Press "Enter" to skip to content

ಕೊಳನೂದುವ ಚದುರನ್ಯಾರೆ ಪೇಳಮ್ಮಯ್ಯ

ಶ್ರೀ ವ್ಯಾಸರಾಯರು

ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯ
ತಳಿರಂದದಿ ಪೊಳೆವ ಕರ ಪಿಡಿದು
ನಾರದಿ ತುಂಬಿತು ಗೋವರ್ಧನಗಿರಿ
ಯಾದವಕುಲ ಘನ ಒರೆದಿತು ಖಗಕುಲ
ಸಾಧಿಸಿನೋಡಲು ಕೃಷ್ಣನ ಈಗಲೆ
ಸಾಧ್ಯವೇನೇ ಬೃಂದಾವನದೊಳು
ಮೇವು ಮರೆತವು ಗೋವುಗಳೆಲ್ಲವು
ಸಾವಧಾನದಿ ಹರಿದಳು ಯಮುನಾ
ಆವ ಕಾಯುತಲಿ ಗೋವುಗಳ ಮರೆತರು
ಹಾವಭಾವದಲಿ ಬೃಂದಾವನದೊಳು
ಸುರರು ಸುರಿದರಾಕಾಶದಿ ಸುಮಗಳ
ಸರಿದು ಪೋಗಿ ನೋಡೆ ಬೃಂದಾವನದೊಳು
ಸಾರಿ ಸಾರಿ ಶ್ರೀ ಕೃಷ್ಣನು ಈಗಲೆ
ತುರುಗಳ ಕಾಯುತ ಕದಂಬವನದೊಳು

Be First to Comment

Leave a Reply

Your email address will not be published. Required fields are marked *