ. ಅದರಲ್ಲಿ ಈಗಾಗಲೇ ಲಕ್ಷಾಂತರ ಮಾಹಿತಿ ಇರುವುದೇನೋ ಸರಿಯೇ. ಅದು ಅಲ್ಲಿಂದ ಮುಂದುವರೆದು ಪ್ರಶ್ನೆಗಳಿಗೆ ತಾನೇ ವಿಶ್ಲೇಷಿಸಿ ಬಹುಮಟ್ಟಿಗೆ ಮನುಷ್ಯರು ಉತ್ತರಿಸುವ ಮಾದರಿಯಲ್ಲೇ ಉತ್ತರಿಸಬಲ್ಲುದು.&nbsp;</p>



<p class="wp-block-paragraph">ಚಾಟ್‌ಜಿಪಿಟಿ ಮುಕ್ತ ಕೃತಕಬುದ್ಧಿಮತ್ತೆಯ ಒಕ್ಕೂಟದ ಉತ್ಪನ್ನ ಎನ್ನಬಹುದು. ಇದನ್ನು OpenAI ಎನ್ನುತ್ತಾರೆ. ಇದು ಬಹುಮಟ್ಟಿಗೆ ಮುಕ್ತ ತಂತ್ರಾಂಶ ಮತ್ತು ಮುಕ್ತಜ್ಞಾನದ ಸಮೀಪವರ್ತಿ ಎನ್ನಬಹುದು. ಮುಕ್ತಜ್ಞಾನದ ವಿಕಿಪೀಡಿಯ ನಿಮಗೆಲ್ಲರಿಗೂ ತಿಳಿದೇ ಇರಬಹುದು. ಈ ಓಪನ್‌ಏಐಗೆ ಹಲವರು ಹಣ ಹಾಕಿದ್ದಾರೆ. ಇದನ್ನು ಪ್ರಾರಂಭಿಸಿದವರಲ್ಲಿ ಎಲೊನ್ ಮಸ್ಕ್ ಕೂಡ ಒಬ್ಬರು. ಜಗತ್ತಿನ ಅತಿ ಶ್ರೀಮಂತರಲ್ಲೊಬ್ಬರಾದ ಎಲೊನ್ ಮಸ್ಕ್ ಗೊತ್ತಿರಬಹುದು. ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾಗಳಿಂದ ಮತ್ತು ಇತ್ತೀಚೆಗೆ ಟ್ವಿಟ್ಟರ್ ಕೊಳ್ಳುವುದರ ಮೂಲಕ ಅವರ ಹೆಸರು ಪ್ರಖ್ಯಾತವಾಗಿದೆ. ಎಲೊನ್ ಮಸ್ಕ್ ಈಗ ಓಪನ್‌ಏಐಯ ನಿರ್ದೇಶಕ ಮಂಡಳಿಯಲ್ಲಿಲ್ಲ. ಆದರೆ ಅದಕ್ಕೆ ಹಣ ಹಾಕಿದ್ದಾರೆ. ಓಪನ್‌ಏಐಗೆ ಮೈಕ್ರೋಸಾಫ್ಟ್‌ನಂತಹ ದೈತ್ಯ ಕೂಡ ಹಣ ಹಾಕಿದೆ. ಇದು ಭವಿಷ್ಯದಲ್ಲಿ ದೊಡ್ಡ ಹೆಸರು ಮಾಡಲಿದೆ. ಚಾಟ್‌ಜಿಪಿಟಿ ಪ್ರಾರಂಭ ಎನ್ನಬಹುದು.</p>



<p class="wp-block-paragraph">ಚಾಟ್‌ಜಿಪಿಟಿಯು ಮನುಷ್ಯರು ನಡೆಸುವ ಸಂಭಾಷಣೆಯನ್ನು ಅನುಕರಿಸಲು ತಯಾರಾದುದು. ಅದು ಬಹುಮಟ್ಟಿಗೆ ಇದರಲ್ಲಿ ಯಶಸ್ವಿಯೂ ಆಗಿದೆ. ಪತ್ರಕರ್ತರು ಇದನ್ನು ತಮಗೆ ತಿಳಿಯದ ಹಲವು ವಿಷಯಗಳನ್ನು ತಿಳಿಯಲು ಬಳಸುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಗೂಗ್ಲ್ ಅನುವಾದದಂತೆ. ಇದು ನೀಡುವ ಉತ್ತರಗಳು ಸಂಪೂರ್ಣ ಸತ್ಯವಾಗಿರಬೇಕಾಗಿಲ್ಲ. ಆದರೂ ಆ ಉತ್ತರಗಳನ್ನು ಪ್ರಾರಂಭದ ಹೆಜ್ಜೆಯಂತೆ ಬಳಸಬಹುದು. ಗೂಗ್ಲ್ ಅನುವಾದವೂ ಅಂತೆಯೇ. ಅದನ್ನು ಪ್ರಾರಂಭದ ಹಂತದಂತೆ ಬಳಸಬಹುದು. ಚಾಟ್‌ಜಿಪಿಟಿ ಬುದ್ಧಿವಂತ ಎಂದೆನಲ್ಲ. ಅದು ಮಾತುಕತೆ ನಡೆಸುತ್ತ ತನ್ನನ್ನು ತಾನೆ ಸುಧಾರಿಸಿಕೊಳ್ಳುತ್ತದೆ. ಈ ಒಂದು ಗುಣವೈಶಿಷ್ಟ್ಯವು ಚಾಟ್‌ಜಿಪಿಟಿಯನ್ನು ತುಂಬ ಉಪಯುಕ್ತ ಮಾಡಲಿದೆ. ಈಗಾಗಲೇ ಅದು ತುಂಬ ಕಲಿತಿದೆ.</p>



<h2 class="wp-block-heading"><strong>ರೋಬೋಟ್ ಲಾಯರ್</strong></h2>



<p class="wp-block-paragraph">ಹಲವು ಕ್ಷೇತ್ರಗಳಂತೆ ಕಾನೂನು ಮತ್ತು ನ್ಯಾಯಾಲಯಗಳಿಗೂ ಕೃತಕ ಬುದ್ಧಿಮತ್ತೆ ಪ್ರವೇಶ ಮಾಡುತ್ತಿದೆ. ಅಮೆರಿಕದಲ್ಲಿ ಕೃತಕಬುದ್ಧಿಮತ್ತೆಯ ನ್ಯಾಯವಾದಿ ತಯಾರಾಗಿದೆ. ಇದನ್ನು ವ್ಯಾಪಕವಾಗಿ ರೋಬೋಟ್ ಲಾಯರ್ ಎಂದು ಕರೆಯಲಾಗುತ್ತಿದೆ. ಅಮೆರಿಕದಲ್ಲಿ 2015ರಲ್ಲಿ ಜೋಶುವ ಬ್ರೌಡರ್ ಎಂಬವರು ಡುನಾಟ್‌ಪೇ ಎಂಬ ಕಾನೂನು ಸಲಹೆಗಾರ ತಂತ್ರಾಂಶವನ್ನು ಬಿಡುಗಡೆ ಮಾಡಿದರು. ಅದು ಕೂಡ ಚಾಟ್‌ಜಿಪಿಟಿಯಂತೆ ಒಂದು ಚಾಟ್‌ಬೋಟ್ ಆಗಿತ್ತು. ಜೋಶುವ ಅದನ್ನು ಪ್ರಪಂಚದ ಮೊದಲ ರೋಬೋಟ್ ಲಾಯರ್ ಎಂದು ಕರೆದರು. ಅದಕ್ಕೆ ಕಾನೂನು ಸಂಬಂಧಿ ಪ್ರಶ್ನೆ ಕೇಳಿದರೆ ಅದು ಉತ್ತರಿಸುತ್ತಿತ್ತು. ಪ್ರಾರಂಭದಲ್ಲಿ ಕೆಲವು ಸರಳವಾದ ಸಂದರ್ಭಗಳಲ್ಲಿ ಏನೆಲ್ಲ ಸಾಧ್ಯತೆಗಳಿವೆ ಎಂಬುದನ್ನು ಅದು ವಿವರಿಸುತ್ತಿತ್ತು. ಉದಾಹರಣೆಗೆ ಹಣ ನೀಡಬೇಕಾಗಿತ್ತು, ಅವಧಿಯೊಳಗಡೆ ನೀಡಿಲ್ಲ, ಈಗ ನೋಟೀಸು ಬಂದಿದೆ – ಈ ಸಂದರ್ಭದಲ್ಲಿ ಏನೆಲ್ಲ ಮಾಡಬಹುದು ಎಂಬುದನ್ನು ಅದು ಹೇಳುತ್ತದೆ. ಈ ಕಿರುತಂತ್ರಾಂಶ (ಆಪ್) ಗೂಗ್ಲ್ ಪ್ಲೇ ಸ್ಟೋರಿನಲ್ಲಿದೆ. ನಾನು ಅದನ್ನು ನನ್ನ ಮೊಬೈಲಿನಲ್ಲಿ ಹಾಕಿಕೊಂಡು ಬಳಸಿ ನೋಡಲು ಪ್ರಯತ್ನಿಸಿದೆ. ಆದರೆ ಅದು ಅಮೆರಿಕ, ಆಸ್ಟ್ರೇಲಿಯ ಮತ್ತು ಕೆಲವು ಯುರೋಪಿನ ದೇಶಗಳಿಗೆ ಸೀಮಿತವಾಗಿತ್ತು. ಭಾರತ ಅದರ ಪಟ್ಟಿಯಲ್ಲಿರಲಿಲ್ಲ. ಆದುದರಿಂದ ಅದು ನಿಜವಾಗಿಯೂ ಹೇಗೆ ಕೆಲಸ ಮಾಡುತ್ತಿದೆ ಎಂದು ಪರಿಶೀಲಿಸಲು ನನಗೆ ಆಗಲಿಲ್ಲ.</p>



<p class="wp-block-paragraph">ಈ ಡುನಾಟ್‌ಪೇ ಚಾಟ್‌ಬೋಟ್ ಅಥವಾ ರೋಬೋಟ್ ಲಾಯರ್ ಅನ್ನು ನಿಜವಾದ ನ್ಯಾಯಾಲಯದಲ್ಲಿ ಕಾನೂನು ಹೋರಾಟವೊಂದರಲ್ಲಿ ಬಳಸಲು ಸಿದ್ಧತೆ ಆಗಿತ್ತು. ಅತಿ ವೇಗವಾಗಿ ವಾಹನ ಚಾಲನೆ ಮಾಡಿದ್ದೀಯ ಎಂದೊಬ್ಬರಿಗೆ ಸಾರಿಗೆ ಪೋಲೀಸರಿಂದ ನೋಟೀಸು ಬಂದಿತ್ತು. ಅವರು ನ್ಯಾಯಾಲಯದಲ್ಲಿ ಹಾಜರಾಗಿ ತಮ್ಮ ವಾದವನ್ನು ಮಂಡಿಸಬೇಕಿತ್ತು. ಇಲ್ಲಿ ವಾದ ಮಂಡಿಸಲು ರೋಬೋಟ್ ಲಾಯರ್ ಸಹಾಯ ಪಡೆಯುವುದೆಂದು ತೀರ್ಮಾನ ಆಗಿತ್ತು. ಆ ಕೇಸು ಕೋರ್ಟಿನಲ್ಲಿ ಫೆಬ್ರವರಿ 22ಕ್ಕೆ ನ್ಯಾಯಾಧೀಶರ ಮುಂದೆ ಬರುವುದಿತ್ತು. ಆದರೆ ಜೋಶುವ ಅವರು ಒಂದು ಟ್ವೀಟ್ ಮೂಲಕ ರೋಬೋಟ್ ಲಾಯರ್ ಅನ್ನು ಕೋರ್ಟಿಗೆ ಕಳುಹಿಸುವ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಲಾಯರುಗಳ ಸಂಘದ ಪ್ರತಿಭಟನೆ ಹಾಗೂ ಎಚ್ಚರಿಕೆ. ರೋಬಾಟ್ ಲಾಯರ್ ತಂದರೆ ಜೋಶುವ ಅವರಿಗೆ 6 ತಿಂಗಳುಗಳ ಜೈಲು ಸಾಧ್ಯತೆಯಿದೆ ಎಂಬ ಭಯದಿಂದ ಅವರು ಈ ತೀರ್ಮಾನ ತೆಗೆದುಕೊಂಡುದುದಾಗಿ ತಮ್ಮ ಟ್ವೀಟ್‌ನಲ್ಲಿ ತಿಳಿದಿದ್ದಾರೆ.&nbsp; ಕೋರ್ಟಿನಲ್ಲಿ ವಾದ ಮಾಡುವ ವ್ಯಕ್ತಿ ಇಯರ್‌ಫೋನ್ ಧರಿಸಿ ಅದು ಮೊಬೈಲಿನಲ್ಲಿರುವ ಡುನಾಟ್‌ಪೇ ತಂತ್ರಾಂಶಕ್ಕೆ ಸಂಪರ್ಕ ಹೊಂದುತ್ತದೆ. ಆ ತಂತ್ರಾಂಶವು ವಾದವನ್ನು ಆಲಿಸಿ ತನ್ನ ಉತ್ತರವನ್ನು ಇಯರ್‌ಫೋನ್ ಮೂಲಕ ತಿಳಿಸುತ್ತದೆ. ಕಕ್ಷಿದಾರ ಕೋರ್ಟಿನಲ್ಲಿ ರೋಬೋಟ್ ಲಾಯರ್ ತಿಳಸಿದಂತೆ ವಾದ ಮಾಡುತ್ತಾರೆ. ಇದು ಅವರ ಯೋಜನೆ ಆಗಿತ್ತು. ಮೊಬೈಲ್&nbsp; ಫೋನ್ ಮತ್ತು ಇಯರ್‌ಫೋನ್‌ಗಳನ್ನು ಕೋರ್ಟಿನಲ್ಲಿ ಬಳಕೆ ಮಾಡುವಂತಿಲ್ಲ. ಆದುದರಿಂದ ಇಯರ್‌ಫೋನ್ ಅನ್ನು ಕಿವಿ ಕೇಳದವರು ಬಳಸುವ ಸಾಧನ ಎಂಬಂತೆ ಬಿಂಬಿಸುವ ಯೋಜನೆ ಅವರದಾಗಿತ್ತು. ಆದರೆ ಸದ್ಯಕ್ಕೆ ರೋಬೋಟ್ ಲಾಯರ್ ಕೇವಲ ಸಲಹೆಗೆಳಿಗೆ ಮಾತ್ರ ಸೀಮಿತ. ಕೋರ್ಟಿನಲ್ಲಿ ನಿಜವಾದ ವಾದ ಸದ್ಯಕ್ಕಿಲ್ಲ.</p>



<p class="has-text-align-right wp-block-paragraph"><strong>–</strong>ಡಾ<strong>|&nbsp;</strong>ಯು<strong>.</strong>ಬಿ<strong>.&nbsp;</strong>ಪವನಜ</p>



<p class="has-text-align-right wp-block-paragraph">gadgetloka @ gmail . com</p><p>The post <a href="http://vishvakannada.com/article/ai/">ಕೃತಕ ಬುದ್ಧಿಮತ್ತೆಯ ಕಾಲ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/article/ai/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಮಹಾಭಾರತ ಮತ್ತು ತಂತ್ರಾಂಶ ತಯಾರಿ</title>
		<link>http://vishvakannada.com/%e0%b2%b2%e0%b3%87%e0%b2%96%e0%b2%a8/%e0%b2%ae%e0%b2%b9%e0%b2%be%e0%b2%ad%e0%b2%be%e0%b2%b0%e0%b2%a4/</link>
					<comments>http://vishvakannada.com/%e0%b2%b2%e0%b3%87%e0%b2%96%e0%b2%a8/%e0%b2%ae%e0%b2%b9%e0%b2%be%e0%b2%ad%e0%b2%be%e0%b2%b0%e0%b2%a4/#comments</comments>
		
		<dc:creator><![CDATA[admin]]></dc:creator>
		<pubDate>Sat, 05 Sep 2015 12:26:51 +0000</pubDate>
				<category><![CDATA[ಲೇಖನ]]></category>
		<category><![CDATA[ಕನ್ನಡ]]></category>
		<category><![CDATA[ತಂತ್ರಾಂಶ]]></category>
		<category><![CDATA[ತರ್ಕ]]></category>
		<category><![CDATA[ಮಹಾಭಾರತ]]></category>
		<guid isPermaLink="false">http://vishvakannada.com/?p=1130</guid>

					<description><![CDATA[<p>&#8211; ಡಾ. ಯು. ಬಿ. ಪವನಜ ಇದೇನು ಶೀರ್ಷಿಕೆ ಈ ರೀತಿ ಇದೆಯಲ್ಲಾ? ಇಮಾಂಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎಂದು ಕೇಳುತ್ತಿದ್ದೀರಾ? ಸಂಬಂಧವಿದೆ ಸ್ವಾಮೀ. ಸ್ವಲ್ಪ ಓದುವಂತವರಾಗಬೇಕು. ಮಹಾಭಾರತದಲ್ಲಿ ಬರುವ ಒಂದು ಪ್ರಮುಖ ಘಟನೆ&#8230;</p>
<p>The post <a href="http://vishvakannada.com/%e0%b2%b2%e0%b3%87%e0%b2%96%e0%b2%a8/%e0%b2%ae%e0%b2%b9%e0%b2%be%e0%b2%ad%e0%b2%be%e0%b2%b0%e0%b2%a4/">ಮಹಾಭಾರತ ಮತ್ತು ತಂತ್ರಾಂಶ ತಯಾರಿ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p><strong>&#8211; ಡಾ. ಯು. ಬಿ. ಪವನಜ</strong></p>
<blockquote><p><strong>ಇದೇನು ಶೀರ್ಷಿಕೆ ಈ ರೀತಿ ಇದೆಯಲ್ಲಾ</strong><strong>? ಇಮಾಂಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎಂದು ಕೇಳುತ್ತಿದ್ದೀರಾ? ಸಂಬಂಧವಿದೆ ಸ್ವಾಮೀ. ಸ್ವಲ್ಪ ಓದುವಂತವರಾಗಬೇಕು.</strong></p></blockquote>
<p>ಮಹಾಭಾರತದಲ್ಲಿ ಬರುವ ಒಂದು ಪ್ರಮುಖ ಘಟನೆ ಸುಧನ್ವನಿಗೂ ಅರ್ಜುನನಿಗೂ ನಡೆಯುವ ಯುದ್ಧ. ಮಹಾಭಾರತದ ಯುದ್ಧದ ನಂತರ ನಡೆಯುವ ಅಶ್ವಮೇಧಯಾಗದ ಪ್ರಸಂಗದಲ್ಲಿ ಈ ಕಥೆ ಬರುತ್ತದೆ. ಸುಧನ್ವ ಮತ್ತು ಅರ್ಜುನ ಇಬ್ಬರೂ ಕೃಷ್ಣಭಕ್ತರು. ಇಬ್ಬರೂ ಕೃಷ್ಣನ ಮೇಲೆ ಆಣೆ ಇಟ್ಟು ಒಂದೊಂದು ಪ್ರತಿಜ್ಞೆ ಮಾಡುತ್ತಾರೆ. ಅರ್ಜುನ ಹೇಳುತ್ತಾನೆ &#8211; “ಇನ್ನು ಮೂರು ಬಾಣಗಳಲ್ಲಿ ನಾನು ನಿನ್ನನ್ನು ಕೊಲ್ಲದಿದ್ದಲ್ಲಿ ನಾನು ಕೃಷ್ಣನಭಕ್ತನೇ ಅಲ್ಲ. ಕೃಷ್ಣನ ಮೇಲೆ ಆಣೆ”. ಸುಧನ್ವ ಕೂಡಲೇ ಉತ್ತರಿಸುತ್ತಾನೆ &#8211; “ನಿನ್ನ ಆ ಮೂರು ಬಾಣಗಳನ್ನೂ ಕತ್ತರಿಸದಿದ್ದಲ್ಲಿ ನಾನು ಕೃಷ್ಣಭಕ್ತನೇ ಅಲ್ಲ. ಕೃಷ್ಣ ಮೇಲೆ ಆಣೆ”. ಈಗ ಕೃಷ್ಣನಿಗೆ ಸಂದಿಗ್ಧ. ಇಬ್ಬರೂ ತನ್ನ ಮೇಲೆ ಆಣೆ ಇಟ್ಟಿದ್ದಾರೆ. ಅಂದ ಮೇಲೆ ಇಬ್ಬರ ಪ್ರತಿಜ್ಞೆಗಳೂ ಪೂರ್ಣವಾಗಬೇಕು. ಇಬ್ಬರ ಪ್ರತಿಜ್ಞೆಗಳನ್ನು ಗಮನವಿಟ್ಟು ಇನ್ನೊಮ್ಮೆ ಓದಿ. ಅರ್ಜುನನ ಪ್ರತಿಜ್ಞೆ ಪ್ರಕಾರ ಸುಧನ್ವ ಸಾಯಬೇಕು. ಸುಧನ್ವನ ಪ್ರತಿಜ್ಞೆ ಪ್ರಕಾರ ಅರ್ಜುನನ ಮೂರು ಬಾಣಗಳನ್ನು ತುಂಡರಿಸಬೇಕು. ಅರ್ಜುನ ಮೂರು ಬಾಣಗಳನ್ನು ಒಂದರ ನಂತರ ಇನ್ನೊಂದರಂತೆ ಪ್ರಯೋಗಿಸುತ್ತಾನೆ. ಸುಧನ್ವ ಅವುಗಳನ್ನೆಲ್ಲ ಕತ್ತರಿಸುತ್ತಾನೆ. ಮೂರನೆಯ ಬಾಣ ಎರಡು ತುಂಡಾಗುತ್ತದೆ. ಅದರ ಹಿಂದಿನ ಭಾಗ ಅಲ್ಲೇ ಬೀಳುತ್ತದೆ. ಮುಂದಿನ ಭಾಗ ಮತ್ತೂ ಮುಂದುವರೆದು ಸುಧನ್ವನನ್ನು ಕೊಲ್ಲುತ್ತದೆ. ಅಲ್ಲಿಗೆ ಇಬ್ಬರ ಪ್ರತಿಜ್ಞೆಗಳೂ ಪೂರ್ಣಗೊಂಡಂತಾಯಿತು.</p>
<p>&nbsp;</p>
<p>ಈ ಕಥೆಗೂ ತಂತ್ರಾಂಶ ತಯಾರಿಗೂ ಏನು ಸಂಬಂಧ ಎಂದು ಪ್ರಶ್ನಿಸುತ್ತಿದ್ದೀರಾ? ಇಂತಹ ಕಥೆಗಳು, ಸಂದರ್ಭಗಳು, ಮಹಾಭಾರತದಲ್ಲಿ ಬೇಕಾದಷ್ಟಿವೆ. ಇವುಗಳಲ್ಲಿ ಅಡಕವಾಗಿರುವ ಒಂದು ಪ್ರಮುಖ ತತ್ತ್ವ (ಅಧ್ಯಾತ್ಮದ ಹೊರತಾಗಿ) ಎಂದರೆ ತರ್ಕ. ಸ್ವಲ್ಪ ಗಮನವಿಟ್ಟು ನೋಡಿದರೆ ಇದರಲ್ಲಿರುವ ತರ್ಕ ಸ್ಪಷ್ಟವಾಗಿ ಗೋಚರವಾಗುತ್ತದೆ. ತಂತ್ರಾಂಶ ತಯಾರಿಗೆ ಬೇಕಾಗಿರುವ ಒಂದು ಪ್ರಮುಖ ಅರ್ಹತೆಯೆಂದರೆ ತರ್ಕಬದ್ಧವಾಗಿ ಯೋಚಿಸುವುದು.</p>
<p>&nbsp;</p>
<p>ಇನ್ಫೋಸಿಸ್ ನಾರಾಯಣಮೂರ್ತಿಯವರಿಗೆ ೧೯೯೯ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಬೆಂಗಳೂರು ಆಕಾಶವಾಣಿ ಅವರೊಂದಿಗೆ ಸಾರ್ವಜನಿಕರಿಂದ ಫೋನ್-ಇನ್ ಕಾರ್ಯಕ್ರಮವನ್ನು ನೇರ ಪ್ರಸಾರಗೊಳಿಸಿತ್ತು. ಆ ಸಂದರ್ಭದಲ್ಲಿನಾನು ಸಂದರ್ಶಕನಾಗಿ ಭಾಗವಹಿಸಿದ್ದೆ. ಆ ದಿನ ನಾನು ಕೇಳಿದ ಒಂದು ಪ್ರಶ್ನೆ ಹೀಗಿತ್ತು: “ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೇಲೆ ಬರಬೇಕಾದರೆ ಒಂದನೆ ತರಗತಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯಬೇಕು ಎಂದು ಬಹುಪಾಲು ಜನರು ತಿಳಿದುಕೊಂಡಿದ್ದಾರೆ ಇದು ನಿಜವೇ?”. ಅದಕ್ಕೆ ನಾರಾಯಣ ಮೂರ್ತಿಯವರು ನೀಡಿದ ಉತ್ತರ ಎಲ್ಲರೂ ಗಮನಿಸಬೇಕಾದುದಾಗಿದೆ: “ಈ ನಂಬಿಕೆ ಸರಿಯಲ್ಲ. ಒಳ್ಳೆಯ ಆಲೋಚನಾ ಶಕ್ತಿ, ಮುಖ್ಯವಾಗಿ ತರ್ಕಬದ್ಧವಾಗಿ ಯೋಚಿಸುವ ಶಕ್ತಿ ಇದ್ದರೆ ಸಾಕು. ಹತ್ತನೆ ತರಗತಿಯ ತನಕ ಕನ್ನಡ ಮಾಧ್ಯಮದಲ್ಲಿ ಕಲಿತರೆ ಏನೂ ಅಡ್ಡಿಯಿಲ್ಲ. ಒಳ್ಳೆಯ ಮೆದುಳಿಗೂ ವಿದ್ಯಾಭ್ಯಾಸದ ಮಾಧ್ಯಮಕ್ಕೂ ಯಾವುದೇ ಸಂಬಂಧವಿಲ್ಲ.” ಅಂದರೆ ತರ್ಕಬದ್ಧವಾಗಿ ಯೋಚಿಸುವ ಶಕ್ತಿ ಭಾಷಾಪಾಂಡಿತ್ಯ (ಇಂಗ್ಲಿಶ್ ಪಾಂಡಿತ್ಯ) ಕ್ಕಿಂತ ಮುಖ್ಯ ಎಂದಾಯಿತು. ಪೂರ್ತಿ ಸಂದರ್ಶನ <a href="http://vishvakannada.com/?p=120" target="_blank">ಇಲ್ಲಿದೆ</a>.</p>
<p>&nbsp;</p>
<p>ತಂತ್ರಾಂಶ ತಯಾರಿಗೆ ಮುಖ್ಯವಾಗಿ ಬೇಕಾಗಿರುವುದು ತರ್ಕಬದ್ಧವಾಗಿ ಯೋಚಿಸುವ ಶಕ್ತಿ. ಇನ್ಫೋಸಿಸ್, ವಿಪ್ರೊ, ಟಿಸಿಎಸ್, ಮೈಕ್ರೋಸಾಫ್ಟ್, ಇತ್ಯಾದಿ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವಾಗ ಅದರಲ್ಲೂ ಮುಖ್ಯವಾಗಿ ನವಪದವೀಧರರಿಗೆ ಅವರ ಕಂಪ್ಯೂಟರ್ ವಿಜ್ಞಾನದ ವಿಷಯದ ಪ್ರಶ್ನೆಗಳಿಗಿಂತಲೂ ತರ್ಕದ ಪ್ರಶ್ನೆಗಳ ಉತ್ತರಗಳಿಗೆ ಹೆಚ್ಚಿನ ಮಹತ್ತ್ವ ನೀಡುತ್ತಾರೆ. ಇದಕ್ಕೆ ಆಪ್ಟಿಟ್ಯೂಡ್ (aptitude) ಪರೀಕ್ಷೆ ಎನ್ನುತ್ತಾರೆ. ಪದವಿ ಪರೀಕ್ಷೆಯಲ್ಲಿ ೮೫% ಅಂಕ ತೆಗೆದುಕೊಂಡಿದ್ದರೂ ಈ ಪರೀಕ್ಷೆಯಲ್ಲಿ ನಪಾಸಾದರೆ ತಂತ್ರಾಂಶ ತಯಾರಿಯ ಕಂಪೆನಿಯಲ್ಲಿ ಕೆಲಸ ಇಲ್ಲ ಎಂದೇ ತಿಳಿದುಕೊಳ್ಳಬೇಕು. ಇದರಲ್ಲಿ ಸರಳ ಅಂಕಗಣಿತ, ತರ್ಕ, ವಿಶ್ಲೇಷಣೆ ಎಂದು ಮೂರು ವಿಭಾಗಗಳಿರುತ್ತವೆ. ಮಾಹಿತಿ ತಂತ್ರಜ್ಞಾನ ಕಂಪೆನಿಗಳಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಿರುವ ಎಲ್ಲ ಪದವೀಧರರಿಗೆ ಗೊತ್ತಿರುವ ವಿಷಯ ಇದು. ಆ ಪರೀಕ್ಷೆಯ ತಯಾರಿಗೆ ಸಹಾಯ ಮಾಡಲೆಂದೇ ಹಲವು ಗೈಡ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಕೊನೆ ಘಳಿಗೆಯಲ್ಲಿ ಗೈಡ್ ಓದಿ ತಯಾರಾಗಿ ಪರೀಕ್ಷೆ ಪಾಸಾಗಲು ಸಾಧ್ಯವಿಲ್ಲ. ಈ ತರ್ಕಬದ್ಧವಾಗಿ ಯೋಚಿಸುವ ಶಕ್ತಿ ಹಲವು ವರ್ಷಗಳ ಸತತ ಅಭ್ಯಾಸದಿಂದ ಮಾತ್ರ ಬರುತ್ತದೆ. ಆದುದರಿಂದ ತಂತ್ರಾಂಶ ತಯಾರಿಯ ಕೆಲಸ ಬೇಕು ಎನ್ನುವವರು ಪದವಿ ತರಗತಿಯ ಪ್ರಥಮ ವರ್ಷದಿಂದಲೇ ತರ್ಕಬದ್ಧವಾಗಿ ಯೋಚಿಸುವುದನ್ನು ರೂಢಿಗತಗೊಳಿಸಿಕೊಳ್ಳಬೇಕು.</p>
<p>&nbsp;</p>
<p>ತಂತ್ರಾಂಶ ತಯಾರಿಯಲ್ಲಿ ಜಗತ್ತಿನ ಪ್ರಥಮ ಸ್ಥಾನದಲ್ಲಿರುವ ಮೈಕ್ರೋಸಾಫ್ಟ್ ಕಂಪೆನಿಯ ಸ್ಥಾಪಕ ಬಿಲ್ ಗೇಟ್ಸ್ ಹೆಸರು ಕೇಳರಿಯವದರಾರು? ಅವರು ತರ್ಕಬದ್ಧವಾಗಿ ಯೋಚಿಸುವ ಶಕ್ತಿಗೆ ಅತಿ ಮಹತ್ತ್ವ ನೀಡುತ್ತಿದ್ದರು. ಅವರು ಕಂಪೆನಿಗೆ ಉದ್ಯೋಗಿಗಳನ್ನು ಸೇರಿಸಿಕೊಳ್ಳಲು ಸಂದರ್ಶಿಸುವಾಗ ಸಮಸ್ಯೆಗಳನ್ನು ಕೇಳುತ್ತಿದ್ದರು. ಇಂತಹ ಸಂದರ್ಶನಗಳಲ್ಲಿ ಕೇಳಿದ ಸಮಸ್ಯೆಗಳನ್ನು ಹಲವು ಅಂತರಜಾಲತಾಣಗಳಲ್ಲಿ ಓದಬಹುದು. ಅಷ್ಟು ಮಾತ್ರವಲ್ಲ, ಅವುಗಳ ಬಗ್ಗೆ ಒಂದು ಪುಸ್ತಕವೇ ಇದೆ (<a href="https://books.google.co.in/books/about/How_Would_You_Move_Mount_Fuji.html?id=hojAaIwFn9YC&amp;redir_esc=y" target="_blank">How Would You Move Mount Fuji</a>? Microsoft&#8217;s Cult of the Puzzle &#8211; How the World&#8217;s Smartest Company Selects the Most Creative Thinkers by William Poundstone). ಬಿಲ್ ಗೇಟ್ಸ್ ಪ್ರಕಾರ “ಒಬ್ಬನಲ್ಲಿ ಉತ್ತಮ ಐಕ್ಯೂ ಇದ್ದರೆ ಸಾಕು. ಅವನನ್ನು ನಾನು ಯಾವ ವಿಷಯದ ಬಗ್ಗೆ ಬೇಕಿದ್ದರೂ ಪರಿಣತನನ್ನಾಗಿ ತರಬೇತಿ ನೀಡಬಲ್ಲೆ”.</p>
<p>&nbsp;</p>
<p>ಈ ತರ್ಕಬದ್ಧವಾಗಿ ಯೋಚಿಸುವ ಶಕ್ತಿ ಬರಲು ಏನು ಮಾಡಬೇಕು? ಮೆದುಳಿಗೆ ಕಸರತ್ತು ನೀಡುವ ಸಮಸ್ಯೆಗಳನ್ನು ಪರಿಹರಿಸಬೇಕು (puzzle solving). ಚಿಕ್ಕಂದಿನಲ್ಲಿ ಒಬ್ಬರಿಗೊಬ್ಬರು ಸಮಸ್ಯೆಗಳನ್ನು ಹೇಳುವುದು, ಉತ್ತರ ಕಂಡುಹಿಡಿಯುವುದು ನಮಗೆಲ್ಲ ಒಂದು ಸಾಮಾನ್ಯ ಹವ್ಯಾಸವಾಗಿತ್ತು. ಹುಲಿ, ದನ, ಹುಲ್ಲುಗಳನ್ನು ಹಿಡಿದುಕೊಂಡು ಹೋಗುವಾಗ ದಾರಿಯಲ್ಲಿ ಎದುರಾಗುವ ಹೊಳೆಯನ್ನು ದಾಟಿಸುವ ಸಮಸ್ಯೆ ನಿಮಗೆಲ್ಲ ತಿಳಿದೇ ಇರಬಹುದು. ಇತ್ತೀಚೆಗೆ ಇಂತಹ ಸಮಸ್ಯೆಗಳನ್ನು ಹೇಳುವ, ಉತ್ತರ ಕಂಡುಹಿಡಿಯುವ, ಹವ್ಯಾಸ ಇಲ್ಲವಾಗುತ್ತಿದೆ. ಸಮಸ್ಯೆಗಳನ್ನು ಪರಿಹರಿಸುವುದು ಮಾತ್ರವಲ್ಲ, ಪಂಚತಂತ್ರ ಮತ್ತು ಮಹಾಭಾರತ ಓದುವುದರಿಂದಲೂ ತರ್ಕಶಕ್ತಿ ಹೆಚ್ಚಿಸಿಕೊಳ್ಳಬಹುದು. ಕರಾವಳಿಯವರು ಮತ್ತು ಮಲೆನಾಡಿನವರು ಯಕ್ಷಗಾನ ತಾಳಮದ್ದಳೆ ವೀಕ್ಷಿಸಬಹುದು. ಲೇಖನದ ಪ್ರಾರಂಭದಲ್ಲಿ ಉದಾಹರಿಸಿದ “ಸುಧನ್ವಾರ್ಜುನ” ಒಂದು ಖ್ಯಾತ ತಾಳಮದ್ದಳೆ ಪ್ರಸಂಗವೇ ಆಗಿದೆ. ಚದುರಂಗದ ಆಟವನ್ನು ಆಡುವ ಮೂಲಕವೂ ಆಲೋಚನಾಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.</p>
<p>&nbsp;</p>
<p>ಒಟ್ಟಿನಲ್ಲಿ ಹೇಳುವುದಾದರೆ ಮಹಾಭಾರತ ಓದಿ, ತರ್ಕಶಕ್ತಿ ಹೆಚ್ಚಿಸಿಕೊಳ್ಳಿ, ಉತ್ತಮ ತಂತ್ರಾಂಶ ತಯಾರಕರಾಗಿ.</p>
<p>&nbsp;</p>
<p>ಇದೇ ವಿಷಯದ ಬಗ್ಗೆ ಒಂದು ಸ್ಲೈಡ್‌ಶೋ <a href="http://www.slideshare.net/pavanaja/mahabharata-andsoftwaredeveopment" target="_blank">ನೋಡಿ</a>.</p>
<p>&nbsp;</p>
<h3>ಕೆಲವು ಸ್ಯಾಂಪಲ್ ಸಮಸ್ಯೆಗಳು</h3>
<blockquote><p>ನಿಮ್ಮಲ್ಲಿ ೮ ಗೋಲಿಗಳಿವೆ. ಅವೆಲ್ಲ ನೋಡಲು ಒಂದೇ ನಮೂನೆಯವಾಗಿವೆ. ಅವುಗಳ ಬಣ್ಣ ಗಾತ್ರ ಎಲ್ಲ ಒಂದೆ. ಅವುಗಳಲ್ಲಿ ಏಳು ಗೋಲಗಳ ತೂಕವೂ ಒಂದೇ. ಎಂಟನೆಯ ಗೋಲಿ ಮಾತ್ರ ಸ್ವಲ್ಪ ಜಾಸ್ತಿ ತೂಕದ್ದಾಗಿದೆ. ನಿಮಗೆ ಒಂದು ಉತ್ತಮ ತಕ್ಕಡಿ ನೀಡಲಾಗುತ್ತಿದೆ, ಆದರೆ ತೂಕದ ಬಟ್ಟುಗಳನ್ನು ನೀಡಲಾಗುವುದಿಲ್ಲ. ತಕ್ಕಡಿಯನ್ನು ಎರಡೇ ಸಲ ಬಳಸಿ ಜಾಸ್ತಿ ತೂಕದ ಗೋಲಿ ಯಾವುದು ಎಂದು ಕಂಡುಹಿಡಿಯಬೇಕು.</p></blockquote>
<p>&nbsp;</p>
<blockquote><p>ಒಂದು ಉದ್ದನೆಯ ಕಾರಿಡಾರ್ ಇದೆ. ಅದರ ಒಂದು ತುದಿಯಲ್ಲಿ ಮೂರು ಕೋಣೆಗಳಿವೆ. ಯಾವ ಕೋಣೆಗೂ ಕಿಟಿಕಿಯಿಲ್ಲ. ಪ್ರತಿ ಕೋಣೆಯಲ್ಲೂ ಒಂದು ಬಲ್ಬ್ ಇದೆ. ಕಾರಿಡಾರ್‌ನ ಇನ್ನೊಂದು ತುದಿಯಲ್ಲಿ ಮೂರು ಸ್ವಿಚ್‌ಗಳಿವೆ. ಒಂದು ಸ್ವಿಚ್ ಒಂದು ಕೋಣೆಯಲ್ಲಿಯ ಬಲ್ಬಿಗೆ ಸಂಬಂಧಿಸಿರುತ್ತದೆ. ಕಾರಿಡಾರ್‌ನ ಒಂದು ತುದಿಯಿಂದ ಇನ್ನೊಂದು ತುದಿಗೆ ಒಂದೇ ಸಲ ಹೋಗಿ ಯಾವ ಸ್ವಿಚ್ ಯಾವ ಕೋಣೆಗೆ (ಕೋಣೆಯ ಬಲ್ಬಿಗೆ) ಸಂಬಂಧಿಸಿದ್ದು ಎಂದು ಪತ್ತೆ ಹಚ್ಚಬೇಕು.</p></blockquote>
<p>&nbsp;</p>
<p>(ಕೃಪೆ: ಹೊಸದಿಗಂತ, ಎಪ್ರಿಲ್ ೧೫, ೨೦೧೨)</p><p>The post <a href="http://vishvakannada.com/%e0%b2%b2%e0%b3%87%e0%b2%96%e0%b2%a8/%e0%b2%ae%e0%b2%b9%e0%b2%be%e0%b2%ad%e0%b2%be%e0%b2%b0%e0%b2%a4/">ಮಹಾಭಾರತ ಮತ್ತು ತಂತ್ರಾಂಶ ತಯಾರಿ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%b2%e0%b3%87%e0%b2%96%e0%b2%a8/%e0%b2%ae%e0%b2%b9%e0%b2%be%e0%b2%ad%e0%b2%be%e0%b2%b0%e0%b2%a4/feed/</wfw:commentRss>
			<slash:comments>3</slash:comments>
		
		
			</item>
		<item>
		<title>ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ -ಅಂದು, ಇಂದು, ಮುಂದು</title>
		<link>http://vishvakannada.com/%e0%b2%b2%e0%b3%87%e0%b2%96%e0%b2%a8/%e0%b2%95%e0%b2%a8%e0%b3%8d%e0%b2%a8%e0%b2%a1/</link>
					<comments>http://vishvakannada.com/%e0%b2%b2%e0%b3%87%e0%b2%96%e0%b2%a8/%e0%b2%95%e0%b2%a8%e0%b3%8d%e0%b2%a8%e0%b2%a1/#comments</comments>
		
		<dc:creator><![CDATA[pavanaja]]></dc:creator>
		<pubDate>Fri, 29 Apr 2011 05:05:51 +0000</pubDate>
				<category><![CDATA[ಲೇಖನ]]></category>
		<category><![CDATA[ಕನ್ನಡ]]></category>
		<category><![CDATA[ಕನ್ನಡ ಲೋಗೋ]]></category>
		<category><![CDATA[ತಂತ್ರಾಂಶ]]></category>
		<category><![CDATA[ತಂತ್ರಾಂಶ ಸಲಹಾ ಸಮಿತಿ]]></category>
		<category><![CDATA[ಫಾಂಟ್]]></category>
		<category><![CDATA[ಮಾಹಿತಿ ತಂತ್ರಜ್ಞಾನ]]></category>
		<category><![CDATA[ಯುನಿಕೋಡ್]]></category>
		<guid isPermaLink="false">http://vishvakannada.com/?p=682</guid>

					<description><![CDATA[<p>ಡಾ&#124; ಯು. ಬಿ. ಪವನಜ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಂಬುದು ಆರಂಭದ ದಿನಗಳಲ್ಲಿ ಗಣಕಗಳಲ್ಲಿ ಕನ್ನಡದ ಬಳಕೆಯಿಂದ ಪ್ರಾರಂಭವಾಯಿತು. ಇದು  ಸುಮಾರು ಮೂರು ದಶಕಗಳ ಹಿಂದಿನ ಕಥೆ. ಪದಸಂಸ್ಕರಣವು (word-processing) ಇದರಲ್ಲಿಯ ಮೊದಲನೆಯದು. ಪತ್ರ,&#8230;</p>
<p>The post <a href="http://vishvakannada.com/%e0%b2%b2%e0%b3%87%e0%b2%96%e0%b2%a8/%e0%b2%95%e0%b2%a8%e0%b3%8d%e0%b2%a8%e0%b2%a1/">ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ -ಅಂದು, ಇಂದು, ಮುಂದು</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p style="text-align: center;"><strong>ಡಾ| ಯು. ಬಿ. ಪವನಜ</strong></p>
<p>ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಂಬುದು ಆರಂಭದ ದಿನಗಳಲ್ಲಿ ಗಣಕಗಳಲ್ಲಿ ಕನ್ನಡದ ಬಳಕೆಯಿಂದ ಪ್ರಾರಂಭವಾಯಿತು. ಇದು  ಸುಮಾರು ಮೂರು ದಶಕಗಳ ಹಿಂದಿನ ಕಥೆ. ಪದಸಂಸ್ಕರಣವು (word-processing) ಇದರಲ್ಲಿಯ ಮೊದಲನೆಯದು. ಪತ್ರ, ಲೇಖನ, ದಾಖಲೆಗಳನ್ನು ಬರೆಯಲು, ತಿದ್ದಲು ಇವುಗಳ ಬಳಕೆ ಆಗುತ್ತಿದೆ. ಪದಸಂಸ್ಕರಣದ ಮುಂದುವರೆದ ಸೌಕರ್ಯವೇ ಡಿ.ಟಿ.ಪಿ. (desktop publishing). ಅಂದರೆ ಪಠ್ಯದ ಜೊತೆ ಚಿತ್ರಗಳನ್ನು ಸೇರಿಸಿ ಪುಟವಿನ್ಯಾಸ ಮಾಡುವುದು. ಈಗ ಎಲ್ಲ ಪುಸ್ತಕಗಳು ಮತ್ತು ಪತ್ರಿಕೆಗಳು ಇದೇ ವಿಧಾನದಿಂದ ತಯಾರಾಗುತ್ತಿವೆ.</p>
<p><strong>ಕೆ.ಪಿ. ರಾವ್ ಮತ್ತು ಅವರ ಸೇಡಿಯಾಪು ತಂತ್ರಾಂಶ</strong></p>
<p>ಕನ್ನಡ ಭಾಷೆ ಮಾತ್ರವಲ್ಲ, ಸಮಗ್ರ ಭಾರತೀಯ ಭಾಷೆಗಳನ್ನೇ ಗಣಕದಲ್ಲಿ ಅಳವಡಿಸುವ ವಿಷಯದಲ್ಲಿ ಎಲ್ಲರಿಂದ ಮೊದಲು ಆಲೋಚಿಸಿ ಕಾರ್ಯಗತರಾದವರು ನಮ್ಮ ಕನ್ನಡಿಗರೇ ಆದ ಶ್ರೀ <a title="kprao" href="http://vishvakannada.com/%E0%B2%AA%E0%B2%B0%E0%B2%BF%E0%B2%9A%E0%B2%AF/%E0%B2%B6%E0%B3%8D%E0%B2%B0%E0%B3%80-%E0%B2%95%E0%B3%86-%E0%B2%AA%E0%B2%BF-%E0%B2%B0%E0%B2%BE%E0%B2%B5%E0%B3%8D-%E0%B2%85%E0%B2%B5%E0%B2%B0-%E0%B2%B8%E0%B2%82%E0%B2%A6%E0%B2%B0%E0%B3%8D%E0%B2%B6/" target="_blank">ಕೆ. ಪಿ. ರಾವ್</a> ಅವರು. ೭೦ರ ದಶಕದಲ್ಲಿ ಅವರು ಮುಂಬಯಿಯ ಟಾಟಾ ಪ್ರೆಸ್‌ನಲ್ಲಿ ತಂತ್ರಜ್ಞರಾಗಿದ್ದಾಗ ಪ್ರಪ್ರಥಮ ಬಾರಿಗೆ ಫೋಟೋಟೈಪ್‌ಸೆಟ್ಟಿಂಗ್ ಯಂತ್ರದಲ್ಲಿ ಭಾರತೀಯ ಭಾಷೆಗಳನ್ನು ಅಳವಡಿಸುವ ಕೆಲಸವನ್ನು ಪ್ರಾರಂಭಿಸಿದರು. ಇವರು ಆ ಕಾಲಕ್ಕೆ ಲಭ್ಯವಿದ್ದ ಸೀಮಿತ ತಂತ್ರಜ್ಞಾನಗಳನ್ನೇ ಬಳಸಿ ಸುಂದರವಾದ ಕಂಪ್ಯೂಟರ್ ಫಾಂಟ್‌ಗಳನ್ನು (ಅಕ್ಷರಶೈಲಿಗಳು) ಕನ್ನಡ ಮತ್ತು ಇತರೆ ಭಾಷೆಗಳಿಗೆ ನಿರ್ಮಿಸಿದರು. ಅಂತಹ ಕನ್ನಡ ಲಿಪಿಯ ಫಾಂಟ್‌ನ್ನು ಸುಲಭವಾಗಿ ಕಂಪ್ಯೂಟರ್‌ನಲ್ಲಿ ಮೂಡಿಸಲು ಸರಳ ಹಾಗೂ ತರ್ಕಬದ್ಧವಾದ ಕೀಲಿಮಣೆ (ಕೀಬೋರ್ಡ್) ವಿನ್ಯಾಸವನ್ನು ರಚಿಸಿದ ಕೀರ್ತಿ ಶ್ರೀ ಕೆ.ಪಿ ರಾವ್‌ರವರಿಗೆ ಸಲ್ಲುತ್ತದೆ. ಭಾರತೀಯ ಭಾಷೆಗಳಿಗೆ ಮೊದಲ ಬಾರಿಗೆ ಧ್ವನ್ಯಾತ್ಮಕ ಕೀಲಿಮಣೆಯ ವಿನ್ಯಾಸ ಮಾಡಿದವರು ಇವರೇ. ಇಂಗ್ಲೀಷ್ ಭಾಷೆಯ ೨೬ ಅಕ್ಷರಗಳನ್ನು ಮಾತ್ರವೇ ಬಳಸಿ ಕನ್ನಡದ ಎಲ್ಲ ಅಕ್ಷರಗಳನ್ನು ಊಡಿಸುವಂತೆ ಅವರು ತಮ್ಮ ಕೀಲಿಮಣೆಯ ವಿನ್ಯಾಸ ರೂಪಿಸಿದರು. ಇದನ್ನೇ ಅಲ್ಪ ಸ್ವಲ್ಪ ಬದಲಾಯಿಸಿ ಕರ್ನಾಟಕ ಸರಕಾರವು ತನ್ನ ಅಧಿಕೃತ ವಿನ್ಯಾಸವೆಂದು ಘೋಷಿಸಿದೆ. ಇದುವೇ &#8220;ನುಡಿ&#8221; ತಂತ್ರಾಂಶದಲ್ಲಿ (ಸಾಫ್ಟ್‌ವೇರ್) ಅಳವಡಿಸಲಾಗಿರುವ ಕೀಲಿಮಣೆಯ ವಿನ್ಯಾಸ. ದುರದೃಷ್ಟಕ್ಕೆ ಈ ವಿನ್ಯಾಸವನ್ನು ಎಲ್ಲರೂ ಕನ್ನಡ ಗಣಕ ಪರಿಷತ್ (ಕಗಪ) ವಿನ್ಯಾಸ ಎಂದೇ ಕರೆಯುತ್ತಿದ್ದಾರೆ. ಅವರು &#8220;ಸೇಡಿಯಾಪು&#8221; ಹೆಸರಿನ ಡಾಸ್‌ನಲ್ಲಿ ಕೆಲಸ ಮಾಡುವ ತಂತ್ರಾಂಶವನ್ನೂ ೮೦ರ ದಶಕದ ಆರಂಭದಲ್ಲೇ ತಯಾರಿಸಿ ಉಚಿತವಾಗಿ ಹಂಚಿದ್ದರು. ಎಂತೆಂತವರಿಗೆಲ್ಲ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸರಕಾರವು ಮೂರು ದಶಕಗಳ ಹಿಂದೆಯೇ ನಿಜವಾಗಿಯೂ ಕನ್ನಡಕ್ಕೆ ಅತೀ ಅಗತ್ಯವಾದ ಕೊಡುಗೆ ನೀಡಿದ ಕೆ. ಪಿ ರಾವ್ ಅವರಿಗೆ ಪ್ರಶಸ್ತಿ ನೀಡದಿರುವುದು ರಾಜ್ಯೋತ್ಸವ ಪ್ರಶಸ್ತಿಗೇ ಅವಮಾನ.</p>
<p><strong>ಕನ್ನಡದ ಅಕ್ಷರಶೈಲಿ ಮತ್ತು ಕೀಲಿಮಣೆಗಳು</strong></p>
<p>ಗಣಕದಲ್ಲಿ ಕನ್ನಡದ ಬಳಕೆಗೆ ಕನ್ನಡದ ಅಕ್ಷರಶೈಲಿಗಳು ಬೇಕು. ಇದನ್ನು ಗಣಕದ ಪರಿಭಾಷೆಯಲ್ಲಿ ಫಾಂಟ್ ಎನ್ನುತ್ತಾರೆ. ಅಕ್ಷರಶೈಲಿಯೊಂದಿದ್ದರೆ ಆಗಲಿಲ್ಲ. ಇದಕ್ಕೊಂದು ಕೀಲಿಮಣೆಯ ತಂತ್ರಾಂಶ ಬೇಕು. ಉದಾಹರಣೆಗೆ ಇಂಗ್ಲೀಷಿನಲ್ಲಿ &#8220;k&#8221; ಎಂದು ಬರೆದಿರುವ ಕೀಲಿಯನ್ನು ಒತ್ತಿದರೆ ಗಣಕಕ್ಕೆ ಕನ್ನಡದ &#8220;ಕ&#8221; ಎಂಬ ಅಕ್ಷರದ ಸಂಕೇತವನ್ನು ಈ ತಂತ್ರಾಂಶ ಕಳುಹಿಸುತ್ತದೆ. ಸುಮಾರು ಎರಡೂವರೆ ದಶಕದ ಹಿಂದೆ ಹಲವು ಅಕ್ಷರಶೈಲಿ ಮತ್ತು ಕೀಲಿಮಣೆಯ ವಾಣಿಜ್ಯಕ ತಂತ್ರಾಂಶಗಳು ತಯಾರಾದವು. ಕೇಂದ್ರ ಸರಕಾರದ ಸಿ-ಡಾಕ್‌ನವರು ಮೈಕ್ರೋಸಾಫ್ಟ್ ಡಾಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕನ್ನಡವೂ ಸೇರಿದಂತೆ ಹಲವು ಭಾರತೀಯ ಭಾಷೆಗಳನ್ನು ಅಳವಡಿಸಿದರು. ಇದನ್ನು ಬಳಸಲು ಗಣಕದೊಳಗೆ ಒಂದು ಹಾರ್ಡ್‌ವೇರ್ ಕಾರ್ಡನ್ನು ಸೇರಿಸಬೇಕಾಗಿತ್ತು. ಹಲವು ವರ್ಷಗಳ ನಂತರ ಅವರು ಇದರ ವಿಂಡೋಸ್ ಆವೃತ್ತಿಯನ್ನು ತಯಾರಿಸಿದರು. ಇದನ್ನು ಬಳಸಲು ಹಾರ್ಡ್‌ವೇರ್ ಕಾರ್ಡಿನ ಅಗತ್ಯವಿಲ್ಲ. ಎಂಬತ್ತರ ದಶಕದ ಕೊನೆಯಲ್ಲಿ ಶ್ರೀಲಿಪಿ, ಆಕೃತಿ, ಶಬ್ದರತ್ನ, ವಿನ್‌ಕೀ, ಇತ್ಯಾದಿ ಹಲವು ಖಾಸಗಿ ಕಂಪೆನಿಗಳು ಕನ್ನಡದ ಅಕ್ಷರಶೈಲಿ ಮತ್ತು ಕೀಲಿಮಣೆಯ ತಂತ್ರಾಂಶಗಳನ್ನು ತಯಾರಿಸಿ ಮಾರಲು ಪ್ರಾರಂಭಿಸಿದರು. ಈ ಎಲ್ಲ ತಂತ್ರಾಂಶಗಳು ಬಳಸುತ್ತಿರುವುದು ಕೆ. ಪಿ. ರಾವ್ ಅವರು ಸಂಶೋಧಿಸಿದ ಧ್ವನ್ಯಾತ್ಮಕ ವಿಧಾನದ ಕೀಲಿಮಣೆಗಳ ವಿನ್ಯಾಸವನ್ನೇ. ಆಯಾ ತಂತ್ರಾಂಶಗಳು ಕೀಲಿಗಳ ಸ್ಥಾನದಲ್ಲಿ ಬದಲಾವಣೆಯನ್ನು ಮಾಡಿಕೊಂಡಿರಬಹುದು, ಆದರೆ ಕೆಲಸ ಮಾಡುವ ಮೂಲಸೂತ್ರ ಮಾತ್ರ ಒಂದೇ.</p>
<p><strong>ಅನಿವಾಸಿಗಳಿಂದ ಕನ್ನಡಕ್ಕೆ ಕೊಡುಗೆ</strong></p>
<p>ಅಮೇರಿಕಾದಲ್ಲಿ ಕನ್ನಡ ಚಟುವಟಿಕೆಗಳನ್ನು ಹುಟ್ಟುಹಾಕಿ ಬೆಳಸಲು ಕಾರಣೀಭೂತರಾದ ಶಿಕಾರಿಪುರ ಹರಿಹರೇಶ್ವರ ಅವರು &#8220;ಅಮೆರಿಕನ್ನಡ&#8221; ಎಂಬ ಪತ್ರಿಕೆಯನ್ನು ಸೃಷ್ಟಿಸಿ ನಡೆಸಿಕೊಂಡು ಬರುತ್ತಿದ್ದರು. ಅವರು ಈ ಪತ್ರಿಕೆ ಮುದ್ರಿಸಲು ಕಸ್ತೂರಿ ರಂಗಾಚಾರ್ ಅವರು ತಯಾರಿಸಿದ &#8220;ಕಸ್ತೂರಿ&#8221; ಎಂಬ ತಂತ್ರಾಂಶವನ್ನು ಉಪಯೋಗಿಸಿದರು. ಸುಮಾರು ಅದೇ ಕಾಲದಲ್ಲಿ ಅಮೇರಿಕಾದಲ್ಲೇ ನೆಲೆಸಿದ್ದ ವಿಶ್ವೇಶ್ವರ ದೀಕ್ಷಿತ್ ಅವರೂ ಒಂದು ಕನ್ನಡ ತಂತ್ರಾಂಶವನ್ನು ತಯಾರಿಸಿದ್ದರು (೧೯೮೪-೮೫). ಹಲವು ವರ್ಷಗಳ ನಂತರ (೧೯೯೬-೯೭) ಜಗದೀಶ್ ಮತ್ತು ವೆಂಕಟೇಶ್ ಎಂಬ ಉತ್ಸಾಹಿಗಳು ಯುನಿಕ್ಸ್ ಮತ್ತು ಇತರ ಎಲ್ಲ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಕೆಲಸ ಮಾಡಬಲ್ಲ <a title="kale" href="http://ptsg.eecs.berkeley.edu/~venkates/kannada.html" target="_blank">&#8220;ಕಲೆ</a>&#8221; ಎಂಬ ತಂತ್ರಾಂಶವನ್ನು ತಯಾರಿಸಿದ್ದರು. ಇದು ವೈಜ್ಞಾನಿಕ ಲೇಖನ ತಯಾರಿಸಲು ಬಳಸುತ್ತಿದ್ದ ಟೆಕ್‌ನ್ನು (TeX) ಉಪಯೋಗಿಸಿ ಇಂಗ್ಲೀಷ್ ಲಿಪಿಯಲ್ಲಿ ಬರೆದುದನ್ನು ಪೋಸ್ಟ್‌ಸ್ಕ್ರಿಪ್ಟ್ ಕಡತವನ್ನಾಗಿಸಿ ಮುದ್ರಿಸಿ ಕೊಡುತ್ತಿತ್ತು. ಕೆಲವು ವಿಜ್ಞಾನದ ವಿದ್ಯಾರ್ಥಿಗಳನ್ನು ಬಿಟ್ಟರೆ ಇತರರು ಇದನ್ನು ಬಳಸಿದ್ದು ಗೊತ್ತಿಲ್ಲ. ಇತ್ತೀಚಿಗೆ ತುಂಬ ಜನಪ್ರಿಯವಾಗಿರುವ ಕನ್ನಡ ತಂತ್ರಾಂಶ &#8220;<a title="baraha" href="http://www.baraha.com/" target="_blank">ಬರಹ</a>&#8220;. ಇದನ್ನು ತಯಾರಿಸಿದವರು ಅಮೇರಿಕ ವಾಸಿಯಾಗಿರುವ ಶೇಶಾದ್ರಿವಾಸು ಅವರು. ಬರಹ ಅತಿ ಜನಪ್ರಿಯವಾಗಲು ಹಲವು ಕಾರಣಗಳಿವೆ -ಮುದ್ದಾದ ಅಕ್ಷರಶೈಲಿಗಳಿವೆ, ವಿಂಡೋಸ್‌ನಲ್ಲಿ ಕೆಲಸ ಮಾಡುತ್ತದೆ, ಇದು ಉಚಿತ, ಇಂಗ್ಲೀಷ್ ಮೂಲಕ ಕನ್ನಡವನ್ನು ಊಡಿಸುವುದು (ಅನಿವಾಸಿಗಳಿಗೆ ಇದು ಅನುಕೂಲ), ತಂತ್ರಾಂಶ ತಯಾರಕರಿಗೆ ಬೇಕಾದ ಸವಲತ್ತುಗಳೂ ಇವೆ, ಯುನಿಕೋಡ್‌ಗೆ ಮಾಹಿತಿಯ ವರ್ಗಾವಣೆ ಸಾದ್ಯವಿದೆ, ವಿವಿಧ ಫಾಂಟ್‌ಗಳಿಗೆ ಪರಿವರ್ತಕಗಳಿವೆ, ಇತ್ಯಾದಿ. ಕಾಲಕಾಲಕ್ಕೆ ವಿಂಡೋಸ್ ಮತ್ತು ಆಫೀಸ್ ತಂತ್ರಾಂಶಗಳಲ್ಲಿ ಚಿಕ್ಕಪುಟ್ಟ ಬದಲಾವಣೆಗಳಾದಾಗ ಬರಹ ತಂತ್ರಾಂಶವೂ ಆ ಬದಲಾವಣೆಗಳಿಗೆ ಸರಿಹೊಂದುವಂತೆ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಲೇ ಬಂದಿದೆ. ಕನ್ನಡಿಗರೆಲ್ಲರಿಗೆ ಬರಹ ತಂತ್ರಾಂಶವು ಸರಳವಾಗಿ ಮತ್ತು ಉಚಿತವಾಗಿ ಲಭ್ಯವಿದ್ದು ಗಣಕದಲ್ಲಿ ಕನ್ನಡವನ್ನು ಊಡಿಸಲು ತುಂಬ ಸಹಾಯಕಾರಿಯಾಗಿದೆ. ಬಹುಪಾಲು ಮಂದಿ ಕನ್ನಡದಲ್ಲಿ ಬೆರಳಚ್ಚು ಮಾಡಲು ಬರಹವನ್ನೇ ನಂಬಿದ್ದಾರೆ. ಗಣಕದಲ್ಲಿ ಕನ್ನಡದ ಬಳಕೆ ಮತ್ತು ಉಳಿಕೆಗೆ “ಬರಹ”ವೊಂದೇ ಕಾರಣ ಎಂದು ಕೆಲವರು ತಪ್ಪಾಗಿ ತಿಳಿದುಕೊಂಡಿದ್ದಾರೆ. ಯಾವ ರೀತಿಯಲ್ಲಿ ನೋಡಿದರೂ &#8220;ಬರಹ&#8221;ವು ಕನ್ನಡದ ಪ್ರಥಮ ತಂತ್ರಾಂಶವಲ್ಲ. ಗಣಕದಲ್ಲಿ ಕನ್ನಡ ಬಳಕೆಗೂ &#8220;ಬರಹ&#8221;ವೊಂದೇ ಕಾರಣವೂ ಅಲ್ಲ.</p>
<p><strong>ಶಿಷ್ಟವಾಗಿರದವರಿಗೆ ನುಡಿ</strong></p>
<p>ಹಲವು ವರ್ಷಗಳಿಂದ ಕನ್ನಡ ಭಾಷೆಯ ಡಿ.ಟಿ.ಪಿ. ತಂತ್ರಾಂಶಗಳನ್ನು ತಯಾರಿಸಿ ಮಾರುತ್ತಿದ್ದ ಎಲ್ಲ ಕಂಪೆನಿಗಳು ತಾವು ಬಳಸಿರುವ ಅಕ್ಷರಭಾಗಗಳಿಗೆ (font glyph set) ತಮ್ಮದೇ ಸಂಕೇತವನ್ನು ರೂಪಿಸಿಕೊಂಡಿದ್ದರು. ಇವುಗಳಲ್ಲಿ ಒಮ್ಮತವಿರಲಿಲ್ಲ. ಇದರಿಂದಾಗಿ ಒಂದು ತಂತ್ರಾಂಶವನ್ನು ಬಳಸಿ ತಯಾರಿಸಿದ ಮಾಹಿತಿಯನ್ನು ಇನ್ನೊಂದು ತಂತ್ರಾಂಶದಲ್ಲಿ ಓದಲು ಆಗುತ್ತಿರಲಿಲ್ಲ. ಈ ಸಮಸ್ಯೆಯನ್ನು ಮನಗಂಡ ಕರ್ನಾಟಕ ಸರಕಾರವು ಗಣಕಗಳಲ್ಲಿ ಕನ್ನಡ ಬಾಷೆಯ ಅಳವಡಿಕೆಗೆ ಒಂದು ಶಿಷ್ಟತೆಯನ್ನು ರೂಪಿಸಲು ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ಕನ್ನಡದ ಅಕ್ಷರಭಾಗಗಳಿಗೆ ಒಂದು ಶಿಷ್ಟ ಸಂಕೇತ ಹಾಗು ಕೀಲಿಮಣೆ ವಿನ್ಯಾಸವನ್ನು ಸಿದ್ಧಪಡಿಸಿತು. ಸರಕಾರದ ಈ ಶಿಷ್ಟತೆಗಳಿಗನುಗುಣವಾಗಿ ಸರಕಾರವೇ ಕನ್ನಡ ಗಣಕ ಪರಿಷತ್ತಿನ ಸಹಯೋಗದಿಂದ &#8220;ನುಡಿ&#8221; ಹೆಸರಿನ ಸಮಾನ ತಂತ್ರಾಂಶವೊಂದನ್ನು ತಯಾರಿಸಿ ಬಿಡುಗಡೆ ಮಾಡಿತು (೨೦೦೦). ಈ ತಂತ್ರಾಂಶ ಕನ್ನಡಿಗರಿಗೆ ಉಚಿತವಾಗಿ ದೊರೆಯತ್ತದೆ. ಕರ್ನಾಟಕ ಸರಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಂತರಜಾಲ (ಇಂಟರ್‌ನೆಟ್) ತಾಣದಲ್ಲಿ (<a href="http://www.bangaloreitbt.in" target="_blank">www.bangaloreitbt.in</a>) ಇದು ಲಭ್ಯ.</p>
<p>ಈ ಎಲ್ಲ ತಂತ್ರಾಂಶಗಳು ನಿಜವಾಗಿ ನೋಡಿದರೆ ಫಾಂಟ್ ಮತ್ತು ಕೀಲಿಮಣೆಯ ತಂತ್ರಾಂಶಗಳು. ಇಂಗ್ಲೀಶ್ ಭಾಷೆಯ ಅಕ್ಷರಗಳ ಜಾಗದಲ್ಲಿ ಕನ್ನಡದ ಅಕ್ಷರಭಾಗಗಳನ್ನು ಕೂರಿಸುತ್ತಾರೆ. ಇದು ಕನ್ನಡ ಭಾಷೆ ಎಂದು ಕಾರ್ಯಾಚರಣೆಯ ವ್ಯವಸ್ಥೆಗಳಿಗೆ (ಆಪರೇಟಿಂಗ್ ಸಿಸ್ಟಮ್) ಅರ್ಥವಾಗುವುದಿಲ್ಲ. ಆದುದರಿಂದಲೇ ಈ ರೀತಿಯಲ್ಲಿ ಬೆರಳಚ್ಚು ಮಾಡಿದ ಮಾಹಿತಿಯ ಕಡತಗಳನ್ನು ಕಾರ್ಯಾಚರಣೆ ವ್ಯವಸ್ಥೆ ಅಥವಾ ಡಿಟಿಪಿಯ ತಂತ್ರಾಂಶಗಳಲ್ಲಿ ಅಳವಡಿಸಿರುವ “ಹುಡುಕುವ” ಸವಲತ್ತನ್ನು ಬಳಸಿ ಹುಡುಕಲು ಸಾಧ್ಯವಿಲ್ಲ. ಪತ್ರಿಕೆಗಳವರು ದಶಕಗಳಿಂದ ಕನ್ನಡ ಭಾಷೆಯಲ್ಲಿ ಪತ್ರಿಕೆ ತಯಾರಿಸಲು ಗಣಕವನ್ನು ಬಳಸುತ್ತಿದ್ದರೂ ಅವರ ಗಣಕದಲ್ಲಿ ಶೇಖರವಾಗಿರುವ ಕಡತಗಳಲ್ಲಿ ಇರುವ ಮಾಹಿತಿಯನ್ನು ಹುಡುಕಲು ಸಾಧ್ಯವಾಗದಿರುವುದು ಇದೇ ಕಾರಣದಿಂದ.</p>
<p><strong>ಕನ್ನಡ ವಿಶ್ವವ್ಯಾಪಿಯಾಗಲಿ</strong></p>
<p>ಕನ್ನಡದಲ್ಲಿ ಕಡತವೊಂದನ್ನು ತಯಾರಿಸಿ ಫ್ರಾನ್ಸಿಗೆ ಕಳುಹಿಸಿದರೆ ಅವರಿಗೆ ಇದು ಕನ್ನಡ ಭಾಷೆಯಲ್ಲಿದೆ ಎಂದು ತಿಳಿಯುವುದು ಹೇಗೆ? ವಿಶ್ವಕ್ಕೆಲ್ಲ ಒಂದೇ ಸಂಕೇತ ವಿಧಾನ ಇದ್ದರೆ ಒಳ್ಳೆಯದಲ್ಲವೇ? ಇದುವೇ ಯುನಿಕೋಡ್. <a href="http://www.unicode.org" target="_blank">ಯುನಿಕೋಡ್ </a>ಒಂದು ಜಾಗತಿಕ ಶಿಷ್ಟತೆ.</p>
<p>ಶಿಷ್ಟತೆಯ ಮಾತು ಬಂದಾಗ ನಾವು ಕನ್ನಡವನ್ನು ಪ್ರತ್ಯೇಕವಾಗಿ ನೋಡುವುದು ತಪ್ಪು. ಭಾರತೀಯ ಭಾಷೆಗಳು ಮಾತ್ರವಲ್ಲ ಜಗತ್ತಿನ ಎಲ್ಲ ಭಾಷೆಗಳ ಜೊತೆ ಕನ್ನಡವೂ ಹಾಸುಹೊಕ್ಕಾಗಿ ಸೇರಿಕೊಳ್ಳಬೇಕು. ಅದಕ್ಕಾಗಿ ಏನು ಮಾಡಬೇಕು? ಇದಕ್ಕೆ ಉತ್ತರ ಯುನಿಕೋಡ್‌ನ ಬಳಕೆ. ಏನು ಈ ಯುನಿಕೋಡ್? ಜಗತ್ತಿನ ಎಲ್ಲ ಭಾಷೆಗಳ ಸಂಕೇತೀಕರಣಕ್ಕೆ ಇರವ ಶಿಷ್ಟತೆ ಅರ್ಥಾತ್ ಗಣಕದಲ್ಲಿ ಜಗತ್ತಿನ ಎಲ್ಲ ಭಾಷೆಗಳ ಪ್ರತಿ ಅಕ್ಷರಕ್ಕೂ ಸಂಕೇತ ನೀಡುವ ವ್ಯವಸ್ಥೆಯೇ ಯುನಿಕೋಡ್. ಇದರ ವೈಶಿಷ್ಟ್ಯವೆಂದರೆ ಜಗತ್ತಿನ ಎಲ್ಲ ಭಾಷೆಗಳಿಗೂ ಇದರಲ್ಲಿ ಪ್ರತ್ಯೇಕ ಸಂಕೇತವನ್ನು ನೀಡಲಾಗಿದೆ. ಅಂದರೆ ಇಂಗ್ಲೀಶ್‌ನ ಜಾಗದಲ್ಲಿ ನಮ್ಮ ಭಾಷೆಯನ್ನು ಕೂರಿಸಬೇಕಾಗಿಲ್ಲ. ಯುನಿಕೋಡ್ ವಿಧಾನದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಪರದೆಯಲ್ಲಿ (ಮೋನಿಟರ್) ಸರಿಯಾಗಿ ತೋರಿಸಲು ಓಪನ್‌ಟೈಪ್ ಎಂಬ ವಿಧಾನದ ಅಕ್ಷರಶೈಲಿಯನ್ನು (ಫಾಂಟ್) ಬಳಸಬೇಕಾಗುತ್ತದೆ. ಈ ಅಕ್ಷರಶೈಲಿಯ ವೈಶಿಷ್ಟ್ಯವೆಂದರೆ ಎಷ್ಟು ಬೇಕಾದರೂ ಅಕ್ಷರಭಾಗಗಳನ್ನು ಬಳಸಬಹುದು. ಅಷ್ಟು ಮಾತ್ರವಲ್ಲ, ಯುನಿಕೋಡ್ ವಿಧಾನದಿಂದ ಮಾಹಿತಿಯನ್ನು ಶೇಖರಿಸುವುದರಿಂದ ಪ್ರಪಂಚದ ಎಲ್ಲ ಭಾಷೆಗಳನ್ನು ಒಂದೇ ಕಡತದಲ್ಲಿ ಸಂಗ್ರಹಿಸಲು ಸಾಧ್ಯ. ಯುನಿಕೋಡ್ ಮಾಹಿತಿಯನ್ನು ಕಾರ್ಯಾಚರಣೆ ವ್ಯವಸ್ಥೆಗಳು ಅರ್ಥಮಾಡಿಕೊಳ್ಳುವುದರಿಂದ ಕಡತಗಳಲ್ಲಿ ಸಂಗ್ರಹವಾದ ಮಾಹಿತಿಯನ್ನು ಹುಡುಕಬಹುದು. ಪತ್ರಿಕೆಗಳು ಯುನಿಕೋಡ್ ಬಳಸಿ ಕಡತ ತಯಾರಿ ಮಾಡಿದರೆ ಒಂದು ವಿಷಯದ ಬಗ್ಗೆ ಮಾಹಿತಿ ಯಾವ ಕಡತದಲ್ಲಿದೆ ಎಂದು ಸುಲಭವಾಗಿ ಹುಡುಕಿ ತೆಗೆಯಬಹುದು. ಅಂತರಜಾಲದಲ್ಲಿ ಮಾಹಿತಿಯನ್ನು ಹುಡುಕುವ ತಾಣವಾದ ಗೂಗ್ಲ್ ಕೂಡ ಯುನಿಕೋಡ್ ಮೂಲಕವೇ ಕನ್ನಡದ ಮಾಹಿತಿಯನ್ನು ಹುಡುಕುತ್ತದೆ. ಗ್ರಂಥಾಲಯ, ಸಂಬಳದ ಪಟ್ಟಿ, ಪಡಿತರ ಚೀಟಿ, ಸಾರಿಗೆ ಸಂಸ್ಥೆಯ ವ್ಯವಹಾರ, ವಿದ್ಯುತ್ ಬಿಲ್ಲು, ಇತ್ಯಾದಿ ಎಲ್ಲ ನಮೂನೆಯ ಕನ್ನಡದ ಆನ್ವಯಿಕ ತಂತ್ರಾಂಶಗಳ (ಅಪ್ಲಿಕೇಶನ್ ಸಾಫ್ಟ್‌ವೇರ್) ತಯಾರಿ ಯುನಿಕೋಡ್ ವಿಧಾನದಿಂದ ಸಾಧ್ಯ. ಇಂಹ ತಂತ್ರಾಂಶಗಳಲ್ಲಿ ಕನ್ನಡ ಮಾತ್ರವಲ್ಲ, ಹಿಂದಿ, ಇಂಗ್ಲಿಶ್, ಮತ್ತಿತರೆ ಭಾಷೆಗಳನ್ನು ಏಕ ಕಾಲದಲ್ಲಿ ಬಳಸಬಹುದು. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯವರು ತಮ್ಮ ಬಸ್ಸುಗಳ ವೇಳಾಪಟ್ಟಿಯನ್ನು ಅಂತರಜಾಲದಲ್ಲಿ ಹಲವು ಭಾಷೆಗಳಲ್ಲಿ ಏಕಕಾಲದಲ್ಲಿ ಪ್ರಕಟಿಸಬಹುದು. ಗಣಕ, ಅಂತರಜಾಲ, ಮೊಬೈಲ್ ಫೋನು, ಎಟಿಎಂ -ಹೀಗೆ ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳು ಇನ್ನು ಮುಂದೆ ಯುನಿಕೋಡ್ ವಿಧಾನದಲ್ಲೇ ಕೆಲಸ ಮಾಡಲಿವೆ. ಕನ್ನಡವನ್ನು ಯುನಿಕೋಡ್‌ನಲ್ಲಿ ಅಳವಡಿಸುವಾಗ ಪ್ರಾರಭದಲ್ಲಿ ಕೆಲವು ನ್ಯೂನತೆಗಳಿದ್ದವು. ಅವುಗಳನ್ನೆಲ್ಲ ಸರಿಪಡಿಸಲಾಗಿದೆ. ಕನ್ನಡ ಭಾಷೆಯನ್ನು ಯುನಿಕೋಡ್ ವಿಧಾನದಲ್ಲಿ ಬಳಸಲು ಈಗ ಇಚ್ಛಾಶಕ್ತಿಯ ಹೊರತಾಗಿ ಬೇರೆ ಯಾವ ತೊಡಕೂ ಇಲ್ಲ. ಇತ್ತೀಚೆಗೆ ಅಂತರಜಾಲದಲ್ಲಿ ತುಂಬ ಜನಪ್ರಿಯವಾಗುತ್ತಿರುವ ಬ್ಲಾಗಿಂಗ್‌ಗೆ ಎಲ್ಲರೂ ಬಳಸುತ್ತಿರುವುದು ಕನ್ನಡ ಯುನಿಕೋಡ್‌ನ್ನೇ. ಈಗಾಗಲೇ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಕನ್ನಡಿಗರು ಯುನಿಕೋಡ್ ಬಳಸಿ ಬ್ಲಾಗಿಂಗ್ ನಡೆಸುತ್ತಿದ್ದಾರೆ. ಕನ್ನಡ ಬ್ಲಾಗಿಗರ ಒಕ್ಕೂಟವೂ ಅಸ್ತಿತ್ವಕ್ಕೆ ಬಂದಿದೆ.</p>
<p><strong>ಮಾಹಿತಿ ಹೆದ್ದಾರಿಯಲ್ಲಿ ಕನ್ನಡದ ಗಾಡಿ</strong></p>
<p>ಅಂತರಜಾಲಕ್ಕೆ ಮಾಹಿತಿ ಹೆದ್ದಾರಿ (ಇನ್‌ಫೊರ್ಮೇಶನ್ ಸೂಪರ್ ಹೈವೇ) ಎಂಬ ಹೆಸರೂ ಇದೆ. ಈ ಮಾಹಿತಿ ಹೆದ್ದಾರಿಯಲ್ಲಿ ಕನ್ನಡದ ಗಾಡಿಗಳ ಪಯಣದ ಬಗ್ಗೆ ಒಂದು ಪಕ್ಷಿನೋಟ ನೋಡೋಣ.</p>
<p>ಅಂತರಜಾಲದಲ್ಲಿ ಕನ್ನಡದ ಬಗ್ಗೆ ಬರೆಯುವಾಗ ದತ್ತಾತ್ರೇಯ ಕುಲಕರ್ಣಿಯವರ “ಕನ್ನಡ ಸಾಹಿತ್ಯ ಪುಟ&#8221;ದಿಂದ ಆರಂಭಿಸಬೇಕು. ಸುಮಾರು ೧೯೯೪-೯೫ರಲ್ಲಿ ಕೆನಡಾದಲ್ಲಿ ವಿದ್ಯಾರ್ಥಿಯಾಗಿದ್ದ ಧಾರವಾಡದ ಕುಲಕರ್ಣಿಯವರು ಬಿಡುವಿನ ವೇಳೆಯಲ್ಲಿ ಪ್ರಾರಂಭಿಸಿದ್ದು ಕನ್ನಡ ಸಾಹಿತ್ಯ ಪುಟ. ಇದರಲ್ಲಿ ಕನ್ನಡ ಹಾಸ್ಯ, ಭಾವಗೀತೆ, ಭಕ್ತಿಗೀತೆ, ಪುಸ್ತಕಗಳ ಪಟ್ಟಿ, ಧ್ವನಿಸುರುಳಿಗಳ ಪಟ್ಟಿ, ಇತ್ಯಾದಿಗಳಿವೆ. ಕನ್ನಡ ಕಲಿಯಲು ಸಹಕಾರಿಯಾಗುವ ಒಂದೆರೆಡು ತಂತ್ರಾಂಶಗಳೂ ಇದ್ದವು. ಆದರೆ ಈ ತಾಣದಲ್ಲಿ ಎಲ್ಲ ಮಾಹಿತಿಗಳು ಇಂಗ್ಲಿಷ್ ಲಿಪಿಯಲ್ಲಿದ್ದವು. ಇಂಗ್ಲಿಷ್ ಭಾಷೆಯ ದೊಡ್ಡ ಮತ್ತು ಚಿಕ್ಕ ಅಕ್ಷರಗಳನ್ನು ಜಾಣ್ಮೆಯಿಂದ ಕನ್ನಡಕ್ಕೆ ಬಳಸಿಕೊಂಡದ್ದು ಇಲ್ಲಿನ ವಿಶೇಷ. ಉದಾಹರಣೆಗೆ ಕನ್ನಡ ಹಾಸ್ಯ ವಿಭಾಗದಲ್ಲಿನ ಒಂದು ತುಣುಕು:<br />
Q: rAmanu maradhindha keLage bidhdhanu, idhu yAva kAla?<br />
A: rAmanige ketta kAla<br />
( ಪ್ರ: ರಾಮನು ಮರದಿಂದ ಕೆಳಗೆ ಬಿದ್ದನು. ಇದು ಯಾವ ಕಾಲ?<br />
ಉ: ರಾಮನಿಗೆ ಕೆಟ್ಟ ಕಾಲ.)</p>
<p>ಕುಲಕರ್ಣಿಯವರು ಈ ತಾಣ ನಿರ್ಮಿಸಿದ ಕಾಲದಲ್ಲಿ ಅಂತರಜಾಲದಲ್ಲಿ ಕನ್ನಡ ಅಕ್ಷರಗಳ ಬಳಕೆ ಪ್ರಾರಂಭವಾಗಿರಲಿಲ್ಲ. ಆದರೂ ಕೆಲವು ಶಬ್ದಗಳನ್ನು, ಗುಂಡಿಗಳನ್ನು ಕನ್ನಡ ಲಿಪಿಯಲ್ಲಿ ಚಿತ್ರ ರೂಪದಲ್ಲಿ (ಗ್ರಾಫಿಕ್ಸ್) ಅವರು ಬಳಸಿದ್ದರು.</p>
<p>ಅಂತರಜಾಲದಲ್ಲಿ ಕನ್ನಡ ಬಳಕೆ ಆರಂಭವಾದುದು ೧೯೯೬ರ ದಶಂಬರ ತಿಂಗಳಲ್ಲಿ. ಡಾ| ಯು. ಬಿ. ಪವನಜ ಅವರು ಪ್ರಾರಂಭಿಸಿದ &#8220;ವಿಶ್ವ ಕನ್ನಡ&#8221; (<a href="http://www.vishvakannada.com" target="_blank">www.vishvakannada.com</a>) ಕನ್ನಡದ ಪ್ರಥಮ ಅಂತರಜಾಲ ಪತ್ರಿಕೆ. ಅವರು ಅದನ್ನು ಕನ್ನಡ ನಾಡಿನಿಂದ ದೂರ ಮುಂಬಯಿಯಲ್ಲಿ ಕುಳಿತು ಆರಂಭಿಸಿದರು. ಸುಮಾರು ಅದೇ ಸಮಯಕ್ಕೆ ಬೆಂಗಳೂರಿನಲ್ಲಿರುವ ಶ್ರೀ ಮುರಳೀಧರ ಪದಕಿ ಅವರೂ ತಮ್ಮದೊಂದು ಕನ್ನಡ ತಾಣ ನಿರ್ಮಿಸಿ ಅದರಲ್ಲಿ ಇತರ ಪತ್ರಿಕೆಗಳಿಂದ ಆರಿಸಿದ ಮುಖ್ಯ ಸುದ್ದಿಗಳನ್ನು ಪ್ರಕಟಿಸಲು ತೊಡಗಿದರು. ಅದೇ ತಿಂಗಳಲ್ಲಿ ಬೆಂಗಳೂರಿನ ಸಂಜೆ ಪತ್ರಿಕೆ &#8220;ಸಂಜೆವಾಣಿ&#8221;ಯೂ ಚಿತ್ರರೂಪದಲ್ಲಿ ಅಂತರಜಾಲವನ್ನು ಸೇರಿತು. ಈಗಂತೂ ನೂರಾರು ಕನ್ನಡ ತಾಣಗಳಿವೆ. ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳೂ ತಮ್ಮ ಅಂತರಜಾಲ ಆವೃತ್ತಿ ನಡೆಸುತ್ತಿವೆ.</p>
<p>ಕನ್ನಡ ಭಾಷೆಯಲ್ಲಿ ಅಂತರಜಾಲ ತಾಣ ನಿರ್ಮಿಸಲು ಮುಖ್ಯ ಸಮಸ್ಯೆ ಫಾಂಟ್‌ಗಳದ್ದು. ಕನ್ನಡ ಭಾಷೆಯಲ್ಲಿ ಅಂತರಜಾಲತಾಣವನ್ನು ನಿರ್ಮಿಸಲು ಕನ್ನಡ ಲಿಪಿಯ ಫಾಂಟ್‌ಗಳು ಅಗತ್ಯ. ಕನ್ನಡದ ಫಾಂಟ್‌ಗಳನ್ನು ಉಪಯೋಗಿಸಿ ನಿರ್ಮಿಸಿದ ತಾಣವನ್ನು ವೀಕ್ಷಿಸುವಾತನ ಗಣಕದಲ್ಲೂ ಅದೇ ಫಾಂಟ್ ಇರಬೇಕು. ತಾಣ ನಿರ್ಮಿಸಿದವರು ತಾಣದಲ್ಲೆ ಫಾಂಟ್‌ನ್ನು ಓದುಗರಿಗಾಗಿ ಪ್ರತಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ಕೊಟ್ಟಿರುತ್ತಾರೆ. ಓದುಗರು ತಮ್ಮ ಗಣಕದಲ್ಲಿ ಈ ಫಾಂಟ್‌ಗಳನ್ನು ಪ್ರತಿ ಮಾಡಿಕೊಂಡು ಅವುಗಳನ್ನು ಅನುಸ್ಥಾಪಿಸಿದ ನಂತರ ಈ ತಾಣಗಳ ವೀಕ್ಷಣೆ ನಡೆಸಬಹುದು. ಈ ರೀತಿಯ ವ್ಯವಸ್ಥೆ ಸ್ವಲ್ಪ ಹಳೆಯದು.  ಇನ್ನೊಂದು ವಿಧಾನವೆಂದರೆ <a href="http://en.wikipedia.org/wiki/Dynamic_fonts" target="_blank">ಡೈನಮಿಕ್ ಫಾಂಟ್‌</a>ಗಳ ಬಳಕೆ. ಈ ತಂತ್ರಜ್ಞಾನದಲ್ಲಿ ಅಂತರಜಾಲ ತಾಣ ವೀಕ್ಷಕ ತಂತ್ರಾಂಶವು (ಬ್ರೌಸರ್) ತಾಣದಿಂದ ಅಕ್ಷರಭಾಗಗಳ ಚೌಕಟ್ಟನ್ನು ಸೆಳೆದುಕೊಂಡು ಅಕ್ಷರರೂಪವನ್ನು ತಾನೆ ನಿರ್ಮಿಸಿಕೊಳ್ಳುತ್ತದೆ. ತಾಣವನ್ನು ವೀಕ್ಷಣೆಗೆ ತೆರೆದಾಗ ಆರಂಭದಲ್ಲಿ ಪುಟವು ಗೋಜಲಾಗಿ ಕಂಡು ಸ್ವಲ್ಪ ಸಮಯದಲ್ಲಿ ಕನ್ನಡ ಅಕ್ಷರಗಳು ಗುಂಡಗೆ ಮೂಡಿ ಬರುತ್ತವೆ. ಫಾಂಟ್‌ಗಳನ್ನು ತಮ್ಮ ಗಣಕಗಳಲ್ಲಿ ಪ್ರತಿ ಮಾಡಿಕೊಂಡು ಪ್ರತಿಷ್ಠ್ಠಾಪಿಸಬೇಕಾಗೂ ಇಲ್ಲ. ಕನ್ನಡದ ಮೊದಲ ಅಂತರಜಾಲ ಪತ್ರಿಕೆ “ವಿಶ್ವ ಕನ್ನಡ&#8221;ವು ಭಾರತೀಯ ಭಾಷೆಗಳಲ್ಲೆ ಮೊಟ್ಟ ಮೊದಲ ಬಾರಿಗೆ (೧೯೯೮ ಫೆಬ್ರುವರಿ) ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. ನಂತರ ಹಲವಾರು ಕನ್ನಡ ಜಾಲತಾಣಗಳು ಇದೇ ವಿಧಾನವನ್ನು ಬಳಸತೊಡಗಿದವು.</p>
<p>ಎಲ್ಲ ಕಾರ್ಯಾಚರಣೆಯ ವ್ಯವಸ್ಥೆಗಳು (operating system) ಯುನಿಕೋಡ್ ಬಳಸತೊಡಗಿದಾಗ ಈ ಯಾವ ಸುತ್ತುಬಳಸಿನ ಹಾದಿಗಳು ಅಗತ್ಯವಿಲ್ಲ. ಕನ್ನಡದ ಜಾಲತಾಣವನ್ನು ಯುನಿಕೋಡ್‌ನಲ್ಲಿ ತಯಾರಿಸಿದರೆ ಮುಗಿಯಿತು. ಕಾರ್ಯಾಚರಣೆಯ ವ್ಯವಸ್ಥೆಗೆ ಅದು ಕನ್ನಡ ಎಂದು ಅರಿವಾಗುವುದರಿಂದ ತನ್ನಲ್ಲಿರುವ ಕನ್ನಡ ಫಾಂಟ್‌ನಲ್ಲಿ ಅದನ್ನು ತೋರಿಸುತ್ತದೆ. ಇತ್ತೀಚೆಗೆ ಯುನಿಕೋಡ್ ವಿಧಾನದಲ್ಲಿ ಕನ್ನಡದ ಹಲವು ಜಾಲತಾಣಗಳು ಲಭ್ಯವಿವೆ. ಈಗಾಗಲೇ ವಿವರಿಸಿದಂತೆ ಯುನಿಕೋಡ್ ವಿಧಾನದಲ್ಲಿ ಇರುವ ಜಾಲತಾಣದ ಮಾಹಿತಿಯನ್ನು ಗೂಗ್ಲ್ ಬಳಸಿ ಹುಡುಕಬಹುದು. ಕನ್ನಡ ಲಿಪಿಯಲ್ಲಿ &#8220;ಬೇಂದ್ರೆ&#8221; ಎಂದು ಬೆರಳಚ್ಚು ಮಾಡಿ ಗೂಗ್ಲ್‌ನಲ್ಲಿ ಹುಡುಕಿದರೆ ಕನ್ನಡದ ವರಕವಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ. ರಾ. ಬೇಂದ್ರೆಯವರ ತಾಣಕ್ಕೆ ಕೊಂಡಿ ಸಿಗುತ್ತದೆ ಅದೇ ಇಂಗ್ಲೀಶಿನಲ್ಲಿ bendre ಎಂದು ಬೆರಳಚ್ಚಿಸಿ ಹುಡುಕಿದರೆ ಸೊನಾಲಿ ಬೇಂದ್ರೆ ಸಿಗುತ್ತಾಳೆ! ಇತ್ತೀಚೆಗೆ ಕನ್ನಡದ ಕೆಲವು ಪ್ರಮುಖ ಪತ್ರಿಕೆಗಳು ತಮ್ಮ ಜಾಲತಾಣವನ್ನು ಯುನಿಕೋಡ್‌ಗೆ ಬದಲಾಯಿಸಿದ್ದಾರೆ.</p>
<p>ಇತ್ತೀಚೆಗೆ ಬ್ಲಾಗಿಸುವಿಕೆ ತುಂಬ ಜನಪ್ರಿಯವಾಗುತ್ತಿದೆ. ಕನ್ನಡ ಬ್ಲಾಗಿಗರ ಒಕ್ಕೂಟಕ್ಕೆ ನಾಲ್ಕು ಸಾವಿರಕ್ಕೆ ಮೇಲ್ಪಟ್ಟು ಸದಸ್ಯರಿದ್ದಾರೆ. ಈ ಬ್ಲಾಗಿಸುವಿಕೆ ಸಾಧ್ಯವಾಗಿರುವುದು ಯುನಿಕೋಡ್‌ನಿಂದಾಗಿ. ಅಂತರಜಾಲದ ಮೂಲಕ ಒಬ್ಬರಿಗೊಬ್ಬರು ಸಂಪರ್ಕ ಕಲ್ಪಿಸಿ ತಮಗಿಷ್ಟವಾದ ವಿಷಯಗಳ ಬಗ್ಗೆ ಗುಂಪುಗಳನ್ನು ಕಟ್ಟಿಕೊಳ್ಳಲು ಇರುವ ಸವಲತ್ತು ಜಾಲತಾಣಗಳಾದ ಆರ್ಕುಟ್, ಫೇಸ್‌ಬುಕ್, ಚುಟುಕು ಬ್ಲಾಗಿಂಗ್‌ನ ಟ್ವಿಟ್ಟರ್ ಎಲ್ಲ ಕೆಲಸ ಮಾಡುವುದು ಯುನಿಕೋಡ್ ಮೂಲಕವೇ. ಕನ್ನಡದಲ್ಲಿ ಸಂದೇಶ ಕಳುಹಿಸಲು ಬಳಸುವ ಇಮೈಲ್ ಮತ್ತು ಮಾತುಕತೆ ನಡೆಸುವ ಸವಲತ್ತುಗಳು ಕೂಡ ಯುನಿಕೋಡ್ ಮೂಲಕವೇ ಕೆಲಸ ಮಾಡುತ್ತವೆ. ಯುನಿಕೋಡ್ ಬಳಸುವ ಮೂಲಕ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು, ಫ್ರೆಂಚ್, ಇತ್ಯಾದಿ ಪ್ರಪಂಚದ ಎಲ್ಲ ಭಾಷೆಗಳಲ್ಲಿ ಏಕಕಾಲದಲ್ಲಿ ವ್ಯವಹಾರ ಮಾಡಬಹುದು.</p>
<p>ಇಷ್ಟೆಲ್ಲ ಸೌಲಭ್ಯಗಳಿದ್ದರೂ ಪತ್ರಿಕೆಗಳವರು ಮತ್ತಿತರರು ಯಾಕೆ ಯುನಿಕೋಡ್ ಬಳಸುತ್ತಿಲ್ಲ ಎಂದು ಆಲೋಚಿಸುತ್ತಿದ್ದೀರಾ? ಬಹಳ ಮುಖ್ಯವಾದ ಕಾರಣ ಪುಟವಿನ್ಯಾಸದ ತಂತ್ರಾಂಶಗಳಾದ ಪೇಜ್‌ಮೇಕರ್, ಇನ್‌ಡಿಸೈನ್, ಕ್ವಾರ್ಕ್‌ಗಳಲ್ಲಿ ಭಾರತೀಯ ಭಾಷೆಯ ಯುನಿಕೋಡ್ ಸವಲತ್ತನ್ನು ನೀಡಿಲ್ಲ. ವಿಂಡೋಸ್ ಎಕ್ಸ್‌ಪಿ ಮತ್ತು ನಂತರದ ಆವೃತ್ತಿಗಳಲ್ಲಿ ಮೈಕ್ರೋಸಾಫ್ಟ್ ವರ್ಡ್ ಎಕ್ಸ್‌ಪಿ  ಮತ್ತು ನಂತರದ ಆವೃತ್ತಿ (೨೦೦೩/೨೦೦೭/೨೦೧೦) ಅಥವಾ ಓಪನ್ ಆಫೀಸ್ ಬಳಸಿ ಕನ್ನಡ ಯುನಿಕೋಡ್ ಬಳಸಬಹುದು. ಲಿನಕ್ಸ್‌ನಲ್ಲೂ ಓಪನ್ ಆಫೀಸ್ ಬಳಸಿ ಕನ್ನಡ ಯುನಿಕೋಡ್ ಬಳಸಬಹುದು. ಆದರೆ ವರ್ಡ್ ಆಗಲಿ ಓಪನ್ ಆಫೀಸ್ ಆಗಲಿ ಉತ್ತಮ ಮುದ್ರಣಕ್ಕೆ ಬಳಸಬಲ್ಲ ಡಿಟಿಪಿ ತಂತ್ರಾಂಶಗಳಲ್ಲ. ಆದರೂ ಸಾಧಾರಣ ಮಟ್ಟದ ಪುಸ್ತಕಗಳ ತಯಾರಿಗೆ ಇವು ಸಾಕು. ಲಿನಕ್ಸ್‌ನಲ್ಲಿ ಕಾರ್ಯನಿರ್ವಹಿಸುವ <a href="http://www.scribus.net/canvas/Scribus" target="_blank">ಸ್ಕ್ರೈಬಸ್</a> ಎಂಬ ತಂತ್ರಾಂಶವನ್ನು ಬಳಸಿ ಕನ್ನಡ ಯುನಿಕೋಡ್ ವಿಧಾನದಲ್ಲಿ ಡಿಟಿಪಿ ಮಾಡಲು ಸಾಧ್ಯ. ಇತ್ತೀಚೆಗೆ ಸ್ಕ್ರೈಬಸ್‌ನ ವಿಂಡೋಸ್ ಆವೃತ್ತಿ ಸಿದ್ಧವಾಗಿದೆ. ಆದರೆ ಅದರಲ್ಲಿ ಕನ್ನಡ ಯುನಿಕೋಡ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅಂದರೆ ಯುನಿಕೋಡ್ ವಿಧಾನ ಬಳಸಿ ಕನ್ನಡ ಪುಸ್ತಕ ತಯಾರಿ ಮಾಡಬಹುದು. ಆದರೆ ಯಾರೂ ಮಾಡುತ್ತಿಲ್ಲ. ಯಾಕೆ? ಕನ್ನಡ ಯುನಿಕೋಡ್ ಬಳಸಲು<a href="http://www.microsoft.com/typography/WhatIsOpenType.mspx" target="_blank"> ಓಪನ್‌ಟೈಪ್ ಫಾಂಟ್</a> ಬೇಕು. ಉತ್ತಮ ಓಪನ್‌ಟೈಪ್ ಫಾಂಟ್‌ಗಳು ಕನ್ನಡಕ್ಕೆ ಲಭ್ಯವಿಲ್ಲ. ಇದರಿಂದಾಗಿ ಯಾರೂ ಡಿಟಿಪಿ ಮಾಡಲು ಕನ್ನಡ ಯುನಿಕೋಡ್‌ನ್ನು ಬಳಸುತ್ತಿಲ್ಲ. ಟ್ರೂಟೈಪ್ ಫಾಂಟ್‌ಗಳಲ್ಲಿ ಲಭ್ಯವಿರುವಂತೆ ನೂರಾರು ಓಪನ್‌ಟೈಪ್ ಫಾಂಟ್‌ಗಳು ಕನ್ನಡಕ್ಕೆ ಬೇಕಾಗಿವೆ.</p>
<p><strong>ವಿದ್ಯುದೋಲೆ ಬಂದಿದೆ ಪದುಮನಾಭನದು</strong></p>
<p>ಗಣಕ ಮತ್ತು ಅಂತರಜಾಲವನ್ನು ಬಳಸಿ ವಿ-ಪತ್ರ ಕಳುಹಿಸುವುದಕ್ಕೆ ಇಮೈಲ್ ಎನ್ನುತ್ತಾರೆ. ಕನ್ನಡ ಭಾಷೆಯಲ್ಲಿ ವಿದ್ಯುದೋಲೆ (ಇಮೈಲ್, ವಿ-ಅಂಚೆ, ಮಿಂಚೆ) ಕಳುಹಿಸಬಹುದು ಎಂಬುದು ಬಹುಜನರಿಗೆ ತಿಳಿದೇ ಇಲ್ಲ. ಇದನ್ನು ಹಲವು ವಿಧಾನಗಳಲ್ಲಿ ಮಾಡಬಹುದು. ಹಳೆಯ ವಿಧಾನವೆಂದರೆ ಕನ್ನಡದಲ್ಲಿ ಬೆರಳಚ್ಚು ಮಾಡಿ ಅದನ್ನು ಚಿತ್ರ ರೂಪದಲ್ಲಿ (ಗ್ರಾಫಿಕ್ಸ್) ಕಳುಹಿಸುವುದು. ಸ್ವಲ್ಪ ಮುಂದುವರಿದ ವಿಧಾನವೆಂದರೆ ಕನ್ನಡದ ಯಾವುದಾದರೂ ಬೆರಳಚ್ಚು ತಂತ್ರಾಂಶವನ್ನು ಬಳಸಿ ಕನ್ನಡದಲ್ಲಿ ಬೆರಳಚ್ಚು ಮಾಡಿ ಪತ್ರವನ್ನು ಕಡತ ರೂಪದಲ್ಲಿ ಲಗತ್ತಿಸಿ (ಅಟ್ಯಾಚ್‌ಮೆಂಟ್) ಕಳುಹಿಸುವುದು. ಅಥವಾ ಔಟ್‌ಲುಕ್ ಮಾದರಿಯ ವಿ-ಅಂಚೆಯ ತಂತ್ರಾಂಶದಲ್ಲಿ ನೇರವಾಗಿ ಬರಹ, ನುಡಿ ಮಾದರಿಯ ಬೆರಳಚ್ಚು ತಂತ್ರಾಶವನ್ನು ಬಳಸಿ ಕನ್ನಡದಲ್ಲಿ ಬೆರಳಚ್ಚು ಮಾಡಿ ಕಳುಹಿಸುವುದು. ಈ ಎರಡು ವಿಧಾನಗಳ ಮುಖ್ಯ ತೊಂದರೆ ಎಂದರೆ ಪತ್ರವನ್ನು ಓದುವಾತನ ಗಣಕದಲ್ಲಿ ಅದೇ ತಂತ್ರಾಂಶ ಅಥವಾ ಪತ್ರ ಕಳುಹಿಸಿದಾತ ಬಳಸಿದ ಫಾಂಟ್ ಇರತಕ್ಕದ್ದು. ಅಂದರೆ ನಾನು ಬರಹ ಪಾಂಟ್ ಬಳಸಿ ಪತ್ರವನ್ನು ಜಪಾನಿನಲ್ಲಿರುವ ನನ್ನ ಸ್ನೇಹಿತನಿಗೆ ಕಳುಹಿಸಿದರೆ ಆತನಲ್ಲೂ ಬರಹ ಫಾಂಟ್ ಇರತಕ್ಕದ್ದು. ಯಾವ ಸಮಸ್ಯೆಯೇ ಇಲ್ಲದ ವಿಧಾನವೆಂದರೆ ಯುನಿಕೋಡ್ ವಿಧಾನದಲ್ಲಿ ಪತ್ರ ಕಳುಹಿಸುವುದು. ಆದರೆ ನಿಮ್ಮಲ್ಲಿ ಮತ್ತು ಪತ್ರ ಸ್ವೀಕರಿಸುವವನಲ್ಲಿ ಯುನಿಕೋಡ್ ಬೆಂಬಲಿತ ಕಾರ್ಯಾಚರಣೆಯ ವ್ಯವಸ್ಥೆ ಇರತಕ್ಕದ್ದು.</p>
<p>ಇದೇ ಮಾದರಿಯಲ್ಲಿ ಅಂತರಜಾಲವನ್ನು ಬಳಸಿ ನೇರವಾಗಿ ಮಾತುಕತೆ ನಡೆಸಬಹುದು. ಇದಕ್ಕೆ ಬಳಸುವುದು ಚಾಟ್ ಸಾಫ್ಟ್‌ವೇರ್‌ಗಳು (ಉದಾ: ಯಾಹೂ, ಎಂಎಸ್‌ಎನ್, ಜಿಟಾಕ್, ಇತ್ಯಾದಿ). ಈ ಯಾವುದೇ ತಂತ್ರಾಂಶದಲ್ಲಿ ಕನ್ನಡದ ಫಾಂಟ್‌ನ್ನು ಆಯ್ಕೆ ಮಾಡಿ, ಅದಕ್ಕೆ ಸರಿಹೊಂದುವ ಕನ್ನಡದ ಕೀಲಿಮಣೆಯ ತಂತ್ರಾಂಶವನ್ನು ಬಳಸಿ ಕನ್ನಡದಲ್ಲಿ ಮಾತುಕತೆ ನಡೆಸಬಹುದು. ಇದು ಹಳೆಯ ವಿಧಾನ. ಯುನಿಕೋಡ್ ಬೆಂಬಲಿತ ಕಾರ್ಯಾಚರಣೆಯ ವ್ಯವಸ್ಥೆ ಇದ್ದಲ್ಲಿ ನೇರವಾಗಿ ಕನ್ನಡ ಯುನಿಕೋಡ್ ಬಳಸಿ ಚಾಟ್ ಮಾಡಬಹುದು. ಈಗೀಗ ಬಹುಮಂದಿ ಹಾಗೆಯೇ ಮಾಡುತ್ತಿದ್ದಾರೆ.</p>
<p><strong>ಮಾಹಿತಿ ತಂತ್ರಜ್ಞಾನ, ಶಿಕ್ಷಣ ಮತ್ತು ಕನ್ನಡ</strong></p>
<p>ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂಬ ಘೋಷಣೆ ತುಂಬ ಹಳೆಯದು ಮತ್ತು ಕ್ಲೀಷೆಯಾಗಿದೆ. ಆದರೂ ಶಿಕ್ಷಣದಲ್ಲಿ ಗಣಕದ ಬಳಕೆ ಬಗ್ಗೆ ನಾವು ಗಮನ ಹರಿಸಲೇಬೇಕಾಗಿದೆ. ಅದರಲ್ಲೂ ಮುಖ್ಯವಾಗಿ ಕನ್ನಡ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಬಂದಾಗ ಹೇಗೆ ಮಾಹಿತಿ ತಂತ್ರಜ್ಞಾನದ ಬಳಕೆ ಮಾಡಬಹುದು ಎಂಬುದನ್ನು ನೋಡೋಣ.</p>
<p>ಈಗೊಂದು ಉದಾಹರಣೆ. ಪುಟ್ಟ ಹುಡುಗಿಯೊಬ್ಬಳು ಗಣಕದ ಪರದೆಯ ಮೇಲೆ ಮೂಡಿಬಂದ ಕನ್ನಡದ &#8220;ಅ&#8221; ಎಂಬ ಅಕ್ಷರದ ತುಂಡುಗಳನ್ನು ಸರಿಯಾಗಿ ಜೋಡಿಸುತ್ತಿದ್ದಾಳೆ. ಅಕ್ಷರವನ್ನು ಪೂರ್ತಿಯಾಗಿ ಜೋಡಿಸಿದಾಗ ಶಾಬ್ಬಾಸ್ ಎಂಬ ಧ್ವನಿ ಕೇಳಿಬರುತ್ತದೆ. ಈಗ &#8220;ಅ&#8221; ಅಕ್ಷರದ ಕೆಳಗೆ ಮೂಡಿಬಂದಿರುವ ಸ್ಪೀಕರಿನ ಚಿತ್ರದ ಮೇಲೆ ಮೌಸ್‌ನಿಂದ ಕ್ಲಿಕ್ ಮಾಡಿದಾಗ ಗಣಕದ ಸ್ಪೀಕರಿನಿಂದ &#8220;ಅ&#8221; ಎನ್ನುವ ಅಕ್ಷರದ ಉಚ್ಛಾರಣೆ ಕೇಳಿಬರುತ್ತದೆ. ಜೊತೆಗೆ &#8220;ಅ&#8221; ಅಕ್ಷರವನ್ನು ಬರೆಯುವ ರೀತಿಯನ್ನು ಅನಿಮೇಶನ್ ವಿಧಾನದಲ್ಲಿ ಗಣಕದ ಪರದೆಯ ಮೇಲೆ ಮೂಡಿಸಲಾಗಿದೆ. ಪಕ್ಕದಲ್ಲೇ &#8220;ಅ&#8221; ಅಕ್ಷರದಿಂದ ಆರಂಭವಾಗುವ &#8220;ಅಗಸ&#8221; ಎನ್ನುವ ಪದ ಮತ್ತು ಅಗಸನ ಚಿತ್ರ ಮೂಡಿ ಬಂದಿವೆ. &#8220;ಅಗಸ&#8221; ಎನ್ನುವ ಪದದ ಮೇಲೆ ಮೌಸ್‌ನಿಂದ ಕ್ಲಿಕ್ ಮಾಡಿದಾಗ ಗಣಕದ ಸ್ಪೀಕರಿನಿಂದ &#8220;ಅಗಸ&#8221; ಎನ್ನುವ ಪದದ ಉಚ್ಛಾರ ಕೇಳಿಸುತ್ತದೆ. ನೀವು ಈಗಾಗಲೇ ಗಮನಿಸಿರುವಂತೆ ಆ ಹುಡುಗಿ ಗಣಕದಲ್ಲಿ ಆಟವೊಂದನ್ನು ಆಡುವ ಮೂಲಕ ಕನ್ನಡ ಅಕ್ಷರಗಳನ್ನು ಕಲಿಯುತ್ತಿದ್ದಾಳೆ. ಇಲ್ಲಿ ವಿವರಿಸಿರುವುದು &#8220;ಕನ್ನಡ ಕಲಿ&#8221; ಎಂಬ ತಂತ್ರಾಂಶ-ಆಟವನ್ನು.<del> ಇದನ್ನು vishvakannada.com/Products ತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.</del></p>
<p>ಗಣಕಾಧಾರಿತ ಶಿಕ್ಷಣದಲ್ಲಿ ಇತ್ತೀಚಿಗೆ ತುಂಬ ಕೇಳಿ ಬರುತ್ತಿರುವ ಪದ  edutainment.  ಇದು education ಮತ್ತು entertainment  ಎಂಬ ಪದಗಳ ಸಂಕ್ಷಿಪ್ತ ರೂಪ. ಕಲಿಕೆ ಮತ್ತು ಮನರಂಜನೆಯನ್ನು ಜೊತೆ ಜೊತೆಗೆ ನೀಡುವುದೇ ಇದರ ವೈಶಿಷ್ಟ್ಯ. ಶಿಕ್ಷಣವು ಮನರಂಜನಾತ್ಮಕವಾಗಿರಲು ಇದು ಸಹಾಯ ಮಾಡುತ್ತದೆ. ಗಣಕಗಳಲ್ಲಿ ಆಟ ಆಡುವದರ ಮೂಲಕ ಕಲಿಯುವುದನ್ನು ಕಲಿಕಾರಂಜನೆ ಎನ್ನಬಹುದು.</p>
<p>ಕನ್ನಡದ ವಿಷಯಕ್ಕೆ ಬಂದಾಗ ಶಿಕ್ಷಣದಲ್ಲಿ ಗಣಕಗಳ ಬಳಕೆ ಮೂರು ರೀತಿಯಲ್ಲಿ ಆಗಬೇಕಾಗಿದೆ. ಮೊದಲನೆಯದಾಗಿ ಗಣಕ ಎಂದರೆ ಏನು ಎಂಬುದಾಗಿ ಕನ್ನಡದಲ್ಲಿ ತಿಳಿಸುವುದು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಇದನ್ನು ಮಾಹಿತಿ ಸಿಂಧು ಕಾರ್ಯಕ್ರಮದಡಿ ಮಾಡಲಾಗುತ್ತಿದೆ. ಎರಡನೆಯದಾಗಿ ವಿeನ, ಗಣಿತ, ಕನ್ನಡ, ಇತ್ಯಾದಿ ವಿಷಯಗಳನ್ನು ಗಣಕ ಮೂಲಕ ಕಲಿಸುವುದು. ಗಣಕಗಳಿಗೆ ಮಾತ್ರವೇ ಸಾಧ್ಯವಿರುವ ಬಹುಮಾಧ್ಯಮ (ಮಲ್ಟಿಮೀಡಿಯ) ಮತ್ತು ಚಿತ್ರಸಂಚಲನೆ (ಅನಿಮೇಶನ್) ಇಲ್ಲಿ ಸಹಾಯಕ್ಕೆ ಬರುತ್ತದೆ. <a href="http://www.azimpremjifoundation.org/e-resources-list.html" target="_blank">ಅಝೀಮ್ ಪ್ರೇಂಜಿ ಫೌಂಡೇಶನ್</a> ಇದನ್ನು ಮಾಡುತ್ತಿದೆ. ಮೂರನೆಯ ಅಂಗ ಕಂಪ್ಯೂಟರ್ ಪ್ರೋಗ್ರಾಮ್ಮಿಂಗ್ ಹಾಗೂ ತನ್ಮೂಲಕ ತರ್ಕ ಮತ್ತು ಗಣಿತಗಳಲ್ಲಿ ಪರಿಣತಿಯನ್ನು ನಮ್ಮ ಮಾತೃ ಭಾಷೆಯಲ್ಲಿ ಹೊಂದುವುದು. ಈ ಮೂರನೆ ವಿಧಾನವನ್ನು ಭಾರತದ ಯಾವ ಭಾಷೆಯಲ್ಲೂ ಬಳಸುತ್ತಿಲ್ಲ.</p>
<p>ಪ್ರಪಂಚಾದ್ಯಂತ ಶಾಲೆಗಳಲ್ಲಿ ೫ರಿಂದ ೮ನೇ ತರಗತಿಗಳಿಗೆ ಕಲಿಸುವುದು ಲೋಗೋ (LOGO) ಎಂಬ ಮಕ್ಕಳಿಗಾಗಿಯೇ ಸಿದ್ಧವಾಗಿರುವ ಪ್ರೋಗ್ರಾಮ್ಮಿಂಗ್ ಲಾಂಗ್ವೇಜ್. ಇದನ್ನು ಉಪಯೋಗಿಸಿ ಮಕ್ಕಳು ಕಂಪ್ಯೂಟರ್‌ನಲ್ಲಿ ಪ್ರೋಗ್ರಾಮ್ಮಿಂಗ್‌ನ ಪ್ರಮುಖ ಅಂಶಗಳನ್ನು ಕಲಿಯುತ್ತಾರೆ. ಹಾಗೆಂದು ಲೋಗೋವನ್ನು ಮಕ್ಕಳು ಮಾತ್ರ ಉಪಯೋಗಿಸಬೇಕಾಗಿಲ್ಲ. ಕಂಪ್ಯೂಟರ್ ಪ್ರೋಗ್ರಾಮ್ಮಿಂಗ್‌ನ ಮೂಲ ಸಿದ್ಧಾಂತಗಳನ್ನು ಕಲಿಯಲಿಚ್ಛಿಸುವ ಯಾರು ಬೇಕಾದರೂ ಬಳಸಬಹುದು. ಭಾರತದಲ್ಲೂ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲೀಷ್ ಲೋಗೋವನ್ನು ಕಲಿಸಲಾಗುತ್ತಿದೆ. ಇದು ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗಾಯಿತು. ಕನ್ನಡ ಮಾಧ್ಯಮ ಶಾಲೆಗಳ ಗತಿಯೇನು? ಗಣಕ ಶಿಕ್ಷಣದ ನೆಪದಲ್ಲಿ ಇಂಗ್ಲೀಶನ್ನು ಹಿತ್ತಿಲ ಬಾಗಿಲಿನಿಂದ ತರಬಾರದು.</p>
<p>ಭಾರತೀಯ ಭಾಷೆಗಳಲ್ಲೇ ಪ್ರಪ್ರಥಮ ಬಾರಿಗೆ ಕನ್ನಡ ಭಾಷೆಯಲ್ಲಿ ಲೋಗೋವನ್ನು ತಯಾರಿಸಲಾಗಿದೆ. ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಇನ್ನು ಮುಂದೆ ಕೀಳರಿಮೆಯಿಂದ ಬಳಲಬೇಕಾಗಿಲ್ಲ. ಪ್ರಾಥಮಿಕ ಶಾಲೆಯ ಪ್ರಾಯದಲ್ಲಿ ಮಕ್ಕಳಲ್ಲಿ ತರ್ಕಬದ್ಧವಾಗಿ ಯೋಚಿಸುವ ಶಕ್ತಿಯ ಬೆಳವಣಿಗೆಯಾಗುತ್ತದೆ. ಈ ಪ್ರಾಯದಲ್ಲಿ ಕನ್ನಡ ಲೋಗೋದಲ್ಲಿ ಪ್ರೋಗ್ರಾಮ್ಮಿಂಗ್ ಮಾಡುವ ಮೂಲಕ ಮಕ್ಕಳು ಗಣಿತ ಮತ್ತು ತರ್ಕಗಳಲ್ಲಿ ಪ್ರಾವೀಣ್ಯವನ್ನು ಹೊಂದಬಹುದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರವಲ್ಲ ನಿಜಜೀವನದಲ್ಲೂ ಮುಂದೆ ಬರಲು ಇವೆರಡು ಬಹುಮೂಲ್ಯ ಪೂರಕಗಳು. ನಮಗೆ ಬೇಕಾದ ತಂತ್ರಾಂಶ (ಸಾಫ್ಟ್‌ವೇರ್) ಗಳನ್ನು ನಮ್ಮ ಭಾಷೆಯಲ್ಲೇ ತಯಾರಿಸಲು ನಮ್ಮ ಭಾಷೆಯಲ್ಲೇ ತರ್ಕ ಮತ್ತು ವಿನ್ಯಾಸಗಳ ಅಭಿವೃದ್ಧಿಗೆ ಕೂಡ ಇವು ಸಹಾಯ ಮಾಡುವುವು.  ಕನ್ನಡ ಲೋಗೋ ಮೂಲಕ ಮೂಲ ಪರಿಣತಿಯನ್ನು ಮೈಗೂಡಿಸಿಕೊಂಡ ಮಕ್ಕಳು ದೊಡ್ಡವರಾದ ನಂತರ ಕನ್ನಡ ಭಾಷೆಯ ತಂತ್ರಾಂಶ ರಚಿಸಿ ರಾಜ್ಯ/ಭಾಷೆಯ ಪ್ರಗತಿಗೆ ಗಣನೀಯ ಕಾಣಿಕೆ ನೀಡಬಲ್ಲರು. ಕನ್ನಡ ತಯಾರಾಗಿ ಹಲವು ವರ್ಷಗಳೇ ಆಗಿವೆ. ಕರ್ನಾಟಕ ಸರಕಾರದ ಕಂಪ್ಯೂಟರ್ ಕನ್ನಡ ಕ್ರಿಯಾ ಯೋಜನೆಯಲ್ಲಿ ಇದನ್ನು ಅಳವಡಿಸಲಾಗಿದೆ ಕೂಡ. ಹೀಗಿದ್ದೂ ಇಚ್ಛಾಶಕ್ತಿಯ ಕೊರತೆಯಿಂದ ಕನ್ನಡ ಲೋಗೋ ಇನ್ನೂ ಕರ್ನಾಟಕದ ಶಾಲಾ ಮಕ್ಕಳಿಗೆ ತಲುಪಿಲ್ಲ. ಕನ್ನಡ ಲೋಗೋ ತಂತ್ರಾಂಶಕ್ಕೆ ೨೦೦೬ನೆಯ ಇಸವಿಯ ಪ್ರತಿಷ್ಠಿತ &#8220;<a href="http://www.manthanaward.org/section_full_story.asp?id=516" target="_blank">ಮಂಥನ ಪ್ರಶಸ್ತಿ</a>&#8221; ನೀಡಲಾಗಿದೆ. ಕನ್ನಡ ಲೋಗೋವನ್ನು <a href="http://vishvakannada.com/kannadalogo/" target="_blank">www.vishvakannada.com/kannadalogo</a> ತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.</p>
<p><strong>ಅಜಗರದಂದದಿ ನಿದ್ರೆಯ ಭಜಕರಿಗೆ</strong></p>
<p>ಒಂದು ಸಂವಾದ:</p>
<p>“ಗಣಕದಲ್ಲಿ ಕನ್ನಡ ಸಾಧ್ಯವಿದೆ ಎಂದು ನಿಮಗೆ ಗೊತ್ತಿದೆಯೆ?”<br />
“ಯಾಕೆ ಗೊತ್ತಿಲ್ಲ? ನಾನು ಕಂಪ್ಯೂಟರ್‌ನಲ್ಲಿ ಈಗಾಗಲೇ ಕನ್ನಡ ಬಳಸುತ್ತಿದ್ದೇನೆ. ನನ್ನನ್ನು ಏನೂ ಅರಿಯದವನು ಅಂದುಕೊಂಡಿದ್ದೀರಾ”<br />
“ತುಂಬ ಸಂತೋಷ. ನೀವು ಗಣಕದಲ್ಲಿ ಕನ್ನಡವನ್ನು ಯಾವ ರೀತಿ ಬಳಸುತ್ತಿದ್ದೀರಾ? ಕನ್ನಡದಲ್ಲಿ ಏನೇನು ಮಾಡುತ್ತಿದ್ದೀರಾ?”<br />
“ಬರಹ, ನುಡಿ ಸಾಫ್ಟ್‌ವೇರ್‌ಗಳನ್ನು ಬಳಸಿ ಕನ್ನಡ ಲೇಖನ ಸಿದ್ಧಮಾಡಬಲ್ಲೆ ಗೊತ್ತಾ?”<br />
“ಅಷ್ಟೆನಾ?ಮತ್ತೇನೇನು ಮಾಡಬಲ್ಲಿರಿ?”<br />
“ಅಷ್ಟು ಮಾಡಿದರೆ ಸಾಲದೆ? ಇನ್ನೇನಾದರೂ ಸಾಧ್ಯವಿದೆಯೇ?”<br />
“ಯಾಕಿಲ್ಲ? ನಿಮ್ಮ ಎಲ್ಲ ಲೇಖನಗಳ ದತ್ತಸಂಚಯ ಅಂದರೆ ಡಾಟಾಬೇಸ್ ಮಾಡಿದ್ದೀರಾ? ನಿಮ್ಮ ಮನೆಯಲ್ಲಿರುವ ಕನ್ನಡ ಸಹಿತ ಎಲ್ಲ ಭಾರತೀಯ ಭಾಷೆಗಳ ಪುಸ್ತಕಗಳ ಯಾದಿ ಮಾಡಿದ್ದೀರಾ? ಹೋಗಲಿ. ಯಾವುದೋ ಒಂದು ವಿಷಯದ ಬಗ್ಗೆ ನೀವು ಬಳಸಿದ ಪದಗುಚ್ಛ ನಿಮ್ಮ ಯಾವುದೋ ಒಂದು ಲೇಖನದಲ್ಲಿ ಅಡಗಿದೆ. ಅದನ್ನು ಹುಡುಕಿ ತೆಗೆಯಬಲ್ಲಿರಾ?”<br />
“ಇವೆಲ್ಲ ಕನ್ನಡದಲ್ಲಿ ಸಾಧ್ಯವೇ? ನನಗೆ ಗೊತ್ತೇ ಇರಲಿಲ್ಲ”<br />
“ನೋಡಿದಿರಾ? ಗಣಕದಲ್ಲಿ ಕನ್ನಡದಲ್ಲಿ ಬೆರಳಚ್ಚು ಮಾಡುವುದನ್ನೇ ನೀವು ಕಂಪ್ಯೂಟರ್‌ನಲ್ಲಿ ಕನ್ನಡ ಅಂದುಕೊಂಡಿದ್ದೀರಾ. ಗಣಕದಲ್ಲಿ ಕನ್ನಡ ಎಂದರೆ ಅಷ್ಟು ಮಾತ್ರವಲ್ಲ. ಇಂಗ್ಲೀಶಿನಲ್ಲಿ ಏನೇನು ಸಾದ್ಯವೋ, ಅವೆಲ್ಲವೂ ಕನ್ನಡದಲ್ಲಿ ಸಾಧ್ಯ ಗೊತ್ತಾ?”<br />
“ಇಲ್ಲ. ಸ್ವಲ್ಪ ತಿಳಿಸುತ್ತೀರಾ”</p>
<p>ಇದೊಂದು ಕಾಲ್ಪನಿಕ ಸಂವಾದವಾಗಬೇಕಾಗಿಲ್ಲ. ಬಹುಮಂದಿ ಕನ್ನಡಿಗರು ಗಣಕದಲ್ಲಿ ಕನ್ನಡ ಬಳಕೆ ಎಂದರೆ ನುಡಿ ಅಥವಾ ಬರಹ ತಂತ್ರಾಂಶ (sಸಾಫ್ಟ್‌ವೇರ್) ಬಳಸಿ ಬೆರಳಚ್ಚು ಮಾಡುವುದು ಎಂದೇ ತಿಳಿದುಕೊಂಡಿದ್ದಾರೆ. ಈ ತಪ್ಪು ಅಭಿಪ್ರಾಯವನ್ನು ತೊಡೆದು ಹಾಕಿ “ಹೊಸತು ಕಿನ್ನರಿಯಲಿ ನಿನ್ನ ಹಳೆಯ ಹಾಡನುಕ್ಕಿಸು&#8221;.</p>
<p><strong>ಸರಕಾರದ ಹೊಣೆ</strong></p>
<p>ಈ ದಿಸೆಯಲ್ಲಿ ಸರಕಾರ ಮಾಡಬೇಕಾದ ಕಾರ್ಯಗಳೇನು? ಅವುಗಳಲ್ಲಿ ಪ್ರಮುಖವಾದ ಕೆಲವು ಈ ರೀತಿ ಇವೆ &#8211; ಕನ್ನಡಕ್ಕೆ ಯುನಿಕೋಡ್ ಮಾನಕವನ್ನು ಶಿಷ್ಟತೆ ಎಂಬುದಾಗಿ ಪ್ರಕಟಿಸುವುದು. ಕರ್ನಾಟಕ ಸರಕಾರದ ಗಣಕೀಕರಣದ ಎಲ್ಲ ಕೆಲಸಗಳು ಮತ್ತು ಅಂತರಜಾಲ ತಾಣಗಳು ಯುನಿಕೋಡ್‌ನಲ್ಲೇ ಇರಬೇಕು ಎಂದು ಸುತ್ತೋಲೆ ಹೊರಡಿಸುವುದು. ಎಲ್ಲ ಪೊಬೈಲ್ ಫೋನು ತಯಾರಕರುಗಳಿಗೆ ಕನ್ನಡ ಯುನಿಕೋಡ್ ಅಳವಡಿಸಲು ನಿರ್ದೇಶಿಸುವುದು. ಯುನಿಕೋಡ್ ಕನ್ಸೋರ್ಶಿಯಂಗೆ ಕನ್ನಡ ಲಿಪಿ ಹಾಗೂ ಈ ಲಿಪಿಯಲ್ಲಿ ಅಳವಡಿಸಬೇಕಾಗಿರುವ ಕನ್ನಡ, ತುಳು, ಕೊಡವ, ಕೊಂಕಣಿ, ಬ್ಯಾರಿ, ಇತ್ಯಾದಿ ಭಾಷೆಗಳ ಬಗ್ಗೆ ಸಲಹೆ ನೀಡಲು ಒಂದು ಸ್ಥಾನಿಕ ಸಮಿತಿಯ ರಚನೆ. ಕನ್ನಡಕ್ಕೆ ಅತೀ ಅಗತ್ಯವಿರುವ ಕೆಲವು ಉತ್ತಮ ಗುಣಮಟ್ಟದ ಕನ್ನಡ ಲಿಪಿಯ ಯುನಿಕೋಡ್ ಬೆಂಬಲಿತ ಓಪನ್‌ಟೈಪ್ ಫಾಂಟ್‌ಗಳನ್ನು ತಯಾರಿಸಿ ಉಚಿತವಾಗಿ ಹಂಚುವುದು. ಡಿಟಿಪಿಗೆ ಸಂಬಂಧಿತ ಉಚಿತ ಹಾಗೂ ಮುಕ್ತ ತಂತ್ರಾಂಶಗಳಲ್ಲಿ ಕನ್ನಡ ಓಪನ್‌ಟೈಪ್ ಫಾಂಟ್‌ಗಳನ್ನು ಸರಿಪಡಿಸುವುದು.</p>
<p><strong>ಕನ್ನಡ ತಂತ್ರಾಂಶ ಸಲಹಾ ಸಮಿತಿ</strong></p>
<p>ಕರ್ನಾಟಕ ಸರಕಾರವು ಕನ್ನಡ ತಂತ್ರಾಂಶ ಸಮಿತಿಯನ್ನು ಸ್ಥಾಪಿಸಿದೆ (೨೦೦೮). ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ <a href="http://en.wikipedia.org/wiki/K._Chidananda_Gowda" target="_blank">ಪ್ರೊ| ಚಿದಾನಂದ ಗೌಡರು </a>ಇದರು ಅಧ್ಯಕ್ಷರು. ಈ ಸಮಿತಿಯು ಈಗಾಗಲೆ (ಮೇ ೨೦೧೦) ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಸಮಿತಿಯು ಸೂಚಿಸಿದ ಪ್ರಮುಖ ಸಲಹೆಗಳು-</p>
<p><strong>ತುರ್ತಾಗಿ ತಯಾರಿಸಬೇಕಾದ ತಂತ್ರಾಂಶಗಳು :</strong><br />
೧.    ಆಸ್ಕಿಯಿಂದ ಯುನಿಕೋಡ್‌ಗೆ ಪರಿವರ್ತಕಗಳು (ಎಂ.ಎಸ್.ವರ್ಡ್, ಎಕ್ಸೆಲ್, ಎಕ್ಸೆಸ್, ಪೇಜ್‌ಮೇಕರ್, ಕ್ವಾರ್ಕ್ ಎಕ್ಸ್‌ಪ್ರೆಸ್)<br />
೨.    ಯುನಿಕೋಡ್‌ನಲ್ಲಿ ಅಕ್ಷರಶೈಲಿಗಳ ತಯಾರಿಕೆ &#8211; (೧) ಡಿ.ಟಿ.ಪಿ.ಗಾಗಿ ಹತ್ತು  (೨). ವಿಶೇಷ ವಿನ್ಯಾಸಗಳಿಗೆ ಐದು ಅಕ್ಷರ ಶೈಲಿಗಳು<br />
೩.    ಲಿನಕ್ಸ್ ಆಧಾರಿತ ಮುಕ್ತ ಆಕರ ತಂತ್ರಾಂಶ (ಓಪನ್ ಆಫೀಸ್, ಜಿಂಪ್, ಇಂಕ್‌ಸ್ಪೇಸ್, ಸ್ಕ್ರೈಬಸ್‌ಗಳನ್ನು ಕನ್ನಡದ ಬಳಕೆಗೆ ಅನುವಾಗುವಂತೆ ಸಿದ್ಧಪಡಿಸುವುದು.)<br />
೪.    ಮೊಬೈಲ್ ಫೋನ್‌ಗಳಿಗಾಗಿ ಯೂನಿಕೋಡ್ ರೆಂಡರಿಂಗ್ ಎಂಜಿನ್<br />
೫.    ಇತರ ರಾಜ್ಯ ಮತ್ತು ಪರದೇಶಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಕಲಿಕೆಗಾಗಿ ವಾಸ್ತವಸದೃಶ ವಿಶ್ವವಿದ್ಯಾನಿಲಯ (ವರ್ಚುವಲ್ ಯುನಿವರ್ಸಿಟಿ)ಯ ಸ್ಥಾಪನೆ ಮತ್ತು ಕನ್ನಡ ಕಲಿಕೆ ತಂತ್ರಾಂಶದ ತಯಾರಿ (ಇಂಗ್ಲೀಷ್ ಮೂಲಕ)<br />
೬.    ಕನ್ನಡ ಬ್ರೈಲ್ ಸಂಬಂಧಿತ ತಂತ್ರಾಂಶ (ಸ್ಪರ್ಶಲಿಪಿ ಮತ್ತು ದೃಶ್ಯಲಿಪಿಗಳ ಕೀಲಿಮಣೆಗಳು, ಅಕ್ಷರವಿನ್ಯಾಸಗಳು, ಪರಿವರ್ತಕಗಳು, ಮತ್ತು ಧ್ವನಿ ತಂತ್ರಾಂಶಗಳು ಸೇರಿದಂತೆ)<br />
೭.    ಆಪ್ಟಿಕಲ್ ಕ್ಯಾರೆಕ್ಟರ್ ರೆಕೆಗ್ನಿಶನ್ (ಒ.ಸಿ.ಆರ್., ಅಕ್ಷರ ಜಾಣ)<br />
೮.    ಕನ್ನಡದಲ್ಲಿ ಧ್ವನಿ ಸಂಸ್ಕರಣೆ (ಕನ್ನಡ ಪಠ್ಯದಿಂದ ಕನ್ನಡ ಧ್ವನಿಗೆ, ಮತ್ತು ಕನ್ನಡ ಧ್ವನಿಯಿಂದ ಕನ್ನಡ ಪಠ್ಯಕ್ಕೆ)<br />
೯.    ಕನ್ನಡ ಕಲಿಕಾ ತಂತ್ರಾಂಶದ ತಯಾರಿ (ಬಹುಮಾಧ್ಯಮ ಸೇರಿಸಿ), ಮತ್ತು ಕನ್ನಡ ಲೋಗೋವನ್ನು ಪಠ್ಯಕ್ರಮದಲ್ಲಿ ಅಳವಡಿಸುವುದು<br />
೧೦.    ಅಂತರಜಾಲದಲ್ಲಿ ನಿಘಂಟುಗಳನ್ನು ಸೇರಿಸುವುದು<br />
೧೧.    ಪಾರಿಭಾಷಿಕ ಪದಕೋಶದ ತಯಾರಿ ಮತ್ತು ಅವುಗಳನ್ನು ಅಂತರಜಾಲದಲ್ಲಿ ಸೇರಿಸುವುದು<br />
೧೨.    ಕನ್ನಡ ಭಾಷಾ ಸಂಸ್ಕರಣೆಯ (ಪದಪರೀಕ್ಷೆ, ವ್ಯಾಕರಣ ಪರೀಕ್ಷೆ, ವ್ಯಾಕರಣಾಂಶ ವಿಶ್ಲೇಷಣೆಗಳು ಸೇರಿದಂತೆ) ತಂತ್ರಾಂಶದ ತಯಾರಿ<br />
೧೩.    ಸಾರ್ವಜನಿಕ ಕ್ಷೇತ್ರಕ್ಕೆ ಅಗತ್ಯವಾದ ತಂತ್ರಾಂಶಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸುವುದು<br />
೧೪.    ಅಂತರಜಾಲದಲ್ಲಿ ನಿಖರ ಮಾಹಿತಿಯನ್ನು ನೀಡುವ ಕನ್ನಡ ವಿಶ್ವಕೋಶವನ್ನು ಸ್ಥಾಪಿಸುವುದು<br />
೧೫.    ಕನ್ನಡದ ಮೌಲಿಕ ಕೃತಿಗಳನ್ನು ಅಂತರಜಾಲದಲ್ಲಿ ಇರಿಸುವುದು</p>
<p><strong>ಸರಕಾರಕ್ಕೆ ಸಲಹೆಗಳು :</strong><br />
೧.    ಕನ್ನಡಕ್ಕೆ ಯೂನಿಕೋಡ್‌ಶಿಷ್ಟತೆಯನ್ನು ಕಡ್ಡಾಯವೆಂದು ಪ್ರಕಟಿಸುವುದು ಮತ್ತು ಕನ್ನಡದ ಎಲ್ಲ ಕೆಲಸಗಳು ಮತ್ತು ಅಂತರಜಾಲ ತಾಣಗಳು ಯುನಿಕೋಡಿನಲ್ಲೇ ಇರಬೇಕೆಂದು ಸುತ್ತೋಲೆ ಹೊರಡಿಸುವುದು.<br />
೨.    ಕರ್ನಾಟಕ ಸರ್ಕಾರ ವ್ಯಾಪಕವಾಗಿ ಬಳಸಿರುವ ಮತ್ತು ಬಳಸುತ್ತಿರುವ ಪದ ಸಂಸ್ಕರಣೆ ಮತ್ತು ಮುದ್ರಣ ಕಾರ್ಯಗಳಿಗಾಗಿ ಯೋಗ್ಯ ಸುಂದರ ಯೂನಿಕೋಡ್ ಅಕ್ಷರ ಶೈಲಿಗಳು ಲಭ್ಯವಿಲ್ಲವಾದುದರಿಂದ, ಪದಸಂಸ್ಕರಣೆಯಲ್ಲಿ ಅವು ಲಭ್ಯವಾಗುವ ತನಕ, ಅತ್ಯಾವಶ್ಯಕ ಎನಿಸಿದಲ್ಲಿ ಮಾತ್ರ , ಹಿಂದೆ ಬಳಸಲಾಗಿರುವ ಹಳೆಯ ಸುಂದರ ಅಕ್ಷರ ಶೈಲಿಗಳ ಬಳಕೆಗೆ ಸ್ವಲ್ಪ ಕಾಲ ಅವಕಾಶ ನೀಡುವುದು. ಆದರೆ ಮೂಲ ಮಾಹಿತಿ ಮಾತ್ರ ಯುನಿಕೋಡ್‌ನಲ್ಲೇ ಇರತಕ್ಕದ್ದು.<br />
೩.    ಕನ್ನಡದ ಯೂನಿಕೋಡ್ ಅಕ್ಷರ ಶೈಲಿಗಳ ಲೋಪದೋಷಗಳ ನಿವಾರಣೆಗೆ ಮತ್ತು ಸುಂದರ ಯೂನಿಕೋಡ್ ಅಕ್ಷರಶೈಲಿಗಳ ತಯಾರಿಗೆ ಶೀಘ್ರವಾಗಿ ಕ್ರಮ ಕೈಗೊಳ್ಳುವುದು.<br />
೪.    ಕರ್ನಾಟಕ ಸರಕಾರದ ಕೆಲಸಗಳಿಗೆಲ್ಲ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶವನ್ನೇ ಬಳಸಬೇಕೆಂದು, ಮತ್ತು ವಿಶೇಷವಾದ ಕೆಲಸಕ್ಕೆ ಮುಕ್ತ ತಂತ್ರಾಂಶ ಅಲಭ್ಯವಾಗಿದ್ದಾಗ ಮಾತ್ರ, ವ್ಯಾಪಾರೀ ತಂತ್ರಾಂಶ ಬಳಸಬೇಕೆಂದು ಸುತ್ತೋಲೆ ಹೊರಡಿಸುವುದು.<br />
೫.    ಮೊಬೈಲ್ ಫೋನ್ ತಯಾರಕರಿಗೆ ಯೂನಿಕೋಡ್ ಶಿಷ್ಟತೆಯನ್ನು ಅಳವಡಿಸಲು ನಿರ್ದೇಶಿಸುವುದು.<br />
೬.    ಕನ್ನಡ ತಂತ್ರಾಂಶ ಮತ್ತು ಮಾಹಿತಿ ತಂತ್ರಜ್ಞಾನ ಸಲಹಾ ಸಮಿತಿಯನ್ನು ನೇಮಿಸುವುದು.<br />
೭.    ಯೂನಿಕೋಡ್ ಒಕ್ಕೂಟಕ್ಕೆ ಕಾಲಕಾಲಕ್ಕೆ ಸರಿಯಾಗಿ ಅಗತ್ಯವಾದ ಮಾಹಿತಿಯನ್ನು ಸಲಹಾಸಮಿತಿಯ ಮೂಲಕ ಒದಗಿಸುವುದು.<br />
೮.    ಕನ್ನಡ ತಂತ್ರಾಂಶ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸುವುದು.<br />
೯.    ಓಪನ್ ಆಫೀಸ್ ಬಳಕೆಯನ್ನು ಜನಪ್ರಿಯಗೊಳಿಸಲು ಸರಕಾರೀ ಸಿಬ್ಬಂದಿಗಳಿಗೆ ಆಗಾಗ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು.<br />
೧೦.    ಮಾಹಿತಿಸಿಂಧು ಯೋಜನೆಯಲ್ಲಿ ಶೈಕ್ಷಣಿಕ ಮಾಹಿತಿಗಳು ಕನ್ನಡದಲ್ಲಿಯೇ ಇರಲು ಮತ್ತು ಗಣಕ ಶಿಕ್ಷಣ ಕನ್ನಡದ ಮೂಲಕವೇ ಆಗಲು ಕ್ರಮ ಕೈಗೊಳ್ಳುವುದು.<br />
೧೧.    ಉತ್ತಮ ಕನ್ನಡ ತಂತ್ರಾಂಶ ತಯಾರಕರಿಗೆ ಪ್ರತಿ ವರ್ಷವೂ ಉನ್ನತ ಮೌಲ್ಯದ (೧ ಲಕ್ಷ ರೂ. ಮತ್ತು ೫೦,೦೦೦ರೂ.) ಬಹುಮಾನಗಳನ್ನು ನೀಡುವುದು.<br />
೧೨.    ಪ್ರತಿಯೊಂದು ವಿಶ್ವವಿದ್ಯಾನಿಲಯವೂ ಪ್ರತೀ ವರ್ಷ ಕಂಪ್ಯೂಟರಿನಲ್ಲಿ ಕನ್ನಡದ ಬಳಕೆಯ ಕುರಿತು ಒಂದು ವಿಶ್ವಮಟ್ಟದ ಸಮಾವೇಶವನ್ನು ನಡೆಸುವಂತೆ ಸುತ್ತೋಲೆ ಹೊರಡಿಸುವುದು, ಮತ್ತು ಅದಕ್ಕೆ ಧನಸಹಾಯ ನೀಡುವುದು.<br />
೧೩.    ಕನ್ನಡದ ವಿಶ್ವಕೋಶವು ನಿರಂತರವಾಗಿ ಅಂತರಜಾಲದಲ್ಲಿ ಲಭ್ಯವಾಗಿರುವಂತೆ ವ್ಯವಸ್ಥೆ ಮಾಡುವುದು, ಮತ್ತು ಇದರ ನಿರ್ವಹಣೆಗಾಗಿ ಖಾಸಗಿ ಸಂಸ್ಥೆ ಮತ್ತು ಸರ್ಕಾರದ ಪ್ರತಿನಿಧಿಗಳಿರುವ ಒಂದು ಆಡಳಿತ ಮಂಡಳಿಯನ್ನು ಸ್ಥಾಪಿಸುವುದು.</p>
<p>ಸಮಿತಿಯು ಆಗಸ್ಟ್ ೩, ೨೦೧೦ರಂದು ಸಭೆ ಸೇರಿ ಸದ್ಯಕ್ಕೆ ಅತೀ ಅಗತ್ಯವಿರುವ ಕೆಲವು ತಂತ್ರಾಂಶಗಳ ತಯಾರಿಕೆಗೆ ಟೆಂಡರ್ ಕರೆಯಲು ತೀರ್ಮಾನಿಸಿತು. ಹಳೆಯ ತಲೆಮಾರಿನ ತಂತ್ರಜ್ಞಾನದಲ್ಲಿ ಸೃಷ್ಟಿಸಲಾಗಿರುವ ಕನ್ನಡ ಪಠ್ಯವನ್ನು ಹೊಸ ಅಂತರರಾಷ್ಟ್ರೀಯ ಶಿಷ್ಟತೆಯಾಗಿರುವ ಯೂನಿಕೋಡ್‌ಗೆ ಬದಲಾಯಿಸಲು ಅಗತ್ಯವಿರುವ ಪರಿವರ್ತಕಗಳು, ಕನ್ನಡಕ್ಕಾಗಿ ಹನ್ನೆರಡು ಓಪನ್ ಟೈಪ್ ಫಾಂಟ್‌ಗಳು, ಸಾಮಾನ್ಯ ಬಳಕೆಯ ಸ್ವತಂತ್ರ ತಂತ್ರಾಂಶಗಳಲ್ಲಿ ಕನ್ನಡ ಬಳಕೆಗೆ ಅಗತ್ಯವಿರುವ ಅಭಿವೃದ್ಧಿ ಕಾರ್ಯ, ಅಂಧರಿಗೆ ಅನುಕೂಲವಾಗುವಂತೆ ಸ್ಪರ್ಶ ಲಿಪಿ ಮತ್ತು ದೃಶ್ಯ ಲಿಪಿಗಳ ನಡುವಣ ಪರಿವರ್ತಕ, ಧ್ವನಿ ಸಂಸ್ಕರಣೆ, ವಿವಿಧ ಸಾಮಾನ್ಯ ಬಳಕೆಯ ತಂತ್ರಾಂಶಗಳಿಗಾಗಿ ಪದಪರೀಕ್ಷೆ, ದಿನದರ್ಶಿಯಂಥ ಸೌಲಭ್ಯಗಳ ಅಭಿವೃದ್ಧಿ, ಕನ್ನಡ ವಾಸ್ತವ ಸದೃಶ ವಿಶ್ವವಿದ್ಯಾಲಯ ಸ್ಥಾಪನೆಯ ಯೋಜನಾ ವರದಿ ತಯಾರಿ, ಕನ್ನಡ ಪಠ್ಯಕಣಜ (ಕಾರ್ಪಸ್) ಸೃಷ್ಟಿಯಂಥ ಯೋಜನೆಗಳು ಇವುಗಳಲ್ಲಿ ಸೇರಿವೆ.</p>
<p><strong>ಸಹಜಭಾಷಾ ಸಂಸ್ಕರಣೆ</strong></p>
<p>ಗಣಕದಲ್ಲಿ ಭಾಷೆಯ ಬಳಕೆಯಲ್ಲಿ ಸಹಜ ಭಾಷಾ ಸಂಸ್ಕರಣೆ (<a href="http://en.wikipedia.org/wiki/Natural_language_processing" target="_blank">Natural Language Processing</a>) ಒಂದು ಬಹುಮುಖ್ಯ ಅಂಗ. ಪಠ್ಯಗಳ ಸಾರಾಂಶ ತಯಾರಿ, ಪಠ್ಯದಲ್ಲಿ ಬಳಸಿರುವ ಪದ, ವಾಕ್ಯಗಳ ವಿಶ್ಲೇಷಣೆ, ಪಠ್ಯದಿಂದ ಧ್ವನಿಗೆ, ಧ್ವನಿಯಿಂದ ಪಠ್ಯಕ್ಕೆ ಪರಿವರ್ತನೆ, ಅನುವಾದ -ಇತ್ಯಾದಿ ಎಲ್ಲ ಈ ವಿಭಾಗದಡಿ ಬರುತ್ತವೆ. ಇದು ಸಂಶೋಧನೆಯ ಕ್ಷೇತ್ರ. ಈ ಕೆಲಸ ಕನ್ನಡ ಭಾಷೆಯಲ್ಲಿ ಆಗಿಯೇ ಇಲ್ಲ ಎನ್ನಬಹುದು. ಸಹಜ ಭಾಷಾ ಸಂಸ್ಕರಣೆಗೆ ಮೊದಲ ಹಂತ ಬಹುದೊಡ್ಡ ಪಠ್ಯಕಣಜವನ್ನು (ಕಾರ್ಪಸ್) ತಯಾರಿಸುವುದು. ಇದರಲ್ಲಿ ಹಲವು ವಿಧಗಳಿವೆ -ಕೇವಲ ಪದಗಳು, ವಾಕ್ಯಗಳು, ಕಥೆಗಳು ಮತ್ತು ಎರಡು ಭಾಷೆಯ ಸಮಾಂತರ ಪಠ್ಯಗಳು. ಸಂತಸದ ಸಂಗತಿಯೆಂದರೆ ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯವು ಕನ್ನಡದ ಪಠ್ಯಕಣಜವನ್ನು ತಯಾರಿಸಲು ಕಾರ್ಯಾರಂಭ ಮಾಡಿದೆ.</p>
<p><strong>ಮುಂದೇನು?</strong></p>
<p>ಕನ್ನಡ ಭಾಷೆಯ ಬೆಳವಣಿಗೆ ಮತ್ತು ಉಳಿವಿಗೆ ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳಲ್ಲಿ ಕನ್ನಡ ಭಾಷೆಯ ಅಳವಡಿಕೆ ಮತ್ತು ಬಳಕೆ ಬಹು ಮುಖ್ಯ. ಇದು ಕೇವಲ ಸರಕಾರವೊಂದರ ಕೆಲಸವಲ್ಲ. ಎಲ್ಲರೂ ಇದಕ್ಕಾಗಿ ಕೈ ಎತ್ತಬೇಕು. ಯಾರು ಯಾರು ಏನೇನು ಮಾಡಬೇಕು ಎಂಬುದನ್ನು ಈಗ ನೋಡೋಣ:</p>
<p><strong>ಜನಸಾಮಾನ್ಯರು</strong><br />
ಮುಖ್ಯವಾಗಿ ಎಲ್ಲರೂ ಗಣಕ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಎಲ್ಲ ಅಂಗಗಳಲ್ಲಿ (ಉದಾ: ಬ್ಯಾಂಕಿನ ಎಟಿಎಂ, ಮೊಬೈಲ್ ಫೋನ್) ಕನ್ನಡ ಭಾಷೆಯನ್ನೇ ಬಳಸುವುದು. ಹಾಗೆ ಬಳಸುವಾಗ ಜಾಗತಿಕ ಶಿಷ್ಟತೆಯಾದ ಯುನಿಕೋಡನ್ನೇ ಸಾಧ್ಯವಾದಾಗಲೆಲ್ಲ ಬಳಸುವುದು. ಸರಕಾರದ ಎಲ್ಲ ಗಣಕೀಕರಣಗಳಲ್ಲಿ ಕನ್ನಡ ಭಾಷೆಯನ್ನೇ ಬಳಸುವಂತೆ ಒತ್ತಡ ಹೇರುವುದು. ಉದಾಹರಣೆಗೆ ವಿದ್ಯುತ್ ಇಲಾಖೆ, ಸಾರಿಗೆ ಇಲಾಖೆ, ಇತ್ಯಾದಿಯವರು ಇಂಗ್ಲೀಶ್ ಭಾಷೆಯಲ್ಲಿ ರಸೀತಿ ನೀಡಿದರೆ ಸ್ವೀಕರಿಸಲು ನಿರಾಕರಿಸುವುದು. ಕನ್ನಡ ಭಾಷೆಯಲ್ಲೇ ವ್ಯವಹರಿಸುವಂತೆ ಮತ್ತು ರಸೀತಿ ನೀಡುವುಂತೆ ವ್ಯಾಪಾರಿಗಳ ಮೇಲೆ ಒತ್ತಡ ಹೇರುವುದು.</p>
<p><strong>ಮಾಧ್ಯಮ ಪ್ರತಿನಿಧಿಗಳು</strong><br />
ಗಣಕ ಮತ್ತು ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳಲ್ಲಿ ಕನ್ನಡವನ್ನು ಬಳಸುವುದು. ಲೇಖನ ಮತ್ತು ವರದಿಗಳ ಮೂಲಕ ಜನರಿಗೆ ಸರಿಯಾದ ಮಾಹಿತಿ ಹಂಚುವುದು. ಗಣಕದಲ್ಲಿ ಕನ್ನಡ ಸಂಪೂರ್ಣ ಸಾಧ್ಯ ಎಂದು ಪ್ರಚಾರ ಮಾಡುವುದು. ಮುದ್ರಣ ತಂತ್ರಾಂಶಗಳಲ್ಲಿ ಕನ್ನಡ ಯುನಿಕೋಡ್ ಸೌಲಭ್ಯ ನೀಡುವುಂತೆ ವ್ಯಾಪಾರಿಗಳನ್ನು ಒತ್ತಾಯಿಸುವಂತೆ ತಮ್ಮ ಯಜಮಾನರಲ್ಲಿ ಕೇಳಿಕೊಳ್ಳುವುದು.</p>
<p><strong>ಸಾಹಿತಿಗಳು</strong><br />
ಮೇಲೆ ಹೇಳಿದಂತೆ ಮಾದ್ಯಮ ಪ್ರತಿನಿಧಿಗಳು ಏನೇನು ಮಾಡಬೇಕೋ ಅದೆಲ್ಲವನ್ನು ಮಾಡುವುದು ಮತ್ತು ಅದರ ಜೊತೆಗೆ ಮಾಹಿತಿ ತಂತ್ರಜ್ಞಾನ ಬಗ್ಗೆ ಕನ್ನಡದಲ್ಲಿ ಲೇಖನ ಬರೆಯುವುದು. ಲೇಖನ, ಪುಸ್ತಕಗಳ ದತ್ತಸಂಚಯ (ಡಾಟಾಬೇಸ್) ತಯಾರಿಸುವುದು.</p>
<p><strong>ಸಂಶೋಧಕರು</strong><br />
ಗಣಕ ಮತ್ತು ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳಲ್ಲಿ ಕನ್ನಡವನ್ನು ಬಳಸುವುದು. ಲೇಖನ, ಪುಸ್ತಕಗಳ ದತ್ತಸಂಚಯ (ಡಾಟಾಬೇಸ್) ತಯಾರಿಸುವುದು. ಸಂಶೋಧನೆಗೆ ಗಣಕವನ್ನು ಬಳಸುವುದು. ಭಾಷಾಸಂಸ್ಕರಣೆಗೆ ಅಗತ್ಯ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದು ಹಾಗೂ ಭಾಷಾಸಂಸ್ಕರಣೆ ಮಾಡುವುದು.</p>
<p><strong>ತಂತ್ರಜ್ಞರು</strong><br />
ಗಣಕ ಮತ್ತು ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳಲ್ಲಿ ಕನ್ನಡವನ್ನು ಬಳಸುವುದು. ಅಗತ್ಯ ಮೂಲಭೂತ ಸಲಕರಣೆಗಳನ್ನು ತಯಾರಿಸುವುದು. ಮುಕ್ತ ತಂತ್ರಾಂಶಗಳನ್ನು ಕನ್ನಡೀಕರಿಸುವುದು. ಈಗಾಗಲೇ ವಿವರಿಸಿದಂತೆ ಉಚಿತ ಮತ್ತು ಮುಕ್ತ ತಂತ್ರಾಂಶಗಳಲ್ಲಿ ಕನ್ನಡದ ಯುನಿಕೋಡ್ ಬೆಂಬಲವನ್ನು ಸುಧಾರಿಸುವುದು. ಕನ್ನಡಕ್ಕೆ ಕೆಲವು ಅತ್ಯುತ್ತಮ ಗುಣಮಟ್ಟದ ಓಪನ್‌ಟೈಪ್ ಫಾಂಟ್ ತಯಾರಿಸುವುದು.</p>
<p>ಕನ್ನಡ ಭಾಷೆಯೆಂದರೆ ಕೇವಲ ಪಂಪ ರನ್ನ ಕುಮಾರವ್ಯಾಸರಲ್ಲ, ಅತ್ಯಾಧುನಿಕ ವಿಜ್ಞಾನ ತಂತ್ರಜ್ಞಾನದ ಎಲ್ಲ ಅಂಗಗಳೂ ಕನ್ನಡ ಭಾಷೆಯಲ್ಲಿ ರಾರಾಜಿಸಲಿ ಎಂದು ಆಶಿಸೋಣ.</p>
<p>(ಫೆಬ್ರವರಿ ೨೧, ೨೦೧೧)</p>
<p>[ಬೆಳಗಾವಿಯಲ್ಲಿ ಜರುಗಿದ ಎರಡನೆ ವಿಶ್ವಕನ್ನಡ ಸಮ್ಮೇಳನದ ವಿಶೇಷ ಪುರವಣಿಗಾಗಿ ಬರೆದ ಲೇಖನ]</p><p>The post <a href="http://vishvakannada.com/%e0%b2%b2%e0%b3%87%e0%b2%96%e0%b2%a8/%e0%b2%95%e0%b2%a8%e0%b3%8d%e0%b2%a8%e0%b2%a1/">ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ -ಅಂದು, ಇಂದು, ಮುಂದು</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%b2%e0%b3%87%e0%b2%96%e0%b2%a8/%e0%b2%95%e0%b2%a8%e0%b3%8d%e0%b2%a8%e0%b2%a1/feed/</wfw:commentRss>
			<slash:comments>12</slash:comments>
		
		
			</item>
	</channel>
</rss>

<!--
Performance optimized by W3 Total Cache. Learn more: https://www.boldgrid.com/w3-total-cache/?utm_source=w3tc&utm_medium=footer_comment&utm_campaign=free_plugin

Page Caching using Disk: Enhanced 

Served from: vishvakannada.com @ 2026-07-31 02:22:28 by W3 Total Cache
-->