Press "Enter" to skip to content

೨೦೦೬ರ ಅತ್ಯತ್ತಮ ಸುಳ್ಳು ಪ್ರಶಸ್ತಿ

ಬೆಂಗಳೂರು, ಡಿ. ೨೯, ೨೦೦೬: ವಿಶ್ವಕನ್ನಡದ ಸಂಪಾದಕರ ಒಪ್ಪಿಗೆಯಿಲ್ಲದೆ ಉಪ ಸಹಾಯಕ ಕಿರಿಯ ಸಂಪಾದಕರು ಹಾಗೂ ಹಾಸ್ಯ ವಿಭಾಗದ ಜವಾಬ್ದಾರಿಯನ್ನು ತನ್ನ ಅತಿ ಚಿಕ್ಕ ಹೆಗಲ ಮೇಲೆ ಹೊತ್ತಂತವರು ಸುಳ್ಳು ಪ್ರಶಸ್ತಿ ಘೋಷಿಸಿರುವುದನ್ನು ಪತ್ತೆ ಹಚ್ಚಿದ್ದಾರೆ. ವರ್ಷದ ಕೊನೆಯಲ್ಲಿ ಹಲವು ರೀತಿಯ ವರ್ಷದ ವ್ಯಕ್ತಿ, ವರ್ಷದ ಘಟನೆ, ವರ್ಷದ ಸಾಧನೆ, ಇತ್ಯಾದಿ ಪ್ರಶಸ್ತಿಗಳನ್ನು ಘೋಷಿಸುತ್ತಿರುವುದು ನಿಮಗೆಲ್ಲ ತಿಳಿದೇ ಇದೆ. ಈ ವರ್ಷ ನೀಡುವ ವರ್ಷದ ಶ್ರೇಷ್ಠ ಸುಳ್ಳು ಪ್ರಶಸ್ತಿಯನ್ನು ಕೇಂದ್ರ ಗೃಹಕಾರ್ಯದರ್ಶಿ ವಿ.ಕೆ.ದುಗ್ಗಲ್ ಅವರಿಗೆ ನೀಡಲು ತೀರ್ಮಾನಿಸಲಾಗಿದೆ. ಅವರು ಹೇಳಿರುವ “ರಾಷ್ಟ್ರದಲ್ಲಿ ಅಲ್‌ಖಾಯ್ದಾ ಸುಳಿವಿಲ್ಲ” ಎಂಬ ಹೇಳಿಕೆಗೆ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ತಿಳಿದು ಬಂದಿದೆ. ಎಂದಿನಂತೆ ಮುಂದಿನ ವರ್ಷದ ಎಪ್ರಿಲ್ ೧ರಂದು ಈ ಪ್ರಶಸ್ತಿಯನ್ನು ನೀಡಲಾಗುವುದು. ಯಾರಿಗಾದರು ಯಾವುದೇ ಯಾವುದೇ ರೀತಿಯ ಅಭ್ಯಂತರವಿದ್ದಲ್ಲಿ ಕೂಡಲೆ ತಿಳಿಸಬೇಕಾಗಿಯೂ ಕೋರಲಾಗಿದೆ.

ವಿಶ್ವಕನ್ನಡದ ಅತಿ ಕಿರಿಯ ಉಪ ಸಹಾಯಕ ಸಂಪಾದಕರು ಬೊಗಳೆ ರಗಳೆ ಮತ್ತು ಮಜಾವಾಣಿ ಪತ್ರಿಕೆಯವರು ಪತ್ತೆ ಹಚ್ಚುವ ಮೊದಲೇ ಈ ಸುದ್ದಿಯನ್ನು ಪತ್ತೆ ಹಚ್ಚಿದ್ದಕ್ಕೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಎಂದೂ ತಿಳಿದುಬಂದಿದೆ.

4 Comments

  1. bhagya bhagya July 17, 2012

    hai
    very nice

    thank you

    from
    bhagya

  2. Veeresh S.J Veeresh S.J May 18, 2015

    IN HEAD PAGES ONE HEADING IS MISSING THE ENVIRONMENT. It my request to please add this head page also.

    Very nice this my Kannada website

    Thanking you

  3. J.Shreedhar J.Shreedhar June 30, 2018

    I am trying to learn Kannada and I found your magazine very helpful in the very simile way you have projected the various articles. I felt very encouraged and interested in continuing to read, albeit slowly, but as I continued, I gained speed and my casual / laziness in reading Kannada is getting replaced by a new sense of vigor and stamina.

Leave a Reply

Your email address will not be published. Required fields are marked *