<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಬ್ಲಾಗ್ | Vishva Kannada</title>
	<atom:link href="http://vishvakannada.com/category/blog/feed/" rel="self" type="application/rss+xml" />
	<link>http://vishvakannada.com</link>
	<description></description>
	<lastBuildDate>Sun, 22 Dec 2024 10:26:36 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.3.8</generator>
	<item>
		<title>ಮೋದಿಯ ಜನಪ್ರಿಯತೆ</title>
		<link>http://vishvakannada.com/blog/modis-popularity/</link>
					<comments>http://vishvakannada.com/blog/modis-popularity/#respond</comments>
		
		<dc:creator><![CDATA[pavanaja]]></dc:creator>
		<pubDate>Thu, 24 Jan 2019 05:35:37 +0000</pubDate>
				<category><![CDATA[ಬ್ಲಾಗ್]]></category>
		<category><![CDATA[General]]></category>
		<category><![CDATA[Kannada]]></category>
		<category><![CDATA[ಮೋದಿ]]></category>
		<guid isPermaLink="false">http://pavanaja.com/?p=2258</guid>

					<description><![CDATA[<p>ನಾನು ಗ್ಯಾಜೆಟ್ ಬಿಡುಗಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಕ್ಕಾಗಿ ಆಗಾಗ ದೆಹಲಿಗೆ ಹೋಗುತ್ತಿರುತ್ತೇನೆ. ಹಾಗೆ ಹೋದಾಗಲೆಲ್ಲ ಅಲ್ಲಿನ ಟ್ಯಾಕ್ಸಿ ಚಾಲಕರೊಡನೆ ಮಾತನಾಡುವುದು ನನ್ನ ಹವ್ಯಾಸ. ಇದರಿಂದಾಗಿ ಅಲ್ಲಿಯ ಜನಸಾಮಾನ್ಯರ ಅಭಿಪ್ರಾಯ ಏನು ಎಂದು ತಿಳಿಯುತ್ತದೆ. ಸಾಮಾನ್ಯವಾಗಿ ನಾನು&#8230;</p>
<p>The post <a href="http://vishvakannada.com/blog/modis-popularity/">ಮೋದಿಯ ಜನಪ್ರಿಯತೆ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p>ನಾನು ಗ್ಯಾಜೆಟ್ ಬಿಡುಗಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಕ್ಕಾಗಿ ಆಗಾಗ ದೆಹಲಿಗೆ ಹೋಗುತ್ತಿರುತ್ತೇನೆ. ಹಾಗೆ ಹೋದಾಗಲೆಲ್ಲ ಅಲ್ಲಿನ ಟ್ಯಾಕ್ಸಿ ಚಾಲಕರೊಡನೆ ಮಾತನಾಡುವುದು ನನ್ನ ಹವ್ಯಾಸ. ಇದರಿಂದಾಗಿ ಅಲ್ಲಿಯ ಜನಸಾಮಾನ್ಯರ ಅಭಿಪ್ರಾಯ ಏನು ಎಂದು ತಿಳಿಯುತ್ತದೆ. ಸಾಮಾನ್ಯವಾಗಿ ನಾನು ಕೇಳುವ ಪ್ರಶ್ನೆಗಳು -&#8220;ನೀವು ಕಳೆದ ಚುನಾವಣೆಯಲ್ಲಿ ಯಾರಿಗೆ ಮತ ನೀಡಿದ್ದಿರಿ? ದೆಹಲಿಯಲ್ಲಿ ಕೇಜ್ರಿವಾಲರಿಗೆ ಮತ ನೀಡಿದ್ದಿರಾ? ಕೇಂದ್ರದಲ್ಲಿ ಮೋದಿಗೆ ನೀಡಿದ್ದಿರಾ? ನೀವು ಅವರ ಆಡಳಿತದಿಂದ ಸಂತೃಪ್ತರಾಗಿದ್ದೀರಾ? ಮುಂದಿನ ಚುನಾವಣೆಯಲ್ಲಿ ಯಾರಿಗೆ ಮತ ನೀಡುತ್ತೀರಾ?&#8221; ಇತ್ಯಾದಿ. ಸಾಮಾನ್ಯವಾಗಿ ಎಲ್ಲರ ಉತ್ತರ ಒಂದೇ &#8211; ದೆಹಲಿಯಲ್ಲಿ ಕೇಜ್ರಿವಾಲರಿಗೆ, ಕೇಂದ್ರದಲ್ಲಿ ಮೋದಿಗೆ ಮತ ನೀಡಿದ್ದೇನೆ. ಕೇಜ್ರಿವಾಲರ ಆಡಳಿತ ಪೂರ್ತಿ ಸರಿಯಿಲ್ಲ. ಪ್ರಾರಂಭದಲ್ಲಿ ಎಲ್ಲದಕ್ಕೂ ಮೋದಿಯನ್ನು ದೂಷಿಸುತ್ತಿದ್ದರು. ಈಗ ಸ್ವಲ್ಪ ಸುಧಾರಿಸಿದ್ದಾರೆ. ಮೋದಿ ದೇಶಕ್ಕೆ ಒಳ್ಳೆಯದು ಮಾಡುತ್ತಿದ್ದಾರೆ.</p>
<p>&nbsp;</p>
<p>ಇತ್ತೀಚೆಗೆ ಹೋದಾಗಲೂ ಎಂದಿನಂತೆ ಇವೇ ಪ್ರಶ್ನೆಗಳನ್ನು ಕೇಳಿದೆ. ಅವೇ ಉತ್ತರಗಳು ಬಂದವು. ಚಾಲಕನ್ನು ಇನ್ನೂ ಸ್ವಲ್ಪ ಚುಚ್ಚಿದೆ -&#8220;ಮೋದಿ demonitisation ಮಾಡಿ ನಿಮಗೆ ತೊಂದರೆ ಆಗಲಿಲ್ಲವೇ? ಮುಖ್ಯವಾಗಿ ನಿಮ್ಮ ವ್ಯವಹಾರಗಳು ನಗದಿನ ಮೂಲಕವೇ ನಡೆಯುವ ಕಾರಣ ನಿಮಗೆ ತೊಂದರೆ ಆಗಿರಬಹುದಲ್ಲವೇ?&#8221;. ಒಬ್ಬ ಸಾಮಾನ್ಯ ಟ್ಯಾಕ್ಸಿ ಚಾಲಕನ ಉತ್ತರ ನಿಜಕ್ಕೂ ಆಶ್ಚರ್ಯಕರವಾಗಿತ್ತು -&#8220;ಹೌದು. ನನಗೆ ನಿಜಕ್ಕೂ ತೊಂದರೆ ಆಗಿತ್ತು. ಆದರೆ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದಾದರೆ ನಾವೆಲ್ಲ ಸ್ವಲ್ಪ ತೊಂದರೆ ಸಹಿಸಿಕೊಳ್ಳಬೇಕು ತಾನೆ? ಮೋದಿ ದೇಶಕ್ಕೆ ಒಳ್ಳೆಯದು ಮಾಡುತ್ತಿದ್ದಾರೆ, ಮುಂದೆಯೂ ಮಾಡುತ್ತಾರೆ ಎಂಬ ನಂಬಿಕೆ ನನಗೆ ಇದೆ.&#8221;</p>
<p>&nbsp;</p><p>The post <a href="http://vishvakannada.com/blog/modis-popularity/">ಮೋದಿಯ ಜನಪ್ರಿಯತೆ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/blog/modis-popularity/feed/</wfw:commentRss>
			<slash:comments>0</slash:comments>
		
		
			</item>
		<item>
		<title>ತೆರೆದ ಪುಸ್ತಕ ಪರೀಕ್ಷೆ (Open book exam)</title>
		<link>http://vishvakannada.com/blog/open-book-exam/</link>
					<comments>http://vishvakannada.com/blog/open-book-exam/#comments</comments>
		
		<dc:creator><![CDATA[pavanaja]]></dc:creator>
		<pubDate>Tue, 26 Jun 2018 14:18:32 +0000</pubDate>
				<category><![CDATA[ಬ್ಲಾಗ್]]></category>
		<category><![CDATA[General]]></category>
		<category><![CDATA[Kannada]]></category>
		<category><![CDATA[ಕನ್ನಡ]]></category>
		<category><![CDATA[ತೆರೆದ ಪುಸ್ತಕ ಪರೀಕ್ಷೆ]]></category>
		<category><![CDATA[ಪರೀಕ್ಷೆ]]></category>
		<category><![CDATA[ಶಿಕ್ಷಣ]]></category>
		<guid isPermaLink="false">http://pavanaja.com/?p=2222</guid>

					<description><![CDATA[<p>ತೆರೆದ ಪುಸ್ತಕ ಪರೀಕ್ಷೆ ಮಾಡುತ್ತೇವೆ ಎಂದು ಸರಕಾರದ ಮಂತ್ರಿಯೋರ್ವರು ಹೇಳಿದ್ದಕ್ಕೆ ನಾನು ಸ್ವಲ್ಪ ವಿಡಂಬನಾತ್ಮಕವಾಗಿ ಬರೆದ ಫೇಸ್‌ಬುಕ್ ಪೋಸ್ಟ್ ವೈರಲ್ ಆದುದನ್ನು ಗಮನಿಸಿದೆ. ಒಂದು ಜಾಲತಾಣವಂತೂ ನಾನು ಆ ಪೋಸ್ಟನ್ನು ಅಳಿಸಿ ಹಾಕಿದ್ದೇನೆ ಎಂದು&#8230;</p>
<p>The post <a href="http://vishvakannada.com/blog/open-book-exam/">ತೆರೆದ ಪುಸ್ತಕ ಪರೀಕ್ಷೆ (Open book exam)</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p>ತೆರೆದ ಪುಸ್ತಕ ಪರೀಕ್ಷೆ ಮಾಡುತ್ತೇವೆ ಎಂದು ಸರಕಾರದ ಮಂತ್ರಿಯೋರ್ವರು ಹೇಳಿದ್ದಕ್ಕೆ ನಾನು ಸ್ವಲ್ಪ ವಿಡಂಬನಾತ್ಮಕವಾಗಿ ಬರೆದ ಫೇಸ್‌ಬುಕ್ ಪೋಸ್ಟ್ ವೈರಲ್ ಆದುದನ್ನು ಗಮನಿಸಿದೆ. ಒಂದು ಜಾಲತಾಣವಂತೂ ನಾನು ಆ ಪೋಸ್ಟನ್ನು ಅಳಿಸಿ ಹಾಕಿದ್ದೇನೆ ಎಂದು ತಪ್ಪಾಗಿ ವರದಿ ಮಾಡಿದೆ. ಆ ಪೋಸ್ಟಿನಲ್ಲಿ ಎರಡು ವಿಷಯಗಳಿಗೆ ನಾನು ವಿಡಂಬನಾತ್ಮಕವಾಗಿ ಪ್ರತಿಕ್ರಿಯಿಸಿದ್ದೆ. ಅದರಲ್ಲಿ ಮೊದಲನೆಯದಾದ ತೆರೆದ ಪುಸ್ತಕ ಪರೀಕ್ಷೆ (open book exam) ಬಗ್ಗೆ ಇಲ್ಲಿ ಬರೆಯುತ್ತೇನೆ.</p>
<p>ಈ open book exam ಬಗ್ಗೆ ನನಗೆ ಚೆನ್ನಾಗಿಯೇ ತಿಳಿದಿದೆ. ಎಷ್ಟರ ಮಟ್ಟಿಗೆ ಎಂದರೆ ಮುಂಬಯಿಯಲ್ಲಿದ್ದಾಗ ನಾನೇ ಇಂತಹ ಪರೀಕ್ಷೆಗಳನ್ನು ನಡೆಸಿದ್ದೇನೆ. ಮುಂಬಯಿಯಲ್ಲಿ ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿದ್ದಾಗ ಅಲ್ಲಿಯ ಅಧಿಕಾರಿಗಳ ಸಂಘದ ವತಿಯಿಂದ ಹತ್ತನೇ ತರಗತಿ ಪಾಸಾದ ಮಕ್ಕಳಿಗೆ ಕಂಪ್ಯೂಟರ್ ಪ್ರೋಗ್ರಾಮ್ಮಿಂಗ್ (BASIC language) ಪಾಠ ಮಾಡುತ್ತಿದ್ದೆ. ಅದರ ಕೊನೆಯಲ್ಲಿ ನಾನೇ ತೆರೆದ ಪುಸ್ತಕ ಪರೀಕ್ಷೆ ನಡೆಸಿದ್ದೆ. ಬಿಎಆರ್‌ಸಿಯಲ್ಲಿ ಹೊಸದಾಗಿ ಸೇರಿದ ವಿಜ್ಞಾನಿಗಳಿಗೆ ನಡೆಸುವ ತರಬೇತಿಯಲ್ಲೂ ನಾನು ಪಾಠ ಮಾಡಿದ್ದೆ. ಅಲ್ಲೂ ತೆರೆದ ಪುಸ್ತಕ ಪರೀಕ್ಷೆ ನಡೆಸಿದ್ದೆ.</p>
<p>ತೆರೆದ ಪುಸ್ತಕ ಪರೀಕ್ಷೆ ನಿಜಕ್ಕೂ ಉತ್ತಮ ಆಲೋಚನೆ. ಆದರೆ ಇದನ್ನು ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದಲ್ಲಿ ಎಲ್ಲ ವಿಷಯಗಳಿಗೆ ನಡೆಸಲು ಸಾಧ್ಯವಿಲ್ಲ. ಬೇಕಿದ್ದರೆ ಗಣಿತಕ್ಕೆ ಪ್ರಯೋಗಾತ್ಮಕವಾಗಿ ನಡೆಸಿ ನೋಡಬಹುದು. ವಿಜ್ಞಾನಕ್ಕೂ ನಡೆಸಬಹುದು. ಭಾಷೆ, ಸಮಾಜ, ಇತಿಹಾಸ ಇಂತಹ ವಿಷಯಗಳಿಗೆ ಸಾಧ್ಯವಿಲ್ಲ. ಹಕ್ಕಿ ಹಾರುತಿದೆ ನೋಡಿದಿರಾ ಪದ್ಯವನ್ನು ಯಾರು ಬರೆದದ್ದು ಎಂದು ಕೇಳಿದರೆ ಮಕ್ಕಳಿಗೆ ಆಲೋಚನಾ ಶಕ್ತಿಯನ್ನು ಕಲಿಸಿದಂತಾಗುತ್ತದೆಯೇ? ಅದರ ಬದಲಿಗೆ ಹಕ್ಕಿ ಹಾರುತಿದೆ ನೋಡಿದಿರಾ ಹಾಡಿನಲ್ಲಿ ಬೇಂದ್ರೆಯವರು ಕರಿನರೆ ಬಣ್ಣದ ರೆಕ್ಕೆಗಳು ಎಂದು ಏನನ್ನು ಸೂಚಿಸಿದ್ದಾರೆ ಎಂದು ಕೇಳಿದರೆ ಸ್ವಲ್ಪ ಮಟ್ಟಿಗೆ ಆಲೋಚನೆಗೆ ಹಚ್ಚಿದಂತಾಗುತ್ತದೆ. ಪಾಣಿಪತ್ ಯುದ್ಧ ಯಾವಾಗ ನಡೆಯಿತು ಎಂದು ಇಂತಹ ಪರೀಕ್ಷೆಯಲ್ಲಿ ಕೇಳುವಂತಿಲ್ಲ. ಶಿಕ್ಷಣ ತಜ್ಞರು ಕುಳಿತು ಚರ್ಚಿಸಿ ತೀರ್ಮಾನಿಸಬೇಕಾದ ವಿಷಯವಿದು.</p>
<p>ತೆರೆದ ಪುಸ್ತಕ ಪರೀಕ್ಷೆ ವಿದ್ಯಾರ್ಥಿಯ ಆಲೋಚನಾಶಕ್ತಿಯನ್ನು ಪರೀಕ್ಷಿಸುತ್ತದೆ. ಈಗಿನಂತೆ ಬಾಯಿಪಾಠ ಮಾಡುವುದನ್ನಲ್ಲ. ಆದರೆ ನಮ್ಮ ಎಷ್ಟು ಜನ ಅಧ್ಯಾಪಕರುಗಳು ಈ ನಮೂನೆಯಲ್ಲಿ ಹೇಳಿ ಕೊಡಲು ಮತ್ತು ಪರೀಕ್ಷಿಸಲು ಸಿದ್ಧರಾಗಿದ್ದಾರೆ? ಶಾಲೆಯಲ್ಲಿ ಟೀಚರು ಕೊಟ್ಟ ನೋಟ್ಸಿನಲ್ಲಿರುವ ವಾಕ್ಯಗಳನ್ನು ಹಾಗೆಯೇ ಬರೆದರೆ ಮಾತ್ರ ಮಾರ್ಕು ನೀಡುವ ಟೀಚರುಗಳೇ ತುಂಬಿದ್ದಾರೆ. ಇದನ್ನು ನಾನು ನನ್ನ ಮಕ್ಕಳು ಶಾಲೆಗೆ ಹೋಗುತ್ತಿದ್ದಾಗ ಪೇರೆಂಟ್ ಟೀಚರ್ಸ್ ಮೀಟಿಂಗ್‌ಗಳಲ್ಲಿ ಭಾಗವಹಿಸಿ ಆದ ಅನುಭವದಿಂದ ಹೇಳುತ್ತಿದ್ದೇನೆ. ನನ್ನ ಮಕ್ಕಳ ಮೇಲೆ ಟೀಚರುಗಳ ದೂರು ಏನಿತ್ತೆಂದರೆ ಅವರು ನೋಟ್ಸಿನಲ್ಲಿ ಕೊಟ್ಟಂತೆ ಬರೆಯುವುದಿಲ್ಲ ಎಂದು. ಸ್ವಂತ ವಾಕ್ಯದಲ್ಲಿ ಬರೆದರೇ ಸಹಿಸದ ಟೀಚರುಗಳು ಸ್ವಂತ ಅಭಿಪ್ರಾಯವನ್ನು ಮಾನ್ಯ ಮಾಡುತ್ತಾರೆಯೇ?</p>
<p>ತೆರೆದ ಪುಸ್ತಕ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ತಯಾರಿಸಲೂ ತುಂಬ ಕಷ್ಟವಿದೆ. ಪುಸ್ತಕದಲ್ಲಿ ನೀಡಿದ ಮಾಹಿತಿಯನ್ನೇ ನೇರವಾಗಿ ಕೇಳುವಂತಿಲ್ಲ. ಅದರ ಆಧಾರದಲ್ಲಿ ವಿದ್ಯಾರ್ಥಿ ಆಲೋಚಿಸಿ ಬರೆಯಲು ಪ್ರೇರೇಪಿಸುವಂತೆ ಪ್ರಶ್ನೆ ಪತ್ರಿಕೆ ರೂಪಿಸಬೇಕು. ಇದೇನೂ ಸುಲಭದ ಕೆಲಸವಲ್ಲ. ಒಂದು ಉದಾಹರಣೆ ನೋಡೋಣ- ಓಮ್ಸ್ ಲಾ ಎಲ್ಲರಿಗೂ ಗೊತ್ತು. V=IR &amp; W=VI. ಆದರೆ ಇದನ್ನೇ ಆಧರಿಸಿ ಪ್ರಶ್ನೆ ಕೇಳಿ ನೋಡೋಣ. ಒಂದು ಇಸ್ತ್ರಿ ಪೆಟ್ಟಿಗೆಯ ವಾಟೇಜ್ 1000 ಇದೆ, ಅದಕ್ಕೆ ಎಷ್ಟು ಆಂಪಿಯರ್‌ನ ಫ್ಯೂಸ್ ಹಾಕಬೇಕು ಎಂದು ಪ್ರಶ್ನೆ ತಯಾರಿಸಿದರೆ ವಿದ್ಯಾರ್ಥಿ ಇರಲಿ ಅರ್ಧದಷ್ಟು ಅಧ್ಯಾಪಕರುಗಳಿಗೂ ಉತ್ತರ ಗೊತ್ತಾಗಲಾರದು. ಈ ನಮೂನೆಯ ಪ್ರಶ್ನೆ ಪತ್ರಿಕೆ ತಯಾರಿಸಲು ಎಷ್ಟು ಜನ ಅಧ್ಯಾಪಕರುಗಳಿಗೆ ಸಾಧ್ಯವಿದೆ?</p>
<p>ಆದುದರಿಂದ ನಮ್ಮ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ವಿಷಯಗಳಿಗೂ ತೆರೆದ ಪುಸ್ತಕ ಪರೀಕ್ಷೆ ನಡೆಸುವಂತಿಲ್ಲ.</p>
<p>ವಸ್ತು ನಿಷ್ಠ ಪ್ರತಿಕ್ರಿಯೆಗಳಿಗೆ ಮಾತ್ರ ಸ್ವಾಗತ.</p><p>The post <a href="http://vishvakannada.com/blog/open-book-exam/">ತೆರೆದ ಪುಸ್ತಕ ಪರೀಕ್ಷೆ (Open book exam)</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/blog/open-book-exam/feed/</wfw:commentRss>
			<slash:comments>2</slash:comments>
		
		
			</item>
		<item>
		<title>ಪವನಜ &#8211; ಈ ಹೆಸರಿನಲ್ಲೇನಿದೆ?</title>
		<link>http://vishvakannada.com/blog/pavanaja-name/</link>
					<comments>http://vishvakannada.com/blog/pavanaja-name/#comments</comments>
		
		<dc:creator><![CDATA[pavanaja]]></dc:creator>
		<pubDate>Sun, 05 Jul 2015 16:07:33 +0000</pubDate>
				<category><![CDATA[ಬ್ಲಾಗ್]]></category>
		<category><![CDATA[General]]></category>
		<category><![CDATA[Kannada]]></category>
		<guid isPermaLink="false">http://pavanaja.com/?p=610</guid>

					<description><![CDATA[<p>ಅಲ್ಲ ಮಾರಾಯ್ರೆ, ತಮ್ಮ ಹೆಸರಿನ ಬಗ್ಗೆ ತುಂಬ ಜನ ಏನೇನೋ ಲೇಖನ ಬರೆದಿದ್ದಾರಂತೆ. ಈ ಲೇಖನ ಬರೆಯುವುದು, ಪತ್ರಿಕೆಗೆ ಕಳುಹಿಸುವುದು, ಸಂಪಾದಕರು ಇಷ್ಟ ಪಟ್ಟರೆ ಪ್ರಕಟಿಸುವುದು ಎಲ್ಲ ಈಗ ಓಲ್ಡ್ ಫ್ಯಾಶನ್ ಆಗೋಯ್ತು. ಈಗ&#8230;</p>
<p>The post <a href="http://vishvakannada.com/blog/pavanaja-name/">ಪವನಜ – ಈ ಹೆಸರಿನಲ್ಲೇನಿದೆ?</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p>ಅಲ್ಲ ಮಾರಾಯ್ರೆ, ತಮ್ಮ ಹೆಸರಿನ ಬಗ್ಗೆ ತುಂಬ ಜನ ಏನೇನೋ ಲೇಖನ ಬರೆದಿದ್ದಾರಂತೆ. ಈ ಲೇಖನ ಬರೆಯುವುದು, ಪತ್ರಿಕೆಗೆ ಕಳುಹಿಸುವುದು, ಸಂಪಾದಕರು ಇಷ್ಟ ಪಟ್ಟರೆ ಪ್ರಕಟಿಸುವುದು ಎಲ್ಲ ಈಗ ಓಲ್ಡ್ ಫ್ಯಾಶನ್ ಆಗೋಯ್ತು. ಈಗ ಏನಿದ್ದರೂ ಬ್ಲಾಗುಗಳ ಕಾಲ. ಇಲ್ಲಿ ಯಾವ ಸಂಪಾದಕರ ಮರ್ಜಿಗೂ ಕಾಯಬೇಕಾಗಿಲ್ಲ. ಅಂತೆಯೇ ಹಲವು ಮಂದಿ ತಮ್ಮ ಹೆಸರಿನ ಬಗ್ಗೆ ಬ್ಲಾಗ್ ಬರೆದಿದ್ದೇ ಬರೆದಿದ್ದು. ಈ ಸಂತೇ ಮಂದಿ ಒಳಗ ನಾನೂ ಯಾಕ ನುಗ್ಬಾರ್ದು ಅಂತೀನಿ. ಅಂದ ಮ್ಯಾಲ ಹಂಗೆ ಬರೀಲೇ ಬೇಕಲ್ವಾ? ಇಗೋ ತಗೊಳ್ಳಿ. ನನ್ನ ಹೆಸರಿನ ಬಗ್ಗೆನೂ ಒಂದು ಬ್ಲಾಗ್. ಓದಿ ನಿಮ್ಮ ಸಮಯ ಹಾಳು ಮಾಡ್ಕೊಳ್ಳಿ.</p>
<p>ಮೊದಲನೆಯದಾಗಿ ನನ್ನ ಹೆಸರಿನ ಅರ್ಥ ಮತ್ತು ಅದು ಯಾಕೆ ನನಗೆ ಬಂತು ಎಂಬುದರ ಬಗ್ಗೆ ಸರಿಯಾದ ವಿವರಣೆ ನೀಡುತ್ತೇನೆ. ನಮ್ಮಲ್ಲಿ ಒಂದು ಪದ್ಧತಿ ಇದೆ. ಅದೇನೆಂದರೆ ಅಪ್ಪನ ಹೆಸರನ್ನು ಮಗನಿಗೆ ಇಡುವುದು. ಅಂದರೆ ನನಗೆ ನನ್ನ ಅಜ್ಜನ ಹೆಸರು ಬರಬೇಕು. ಈ ಅಪ್ಪನ ಹೆಸರನ್ನು ಮಗನಿಗೆ ಇಡುವ ಪದ್ಧತಿಯ ಬಗ್ಗೆ ಮಾಸ್ಟರ್ ಹಿರಣ್ಣಯ್ಯ ಒಂದು ವಿವರಣೆ ನೀಡಿದ್ದಾರೆ. ಅದು ಹೀಗಿದೆ &#8211; ಅಪ್ಪನಿಗೆ ಬೈಯಲಿಕ್ಕೆ ಆಗುವುದಿಲ್ಲ ನೋಡಿ. ಅದಕ್ಕೆ ಅವರ ಹೆಸರನ್ನು ಮಗನಿಗೆ ಇಟ್ಟು ಹೆಸರು ಹೇಳಿ ಯದ್ವಾತದ್ವಾ ಬೈಯುವುದು. ಈ ವಿವರಣೆ ಒತ್ತಟ್ಟಿಗಿರಲಿ. ನನ್ನ ಅಜ್ಜನ ಹೆಸರು ಭೀಮಯ್ಯ ಎಂದು. ನನ್ನ ತಂದೆ ಯಕ್ಷಗಾನ ಅರ್ಥಧಾರಿಯಾಗಿದ್ದರು. ಭಗವದ್ಗೀತೆಯನ್ನು ಕನ್ನಡದಲ್ಲಿ ವಾರ್ಧಕ ಷಟ್ಪದಿಯಲ್ಲಿ ಅನುವಾದಿಸಿದ್ದರು. ಭೀಮ ಎಂಬ ಅರ್ಥ ಬರುವ ಪವನಜ ಎಂಬ ಹೆಸರನ್ನು ನನಗೆ ಇಟ್ಟರು. ಭೀಮ ಮತ್ತು ಹನಮಂತ ಇಬ್ಬರೂ ವಾಯುಪುತ್ರರು. ಪವನ ಎಂದರೆ ವಾಯು. ಜ ಎಂದರೆ ಜನಿಸಿದ್ದು. ಪವನಜ ಎಂದರೆ ವಾಯುಪುತ್ರ ಅರ್ಥಾತ್ ಭೀಮ (ಅಥವಾ ಹನುಮಂತ). ಇದಿಷ್ಟು ನನ್ನ ಹೆಸರಿನ ವ್ಯುತ್ಪತ್ತಿಯ ವಿವರಣೆ. ಯಕ್ಷಗಾನದಲ್ಲಿ “ಏನಯ್ಯಾ ಪವನಜನೆ” ಎಂದು ಪ್ರಾರಂಭವಾಗುವ ಒಂದು ಪದ್ಯ ತುಂಬ ಪ್ರಖ್ಯಾತ.</p>
<p>ಕನ್ನಡದಲ್ಲಿ ವನಜ, ಜಲಜ, ಪಂಕಜ ಇತ್ಯಾದಿ ಹೆಸರುಗಳಿವೆ. ಈ ಎಲ್ಲ ಹೆಸರುಗಳೂ ಇರುವುದು ಸ್ತ್ರೀಯರಿಗೆ. ಜಲಜ ಎಂದರೆ ನೀರಿನಲ್ಲಿ ಜನಿಸಿದ್ದು ಎಂದರೆ ತಾವರೆ. ಪಂಕಜ ಎಂದರೆ ಕೆಸರಲ್ಲಿ ಜನಿಸಿದ್ದು ಎಂದರೆ ತಾವರೆಯೇ. ಕೆಸರಲ್ಲಿ ಜನಿಸಿದ್ದು ಎಂದರೆ ಸೊಳ್ಳೆಯೂ ಆಗಬಹುದು ಎಂದು ತರ್ಲೆ ತೆಗೆಯಬೇಡಿ ಮತ್ತೆ. ಹಾಗೆ ಹೇಳಿದರೆ ಪಂಕಜ ಎಂಬ ಹೆಸರಿನವರು ನಮಗೆ ಎರಡು ಏಟು ಕೊಟ್ಟಾರು ನೋಡಿ. ವನಜ, ಜಲಜ, ಪಂಕಜ ಇದ್ದಂತೆ ಪವನಜ ಎಂದರೂ ಹುಡುಗಿ ಇರಬಹುದು ಎಂದು ಹಲವರು ಅಂದುಕೊಂಡಿದ್ದರು. ಈಗಲೂ ಕೆಲವರು ಅಂದುಕೊಂಡಿರಬಹುದು. ನಾನು ಮೈಸೂರಿನಲ್ಲಿ ಎಂಎಸ್‌ಸಿ ಕಲಿಯುತ್ತಿದ್ದಾಗ ಊರಿನಿಂದ ನನ್ನ ಅತ್ತೆ ಮಗಳು ಹುಡುಗಿಯರಿಗೆ ಸಹಜವಾದ ಮುದ್ದಾದ ಕೈಬರಹದಲ್ಲಿ ನನಗೆ ಕಾಗದ ಬರೆದು ಸ್ನಾತಕೋತ್ತರ ವಿದ್ಯಾರ್ಥಿ ನಿಲಯ ಮಾನಸಗಂಗೋತ್ರಿ ಎಂದು ವಿಳಾಸ ಬರೆದು ಪತ್ರ ಕಳುಹಿಸಿದ್ದಳು. ವಿದ್ಯಾರ್ಥಿ ನಿಲಯ ಎಂದು ಬರೆದಿತ್ತು. ಹುಡುಗರ ಹಾಸ್ಟೆಲ್ ಎಂದು ಬರೆದಿರಲಿಲ್ಲ. ಹುಡುಗಿಯರ ಹಾಸ್ಟೆಲಿಗೆ ವಿದ್ಯಾರ್ಥಿನಿ ನಿಲಯ ಎಂದು ಹೇಳುತ್ತಾರೆ ಎಂಬಷ್ಟು ಭಾಷಾಜ್ಞಾನ ಅಂಚೆಯವನಿಗಿರಲಿಲ್ಲ. ಆತ ಆ ಕಾಗದವನ್ನು ಹುಡುಗಿಯರ ಹಾಸ್ಟೆಲಿಗೆ ರವಾನಿಸಿದ್ದ. ಹುಡುಗಿಯರ ಹಾಸ್ಟೆಲಿನಲ್ಲಿದ್ದ ನನ್ನ ಕ್ಲಾಸಿನ ಹುಡುಗಿಯರು ಆ ಕಾಗದವನ್ನು ತಂದು ಅದನ್ನು ಕೊಡಬೇಕಾದರೆ ಕ್ಯಾಂಟೀನಿನಲ್ಲಿ ಮಸಾಲೆ ದೋಸೆ ಕೊಡಬೇಕು ಎಂದು ಪೀಡಿಸಿದ್ದರು.</p>
<p>ಸುಮಾರು ಹನ್ನೆರಡು ವರ್ಷಗಳ ಹಿಂದೆ (೨೦೦೩) ವಿಜಯಕರ್ನಾಟಕ ಪತ್ರಿಕೆಯಲ್ಲಿ ಇಳೆ ಎಂಬ ಹೆಸರಿನಲ್ಲಿ ನನ್ನ ಅಂಕಣ ಲೇಖನ ಪ್ರತಿ ವಾರ ಬರುತ್ತಿತ್ತು. ಅದರಲ್ಲಿ ಗಣಕ ಮತ್ತು ಅಂತರಜಾಲ ಬಗ್ಗೆ ಬರೆಯುತ್ತಿದ್ದೆ. ಓದುಗರ ಪತ್ರಗಳಿಗೆ ಉತ್ತರವನ್ನೂ ನೀಡುತ್ತಿದ್ದೆ. ಅರ್ಧದಷ್ಟು ಇಮೈಲ್‌ಗಳು dear madam ಎಂದೇ ಪ್ರಾರಂಭವಾಗುತ್ತಿದ್ದವು. ಆಗ ಗೂಗ್ಲ್ ಇಮೇಜ್ ಇರಲಿಲ್ಲ ನೋಡಿ. ಆದುದರಿಂದ ನನ್ನ ಫೋಟೋ ಎಲ್ಲೂ ಕಂಡಿರಲಿಕ್ಕಿಲ್ಲ. ಒಮ್ಮೆ ನಾನು ಆಗ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ಟರ ಕಚೇರಿಯಲ್ಲಿ ಕುಳಿತುಕೊಂಡು ಹೀಗೆ ಉಭಯಕುಶಲೋಪರಿ ಮಾತನಾಡುತ್ತಿದ್ದಾಗ ಜಯಂತ ಕಾಯ್ಕಿಣಿಯವರು ಅಲ್ಲಿಗೆ ಬಂದಿದ್ರು. ಏನೇನೋ ಮಾತನಾಡುತ್ತ, ನನಗೆ ಡಿಯರ್ ಮೇಡಂ ಎಂದು ಇಮೈಲ್ ಬರುತ್ತಿರುವುದನ್ನು ಹೇಳಿ, ನನ್ನ ಫೋಟೋವನ್ನೂ ಪ್ರಕಟಿಸಿ ಎಂದೆ. ಆಗ ಜಯಂತ ಕಾಯ್ಕಿಣಿಯವರು ಕೂಡಲೆ ಹೇಳಿದರು -ಬೇಡ, ಆಗ ನಿಮ್ಮ ಓದುಗರ ಸಂಖ್ಯೆ ಕಡಿಮೆಯಾಗಿಬಿಡುತ್ತದೆ! ನಾನು ಸ್ತ್ರೀ ಎಂದುಕೊಂಡು ಆ ಕಾರಣಕ್ಕಾಗಿ ಎಷ್ಟು ಜನ ಓದಿದ್ದರೋ ಗೊತ್ತಿಲ್ಲ.</p>
<p>ಈಗ ಪ್ರಜಾವಾಣಿಯಲ್ಲಿ ಗ್ಯಾಜೆಟ್‌ಲೋಕ ಅಂಕಣದಲ್ಲಿ ಈ ಸಮಸ್ಯೆ ಇಲ್ಲ. ಯಾಕೆಂದರೆ ಅದರಲ್ಲಿ ನನ್ನ ಫೋಟೋ ಕೂಡ ಇದೆ. ಅಷ್ಟು ಮಾತ್ರವಲ್ಲ, ಈಗ ಗೂಗ್ಲ್ ಇಮೇಜ್ ಇದೆ, ವಿಕಿಪೀಡಿಯ ಇದೆ, ಪತ್ರಿಕೆಗಳಲ್ಲಿ ಹಲವು ಸಲ ನನ್ನ ಫೋಟೋ ಬಂದಿದೆ. ಆದುದರಿಂದ ಈಗ ಪವನಜ ಎಂದರೆ ಸ್ತ್ರೀ ಎಂದುಕೊಳ್ಳುವವರ ಸಂಖ್ಯೆ ನಗಣ್ಯ. ನಗಣ್ಯ ಎಂದು ಯಾಕೆ ಹೇಳಿದೆನೆಂದರೆ ಹಾಗೆ ಅಂದುಕೊಳ್ಳುವವರು ಈಗಲೂ ಇದ್ದಾರೆ ಎಂದು ತಿಳಿಸಲು. ಯಾವಾಗಲೋ ಒಮ್ಮೆ “ಮೇಡಂ ಪವನಜ ಅವರಲ್ಲಿ ಮಾತನಾಡಬೇಕಿತ್ತು” ಎಂದು ಮನೆಗೆ ಫೋನ್ ಬರುವುದಿದೆ.</p>
<p>೨೦೧೧ರಲ್ಲಿ ವಿಕಿಪೀಡಿಯದ ದಶಮಾನೋತ್ಸವ ಕಾರ್ಯಕ್ರಮ ಮೈಸೂರಿನಲ್ಲಿ ಜರುಗಿತು. ಅದರಲ್ಲಿ ನಾನೂ ಮಾತನಾಡಿದ್ದೆ. ಕನ್ನಡ ವಿಕಿಪೀಡಿಯದ ಪ್ರಾತ್ಯಕ್ಷಿಕೆಯನ್ನೂ ನೀಡಿದ್ದೆ. ಆ ಕಾರ್ಯಕ್ರಮಕ್ಕೆ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ವರದಿಗಾರ ಬಂದಿರಲಿಲ್ಲ. ಅವರದೇ ಸೋದರ ಪತ್ರಿಕೆಯಾಗಿದ್ದ ಕನ್ನಡಪ್ರಭದ ವರದಿಗಾರ ತಯಾರಿಸಿದ ವರದಿಯನ್ನು ಓದಿ ಅದನ್ನು ಇಂಗ್ಲೀಷಿಗೆ ಅನುವಾದಿಸಿರಬೇಕು. ಅದರಲ್ಲಿ ನನ್ನ ಬಗೆಗೆ “ಅವರು ಹೇಳಿದರು” ಎಂಬದುನ್ನು ಇಂಗ್ಲೀಷಿಗೆ ಅನುವಾದಿಸುವಾಗ she told ಎಂದು ಅನುವಾದಿಸಿದ್ದರು! ಅದೇನೋ ಹಳೆಯ ಕಥೆಯಾಯಿತು. ತೀರ ಇತ್ತೀಚೆಗೆ ಇದೇ ರೀತಿಯ ತಪ್ಪನ್ನು <a title="v4news" href="http://v4news.com/enliven-the-tulu-viki-fidia-first-and-then-add-tulu-to-the-8th-schedule-dr-ug-pavanaja-bangalore-rep-in-udupi/" target="_blank" rel="noopener">ಜಾಲತಾಣ</a>ವೊಂದು ಮಾಡಿದೆ.</p>
<p>ಪವನಜ ಎಂದರೆ ಹನುಮಂತ ಎಂಬ ಅರ್ಥವೂ ಬರುತ್ತದೆ ಎಂದೆನಲ್ಲ. ಮುಂಬಯಿಯ ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ನಾನು ವಿಜ್ಞಾನಿಯಾಗಿದ್ದಾಗ ಉಡುಪಿಯವರೇ ಒಬ್ಬರು ನಾರಾಯಣ ಎಂಬವರು ತುಂಬ ಆತ್ಮೀಯರಾಗಿದ್ದರು. ಅವರ ಕಂಪ್ಯೂಟರಿನಲ್ಲಿ ಏನೇ ಸಮಸ್ಯೆಯಿದ್ದರೂ ಅದನ್ನು ಪರಿಹರಿಸಲು ನಾನು ಸಹಾಯ ಮಾಡುತ್ತಿದ್ದೆ. ಒಂದು ಶನಿವಾರ, ರಜಾದಿನ, ಅವರು ಆಫೀಸಿಗೆ ಹೋಗಿದ್ದರು. ಅವರ ಕಂಪ್ಯೂಟರಿನಲ್ಲಿ ಏನೋ ಸಮಸ್ಯೆ ಬಂದಿತ್ತು. ನನ್ನ ಮನೆಗೆ ಫೋನಾಯಿಸಿದರು. ನಮ್ಮ ಮಾತುಕತೆ ಈ ರೀತಿ ನಡೆಯಿತು-<br />
ನಾನು: ಹಲೋ<br />
ಅವರು: ನಮಸ್ಕಾರ, ಹನುಮಂತ ಇದ್ದಾರಾ?<br />
“ಇಲ್ಲ, ಶ್ರೀರಾಮನ ಹತ್ತಿರ ಇದ್ದಾನೆ”<br />
“ನಾನು ನಾರಾಯಣ ಎಂದರೆ ಶ್ರೀರಾಮ. ಆತ ಇಲ್ಲಿಲ್ಲ”<br />
“ಹಾಗಿದ್ದರೆ ಆತ ನಿಮ್ಮ ಹೆಂಡತಿಯನ್ನು ಹುಡುಕಿಕೊಂಡು ಲಂಕೆಗೆ ಹೋಗಿದ್ದಾನೆ”<br />
ಮುಂದಕ್ಕೆ ಏನು ಹೇಳಬೇಕು ಎಂದು ಅವರಿಗೆ ತಿಳಿಯಲಿಲ್ಲ. ಅವರ ಜಾಗದಲ್ಲಿ ನಾನಿದ್ದರೆ ಕೇಳಿಯೇ ಬಿಡುತ್ತಿದ್ದೆ “ಅಲ್ಲಿಂದ ಬಾಲ ಸುಟ್ಟುಕೊಂಡು ವಾಪಾಸು ಬರಲಿಲ್ಲವೇ?” ಎಂದು.</p>
<p>ನಾನು ಮುಂಬಯಿಯಲ್ಲಿದ್ದಾಗ ಬಹುತೇಕ ಮಂದಿಗೆ ನನ್ನ ಹೆಸರನ್ನು ಸರಿಯಾಗಿ ಉಚ್ಚರಿಸಲು ಬರುತ್ತಿರಲಿಲ್ಲ. ಕೆಲವು ಉತ್ತರ ಭಾರತೀಯರು ನನ್ನನ್ನು ತರ್ನೇಜ, ರಹೇಜ ಎಲ್ಲ ಇದ್ದಂತೆ ಪವನಜ ಎಂದರೆ ಒಬ್ಬ ಸಿಂಧಿ ಎಂದುಕೊಂಡಿದ್ದರು. ಇನ್ನು ಕೆಲವರು ನನ್ನನ್ನು ಪವನ್ ಝಾ ಎಂದುಕೊಂಡಿದ್ದರು. ಪಂಜಾಬಿಗಳಂತೂ ಪವನೇಜ ಎಂದೇ ಉಚ್ಚರಿಸುತ್ತಿದ್ದರು. ಉತ್ತರ ಕರ್ನಾಟಕದಲ್ಲಿ ಮನುಷ್ಯರು ಅವರ ಹೆಸರಿನ ಬದಲಿಗೆ ಊರಿನ ಹೆಸರಿನ ಮೂಲಕ ತಿಳಿಯಲ್ಪಡುತ್ತಾರೆ. ಮುಂಬಯಿಯಲ್ಲಿದ್ದ ಅಂತಹ ಕೆಲವು ಮಂದಿ ನನ್ನನ್ನು ಉಡುಪಿಯ ಪಕ್ಕದ ಪಾವಂಜದವನು ಅಂದುಕೊಂಡಿದ್ದರು.</p>
<p>&nbsp;</p>
<p>ಅದೆಲ್ಲ ಸರಿ, ಈ ಯು.ಬಿ. ಎಂದರೇನು? ವಿಜಯ ಮಲ್ಯ ಅವರ ಯು.ಬಿ.ಗೂ ನಿಮಗೂ ಏನು ಸಂಬಂಧ ಎಂದೂ ಕೆಲವರು ಪ್ರಶ್ನಿಸಿದ್ದಿದೆ. ಅದಕ್ಕೂ ನನ್ನಲ್ಲಿ ತರ್ಲೆ ಉತ್ತರಗಳಿವೆ. U.B. ಅಂದರೆ unbelievable ಎಂದು! ನಾನು ಕೆಲವೊಮ್ಮೆ ನಕ್ಷತ್ರಿಕನಂತೆ ಪೀಡಿಸುವುದಿದೆ. ಅಂತಹ ಸಂದರ್ಭಗಳಲ್ಲಿ unbearable! ನಿಜವಾದ ಪೂರ್ಣ ರೂಪ &#8211; ಉಬರಡ್ಕ ಬೆಳ್ಳಿಪ್ಪಾಡಿ. ಉಬರಡ್ಕ ನಮ್ಮ ಕುಟುಂಬದ ಮೂಲ ಊರು. ಬೆಳ್ಳಿಪ್ಪಾಡಿ ನಾನು ಜನಿಸಿ ಬೆಳೆದ ಊರು.</p>
<p>&nbsp;</p>
<p>ನಾನು ತೈವಾನಿನಲ್ಲಿದ್ದಾಗ ಅಲ್ಲಿ ನನ್ನ ಸಹೋದ್ಯೋಗಿಗಳಿಗೆ ಯಾರಿಗೂ ನನ್ನ ಹೆಸರನ್ನು ಉಚ್ಚರಿಸಲು ಬರುತ್ತಿರಲಿಲ್ಲ. Pavanaja U B ಎಂಬುದರ ಹ್ರಸ್ವ ರೂಪ PUB ಆಗುತ್ತದೆ. ಆದುದರಿಂದ ನನ್ನನ್ನು ಅಲ್ಲಿ ಪಬ್ ಎಂದೇ ಕರೆಯುತ್ತಿದ್ದರು!</p><p>The post <a href="http://vishvakannada.com/blog/pavanaja-name/">ಪವನಜ – ಈ ಹೆಸರಿನಲ್ಲೇನಿದೆ?</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/blog/pavanaja-name/feed/</wfw:commentRss>
			<slash:comments>7</slash:comments>
		
		
			</item>
		<item>
		<title>ಭೈರಪ್ಪನವರ ಯಾನ</title>
		<link>http://vishvakannada.com/blog/yaana/</link>
					<comments>http://vishvakannada.com/blog/yaana/#comments</comments>
		
		<dc:creator><![CDATA[pavanaja]]></dc:creator>
		<pubDate>Sat, 02 Aug 2014 15:39:03 +0000</pubDate>
				<category><![CDATA[ಬ್ಲಾಗ್]]></category>
		<category><![CDATA[General]]></category>
		<category><![CDATA[Kannada]]></category>
		<category><![CDATA[ಭೈರಪ್ಪ]]></category>
		<category><![CDATA[ಯಾನ]]></category>
		<guid isPermaLink="false">http://pavanaja.com/?p=596</guid>

					<description><![CDATA[<p>ಭೈರಪ್ಪನವರ &#8220;ಯಾನ&#8221; ಓದಿ ಮುಗಿಸಿದೆ. ಭೈರಪ್ಪ ಎಂದೊಡನೆ ಪುಸ್ತಕದ ಬಗ್ಗೆ ನಮ್ಮ ಊಹೆ, ಕಲ್ಪನೆ ತುಂಬ ಮೇಲ್ಮಟ್ಟದಲ್ಲಿರುತ್ತದೆ. ಅದರಲ್ಲೂ ಈ ಕಾದಂಬರಿ ಬರೆಯಲು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಾಲ ಕಳೆದುದು, ಇಸ್ರೋಗೆ ಹೋಗಿದ್ದು, ಪೈಲಟ್‌ಗಳ&#8230;</p>
<p>The post <a href="http://vishvakannada.com/blog/yaana/">ಭೈರಪ್ಪನವರ ಯಾನ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<div data-ft="{&quot;tn&quot;:&quot;K&quot;}">
<p>ಭೈರಪ್ಪನವರ &#8220;ಯಾನ&#8221; ಓದಿ ಮುಗಿಸಿದೆ. ಭೈರಪ್ಪ ಎಂದೊಡನೆ ಪುಸ್ತಕದ ಬಗ್ಗೆ ನಮ್ಮ ಊಹೆ, ಕಲ್ಪನೆ ತುಂಬ ಮೇಲ್ಮಟ್ಟದಲ್ಲಿರುತ್ತದೆ. ಅದರಲ್ಲೂ ಈ ಕಾದಂಬರಿ ಬರೆಯಲು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಾಲ ಕಳೆದುದು, ಇಸ್ರೋಗೆ ಹೋಗಿದ್ದು, ಪೈಲಟ್‌ಗಳ ಮಾತುಕತೆ ನಡೆಸಿದ್ದು -ಹೀಗೆಲ್ಲ ಅವರೇ ಹಿನ್ನುಡಿಯಲ್ಲಿ ಬರೆದುಕೊಂಡಿದ್ದಾರೆ. ಅವುಗಳ ಬಗ್ಗೆ ಪತ್ರಿಕೆಯಲ್ಲೀ ಈಗಾಗಲೆ ಬಂದಿದೆ. ಆದುದರಿಂದ ಅಂತರಿಕ್ಷಯಾನ, ಅದರಲ್ಲಿ ನಡೆಯುವ ಚಟುವಟಿಕೆಗಳು, ಅದರಿಂದ ಮನಸ್ಸಿನ ಮೇಲೆ ಆಗುವ ಪರಿಣಾಮ, ಅಲ್ಲಿಯ ಜೀವನ, ಆಹಾರ, ಇತ್ಯಾದಿ ಹಲವು ಕಲ್ಪನೆಗಳು ಮೂಡುತ್ತವೆ. ಆದರೆ ಇದು ವೈಜ್ಞಾನಿಕ ಕಾದಂಬರಿ ಅಲ್ಲ, ಅವುಗಳನ್ನು ಆಶಿಸಬೇಡಿ ಎಂದು ಅವರೇ ಸಂದರ್ಶನದಲ್ಲಿ ಹೇಳಿದುದನ್ನು ಓದಿದ ನೆನಪು. ಅಂದ ಮೇಲೆ ಇದರಲ್ಲಿ ವೈಜ್ಞಾನಿಕ ಮಾಹಿತಿಗಳಿಲ್ಲ, ಇರುವ ವಿವರಣೆಗಳಲ್ಲೂ ಹಲವು ತಪ್ಪುಗಳಿವೆ ಎಂಬುದನ್ನು ಬಿಟ್ಟುಬಿಡೋಣ.</p>
<p>ಇನ್ನುಳಿದಂತೆ ಇದು ಭೈರಪ್ಪನವರ ಇತರೆ ಹಲವು ಕಾದಂಬರಿಗಳಲ್ಲಿ ಈಗಾಗಲೆ ಬಂದು ಹೋದ ಬೀಜ-ಕ್ಷೇತ್ರ ಜಿಜ್ಞಾಸೆ, ಮನುಷ್ಯ-ಮನುಷ್ಯರ ಸಂಬಂಧಗಳ ಜಿಜ್ಞಾಸೆ, ಹೆಣ್ಣು-ಗಂಡು, ಇತ್ಯಾದಿ ಎಲ್ಲ ಭೈರಪ್ಪನವರು ಹಲವು ಸಲ ಬರೆದ ವಿಷಯಗಳೇ ಆಗಿವೆ. ಭೈರಪ್ಪ ಎಂದೊಡನೆ ಅತಿಯಾದ ಅಪೇಕ್ಷೆ ಇಟ್ಟುಕೊಂಡು ಓದಿದರೆ ನಿರಾಸೆ ಖಚಿತ.</p>
<p>ಕನ್ನಡದಲ್ಲಿ ಪ್ರಕಟವಾಗುವ ಹಲವು ಕಾದಂಬರಿಗಳ ಮಟ್ಟಕ್ಕೆ ಹೋಲಿಸಿದರೆ ಇದೇನೂ ಕಳಪೆ ಕಾದಂಬರಿ ಅಲ್ಲ. ಆದರೆ ಭೈರಪ್ಪ ಎಂದೊಡನೆ ಅವರ ಕಾದಂಬರಿಗೆ ನಾವೇ ಒಂದು ಕಲ್ಪಿತ ಮಟ್ಟವನ್ನು ಹಾಕಿಕೊಂಡಿರುತ್ತೇವೆ. ಅದನ್ನು ಇದು ತಲುಪಿಲ್ಲ ಎಂದು ನಿರಾಸೆಯಾಗುತ್ತದೆ.</p>
<p>ಇನ್ನು ಭೈರಪ್ಪನವರನ್ನು ದೂಷಿಸಲು ಕಾತರರಾಗಿರುವವರಿಗೆ ಈ ಕಾದಂಬರಿಯಲ್ಲಿ ಅವರು ಹಲವು ಅನುಕೂಲಗಳನ್ನು ತಾವಾಗಿಯೇ ಮಾಡಿಕೊಟ್ಟಿದ್ದಾರೆ. ಈಗಾಗಲೆ ಒಬ್ಬರು ಅಂತಹ ದೋಷಗಳನ್ನು ಮಾತ್ರವೇ ಹುಡುಕಿ ಜಾಲತಾಣವೊಂದರಲ್ಲಿ ಬರೆದೂ ಇದ್ದಾರೆ.</p>
</div><p>The post <a href="http://vishvakannada.com/blog/yaana/">ಭೈರಪ್ಪನವರ ಯಾನ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/blog/yaana/feed/</wfw:commentRss>
			<slash:comments>1</slash:comments>
		
		
			</item>
		<item>
		<title>ಪಿತ್ತ ಸಚಿವ!?</title>
		<link>http://vishvakannada.com/blog/%e0%b2%aa%e0%b2%bf%e0%b2%a4%e0%b3%8d%e0%b2%a4-%e0%b2%b8%e0%b2%9a%e0%b2%bf%e0%b2%b5/</link>
					<comments>http://vishvakannada.com/blog/%e0%b2%aa%e0%b2%bf%e0%b2%a4%e0%b3%8d%e0%b2%a4-%e0%b2%b8%e0%b2%9a%e0%b2%bf%e0%b2%b5/#comments</comments>
		
		<dc:creator><![CDATA[admin]]></dc:creator>
		<pubDate>Tue, 30 Sep 2008 21:34:47 +0000</pubDate>
				<category><![CDATA[ಬ್ಲಾಗ್]]></category>
		<category><![CDATA[Featured Article]]></category>
		<category><![CDATA[General]]></category>
		<guid isPermaLink="false">http://localhost/vishwakannada/?p=486</guid>

					<description><![CDATA[<p>ಕೇಂದ್ರ ಸರಕಾರದಲ್ಲೊಬ್ಬ ಪಿತ್ತ ಸಚಿವ ಇರುವುದು ನಿಮಗೆ ಗೊತ್ತೆ? ಆಶ್ಚರ್ಯವಾಯಿತೇ? ಹಾಗಿದ್ದರೆ ಜೊತೆಗೆ ಇರುವ ಭಾವಚಿತ್ರ ನೋಡಿ. ಇದು ದೂರದರ್ಶನದ ಕನ್ನಡ ವಾಹಿನಿ ಚಂದನದಲ್ಲಿ ವಾರ್ತಾಪ್ರಸಾರ ಆಗುತ್ತಿದ್ದಾಗ ತೆಗೆದ ಚಿತ್ರ (೩೦-೯-೨೦೦೮)</p>
<p>The post <a href="http://vishvakannada.com/blog/%e0%b2%aa%e0%b2%bf%e0%b2%a4%e0%b3%8d%e0%b2%a4-%e0%b2%b8%e0%b2%9a%e0%b2%bf%e0%b2%b5/">ಪಿತ್ತ ಸಚಿವ!?</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p>ಕೇಂದ್ರ ಸರಕಾರದಲ್ಲೊಬ್ಬ ಪಿತ್ತ ಸಚಿವ ಇರುವುದು ನಿಮಗೆ ಗೊತ್ತೆ? ಆಶ್ಚರ್ಯವಾಯಿತೇ? ಹಾಗಿದ್ದರೆ ಜೊತೆಗೆ ಇರುವ ಭಾವಚಿತ್ರ ನೋಡಿ. ಇದು ದೂರದರ್ಶನದ ಕನ್ನಡ ವಾಹಿನಿ ಚಂದನದಲ್ಲಿ ವಾರ್ತಾಪ್ರಸಾರ ಆಗುತ್ತಿದ್ದಾಗ ತೆಗೆದ ಚಿತ್ರ (೩೦-೯-೨೦೦೮)<br />
<img decoding="async" src="http://vishvakannada.com/files/TV-capture0001-s.jpg">   </p><p>The post <a href="http://vishvakannada.com/blog/%e0%b2%aa%e0%b2%bf%e0%b2%a4%e0%b3%8d%e0%b2%a4-%e0%b2%b8%e0%b2%9a%e0%b2%bf%e0%b2%b5/">ಪಿತ್ತ ಸಚಿವ!?</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/blog/%e0%b2%aa%e0%b2%bf%e0%b2%a4%e0%b3%8d%e0%b2%a4-%e0%b2%b8%e0%b2%9a%e0%b2%bf%e0%b2%b5/feed/</wfw:commentRss>
			<slash:comments>4</slash:comments>
		
		
			</item>
		<item>
		<title>ದ್ವಿಭಾಷಾ ಫಾಂಟ್ ಬಗ್ಗೆ ಕರ್ನಾಟಕ ಸರಕಾರಕ್ಕೆ ನನ್ನ ಪತ</title>
		<link>http://vishvakannada.com/blog/%e0%b2%a6%e0%b3%8d%e0%b2%b5%e0%b2%bf%e0%b2%ad%e0%b2%be%e0%b2%b7%e0%b2%be-%e0%b2%ab%e0%b2%be%e0%b2%82%e0%b2%9f%e0%b3%8d-%e0%b2%ac%e0%b2%97%e0%b3%8d%e0%b2%97%e0%b3%86-%e0%b2%95%e0%b2%b0%e0%b3%8d/</link>
					<comments>http://vishvakannada.com/blog/%e0%b2%a6%e0%b3%8d%e0%b2%b5%e0%b2%bf%e0%b2%ad%e0%b2%be%e0%b2%b7%e0%b2%be-%e0%b2%ab%e0%b2%be%e0%b2%82%e0%b2%9f%e0%b3%8d-%e0%b2%ac%e0%b2%97%e0%b3%8d%e0%b2%97%e0%b3%86-%e0%b2%95%e0%b2%b0%e0%b3%8d/#comments</comments>
		
		<dc:creator><![CDATA[admin]]></dc:creator>
		<pubDate>Sat, 14 Jun 2008 17:25:12 +0000</pubDate>
				<category><![CDATA[ಬ್ಲಾಗ್]]></category>
		<guid isPermaLink="false">http://localhost/vishwakannada/?p=483</guid>

					<description><![CDATA[<p>ಕರ್ನಾಟಕ ಸರಕಾರವು ದ್ವಿಭಾಷಾ ಫಾಂಟ್ (bilingual font) ಗೆ ಸಂಕೇತಗಳನ್ನು ನಿಗದಿಪಡಿಸಲು ಹೊರಟಿದ್ದು ನಿಮಗೆ ತಿಳಿದಿರಬಹುದು. ಸರಕಾರಕ್ಕೆ ನಾನು ಬರೆದ ಪತ್ರ ಇಲ್ಲಿದೆ -</p>
<p>The post <a href="http://vishvakannada.com/blog/%e0%b2%a6%e0%b3%8d%e0%b2%b5%e0%b2%bf%e0%b2%ad%e0%b2%be%e0%b2%b7%e0%b2%be-%e0%b2%ab%e0%b2%be%e0%b2%82%e0%b2%9f%e0%b3%8d-%e0%b2%ac%e0%b2%97%e0%b3%8d%e0%b2%97%e0%b3%86-%e0%b2%95%e0%b2%b0%e0%b3%8d/">ದ್ವಿಭಾಷಾ ಫಾಂಟ್ ಬಗ್ಗೆ ಕರ್ನಾಟಕ ಸರಕಾರಕ್ಕೆ ನನ್ನ ಪತ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p>ಕರ್ನಾಟಕ ಸರಕಾರವು ದ್ವಿಭಾಷಾ ಫಾಂಟ್ (bilingual font) ಗೆ ಸಂಕೇತಗಳನ್ನು ನಿಗದಿಪಡಿಸಲು ಹೊರಟಿದ್ದು ನಿಮಗೆ ತಿಳಿದಿರಬಹುದು. ಸರಕಾರಕ್ಕೆ ನಾನು ಬರೆದ ಪತ್ರ ಇಲ್ಲಿದೆ &#8211;</p>
<p>ಇವರಿಗೆ,<br />
ಶ್ರೀಯುತ ಹೆಚ್.ಎಸ್. ಶಂಕರ್ ರವರಿಗೆ<br />
ಸೀನಿಯರ್ ಪ್ರೋಗ್ರಾಮರ್, ಇ-ಆಡಳಿತ ಇಲಾಖೆ,<br />
ಸಿ.ಆ.ಸು.ಇಲಾಖೆ (ಆಡಳಿತ ಸುಧಾರಣೆ)<br />
ಕೊಠಡಿ ಸಂಖ್ಯೆ ೧೪೫ಎ, ಬಹುಮಹಡಿ ಕಟ್ಟಡ,<br />
ಡಾ|| ಅಂಬೇಡ್ಕರ್ ರಸ್ತೆ, ಬೆಂಗಳೂರು-೫೬೦೦೦೧.</p>
<p>ಮಾನ್ಯರೆ,</p>
<p>ವಿಷಯ :ಕನ್ನಡದ ದ್ವಿಭಾಷಾ ಅಕ್ಷರ ರೂಪಗಳಿಗೆ ಬಳಸಬೇಕಾದ ಸಂಕೇತಗಳನ್ನು ನಿಗದಿಪಡಿಸುವ ಕುರಿತು.<br />
ಉಲ್ಲೇಖ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆಡಳಿತ ಕನ್ನಡಕ್ಕೆ ಸಂಬಂಧಿಸಿದ ಅಧೀನ ಕಾರ್ಯದರ್ಶಿಯವರ ಪತ್ರ ಸಂಖ್ಯೆ ಕಸಂವಾಪ್ರ ೧೧ ಕೆಓಎಲ್ ೨೦೦೮, ದಿ. ೧೯-೦೫-೨೦೦೮</p>
<p>ಮೇಲೆ ಉಲ್ಲೇಖಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಅಭಿಪ್ರಾಯಗಳು ಈ ಕೆಳಗಿನಂತಿವೆ.</p>
<p>೧. ಮೇಲೆ ಉಲ್ಲೇಖಿಸಿದ ಸರಕಾರೀ ಘೋಷಣೆಯಲ್ಲಿ ಈಗ ಈ ದ್ವಿಭಾಷಾ ಅಕ್ಷರರೂಪಗಳ (ಫಾಂಟ್) ಸಂಕೇತಗಳನ್ನು ನಿಗದಿಪಡಿಸುವುದು ಏಕೆ, ಇದರಿಂದ ಯಾವ ಸಮಸ್ಯೆಯ ಪರಿಹಾರ ಆಗುತ್ತದೆ ಎಂಬ ವಿವರಗಳು ಇಲ್ಲ. ದ್ವಿಭಾಷ ಸಂಕೇತಗಳ ನಿಗದೀಕರಣ ಯಾವ ಉದ್ದೇಶಕ್ಕೋಸ್ಕರ ಮಾಡುತ್ತಿರುವುದು ಎಂಬುದನ್ನು ಸ್ಪಷ್ಟೀಕರಿಸಿದರೆ ತುಂಬ ಒಳ್ಳೆಯದಿತ್ತು. ಉದ್ದೇಶವನ್ನು ಸ್ಪಷ್ಟೀಕರಿಸಿದರೆ ಆ ಸಮಸ್ಯೆಗೆ ಪರಿಣತರಿಂದ ಸರಿಯಾದ ಪರಿಹಾರ ಸಿಗುವ ಸಾಧ್ಯತೆಗಳಿವೆ.</p>
<p>೨. ಗಣಕಗಳಲ್ಲಿ ಫಾಂಟ್ ಆಧಾರಿತ ಕನ್ನಡ ಭಾಷೆಯ ಅಳವಡಿಕೆ ತುಂಬ ಹಿಂದಿನ ವಿಧಾನ. ಕರ್ನಾಟಕ ಸರಕಾರದ “ನುಡಿ” ತಂತ್ರಾಂಶವೂ ಈ ವಿಧಾನದಲ್ಲಿ ಕೆಲಸ ಮಾಡುತ್ತದೆ. ಈ ಮೂಲಕ ಮಾಹಿತಿಯ ಸಂಗ್ರಹಣೆ ಮಾಡಿದರೆ ಅದನ್ನು ಮಾಹಿತಿಯೆಂದು ಗಣಕವು ಪರಿಗಣಿಸುವುದಿಲ್ಲ. ಹೀಗೆ ಸಂಗ್ರಹಿಸಿಟ್ಟ ಮಾಹಿತಿಯಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಹುಡುಕಲು ಅಥವಾ ಅಕಾರಾದಿಯಾಗಿ ವಿಂಗಡಿಸಲು ಆಗುವುದಿಲ್ಲ. ಈಗ ಪ್ರಪಂಚವೇ ಯುನಿಕೋಡ್ ವಿಧಾನವನ್ನು ಬಳಸುತ್ತಿದೆ. ಎಲ್ಲ ಅಂತರಜಾಲ ತಾಣಗಳಲ್ಲಿ ಅದರಲ್ಲೂ ಮಖ್ಯವಾಗಿ ಬ್ಲಾಗಿಂಗ್ ತಾಣಗಳಲ್ಲಿ ಯುನಿಕೋಡನ್ನೇ ಬಳಸುತ್ತಿದ್ದಾರೆ. ಯುನಿಕೋಡ್ ವಿಧಾನದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಅಕಾರಾದಿಯಾಗಿ ವಿಂಗಡಿಸಬಹುದು ಮಾತ್ರವಲ್ಲ ಮಾಹಿತಿಯನ್ನು ಹುಡುಕಲೂ ಬಹುದು. ಉದಾಹರಣೆಗೆ ಗೂಗ್ಲ್‌ನಲ್ಲಿ ಕನ್ನಡ ಭಾಷೆಯಲ್ಲಿ ಯುನಿಕೋಡ್ ವಿಧಾನದಲ್ಲಿ ಬೆರಳಚ್ಚು ಮಾಡಿ ನಿಮಗೆ ಬೇಕಾದ ಮಾಹಿತಿಯನ್ನು ಹುಡುಕಿ ತೆಗೆಯಬಹುದು. ಯುನಿಕೋಡ್ ವಿಧಾನವು ಫಾಂಟ್ ಸ್ವಾತಂತ್ರ್ಯವನ್ನು ಹೊಂದಿದೆ. ಎಂದರೆ ಯುನಿಕೋಡ್ ವಿಧಾನದಲ್ಲಿ ಶೇಖರಿಸಿಟ್ಟ ಮಾಹಿತಿಯನ್ನು ಯಾವುದೇ ಓಪನ್‌ಟೈಪ್ ಫಾಂಟ್ ಬಳಸಿ ಓದಬಹುದು. ಕನ್ನಡ ಭಾಷೆಯಲ್ಲಿ ಡಾಟಾಬೇಸ್ ಪ್ರೋಗ್ರಾಮ್ಮಿಂಗ್ ಮಾಡಲು ಯುನಿಕೋಡ್ ಒಂದೇ ದಾರಿ. ಯುನಿಕೋಡ್ ಬಳಸುವಾಗ ಯಾವುದೇ ಪಾಂಟ್ ಸ್ಟಾಂಡಾರ್ಡ್‌ನ ಅಗತ್ಯವಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಸರಕಾರವು ದಶಕಗಳ ಹಿಂದಿನ ತಂತ್ರಜ್ಞಾನವನ್ನು ಈಗ ಮಾನಕ ಎಂದು ಘೋಷಿಸಲು ಹೊರಟಿದೆ. ಇದು ಕನ್ನಡ ಭಾಷೆಯ ಬೆಳವಣಿಗೆಗೆ ದೊಡ್ಡ ಕೊಡಲಿ ಪೆಟ್ಟೇ ಸರಿ.</p>
<p>೩. ಕನ್ನಡದಲ್ಲಿ ಈಗಾಗಲೇ ಹಲವು ಫಾಂಟ್ ಆಧಾರಿತ ತಂತ್ರಾಂಶಗಳು ಅಸ್ಥಿತ್ವದಲ್ಲಿವೆ. ಒಂದು ತಂತ್ರಾಂಶದಲ್ಲಿ ಬೆರಳಚ್ಚು ಮಾಡಿದ ಮಾಹಿತಿಯನ್ನು ಇನ್ನೊಂದು ತಂತ್ರಾಂಶದಲ್ಲಿ ತೆರೆಯಲು ಆಗುತ್ತಿಲ್ಲ. ಹೀಗಿರುವಾಗ ಸರಕಾರವು ಇನ್ನೊಂದು ಅಕ್ಷರರೂಪಕ್ಕೆ ಸಂಕೇತಗಳನ್ನು ನಿಗದಿಪಡಿಸಹೊರಟಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗುತ್ತದೆ.</p>
<p>೪. ಸರಕಾರದ ಹಲವು ವಿಭಾಗಗಳಲ್ಲಿ ಈಗಾಗಲೆ ಫಾಂಟ್ ಆಧಾರಿತ “ನುಡಿ” ತಂತ್ರಾಂಶವನ್ನು ಬಳಸಿ ತುಂಬ ಮಾಹಿತಿ, ಕಡತ, ಪತ್ರಗಳನ್ನು ತಯಾರಿಸಿ ಸಂಗ್ರಹಿಸಲಾಗಿದೆ. ಇವುಗಳನ್ನೆಲ್ಲ ದತ್ತಸಂಚಯ (ಡಾಟಾಬೇಸ್) ಮಾಡಿ ಅದರಲ್ಲಿರುವ ಮಾಹಿತಿಯನ್ನು ಹುಡುಕುವುದು, ಅಕರಾದಿಯಾಗಿ ವಿಂಗಡಿಸುವುದು, ಇತ್ಯಾದಿ ಮಾಡಬೇಕಾದರೆ ಅವನ್ನೆಲ್ಲ ಮೊದಲು ಯುನಿಕೋಡ್‌ಗೆ ಬದಲಿಸಬೇಕಾಗುತ್ತದೆ. ಇದು ದೊಡ್ಡ ಕಾರ್ಯ. ಇದಕ್ಕೆ ತುಂಬ ಶಕ್ತಿ ಮತ್ತು ಹಣ ವ್ಯಯವಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಇನ್ನೊಂದು ಫಾಂಟ್ ಆಧಾರಿತ ತಂತ್ರಾಂಶ ಮತ್ತು ಮಾಹಿತಿ ಸಂಗ್ರಹಕ್ಕೆ ಎಡೆ ಮಾಡಿಕೊಡುವುದು ಸರಕಾರದ ಅಂದರೆ ಕರ್ನಾಟಕದ ಜನತೆಯ ಸಂಪನ್ಮೂಲದ ದರ್ವ್ಯಯವೇ ಸರಿ. ಇದು ಕೂಡದು.</p>
<p>೫. ಸರಕಾರದಲ್ಲಿ ಈಗಾಲೆ ಏಕ ಭಾಷೆಯ ಅಕ್ಷರರೂಪದಲ್ಲಿ (ಫಾಂಟ್) ಮಾಹಿತಿ ಸಂಗ್ರಹಣೆಯ ಕಾರ್ಯ ನಡೆಯುತ್ತಿದೆ. ಇನ್ನೊಂದು ದ್ವಿಭಾಷೆಯ ಅಕ್ಷರರೂಪವನ್ನು ತಯಾರಿಸಿದರೆ ಅದರಲ್ಲೂ ಮಾಹಿತಿ ಸಂಗ್ರಹ ಆಗತೊಡಗುತ್ತದೆ. ಮುಂದೆ ಏಕ ಭಾಷೆ ಮತ್ತು ದ್ವಿಭಾಷೆಯ ಅಕ್ಷರರೂಪಗಳಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಒಂದು ಸಂಕೇತದಿಂದ ಇನ್ನೊಂದಕ್ಕೆ ಬದಲಿಸಲು ಹಾಗೂ ಇವೆರಡರಿಂದ ಯುನಿಕೋಡ್‌ಗೆ ಬದಲಿಸಲು ಮತ್ತೆ ಸರಕಾರದ ಎಂದರೆ ಜನತೆಯ ಸಂಪನ್ಮೂಲದ ದುರ್ವ್ಯಯ ಆಗುತ್ತದೆ. ಇದು ಕೂಡದು.</p>
<p>ಈ ಎಲ್ಲ ವಿವರಣೆಗಳ ಹಿನ್ನೆಲೆಯಲ್ಲಿ ಈ ದ್ವಿಭಾಷ ಅಕ್ಷರರೂಪ ಸಂಕೇತೀಕರಣವನ್ನು ಕೈಬಿಡಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ. ಇದರ ಜೊತೆಗೆಯೇ ಈ ಹಿಂದೆ ಏಕಭಾಷೆಯ ಅಕ್ಷರರೂಪದ ಸಂಕೇತೀಕರಣ ನಡೆದಿದ್ದರೂ ಆಸ್ಕಿಯ ಸಂಕೇತೀಕರಣ ಈಗ ಅಪ್ರಸ್ತುತವಾಗಿರುವುದರಿಂದ ಇನ್ನು ಮುಂದೆ ಕನ್ನಡ ಭಾಷೆಯ ಎಲ್ಲ ಗಣಕೀಕರಣಕ್ಕೆ ಯುನಿಕೋಡನ್ನೇ ಮಾನಕ ಎಂದು ಸರಕಾರವು ಘೋಷಿಸಬೇಕಾಗಿ ವಿನಂತಿಸುತ್ತಿದ್ದೇನೆ.</p>
<p>ವಂದನೆಗಳೊಂದಿಗೆ,</p>
<p>ತಮ್ಮ ವಿಶ್ವಾಸಿ,</p>
<p>(ಯು. ಬಿ. ಪವನಜ)   </p><p>The post <a href="http://vishvakannada.com/blog/%e0%b2%a6%e0%b3%8d%e0%b2%b5%e0%b2%bf%e0%b2%ad%e0%b2%be%e0%b2%b7%e0%b2%be-%e0%b2%ab%e0%b2%be%e0%b2%82%e0%b2%9f%e0%b3%8d-%e0%b2%ac%e0%b2%97%e0%b3%8d%e0%b2%97%e0%b3%86-%e0%b2%95%e0%b2%b0%e0%b3%8d/">ದ್ವಿಭಾಷಾ ಫಾಂಟ್ ಬಗ್ಗೆ ಕರ್ನಾಟಕ ಸರಕಾರಕ್ಕೆ ನನ್ನ ಪತ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/blog/%e0%b2%a6%e0%b3%8d%e0%b2%b5%e0%b2%bf%e0%b2%ad%e0%b2%be%e0%b2%b7%e0%b2%be-%e0%b2%ab%e0%b2%be%e0%b2%82%e0%b2%9f%e0%b3%8d-%e0%b2%ac%e0%b2%97%e0%b3%8d%e0%b2%97%e0%b3%86-%e0%b2%95%e0%b2%b0%e0%b3%8d/feed/</wfw:commentRss>
			<slash:comments>1</slash:comments>
		
		
			</item>
		<item>
		<title>ಕನ್ನಡ ಬ್ಲಾಗೋತ್ತಮರ ಸಭೆ</title>
		<link>http://vishvakannada.com/blog/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%ac%e0%b3%8d%e0%b2%b2%e0%b2%be%e0%b2%97%e0%b3%8b%e0%b2%a4%e0%b3%8d%e0%b2%a4%e0%b2%ae%e0%b2%b0-%e0%b2%b8%e0%b2%ad%e0%b3%86/</link>
					<comments>http://vishvakannada.com/blog/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%ac%e0%b3%8d%e0%b2%b2%e0%b2%be%e0%b2%97%e0%b3%8b%e0%b2%a4%e0%b3%8d%e0%b2%a4%e0%b2%ae%e0%b2%b0-%e0%b2%b8%e0%b2%ad%e0%b3%86/#comments</comments>
		
		<dc:creator><![CDATA[admin]]></dc:creator>
		<pubDate>Sun, 09 Mar 2008 19:31:37 +0000</pubDate>
				<category><![CDATA[ಬ್ಲಾಗ್]]></category>
		<category><![CDATA[Featured Article]]></category>
		<category><![CDATA[General]]></category>
		<guid isPermaLink="false">http://localhost/vishwakannada/?p=479</guid>

					<description><![CDATA[<p>ಕನ್ನಡ ಭಾಷೆಯಲ್ಲಿ ಬ್ಲಾಗಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ನಿಜಕ್ಕೂ ಸಂತಸದ ಸುದ್ದಿ. ಈ ಎಲ್ಲ ಬ್ಲಾಗೋತ್ತಮರುಗಳು ಎಂದಾದರೂ ಮುಖಾಮುಖಿ ಭೇಟಿಯಾದುದು ಇದೆಯೇ? ಬಹುಶಃ ಇಲ್ಲ. ಕೆಲವು ಮಂದಿ ಅಲ್ಲಿ ಇಲ್ಲಿ ಭೇಟಿಯಾಗಿರಬಹುದು. ಆದರೆ ಬ್ಲಾಗಿಗಳೇ ಪ್ರತ್ಯೇಕವಾಗಿ ಸಭೆ ಸೇರಿದ್ದು ಇಲ್ಲ. ಭಾರತೀಯ ಬ್ಲಾಗಿಗಳ ಸಭೆ ಹಲವು ಬಾರಿ ಬೇರೆ ಬೇರೆ ನಗರಗಳಲ್ಲಿ ಜರುಗಿವೆ. ಆದರೆ ಕನ್ನಡ ಬ್ಲಾಗಿಗಳ ಸಭೆ ಇದುವರೆಗೆ ಜರುಗಿಲ್ಲ.</p>
<p>The post <a href="http://vishvakannada.com/blog/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%ac%e0%b3%8d%e0%b2%b2%e0%b2%be%e0%b2%97%e0%b3%8b%e0%b2%a4%e0%b3%8d%e0%b2%a4%e0%b2%ae%e0%b2%b0-%e0%b2%b8%e0%b2%ad%e0%b3%86/">ಕನ್ನಡ ಬ್ಲಾಗೋತ್ತಮರ ಸಭೆ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p>ಕನ್ನಡ ಭಾಷೆಯಲ್ಲಿ ಬ್ಲಾಗಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ನಿಜಕ್ಕೂ ಸಂತಸದ ಸುದ್ದಿ. ಈ ಎಲ್ಲ ಬ್ಲಾಗೋತ್ತಮರುಗಳು ಎಂದಾದರೂ ಮುಖಾಮುಖಿ ಭೇಟಿಯಾದುದು ಇದೆಯೇ? ಬಹುಶಃ ಇಲ್ಲ. ಕೆಲವು ಮಂದಿ ಅಲ್ಲಿ ಇಲ್ಲಿ ಭೇಟಿಯಾಗಿರಬಹುದು. ಆದರೆ ಬ್ಲಾಗಿಗಳೇ ಪ್ರತ್ಯೇಕವಾಗಿ ಸಭೆ ಸೇರಿದ್ದು ಇಲ್ಲ. ಭಾರತೀಯ ಬ್ಲಾಗಿಗಳ ಸಭೆ ಹಲವು ಬಾರಿ ಬೇರೆ ಬೇರೆ ನಗರಗಳಲ್ಲಿ ಜರುಗಿವೆ. ಆದರೆ ಕನ್ನಡ ಬ್ಲಾಗಿಗಳ ಸಭೆ ಇದುವರೆಗೆ ಜರುಗಿಲ್ಲ.</p>
<p>ಪ್ರಥಮ ಬಾರಿಗೆ ಕನ್ನಡ ಬ್ಲಾಗೋತ್ತಮರು ಸಭೆ ಸೇರುತ್ತಿದ್ದಾರೆ. ಮಾರ್ಚ್ ೧೬ರಂದು ಸಂಜೆ ೪ ಘಂಟೆಗೆ ಬೆಂಗಳೂರಿನ ಬಸವನಗುಡಿಯ ಬಿ.ಪಿ. ವಾಡಿಯ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಎಲ್ಲರೂ ಸೇರುತ್ತಿದ್ದಾರೆ. ನೀವೂ ಬನ್ನಿ. ಆಸಕ್ತರನ್ನೂ ಕರೆತನ್ನಿ.</p>
<p><img decoding="async" src="http://vishvakannada.com/files/blog-meet-invite.jpg" alt="" align="middle" /></p>
<p><strong> </strong></p>
<p><strong>ಕನ್ನಡದ ಬ್ಲಾಗಿಗಳೆಲ್ಲ ಒಂದಾಗಿ ಬನ್ನಿ</strong></p><p>The post <a href="http://vishvakannada.com/blog/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%ac%e0%b3%8d%e0%b2%b2%e0%b2%be%e0%b2%97%e0%b3%8b%e0%b2%a4%e0%b3%8d%e0%b2%a4%e0%b2%ae%e0%b2%b0-%e0%b2%b8%e0%b2%ad%e0%b3%86/">ಕನ್ನಡ ಬ್ಲಾಗೋತ್ತಮರ ಸಭೆ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/blog/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%ac%e0%b3%8d%e0%b2%b2%e0%b2%be%e0%b2%97%e0%b3%8b%e0%b2%a4%e0%b3%8d%e0%b2%a4%e0%b2%ae%e0%b2%b0-%e0%b2%b8%e0%b2%ad%e0%b3%86/feed/</wfw:commentRss>
			<slash:comments>2</slash:comments>
		
		
			</item>
		<item>
		<title>ಮೋಟೊರೋಲ ಎಸ್೭೦೫ ಬ್ಲೂಟೂತ್ ಇಯರ್‌ಫೋನ್</title>
		<link>http://vishvakannada.com/blog/%e0%b2%ae%e0%b3%8b%e0%b2%9f%e0%b3%8a%e0%b2%b0%e0%b3%8b%e0%b2%b2-%e0%b2%8e%e0%b2%b8%e0%b3%8d%e0%b3%ad%e0%b3%a6%e0%b3%ab-%e0%b2%ac%e0%b3%8d%e0%b2%b2%e0%b3%82%e0%b2%9f%e0%b3%82%e0%b2%a4%e0%b3%8d/</link>
					<comments>http://vishvakannada.com/blog/%e0%b2%ae%e0%b3%8b%e0%b2%9f%e0%b3%8a%e0%b2%b0%e0%b3%8b%e0%b2%b2-%e0%b2%8e%e0%b2%b8%e0%b3%8d%e0%b3%ad%e0%b3%a6%e0%b3%ab-%e0%b2%ac%e0%b3%8d%e0%b2%b2%e0%b3%82%e0%b2%9f%e0%b3%82%e0%b2%a4%e0%b3%8d/#respond</comments>
		
		<dc:creator><![CDATA[admin]]></dc:creator>
		<pubDate>Sun, 04 Nov 2007 11:38:53 +0000</pubDate>
				<category><![CDATA[ಬ್ಲಾಗ್]]></category>
		<guid isPermaLink="false">http://localhost/vishwakannada/?p=461</guid>

					<description><![CDATA[<h3>- ಡಾ. ಯು. ಬಿ. ಪವನಜ</h3>
<p>ಮೊಬೈಲ್ ಫೋನು ಬಳಸುವಾಗ ತುಂಬ ಹೊತ್ತು ಮಾತನಾಡಿದರೆ ಕಿವಿ ಬಿಸಿಯಾಗುವುದು ಗೊತ್ತಿದೆ ತಾನೆ? ಇದಕ್ಕೆ ಪರಿಹಾರವಾಗಿ ಹೆಚ್ಚಿನ ಮಂದಿ ಇಯರ್‌ಫೋನ್ ಬಳಸುವುದೂ ಗೊತ್ತಿರಬಹುದು. ಈ ಇಯರ್‌ಫೋನುಗಳಲ್ಲಿ ಎರಡು ವಿಧ -ತಂತಿ ಮೂಲಕ ಸಂಪರ್ಕಿಸುವಂತಹುದು  ಮತ್ತು ನಿಸ್ತಂತು. ನಿಸ್ತಂತು ಇಯರ್‌ಫೋನುಗಳು ಸಾಮಾನ್ಯವಾಗಿ ಬ್ಲೂಟೂತ್ ವಿಧಾನ ಮೂಲಕ ಫೋನಿಗೆ ಸಂಪರ್ಕ ಸಾಧಿಸುತ್ತವೆ. ಬ್ಲೂಟೂತ್ ಇಯರ್‌ಫೋನುಗಳಲ್ಲಿ ಕೂಡ ಮುಖ್ಯವಾಗಿ ಎರಡು ವಿಧ -ಮೋನೋ ಮತ್ತು ಸ್ಟೀರಿಯೋ. ಮೋನೋ ಇಯರ್‌ಫೋನುಗಳನ್ನು ತುಂಬ ಮಂದಿ ಬಳಸುತ್ತಾರೆ. ಇವುಗಳನ್ನು ಸಾಮನ್ಯವಾಗಿ ಕಿವಿಗೆ ಜೋಡಿಸಿರುತ್ತಾರೆ. ಇವುಗಳನ್ನು ಮಾತನಾಡಲು ಮಾತ್ರ ಬಳಸಬಹುದು. ಸಂಗೀತ ಆಲಿಸಲು ಇವು ಉಪಯುಕ್ತವಲ್ಲ. ಸಂಗೀತ ಆಲಿಸಲು ಸ್ಟೀರಿಯೋ ಇಯರ್‌ಫೋನೇ ಉತ್ತಮ. ಸ್ಟೀರಿಯೋ ಬ್ಲೂಟೂತ್ ಇಯರ್‌ಫೋನಿಗೆ ಒಂದು ಉದಾಹರಣೆ ಮೋಟೊರೋಲ ಕಂಪೆನಿಯ ಎಸ್-೭೦೫.</p>
<p>The post <a href="http://vishvakannada.com/blog/%e0%b2%ae%e0%b3%8b%e0%b2%9f%e0%b3%8a%e0%b2%b0%e0%b3%8b%e0%b2%b2-%e0%b2%8e%e0%b2%b8%e0%b3%8d%e0%b3%ad%e0%b3%a6%e0%b3%ab-%e0%b2%ac%e0%b3%8d%e0%b2%b2%e0%b3%82%e0%b2%9f%e0%b3%82%e0%b2%a4%e0%b3%8d/">ಮೋಟೊರೋಲ ಎಸ್೭೦೫ ಬ್ಲೂಟೂತ್ ಇಯರ್‌ಫೋನ್</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<h3>&#8211; ಡಾ. ಯು. ಬಿ. ಪವನಜ</h3>
<p>ಮೊಬೈಲ್ ಫೋನು ಬಳಸುವಾಗ ತುಂಬ ಹೊತ್ತು ಮಾತನಾಡಿದರೆ ಕಿವಿ ಬಿಸಿಯಾಗುವುದು ಗೊತ್ತಿದೆ ತಾನೆ? ಇದಕ್ಕೆ ಪರಿಹಾರವಾಗಿ ಹೆಚ್ಚಿನ ಮಂದಿ ಇಯರ್‌ಫೋನ್ ಬಳಸುವುದೂ ಗೊತ್ತಿರಬಹುದು. ಈ ಇಯರ್‌ಫೋನುಗಳಲ್ಲಿ ಎರಡು ವಿಧ -ತಂತಿ ಮೂಲಕ ಸಂಪರ್ಕಿಸುವಂತಹುದು  ಮತ್ತು ನಿಸ್ತಂತು. ನಿಸ್ತಂತು ಇಯರ್‌ಫೋನುಗಳು ಸಾಮಾನ್ಯವಾಗಿ ಬ್ಲೂಟೂತ್ ವಿಧಾನ ಮೂಲಕ ಫೋನಿಗೆ ಸಂಪರ್ಕ ಸಾಧಿಸುತ್ತವೆ. ಬ್ಲೂಟೂತ್ ಇಯರ್‌ಫೋನುಗಳಲ್ಲಿ ಕೂಡ ಮುಖ್ಯವಾಗಿ ಎರಡು ವಿಧ -ಮೋನೋ ಮತ್ತು ಸ್ಟೀರಿಯೋ. ಮೋನೋ ಇಯರ್‌ಫೋನುಗಳನ್ನು ತುಂಬ ಮಂದಿ ಬಳಸುತ್ತಾರೆ. ಇವುಗಳನ್ನು ಸಾಮನ್ಯವಾಗಿ ಕಿವಿಗೆ ಜೋಡಿಸಿರುತ್ತಾರೆ. ಇವುಗಳನ್ನು ಮಾತನಾಡಲು ಮಾತ್ರ ಬಳಸಬಹುದು. ಸಂಗೀತ ಆಲಿಸಲು ಇವು ಉಪಯುಕ್ತವಲ್ಲ. ಸಂಗೀತ ಆಲಿಸಲು ಸ್ಟೀರಿಯೋ ಇಯರ್‌ಫೋನೇ ಉತ್ತಮ. ಸ್ಟೀರಿಯೋ ಬ್ಲೂಟೂತ್ ಇಯರ್‌ಫೋನಿಗೆ ಒಂದು ಉದಾಹರಣೆ ಮೋಟೊರೋಲ ಕಂಪೆನಿಯ ಎಸ್-೭೦೫.</p>
<p>ಈಗಾಗಲೆ ತಿಳಿಸಿದಂತೆ ಮೋಟೊರೋಲ ಎಸ್-೭೦೫ ಇಯರ್‌ಫೋನ್ ಸ್ಟೀರಿಯೋ. ಅಂದರೆ ಎರಡು ಕಿವಿಗೂ ಒಂದೊಂದು ಇಯರ್‌ಫೋನ್ ಇದೆಯೆಂದಾಯಿತು. ಇದರ ವೈಶಿಷ್ಟ್ಯವೆಂದರೆ ಇದು ಕಿವಿಯ ಮೇಲೆ ಕುಳಿತುಕೊಳ್ಳುವ ಹೆಡ್‌ಫೋನ್ ಅಲ್ಲ. ಇದು ಒಂದು ದೊಡ್ಡ ಕ್ಲಿಪ್ಪಿನ ರೂಪದಲ್ಲಿದೆ. ಇದನ್ನು ಅಂಗಿಗೆ ಸಿಕ್ಕಿಸಿಕೊಳ್ಳಬಹುದು. ಇದರಲ್ಲಿ ಯಾವುದೇ ಇಯರ್‌ಫೋನ್ ಜೋಡಿಸಬಹುದಾದ ೩.೫ ಮಿಮಿ ಗಾತ್ರದ ಇಯರ್‌ಫೋನ್ ಕಿಂಡಿ ಇದೆ. ಇದುವೇ ಇದರ ಹೆಚ್ಚುಗಾರಿಕೆ. ಇತರೆ ಬಹಳಷ್ಟು ಬ್ಲೂಟೂತ್ ಹೆಡ್‌ಸೆಟ್‌ಗಳಲ್ಲಿ ಈ ಸೌಲಭ್ಯವಿಲ್ಲ. ಬಹುಶಃ ಇವರ ಇಯರ್‌ಫೋನ್ ಅಷ್ಟು ಚೆನ್ನಾಗಿಲ್ಲ ಎಂದು ಅವರಿಗೇ ತಿಳಿದಿದ್ದರಿಂದ ಗ್ರಾಹಕರು ತಮಗಿಷ್ಟವಾದ ಇಯರ್‌ಫೋನ್ ಬಳಸಲಿ ಎಂದು ಈ ಸೌಲಭ್ಯ ನೀಡಿರಬೇಕು :-).</p>
<p><img decoding="async" src="http://vishvakannada.com/files/Motorola_S705_SoundPilot_s.jpg"><br />
ಮೋಟೊರೋಲ ಎಸ್-೭೦೫ರ ವೈಶಿಷ್ಟ್ಯ ಕೇವಲ ಇಷ್ಟಕ್ಕೇ ಮುಗಿಯಲಿಲ್ಲ. ಇದರಲ್ಲಿ ಎಫ್‌ಎಂ ರೇಡಿಯೋವೂ ಇದೆ. ನಿಮ್ಮ ಮೊಬೈಲ್ ಫೋನಿನಲ್ಲಿ ಎಫ್‌ಎಂ ರೇಡಿಯೋ ಇಲ್ಲವೆಂದಾದಲ್ಲಿ ಇದು ನಿಜಕ್ಕೂ ಉತ್ತಮ ಆಯ್ಕೆ. ಫೋನಿನಲ್ಲಿ ಮಾತನಾಡುವುದು, ಮೊಬೈಲ್ ಫೋನಿನಲ್ಲಿ ಶೇಖರಿಸಿಟ್ಟ ಹಾಡುಗಳನ್ನು ಆಲಿಸುವುದು ಮತ್ತು ಎಫ್‌ಎಂ ರೇಡಿಯೋ ಆಲಿಸುವುದು -ಇವೆಲ್ಲವನ್ನು ಇದನ್ನು ಬಳಸಿ ಮಾಡಬಹುದು. ಮೊಬೈಲ್ ಫೋನಿನಿಂದ ಹಾಡು ಆಲಿಸುವಾಗ ಹಾಡುಗಳನ್ನು ನಿಲ್ಲಿಸುವುದು, ಹಿಂದಿನ ಅಥವಾ ಮುಂದಿನ ಹಾಡನ್ನು ಕೇಳುವುದು, ಹಾಡಿನ ಧ್ವನಿಮಟ್ಟವನ್ನು ಹೆಚ್ಚಿಸುವುದು ಅಥವಾ ಕಡಿಮೆ ಮಾಡುವುದು ಇವೆಲ್ಲವನ್ನು ಇದರಲ್ಲೇ ಮಾಡಬಹುದು.</p>
<p>ಇದು ಮೋಟೊರೋಲ ಫೋನುಗಳೊಂದಿಗೆ ಬಹಳ ಚೆನ್ನಾಗಿ ಸಂಪರ್ಕ ಸಾಧಿಸಿ ಕೆಲಸ ಮಾಡುತ್ತದೆ. ಇತರೆ ಫೋನುಗಳ ಜೊತೆ ಇವು ಕೆಲಸ ಮಾಡಬಲ್ಲವಾದರೂ ಇದನ್ನು ಬಳಸುವ ಮಂದಿ ಹಲವು ಸಮಸ್ಯೆಗಳನ್ನು ಅಂತರಜಾಲದಲ್ಲಿ ದಾಖಲಿಸಿದ್ದಾರೆ. ನಾನೂ ಕೂಡ ಇವೇ ಸಮಸ್ಯೆಗಳನ್ನು ಗಮನಿಸಿದ್ದೇನೆ. ಇವುಗಳು &#8211; ಫೋನು ಮಾಡುತ್ತಿರುವ ವ್ಯಕ್ತಿಯ ಹೆಸರು ನಮ್ಮ ವಿಳಾಸ ಪುಸ್ತಕದಲ್ಲಿದ್ದರೂ ಇದು ಅದನ್ನು ತೋರಿಸುವುದಿಲ್ಲ, ನಾವು ಮಾತನಾಡುವುದು ಕೇಳುವವರಿಗೆ ನಾವೆಲ್ಲೋ ನೀರಿನೊಳಗಿನಿಂದ ಮಾತನಾಡಿದಂತೆ ಕೇಳುವುದು, ಎಫ್‌ಎಂ ರೇಡಿಯೋ ಕೇಂದ್ರಗಳ ಕಂಪನಾಂಕವನ್ನು ಸ್ಮರಣೆಗೆ ಸೇರಿಸುವ ಸೌಲಭ್ಯ ಇಲ್ಲದಿರುವುದು, ಇದು ಅಂಗಿ ತೊಡುವ ಗಂಡಸರಿಗೇ ಮಾತ್ರವೇ ಉಪಯುಕ್ತ -ಇತ್ಯಾದಿ.</p>
<p>ಒಟ್ಟಿನಲ್ಲಿ ಹೇಳುವುದಾರೆ ಎಫ್‌ಎಂ ರೇಡಿಯೋ ಉಳ್ಳಂತಹ ಉತ್ತಮ ಬ್ಲೂಟೂತ್ ಸ್ಟೀರಿಯೋ ಇಯರ್‌ಫೋನ್ ಫೋನ್ ಬೇಕೆನ್ನುವವರಿಗೆ ಇದು ಉತ್ತಮ ಆಯ್ಕೆ. ನಿಮ್ಮಲ್ಲಿ ಬೇರೆ ಉತ್ತಮ ಸ್ಟೀರಿಯೋ ಹೆಡ್‌ಫೋನ್ (ಕ್ರಿಯೇಟಿವ್, ಬೋಸ್, ಇತ್ಯಾದಿ) ಮತ್ತು ಸ್ವಲ್ಪ ಹೆಚ್ಚಿನ ಹಣ (ಸುಮಾರ ೫೫೦೦ ರೂ) ಇದ್ದರೆ ಇದನ್ನು ಖಂಡಿತ ಕೊಳ್ಳಬಹುದು.   </p><p>The post <a href="http://vishvakannada.com/blog/%e0%b2%ae%e0%b3%8b%e0%b2%9f%e0%b3%8a%e0%b2%b0%e0%b3%8b%e0%b2%b2-%e0%b2%8e%e0%b2%b8%e0%b3%8d%e0%b3%ad%e0%b3%a6%e0%b3%ab-%e0%b2%ac%e0%b3%8d%e0%b2%b2%e0%b3%82%e0%b2%9f%e0%b3%82%e0%b2%a4%e0%b3%8d/">ಮೋಟೊರೋಲ ಎಸ್೭೦೫ ಬ್ಲೂಟೂತ್ ಇಯರ್‌ಫೋನ್</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/blog/%e0%b2%ae%e0%b3%8b%e0%b2%9f%e0%b3%8a%e0%b2%b0%e0%b3%8b%e0%b2%b2-%e0%b2%8e%e0%b2%b8%e0%b3%8d%e0%b3%ad%e0%b3%a6%e0%b3%ab-%e0%b2%ac%e0%b3%8d%e0%b2%b2%e0%b3%82%e0%b2%9f%e0%b3%82%e0%b2%a4%e0%b3%8d/feed/</wfw:commentRss>
			<slash:comments>0</slash:comments>
		
		
			</item>
		<item>
		<title>ನಾಗೇಶ ಹೆಗಡೆ ಮತ್ತು ಜಿ.ಟಿ.ಎನ್‌ರಿಗೆ ಅಭಿನಂದನೆಗಳು</title>
		<link>http://vishvakannada.com/blog/%e0%b2%a8%e0%b2%be%e0%b2%97%e0%b3%87%e0%b2%b6-%e0%b2%b9%e0%b3%86%e0%b2%97%e0%b2%a1%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%9c%e0%b2%bf-%e0%b2%9f%e0%b2%bf-%e0%b2%8e%e0%b2%a8/</link>
					<comments>http://vishvakannada.com/blog/%e0%b2%a8%e0%b2%be%e0%b2%97%e0%b3%87%e0%b2%b6-%e0%b2%b9%e0%b3%86%e0%b2%97%e0%b2%a1%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%9c%e0%b2%bf-%e0%b2%9f%e0%b2%bf-%e0%b2%8e%e0%b2%a8/#respond</comments>
		
		<dc:creator><![CDATA[admin]]></dc:creator>
		<pubDate>Sun, 04 Nov 2007 11:11:02 +0000</pubDate>
				<category><![CDATA[ಬ್ಲಾಗ್]]></category>
		<category><![CDATA[General]]></category>
		<guid isPermaLink="false">http://localhost/vishwakannada/?p=460</guid>

					<description><![CDATA[<p>ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ಒಂದು ವೈಶಿಷ್ಟ್ಯವಿದೆ. ಸರಕಾರವಿಲ್ಲದೆ ಯಾವುದೇ ರಾಜಕಾರಣಿಯ ವಶೀಲಿಯಿಲ್ಲದೆ ನೀಡಿದ ಪ್ರಶಸ್ತಿಯಿದು. ಈ ಸಲದ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದ್ದು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರು. ಹೀಗಾಗಿ ಈ ಸಲದ ಪ್ರಶಸ್ತಿಗೆ ಭಾಜನರಾದವರ ಹೆಸರುಗಳಿಗೆ ಯಾವುದೇ ಕಳಂಕವಿಲ್ಲ.</p>
<p>The post <a href="http://vishvakannada.com/blog/%e0%b2%a8%e0%b2%be%e0%b2%97%e0%b3%87%e0%b2%b6-%e0%b2%b9%e0%b3%86%e0%b2%97%e0%b2%a1%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%9c%e0%b2%bf-%e0%b2%9f%e0%b2%bf-%e0%b2%8e%e0%b2%a8/">ನಾಗೇಶ ಹೆಗಡೆ ಮತ್ತು ಜಿ.ಟಿ.ಎನ್‌ರಿಗೆ ಅಭಿನಂದನೆಗಳು</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p>ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ಒಂದು ವೈಶಿಷ್ಟ್ಯವಿದೆ. ಸರಕಾರವಿಲ್ಲದೆ ಯಾವುದೇ ರಾಜಕಾರಣಿಯ ವಶೀಲಿಯಿಲ್ಲದೆ ನೀಡಿದ ಪ್ರಶಸ್ತಿಯಿದು. ಈ ಸಲದ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದ್ದು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರು. ಹೀಗಾಗಿ ಈ ಸಲದ ಪ್ರಶಸ್ತಿಗೆ ಭಾಜನರಾದವರ ಹೆಸರುಗಳಿಗೆ ಯಾವುದೇ ಕಳಂಕವಿಲ್ಲ.</p>
<p><img decoding="async" src="http://www.vishvakannada.com/archives/photos/vol4no5/nagesh.jpg" align="right">ನನಗೆ ವೈಯಕ್ತಿಕವಾಗಿ ಈ ಸಲದ ಪ್ರಶಸ್ತಿ ತುಂಬ ಸಂತಸವನ್ನು ತಂದಿದೆ. ಅದಕ್ಕೆ ಕಾರಣ ಪ್ರಶಸ್ತಿಗೆ ಭಾಜನರಾದ ನಾಗೇಶ ಹೆಗಡೆ ಮತ್ತು ಜಿ.ಟಿ. ನಾರಾಯಣ ರಾವ್. ಇವರಿಬ್ಬರೂ ಕನ್ನಡ ವಿಜ್ಞಾನ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಜಿ.ಟಿ.ಎನ್ ಬಗ್ಗೆ ನಾನು ಈಗಾಗಲೆ ಇಸ್ಮಾಯಿಲ್ ಅವರ ಬ್ಲಾಗಿನ ಕೆಳಗೆ <a href="http://ismail.in/node/12">ಟಿಪ್ಪಣಿ ನಮೂದಿಸಿದ್ದೇನೆ</a>. ನಾಗೇಶ ಹೆಗಡೆಯವರು ಪ್ರಜಾವಾಣಿ ಪತ್ರಿಕೆಯಲ್ಲಿ ಹಲವು ವರ್ಷಗಳಿಂದೆ ವಿಜ್ಞಾನ ವಿಶೇಷ ಹೆಸರಿನ ಅಂಕಣ ಬರೆಯುತ್ತಿದ್ದಾರೆ. ಪ್ರಜಾವಾಣಿಯಲ್ಲಿ ಸಹಾಯಕ ಸಂಪಾದಕರಾಗಿ ಮತ್ತು ಸುಧಾ ವಾರಪತ್ರಿಕೆಯ ಸಂಪಾದಕರಾಗಿಯೂ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ.</p>
<p>ನಾಗೇಶ ಹೆಗಡೆ ಮತ್ತು ಜಿ.ಟಿ.ಎನ್‌ರಿಗೆ ಅಭಿನಂದನೆಗಳು. ಇದು ಕನ್ನಡ ವಿಜ್ಞಾನ ಲೇಖಕರುಗಳೆಲ್ಲರಿಗೆ ಸಂದ ಗೌರವ ಎಂದೂ ಹೇಳಬಹುದು.   </p><p>The post <a href="http://vishvakannada.com/blog/%e0%b2%a8%e0%b2%be%e0%b2%97%e0%b3%87%e0%b2%b6-%e0%b2%b9%e0%b3%86%e0%b2%97%e0%b2%a1%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%9c%e0%b2%bf-%e0%b2%9f%e0%b2%bf-%e0%b2%8e%e0%b2%a8/">ನಾಗೇಶ ಹೆಗಡೆ ಮತ್ತು ಜಿ.ಟಿ.ಎನ್‌ರಿಗೆ ಅಭಿನಂದನೆಗಳು</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/blog/%e0%b2%a8%e0%b2%be%e0%b2%97%e0%b3%87%e0%b2%b6-%e0%b2%b9%e0%b3%86%e0%b2%97%e0%b2%a1%e0%b3%86-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%9c%e0%b2%bf-%e0%b2%9f%e0%b2%bf-%e0%b2%8e%e0%b2%a8/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಮೈಕ್ರೋಸಾಫ್ಟ್ ಲೇಸರ್ ಮೌಸ್ &#8211; ಲಾಪ್‌ಟಾಪ್‌ಗೋಸ್ಕರ</title>
		<link>http://vishvakannada.com/blog/%e0%b2%ae%e0%b3%88%e0%b2%95%e0%b3%8d%e0%b2%b0%e0%b3%8b%e0%b2%b8%e0%b2%be%e0%b2%ab%e0%b3%8d%e0%b2%9f%e0%b3%8d-%e0%b2%b2%e0%b3%87%e0%b2%b8%e0%b2%b0%e0%b3%8d-%e0%b2%ae%e0%b3%8c%e0%b2%b8%e0%b3%8d/</link>
					<comments>http://vishvakannada.com/blog/%e0%b2%ae%e0%b3%88%e0%b2%95%e0%b3%8d%e0%b2%b0%e0%b3%8b%e0%b2%b8%e0%b2%be%e0%b2%ab%e0%b3%8d%e0%b2%9f%e0%b3%8d-%e0%b2%b2%e0%b3%87%e0%b2%b8%e0%b2%b0%e0%b3%8d-%e0%b2%ae%e0%b3%8c%e0%b2%b8%e0%b3%8d/#respond</comments>
		
		<dc:creator><![CDATA[admin]]></dc:creator>
		<pubDate>Wed, 26 Sep 2007 21:15:17 +0000</pubDate>
				<category><![CDATA[ಬ್ಲಾಗ್]]></category>
		<guid isPermaLink="false">http://localhost/vishwakannada/?p=457</guid>

					<description><![CDATA[<h3>- ಡಾ. ಯು. ಬಿ. ಪವನಜ</h3>
<p>ಮೈಕ್ರೋಸಾಫ್ಟ್ ಕಂಪೆನಿ ತಂತ್ರಾಂಶ (ಸಾಫ್ಟ್ವೇರ್) ತಯಾರಿಕೆಗೆ ಜಗತ್ಪ್ರಸಿದ್ಧ. ಅವರು ಕೆಲವು ಯಂತ್ರಾಂಶಗಳನ್ನೂ (ಹಾರ್ಡ್ವೇರ್) ತಯಾರಿಸುತ್ತಾರೆ. ಅವುಗಳಲ್ಲಿ ಮೌಸ್ಗಳು ಹೆಚ್ಚು ಜನಪ್ರಿಯ. ಮೈಕ್ರೋಸಾಫ್ಟ್ ಮೌಸ್ಗಳ ಪಟ್ಟಿಗೆ ಇತ್ತೀಚೆಗೆ ಆದ ಸೇರ್ಪಡೆ ವೈರ್ಲೆಸ್ ನೋಟ್ಬುಕ್ ಲೇಸರ್ ಮೌಸ್8000. ಇದು ಕೇವಲ ಮೌಸ್ ಅಲ್ಲ. ಇದನ್ನು ಬಳಸಿ ಪವರ್ಪಾಯಿಂಟ್ ಪ್ರೆಸೆಂಟೇಶನ್ಗಳ ದೂರನಿಯಂತ್ರಣ ಮಾಡಬಹುದು. ಅಷ್ಟು ಮಾತ್ರವಲ್ಲ ವಿಂಡೋಸ್ ಮೀಡಿಯಾ ಪ್ಲೇಯರನ್ನು ಕೂಡ ನಿಯಂತ್ರಿಸಬಹುದು.</p>
<p>The post <a href="http://vishvakannada.com/blog/%e0%b2%ae%e0%b3%88%e0%b2%95%e0%b3%8d%e0%b2%b0%e0%b3%8b%e0%b2%b8%e0%b2%be%e0%b2%ab%e0%b3%8d%e0%b2%9f%e0%b3%8d-%e0%b2%b2%e0%b3%87%e0%b2%b8%e0%b2%b0%e0%b3%8d-%e0%b2%ae%e0%b3%8c%e0%b2%b8%e0%b3%8d/">ಮೈಕ್ರೋಸಾಫ್ಟ್ ಲೇಸರ್ ಮೌಸ್ – ಲಾಪ್‌ಟಾಪ್‌ಗೋಸ್ಕರ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<h3>&#8211; ಡಾ. ಯು. ಬಿ. ಪವನಜ</h3>
<p>ಮೈಕ್ರೋಸಾಫ್ಟ್ ಕಂಪೆನಿ ತಂತ್ರಾಂಶ (ಸಾಫ್ಟ್ವೇರ್) ತಯಾರಿಕೆಗೆ ಜಗತ್ಪ್ರಸಿದ್ಧ. ಅವರು ಕೆಲವು ಯಂತ್ರಾಂಶಗಳನ್ನೂ (ಹಾರ್ಡ್ವೇರ್) ತಯಾರಿಸುತ್ತಾರೆ. ಅವುಗಳಲ್ಲಿ ಮೌಸ್ಗಳು ಹೆಚ್ಚು ಜನಪ್ರಿಯ. ಮೈಕ್ರೋಸಾಫ್ಟ್ ಮೌಸ್ಗಳ ಪಟ್ಟಿಗೆ ಇತ್ತೀಚೆಗೆ ಆದ ಸೇರ್ಪಡೆ ವೈರ್ಲೆಸ್ ನೋಟ್ಬುಕ್ ಲೇಸರ್ ಮೌಸ್8000. ಇದು ಕೇವಲ ಮೌಸ್ ಅಲ್ಲ. ಇದನ್ನು ಬಳಸಿ ಪವರ್ಪಾಯಿಂಟ್ ಪ್ರೆಸೆಂಟೇಶನ್ಗಳ ದೂರನಿಯಂತ್ರಣ ಮಾಡಬಹುದು. ಅಷ್ಟು ಮಾತ್ರವಲ್ಲ ವಿಂಡೋಸ್ ಮೀಡಿಯಾ ಪ್ಲೇಯರನ್ನು ಕೂಡ ನಿಯಂತ್ರಿಸಬಹುದು.</p>
<p>ಈ ಚಿತ್ರದಲ್ಲಿ ಮೌಸ್ನ ಮೇಲ್ಭಾಗದ ಮತ್ತು ಕೆಳಭಾಗದ ನೋಟಗಳನ್ನು ನೀಡಲಾಗಿದೆ. ಈ ಮೌಸ್ನ ಮೇಲ್ಭಾಗದಲ್ಲಿ ಎಲ್ಲ ಮೌಸ್ಗಳಲ್ಲಿರುವಂತೆ ಎಡ ಕ್ಲಿಕ್, ಬಲಕ್ಲಿಕ್, ಸ್ಕ್ರಾಲ್ ಚಕ್ರಗಳಿವೆ. ಇವುಗಳ ಬಳಕೆ ಸಾಮಾನ್ಯವಾಗಿ ಮೌಸ್ ಬಳಸುವ ಎಲ್ಲರಿಗೆ ತಿಳಿದಿರುತ್ತದೆ. ಉದಾಹರಣೆಗೆ ಒಂದು ಅಂತರಜಾಲ ತಾಣವನ್ನು ಓದುತ್ತಿರುವಾಗ ಸ್ಕ್ರಾಲ್ ಚಕ್ರವನ್ನು ತಿರುಗಿಸುವ ಮೂಲಕ ಪುಟವನ್ನು ಮೇಲಕ್ಕೆ ಯಾ ಕೆಳಕ್ಕೆ ಸರಿಸಿ ಓದಬಹುದು.<br />
<img decoding="async" src="http://vishvakannada.com/files/lasermouse2.jpg"></p>
<p>ಈ ಮೌಸ್ನ ವೈಶಿಷ್ಟ್ಯವಿರುವುದು ಅದರ ಕೆಳಭಾಗದಲ್ಲಿರುವ ಹೆಚ್ಚಿನ ಬಟನ್ಗಳಲ್ಲಿ. ಮೈಕ್ರೋಸಾಫ್ಟ್ ಪವರ್ಪಾಯಿಂಟ್ ತಂತ್ರಾಂಶವನ್ನು ಬಳಸಿ ಸ್ಲೈಡ್ ಶೋ ಪ್ರೆಸೆಂಟೇಶನ್ ಸಹಿತ ಭಾಷಣ ಮಾಡುತ್ತಿರುವಾಗ ಇಲ್ಲಿ ನೀಡಿರುವ ಬಟನ್ಗಳನ್ನು ಬಳಸಿ ಹಿಂದಿನ ಯಾ ಮುಂದಿನ ಸ್ಲೈಡ್ಗಳನ್ನು ತೋರಿಸಬಹುದು. ಪರದೆಯಲ್ಲಿ ಮೂಡಿಬಂದಿರುವ ಚಿತ್ರದ ಮೇಲಿನ ವಿಷಯಗಳನ್ನು ಸೂಚಿಸಲು ಲೇಸರ್ ಕಿರಣವೂ ಈ ಮೌಸ್ನಲ್ಲಿದೆ. ಪರದೆಯನ್ನು ತಾತ್ಕಾಲಿಕವಾಗಿ ಅದೃಶ್ಯಗೊಳಿಸಬಹುದು. ಮೌಸ್ನ ಮೇಲ್ಭಾದಲ್ಲಿ ಕೂಡ ಪ್ರಸೆಂಟೇಶನ್ಗೆ ಅನುಕೂಲವಾಗಿಸುವ ಇನ್ನೂ ಎರಡು ಸೌಲಭ್ಯಗಳನ್ನು ನೀಡುವ ಬಟನ್ಗಳಿವೆ. ಶಾಯಿಯನ್ನು ಬಳಸಿ ಗೀಚುವುದು ಮತ್ತು ಒಂದು ನಿರ್ದಿಷ್ಟ ಜಾಗವನ್ನು ಹಿಗ್ಗಿಸಿ ತೋರಿಸುವುದು -ಇವೇ ಆ ಎರಡು ಸವಲತ್ತುಗಳು.</p>
<p>ಲ್ಯಾಪ್ಟಾಪ್ನಲ್ಲಿ ಸಿನಿಮಾ ನೋಡುವ ಅಥವಾ ಹಾಡು ಕೇಳುವವರಿಗೆ ಕೂಡ ಎರಡು ಅನುಕೂಲಕರವಾದ ಬಟನ್ಗಳಿವೆ. ಸ್ಪೀಕರಿನ ವಾಲ್ಯೂಮನ್ನು ಹೆಚ್ಚಿಸುವ ಮತ್ತು ಕಡಿಮೆ ಮಾಡುವ ಬಟನ್ಗಳಿವೆ. ಅಂದರೆ ಒಂದು ಸಭಾ ಕಾರ್ಯಕ್ರಮದಲ್ಲಿ ಲ್ಯಾಪ್ಟಾಪ್ ಬಳಸಿ ಸ್ಲೈಡ್ ಶೋ ಮಾಡುತ್ತಿದ್ದಲ್ಲಿ ಅಥವಾ ಚಲನಚಿತ್ರದ ತುಣುಕು ತೋರಿಸುತ್ತಿದ್ದಲ್ಲಿ ಈ ಮೌಸ್ ನಿಜಕ್ಕೂ ಉಪಯುಕ್ತ. ಭಾಷಣ ನೀಡುವವರು ಸಭೆಯಲ್ಲಿ ಓಡಾಡುತ್ತ ಅಥವಾ ವೇದಿಕೆಯ ಮೇಲೆ ಅತ್ತಿಂದಿತ್ತ ಓಡಾಡುತ್ತ ಮಾತನಾಡಬಹುದು. ಸಭೆಯೆ ಮಧ್ಯದಿಂದಲೇ ಲೇಸರ್ ಕಿರಣ ಬಳಸಿ ಪರದೆಯಲ್ಲಿ ಮೂಡಿಬರುತ್ತಿರುವ ವಿಷಯಗಳ ಮೇಲೆ ಬೆಳಕು ಚೆಲ್ಲಬಹುದು. ಈ ವೈರ್ಲೆಸ್ಮೌಸ್ ಬ್ಲೂಟೂತ್ ತಂತ್ರಜ್ಞಾನವನ್ನು ಬಳಸುತ್ತದೆ. ಸುಮಾರು 30 ಅಡಿಗಳ ವ್ಯಾಪ್ತಿ ಇದಕ್ಕಿದೆ.   </p><p>The post <a href="http://vishvakannada.com/blog/%e0%b2%ae%e0%b3%88%e0%b2%95%e0%b3%8d%e0%b2%b0%e0%b3%8b%e0%b2%b8%e0%b2%be%e0%b2%ab%e0%b3%8d%e0%b2%9f%e0%b3%8d-%e0%b2%b2%e0%b3%87%e0%b2%b8%e0%b2%b0%e0%b3%8d-%e0%b2%ae%e0%b3%8c%e0%b2%b8%e0%b3%8d/">ಮೈಕ್ರೋಸಾಫ್ಟ್ ಲೇಸರ್ ಮೌಸ್ – ಲಾಪ್‌ಟಾಪ್‌ಗೋಸ್ಕರ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/blog/%e0%b2%ae%e0%b3%88%e0%b2%95%e0%b3%8d%e0%b2%b0%e0%b3%8b%e0%b2%b8%e0%b2%be%e0%b2%ab%e0%b3%8d%e0%b2%9f%e0%b3%8d-%e0%b2%b2%e0%b3%87%e0%b2%b8%e0%b2%b0%e0%b3%8d-%e0%b2%ae%e0%b3%8c%e0%b2%b8%e0%b3%8d/feed/</wfw:commentRss>
			<slash:comments>0</slash:comments>
		
		
			</item>
	</channel>
</rss>

<!--
Performance optimized by W3 Total Cache. Learn more: https://www.boldgrid.com/w3-total-cache/?utm_source=w3tc&utm_medium=footer_comment&utm_campaign=free_plugin

Page Caching using Disk: Enhanced 

Served from: vishvakannada.com @ 2026-07-17 02:22:31 by W3 Total Cache
-->