<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಹಾಸ್ಯ | Vishva Kannada</title>
	<atom:link href="http://vishvakannada.com/category/%E0%B2%B9%E0%B2%BE%E0%B2%B8%E0%B3%8D%E0%B2%AF/feed/" rel="self" type="application/rss+xml" />
	<link>http://vishvakannada.com</link>
	<description></description>
	<lastBuildDate>Wed, 15 Jan 2025 15:38:53 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>
	<item>
		<title>ಮೊಳೆಗಳು ಸಾರ್ ಮೊಳೆಗಳು</title>
		<link>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%ae%e0%b3%8a%e0%b2%b3%e0%b3%86%e0%b2%97%e0%b2%b3%e0%b3%81-%e0%b2%b8%e0%b2%be%e0%b2%b0%e0%b3%8d-%e0%b2%ae%e0%b3%8a%e0%b2%b3%e0%b3%86%e0%b2%97%e0%b2%b3%e0%b3%81/</link>
					<comments>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%ae%e0%b3%8a%e0%b2%b3%e0%b3%86%e0%b2%97%e0%b2%b3%e0%b3%81-%e0%b2%b8%e0%b2%be%e0%b2%b0%e0%b3%8d-%e0%b2%ae%e0%b3%8a%e0%b2%b3%e0%b3%86%e0%b2%97%e0%b2%b3%e0%b3%81/#respond</comments>
		
		<dc:creator><![CDATA[pavanaja]]></dc:creator>
		<pubDate>Tue, 25 Aug 2020 14:45:53 +0000</pubDate>
				<category><![CDATA[ಹಾಸ್ಯ]]></category>
		<category><![CDATA[ಮೊಳೆ]]></category>
		<category><![CDATA[ಸುಶ್ರುತ]]></category>
		<guid isPermaLink="false">http://vishvakannada.com/?p=1465</guid>

					<description><![CDATA[<p>‘ಥೋಥೋಥೋ! ಈ ವರ್ಲೆ ಕಾಟದಗೆ ಆಗ್ಲಿಲ್ಲಪ್ಪಾ’ ಅಂತ ಅಜ್ಜಿ ಆಗಾಗ ಕೂಗುತ್ತಿದ್ದಳು. ಅಜ್ಜಿಯಷ್ಟೇ ಏನು- ಅಪ್ಪ, ಅಮ್ಮ, ನಾನು -ಎಲ್ಲರೂ ಒಂದಿಲ್ಲೊಂದು ಹೊತ್ತಿನಲ್ಲಿ ವರಲೆ ಹುಳುಗಳನ್ನು ಬೈದುಕೊಂಡವರೇ. ಏಕೆಂದರೆ ವರಲೆ ಹುಳುಗಳ ಗತ್ತು-ಗಮ್ಮತ್ತು ಹಾಗಿತ್ತು&#8230;</p>
<p>The post <a href="http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%ae%e0%b3%8a%e0%b2%b3%e0%b3%86%e0%b2%97%e0%b2%b3%e0%b3%81-%e0%b2%b8%e0%b2%be%e0%b2%b0%e0%b3%8d-%e0%b2%ae%e0%b3%8a%e0%b2%b3%e0%b3%86%e0%b2%97%e0%b2%b3%e0%b3%81/">ಮೊಳೆಗಳು ಸಾರ್ ಮೊಳೆಗಳು</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p>‘ಥೋಥೋಥೋ! ಈ ವರ್ಲೆ ಕಾಟದಗೆ ಆಗ್ಲಿಲ್ಲಪ್ಪಾ’ ಅಂತ ಅಜ್ಜಿ ಆಗಾಗ ಕೂಗುತ್ತಿದ್ದಳು. ಅಜ್ಜಿಯಷ್ಟೇ ಏನು- ಅಪ್ಪ, ಅಮ್ಮ, ನಾನು -ಎಲ್ಲರೂ ಒಂದಿಲ್ಲೊಂದು ಹೊತ್ತಿನಲ್ಲಿ ವರಲೆ ಹುಳುಗಳನ್ನು ಬೈದುಕೊಂಡವರೇ. ಏಕೆಂದರೆ ವರಲೆ ಹುಳುಗಳ ಗತ್ತು-ಗಮ್ಮತ್ತು ಹಾಗಿತ್ತು ಆಗ. ಮಣ್ಣಿನ ಗೋಡೆಯಿಂದಾದ ನಮ್ಮ ಮನೆ ಅವಕ್ಕೆ ಅರಮನೆಯಾಗಿತ್ತು. ಕಾಡುಮರದ ತೊಲೆಗಳು, ಅಡಿಕೆ ದಬ್ಬೆಯ ರೀಪುಗಳು, ಎಳೆಯ ನಾಟಾದಿಂದ ಮಾಡಿದ್ದ ಮುಂಡಿಗೆಗಳು –ಅವಕ್ಕೆ ಸುಗ್ರಾಸ ಕೂಳು ಒದಗಿಸುತ್ತಿದ್ದವು. ಮಣ್ಣಿನ ಗೋಡೆಯಲ್ಲಿ ಎಲ್ಲಿ ತಟ್ಟಿದರೂ ವರಲೆ ಹುಳುಗಳು ಕೊರೆದ ದೊರಗಿನಿಂದಾಗಿ ಗೋಡೆ ಕಳಚಿಕೊಂಡು ಬರುತ್ತಿತ್ತು.</p>
<p>&nbsp;</p>
<p>ಇದರಿಂದಾದ ದೊಡ್ಡ ಸಮಸ್ಯೆ ಎಂದರೆ ನಾವು ಹೊಸದಾಗಿ ತಂದ ವಸ್ತುಗಳನ್ನು ನೇತುಬಿಡಲು ಮೊಳೆ ಹೊಡೆಯಲು ಹೋದರೆ, ಮೊಳೆಯನ್ನು ಗೋಡೆಯ ಮೇಲಿಟ್ಟರೆ ಸಾಕು, ಮೊಳೆ ತಾನಾಗೇ ಒಳಗೆ ಹೋಗುತ್ತಿತ್ತು! ನಿರುದ್ಯೋಗ ಸಮಸ್ಯೆಗೆ ಒಳಗಾದ ಸುತ್ತಿಗೆ ಬೆಪ್ಪುತಕ್ಕಡಿಯಂತೆ ಮಿಕಮಿಕ ನೋಡುತ್ತಿತ್ತು. ಭಾರವಾದ ವಸ್ತುಗಳನ್ನು ಬಿಡಿ, ಒಂದು ಕ್ಯಾಲೆಂಡರ್ ನೇತುಹಾಕಬೇಕೆಂದರೂ ಮೂರ್ನಾಲ್ಕು ಕಡೆ ಪ್ರಯತ್ನಿಸಿ ಕೊನೆಗೆ ಎಲ್ಲೋ ಒಂದು ಮೂಲೆಯಲ್ಲಿ, ವರಲೆ ಹುಳುಗಳ ಹಸಿವಿಗೆ ತುತ್ತಾಗದ ಗೋಡೆಯ ಭಾಗದಲ್ಲಿ ಕ್ಯಾಲೆಂಡರಿಗೆ ಜಾಗ ಸಿಗುತ್ತಿತ್ತು.</p>
<p>&nbsp;</p>
<p>ಅಂತೂ ಕ್ಯಾಲೆಂಡರ್ ನೇತುಹಾಕಿದೆ, ಕೆಲಸ ಮುಗಿಯಿತು ಅಂತ ಕೂರಲು ಸಾಧ್ಯವೇ? ಈ ಕ್ಯಾಲೆಂಡರ್ ನೇತುಹಾಕುವ ಪ್ರಯತ್ನದಲ್ಲಿ ಗೋಡೆಯ ವಿವಿಧ ಭಾಗಗಳಲ್ಲಿ ಮಾಡಿದ ಹಾನಿಯನ್ನು ಸರಿಪಡಿಸಬೇಕಲ್ಲವೇ? ಇಂತಹ ಸಂದರ್ಭದಲ್ಲಿ ನಮ್ಮ ನೆರವಿಗೆ ಬರುತ್ತಿದ್ದುದು ಪೋಸ್ಟರುಗಳು! ಪೇಟೆಯ ಬೀದಿಬದಿ ಮಾರಲ್ಪಡುತ್ತಿದ್ದ, ನಾವೆಂದೂ ನೋಡದ ಜಲಪಾತವೋ, ಹೂದೋಟವೋ, ಹಿಮವದ್ಪರ್ವತವೋ ಅಥವಾ ಇಷ್ಟದ ನಟ-ನಟಿಯರ ಚಿತ್ರವನ್ನು ಹೊಂದಿದ ಫಳಫಳ ಹೊಳೆವ ಪೋಸ್ಟರು ತಂದು ಗೋಡೆಯ ಹಾನಿಗೊಳಗಾದ ಭಾಗಕ್ಕೆ ಅಂಟಿಸುವುದು. ಅವಾದರೂ ಅಷ್ಟು ಸುಲಭಕ್ಕೆ ಅಂಟಿಕೊಳ್ಳುತ್ತವೆಯೇ? ಇಲ್ಲ.  ಆಗ ಮತ್ತೆ ಮೊಳೆಗಳ ಮೊರೆ ಹೋಗಬೇಕು. ಸಣ್ಣ ಕುಕ್ಕುಮೊಳೆಗಳಿಗೆ ದಪ್ಪನೆಯ ರಟ್ಟಿನ ಸಣ್ಣ ಚೂರನ್ನು ವಾಷರಿನಂತೆ ತೂರಿಸಿ ಆ ಪೋಸ್ಟರಿನ ನಾಲ್ಕೂ ಮೂಲೆಗಳಿಗೆ ಹೊಡೆಯುವುದು. ಮೊಳೆ ನಿಲ್ಲಲಿ ಅಂತ ಸಕಲ ದೇವರನ್ನೂ ಪ್ರಾರ್ಥಿಸುವುದು. ಪೋಸ್ಟರು ಗೋಡೆಯ ಮೇಲೆ ಐದಾರು ನಿಮಿಷ ನಿಂತಿತೋ, ಒಲಿಂಪಿಕ್ಸಿನಲಿ ಗೆದ್ದವರಂತೆ ಕುಣಿಯುವುದು.</p>
<p>&nbsp;</p>
<p>ಮನೆಯಲ್ಲಿ ವರಲೆ ಹುಳುಗಳ ಕಾಟ ಅತಿಯಾಗಿ, ಹಳತಾಗಿದ್ದ ಮನೆ ಬೀಳುವ ಹಂತ ತಲುಪಿದಾಗ ಅಪ್ಪ ಹೊಸ ಮನೆ ಕಟ್ಟಿಸುವ ಆಲೋಚನೆ ಮಾಡಿದ. ಸಾಲವೋ ಸೋಲವೋ, ಹೊಸ ಮನೆ ಎಂದಮೇಲೆ ಗಟ್ಟಿಮುಟ್ಟಾಗಿರಬೇಕು. ಉತ್ತಮ ಗುಣಮಟ್ಟದ ಇಟ್ಟಿಗೆ, ಹೆಸರುವಾಸಿ ಕಂಪನಿಯ ಸಿಮೆಂಟು, ಎರಡೆರಡು ಸಲ ಸಾಣಿಸಿದ ಮರಳು, ಮೇಸ್ತ್ರಿಗಳ ಮೇಲೆ ಸದಾ ಕಣ್ಗಾವಲು –ಹೀಗೆ ಎಲ್ಲೂ ಕೊರತೆಯಾಗದಂತೆ ಮನೆ ಕಟ್ಟಿಸಿದ್ದಾಯಿತು. ಆ ಮನೆಗೆ ಪ್ರವೇಶವೂ ಆಯಿತು. ಅಲ್ಲಿಗೆ ಹೋದಮೇಲೆ ನಮಗೆ ಅರಿವಾಯಿತು, ಹಳೇಮನೆಯಲ್ಲಿದ್ದ ಹಾಗೆ ಇಲ್ಲಿ ಗೋಡೆಗೆ ಮೊಳೆ ಹೊಡೆಯುವುದು ಸುಲಭವಿಲ್ಲ! ಗಡಿಯಾರ, ಫೋಟೋಗಳು, ಮೂಲೆಸ್ಟಾಂಡುಗಳು, ಬಟ್ಟೆಯ ಹ್ಯಾಂಗರುಗಳು –ಹೀಗೆ ಹೊಸಮನೆಯಲ್ಲಿ ಮೊಳೆ ಹೊಡೆಸಿಕೊಳ್ಳಲು ಕಾತರರಾಗಿ ಕಾಯುತ್ತಿದ್ದ ಅನೇಕ ವಸ್ತುಗಳು ಇದ್ದವು. ಆದರೆ ನಾವು ಯಾವಾಗ ಸುತ್ತಿಗೆ-ಮೊಳೆ ಹಿಡಿದು ಗೋಡೆಯ ಬಳಿ ಬಂದೆವೋ, ಆಗ ಗೋಡೆ ರಾಹುಲ್ ದ್ರಾವಿಡ್ ಥರ ನಮ್ಮನ್ನು ಎದುರಿಸಿತು. ಅಪ್ಪ ಅರ್ಧ ಇಂಚಿನ ಒಂದು ಮೊಳೆ ಹಿಡಿದು ಸುತ್ತಿಗೆಯಿಂದ ಒಂದೇಟು ಕೊಟ್ಟ; ಗೋಡೆ ಕಂಕಿಂ ಎನ್ನಲಿಲ್ಲ.  ಬಲ ಸೇರಿಸಿ ಮತ್ತೂ ನಾಲ್ಕು ಏಟು ಕೊಟ್ಟ; ಆದರೆ ಗೋಡೆ ತನ್ನೊಳಗೆ ಮೊಳೆಯನ್ನು ಬಿಟ್ಟುಕೊಳ್ಳಲಿಲ್ಲ.  ಅಪ್ಪನ ಓವರ್  ಮುಗಿದಮೇಲೆ ನಾನು ಕಣಕ್ಕಿಳಿದೆ. ಸ್ಪೀಡು, ಬೌನ್ಸು, ಸ್ಪಿನ್ನು –ಎಲ್ಲವನ್ನೂ ಗೋಡೆ ಡಿಫೆಂಡ್ ಮಾಡಿತೇ ವಿನಃ ನಮ್ಮ ಮೇಲೆ ಕರುಣೆ ತೋರಿಸಲಿಲ್ಲ. ನಾನು-ಅಪ್ಪ ಮೊಳೆಗಳ ಮೇಲೆ ಮೊಳೆಗಳನ್ನು ಪ್ರಯೋಗಿಸಿದೆವು. ಬದಲಾಗಿ ನಮಗೆ ಸಿಕ್ಕಿದ್ದು ಬೆವರಹನಿ ಮಾತ್ರ. ಅರ್ಧಕ್ಕರ್ಧ ಮೊಳೆಗಳು ನೆಗ್ಗಿಹೋದವು. ಎಷ್ಟು ಬೇಕಾದರೂ ಪ್ರಯೋಗಿಸಲು ಇದೇನು ಟೆಸ್ಟ್ ಮ್ಯಾಚೇ? ಮೊಳೆಗಳು ಲಿಮಿಟೆಡ್ ಇದ್ದ ಕಾರಣ ನೆಗ್ಗಿಹೋದ ಮೊಳೆಗಳನ್ನೇ ಚಪ್ಪಡಿ ಕಲ್ಲಿನ ಮೇಲಿಟ್ಟು ಬಡಿದು ನೆಟ್ಟಗೆ ಮಾಡಿ ಮತ್ತೆ ಹೊಡೆಯುವ ಪ್ರಯತ್ನ ಮಾಡಿದೆವು. ಗಂಟೆಗಟ್ಟಲೆ ಒದ್ದಾಡಿ ಒಂದೆರಡು ಮೊಳೆಗಳನ್ನು ಗೋಡೆಯಲ್ಲಿ ನಿಲ್ಲಿಸುವ ಹೊತ್ತಿಗೆ ನಾವು ಬಸವಳಿದುಹೋಗಿದ್ದೆವು. ಮೇಸ್ತ್ರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆಂದು ನಮಗೆ ಹೆಮ್ಮೆಯಾಯಿತಾದರೂ ನೇತಾಡಲು ಕಾಯಿತ್ತಿದ್ದ ಹಲವು ವಸ್ತುಗಳನ್ನೀಗ ಏನು ಮಾಡುವುದು ಅಂತ ಚಿಂತೆಯಾಯಿತು.</p>
<p>&nbsp;</p>
<p>ಆಗ ಬಂದ ಪ್ರಾಜ್ಞರು, ‘ಈ ಸಿಮೆಂಟು-ಕಾಂಕ್ರೀಟ್ ಗೋಡೆಗಳಿಗೆ ಮೊಳೆ ಹೊಡೆಯಕ್ಕೆ ಸಾಧ್ಯ ಇಲ್ಲ ಮಾರಾಯಾ. ಒಂದು ಡ್ರಿಲ್ಲಿಂಗ್ ಮಶೀನ್ ತಗಬೇಕು ನೀವು’ ಅಂತ ಹೇಳಿದರು. ಮೊದಲೇ ಮನೆ ಕಟ್ಟಿಸಿ ಬಸವಳಿದಿದ್ದ ನಮಗೆ ಮತ್ತೆ ಡ್ರಿಲ್ಲಿಂಗ್ ಮಶೀನಿಗೆ ಸಾವಿರಾರು ರೂಪಾಯಿ ದುಡ್ಡು ಹಾಕುವ ಸಂಕಷ್ಟ ಬಂತಲ್ಲಪ್ಪಾ ಅಂತ ತಲೆಬಿಸಿಯಾಯಿತು. ಈ ಸಂದರ್ಭದಲ್ಲಿ ಬಂದ ಮತ್ಯಾರೋ ಹೇಳಿದರು, ‘ಈಗೆಲ್ಲ ನೇತುಹಾಕುವ ಹುಕ್ಕುಗಳು ಪೇಟೆಗೆ ಬಂದಿವೆ. ಅದರ ಹಿಂದೆಯೇ ಗಮ್ ಇರೋ ಸ್ಟಿಕ್ಕರ್ ಇರುತ್ತೆ. ಅದನ್ನ ತೆಗೆದು ಅಂಟಿಸಿದ್ರೆ ಆಯ್ತು.  ಕ್ಯಾಲೆಂಡರ್-ಫೋಟೋಗಳಂತಹ ಹಗುರವಾದ ವಸ್ತುಗಳನ್ನು ನೇತುಹಾಕಬಹುದು’ ಅಂತ.  ಸರಿ, ಅಪ್ಪ ಹೋಗಿ ಸ್ಟೇಶನರಿ ಅಂಗಡಿಯಿಂದ ಇಂತಹ ಒಂದಷ್ಟು ಹ್ಯಾಂಗಿಂಗ್ ಹುಕ್ಕುಗಳನ್ನು ತಂದ. ನಾನು ಬೇಕಾದ ಜಾಗಗಳಲ್ಲಿ ಅವನ್ನು ಅಂಟಿಸಿ ಹಗುರ ವಸ್ತುಗಳನ್ನು ತೂಗುಹಾಕಿದೆ. ಭಾರ ತಾಳುತ್ತದೆ ಅಂದುಕೊಂಡು ತೂಗುಹಾಕಿದ ಕೆಲ ವಸ್ತುಗಳು ಆ ಹುಕ್ಕಿನೊಂದಿಗೇ ಕಳಿಚಿಬಿದ್ದು ರಾಮಾಯಣವೂ ಆಯಿತು.</p>
<p>&nbsp;</p>
<p>ಆದರೂ ಭಾರದ ವಸ್ತುಗಳನ್ನು ನೇತುಹಾಕಲಾಗದ ನಮ್ಮ ಸಮಸ್ಯೆ ಹಾಗೆಯೇ ಉಳಿದಿತ್ತು. ಅಪ್ಪ ಒಂದು ದಿನ ಹಾರ್ಡ್‌ವೇರ್ ಅಂಗಡಿಗೆ ಹೋಗಿದ್ದಾಗ, ಈಗ ಸ್ಟೀಲ್ ಮೊಳೆಗಳು ಬಂದಿರುವುದಾಗಿಯೂ, ಅವನ್ನು ಕಾಂಕ್ರೀಟ್ ಗೋಡೆಯ ಮೇಲಿಟ್ಟು ಹೊಡೆಯಬಹುದೆಂದೂ, ಅವು ಬೆಂಡ್ ಆಗುವುದಿಲ್ಲವೆಂದೂ ಹೇಳಿದರಂತೆ. ನಮ್ಮಂತವರಿಗೆ ವರದಾನವೆಂಬಂತೆ ಬಂದಿದ್ದ ಈ ಸ್ಟೀಲ್ ಮೊಳೆಗಳನ್ನು ತಂದಮೇಲೆ ನಮ್ಮ ಸಮಸ್ಯೆ ಅರ್ಧಕ್ಕರ್ಧ ಪರಿಹಾರವಾಯಿತು. ಅವನ್ನು ಗೋಡೆಗೆ ಹೊಡೆಯುವುದು ಶ್ರಮ ಬೇಡಿದರೂ ಸ್ಟೀಲ್ ಮೊಳೆಗಳು ಗಟ್ಟಿಮುಟ್ಟಾಗಿದ್ದು ನೆಗ್ಗಿಹೋಗದ ಕಾರಣ, ನಮ್ಮ ಮನೆಯಲ್ಲಿ ಗೋಡೆಯನ್ನಪ್ಪಬೇಕಿದ್ದ ವಸ್ತುಗಳ ಬಯಕೆ ಅಂತೂ ಇಂತೂ ಈಡೇರಿತು.</p>
<p>&nbsp;</p>
<p>ನಾನು ನಗರಕ್ಕೆ ಬಂದು ಬಾಡಿಗೆ ಮನೆಗಳನ್ನು ಬದಲಿಸುವವನಾದಮೇಲೆ ಈ ಸಮಸ್ಯೆ ನನ್ನೊಂದಿಗೇ ಮುಂದುವರೆಯಿತು. ಈ ನಗರದ ಮನೆಗಳಲ್ಲಿ ಪ್ರತಿ ಸಲ ಹೊಸ ಬಾಡಿಗೆದಾರ ಬರುವ ಮುನ್ನ ಮನೆಯ ಹಾಳಾದ ವಸ್ತುಗಳನ್ನೆಲ್ಲ ರಿಪೇರಿ ಮಾಡಿಸಿ, ಗೋಡೆಗೆ ಹೊಸದಾಗಿ ಬಣ್ಣ ಬಳಿದು ಕೊಡುತ್ತಾರಷ್ಟೇ? ಹಾಗೆ ಬಣ್ಣ ಬಳಿಸುವಾಗ ಆ ಹಿಂದಿನ ಬಾಡಿಗೆದಾರರು ಅಲ್ಲಲ್ಲಿ ಬಡಿದಿದ್ದ ಮೊಳೆಗಳನ್ನೆಲ್ಲ ಕಿತ್ತು, ಗಾಯಗೊಂಡ ಗೋಡೆಗೆ ಲಪ್ಪಾ ಹಚ್ಚಿ ಸಪಾಟು ಮಾಡಿ, ಅದರ ಮೇಲೆ ಬಣ್ಣ ಬಳಿದು ಎಲ್ಲಾ ಹೊಸದು ಕಾಣುವಂತೆ ಮಾಡುವರು. ಹೀಗಾಗಿ ಪ್ರತಿ ಹೊಸ ಮನೆಗೆ ಹೋದಾಗಲೂ ನಾವು ಹೊಸ ಮೊಳೆಗಳನ್ನು ಕೊಂಡು ನಮಗೆ ಬೇಕಾದ ಜಾಗಗಳಲ್ಲಿ ಹೊಡೆದುಕೊಳ್ಳುವುದು ಅನಿವಾರ್ಯ. ಆದರೆ ಹಾಗೆ ಬೇಕಾದ ಕಡೆಗೆಲ್ಲ ಮೊಳೆ ಹೊಡೆಯಲು ಮಾಲೀಕರು ಬಿಡುವರೇ? ಬಾಡಿಗೆಗೆ ಕೊಡುವಾಗಲೇ ‘ಗೋಡೆ ತುಂಬಾ ಮೊಳೆ ಹೊಡೆದು ಡ್ಯಾಮೇಜ್ ಮಾಡ್ಬೇಡ್ರೀ ಮತ್ತೆ’  ಅಂತ ಎಚ್ಚರಿಸುವರು. ಹಾಗೂ ನಾವು ನೇತುಹಾಕಲೇಬೇಕಿರುವ ವಸ್ತುಗಳಿಗೆ ಒಂದಷ್ಟಾದರೂ ಮೊಳೆ ಹೊಡೆಯುವುದು ಅನಿವಾರ್ಯವಾಗುತ್ತದೆ. ಹೀಗಾಗಿ ಇಡೀ ಕಟ್ಟಡವಾಸಿಗಳಿಗೆ ಕೇಳುವಂತೆ ಸುತ್ತಿಗೆ ಹಿಡಿದು ಸದ್ದು ಮಾಡುವುದೂ, ಆ ಕಟ್ಟಡದ ಇತರೆ ಬಾಡಿಗೆದಾರರು ನಮ್ಮನ್ನು ಬೈದುಕೊಳ್ಳುವುದೂ ಸಾಮಾನ್ಯವಾಯಿತು. ಹೊತ್ತಲ್ಲದ ಹೊತ್ತಲ್ಲಿ ಆ ಪರಿ ಸದ್ದು ಮಾಡಿದರೆ ಅವರಾದರೂ ಏಕೆ ಸುಮ್ಮನಿದ್ದಾರು? ಕೆಲವರು ಎದುರಿಗೇ ಹೇಳುವರು: ‘ಏನ್ರೀ, ನಿಮ್ಮನೆಯಲ್ಲಿ ಯಾವಾಗ್ ನೋಡಿದ್ರೂ ದೋಡ್ದಾಗ್ ಸೌಂಡ್ ಮಾಡ್ತಾ ಇರ್ತೀರಾ. ಇವತ್ತು ನಮ್ ಮಗು ಆಗಷ್ಟೇ ಮಲ್ಗಿತ್ತು, ನೀವ್ ಮಾಡಿದ್ ಸೌಂಡಿಂದ ಎಚ್ರಾಯ್ತು. ಸ್ವಲ್ಪ ಹೊತ್ತು-ಗೊತ್ತು ನೋಡ್ಕೊಂಡ್ ಸೌಂಡ್ ಮಾಡಿ.’  ಮೂರ್ನಾಲ್ಕು ಮನೆಗಳನ್ನು ಬದಲಿಸಿದಮೇಲೆ ಇಂತಹ ಮಂಗಳಾರತಿಗಳನ್ನು ಸೈರಿಸಿಕೊಳ್ಳುವುದು ನಮಗೂ ಅಭ್ಯಾಸವಾಗಿಹೋಗಿ, ‘ಆಯ್ತ್ ಬಿಡ್ರೀ ಕಂಡಿದೀವಿ’ ಅಂತ ನಾವೂ ಮನಸಲ್ಲಿ ಬೈದುಕೊಳ್ಳುವೆವು.</p>
<p>&nbsp;</p>
<p>ಜಗತ್ತು ಆಧುನಿಕವಾಗುತ್ತ ಹೋದಂತೆ, ಹೊಸಹೊಸ ಆವಿಷ್ಕಾರಗಳ ಫಲವಾಗಿ ಬರುವ ವಸ್ತುಗಳು ಗೋಡೆಯನ್ನು ಹೆಚ್ಚು ಅವಲಂಬಿಸತೊಡಗಿದವು ಅಂತ ನನ್ನ ಅಭಿಪ್ರಾಯ.  ಡೂಮ್ ಟೀವಿಗಳು ಹೋಗಿ ಎಲ್‌ಸಿಡಿ-ಎಲ್‌ಇಡಿ ಟೀವಿಗಳು ಬಂದವು.  ಸ್ಟೀಲಿನ ವಾಟರ್ ಫಿಲ್ಟರ್ ಹೋಗಿ ಯುವಿ-ಯುಎಫ್-ಆರ್ಓ ಇತ್ಯಾದಿ ವಿಶೇಷಗಳುಳ್ಳ ಫಿಲ್ಟರುಗಳು ಬಂದವು. ಟೇಬಲ್ ಫ್ಯಾನು ಹಳತಾಗಿ ಎಸಿ ಬಂತು. ಹಂಡೆ-ಒಲೆ ಹೋಗಿ ಗೀಸರು ಬಂತು.  ಈ ಹೊಸ ಆವಿಷ್ಕಾರದ ಆಧುನಿಕ ವಸ್ತುಗಳು ದುಬಾರಿಯವೂ-ನಾಜೂಕಿನವೂ ಆದರೂ, ಒಂದು ರೀತಿಯಲ್ಲಿ ಮನೆಯ ಜಾಗವನ್ನು ಉಳಿಸುವಲ್ಲಿ ನೆರವಾದವು. ಮೊದಲು ನೆಲವನ್ನೋ ಟೇಬಲನ್ನೋ ಸ್ಟಾಂಡನ್ನೋ ಅವಲಂಬಿಸುತ್ತಿದ್ದ ವಸ್ತುಗಳು ಈಗ ಗೋಡೆಗೆ ಅಪ್ಪಿಕೊಂಡು ನಿಂತು ‘ಸ್ಪೇಸ್ ಸೇವರ್’ ಆದವು.  ಆದರೆ ಇಲ್ಲಿ ಮತ್ತೆ ಅದೇ ಸಮಸ್ಯೆ: ಮನೆ ಬದಲಿಸುವಾಗೆಲ್ಲ ಈ ವಸ್ತುಗಳನ್ನು ಹೊತ್ತುಕೊಂಡು ಹೋಗಬೇಕು ಮತ್ತು ಹೊಸಮನೆಯಲ್ಲಿ ಗೋಡೆಯನ್ನು ಕೊರೆಯಬೇಕು. ಇವುಗಳನ್ನೆಲ್ಲಾ ನಾವೇ ಮೊಳೆ ಹೊಡೆದು ಕೂರಿಸಲಾದರೂ ಆಗುವುದೇ? ಇಲ್ಲ. ಎಲ್ಲಕ್ಕೂ ಅವುಗಳ ಎಕ್ಸ್‌ಪರ್ಟುಗಳನ್ನೇ ಕರೆಸಬೇಕು.</p>
<p>&nbsp;</p>
<p>ಹಳೆ ಮನೆಯಿಂದ ತಂದಿದ್ದ ಡಿಶ್ ಹೊಸ ಮನೆಯಲ್ಲಿ ಕೂರಿಸಲು ಡಿಟಿಎಚ್ ಆಪರೇಟರಿಗೆ ಬುಲಾವ್ ಕೊಡಲಾಯಿತು. ಬಂದವನ ಬಳಿ ‘ಒಂಚೂರು ಟೀವಿಯನ್ನೂ ವಾಲ್‌ಮೌಂಟ್ ಮಾಡ್ಕೊಡಯ್ಯಾ’ ಅಂದರೆ ‘ಅದಕ್ಕೆಲ್ಲಾ ಎಕ್ಸ್‌ಟ್ರಾ ಛಾರ್ಜ್ ಆಗುತ್ತೆ ಸಾರ್’ ಅಂದ. ನಾಲ್ಕು ರಂದ್ರ ಕೊರೆದು ಟೀವಿಯನ್ನು ಗೋಡೆಗೆ ಕೂರಿಸಲು ಮುನ್ನೂರು ರೂಪಾಯಿ ಆಗುತ್ತೆ ಅಂತ ಹೇಳಿದ. ಇನ್ನೇನು ಮಾಡುವುದು? ಚೌಕಾಶಿ ಮಾಡಿಯಾದರೂ ಕೆಲಸ ಮಾಡಿಸಿಕೊಳ್ಳಲೇಬೇಕು. ಹಾಗೆಯೇ ವಾಟರ್ ಪ್ಯೂರಿಫೈಯರ್, ಗೀಸರ್, ಮತ್ತೊಂದು-ಮಗದೊಂದು ವಸ್ತುಗಳನ್ನು ಕೂರಿಸಲು ಆಯಾ ತಂತ್ರಜ್ಞರನ್ನು ಕರೆಸಿ ಅವರು ಹೇಳಿದ ಬೆಲೆ ತೆತ್ತಿದ್ದಾಯ್ತು.  ಒಮ್ಮೆ ಮನೆ ಬದಲಾಯಿಸಿ ಹೊಸ ಮನೆಯಲ್ಲಿ ಸೆಟಲ್ ಆಗುವುದು ಎಂದರೆ ಅದು ಸಾವಿರಾರು ರೂಪಾಯಿಯ ಖರ್ಚಿನ ಬಾಬ್ತು.</p>
<p>&nbsp;</p>
<p>ಈ ಮೊಳೆಗಳಲ್ಲೂ ಹಲವು ಬಗೆ, ಹಲವು ಅಳತೆ. ಕುಕ್ಕುಮೊಳೆಯಿಂದ ಹಿಡಿದು ನಾಲ್ಕಿಂಚಿನ ಮೊಳೆಯವರೆಗೆ ಅಳತೆಗಳು. ಕೆಲವಕ್ಕೆ ಸಣ್ಣ ತಲೆಯಾದರೆ ಕೆಲವಕ್ಕೆ ದೊಡ್ಡ ತಲೆ. ಇನ್ನು ಕೆಲವಕ್ಕೆ ವಾಶರು ಎಂಬ ಸಂಗಾತಿ.  ಹಾರ್ಡ್‌ವೇರ್ ಅಂಗಡಿಗೆ ಹೋಗಿ ಮೊಳೆ ಕೇಳಿದರೆ ‘ಸೆಲ್ಫ್ ಟೈಟನಿಂಗ್ ಸ್ಕ್ರೂ ತಗಂಬುಡಿ ಸಾರ್, ನಿಮಗೂ ಸುಲಭ ಆಗುತ್ತೆ’ ಎಂದರು. ಏನೋ, ಮೊಳೆಗಳಿಗೂ ಆಧುನಿಕತೆಯ ಸ್ಪರ್ಶ ಸಿಕ್ಕಿರುವುದು ಕೇಳಿ ಖುಷಿಯಾಯಿತು. ಸಿಮೆಂಟಿನ ಗೋಡೆಯ ಮನೆಗಳಲ್ಲಿ ಮೊಳೆ ಹೋಡೆಯಬೇಕೆಂದರೆ ಬರೀ ಮೊಳೆ ಕೊಂಡರಾಗಲಿಲ್ಲ, ಅವುಗಳ ಜೊತೆಗೆ ‘ಗಟ್ಟ’ವನ್ನೂ ಕೊಳ್ಳಬೇಕು. ಮೊದಲ ಸಲ ಈ ಶಬ್ದ ಕೇಳಿದಾಗ ನಾನು ಊರಿನ ಎಲೆಕ್ಟ್ರಿಕ್ ಅಂಗಡಿಯೊಂದರ ಕಟ್ಟೆಯ ಮೇಲಿದ್ದೆ. ಒಂದು ಹೊಸ ಸ್ವಿಚ್‌ಬೋರ್ಡ್ ಕೂರಿಸಲು ಸ್ಕ್ರೂ ಕೇಳಿದರೆ ಅಂಗಡಿಯವನು ‘ಜೊತೆಗೆ ಗಟ್ಟಾನೂ ಕೊಡ್ಲಾ ಸಾರ್?’ ಅಂತ ಕೇಳಿದ. ‘ಗಟ್ಟ ಕೊಡ್ಲಾ ಅಂದ್ರೆ ಏನ್ರೀ? ಗಟ್ಟ ಇಳಿಯೋದು-ಹತ್ತೋದು ಗೊತ್ತಿದೆ ನಂಗೆ’ ಎಂದೆ.  ‘ಅಯ್ಯೋ, ಆ ಗಟ್ಟ ಅಲ್ಲಾ ಸಾರ್, ಈ ಗಟ್ಟಾ’ ಅಂತ ಸಣ್ಣಸಣ್ಣ ಮರದ ತುಂಡುಗಳನ್ನು ತೋರಿಸಿದ. ‘ಗೋಡೆಗೆ ಹೋಲ್ ಮಾಡ್ಕೊಂಡು ಈ ಗಟ್ಟ ಹೊಡ್ಕೊಂಡು ಆಮೇಲೆ ಸ್ಕ್ರೂ ಫಿಟ್ ಮಾಡಿದ್ರೆ ಭದ್ರವಾಗಿ ನಿಲ್ಲುತ್ತೆ ಸಾರ್’ ಅಂದ.  ‘ಇದನ್ಯಾಕೆ ದುಡ್ಡು ಕೊಟ್ಟು ತಗೊಳ್ಲಿ ಬಿಡ್ರೀ. ನಮ್ಮನೆ ಸೌದೆ ರಾಶಿಯಿಂದಾನೇ ಕತ್ತರಿಸಿ ಗಟ್ಟ ಮಾಡ್ಕೋತೀನಿ’ ಎಂದಿದ್ದೆ.  ಆದರೆ ನಗರವಾಸಿಯಾದಮೇಲೆ ಗಟ್ಟವನ್ನೂ ದುಡ್ಡು ಕೊಟ್ಟೇ ಖರೀದಿಸುವುದು ಅನಿವಾರ್ಯವಾಯಿತು.</p>
<p>&nbsp;</p>
<p>ಡ್ರಿಲ್ಲಿಂಗ್ ಮಶೀನು ಬಂದಮೇಲೆ ಗೋಡೆಗೆ ರಂದ್ರ ಕೊರೆಯುವ ಕೆಲಸ ಸುಲಭವಾಗಿದ್ದು ನಿಜ. ಈ ಮಶೀನನ್ನು ರಂದ್ರವನ್ನು ಕೊರೆಯಲಷ್ಟೇ ಅಲ್ಲ, ಸ್ಕ್ರೂ ಟೈಟ್ ಮಾಡಲೂ ಬಳಸಬಹುದಿತ್ತು.  ಡಿಶ್ ಕೂರಿಸಲು ಬಂದವನು ಆ ಮಶೀನಿನಿಂದ ರಂದ್ರ ಕೊರೆದು ಅದರಲ್ಲೇ ನಟ್ಟು-ಬೋಲ್ಟುಗಳನ್ನು ಕೂರಿಸಿ ಎರಡು ನಿಮಿಷದಲ್ಲಿ ದುಡ್ಡು ಎಣಿಸಿಕೊಂಡು ಹೊರಟುಹೋದಾಗ ‘ಎಲಾ!’ ಎಂದುಕೊಂಡೆ. ಒಂದು ಮೊಳೆ ಹೊಡೆಯಲು ಸುತ್ತಿಗೆ-ಸ್ಕ್ರೂಡ್ರೈವರು-ಸ್ಪಾನರು-ಇಕ್ಕಳ ಇತ್ಯಾದಿಗಳನ್ನು ಹಿಡಿದುಕೊಂಡು ಹತ್ತಾರು ನಿಮಿಷ ಕಷ್ಟ ಪಡುತ್ತಿದ್ದ ದಿನಗಳು ನೆನಪಾದವು.  ‘ಎಲ್ಲಾ ಕಾಲದ ಮಹಿಮೆ’ ಅಂತ ನಿಟ್ಟುಸಿರು ಬಿಟ್ಟೆ.</p>
<p>&nbsp;</p>
<p>‘ಕೈಯಲ್ಲೊಂದು ಸುತ್ತಿಗೆ ಇದ್ದರೆ ಎದುರಿಗಿರುವುದೆಲ್ಲಾ ಮೊಳೆಯ ಹಾಗೆ ಕಾಣುತ್ತೆ’ ಎಂಬ ಮಾತಿನಂತೆ, ಮೊಳೆಗಳ ಬಗ್ಗೆ ಯೋಚಿಸುತ್ತಿದ್ದರೆ ಕಣ್ಮುಂದೆಲ್ಲಾ ಮೊಳೆಗಳೇ ಬರುತ್ತವೆ. ರಸ್ತೆಯ ಮೇಲೆ ಬಿದ್ದುಕೊಂಡು ಬೈಕು-ಕಾರಿನ ಟಯರಿಗೆ ಚುಚ್ಚಿಕೊಂಡು ಪಂಕ್ಚರ್ ಮಾಡುವ ಮೊಳೆಗಳು, ಅಕಸ್ಮಾತ್ ಕಾಲಿಗೆ ಚುಚ್ಚಿದರೆ ಸೆಪ್ಟಿಕ್ ಆಗಿ ಡಾಕ್ಟರನ್ನು ಕಾಣುವಂತೆ ಮಾಡುವ ಹಳೆಯ ತುಕ್ಕು ಹಿಡಿದ ಮೊಳೆಗಳು, ಯೋಧನ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಗಳು, ಎರಡಂತಸ್ತಿನ ಮನೆಯ ಮೇಲೆ ನಿಂತು ಹೆಂಚು ಹೊದಿಸಲು ರೀಪು-ಪಕಾಸಿಗಳನ್ನು ಜೋಡಿಸುತ್ತಾ ಯಾರೋ ಬಡಗಿ ಹೊಡೆಯುತ್ತಿರುವ ದೊಡ್ಡ ಮೊಳೆಗಳು, ಗಡಿಯಾರದ ಅಂಗಡಿಯವ ಕಣ್ಣಿಗೊಂದು ಭೂತಕನ್ನಡಿ ಸಿಕ್ಕಿಸಿಕೊಂಡು ವಾಚಿನೊಳಗೆ ಕೂರಿಸಲು ಹೆಣಗುತ್ತಿರುವ ಸಣ್ಣ ಮೊಳೆಗಳು&#8230; ನಮ್ಮ ಅವಶ್ಯಕತೆಗೆ ತಕ್ಕಂತೆ ವಸ್ತುಗಳನ್ನು ಗೋಡೆಯಲ್ಲೋ ಮತ್ಯಾವುದೋ ವಸ್ತುವಿನ ಮೇಲೋ ಒತ್ತಿ ಹಿಡಿದಿಟ್ಟುಕೊಂಡು ಆಮೇಲೆ ನಮ್ಮ ಅವಜ್ಞೆಗೊಳಗಾದರೂ ತಮ್ಮ ಕರ್ತವ್ಯವನ್ನು ವರುಷಗಟ್ಟಲೇ ಪಾಲಿಸುವ ಮೊಳೆಗಳಿಗೆ ನಾವು ಎಷ್ಟು ಬೈದರೂ ಎಷ್ಟು ಬಡಿದರೂ ಬೇಸರವಿಲ್ಲ. ತಮ್ಮ ಪಾಡಿಗವು ಸಣಕಲು ಮೈಯನ್ನು ಮುದುಡಿಸಿ ಒಳಗಿಟ್ಟುಕೊಂಡು ತಲೆಯನ್ನಷ್ಟೇ ಹೊರಗಿಟ್ಟುಕೊಂಡು ಮೌನವಾಗಿವೆ. ನಿರ್ಮೋಹಿಗಳಂತೆ ಎಂತಹ ಚುಂಬಕ ಗಾಳಿಗೂ ಹೆದರದೆ ಸ್ಥಿರವಾಗಿವೆ. ಹಾಗೂ ಅವುಗಳೊಡಲಲ್ಲಿ ಎಂದೋ ಕೇಳಿದ ಒಂದು ವಾಕ್ಯ ಪ್ರತಿಧ್ವನಿಸುತ್ತಿರುತ್ತೆ: ‘ತಂದೆಯೇ, ಇವರಿಗೆ ತಾವು ಏನು ಮಾಡುತ್ತಿದ್ದೇವೆಂಬುದು ತಿಳಿದಿಲ್ಲ, ಇವರನ್ನು ಕ್ಷಮಿಸು’.</p>
<p style="text-align: right;"><strong>&#8211; ಸುಶ್ರುತ ದೊಡ್ಡೇರಿ</strong></p><p>The post <a href="http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%ae%e0%b3%8a%e0%b2%b3%e0%b3%86%e0%b2%97%e0%b2%b3%e0%b3%81-%e0%b2%b8%e0%b2%be%e0%b2%b0%e0%b3%8d-%e0%b2%ae%e0%b3%8a%e0%b2%b3%e0%b3%86%e0%b2%97%e0%b2%b3%e0%b3%81/">ಮೊಳೆಗಳು ಸಾರ್ ಮೊಳೆಗಳು</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%ae%e0%b3%8a%e0%b2%b3%e0%b3%86%e0%b2%97%e0%b2%b3%e0%b3%81-%e0%b2%b8%e0%b2%be%e0%b2%b0%e0%b3%8d-%e0%b2%ae%e0%b3%8a%e0%b2%b3%e0%b3%86%e0%b2%97%e0%b2%b3%e0%b3%81/feed/</wfw:commentRss>
			<slash:comments>0</slash:comments>
		
		
			</item>
		<item>
		<title>ರಾಜ್ಯೋತ್ಸವ ರಸಪ್ರಶ್ನೆ -೨೦೦೦</title>
		<link>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b0%e0%b2%be%e0%b2%9c%e0%b3%8d%e0%b2%af%e0%b3%8b%e0%b2%a4%e0%b3%8d%e0%b2%b8%e0%b2%b5/</link>
					<comments>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b0%e0%b2%be%e0%b2%9c%e0%b3%8d%e0%b2%af%e0%b3%8b%e0%b2%a4%e0%b3%8d%e0%b2%b8%e0%b2%b5/#comments</comments>
		
		<dc:creator><![CDATA[pavanaja]]></dc:creator>
		<pubDate>Fri, 01 Nov 2013 12:17:52 +0000</pubDate>
				<category><![CDATA[ಹಾಸ್ಯ]]></category>
		<category><![CDATA[ರಾಜ್ಯೋತ್ಸವ]]></category>
		<guid isPermaLink="false">http://vishvakannada.com/?p=1112</guid>

					<description><![CDATA[<p>(ಕನ್ನಡ, ಕನ್ನಡಿಗ, ಕರ್ನಾಟಕದ ರಾಜಧಾನಿ ಬೆಂಗಳೂರಿನ ಭಾಷೆ ಸಂಸ್ಕೃತಿಯ ಅರಿವಿಗೆ) ೧. ಬೆಂಗಳೂರಿನಲ್ಲಿ ಜನರು ಆಡುವ ಭಾಷೆ ಯಾವುದು? (ಕ) ತಮಿಳು (ಚ) ಇಂಗ್ಲಿಷ್ (ಟ) ಕಂಗ್ಲಿಷ್ (ತ) ಕನ್ನಡ (ಪ) ಎಲ್ಲವೂ ೨.&#8230;</p>
<p>The post <a href="http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b0%e0%b2%be%e0%b2%9c%e0%b3%8d%e0%b2%af%e0%b3%8b%e0%b2%a4%e0%b3%8d%e0%b2%b8%e0%b2%b5/">ರಾಜ್ಯೋತ್ಸವ ರಸಪ್ರಶ್ನೆ -೨೦೦೦</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p>(ಕನ್ನಡ, ಕನ್ನಡಿಗ, ಕರ್ನಾಟಕದ ರಾಜಧಾನಿ ಬೆಂಗಳೂರಿನ ಭಾಷೆ ಸಂಸ್ಕೃತಿಯ ಅರಿವಿಗೆ)<br />
೧. ಬೆಂಗಳೂರಿನಲ್ಲಿ ಜನರು ಆಡುವ ಭಾಷೆ ಯಾವುದು?<br />
(ಕ) ತಮಿಳು<br />
(ಚ) ಇಂಗ್ಲಿಷ್<br />
(ಟ) ಕಂಗ್ಲಿಷ್<br />
(ತ) ಕನ್ನಡ<br />
(ಪ) ಎಲ್ಲವೂ<br />
೨. ಕರ್ನಾಟಕವನ್ನು ಆಳುತ್ತಿರುವವರು ಯಾರು?<br />
(ಕ) ವೀರಪ್ಪನ್<br />
(ಚ) ಮುಖ್ಯಮಂತ್ರಿ ಕೃಷ್ಣ<br />
(ಟ) ಲಿಕ್ಕರ್ ಲಾಬಿ<br />
(ತ) ಎಲ್ಲರೂ<br />
(ಪ) ಯಾರೂ ಅಲ್ಲ<br />
೩. ಬೆಂಗಳೂರನ್ನು ಈಗ ಆಳುತ್ತಿರುವವರು ಯಾರು?<br />
(ಕ) ರಿಕ್ಷಾ ಚಾಲಕರು<br />
(ಚ) ತಮಿಳರು<br />
(ಟ) ಡಾ| ರಾಜ್ ಅಭಿಮಾನಿಗಳ ಸಂಘ<br />
(ತ) ಎಲ್ಲರೂ<br />
(ಪ) ಯಾರೂ ಅಲ್ಲ<br />
೪. ಕನ್ನಡ ಚಲನಚಿತ್ರ ನಿರ್ದೇಶಕನಾಗಲು ಮುಖ್ಯ ಅರ್ಹತೆ ಏನು?<br />
(ಕ) ಗಡ್ಡ ಬಿಟ್ಟಿರಬೇಕು<br />
(ಚ) ತಮಿಳು, ತೆಲುಗು, ಹಿಂದಿ ಭಾಷೆ ಗೊತ್ತಿದ್ದು ಆ ಭಾಷೆಯ ಸಿನಿಮಾಗಳನ್ನು ದಿನಾ ನೋಡುತ್ತಿರಬೇಕು<br />
(ಟ) ತಮಿಳು, ತೆಲುಗು, ಮಲಯಾಳಂ ಸಿನಿಮಾ ನಟಿಗಳ ಪರಿಚಯವಿರಬೇಕು<br />
(ತ) ಎಲ್ಲವೂ<br />
(ಪ) ಯಾವುದೂ ಅಲ್ಲ<br />
೫. ಕರ್ನಾಟಕ ರಾಜ್ಯೋತ್ಸವ ಆಚರಿಸಲು ಮುಖ್ಯ ಕಾರಣ<br />
(ಕ) ಸಾರ್ವಜನಿಕ ಗಣೇಶ ಚೌತಿಗೆ ಸಂಗ್ರಹಿಸಿ ಉಳಿದ ಹಣ ಮುಗಿಸಲು<br />
(ಚ) ರಾಜ್ಯೋತ್ಸವ ಆಚರಣೆಯ ನೆವದಲ್ಲಿ ಮತ್ತಷ್ಟು ಹಣ ಸಂಗ್ರಹಿಸಲು<br />
(ಟ) ಉಟ್ಟು ಓರಾಟಗಾರರಿಗೆ ಭಾಷಣ ಬಿಗಿಯಲು ವೇದಿಕೆ ಒದಗಿಸಲು<br />
(ತ) ಎಲ್ಲವೂ<br />
(ಪ) ಯಾವುದೂ ಅಲ್ಲ<br />
೬. ಬೆಂಗಳೂರು ಕನ್ನಡಿಗರ ಮುಖ್ಯ ಲಕ್ಷಣ ಏನು?<br />
(ಕ) ಮಾತು ಮಾತಿಗೆ “ಅಯ್ಯೋ ಅದೆಲ್ಲಾ ಆಗೋಲ್ಲಾರಿ&#8221; ಎನ್ನುತ್ತಿರುತ್ತಾರೆ<br />
(ಚ) ಕನ್ನಡ ಶಬ್ದಗಳ ಜೊತೆ ಇಂಗ್ಲಿಷ್ ಶಬ್ದಗಳನ್ನು ಸೇರಿಸಿ ಮಾತನಾಡುತ್ತಾರೆ<br />
(ಟ) ಇಂಗ್ಲಿಷ್ ಶಬ್ದಗಳ ಜೊತೆ ಕನ್ನಡ ಶಬ್ದಗಳನ್ನು ಸೇರಿಸಿ ಮಾತನಾಡುತ್ತಾರೆ<br />
(ತ) ಎಲ್ಲವೂ<br />
(ಪ) ಯಾವುದೂ ಅಲ್ಲ<br />
೭. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕರ್ತವ್ಯಗಳು ಯಾವುವು?<br />
(ಕ) ಕನ್ನಡ ಪರ ಸುತ್ತೋಲೆಗಳನ್ನು ಹೊರಡಿಸುವುದು<br />
(ಚ) ಬೆಂಗಳೂರಿನಲ್ಲಿರುವ ಅಂಗಡಿಗಳ ಇಂಗ್ಲಿಷ್ ಫಲಕಗಳಿಗೆ ಟಾರು, ಸೆಗಣಿ ಬಳಿಯುವುದು<br />
(ಟ) ಕಂಪೆನಿಗಳು ಉಪಯೋಗಿಸುತ್ತಿರುವ, ಇಂಗ್ಲಿಷ್ ಭಾಷೆಯಲ್ಲಿರುವ, ರಬ್ಬರ್ ಸ್ಟಾಂಪ್, ಲೆಟರ್ ಹೆಡ್‌ಗಳನ್ನು ಸಂಗ್ರಹಿಸುವುದು<br />
(ತ) ಎಲ್ಲವೂ<br />
(ಪ) ಯಾವುದೂ ಅಲ್ಲ<br />
೮. ಕನ್ನಡದ ಖಾಸಗಿ ಟಿವಿ ಚ್ಯಾನಲುಗಳಲ್ಲಿ ಸುದ್ದಿ ಓದಲು, ಕಾರ್ಯಕ್ರಮ ನಡೆಸಿ ಕೊಡಲು, ಸಂದರ್ಶನ ಮಾಡಿಕೊಡಲು, ಇತ್ಯಾದಿಗಳಿಗೆ ಇರಬೇಕಾದ ಅರ್ಹತೆಗಳೇನು?<br />
(ಕ) ಚ್ಯಾನೆಲ್‌ಗಳ ಒಡೆಯರಾದ ತಮಿಳರು, ಮಲೆಯಾಳಿಗರು, ತೆಲುಗರು ಇತ್ಯಾದಿ ಕನ್ನಡೇತರರ ಪರಿಚಯ ಇರತಕ್ಕದ್ದು<br />
(ಚ) “ಆಸನ&#8221;ಕ್ಕೆ “ಹಾಸನ&#8221;, “ಆದರ&#8221;ಕ್ಕೆ “ಹಾದರ&#8221;, “ಹೋಗು&#8221;ಗೆ “ಓಗು&#8221; ಇತ್ಯಾದಿಯಾಗಿ ಖನ್ನಡ ಮಾತನಾಡಲು ಕಲಿತಿರಬೇಕು<br />
(ಟ) ಕನ್ನಡ ಸಿನಿಮಾ ರಂಗದ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು -ಇವರ ಪರಿಚಯ ಇರಬೇಕು<br />
(ತ) ಎಲ್ಲವೂ<br />
(ಪ) ಯಾವುದೂ ಅಲ್ಲ<br />
೯. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಕರ್ತವ್ಯಗಳೇನು?<br />
(ಕ) ಮಂತ್ರಿಗಳ, ಅಧಿಕಾರಿಗಳ ಮಕ್ಕಳು, ಸಂಬಂಧಿಕರನ್ನು ಕಲಾವಿದರೆಂದು ವಿದೇಶಕ್ಕೆ ಕಳುಹಿಸಿಕೊಡುವುದು<br />
(ಚ) ವಿಧಾನ ಸೌಧದಲ್ಲಿ ಡೊಳ್ಳು ಕುಣಿತ ಏರ್ಪಡಿಸುವುದು<br />
(ಟ) ಲೆಟರ್‌ಹೆಡ್ ಸಂಘ ಸಂಸ್ಥೆಗಳಿಗೆ ಸರಕಾರದಿಂದ ಅನುದಾನ ನೀಡುವುದು<br />
(ತ) ಮಂತ್ರಿವರೇಣ್ಯರ ಪ್ರಭಾವದಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಹಂಚುವುದು<br />
(ಪ) ಎಲ್ಲವೂ<br />
೧೦. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳೇನು?<br />
(ಕ) ವರ್ಷಕ್ಕೊಮ್ಮೆ ಸಾಹಿತ್ಯ some ಮೇಳ ನಡೆಸುವುದು<br />
(ಚ) ಸಮ್ಮೇಳನದ ಅಧ್ಯಕ್ಷರನ್ನು ಆನೆಯ ಮೇಲೆ ಕೂರಿಸಿ ಮೆರವಣಿಗೆ ಮಾಡುವುದು<br />
(ಟ) ಸಾಹಿತಿಗಳಲ್ಲದವರನ್ನು ಪರಿಷತ್ತಿನ ಸದಸ್ಯರನ್ನಾಗಿ ನೋಂದಾಯಿಸುವುದು<br />
(ತ) ಎಲ್ಲವೂ<br />
(ಪ) ಯಾವುದೂ ಅಲ್ಲ</p>
<p>(೨೦೦೦ದಲ್ಲಿ ತಯಾರಿಸಿದ್ದು. ಈಗಲೂ ಪರಿಸ್ಥಿತಿಯಲ್ಲಿ ಏನೂ ಬದಲಾವಣೆಯಿಲ್ಲ)</p>
<p>&nbsp;</p><p>The post <a href="http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b0%e0%b2%be%e0%b2%9c%e0%b3%8d%e0%b2%af%e0%b3%8b%e0%b2%a4%e0%b3%8d%e0%b2%b8%e0%b2%b5/">ರಾಜ್ಯೋತ್ಸವ ರಸಪ್ರಶ್ನೆ -೨೦೦೦</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b0%e0%b2%be%e0%b2%9c%e0%b3%8d%e0%b2%af%e0%b3%8b%e0%b2%a4%e0%b3%8d%e0%b2%b8%e0%b2%b5/feed/</wfw:commentRss>
			<slash:comments>9</slash:comments>
		
		
			</item>
		<item>
		<title>ವಿಜ್ಞಾನ ಹಾಸ್ಯ</title>
		<link>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b5%e0%b2%bf%e0%b2%9c%e0%b3%8d%e0%b2%9e%e0%b2%be%e0%b2%a8/</link>
					<comments>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b5%e0%b2%bf%e0%b2%9c%e0%b3%8d%e0%b2%9e%e0%b2%be%e0%b2%a8/#comments</comments>
		
		<dc:creator><![CDATA[pavanaja]]></dc:creator>
		<pubDate>Sun, 01 Apr 2012 15:08:41 +0000</pubDate>
				<category><![CDATA[ಹಾಸ್ಯ]]></category>
		<category><![CDATA[ವಿಜ್ಞಾನ]]></category>
		<guid isPermaLink="false">http://vishvakannada.com/?p=931</guid>

					<description><![CDATA[<p>ಪೀಸಾದ ಗೋಪುರ ವಾಲಿಕೊಂಡಿರುವುದರ ಬಗ್ಗೆ ವ್ಯಾಖ್ಯೆ “ಗೆಲಿಲಿಯೋ ಸ್ವರ್ಗಸ್ಥನಾದ ನಂತರ ನ್ಯೂಟನ್ ಹುಟ್ಟಿದುದು. ಆದ್ದರಿಂದ ಗೆಲಿಲಿಯೋಗೆ ನ್ಯೂಟನ್‌ನ ಮೂರನೆಯ ನಿಯಮ ಗೊತ್ತಿರಲಿಲ್ಲ. ಆತ ಪೀಸಾದ ಗೋಪುರ ಹತ್ತಿ ಭಾರವಾದ ಕಲ್ಲುಗಳನ್ನು ಎಸೆದ. ಇದರ ಪ್ರತಿಕ್ರಿಯೆಯಾಗಿ&#8230;</p>
<p>The post <a href="http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b5%e0%b2%bf%e0%b2%9c%e0%b3%8d%e0%b2%9e%e0%b2%be%e0%b2%a8/">ವಿಜ್ಞಾನ ಹಾಸ್ಯ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p>ಪೀಸಾದ ಗೋಪುರ ವಾಲಿಕೊಂಡಿರುವುದರ ಬಗ್ಗೆ ವ್ಯಾಖ್ಯೆ “ಗೆಲಿಲಿಯೋ ಸ್ವರ್ಗಸ್ಥನಾದ ನಂತರ ನ್ಯೂಟನ್ ಹುಟ್ಟಿದುದು. ಆದ್ದರಿಂದ ಗೆಲಿಲಿಯೋಗೆ ನ್ಯೂಟನ್‌ನ ಮೂರನೆಯ ನಿಯಮ ಗೊತ್ತಿರಲಿಲ್ಲ. ಆತ ಪೀಸಾದ ಗೋಪುರ ಹತ್ತಿ ಭಾರವಾದ ಕಲ್ಲುಗಳನ್ನು ಎಸೆದ. ಇದರ ಪ್ರತಿಕ್ರಿಯೆಯಾಗಿ ಗೋಪುರ ವಾಲಿತು&#8221;</p>
<p style="text-align: center;">&#8212;- &#8212;-</p>
<p>ಗುರುತ್ತ್ವಾಕರ್ಷಣೆಯ ತತ್ತ್ವ ನ್ಯೂಟನ್‌ಗಿಂತ ಮೊದಲೇ ಭಾರತೀಯರಿಗೆ ಗೊತ್ತಿತ್ತು. ಅದು ಯಾವ ರೀತಿ ಎಂದರೆ “ನ್ಯೂಟನ್‌ನ ತಲೆಯ ಮೇಲೆ ಸೇಬಿನಹಣ್ಣು ಬಿದ್ದದ್ದರಿಂದ ಗುರುತ್ತ್ವಾಕರ್ಷಣ ತತ್ತ್ವದ ಜ್ಞಾನೋದಯವಾಯಿತೆಂಬುದು ಎಲ್ಲರಿಗೂ ತಿಳಿದ ವಿಷಯ. ನ್ಯೂಟನ್‌ಗೂ ಮುಂಚೆಯೇ ಭಾರತದ ಜ್ಞಾನಿಗಳಿಗೂ ಈ ಬಗ್ಗೆ ಜ್ಞಾನೋದಯವಾಗಿತ್ತು. ಭಾರತದ ಪಶ್ಟಿಮ ತೀರಗಳಲ್ಲಿ (ಕೇರಳ, ಗೋವಾ) ಸೇಬಿನ ಮರಗಳಿಲ್ಲ. ಜ್ಞಾನಿಗಳಿದ್ದರು. ಅವರಲ್ಲೊಬ್ಬನ (ಈ ಜ್ಞಾನಿಗೆ ಸ್ವಾಮೀ ಗುರುತ್ವಾನಂದ ಎಂದು ವಿಜ್ಞಾನಿ ಜಯಂತ್ ನಾರ್ಳಿಕರ್ ನಾಮಕರಣ ಮಾಡಿದ್ದಾರೆ.) ತಲೆಯ ಮೇಲೆ ಸೇಬಿನ ಬದಲು (ಅಲ್ಲಿ ಯಥೇಚ್ಛವಾಗಿ ಸಿಗುವ) ತೆಂಗಿನಕಾಯಿ ಬಿದ್ದಿತು. ಜ್ಞಾನೋದಯವೇನೋ ಆಯಿತು. ಆದರೆ ಅದನ್ನು ಇತರರಿಗೆ ತಿಳಿಸಿಕೊಡಲು ಆತ ಉಳಿಯಲಿಲ್ಲ&#8230;&#8230;&#8221;</p>
<p style="text-align: center;">&#8212;- &#8212;-</p>
<p>ಅಧ್ಯಾಪಕ: ಆಮ್ಲಜನಕ ನಮಗೆ ಉಸಿರಾಡಲು ಬಹು ಮುಖ್ಯ. ಇದು ಇಲ್ಲದೆ ನಮಗೆ ಬದುಕಲು ಅಸಾಧ್ಯ. ಆಮ್ಲಜನಕವನ್ನು ೧೮ನೆಯ ಶತಮಾನದ ಕೊನೆಗೆ ಪ್ರಿಸ್ಲಿ ಎಂಬ ವಿಜ್ಞಾನಿಯು ಕಂಡುಹಿಡಿದನು.</p>
<p>ವಿದ್ಯಾರ್ಥಿ: ಸಾರ್, ಅದಕ್ಕಿಂತ ಮೊದಲು ಜನರು ಹೇಗೆ ಬದುಕಿದ್ದರು?</p>
<p style="text-align: center;">&#8212;- &#8212;-</p>
<p>ಅಧ್ಯಾಪಕ: ನೀರಿನ ರಾಸಾಯನಿಕ ಸೂತ್ರ ಹೇಳು.</p>
<p>ವಿದ್ಯಾರ್ಥಿ: H I J K L M N O</p>
<p>ಅಧ್ಯಾಪಕ: ಏನೋ ಅದು ನೀನು ಹೇಳುತ್ತಿರುವುದು?</p>
<p>ವಿದ್ಯಾರ್ಥಿ: ನೀವೇ ಹೇಳಿದ್ದಲ್ಲವೇ ಸಾರ್, ನೀರಿನ ರಾಸಾಯನಿಕ ಸೂತ್ರ ಎಚ್ ಟು ಒ (H to O) ಎಂದು?</p>
<p style="text-align: center;">&#8212;- &#8212;&#8211;</p>
<p>ವಿದ್ಯಾರ್ಥಿ: ಸಾರ್, ನೀವು ಹೇಳಿದ್ದಿರಿ, ಬೆಳಕು ಶಬ್ದಕ್ಕಿಂತ ವೇಗವಾಗಿ ಚಲಿಸುತ್ತದೆ ಎಂದು.</p>
<p>ಅಧ್ಯಾಪಕ: ಹೌದು, ಯಾಕೆ?</p>
<p>ವಿದ್ಯಾರ್ಥಿ: ಅಂದರೆ ನಮ್ಮಿಂದ ಸ್ವಲ್ಪ ದೂರದಲ್ಲಿ ಒಂದು ಘಟನೆ ನಡೆದರೆ ಅದರ ದೃಶ್ಯ ಮೊದಲು ಕಾಣಿಸುತ್ತದೆ, ಶಬ್ದ ನಂತರ ಕೇಳಿಸುತ್ತದೆ ಎಂದು ಅರ್ಥ ಅಲ್ಲವೇ ಸಾರ್?</p>
<p>ಅಧ್ಯಾಪಕ: ಹೌದು. ಚೆನ್ನಾಗಿಯೇ ತಿಳಿದುಕೊಂಡಿದ್ದೀಯ.</p>
<p>ವಿದ್ಯಾರ್ಥಿ: ಆದರೆ ನಮ್ಮ ಮನೆಯಲ್ಲಿ ಇದಕ್ಕೆ ವಿರುದ್ಧವಾಗಿ ನಡೆಯುತ್ತಿದೆ.</p>
<p>ಅಧ್ಯಾಪಕ: ಹೌದೇ? ಅದು ಹೇಗೆ?</p>
<p>ವಿದ್ಯಾರ್ಥಿ: ನಾನು ಟಿ.ವಿ.ಯ ಸ್ವಿಚ್ ಹಾಕಿದಾಗ ಶಬ್ದ ಮೊದಲು ಬರುತ್ತದೆ, ಸ್ವಲ್ಪ ಸಮಯದ ನಂತರ ಚಿತ್ರ ಮೂಡಿಬರುತ್ತದೆ!</p>
<p style="text-align: center;">&#8212;- &#8212;&#8211;</p>
<p>ಅಧ್ಯಾಪಕ: ಸೂರ್ಯ ಮತ್ತು ಚಂದ್ರ -ಇವುಗಳಲ್ಲಿ ಯಾವುದು ನಮ್ಮಿಂದ ದೂರ ಇದೆ? ಯಾವುದು ಹತ್ತಿರ ಇದೆ?</p>
<p>ವಿದ್ಯಾರ್ಥಿ: ಸೂರ್ಯ ಹತ್ತಿರ, ಚಂದ್ರ ದೂರ ಸಾರ್.</p>
<p>ಅಧ್ಯಾಪಕ: ಅದು ಹೇಗೋ?</p>
<p>ವಿದ್ಯಾರ್ಥಿ: ಸೂರ್ಯನ ಬೆಳಕು ತುಂಬ ಬಿಸಿ. ಚಂದ್ರನದು ತಂಪು. ಆದುದರಿಂದ ಸೂರ್ಯ ಹತ್ತಿರ ಚಂದ್ರ ದೂರ ಎಂದು ನಾವು ತೀರ್ಮಾನಿಸಬಹುದು.</p>
<p style="text-align: center;">&#8212;- &#8212;&#8211;</p>
<p>ಅಧ್ಯಾಪಕ: ಆಂಟಿಮನಿ ಎಂದರೇನು?</p>
<p>ವಿದ್ಯಾರ್ಥಿ: ನಮ್ಮ ಮನೆಗೆ ಭೇಟಿ ಇತ್ತ ಆಂಟಿ ಕೊಟ್ಟ ಹಣ ಸಾರ್.</p>
<p style="text-align: center;">&#8212;- &#8212;-</p>
<p>ಅಧ್ಯಾಪಕ: ಅಮೋನಿಯಾ ಮತ್ತು ನ್ಯುಮೋನಿಯಾ ಬಗ್ಗೆ ಚುಟುಕಾಗಿ ಹೇಳು.</p>
<p>ವಿದ್ಯಾರ್ಥಿ: ಅಮೋನಿಯಾ ಒಂದು ಅನಿಲ. ಅದನ್ನು ನೀರಿನಲ್ಲಿ ಕರಗಿಸಿದರೆ ಕ್ಷಾರವಾಗುತ್ತದೆ. ಆ ನೀರನ್ನು ಕುಡಿದರೆ ನ್ಯುಮೋನಿಯಾ ಬರುತ್ತದೆ.</p>
<p style="text-align: center;">&#8212;- &#8212;-</p>
<p>ಅಧ್ಯಾಪಕ: ಹುಳಿಮಳೆ ಎಂದರೇನು?</p>
<p>ವಿದ್ಯಾರ್ಥಿ: ನಾವು ಶಾಲೆ ಬಿಡುವ ಹೊತ್ತಿಗೆ ಸರಿಯಾಗಿ ಮನೆಗೆ ಹೋಗುವಾಗ ಮಳೆಯಲ್ಲಿ ನೆನಯುವಂತೆ ಮಾಡಲು ಹುಳಿಬುದ್ಧಿಯಿಂದ ವರುಣದೇವ ಸುರಿಸುವ ಮಳೆ.</p>
<p style="text-align: center;">&#8212;- &#8212;-</p>
<p>ಅಧ್ಯಾಪಕ: ಅಲೆಕ್ಸಾಂಡರ್ ಗ್ರಹಾಂ ಬೆಲ್ ಟೆಲಿಫೋನ್ ಕಂಡುಹಿಡಿಯದಿದ್ದರೆ ಏನಾಗುತ್ತಿತ್ತು?</p>
<p>ವಿದ್ಯಾರ್ಥಿ: ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಪದವಿ ಕಳೆದುಕೊಳುತ್ತಿರಲಿಲ್ಲ.</p>
<p style="text-align: center;">&#8212;- &#8212;&#8211;</p>
<p>ಅಧ್ಯಾಪಕ: ಜೇಮ್ಸ್ ವ್ಯಾಟ್ ಉಗಿಯಂತ್ರ ಕಂಡುಹಿಡಿಯದ್ದರೆ ಏನಾಗುತ್ತಿತ್ತು?</p>
<p>ವಿದ್ಯಾರ್ಥಿ: ಹಲವಾರು ರೈಲು ಅಪಘಾತಗಳಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ.</p>
<p style="text-align: center;">&#8212;&#8211; &#8212;&#8211;</p>
<p>ಅಧ್ಯಾಪಕ: ಮೈಕೆಲ್ ಫಾರಡೆ ವಿದ್ಯುಚ್ಛಕ್ತಿ ಕಂಡುಹಿಡಿಯದಿದ್ದರೆ ಏನಾಗುತ್ತಿತ್ತು?</p>
<p>ವಿದ್ಯಾರ್ಥಿ: ನಮಗೆ ಪರೀಕ್ಷೆಗೆ ಒಂದು ಪ್ರಶ್ನೆ ಕಡಿಮೆಯಾಗುತ್ತಿತ್ತು.</p>
<p style="text-align: center;">&#8212;- *** &#8212;</p>
<p><strong> </strong></p><p>The post <a href="http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b5%e0%b2%bf%e0%b2%9c%e0%b3%8d%e0%b2%9e%e0%b2%be%e0%b2%a8/">ವಿಜ್ಞಾನ ಹಾಸ್ಯ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b5%e0%b2%bf%e0%b2%9c%e0%b3%8d%e0%b2%9e%e0%b2%be%e0%b2%a8/feed/</wfw:commentRss>
			<slash:comments>35</slash:comments>
		
		
			</item>
		<item>
		<title>ಅಮೆರಿಕದ ‘ಅಕ್ಕ’ನ ಬೊಗಸೆಯಲ್ಲಿ ಅಗೋಚರ ಅಪಾಯಗಳು</title>
		<link>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%85%e0%b2%ae%e0%b3%86%e0%b2%b0%e0%b2%bf%e0%b2%95%e0%b2%a6-%e2%80%98%e0%b2%85%e0%b2%95%e0%b3%8d%e0%b2%95%e2%80%99%e0%b2%a8-%e0%b2%ac%e0%b3%8a%e0%b2%97%e0%b2%b8%e0%b3%86%e0%b2%af%e0%b2%b2%e0%b3%8d/</link>
					<comments>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%85%e0%b2%ae%e0%b3%86%e0%b2%b0%e0%b2%bf%e0%b2%95%e0%b2%a6-%e2%80%98%e0%b2%85%e0%b2%95%e0%b3%8d%e0%b2%95%e2%80%99%e0%b2%a8-%e0%b2%ac%e0%b3%8a%e0%b2%97%e0%b2%b8%e0%b3%86%e0%b2%af%e0%b2%b2%e0%b3%8d/#comments</comments>
		
		<dc:creator><![CDATA[admin]]></dc:creator>
		<pubDate>Sun, 01 Apr 2007 12:19:08 +0000</pubDate>
				<category><![CDATA[ಹಾಸ್ಯ]]></category>
		<guid isPermaLink="false">http://localhost/vishwakannada/?p=362</guid>

					<description><![CDATA[<h3>- <a href="http://prajavani.net/Content/Apr12007/nagesh.asp">ನಾಗೇಶ ಹೆಗಡೆ</a></h3>
<p>ಅಮೆರಿಕದ ಬಾಲ್ಟಿಮೋರ್ ನಗರದಲ್ಲಿ ಏಳು ತಿಂಗಳ ಹಿಂದೆ ‘<a href="http://akkaonline.org">ಅಕ್ಕ</a>’ ಸಮ್ಮೇಳನಕ್ಕೆ ಇಲ್ಲಿಂದ ದೊಡ್ಡ ದಂಡೇ ಹೋಗಿತ್ತಲ್ಲ? ಆ ದಂಡಿನಲ್ಲಿ  ಕನ್ನಡ ನಾಡಿನ ಸಣ್ಣ ಕೈಗಾರಿಕೆಗಳ ಒಕ್ಕೂಟದ ಪದಾಧಿಕಾರಿಯೊಬ್ಬರು ಕೂಡ ಹೋಗಿದ್ದರು. ಸಮ್ಮೇಳನ ಮುಗಿಯುತ್ತ ಬಂದಂತೆ ಒಬ್ಬೊಬ್ಬ ಗಣ್ಯ ಅತಿಥಿಯೂ ಕನ್ನಡ ಮಾಧ್ಯಮಗಳಿಗೆ ಒಂದೊಂದಿಷ್ಟು ಹೇಳಿಕೆಗಳನ್ನು ನೀಡಿದರು. ತಾನೇನು ಕಮ್ಮಿ ಎಂದು ಈ ನಮ್ಮ ಕೈಗಾರಿಕಾ ಮಿತ್ರರೂ ಹೇಳಿಕೆ ನೀಡಿದರು: ‘ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಒಂದಿಷ್ಟು ರಾಸಾಯನಿಕ ಉದ್ಯಮಗಳನ್ನು ಆರಂಭಿಸುವಂತೆ ಅಮೆರಿಕದ ಉದ್ಯಮಿಗಳನ್ನು ನಾನು ಕೇಳಿಕೊಂಡಿದ್ದೇನೆ’ ಎಂದು.</p>
<p>The post <a href="http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%85%e0%b2%ae%e0%b3%86%e0%b2%b0%e0%b2%bf%e0%b2%95%e0%b2%a6-%e2%80%98%e0%b2%85%e0%b2%95%e0%b3%8d%e0%b2%95%e2%80%99%e0%b2%a8-%e0%b2%ac%e0%b3%8a%e0%b2%97%e0%b2%b8%e0%b3%86%e0%b2%af%e0%b2%b2%e0%b3%8d/">ಅಮೆರಿಕದ ‘ಅಕ್ಕ’ನ ಬೊಗಸೆಯಲ್ಲಿ ಅಗೋಚರ ಅಪಾಯಗಳು</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<h3>&#8211; <a href="http://prajavani.net/Content/Apr12007/nagesh.asp">ನಾಗೇಶ ಹೆಗಡೆ</a></h3>
<p>ಅಮೆರಿಕದ ಬಾಲ್ಟಿಮೋರ್ ನಗರದಲ್ಲಿ ಏಳು ತಿಂಗಳ ಹಿಂದೆ ‘<a href="http://akkaonline.org">ಅಕ್ಕ</a>’ ಸಮ್ಮೇಳನಕ್ಕೆ ಇಲ್ಲಿಂದ ದೊಡ್ಡ ದಂಡೇ ಹೋಗಿತ್ತಲ್ಲ? ಆ ದಂಡಿನಲ್ಲಿ  ಕನ್ನಡ ನಾಡಿನ ಸಣ್ಣ ಕೈಗಾರಿಕೆಗಳ ಒಕ್ಕೂಟದ ಪದಾಧಿಕಾರಿಯೊಬ್ಬರು ಕೂಡ ಹೋಗಿದ್ದರು. ಸಮ್ಮೇಳನ ಮುಗಿಯುತ್ತ ಬಂದಂತೆ ಒಬ್ಬೊಬ್ಬ ಗಣ್ಯ ಅತಿಥಿಯೂ ಕನ್ನಡ ಮಾಧ್ಯಮಗಳಿಗೆ ಒಂದೊಂದಿಷ್ಟು ಹೇಳಿಕೆಗಳನ್ನು ನೀಡಿದರು. ತಾನೇನು ಕಮ್ಮಿ ಎಂದು ಈ ನಮ್ಮ ಕೈಗಾರಿಕಾ ಮಿತ್ರರೂ ಹೇಳಿಕೆ ನೀಡಿದರು: ‘ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಒಂದಿಷ್ಟು ರಾಸಾಯನಿಕ ಉದ್ಯಮಗಳನ್ನು ಆರಂಭಿಸುವಂತೆ ಅಮೆರಿಕದ ಉದ್ಯಮಿಗಳನ್ನು ನಾನು ಕೇಳಿಕೊಂಡಿದ್ದೇನೆ’ ಎಂದು.</p>
<p>ನನಗೆ ದಿಗಿಲು. ಆ ಅಮೆರಿಕದವರು ಬೆರಳು ತೋರಿಸುವ ಮೊದಲೇ ಹಸ್ತವನ್ನು ನುಂಗುವ ಪೈಕಿ. ನಮಗೆ ಪರಿಚಯವೇ ಇಲ್ಲದ, ಆದರೆ ಔದ್ಯಮಿಕ ಲೋಕದಲ್ಲಿ ಅತ್ಯಂತ ಅಪಾಯಕಾರಿ ಎನ್ನಿಸಿದ ಅದೆಷ್ಟೊ ರಸಾಯನ ತ್ಯಾಜ್ಯಗಳನ್ನು ಬಡ ದೇಶಗಳ ಪರಿಸರದಲ್ಲಿ ಬಿಡುಗಡೆ ಮಾಡಿದ ಕುಖ್ಯಾತಿ ಅವರದ್ದು. ಈಚಿನ ವರ್ಷಗಳಲ್ಲಂತೂ ಅದೆಷ್ಟೊ ಹೊಸ ಹೊಸ ಬಗೆಯ ರಾಸಾಯನಿಕಗಳು ತಮ್ಮ ಕರಾಳ ಚಾರಿತ್ರ್ಯವನ್ನು ವಿಜ್ಞಾನಿಗಳಿಗೆ ತೋರ್ಪಡಿಸುವ ಮೊದಲೇ ಹಿಂದುಳಿದ ದೇಶಗಳನ್ನು ಆವರಿಸಿಬಿಡುತ್ತವೆ.</p>
<p>ಡಿಎಚ್ಎಮ್ಮೊ (ಅಂದರೆ <a href="http://urbanlegends.about.com/library/bl_ban_dhmo.htm">ಡೈ ಹೈಡ್ರೊಜನ್ ಮೊನೊಕ್ಸೈಡ್</a>) ಎಂಬ ರಸಾಯನದ ಉದಾಹರಣೆಯನ್ನೇ ನೋಡಿ. ಈ ಬಗ್ಗೆ ಈಗ ಎಲ್ಲೆಲ್ಲೂ ಹಾಹಾಕಾರ ಏಳತೊಡಗಿದೆ. ಅದನ್ನು ಕುರಿತು ಜನಸಾಮಾನ್ಯರಲ್ಲಿ ದಿಗಿಲು ಹುಟ್ಟಿಸಬಲ್ಲ, ಅಷ್ಟೇಕೆ ವೈದ್ಯ ತಜ್ಞರನ್ನೂ ರಸಾಯನ ವಿಜ್ಞಾನಿಗಳನ್ನೂ ಕಂಗೆಡಿಸಬಲ್ಲ ಕೆಲವು ಸಂಗತಿಗಳು ಇಲ್ಲಿವೆ:</p>
<p>ಸಾವಿನ ಅಂಚಿನಲ್ಲಿರುವ ವ್ಯಕ್ತಿಗಳ ಕ್ಯಾನ್ಸರ್ ಕೋಶಗಳಲ್ಲಿ ಶೇಕಡಾ ೮೫ರಷ್ಟು ಈ ‘ಡಿಎಚ್ಎಮ್ಮೊ’ ಎಂಬ ರಸಾಯನ ವಸ್ತು ಇರುವುದು ಪತ್ತೆಯಾಗಿದೆ. ಗರ್ಭದ ಕೊರಳಿನ ಕ್ಯಾನ್ಸರ್ನಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚು, ಅಂದರೆ ಶೇ. ೯೫ರಷ್ಟು ಇದೆಯೆಂದು ವಿಜ್ಞಾನಿಗಳು ಹೇಳುತ್ತಾರೆ.</p>
<p>ಜಗತ್ತಿನಲ್ಲಿ ಯಾವುದೇ ವಸ್ತು ಅಪಾಯಕಾರಿ ಎಂಬುದು ಗೊತ್ತಾದ ತಕ್ಷಣ ಮಿಲಿಟರಿ ಅದನ್ನು ತನ್ನದಾಗಿಸಿಕೊಳ್ಳಲು ಹೊರಡುತ್ತದೆ. ಈ ರಸಾಯನ ಕೂಡ ಮಿಲಿಟರಿಯನ್ನು ಬಹುವಾಗಿ ಆಕರ್ಷಿಸಿದೆ. ಮುಂದಿನ ಯುದ್ಧದಲ್ಲಿ ಇದೇ ಮಹತ್ವದ ಪಾತ್ರ ವಹಿಸಲಿದೆ ಎಂಬ ಸಂಗತಿ ದಿನದಿನಕ್ಕೆ ನಿಚ್ಚಳವಾಗುತ್ತಿದೆ. ಯುದ್ಧಾಸ್ತ್ರಗಳಲ್ಲಿ, ಅದರಲ್ಲೂ ವಿಶೇಷವಾಗಿ ಜೈವಿಕ ಮತ್ತು ರಾಸಾಯನಿಕ ಅಸ್ತ್ರಗಳಲ್ಲಿ ಬಳಕೆಯಾಗುವ ಈ ದ್ರವ್ಯ ಇಂದಿನ ಸಾಮಾನ್ಯ ಜನಜೀವನದಲ್ಲೂ ಹಾಸುಹೊಕ್ಕಾಗುತ್ತಿದೆ. ಗೊತ್ತಿದ್ದೊ ಇಲ್ಲದೆಯೊ, ಉದ್ಯಮಗಳಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸಾಲ್ವೆಂಟ್ನಂತೆ (ಕರಗುಕಾರಿಯಾಗಿ), ಕೂಲಂಟ್ನಂತೆ (ಶೀತಕಾರಿಯಾಗಿ), ಅಷ್ಟೇ ಅಲ್ಲ ಪ್ರಮುಖ ಅಗ್ನಿ ನಿರೋಧಕ ರಸಾಯನವಾಗಿ ಬಳಕೆಯಾಗುತ್ತಿದೆ. ಪರಮಾಣು ಸ್ಥಾವರಗಳು ಅದೆಷ್ಟೇ ಪರಿಸರಸ್ನೇಹಿ ಆಗಿವೆಯೆಂದರೂ ಅಲ್ಲಿಂದ ಹೊರಬರುವ ತ್ಯಾಜ್ಯ ವಸ್ತುಗಳಲ್ಲಿ ‘ಡಿಎಚ್ಎಮ್ಮೊ’ ಪತ್ತೆಯಾಗುತ್ತಿದೆ. ಅಚ್ಚರಿಯ ಸಂಗತಿ ಏನೆಂದರೆ ಅಥ್ಲೀಟ್ಗಳು ಅದರಲ್ಲೂ ವಿಶೇಷವಾಗಿ ಮ್ಯಾರಥಾನ್ ಓಟಗಾರರು ಇದನ್ನು ಹೆಚ್ಚು ಹೆಚ್ಚಾಗಿ ಬಳಕೆಗೆ ತರುತ್ತಿದ್ದಾರೆ. ಅದರಿಂದ ದೂರ ಇರುವುದು ಸಾಧ್ಯವೇ ಇಲ್ಲವೆಂಬಷ್ಟು ಅವಲಂಬಿತರಾಗುತ್ತಾರೆ; ಏನೆಲ್ಲ ಯತ್ನಿಸಿ, ಎರಡು ದಿನಗಳ ಕಾಲ ಇದರಿಂದ ದೂರವಿದ್ದರೆ, ಕೊಕೇನ್ ಅಥವಾ ಹೆರಾಯಿನ್ ಚಟದಾಸರಿಗೆ ಆಗುವಂತೆ ಹಠಾತ್ ಸಾವು ಸಂಭವಿಸಬಹುದೆಂದೂ ಹೇಳುವವರಿದ್ದಾರೆ.</p>
<p>ವೈದ್ಯಕೀಯ ಜಗತ್ತಿನಲ್ಲೂ ಇದರ ಪ್ರಭಾವ ಸಾಕಷ್ಟು ಹಾಸು ಹೊಕ್ಕಾಗಿದೆ. ಅದರಲ್ಲೂ ಅತಿಸಾರ, ವಾಂತಿ ಮುಂತಾದ ಕಾಯಿಲೆಗೆ ತುತ್ತಾದವರ ಶರೀರದಲ್ಲಿ ‘ಡಿಎಚ್ಎಮ್ಮೊ’ ಪಾತ್ರ ಗಣನೀಯವಾಗಿ ಕಂಡುಬರುತ್ತಿದೆ.<br />
ಡಯಾಕ್ಸಿನ್ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಅದೆಷ್ಟೇ ಅಪಾಯಕಾರಿ ಎಂದು ವಿಜ್ಞಾನಿಗಳು ಸಾರಿದರೂ ಔದ್ಯಮಿಕ ರಂಗದಲ್ಲಿ ಅದನ್ನು ಕೈಬಿಡುವುದು ಸಾಧ್ಯವೇ ಇಲ್ಲವೆಂಬಂತೆ ಮತ್ತೆ ಮತ್ತೆ ಅದು ಬಳಕೆಗೆ ಬರುತ್ತಿದೆ. ‘ಡಿಎಚ್ಎಮ್ಮೊ’ದ್ದು ಕೂಡ ಅಂಥದೇ ಕತೆ. ಇದನ್ನು ಸಾಧ್ಯವಿದ್ದಷ್ಟೂ ಕಡಿಮೆ ಬಳಸಿ ಎಂದು ಜಗತ್ತಿನ ಎಲ್ಲ ಸರಕಾರಗಳೂ ಹೇಳುತ್ತಿವೆ. ಕಡಿಮೆ ಬಳಸಲು ಯತ್ನಗಳೇನೊ ನಡೆಯುತ್ತಿವೆ. ಆದರೆ ತ್ಯಾಜ್ಯ ರೂಪದಲ್ಲಿ ಇದು ಹೊರಬಿದ್ದಾಗ ನಾನಾ ಬಗೆಯ ಅಡ್ಡ ಪರಿಣಾಮಗಳು ವರದಿಯಾಗುತ್ತಿವೆ. ಆಸಿಡ್ ಮಳೆಯಲ್ಲಿ ಇದು ಮುಖ್ಯ ಖಳನಾಯಕನೆಂದು ಗುರುತಿಸಲಾಗಿದೆ. ‘ಹಸಿರು ಮನೆ ಪರಿಣಾಮ’ ಅಂದರೆ ಭೂಮಿಯನ್ನು ಬಿಸಿ ಮಾಡುವ ಕ್ರಿಯೆಯಲ್ಲೂ ಇದರ ಪಾತ್ರ ಗಣನೀಯವಾಗಿದೆ. ಆಧುನಿಕ ಜಗತ್ತಿನ ಅನೇಕ  ನಿತ್ಯದ ಚಟುವಟಿಕೆಗಳಿಗೆ ಇದು ಅಡ್ಡಿ ಉಂಟುಮಾಡುತ್ತದೆ. ವಿದ್ಯುತ್ ಟ್ರಾನ್ಸ್ಫಾರ್ಮರ್ಗಳಲ್ಲಿ ಎಣ್ಣೆ ಜಿಡ್ಡಿನೊಂದಿಗೆ ಇದು ಸೇರಿತೆಂದರೆ ಹಠಾತ್ ವಿದ್ಯುತ್ ನಿಲುಗಡೆ ಆಗುತ್ತದೆ. ಕಾರಿನ ಎಂಜಿನ್ಗಳಲ್ಲಿ ಇದು ಕಲಬೆರಕೆ ಆದರಂತೂ ಬ್ರೇಕ್ನ ದಕ್ಷತೆ ಸಾಕಷ್ಟು ಕಡಿಮೆ ಆಗುತ್ತದೆ.<br />
ಪ್ರಾಣಿಗಳ ಮೇಲೆ ನಡೆಸುವ ನಾನಾ ಬಗೆಯ ಕ್ರೂರ ಪ್ರಯೋಗಗಳಲ್ಲಿ ‘ಡಿಎಚ್ಎಮ್ಮೊ’ ಬಳಕೆಯಾಗುತ್ತಿರುವುದನ್ನು ಗುರುತಿಸಲಾಗಿದೆ. ನಗರದ ಯುವಪೀಳಿಗೆಯವರನ್ನು ಬಹುವಾಗಿ ಆಕರ್ಷಿಸುತ್ತಿರುವ ‘ಜಂಕ್ಫುಡ್’ನಲ್ಲಿ ‘ಡಿಎಚ್ಎಮ್ಮೊ’ ಇರುವುದು ಗೊತ್ತಾಗಿದೆ. ಆದರೆ ಅದರ ನಿವಾರಣೆ ಹೇಗೆಂಬುದು ಮಾತ್ರ ಈವರೆಗೂ ಪತ್ತೆಯಾಗಿಲ್ಲ.</p>
<p>ಆಧುನಿಕ ಜಗತ್ತಿನಿಂದ ದೂರ ಇರುವ ಕೃಷಿರಂಗದಲ್ಲೂ ಇದರ ಪಾತ್ರ ದಿನದಿನಕ್ಕೆ ನಿಚ್ಚಳವಾಗುತ್ತಿದೆ. ಕೀಟನಾಶಕ, ಕಳೆನಾಶಕ ಹಾಗೂ ರಸಗೊಬ್ಬರಗಳೊಂದಿಗೆ ‘ಡಿಎಚ್ಎಮ್ಮೊ’ವನ್ನು ಬೆರೆಸಿ ಸಿಂಪರಣೆ ಮಾಡಿದರೆ ಉಪಯುಕ್ತವೆಂದು ಕಂಪನಿಗಳು ಶಿಫಾರಸು ಮಾಡುತ್ತವೆ. ಕೀಟನಾಶಕ ಹಾಗೂ ಕಳೆನಾಶಕಗಳು ಕ್ರಮೇಣ ಮಣ್ಣಿನಲ್ಲಿ ದುರ್ಬಲ ಆದರೂ ಇದು ಮಾತ್ರ ಸಾಕಷ್ಟು ದೀರ್ಘಕಾಲ ಮಣ್ಣಿನಲ್ಲಿ ಉಳಿಯುತ್ತದೆ. ಎಷ್ಟೇ ಯತ್ನ ನಡೆಸಿದರೂ ಇದನ್ನು ಜೀವ-ಪರಿಸರದಿಂದ ಹೊರ ಹಾಕುವುದು ಕಠಿಣವಾಗಿದೆ.</p>
<p>‘ಡಿಎಚ್ಎಮ್ಮೊ’ ಅಷ್ಟರಮಟ್ಟಿಗೆ ಅವಿನಾಶಿಯಾಗಿ, ಅಷ್ಟೊಂದು ಅಪಾಯಕಾರಿ ಆಗಿರಲು ಮುಖ್ಯ ಕಾರಣ ಏನೆಂದರೆ, ದ್ರವ್ಯದ ಮೂರೂ ಸ್ಥಿತಿಯಲ್ಲಿ (ಘನ-ದ್ರವ-ಅನಿಲ ರೂಪದಲ್ಲಿ) ರುವ ಸಾಮರ್ಥ್ಯ ಅದಕ್ಕಿದೆ. ಊಸರವಳ್ಳಿಯ ಗುಣ ಅದರದ್ದು. ತಾನಿದ್ದ ಪರಿಸರದ ಬಣ್ಣವನ್ನೇ ಅದೂ ಪಡೆಯುತ್ತದೆ. ಪರಿಸರವನ್ನೂ ತನ್ನ ಗುಣಕ್ಕೆ ತಕ್ಕಂತೆ ಪರಿವರ್ತಿಸುತ್ತದೆ. ಘನ ರೂಪದಲ್ಲಿದ್ದಾಗ ಅದು ನಮ್ಮ ಅಂಗಾಂಶವನ್ನು ತೀವ್ರವಾಗಿ ಸುಡಬಲ್ಲದು. ಅನಿಲ ರೂಪದಲ್ಲಿ ಪ್ರತಿ ವರ್ಷವೂ ನೂರಾರು ಜನರು ಅದರಿಂದ ಸಾವಪ್ಪುತ್ತಿದ್ದಾರೆ. ದ್ರವರೂಪಿ ‘ಡಿಎಚ್ಎಮ್ಮೊ’ ಅತಿ ಸಣ್ಣ ಪ್ರಮಾಣದಲ್ಲಿ ಶ್ವಾಸಕೋಶದಲ್ಲಿ ಸೇರಿಕೊಂಡರೂ ಸಾವು ಬರಬಹುದು. ಪ್ರತಿ ವರ್ಷ ಸಾವಿರಾರು ಜನರು ಈ ದುರ್ಘಟನೆಯಿಂದಾಗಿ ಸಾಯುತ್ತಾರೆ.</p>
<p>ಇಂದಿಗೆ ಸುಮಾರು ಹದಿನೇಳು ವರ್ಷಗಳ ಹಿಂದೆ ಅಂದರೆ ೧೯೯೦ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಎರಿಕ್ ಲಾನ್ಸರ್ ಮತ್ತು ಸಂಗಡಿಗರು ‘ಡಿಎಚ್ಎಮ್ಮೊ’ ಅಂದರೆ ಡೈಹೈಡ್ರೊಜನ್ ಮೊನೊಕ್ಸೈಡ್ ಎಂಬ ರಸಾಯನ ದ್ರವ್ಯದಿಂದಾಗುವ ಅಪಾಯಗಳನ್ನೆಲ್ಲ ಪಟ್ಟಿ ಮಾಡಿ ಸಂಶೋಧನ ಲೇಖನ ಪ್ರಕಟಿಸಿದರು.</p>
<p>ನಿಸರ್ಗದಲ್ಲಿ ‘ಡಿಎಚ್ಎಮ್ಮೊ’ ಹಾವಳಿಯನ್ನು ಕಡಿಮೆ ಮಾಡುವಂತೆ ಸರಕಾರಗಳನ್ನು ಒತ್ತಾಯಿಸುವ ಉದ್ದೇಶದಿಂದ ನಾಗರಿಕ ವೇದಿಕೆಗಳನ್ನು ಜಗತ್ತಿನಾದ್ಯಂತ ಹುಟ್ಟುಹಾಕಲು ‘ಡಿಎಚ್ಎಮ್ಮೊ’ ನಿಷೇಧ ಕೂಟ’ (ಕೋಆಲೀಶನ್ ಟು ಬ್ಯಾನ್ ‘ಡಿಎಚ್ಎಮ್ಮೊ’ ) ಎಂಬ ಸಂಘಟನೆಯೂ ತಲೆಯೆತ್ತಿತು. ಇಂದು ಅಂತರ್ಜಾಲದಲ್ಲಿ ಇದರ ಪ್ರಚಾರಕ್ಕೆಂದೇ ಅನೇಕ ಜಾಲತಾಣಗಳಿವೆ. ಅವುಗಳಲ್ಲಿ ಮುಖ್ಯವಾಗಿ <a href="http://www.dhmo.org">dhmo.org</a> ನೋಡಬಹುದು. ಆದರೆ ನಾನಾ ಕಾರಣಗಳಿಂದಾಗಿ ಯಾವ ಸರಕಾರವೂ ‘ಡಿಎಚ್ಎಮ್ಮೊ’ ರಸಾಯನವನ್ನು ನಿಷೇಧಿಸುವಲ್ಲಿ ಯಶಸ್ವಿಯಾಗಲಿಲ್ಲ.</p>
<p>ಆದರೆ ನಾಗರಿಕ ವಲಯಗಳಲ್ಲಿ ಸಾಕಷ್ಟು ಸಂಚಲನವಂತೂ ಕಂಡುಬಂದಿದೆ. ‘ಡಿಎಚ್ಎಮ್ಮೊ’ದ ಅಪಾಯಗಳು ಏನೇನು ಎಂಬುದು ಗೊತ್ತಾದ ಇಡಾಹೊ ಪಟ್ಟಣದ ಕೆಲವರು ಇದನ್ನು ನಿಷೇಧಿಸಬೇಕೆಂದು ಅಮೆರಿಕದ ಸರಕಾರಕ್ಕೆ  ಅರ್ಜಿಯನ್ನು ಸಲ್ಲಿಸಿದ್ದರು. ಯಾವುದೇ ಪ್ರಯೋಜನ ಕಂಡುಬರಲಿಲ್ಲ.</p>
<p>ಎಪಿ ವಾರ್ತಾಸಂಸ್ಥೆಯ ವರದಿಯ ಪ್ರಕಾರ ೨೦೦೪ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಆರೇಂಜ್ ಕೌಂಟಿಯಲ್ಲಿರುವ ಅಲಿಸೊ ವಿಯೆವೊ ಹೆಸರಿನ ಪಟ್ಟಣವೊಂದರ ಮುನಿಸಿಪಾಲಿಟಿಯ ಅಧಿಕಾರಿಗಳು ಸ್ಟೈರೊಫೋಮ್ (ಒಂದು ಬಗೆಯ ಪ್ಲಾಸ್ಟಿಕ್) ಕಪ್ಗಳ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕೆಂಬ ಕಾರ್ಯಸೂಚಿಯನ್ನು ಮುಂದಿಟ್ಟಿದ್ದರು. ಏಕೆಂದರೆ ಸ್ಟೈರೊಫೋಮ್ ಉತ್ಪಾದನೆಯಲ್ಲಿ ‘ಡಿಎಚ್ಎಮ್ಮೊ’ ಬಳಕೆಯಾಗುತ್ತಿದೆ ಎಂಬ ವೈಜ್ಞಾನಿಕ ತಥ್ಯ ಅವರ ಗಮನಕ್ಕೆ ಬಂದಿತ್ತು. ಅಂತರ್ಜಾಲದಲ್ಲಿ ಬಂದ ಮಾಹಿತಿಯನ್ನು ಆಧರಿಸಿ ಈ ಕಾರ್ಯಸೂಚಿಯನ್ನು ರೂಪಿಸಲಾಗಿತ್ತು. ಆದರೆ ಅಲ್ಲಿನ ನಗರವಾಸಿಗಳ ಅದೃಷ್ಟವೊ ಏನೊ, ಈ ನಿಷೇಧಾಜ್ಞೆ ಕಾರ್ಯರೂಪಕ್ಕೆ ಬರಲಿಲ್ಲ.<br />
ನಿಷೇಧ ಹಾಕದಿರುವುದು ನಗರವಾಸಿಗಳ ಅದೃಷ್ಟವೆ?<br />
ಹೌದು.<br />
ಏಕೆಂದರೆ ‘ಡಿಎಚ್ಎಮ್ಮೊ’ (ಡೈಹೈಡ್ರೊ ಮೊನಾಕ್ಸೈಡ್) ಅರ್ಥಾತ್ ಹೈಡ್ರಿಕ್ ಆಸಿಡ್, ಅಂದರೆ ಎಚ್‌ಟುಓ (H<sub>2</sub>O), ಅಂದರೆ ಮತ್ತೇನಲ್ಲ, ನಮ್ಮ ನಿಮ್ಮೆಲ್ಲರ ಜೀವದ್ರವ ನೀರು.<br />
ಈಗಾಗಲೇ ನಿಮಗಿದು ಅರ್ಥವಾಗಿಲ್ಲವೆಂದರೆ ಮೇಲಿನ ಲೇಖನದಲ್ಲಿ ‘ಡಿಎಚ್ಎಮ್ಮೊ’ ಎಂಬ ಪದ ಬಂದಲ್ಲೆಲ್ಲ ‘ನೀರು’ ಎಂದು ಬದಲಾಯಿಸಿಕೊಂಡು ಓದಿನೋಡಿ. ಆಗ ನಿಮಗೆ ಜೋಕ್ ಅರ್ಥವಾಗುತ್ತದೆ.</p>
<p>ಈಚಿನ ವರ್ಷಗಳಲ್ಲಿ ನಮ್ಮ ಸುತ್ತಲಿನ ಪರಿಸರದ ಏನೆಲ್ಲ ಸಂಗತಿಗಳ ಬಗ್ಗೆ ‘ಅತಿ ಅಪಾಯಕಾರಿ’ ಎಂಬ ಉತ್ಪ್ರೇಕ್ಷಿತ ವರದಿಗಳು ಬರುತ್ತಿವೆ. ವಿಜ್ಞಾನದ ಬಗ್ಗೆ ಅಷ್ಟೇನೂ ಗೊತ್ತಿಲ್ಲದ ಸಾಮಾನ್ಯ ಬಳಕೆದಾರರನ್ನು ಬೆದರಿಸಿ, ಚಿಟಿಕೆಗಾತ್ರದ ಅಪಾಯಗಳನ್ನು ಪರ್ವತವೆಂಬಷ್ಟು ಹಿಗ್ಗಿಸಿ ತೋರಿಸಿ ಕಂಗಾಲು ಮಾಡುವ ಹುನ್ನಾರಗಳು ನಡೆಯುತ್ತವೆ. ಅಲ್ಯೂಮಿನಿಯಂ ಟಾಕ್ಸಿಸಿಟಿಯೇ ಇರಬಹುದು ಇಲ್ಲವೆ ತಂಪುಪೇಯಗಳಲ್ಲಿ ಕೀಟನಾಶಕ ದ್ರವ್ಯಗಳ ಅಂಶವೇ ಇರಬಹುದು. ಸತ್ಯವನ್ನು ಅತಿ ರಂಜಿತವಾಗಿ, ಆದರೆ ಹೇಳಬೇಕಿದ್ದ ಪ್ರಮುಖ ಅಂಶವನ್ನು ಮರೆಮಾಚಿ ಬಣ್ಣಿಸಿದರೆ ಯಾರನ್ನೂ ಬೇಸ್ತುಬೀಳಿಸಲು ಸಾಧ್ಯ ಎಂಬುದನ್ನು ತೋರಿಸಲೆಂದೇ ಈ ಕಥೆಯನ್ನು ರೂಪಿಸಲಾಗಿದೆ. ನೀರಿನಂಥ ನಿರುಪದ್ರವಿ, ಅತ್ಯಗತ್ಯ ದ್ರವ್ಯವನ್ನೂ ಖಳನಾಯಕನಂತೆ ಬಿಂಬಿಸಿ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯ ಗೊತ್ತಾಯ್ತಲ್ಲ?</p>
<p>ಇಗ್ನೊರನ್ಸ್‌ಗಿಂತ ದೊಡ್ಡ ಅಪಾಯ ಯಾವುದಿದೆ?   </p><p>The post <a href="http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%85%e0%b2%ae%e0%b3%86%e0%b2%b0%e0%b2%bf%e0%b2%95%e0%b2%a6-%e2%80%98%e0%b2%85%e0%b2%95%e0%b3%8d%e0%b2%95%e2%80%99%e0%b2%a8-%e0%b2%ac%e0%b3%8a%e0%b2%97%e0%b2%b8%e0%b3%86%e0%b2%af%e0%b2%b2%e0%b3%8d/">ಅಮೆರಿಕದ ‘ಅಕ್ಕ’ನ ಬೊಗಸೆಯಲ್ಲಿ ಅಗೋಚರ ಅಪಾಯಗಳು</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%85%e0%b2%ae%e0%b3%86%e0%b2%b0%e0%b2%bf%e0%b2%95%e0%b2%a6-%e2%80%98%e0%b2%85%e0%b2%95%e0%b3%8d%e0%b2%95%e2%80%99%e0%b2%a8-%e0%b2%ac%e0%b3%8a%e0%b2%97%e0%b2%b8%e0%b3%86%e0%b2%af%e0%b2%b2%e0%b3%8d/feed/</wfw:commentRss>
			<slash:comments>7</slash:comments>
		
		
			</item>
		<item>
		<title>ತರಲೆ ಅನುವಾದ &#8211; ೧</title>
		<link>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%a4%e0%b2%b0%e0%b2%b2%e0%b3%86-%e0%b2%85%e0%b2%a8%e0%b3%81%e0%b2%b5%e0%b2%be%e0%b2%a6-%e0%b3%a7/</link>
					<comments>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%a4%e0%b2%b0%e0%b2%b2%e0%b3%86-%e0%b2%85%e0%b2%a8%e0%b3%81%e0%b2%b5%e0%b2%be%e0%b2%a6-%e0%b3%a7/#comments</comments>
		
		<dc:creator><![CDATA[admin]]></dc:creator>
		<pubDate>Tue, 16 Jan 2007 10:59:23 +0000</pubDate>
				<category><![CDATA[ಹಾಸ್ಯ]]></category>
		<guid isPermaLink="false">http://localhost/vishwakannada/?p=346</guid>

					<description><![CDATA[<p>English : Dr. Vasanth will be delivering the speech now.<br />
ಕನ್ನಡ : ವೈದ್ಯ ವಸಂತ ಅವರು ತಮ್ಮ ಭಾಷಣವನ್ನು ಈಗ ಹೆರುವವರಿದ್ದಾರೆ.</p>
<p>The post <a href="http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%a4%e0%b2%b0%e0%b2%b2%e0%b3%86-%e0%b2%85%e0%b2%a8%e0%b3%81%e0%b2%b5%e0%b2%be%e0%b2%a6-%e0%b3%a7/">ತರಲೆ ಅನುವಾದ – ೧</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p>English : Dr. Vasanth will be delivering the speech now.<br />
ಕನ್ನಡ : ವೈದ್ಯ ವಸಂತ ಅವರು ತಮ್ಮ ಭಾಷಣವನ್ನು ಈಗ ಹೆರುವವರಿದ್ದಾರೆ.</p>
<p>English : Last leg of the election is going on.<br />
ಕನ್ನಡ : ಚುನಾವಣೆಯ ಕೊನೆಯ ಕಾಲು ನಡೆಯುತ್ತಿದೆ.</p>
<p>English : There lies the point.<br />
ಕನ್ನಡ : ಅಲ್ಲಿ ಮಲಗಿದ್ದಾಳೆ ಬಿಂದು.</p>
<p>English : Butterfly.<br />
ಕನ್ನಡ : ಬೆಣ್ಣೆ ನೊಣ.</p>
<p>English : Microsoft Windows is hanging.<br />
ಕನ್ನಡ : ಸೂಕ್ಷ್ಮ ಮೃದು ಕಿಟಕಿ ನೇಣು ಹಾಕಿಕೊಂಡಿದೆ.</p>
<p>English : There lies beauty.<br />
ಕನ್ನಡ : ಅಲ್ಲಿ ಮಲಗಿದ್ದಾಳೆ ಸುಂದರಿ.</p>
<p>English (speaker) : When myself and my wife went to Agumbe for honeymoon&#8230;&#8230;<br />
ಕನ್ನಡ (ಅನುವಾದಕ) : ನಾನು ಮತ್ತು ಸಾಹೇಬರ ಪತ್ನಿ ಆಗುಂಬೆಗೆ ಮಧುಚಂದ್ರಕ್ಕೆ ಹೋಗಿದ್ದಾಗ&#8230;..</p>
<p>ಕನ್ನಡ : ಗಂಡಾಂತರಕಾರಿ ಕೆಲಸ.<br />
English : husband brings vegetable.</p>
<p>ಕನ್ನಡ : ನನ್ನ ಸ್ಕೂಟರ್ ಮರದ ಕೆಳಗೆ ನಿಂತಿದೆ.<br />
English : My scooter is understanding the tree.</p>
<p>ಕನ್ನಡ : ಕನಕ ಮಜಲು ಬೆಳ್ಳಿಯಪ್ಪ.<br />
English : gold field sivler father.</p>
<p>English : Canara High School Old Boys Association.<br />
ಕನ್ನಡ : ಕನ್ನಡೆತ್ತರ ಶಾಲೆ ಮುದಿ ಹುಡುಗರ ಸಂಘ.</p>
<p>ಕನ್ನಡ : ಕಲ್ಲಂಗಡಿ ಹಣ್ಣು.<br />
English : Stone Shop Fruit.</p>
<table width="80%" align="center">
<tr>
<td>English</td>
<td>Kannada</td>
</tr>
<tr>
<td>Misunderstanding</td>
<td>ಹುಡುಗಿ ಕೆಳಗೆ ನಿಂತಿದ್ದಾಳೆ</td>
</tr>
<tr>
<td>Misleader</td>
<td>ನಾಯಕಿ (ಇಂದಿರಾ ಗಾಂಧಿ?!)</td>
</tr>
<tr>
<td>Misguide</td>
<td>ಮಾರ್ಗದರ್ಶಕಿ</td>
</tr>
<tr>
<td>Misinterpreter</td>
<td>ಅನುವಾದಕಿ</td>
</tr>
<tr>
<td>Mishap	Mishap</td>
<td>ಹ್ಯಾಪ್ ಮೂತಿಯವನ ಮಗಳು</td>
</tr>
<tr>
<td>Mischief</td>
<td>ಮುಖ್ಯಸ್ಥೆ</td>
</tr>
<tr>
<td>Mischief minister</td>
<td>ಮುಖ್ಯಮಂತ್ರಿಣಿ</td>
</tr>
<tr>
<td>Misconductor</td>
<td>ನಿರ್ವಾಹಕಿ</td>
</tr>
<tr>
<td>Misdirector</td>
<td>ನಿರ್ದೇಶಕಿ</td>
</tr>
<tr>
<td>Misjudge</td>
<td>ನ್ಯಾಯಾಧೀಶೆ</td>
</tr>
<tr>
<td>Mismanager</td>
<td>	ಅಧಿಕಾರಿಣಿ</td>
</tr>
<tr>
<td>Misreader</td>
<td>ವಾಚಕಿ</td>
</tr>
<tr>
<td>Misreporter</td>
<td>ವರದಿಗಾರ್ತಿ</td>
</tr>
</table>
<p>(೨೦೦೦)   </p><p>The post <a href="http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%a4%e0%b2%b0%e0%b2%b2%e0%b3%86-%e0%b2%85%e0%b2%a8%e0%b3%81%e0%b2%b5%e0%b2%be%e0%b2%a6-%e0%b3%a7/">ತರಲೆ ಅನುವಾದ – ೧</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%a4%e0%b2%b0%e0%b2%b2%e0%b3%86-%e0%b2%85%e0%b2%a8%e0%b3%81%e0%b2%b5%e0%b2%be%e0%b2%a6-%e0%b3%a7/feed/</wfw:commentRss>
			<slash:comments>18</slash:comments>
		
		
			</item>
		<item>
		<title>೨೦೦೬ರ ಅತ್ಯತ್ತಮ ಸುಳ್ಳು ಪ್ರಶಸ್ತಿ</title>
		<link>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b3%a8%e0%b3%a6%e0%b3%a6%e0%b3%ac%e0%b2%b0-%e0%b2%85%e0%b2%a4%e0%b3%8d%e0%b2%af%e0%b2%a4%e0%b3%8d%e0%b2%a4%e0%b2%ae-%e0%b2%b8%e0%b3%81%e0%b2%b3%e0%b3%8d%e0%b2%b3%e0%b3%81-%e0%b2%aa%e0%b3%8d/</link>
					<comments>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b3%a8%e0%b3%a6%e0%b3%a6%e0%b3%ac%e0%b2%b0-%e0%b2%85%e0%b2%a4%e0%b3%8d%e0%b2%af%e0%b2%a4%e0%b3%8d%e0%b2%a4%e0%b2%ae-%e0%b2%b8%e0%b3%81%e0%b2%b3%e0%b3%8d%e0%b2%b3%e0%b3%81-%e0%b2%aa%e0%b3%8d/#comments</comments>
		
		<dc:creator><![CDATA[admin]]></dc:creator>
		<pubDate>Fri, 29 Dec 2006 15:00:38 +0000</pubDate>
				<category><![CDATA[ಹಾಸ್ಯ]]></category>
		<guid isPermaLink="false">http://localhost/vishwakannada/?p=340</guid>

					<description><![CDATA[<p>ಬೆಂಗಳೂರು, ಡಿ. ೨೯, ೨೦೦೬: ವಿಶ್ವಕನ್ನಡದ ಸಂಪಾದಕರ ಒಪ್ಪಿಗೆಯಿಲ್ಲದೆ ಉಪ ಸಹಾಯಕ ಕಿರಿಯ ಸಂಪಾದಕರು ಹಾಗೂ ಹಾಸ್ಯ ವಿಭಾಗದ ಜವಾಬ್ದಾರಿಯನ್ನು ತನ್ನ ಅತಿ ಚಿಕ್ಕ ಹೆಗಲ ಮೇಲೆ ಹೊತ್ತಂತವರು ಸುಳ್ಳು ಪ್ರಶಸ್ತಿ ಘೋಷಿಸಿರುವುದನ್ನು ಪತ್ತೆ ಹಚ್ಚಿದ್ದಾರೆ. ವರ್ಷದ ಕೊನೆಯಲ್ಲಿ ಹಲವು ರೀತಿಯ ವರ್ಷದ ವ್ಯಕ್ತಿ, ವರ್ಷದ ಘಟನೆ, ವರ್ಷದ ಸಾಧನೆ, ಇತ್ಯಾದಿ ಪ್ರಶಸ್ತಿಗಳನ್ನು ಘೋಷಿಸುತ್ತಿರುವುದು ನಿಮಗೆಲ್ಲ ತಿಳಿದೇ ಇದೆ. ಈ ವರ್ಷ ನೀಡುವ ವರ್ಷದ ಶ್ರೇಷ್ಠ ಸುಳ್ಳು ಪ್ರಶಸ್ತಿಯನ್ನು ಕೇಂದ್ರ ಗೃಹಕಾರ್ಯದರ್ಶಿ ವಿ.ಕೆ.ದುಗ್ಗಲ್ ಅವರಿಗೆ ನೀಡಲು ತೀರ್ಮಾನಿಸಲಾಗಿದೆ. ಅವರು ಹೇಳಿರುವ "ರಾಷ್ಟ್ರದಲ್ಲಿ ಅಲ್‌ಖಾಯ್ದಾ ಸುಳಿವಿಲ್ಲ" ಎಂಬ <a href="http://contenttools.msnserver.com/Kannada/News/National/0612-29-2.htm">ಹೇಳಿಕೆಗೆ</a> ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ತಿಳಿದು ಬಂದಿದೆ. ಎಂದಿನಂತೆ ಮುಂದಿನ ವರ್ಷದ ಎಪ್ರಿಲ್ ೧ರಂದು ಈ ಪ್ರಶಸ್ತಿಯನ್ನು ನೀಡಲಾಗುವುದು. ಯಾರಿಗಾದರು ಯಾವುದೇ ಯಾವುದೇ ರೀತಿಯ ಅಭ್ಯಂತರವಿದ್ದಲ್ಲಿ ಕೂಡಲೆ ತಿಳಿಸಬೇಕಾಗಿಯೂ ಕೋರಲಾಗಿದೆ.</p>
<p>The post <a href="http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b3%a8%e0%b3%a6%e0%b3%a6%e0%b3%ac%e0%b2%b0-%e0%b2%85%e0%b2%a4%e0%b3%8d%e0%b2%af%e0%b2%a4%e0%b3%8d%e0%b2%a4%e0%b2%ae-%e0%b2%b8%e0%b3%81%e0%b2%b3%e0%b3%8d%e0%b2%b3%e0%b3%81-%e0%b2%aa%e0%b3%8d/">೨೦೦೬ರ ಅತ್ಯತ್ತಮ ಸುಳ್ಳು ಪ್ರಶಸ್ತಿ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p>ಬೆಂಗಳೂರು, ಡಿ. ೨೯, ೨೦೦೬: ವಿಶ್ವಕನ್ನಡದ ಸಂಪಾದಕರ ಒಪ್ಪಿಗೆಯಿಲ್ಲದೆ ಉಪ ಸಹಾಯಕ ಕಿರಿಯ ಸಂಪಾದಕರು ಹಾಗೂ ಹಾಸ್ಯ ವಿಭಾಗದ ಜವಾಬ್ದಾರಿಯನ್ನು ತನ್ನ ಅತಿ ಚಿಕ್ಕ ಹೆಗಲ ಮೇಲೆ ಹೊತ್ತಂತವರು ಸುಳ್ಳು ಪ್ರಶಸ್ತಿ ಘೋಷಿಸಿರುವುದನ್ನು ಪತ್ತೆ ಹಚ್ಚಿದ್ದಾರೆ. ವರ್ಷದ ಕೊನೆಯಲ್ಲಿ ಹಲವು ರೀತಿಯ ವರ್ಷದ ವ್ಯಕ್ತಿ, ವರ್ಷದ ಘಟನೆ, ವರ್ಷದ ಸಾಧನೆ, ಇತ್ಯಾದಿ ಪ್ರಶಸ್ತಿಗಳನ್ನು ಘೋಷಿಸುತ್ತಿರುವುದು ನಿಮಗೆಲ್ಲ ತಿಳಿದೇ ಇದೆ. ಈ ವರ್ಷ ನೀಡುವ ವರ್ಷದ ಶ್ರೇಷ್ಠ ಸುಳ್ಳು ಪ್ರಶಸ್ತಿಯನ್ನು ಕೇಂದ್ರ ಗೃಹಕಾರ್ಯದರ್ಶಿ ವಿ.ಕೆ.ದುಗ್ಗಲ್ ಅವರಿಗೆ ನೀಡಲು ತೀರ್ಮಾನಿಸಲಾಗಿದೆ. ಅವರು ಹೇಳಿರುವ &#8220;ರಾಷ್ಟ್ರದಲ್ಲಿ ಅಲ್‌ಖಾಯ್ದಾ ಸುಳಿವಿಲ್ಲ&#8221; ಎಂಬ <a href="http://contenttools.msnserver.com/Kannada/News/National/0612-29-2.htm">ಹೇಳಿಕೆಗೆ</a> ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ತಿಳಿದು ಬಂದಿದೆ. ಎಂದಿನಂತೆ ಮುಂದಿನ ವರ್ಷದ ಎಪ್ರಿಲ್ ೧ರಂದು ಈ ಪ್ರಶಸ್ತಿಯನ್ನು ನೀಡಲಾಗುವುದು. ಯಾರಿಗಾದರು ಯಾವುದೇ ಯಾವುದೇ ರೀತಿಯ ಅಭ್ಯಂತರವಿದ್ದಲ್ಲಿ ಕೂಡಲೆ ತಿಳಿಸಬೇಕಾಗಿಯೂ ಕೋರಲಾಗಿದೆ.</p>
<p>ವಿಶ್ವಕನ್ನಡದ ಅತಿ ಕಿರಿಯ ಉಪ ಸಹಾಯಕ ಸಂಪಾದಕರು <a href="http://bogaleragale.blogspot.com">ಬೊಗಳೆ ರಗಳೆ</a> ಮತ್ತು <a href="http://majavani.blogspot.com">ಮಜಾವಾಣಿ</a> ಪತ್ರಿಕೆಯವರು ಪತ್ತೆ ಹಚ್ಚುವ ಮೊದಲೇ ಈ ಸುದ್ದಿಯನ್ನು ಪತ್ತೆ ಹಚ್ಚಿದ್ದಕ್ಕೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಎಂದೂ ತಿಳಿದುಬಂದಿದೆ.   </p><p>The post <a href="http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b3%a8%e0%b3%a6%e0%b3%a6%e0%b3%ac%e0%b2%b0-%e0%b2%85%e0%b2%a4%e0%b3%8d%e0%b2%af%e0%b2%a4%e0%b3%8d%e0%b2%a4%e0%b2%ae-%e0%b2%b8%e0%b3%81%e0%b2%b3%e0%b3%8d%e0%b2%b3%e0%b3%81-%e0%b2%aa%e0%b3%8d/">೨೦೦೬ರ ಅತ್ಯತ್ತಮ ಸುಳ್ಳು ಪ್ರಶಸ್ತಿ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b3%a8%e0%b3%a6%e0%b3%a6%e0%b3%ac%e0%b2%b0-%e0%b2%85%e0%b2%a4%e0%b3%8d%e0%b2%af%e0%b2%a4%e0%b3%8d%e0%b2%a4%e0%b2%ae-%e0%b2%b8%e0%b3%81%e0%b2%b3%e0%b3%8d%e0%b2%b3%e0%b3%81-%e0%b2%aa%e0%b3%8d/feed/</wfw:commentRss>
			<slash:comments>4</slash:comments>
		
		
			</item>
		<item>
		<title>ತರಲೆ ಗಣಿತ</title>
		<link>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%a4%e0%b2%b0%e0%b2%b2%e0%b3%86-%e0%b2%97%e0%b2%a3%e0%b2%bf%e0%b2%a4/</link>
					<comments>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%a4%e0%b2%b0%e0%b2%b2%e0%b3%86-%e0%b2%97%e0%b2%a3%e0%b2%bf%e0%b2%a4/#comments</comments>
		
		<dc:creator><![CDATA[admin]]></dc:creator>
		<pubDate>Fri, 01 Sep 2006 20:47:35 +0000</pubDate>
				<category><![CDATA[ಹಾಸ್ಯ]]></category>
		<guid isPermaLink="false">http://localhost/vishwakannada/?p=288</guid>

					<description><![CDATA[<p>೧. ೬ ಅಡಿ ಉದ್ದ, ೩ ಅಡಿ ಅಗಲ, ೩ ಅಡಿ ಆಳದ ಹೊಂಡದಲ್ಲಿ ಎಷ್ಟು ಘನ ಅಡಿ ಮಣ್ಣು ಇದೆ?<br />
(ಕ) ೫೪<br />
(ಚ) ಸೊನ್ನೆ. ಹೊಂಡದಲ್ಲಿ ಮಣ್ಣು ಎಲ್ಲಿರುತ್ತೆ?</p>
<p>The post <a href="http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%a4%e0%b2%b0%e0%b2%b2%e0%b3%86-%e0%b2%97%e0%b2%a3%e0%b2%bf%e0%b2%a4/">ತರಲೆ ಗಣಿತ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p>೧. ೬ ಅಡಿ ಉದ್ದ, ೩ ಅಡಿ ಅಗಲ, ೩ ಅಡಿ ಆಳದ ಹೊಂಡದಲ್ಲಿ ಎಷ್ಟು ಘನ ಅಡಿ ಮಣ್ಣು ಇದೆ?<br />
(ಕ) ೫೪<br />
(ಚ) ಸೊನ್ನೆ. ಹೊಂಡದಲ್ಲಿ ಮಣ್ಣು ಎಲ್ಲಿರುತ್ತೆ?<br />
(ಟ) ೧೮<br />
(ತ) ಯಾವುದೂ ಅಲ್ಲ.</p>
<p>೨. ರಾಮಣ್ಣನಲ್ಲಿ ೪ ಗೂಳಿಗಳಿವೆ. ಒಂದೊಂದು ಗೂಳಿಯೂ ಎರಡೆರಡು ಕರು ಹಾಕಿದರೆ ಒಟ್ಟು ಎಷ್ಟು ಕರುಗಳು ಆಗುತ್ತವೆ?<br />
(ಕ) ೮<br />
(ಚ) ೪<br />
(ಟ) ಪ್ರಶ್ನೆಯಲ್ಲಿ ತಪ್ಪಿದೆ. ಗೂಳಿ ಕರು ಹಾಕುವುದಿಲ್ಲ.<br />
(ತ) ಯಾವುದೂ ಅಲ್ಲ.</p>
<p>೩. ಭೀಮಣ್ಣನಲ್ಲಿ ಕೆಂಪು, ಕಪ್ಪು, ಹಳದಿ ಬಣ್ಣದ ಒಂದೊಂದು ಹುಂಜಗಳಿವೆ. ಒಂದೊಂದು ಹುಂಜವೂ ಐದೈದು ಮೊಟ್ಟೆ ಇಟ್ಟರೆ ಒಟ್ಟು ಎಷ್ಟು ಮೊಟ್ಟೆಗಳಾಗುತ್ತವೆ? ಮತ್ತು ಯಾವ ಯಾವ ಬಣ್ಣದ ಮೊಟ್ಟೆಗಳು ಎಷ್ಟಿರುತ್ತವೆ?<br />
(ಕ) ಕೆಂಪು-೫, ಕಪ್ಪು-೫, ಹಳದಿ-೫, ಒಟ್ಟು ೧೫.<br />
(ಚ) ಒಟ್ಟು ೧೫ ಮೊಟ್ಟೆಗಳು -ಎಲ್ಲವೂ ಬಿಳಿಯ ಬಣ್ಣದವು.<br />
(ಟ) ಪ್ರಶ್ನೆಯಲ್ಲಿ ತಪ್ಪಿದೆ. ಹುಂಜ ಮೊಟ್ಟೆ ಇಡುವುದಿಲ್ಲ.<br />
(ತ) ಯಾವುದೂ ಅಲ್ಲ.</p>
<p>೪. ಒಂದನೇ ತರಗತಿಯ ಮೇಡಮ್ಮಿಗೆ ಒಂದು ಗಂಡ ಆದರೆ ಎರಡನೇ ತರಗತಿಯ ಮೇಡಮ್ಮಿಗೆ ಎಷ್ಟು ಗಂಡ?<br />
(ಕ) ೨<br />
(ಚ) ೧<br />
(ಟ) ಪ್ರಶ್ನೆ ಅಸಂಬದ್ಧವಾಗಿದೆ.<br />
(ತ) ಯಾವುದೂ ಅಲ್ಲ.</p>
<p>೫. ಒಂದು ಬಟ್ಟೆ ಒಣಗಲು ೫ ಗಂಟೆ ಬೇಕಾದರೆ ೫ ಬಟ್ಟೆ ಒಣಗಲು ಎಷ್ಟು ಗಂಟೆ ಬೇಕು?<br />
(ಕ) ೨೫<br />
(ಚ) ೫<br />
(ಟ) ಹೇಳಲು ಅಸಾಧ್ಯ. ಎಲ್ಲ ಬಟ್ಟೆಗಳೂ ಒಂದೇ ರೀತಿಯವು ಎಂದು ಏನು ಗ್ಯಾರಂಟಿ?<br />
(ತ) ಯಾವುದೂ ಅಲ್ಲ.</p>
<p>೬. ಕ್ಯಾಪ್ಟನ್ ಕುಕ್ ೫ ಸಲ ಸಮುದ್ರಯಾನ ಮಾಡಿದನು. ಅದರಲ್ಲಿ ಒಂದು ಸಮುದ್ರಯಾನದಲ್ಲಿ ಸತ್ತನು. ಎಷ್ಟನೇ ಸಮುದ್ರಯಾನದಲ್ಲಿ ಆತ ಸತ್ತನು?<br />
(ಕ) ೧ನೇ ಸಮುದ್ರಯಾನದಲ್ಲಿ.<br />
(ಚ) ೫ನೇ ಸಮುದ್ರಯಾನದಲ್ಲಿ.<br />
(ಟ) ೬ನೇ ಸಮುದ್ರಯಾನದಲ್ಲಿ.<br />
(ತ) ಯಾವುದೂ ಅಲ್ಲ.</p>
<p>೭. ೧೯೮೦ರಲ್ಲಿ ರಾಮನು ಭೀಮನಿಗಿಂತ ಪ್ರಾಯದಲ್ಲಿ ೧೦ ವರ್ಷ ದೊಡ್ಡವನು. ೧೯೯೦ರಲ್ಲಿ ರಾಮನು ಭೀಮನಿಗಿಂತ ಪ್ರಾಯದಲ್ಲಿ ಎಷ್ಟು ದೊಡ್ಡವನು?<br />
(ಕ) ೧೦ ವರ್ಷ.<br />
(ಚ) ೨೦ ವರ್ಷ.<br />
(ಟ) ಸೊನ್ನೆ.<br />
(ತ) ಯಾವುದೂ ಅಲ್ಲ.</p>
<p>೮. ನನ್ನಲ್ಲಿ ಎರಡು ಹಾರ್ಡ್ ಡಿಸ್ಕ್‌ಗಳಿವೆ. ಅವುಗಳ ವಿವರಗಳು ಈ ರೀತಿ ಇವೆ -ಹಾರ್ಡ್ ಡಿಸ್ಕ್-೧: ಒಟ್ಟು ಸಂಗ್ರಹ ಶಕ್ತಿ ೧೦ ಗಿಗಾ ಬೈಟ್, ೨೫೦ ಮೆಗಾ ಬೈಟ್ ಉಪಯೋಗಿಸಲ್ಪಟ್ಟಿದೆ. ಹಾರ್ಡ್ ಡಿಸ್ಕ್-೨: ಒಟ್ಟು ಸಂಗ್ರಹ ಶಕ್ತಿ ೫ ಗಿಗಾ ಬೈಟ್, ಸಂಪೂರ್ಣವಾಗಿ ಉಪಯೋಗಿಸಲ್ಪಟ್ಟಿದೆ. ಇವುಗಳಲ್ಲಿ ಯಾವುದರ ತೂಕ ಹೆಚ್ಚು?<br />
(ಕ) ಹಾರ್ಡ್ ಡಿಸ್ಕ್-೧.<br />
(ಚ) ಹಾರ್ಡ್ ಡಿಸ್ಕ್-೨.<br />
(ಟ) ಪ್ರಶ್ನೆ ಅಸಂಬದ್ಧವಾಗಿದೆ. ಹಾರ್ಡ್ ಡಿಸ್ಕಿನ ತೂಕಕ್ಕೂ, ಅದರ ಸಂಗ್ರಹ ಶಕ್ತಿಗೂ ಸಂಬಂಧವಿಲ್ಲ.<br />
(ತ) ಯಾವುದೂ ಅಲ್ಲ.</p>
<p>೯. ಒಂದು ತಿಮಿಂಗಿಲ ದಿನಕ್ಕೆ ೩ ಮೊಟ್ಟೆಯಂತೆ ೧೦ದಿನಗಳ ಕಾಲ ಮೊಟ್ಟೆ ಇಡುತ್ತದೆ. ಒಂದು ಶಾರ್ಕ್ ಮೀನು ದಿನಾ ಒಂದೊಂದು ಮೊಟ್ಟೆಯನ್ನು ಕಬಳಿಸುತ್ತದೆ. ಕೊನೆಯಲ್ಲಿ ಒಟ್ಟು ಎಷ್ಟು ಮೊಟ್ಟೆಗಳು ಉಳಿದಿರುತ್ತವೆ?<br />
(ಕ) ೩೦<br />
(ಚ) ೨೦<br />
(ಟ) ಪ್ರಶ್ನೆಯಲ್ಲಿ ತಪ್ಪಿದೆ. ತಿಮಿಂಗಿಲ ಮೊಟ್ಟೆ ಇಡುವುದಿಲ್ಲ.<br />
(ತ) ಯಾವುದೂ ಅಲ್ಲ.</p>
<p>೧೦. ವೀರಪ್ಪನ್ ಬಳಿ ೫ ಹೆಣ್ಣಾನೆಗಳಿವೆ. ಪ್ರತಿಯೊಂದು ಆನೆಯಿಂದಲೂ ೪ ಅಡಿ ಉದ್ದದ ದಾಡೆಯನ್ನು ಆತ ಕತ್ತರಿಸಿದರೆ ಒಟ್ಟು ಎಷ್ಟು ಅಡಿ ಉದ್ದದ ದಂತ ಸಿಗುತ್ತದೆ?<br />
(ಕ) ೪೦<br />
(ಚ) ೨೦<br />
(ಟ) ಪ್ರಶ್ನೆಯಲ್ಲಿ ತಪ್ಪಿದೆ. ಹೆಣ್ಣಾನೆಗೆ ದಾಡೆ ಇರುವುದಿಲ್ಲ.<br />
(ತ) ಯಾವುದೂ ಅಲ್ಲ.</p>
<p>(೧೯೯೯)</p>
<p>ಸೂ: ಉತ್ತರಗಳನ್ನು ಕೆಳಗೆ ಬರೆಯಬಹುದು.   </p><p>The post <a href="http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%a4%e0%b2%b0%e0%b2%b2%e0%b3%86-%e0%b2%97%e0%b2%a3%e0%b2%bf%e0%b2%a4/">ತರಲೆ ಗಣಿತ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%a4%e0%b2%b0%e0%b2%b2%e0%b3%86-%e0%b2%97%e0%b2%a3%e0%b2%bf%e0%b2%a4/feed/</wfw:commentRss>
			<slash:comments>9</slash:comments>
		
		
			</item>
		<item>
		<title>ಸೈಬರ್ ಸಂವಾದ</title>
		<link>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b8%e0%b3%88%e0%b2%ac%e0%b2%b0%e0%b3%8d-%e0%b2%b8%e0%b2%82%e0%b2%b5%e0%b2%be%e0%b2%a6/</link>
					<comments>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b8%e0%b3%88%e0%b2%ac%e0%b2%b0%e0%b3%8d-%e0%b2%b8%e0%b2%82%e0%b2%b5%e0%b2%be%e0%b2%a6/#comments</comments>
		
		<dc:creator><![CDATA[admin]]></dc:creator>
		<pubDate>Thu, 23 Mar 2006 11:18:30 +0000</pubDate>
				<category><![CDATA[ಹಾಸ್ಯ]]></category>
		<guid isPermaLink="false">http://localhost/vishwakannada/?p=205</guid>

					<description><![CDATA[<h3>- ದಿನೇಶ ನೆಟ್ಟಾರ್</h3>
<p>ಒಬ್ರು ಬೆಂಗಳೂರಿಗೆ ಬಸ್ಸಿನಲ್ಲಿ ಹೋದ್ರು. ಬೆಳಿಗ್ಗೆ ಬಸ್ ಸ್ಟಾಂಡಿನಲ್ಲಿ ಇಳ್ದು ಅತ್ಲಾಗಿ ಇತ್ಲಾಗಿ ನೋಡುವಾಗ ಅವರ ಹಳೆ ದೋಸ್ತಿ ಸಿಕ್ಕಿದ್ರು.</p>
<p>The post <a href="http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b8%e0%b3%88%e0%b2%ac%e0%b2%b0%e0%b3%8d-%e0%b2%b8%e0%b2%82%e0%b2%b5%e0%b2%be%e0%b2%a6/">ಸೈಬರ್ ಸಂವಾದ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<h3>&#8211; ದಿನೇಶ ನೆಟ್ಟಾರ್</h3>
<p>ಒಬ್ರು ಬೆಂಗಳೂರಿಗೆ ಬಸ್ಸಿನಲ್ಲಿ ಹೋದ್ರು. ಬೆಳಿಗ್ಗೆ ಬಸ್ ಸ್ಟಾಂಡಿನಲ್ಲಿ ಇಳ್ದು ಅತ್ಲಾಗಿ ಇತ್ಲಾಗಿ ನೋಡುವಾಗ ಅವರ ಹಳೆ ದೋಸ್ತಿ ಸಿಕ್ಕಿದ್ರು.<br />
`ನಮಸ್ಕಾರ&#8217;<br />
`ನಮಸ್ಕಾರ&#8217;<br />
`ತುಂಬಾ ದಿನ ಆಯ್ತು, ನಿಮ್ಮನ್ನು ನೋಡಿ, ಹೇಗಿದ್ದೀರಿ?&#8217;<br />
`ಚೆನ್ನಾಗಿದ್ದೀನಪ್ಪ. ನೀವು ಹೇಗಿದ್ದೀರಾ?&#8217;<br />
`ನಾನು ಒಳ್ಳೆಗಿದ್ದೇನೆ. ನಿಮ್ಮತ್ರ ಒಂದು ಸಂಗತಿ ಕೇಳ್ಬೇಕು. ಅಲ್ಲ ಮಾರಾಯ್ರೆ, ನಿಮಿಗೆ ಜಯನಗರ ಸಿಕ್ಸ್  ಬ್ಲಾಕು ಹೇಗೆ ಹೋಗೋದು ಗೊತ್ತುಂಟಾ?&#8217;<br />
`ಜಯನಗರವೇ? ಸಿಕ್ಸ್  ಬ್ಲಾಕೇ? ನನ್ನ ಯಾಕೆ ಕೇಳ್ತೀರಾ, ಸುಮ್ನೆ s.c.i.k. ನಲ್ಲಿ ಓದ್ಕೊಳ್ರೀ, ಚೆನ್ನಾಗಿ ವಿವರವಾಗಿ ಹೇಳ್ಬಿಟ್ಟಿದ್ದಾರೆ.&#8217;<br />
`s.c.i.k., ಹಾಗೆಂದರೆ ಎಂತದು ಮಾರಾಯ್ರೆ?&#8217;<br />
`s.c.i.k. ಗೊತ್ತಿಲ್ಲವೇನ್ರಿ, ಈ ಇಂಫಾರ್&#x200d;ಮೇಶನ್ನು ಸೂಪರ್ ಹೈವೇನಲ್ಲಿ ಬರ್&#x200d;ದ್‌ಬುಡ್ತಾರಲ್ಲ, ಈ ಜಯನಗರದ ಸಿಕ್ಸ್  ಅಂದ್ರೆ ಎಲ್ಲಿ, ಕುಂಬ್ಳೆ ಮನೆ ಎಲ್ಲಿ&#8230;&#8217;<br />
`ಕುಂಬ್ಳೆ ಕಾಸರಗೋಡು ಹತ್ರ ಅಲ್ವಾ? ಮದ್ರಾಸು ಮೈಲಿನಲ್ಲಿ ಹೋದ್ರೆ ಮುಕ್ಕಾಲು ಗಂಟೆ, ಅಷ್ಟೆ&#8217;<br />
`ಆ ಕುಂಬ್ಳೆ ಅಲ್ಲ ಕಣ್ರೀ. ಅನಿಲ್ ಕುಂಬ್ಳೆ ಅಂತ ಕ್ರಿಕೆಟ್ಟು ಪ್ಲೇಯರ್ರು ಗೊತ್ತಿಲ್ವೆ, ನಿಮ್ಗೆ?&#8217;<br />
`ಕ್ರಿಕೆಟ್ಟಾ, ಅವ್ನ ಹೆಸ್ರು ಕಂಬ್ಳಿ ಅಲ್ವಾ? ಎಂತದು ಮಾರಾಯ್ರೆ, ಕಂಬ್ಳಿ, ಬೆಡ್‌ಶೀಟು ಅಂತಾ ಎಲ್ಲಾ ಮಕ್ಕಳಿಗೆ ಹೆಸರು ಇಡ್ತಾರೆ ನೋಡಿ.&#8217;<br />
`ಅವ್ನು ಬೇರೆ ಕಣ್ರಿ. ಅವನು ಕಾಂಬ್ಳಿ. ಇವನು ಕುಂಬ್ಳೆ&#8230;&#8217;<br />
`ಮತ್ತೆ ಇನ್ನೊಬ್ಬ ಕಂಬ್ಳ, ಇನ್ನು ಕೋಣ ಓಡಿಸೋದು ಒಂದೇ ಬಾಕಿ. ಸಾರಿ, ಬಿಡಿ, ಅದೆಂಥದೋ ಸೂಪರ್ ಅಂತ ಹೇಳಿದ್ರಿ&#8230;&#8217;<br />
`ಸೂಪರ್ ಹೈವೇ ಅಂತ. ಈವಾಗ ಅಮೇರಿಕಾದಲ್ಲಿ ಕಂಪ್ಯೂಟರಿನಲ್ಲಿ, ಅಲ್ಲ, ಕಂಪ್ಯೂಟರ್&#x200d;ಗೆ ಏನಂತಾರೆ ಗೊತ್ತೆ? ಸೂಕ್ಷ -ಮೃದು ಕವಾಟ ಅಂತ. ಅದ್ರಲ್ಲಿ ನೇಣು ಹಾಕ್ಕೊಳ್ಳೊದಂತೆ. ಆ ಇಲಿ ಇಲ್ವೆ, ಅದ್ರ ಬಾಲ ಹಿಡಿದ್ಬಿಟ್ಟು ಕುತ್ತಿಗೆಗೆ ಸುತ್ತಿಕೊಳ್ಳೊದೆ.&#8217;<br />
`ಕಂಪ್ಯೂಟರಿನಲ್ಲಿ ಕಪಾಟು ಉಂಟ ಮಾರಾಯ್ರೆ?&#8217;<br />
`ಕಪಾಟು ಅಲ್ರೀ, ಕವಾಟ ಅಂದ್ರೆ, ವಿಂಡೋಸು ಅಂತ, ಗವಾಕ್ಷ ಅಂದ ಹಾಗೆ.&#8217;<br />
`ಅದ್ರ ಸರಳಿಗೆ ಹಗ್ಗ ಕಟ್ಟಿ ನೇತಾಡುದಾ?&#8217;<br />
`ಅಲ್ಲ ಕಣ್ರೀ, ಬರೆ ತಮಾಶೆಯಾಗಿ ಹೇಳೋದು ಅಷ್ಟೆ. ಸಾಫ್ಟ್‌ವೇರು ಹಾಂಗ್‌ಅಪ್ ಆಗೋಯ್ತು ಅಂತ. ಅವ್ನು ಒಬ್ಬ ಆಸ್ಟಿನ್ ಅಂತ, ನಿಮ್ಮೂರೆ ಕಣ್ರಿ&#8230;&#8217;<br />
`ಅವ್ನು ಹಗ್ಗ ಹಾಕ್ಕೊಂಡ್ನಾ? ಛೆ, ಛೆ, ಒಳ್ಳೆ ಜನ ಅವ.&#8217;<br />
`ಅವ್ನು ಯಾಕೆ ಹಗ್ಗ ಹಾಕ್ಕೊಳ್ತಾನೆ, ಬಿಡ್ರಿ. ಅವ್ನು ಏನೊ ಕವಿತೆ ಗಿವಿತೆ ಬರೀತಾನೆ, ಯಾರೋ ಸಿಟ್ ಮಾಡ್ಕೊಂಡು ಫ್ಲೇಮು ಮಾಡ್ಬುಟ್ಟ.&#8217;<br />
`ಫ್ಲೇಮಾ? ಅಂದ್ರೆ, ಅವನಿಗೆ ಬೆಂಕಿ ಹಾಕಿದ್ನಾ?&#8217;<br />
`ಛೆ, ಛೆ, ನಿಮ್ಗೆ ಈ ಸೈಬರ್ ಸ್ಪೇಸು ಏನು ಅಂತ ಗೊತ್ತಿಲ್ಲಾಂತ ತೋರತ್ತೆ.&#8217;<br />
`ಸಾಯ್ಬರ ಸ್ಪೇಸ್ ಗೊತ್ತುಂಟಪ್ಪ. ನಮ್ಮ ಮನೆ ಹತ್ರ ಇಲ್ವ, ಗಡ್ಡದ ಸಾಯ್ಬ, ಅವ್ನ ಮಗ, ಇರುವ ಸ್ಪೇಸ್ ಎಲ್ಲ ತೆಕ್ಕೊಂಡಿದ್ದಾನೆ. ಎಲ್ಲ ಎಂತ ದುಡ್ಡು ಗೊತ್ತುಂಟಾ ನಿಮಗೆ&#8230;&#8217;<br />
`ನಿಲ್ಸಿ, ನಿಲ್ಸಿ. ಎಲ್ಲಿಂದ ಎಲ್ಲಿಗೆ ಬಂದು ಬಿಟ್ರಿ ನೋಡಿ. ಜಯನಗರ ಸಿಕ್ಸ್  ಬ್ಲಾಕು ಅಂದ್ರಿ, ಈಗ ಸಾಯ್ಬರ ಮಗ ಹೆಂಗ್ ದುಡ್ಡು ಮಾಡಿದ ಅಂತಿದ್ದೀರಲ್ಲ. ಬೆಳ್ಗಾತ ಕಾಫಿ ಕುಡ್ದಿಲ್ಲ ಅನ್ಸತ್ತೆ. ಬನ್ನಿ, ಹೋಗೋಣ, ಎಂ.ಟಿ.ಆರ್.ಗೆ ಹೋಗೋಣ.&#8217;<br />
`ಎಂ.ಟಿ.ಆರ್. ಸರಿ, ಖಂಡಿತ ಹೋಗುವ. ಈಗ ಅಲ್ಲಿ ಕಾಫಿ ತಿಂಡಿ ಎಲ್ಲ ಹೇಗುಂಟು? ನಾನು ಲಾಸ್ಟ್ ಟೈಮು ಹೋದಾಗ&#8230;&#8217;<br />
`ಅದೂ s.c.i.k. ನಲ್ಲಿ ಚರ್ಚೆನೆ.&#8217;<br />
`ಮತ್ತೆ ಆ s.c.i.k. ಅಂತ ಹೇಳಿದ್ರಿ.&#8217;<br />
`ಸಾಕು ನಿಲ್ಸೋಣ. ಆಟೋ&#8230;&#8217;</p>
<p>[೧೯೯೭]</p><p>The post <a href="http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b8%e0%b3%88%e0%b2%ac%e0%b2%b0%e0%b3%8d-%e0%b2%b8%e0%b2%82%e0%b2%b5%e0%b2%be%e0%b2%a6/">ಸೈಬರ್ ಸಂವಾದ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b8%e0%b3%88%e0%b2%ac%e0%b2%b0%e0%b3%8d-%e0%b2%b8%e0%b2%82%e0%b2%b5%e0%b2%be%e0%b2%a6/feed/</wfw:commentRss>
			<slash:comments>1</slash:comments>
		
		
			</item>
		<item>
		<title>ರಸಾಂಬಾರಾಯಣಂ</title>
		<link>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b0%e0%b2%b8%e0%b2%be%e0%b2%82%e0%b2%ac%e0%b2%be%e0%b2%b0%e0%b2%be%e0%b2%af%e0%b2%a3%e0%b2%82/</link>
					<comments>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b0%e0%b2%b8%e0%b2%be%e0%b2%82%e0%b2%ac%e0%b2%be%e0%b2%b0%e0%b2%be%e0%b2%af%e0%b2%a3%e0%b2%82/#comments</comments>
		
		<dc:creator><![CDATA[admin]]></dc:creator>
		<pubDate>Thu, 23 Mar 2006 11:11:45 +0000</pubDate>
				<category><![CDATA[ಹಾಸ್ಯ]]></category>
		<guid isPermaLink="false">http://localhost/vishwakannada/?p=204</guid>

					<description><![CDATA[<h3>- ದಿನೇಶ ನೆಟ್ಟಾರ್</h3>
<p>ನಾನು ಮಂಗಳೂರಿನಿಂದ ಮದರಾಸಿಗೆ ವಿದ್ಯಾಭ್ಯಾಸಕ್ಕಾಗಿ ಹೋಗಿದಾಗಿನಿಂಲೂ ನನ್ನನ್ನು ಒಂದು ಪ್ರಶ್ನೆ ಭಾದಿಸುತ್ತಿದೆ:</p>
<p>The post <a href="http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b0%e0%b2%b8%e0%b2%be%e0%b2%82%e0%b2%ac%e0%b2%be%e0%b2%b0%e0%b2%be%e0%b2%af%e0%b2%a3%e0%b2%82/">ರಸಾಂಬಾರಾಯಣಂ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<h3>&#8211; ದಿನೇಶ ನೆಟ್ಟಾರ್</h3>
<p>ನಾನು ಮಂಗಳೂರಿನಿಂದ ಮದರಾಸಿಗೆ ವಿದ್ಯಾಭ್ಯಾಸಕ್ಕಾಗಿ ಹೋಗಿದಾಗಿನಿಂಲೂ ನನ್ನನ್ನು ಒಂದು ಪ್ರಶ್ನೆ ಭಾದಿಸುತ್ತಿದೆ:</p>
<p>ನಾವು ಊಟ ಮಾಡುವಾಗ, ಮೊದಲು ಯಾವುದನ್ನು ಉಣ್ಣಬೇಕು, ಸಾರು ಇಲ್ಲ ಸಾಂಬಾರು, ಅಂದರೆ, ಸಾಂಬಾರು ಇಲ್ಲ ಸಾರು?</p>
<p>ನಮ್ಮ ಮನೆಯಲ್ಲಿ ಯಾವಾಗಲೂ ಸಾರನ್ನೆ ಮೊದಲು ಬಡಿಸುತ್ತಿದ್ದರು. ಆದರೆ, ಮದರಾಸಿನಲ್ಲಿ ಸಾಂಬಾರು ಮೊದಲು ಬಡಿಸುತ್ತಾರೆ. ಹೀಗಾಗಿ ನನ್ನ ಧರ್ಮಸಂಕಟ. ಇಷ್ಟರ ವರೆಗೂ ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.</p>
<p>ಮೊದಲು ನಮ್ಮ ಹಾಸ್ಟೆಲ್ ಮೆಸ್ಸಿನ ಮಾಣಿ ವೇಲು ನಾಯರನ್ನು ಕೇಳಿದೆ. &#8220;ಸಾರುಕ್ಕು ದು ಇಷ್ಟಮಿಂಡೊ ಅದು ಸಾಪ್ಪಿಡುಂಗೊ, ವೆರಿದೇ ಇಲ್ಲಾನ್ ತಲೈವಲಿ ವೇಂಡಂ&#8221; (ಸಾರ್, ನಿಮಗೆ ಯಾವುದು ಇಷ್ಟವೋ ಅದನ್ನು ಉಣ್ಣಿ, ಸುಮ್ಮನೆ ಯಾಕೆ ತಲೆ ನೋವು ಬೇಡ) ಅಂದ ಆತ, ತನ್ನ ಮುರುಕು ಮಲಯಾಳಂ-ತಮಿಳಿನಲ್ಲಿ. ಇದು ನನ್ನ ಪ್ರಶ್ನೆಯ ಉತ್ತರವಲ್ಲ.</p>
<p>ಸ್ವಲ್ಪ ಸಮಯದ ಮೇಲೆ, ನನ್ನ ಸ್ನೇಹಿತ ಶ್ರೀನಿವಾಸನ್ ತಿರುವರಳ್ಳಿಕೇಣಿಯಲ್ಲಿದ್ದ ತನ್ನ ಚಿಕ್ಕಪ್ಪನ ಮನೆಗೆ ನನ್ನನ್ನು ಊಟಕ್ಕೆ ಆಹ್ವಾನಿಸಿದ. ಇದೇ ನನ್ನ ಅವಕಾಶ ಅಂದುಕೊಂಡೆ. ಧೈರ್ಯಮಾಡಿ ಅವನ ಚಿಕ್ಕಮ್ಮನನ್ನು ನನ್ನ ಹರಕು ತಮಿಳಿನಲ್ಲಿ ಕೇಳಿದೆ: &#8220;ಇಪ್ಪೊ ಸಾಪ್ಪಿಡುಂಬೊಲ್‌ದು ರಸತಿಕ್ ಮುನ್ನೆ ಸಾಂಬಾರ್ ಸಾಪ್ಪಿಡುವೋಮೆ, ಇದು ಕರೆಕ್ಟ್-ಆ, ಇಲ್ಲೈ, ಮುನ್ನೆ ರಸಂ ಸಾಪ್ಪಿಡುವದು ಕರೆಕ್ಟ್-ಆ?&#8221; (ಈಗ ಊಟ ಮಾಡುವಾಗ ಸಾರಿಗಿಂತ ಮೊದಲು ಸಾಂಬಾರು ಉಣ್ಣತ್ತೇವಲ್ಲ, ಇದು ಕರೆಕ್ಟಾ, ಇಲ್ಲಾ ಮೊದಲು ಸಾರು ಉಣ್ಣುವುದು ಕರೆಕ್ಟಾ?).</p>
<p>&#8220;ಅಯ್ಯೊಯ್ಯೋ, ನೀ ಎನ್ನ ಸೊಲ್ಲರೆ? ಎಪ್ಪೊ-ಆವದು, ಎಂಗೆ-ಆವದು, ಯಾರ್-ಆವದು ರಸತಿಕ್ ಅಪ್ಪ್‌ರೊಂ ಸಾಂಬಾರ್ ಸಾಪ್ಪಿಡುವುದು ಉಂಡಾ? ಅಪ್ಪಡಿಯೆಲ್ಲಾಂ ಕಿಡೆಯವೇ ಕಿಡೆಯಾದು.&#8221; (ಅಯ್ಯಯ್ಯೋ, ನೀನು ಏನು ಹೇಳುತ್ತೀಯಾ? ಯಾವಾಗಲಾದರೂ, ಎಲ್ಲಿಯಾದರೂ, ಯಾರಾದರೂ, ಸಾರಿನ ನಂತರ ಸಾಂಬಾರು ಉಣ್ಣುವುದುಂಟೇ? ಹಾಗೆಲ್ಲಾ ಇರಲು ಸಾಧ್ಯವೇ ಇಲ್ಲ.)</p>
<p>ಈಕೆ ವಿಶ್ವ ಸಾಂಬಾರ್-ಮೊದಲು ಪರಿಷತ್ತಿನ ಸ್ಥಾಪಕ ಸದಸ್ಯೆ ಇರಬೇಕು. ಆದ್ದರಿಂದ ಇನ್ನು ಮುಂದೆ ವಾದ ಸಲ್ಲದು ಎಂದು ಸುಮ್ಮನಾದೆ.</p>
<p>ಈ ಸಮಸ್ಯೆ ಮಾತ್ರ ನನ್ನ ತಲೆಯಿಂದ ಇಳಿಯಲಿಲ್ಲ. ರಜೆಯಲ್ಲಿ ಮನೆಗೆ ಹೋಗುವಾಗ ಇನ್ನೂ ಯೋಚಿಸಿದೆ.</p>
<p>&#8220;ಯಾರು ಈ ಪ್ರಶ್ನೆಗೆ ಉತ್ತರ ಹೇಳುವರು, ಯಾರು ಈ ವಿಷಯದಲ್ಲಿ ಪರಿಣತರು?&#8221; ಕೊನೆಗೆ, ನನ್ನ ಅಜ್ಜಿಯನ್ನು ಕೇಳಲು ನಿಶ್ಚಯಿಸಿದೆ. ಅವರಿಗೆ ನಮ್ಮೆಲ್ಲರ ಚರಿತ್ರೆ, ಊರಿನ ಸುದ್ದಿ, ನೂರಾರು ಅಡಿಗೆ ಎಲ್ಲ ತಿಳಿದಿರುವಾಗ, ಈ ಸಣ್ಣ ಪ್ರಶ್ನೆಯ ಉತ್ತರ ತಿಳಿಯದೆ ಇರುತ್ತದೆಯೇ? ಅಲ್ಲದೆ, ಯಾವಾಗಲೂ ಸಾರು ಮೊದಲು ಬಡಿಸುವ ಆಕೆಗೆ, ಈ ಪರಿವಿಡಿಯ ಕಾರಣ ಕೂಡ ಗೊತ್ತಿರಬಹುದು, ಎಂದುಕೊಂಡೆ.</p>
<p>&#8220;ಅಜ್ಜೀ, ಈಗ ಉಂಬಗ, ನಾವು ಸಾಂಬಾರಿಗೆ ಮೊದ್ಲು ಸಾರು ಉಂಬುದು ಯಾಕೆ?&#8221;</p>
<p>&#8220;ಥೂ, ನಿನ್ನ! ಅದು ಹೋಟ್ಲಿನವ್ವು ಮಾಡುದು ಸಾಂಬಾರ್, ನಾವು ಮಾಡುದು ಹುಳಿ, ನೀನು ಎಲ್ಲಿಯೋ ಮದರಾಸಿಂಗೆ ಹೋಗಿ ಬುದ್ಧಿ ಹಾಳುಮಾಡಿಕೊಂಡು ಬಯಿಂದೆ&#8221; ಅಂದರಾಕೆ.</p>
<p>ಶ್ರೀನಿವಾಸನ ಚಿಕ್ಕಮ್ಮ ಮತ್ತು ನನ್ನ ಅಜ್ಜಿ ಸೇರಿದರೆ ಸಾರು-ಸಾಂಬಾರಿನ ಜನ್ಮಭೂಮಿಯ ಬಗ್ಗೆ ಕುರುಕ್ಷೇತ್ರವೇ ನಡೆಯಲಿದೆ. ಈ ಮಸಾಲೆ ಯುದ್ಧವೂ ನೋಡುವಂತಹುದೇ!!</p>
<p>ಮದರಾಸಿಗೆ ಹಿಂತಿರುಗಿದ ಮೇಲೆ ನಿಷ್ಪಕ್ಷಪಾತಿಯೊಬ್ಬರನ್ನು ಕೇಳೋಣ ಎಂದು, ನನ್ನ ತೆನಾಲಿ ಗೆಳೆಯನ ಬಳಿ ಹೋದೆ. &#8220;ರಾವ್-ಗಾರು, ಇಪ್ಪುದು ಮೀರು ಭೋಜನಂ ಚೇಸ್ತೆ, ಮೊದತಿಗ ರಸಂ ತಿಂತಾರಾ, ಸಾಂಬಾರ್ ತಿಂತಾರಾ?&#8221; (ರಾವ್ ಸಾರ್, ಈಗ ನೀವು ಊಟ ಮಾಡುವಾಗ, ಮೊದಲು ರಸಂ ತಿನ್ನುತ್ತೀರಾ, ಇಲ್ಲ, ಸಾಂಬಾರ್ ತಿನ್ನುತ್ತೀರಾ?).</p>
<p>&#8220;ನೇನಾ? ನಾಕು ಮೊದತಿಗ ಗೊಂಗುರಂ ಕಾವಾಲಿ. ರಸಂ ಉಂಡ, ಏದಾ, ಸಾಂಬಾರ್ ಉಂಡಾ, ಲೇದಾ, ನಾಕು ತೆಲಿಯಾದು&#8230; ಅವಶ್ಯಂ ಲೇದು.&#8221; (ನಾನೇ? ನನಗೆ ಮೊದಲು ಗೊಂಗುರ ಬೇಕೇ ಬೇಕು. ಸಾರು ಇದೆಯೇ, ಇಲ್ಲವೇ, ಸಾಂಬಾರು ಇದೆಯೇ, ಇಲ್ಲವೇ, ನನಗೆ ತಿಳಿಯದು&#8230; ಅವಶ್ಯ ಇಲ್ಲ)</p>
<p>ಸಿಂಹಳದ ಎಡ್ವರ್ಡ್ ವೀರರತ್ನಸಿಂಘೆಯನ್ನು ಕೇಳಿದೆ: &#8220;you have even named your capital as kolambu (ಸಾಂಬಾರ್) you should know the answer.&#8221;</p>
<p>&#8220;you Indians want to poke your nose into everyone else&#8217;s affairs. We knew it would come to this. That is why we only eat ಕೂಟ್ಟು.&#8221;</p>
<p>ನನ್ನ ತಲೆ ಜೋರಾಗಿ ನೋಯಲು ಹತ್ತಿತು. ಇದರ ಬಗ್ಗೆ ಏನಾದರೂ ಮಾಡಲೇ ಬೇಕು. ಯಾರನ್ನು ಕೇಳಿ ಫಲವಿಲ್ಲ, ಪುರಾತನ ಗ್ರಂಥಗಳಲ್ಲಿ ಹುಡುಕಿ ಸಂಶೋಧನೆ ಮಾಡಬೇಕಷ್ಟೆ. ತಮಿಳು ಸಾಹಿತ್ಯ ಬಹಳ ಹಳೆಯದು. ಅದಕ್ಕೆ, ಮೊದಲು ಅಲ್ಲಿ ಹುಡುಕಿದೆ, ಅಲ್ಲದೆ ನಾನು ಮದರಾಸಿನಲ್ಲಿದ್ದದ್ದಾದ್ದರಿಂದ ಅದೇ ಅನುಕೂಲ. ಖ್ಯಾತ ಕವಿ ತಿರುವಲ್ಲುವರ್ ತಮ್ಮ ಕುರಲ್ ಕವಿತೆಗಳಲ್ಲಿ ಸಾರು ಅಥವಾ ಸಾಂಬಾರಿನ ಬಗ್ಗೆ ಏನು ಹೇಳಿಲ್ಲ. ಶಿಲಪ್ಪದಿಕ್ಕಾರಂ, ಮಣಿಮೇಖಲೈಯಲ್ಲೂ ಇವುಗಳ ಸೊಲ್ಲೇ ಇಲ್ಲ. ದ್ರಾವಿಡ ಕಳಗಂ, ದ್ರಾವಿಡ ಮುನ್ನೇತ್ರ ಕಳಗಂ ಪಾರ್ಟಿ ಇದರ ಉಸಿರು ಕೂಡಾ ಎತ್ತಿಲ್ಲ. ಹೀಗೆ ಹುಡುಕುತ್ತಿರುವಾಗ ಹದಿಮೂರನೆ ಶತಮಾನದ ಒಂದು ಕವಿತೆ ಸಿಕ್ಕಿತು:</p>
<p>ಪೆಣ್ಣುಕ್ಕು ಮಲ್ಲಿಪ್ಪೂ ಅಳಗು, (ಹೆಣ್ಣಿಗೆ ಮಲ್ಲಿಗೆ ಸೊಗಸು)<br />
ಚೋರುಕ್ಕು ಸಾಂಬಾರು ಮಿಳಗು (ಅನ್ನಕ್ಕೆ ಸಾಂಬಾರು ಮೆಣಸು)</p>
<p>ಆದರೆ ಇಲ್ಲಿ ಸಾರಿನ ಬಗ್ಗೆ ಏನೂ ಹೇಳಿಲ್ಲ. ಸಾರು, ಸಾಂಬಾರಿನ ಪೈಪೋಟಿಯಲ್ಲಿ ಯಾರು ಮುಂದೆ, ಈ ತೀರ್ಮಾನವೂ ಇಲ್ಲ. ಇನ್ನು ಸಂಶೋಧನೆ ಮಾಡುತ್ತಾ ರಾಹುಳ ಸಾಂಕೃತ್ಯಾಯನ `ವೋಲ್ಗಾ ಸೆ ಗಂಗಾ&#8217; ಓದಿದೆ. ಅಲ್ಲಿ ಆರ್ಯರ ಗುಂಪೊಂದು `soup&#8217; ತಯಾರು ಮಾಡುವ ಬಗ್ಗೆ ಹೇಳಿದೆ. ಕರುವಿನ ಕಾಲಿನಿಂದ ಮಾಡಿದ soup. ಇಲ್ಲಿಯಂತೂ ಸಾಂಬಾರಿನ ಮಾತೇ ಇಲ್ಲ.</p>
<p>ರಂತಿದೇವನನ್ನು ಋಷಿ ಕೇಳಿದ್ದಾನೆ, &#8220;ಭೋಜನಂ ದೇಹಿ ರಾಜೇಂದ್ರ, ಘೃತ ಸೂಪ ಸಮನ್ವಿತಾ&#8221; (ತುಪ್ಪ ಸಾರು ಹಾಕಿ ಊಟ ಹಾಕು ರಾಜ). ಈ ಋಷಿ ಸಾಂಬಾರು ಯಾಕೆ `ದೇಹಿ&#8217; ಎನ್ನಲಿಲ್ಲ?</p>
<p>ಅಮೇರಿಕದಲ್ಲಿ ಸಾರು, ಸಾಂಬಾರು ಎರಡನ್ನೂ `soup&#8217; ಎನ್ನುತ್ತಾರೆ. ಅವರ `soup&#8217; ದಪ್ಪಗೆ ಸಾಂಬಾರಿನಂತೆಯೇ ಇರುತ್ತದೆ. ತೆಳ್ಳಗೆ ಸಾರಿನಂತಲ್ಲ. ಆದರೆ ಅವರಿಗೆ Mulligtwany soup ಕೂಡಾ ಗೊತ್ತು. (ಮಿಳಗು-ತಣ್ಣಿ = ಮೆಣಸಿನ ನೀರು) ಇದು ಶುದ್ಧ ಸಾರು. ಇನ್ನಷ್ಟು ತಲೆಹರಟೆ ವಿಷಯ.</p>
<p>ಸಾರಿಗೂ ಸಾಂಬಾರಿಗೂ ವ್ಯತ್ಯಾಸವೇನು? ಎರಡಕ್ಕೂ ಒಳ್ಳೆ `ಗಂ&#8217; ಅನ್ನುವಂತೆ ಮಸಾಲೆ ಬೇಕು, ಸ್ವಲ್ಪ ಬೇಳೆ ಹಾಕಬೇಕು. ಆದರೆ ಸಾರು ತೆಳ್ಳಗೆ ಅರ್ಥಾತ್: viscosity(ಸಾರು)  viscosity(ಸಾಂಬಾರು). ಸಾರಿನಲ್ಲಿ ತರಕಾರಿ ಇಲ್ಲ, ಟೊಮೆಟೋ ಇದ್ದರೂ ಇರಬಹುದು (ಆದರೆ ಟೊಮೆಟೋ ಒಂದು ಹಣ್ಣು, ತರಕಾರಿ ಅಲ್ಲ), ಸಾಂಬಾರಿನಲ್ಲಿ ತರಕಾರಿ ಇರಬೇಕು. ಇರಬೇಕು ಎಂದೇಕೆ ಹೇಳಿದೆ ಎಂದರೆ, ಅದರಲ್ಲಿ ಯಾವ ತರಕಾರಿ ಇರಬೇಕೋ, ಅದು ಅಡಿಗೆ ಭಟ್ಟರಿಗೆ ಮಾತ್ರ ಗೊತ್ತು. ನಮ್ಮ ಹಾಸ್ಟೆಲಿನಲ್ಲಿ ಸಾಂಬಾರು ಬಡಿಸುವ ಹೊತ್ತಿಗೆ ಅದು ಸಾದಾ ಸಾಂಬಾರು ಆಗಿ ಬಿಟ್ಟಿರುತ್ತಿತ್ತು. ಆದ್ದರಿಂದ ಮೊದಲು ಸಾಂಬಾರು ಉಂಡು, ಮತ್ತೆ ಸಾರು ಕುಡಿದು ಅದನ್ನು `wash&#8217; ಮಾಡಬಹುದು. ಆದರೆ, ಸಾರು `appetizer&#8217; ಅಲ್ಲವೇ? ಹಾಗಿದ್ದರೆ, ಅದೇ ಮೊದಲು ಬರಬೇಕು.</p>
<p>ನನ್ನ ಮನೆಯಾಕೆಯನ್ನು ಕೇಳೋಣ ಅಂದರೆ ಆಕೆ ಪಂಜಾಬಿ. ರುಚಿಯಾಗಿ ಸಾರು, ಸಾಂಬಾರು ಎರಡೂ ಮಾಡುತ್ತಾಳೆ. ಒಂದು ತಟ್ಟೆಯಲ್ಲಿ ಸಾರು ಇಟ್ಟುಕೊಂಡು, ರೊಟ್ಟಿ, ಅನ್ನ, ಸಾಂಬಾರು ತಿನ್ನುತ್ತಾ ಸಾರು ಕುಡಿಯುತ್ತಾಳೆ. ನನ್ನ ಪ್ರಶ್ನೆ ಏನು ಅಂದರೆ: ಯಾವುದು ಮೊದಲು ಬರಬೇಕು, ಸಾರೋ, ಸಾಂಬಾರೋ?<br />
ಇದರ ಉತ್ತರ ನಿಮಗೆ, ಅಂದರೆ ಬುದ್ಧಿಶಾಲಿ ಓದುಗರಿಗೆ ಬಿಟ್ಟಿದ್ದೇನೆ. ನೀವೇ ಹೇಳ್ಬಿಡಿ ಸಾರ್ (ಅಯ್ಯೋ ಸಾರ್ ಅಂದೆನೇ), ಸಾಂಬಾರ್!!</p>
<p>[೧೯೯೭]</p><p>The post <a href="http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b0%e0%b2%b8%e0%b2%be%e0%b2%82%e0%b2%ac%e0%b2%be%e0%b2%b0%e0%b2%be%e0%b2%af%e0%b2%a3%e0%b2%82/">ರಸಾಂಬಾರಾಯಣಂ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b0%e0%b2%b8%e0%b2%be%e0%b2%82%e0%b2%ac%e0%b2%be%e0%b2%b0%e0%b2%be%e0%b2%af%e0%b2%a3%e0%b2%82/feed/</wfw:commentRss>
			<slash:comments>2</slash:comments>
		
		
			</item>
		<item>
		<title>ಶಾಕಾಹಾರಿಯೋ ಶಾಖಾಹಾರಿಯೋ?</title>
		<link>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b6%e0%b2%be%e0%b2%95%e0%b2%be%e0%b2%b9%e0%b2%be%e0%b2%b0%e0%b2%bf%e0%b2%af%e0%b3%8b-%e0%b2%b6%e0%b2%be%e0%b2%96%e0%b2%be%e0%b2%b9%e0%b2%be%e0%b2%b0%e0%b2%bf%e0%b2%af%e0%b3%8b/</link>
					<comments>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b6%e0%b2%be%e0%b2%95%e0%b2%be%e0%b2%b9%e0%b2%be%e0%b2%b0%e0%b2%bf%e0%b2%af%e0%b3%8b-%e0%b2%b6%e0%b2%be%e0%b2%96%e0%b2%be%e0%b2%b9%e0%b2%be%e0%b2%b0%e0%b2%bf%e0%b2%af%e0%b3%8b/#comments</comments>
		
		<dc:creator><![CDATA[admin]]></dc:creator>
		<pubDate>Sat, 11 Mar 2006 20:53:34 +0000</pubDate>
				<category><![CDATA[ಹಾಸ್ಯ]]></category>
		<guid isPermaLink="false">http://localhost/vishwakannada/?p=191</guid>

					<description><![CDATA[<h3>- ಯು. ಬಿ. ಪವನಜ</h3>
<p>೧೯೯೫ರಲ್ಲಿ ನಾನು ತೈವಾನಿಗೆ ಉನ್ನತ ಸಂಶೋಧನೆ ಮಾಡಲು ಹೋಗಿದ್ದೆ. ಅಲ್ಲಿಗೆ ತಲುಪಿದ ದಿನ ರಾತ್ರಿ ನಮ್ಮ ಸಂಶೋಧನಾಲಯದ ಸಹೋದ್ಯೋಗಿಗಳಿಂದ ನನಗೆ ಒಂದು ಸ್ವಾಗತ ಭೋಜನಕೂಟ ಇತ್ತು. ತೈವಾನಿನಲ್ಲಿ ಊಟ ಕಷ್ಟವಾಗಬಹುದು ಎಂದು ಮೊದಲೇ ಊಹಿಸಿಕೊಂಡಿದ್ದೆ. ಈ ಸ್ವಾಗತ ಕೂಟದಲ್ಲಿ ಏನು ತಿನ್ನಿಸುತ್ತಾರೊ ಎಂದು ಭಯಪಟ್ಟುಕೊಂಡೇ ಸಹೋದ್ಯೋಗಿಗಳ ಜೊತೆ ಹೋದೆ. ಎಲ್ಲರೂ ಒಂದು ಮೇಜಿನ ಸುತ್ತ ಕೂತೆವು. ಪರಿಚಾರಕರು ಪರಿಚಾರಿಕೆಯರು ಬಂದರು. ನಾನು ಶುದ್ಧ ಶಾಕಾಹಾರಿ ಎಂದು ಘೋಷಿಸಿದೆ. ನಮ್ಮ ಸಹೋದ್ಯೋಗಿಗಳು ನಿಮ್ಮಲ್ಲಿ ಶಾಕಾಹಾರ ಏನೇನು ಇದೆ ಎಂದು ಕೇಳಿದರು. ಅವರು ಹೇಳಿದ್ದು ನನಗೆ ಏನೇನೂ ಅರ್ಥವಾಗಲಿಲ್ಲ. ರೈಸ್ (ಆನ್ನ) ಎಂಬ ಪದ ಉಚ್ಚರಿಸಿದೆ. ಅವರು ಅದು ಇದೆ ಎಂದರು. ಸರಿ ಅದನ್ನೇ ತನ್ನಿ ಎಂದೆ.</p>
<p>The post <a href="http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b6%e0%b2%be%e0%b2%95%e0%b2%be%e0%b2%b9%e0%b2%be%e0%b2%b0%e0%b2%bf%e0%b2%af%e0%b3%8b-%e0%b2%b6%e0%b2%be%e0%b2%96%e0%b2%be%e0%b2%b9%e0%b2%be%e0%b2%b0%e0%b2%bf%e0%b2%af%e0%b3%8b/">ಶಾಕಾಹಾರಿಯೋ ಶಾಖಾಹಾರಿಯೋ?</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<h3>&#8211; ಯು. ಬಿ. ಪವನಜ</h3>
<p>೧೯೯೫ರಲ್ಲಿ ನಾನು ತೈವಾನಿಗೆ ಉನ್ನತ ಸಂಶೋಧನೆ ಮಾಡಲು ಹೋಗಿದ್ದೆ. ಅಲ್ಲಿಗೆ ತಲುಪಿದ ದಿನ ರಾತ್ರಿ ನಮ್ಮ ಸಂಶೋಧನಾಲಯದ ಸಹೋದ್ಯೋಗಿಗಳಿಂದ ನನಗೆ ಒಂದು ಸ್ವಾಗತ ಭೋಜನಕೂಟ ಇತ್ತು. ತೈವಾನಿನಲ್ಲಿ ಊಟ ಕಷ್ಟವಾಗಬಹುದು ಎಂದು ಮೊದಲೇ ಊಹಿಸಿಕೊಂಡಿದ್ದೆ. ಈ ಸ್ವಾಗತ ಕೂಟದಲ್ಲಿ ಏನು ತಿನ್ನಿಸುತ್ತಾರೊ ಎಂದು ಭಯಪಟ್ಟುಕೊಂಡೇ ಸಹೋದ್ಯೋಗಿಗಳ ಜೊತೆ ಹೋದೆ. ಎಲ್ಲರೂ ಒಂದು ಮೇಜಿನ ಸುತ್ತ ಕೂತೆವು. ಪರಿಚಾರಕರು ಪರಿಚಾರಿಕೆಯರು ಬಂದರು. ನಾನು ಶುದ್ಧ ಶಾಕಾಹಾರಿ ಎಂದು ಘೋಷಿಸಿದೆ. ನಮ್ಮ ಸಹೋದ್ಯೋಗಿಗಳು ನಿಮ್ಮಲ್ಲಿ ಶಾಕಾಹಾರ ಏನೇನು ಇದೆ ಎಂದು ಕೇಳಿದರು. ಅವರು ಹೇಳಿದ್ದು ನನಗೆ ಏನೇನೂ ಅರ್ಥವಾಗಲಿಲ್ಲ. ರೈಸ್ (ಆನ್ನ) ಎಂಬ ಪದ ಉಚ್ಚರಿಸಿದೆ. ಅವರು ಅದು ಇದೆ ಎಂದರು. ಸರಿ ಅದನ್ನೇ ತನ್ನಿ ಎಂದೆ.</p>
<p>ತೈವಾನು ಬಹುಮಟ್ಟಿಗೆ ಚೈನಾದಂತೆಯೇ. ಅದೇ ಭಾಷೆ, ಊಟ, ವ್ಯವಹಾರ, ರೀತಿ ನೀತಿ ಎಲ್ಲ. ನಮಗೆ ಭಾರತದಲ್ಲಿ ಚೈನೀಸ್ ಫುಡ್ ತಿಂದು ಗೊತ್ತಿದೆ. ತೈವಾನಿನಲ್ಲೂ ಅವೇ ಸಿಗಬಹುದು ಎಂದುಕೊಂಡರೆ ಖಂಡಿತ ಮೋಸಹೋಗುತ್ತೀರಾ. ನೂಡಲ್ ಹೊರತುಪಡಿಸಿ ನಾವು ಇಲ್ಲಿ ಚೈನೀಸ್ ಎಂದು ಹೇಳಿಕೊಂಡು ತಿನ್ನುವ ಯಾವ ಆಹಾರವೂ ಅಲ್ಲಿ ಸಿಗುವುದಿಲ್ಲ. ಉದಾಹರಣೆಗೆ ಮಂಚೂರಿಯನ್ ಎಂದರೆ ಏನೆಂದು ಅಲ್ಲಿ ಯಾರಿಗೂ ಗೊತ್ತಿಲ್ಲ. ಅಲ್ಲಿ ನಾನಿದ್ದ ಒಂದು ವರ್ಷದಲ್ಲಿ ಎಲ್ಲೂ ಮಂಚೂರಿಯನ್ ತಿನ್ನಲು ಸಿಗಲಿಲ್ಲ.</p>
<p>ಈಗ ನಮ್ಮ ಸ್ವಾಗತಕೂಟದ ಊಟಕ್ಕೆ ವಾಪಾಸು ಬರೋಣ. ನನಗಂತೂ ಫ್ರೈಡ್ ರೈಸ್ ಬಂತು. ನನ್ನ ಅದೃಷ್ಟಕ್ಕೆ ತಿನ್ನುವಂತಿತ್ತು. ನನ್ನ ಸಹೋದ್ಯೋಗಿಗಳೆಲ್ಲ ಏನೇನೋ ತಿಂಡಿ ಆರ್ಡರ್ ಮಾಡಿದರು. ಮನುಷ್ಯನನ್ನು ಹೊರತು ಪಡಿಸಿ ಸಕಲ ಜೀವಜಾತಿಗಳೆಲ್ಲ ನಮ್ಮ ಊಟದ ಮೇಜಿನ ಮೇಲೆ ನಿರ್ಜೀವವಾಗಿ ಬಂದು ಮಲಗಿದ್ದವು. ಕೆಲವಂತೂ ಚರ್ಮ ಮಾತ್ರ ತೆಗೆದ ಇಡೀ ದೇಹವೇ ಇದ್ದಂತಿತ್ತು. ಇನ್ನು ಕೆಲವು ಕೈ, ಕಾಲು, ಮತ್ತೆ ಕೆಲವು ಲಿವರ್, ಹೀಗೆ ಪ್ರಾಣಿಶಾಸ್ತ್ರ ಕಲಿಯುವಾಗ ಎಲ್ಲೋ ಓದಿದ ಅಂಗಗಳೆಲ್ಲ ಮೇಜಿನ ಮೇಲೆ ಚೆಲ್ಲಾಪಿಲ್ಲಿಯಾಗಿದ್ದವು. ಸಹೋದ್ಯೋಗಿಗಳು ಅವುಗಳನ್ನೆಲ್ಲ ಚಾಕು, ಮುಳ್ಳು ಉಪಯೋಗಿಸಿ ಕತ್ತಿರಿಸುವಾಗ ನನಗೆ ನಾನು ಪಿಯುಸಿಯಲ್ಲಿ ಬಯಾಲಜಿ ಪ್ರಯೋಗಾಲಯದಲ್ಲಿ ಕಪ್ಪೆ, ಜಿರಳೆಗಳನ್ನು ಕತ್ತರಿಸಿದ್ದು ನೆನಪಿಗೆ ಬರುತ್ತಿತ್ತು. ನನಗೆ ಮುಂಬಯಿಯಲ್ಲಿ ಗುರುದತ್ತ ಬಾಳಿಗ ಎಂಬ ಸ್ನೇಹಿತರಿದ್ದಾರೆ. ಅವರು ಪ್ರತಿದಿನ ಮಾಂಸ ತಿನ್ನುವವರು. ನಾವು ಕನ್ನಡಿಗರೆಲ್ಲ ಅವರನ್ನು ಯಾವಗಲೂ ಗೇಲಿ ಮಾಡುವ ಪರಿಪಾಠವಿತ್ತು. “ಏನು ಬಾಳಿಗರೇ ಇವತ್ತು ಊಟ? ನಡೆದಾಡುವುದೋ, ಈಜುವುದೋ, ಹಾರುವುದೋ” ಎಂದು ಕೇಳುತ್ತಿದ್ದೆವು. ಆ ಮಾತುಗಳೆಲ್ಲ ನನಗೆ ನಮ್ಮ ಊಟದ ಮೇಜನ್ನು ನೋಡಿದಾಗ ನೆನಪಿಗೆ ಬಂತು. ಅಲ್ಲಂತೂ ನಾವು ಬಯಾಲಜಿ ಪುಸ್ತಕದಲ್ಲಿ ಮಾತ್ರವೇ ಕೇಳಿದ್ದ ಕೆಲವು ಪ್ರಾಣಿಗಳು ಇದ್ದವು. ಉದಾಹರಣೆಗೆ ಅಕ್ಟೋಪಸ್. ಗಾಭರಿಯಾದಿರಾ? ಹೌದು ಸ್ವಾಮಿ. ತೈವಾನಿನ ಜನ ಮನುಷ್ಯನನ್ನು ಹೊರತು ಪಡಿಸಿ ಸಕಲ ಜೀವಜಾತಿಗಳನ್ನು ತಿನ್ನುತ್ತಾರೆ.</p>
<p>ನನ್ನ ಊಟ ಸರಳವಾದುದರಿಂದ ಬೇಗನೆ ಮುಗಿಯಿತು. ಆದರೆ ನನ್ನ ಸಹೋದ್ಯೋಗಿಗಳು ತುಂಬ ಹೊತ್ತು ತಿನ್ನುತ್ತಲೇ ಇದ್ದರು. ಚೀನೀಯರು ನೋಡಲು ಚಿಕ್ಕ ದೇಹದವರಾದರೂ ಅವರ ತಿನ್ನುವ ಸಾಮರ್ಥ್ಯವನ್ನು ನೋಡಿದರೆ ನೀವು ಖಂಡಿತ ಆಶ್ಚರ್ಯ ಪಡುತ್ತೀರಾ. ಚೀನೀಯರ ಒಂದು ಒಳ್ಳೆಯ ಗುಣವೆಂದರೆ ರಾಶಿಗಟ್ಟಲೆ ತಿಂಡಿ ಊಟ ಆರ್ಡರ್ ಮಾಡಿ ಅರ್ಧಕ್ಕರ್ಧ ಮಾತ್ರ ತಿಂದು ಬಹುತೇಕವನ್ನು ಹಾಗೆಯೇ ಬಿಡುವ ಚಾಳಿ ಅವರಲ್ಲಿಲ್ಲ. ಅವರು ಊಟ ಮಾಡಿದ ನಂತರ ಎಲ್ಲ ತಟ್ಟೆಗಳು ಚೊಕ್ಕಟವಾಗಿರುತ್ತವೆ. ಅಂದರೆ ತಿನ್ನುವಂತಹ ಎಲ್ಲವನ್ನೂ ಅವರು ತಿಂದುಬಿಡುತ್ತಾರೆ. ಪ್ಲೇಟಿನಲ್ಲಿ ಬಿಡುವುದು ಏನಿದ್ದರೂ ತಿನ್ನಲಸಾಧ್ಯವಾದ ಮೂಳೆ, ಚಿಪ್ಪು, ಇತ್ಯಾದಿ ಮಾತ್ರ.</p>
<p>ಈಗ ಮಹಾಭಾರತದ ಒಂದು ಕಥೆ. ಮಹಾಭಾರತ ಯುದ್ಧ ಮುಗಿದಿದೆ. ಶ್ರೀಕೃಷ್ಣ ಗಾಂಧಾರಿ, ಕುಂತಿ, ವಿದುರ, ಮತ್ತಿತರರನ್ನು ಕುರುಕ್ಷೇತ್ರ ಯುದ್ಧ ಜರುಗಿದ ಸ್ಥಳಕ್ಕೆ ಕರೆದೊಯ್ಯುತ್ತಾನೆ. ಕೃಷ್ಣ ಗಾಂಧಾರಿಯ ಕಣ್ಣಿನ ಪಟ್ಟಿಯನ್ನು ಒತ್ತಾಯದಿಂದ ಬಿಚ್ಚಿಸಿ ರಣರಂಗವನ್ನು ತೋರಿಸುತ್ತಾನೆ. ತನ್ನ ಮಗನ ಛಲದಿಂದಾಗಿ ಉಂಟಾದ ಸ್ಥಿತಿಯನ್ನು ಆಕೆಗೆ ಮನಗಾಣಿಸುವುದು ಕೃಷ್ಣನ ಉದ್ದೇಶ. ಎಲ್ಲ ಕಡೆ ಚಲ್ಲಾಪಿಲ್ಲಿಯಾಗಿ ದೇಹದ ಭಾಗಗಳು, ಎಲುಬು, ತಲೆ ಬುರುಡೆ, ರಾಶಿ ರಾಶಿಯಾಗಿ ಬಿದ್ದಿರುವುದನ್ನು ಗಾಂಧಾರಿ ನೋಡುತ್ತಾಳೆ. ನಿನ್ನ ಕಣ್ಣ ಮುಂದೆಯೇ ನಿನ್ನ ಎಲ್ಲ ಯಾದವ ಕುಲಬಂಧುಗಳೂ ಹೊಡೆದಾಡಿ ಸಾಯಲಿ ಎಂದು ಕೃಷ್ಣನಿಗೆ ಶಾಪ ನೀಡುತ್ತಾಳೆ.</p>
<p>ನನ್ನ ಸಹೋದ್ಯೋಗಿಗಳು ಊಟ ಮಾಡಿದ ಮೇಜಿನ ಸ್ಥಿತಿಯೂ ಬಹುಪಾಲು ಗಾಂಧಾರಿ ನೋಡಿದ ಕುರುಕ್ಷೇತ್ರದ ಬಯಲಿನಂತೆಯೇ ಇತ್ತು. ಎಲುಬಿನ ತುಂಡು, ಸಮುದ್ರದಿಂದ ಬಂದ ಪ್ರಾಣಿಗಳ ಚಿಪ್ಪು, ಏಡಿಯ ಚಿಪ್ಪು, ಕೈಕಾಲುಗಳ ತುಂಡುಗಳು, ಇತ್ಯಾದಿಗಳೆಲ್ಲ ತುಂಬಿ ನೋಡಲು ಭೀಕರವಾಗಿತ್ತು. ಯಾವುದೇ ಸತ್ತ ಪ್ರಾಣಿಯ ಅವಶೇಷವಿಲ್ಲದ ತಟ್ಟೆಯೆಂದರೆ ನನ್ನದು ಮಾತ್ರವಾಗಿತ್ತು. ಆದರೆ ಅಲ್ಲಿ ಶಾಪ ನೀಡಲು ಕಣ್ಣಿನ ಪಟ್ಟಿ ಬಿಡಿಸಿದ ಗಾಂಧಾರಿ ಇರಲಿಲ್ಲ.</p>
<p>ಯಾರಾದರೂ ನನ್ನಲ್ಲಿ ನೀನು ಮಾಂಸಾಹಾರ ತೆಗೆದುಕೊಳ್ಳುವುದಿಲ್ಲವೇ ಎಂದು ಕೇಳಿದರೆ “ನನ್ನ ಹೊಟ್ಟೆ ಸತ್ತ ಪ್ರಾಣಿಗಳನ್ನು ಹೂಳುವ ಸ್ಮಶಾನವಲ್ಲ” ಎಂಬ ಹಳೆಯ ಜೋಕನ್ನೇ ಉತ್ತರವಾಗಿ ನೀಡುತ್ತೇನೆ. ತೈವಾನಿನಲ್ಲಿ ಅದು ಜೋಕ್ ಎಂದು ಯಾರಿಗೂ ತಿಳಿಯಲಿಲ್ಲ. ಒಮ್ಮೆ ನಾವೆಲ್ಲ ಒಂದು ಪ್ರವಾಸ ಹೋಗಿದ್ದೆವು. ನಮ್ಮ ತಂಡದಲ್ಲಿ ಕೆಲವು ರಷ್ಯ ದೇಶದ ವಿಜ್ಞಾನಿಗಳೂ ಇದ್ದರು. ಅವರಲ್ಲೊಬ್ಬರು ನನ್ನನ್ನು ಕೇಳಿದರು “ನೀವು ಕೋಳಿ, ಮೀನು ಕೂಡ ತಿನ್ನುವುದಿಲ್ಲವೇ?”. ಅವರ ಪ್ರಕಾರ ಕೋಳಿ ಮತ್ತು ಮೀನು ಮಾಂಸಾಹಾರವಲ್ಲ! ವಿಮಾನದಲ್ಲೂ ಅಷ್ಟೆ. ನೀವು strictly vegetarian ಎಂದು ಟಿಕೇಟಿನಲ್ಲಿ ಬರೆಸದೆ ಕೇವಲ vegetarian ಎಂದು ಮಾತ್ರ ಬರೆಸಿದರೆ ನಿಮಗೆ ಮಾಂಸ, ಮೊಟ್ಟೆ, ಕೋಳಿಗಳು ಆಹಾರವಾಗಿ ಸಿಗುತ್ತವೆ. ರಷ್ಯದ ಸ್ನೇಹಿತರಿಗೆ ನಾನೆಂದೆ “ಭಾರತದ ಜನಸಂಖ್ಯೆ ಪ್ರಪಂಚದ ಜನಸಂಖ್ಯೆಯ ಶೇಕಡ ೨೦ರಷ್ಟಿದೆ. ನಾವೆಲ್ಲ ಮಾಂಸಾಹಾರಿಗಳಾದರೆ ನಿಮಗೆ ಮಾಂಸ ಸಿಗುವುದು ಕಷ್ಟವಾಗಬಹುದು. ಅಥವಾ ಮಾಂಸಾಹಾರದ ಬೆಲೆ ಗಗನಕ್ಕೆ ಏರಬಹುದು”. ಅವರಿಗೆ ನನ್ನ ತರ್ಕ ಬಲು ಇಷ್ಟವಾಯಿತು. good logic ಎಂದು ನಕ್ಕು ಸುಮ್ಮನಾದರು.</p>
<p>ಇಸ್ಮಾಯಿಲ್ ಎಂಬ ನನ್ನ ಸ್ನೇಹಿತರೊಬ್ಬರಿದ್ದಾರೆ. ಅವರು ನಡೆದಾಡುವುಗಳಲ್ಲಿ ಮನುಷ್ಯರನ್ನು, ನಾಲ್ಕು ಕಾಲಿರುವುಗಳಲ್ಲಿ ಮೇಜನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ತಿನ್ನುತ್ತಾರೆ. ಅವುಗಳನ್ನೆಲ್ಲ ಅವರು ತಿನ್ನುವುದನ್ನು ನಾನು ನೋಡಿಲ್ಲ. ಆದರೆ ಹಾಗೆಂದು ಅವರು ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ. ಆದರೆ ನಮ್ಮ ಮನೆಗೆ ಬಂದಾಗ ಅಪ್ಪಟ ಪುಳಿಚಾರು ಉಂಡಿದ್ದರು.</p>
<p>ಈ ವೆಜಿಟೇರಿಯನ್ ಮತ್ತು ನಾನ್-ವೆಜಿಟೇರಿಯನ್ ಪದಗಳನ್ನು ಗಮನಿಸಿ. ನಾನ್-ವೆಜಿಟೇರಿಯನ್‌ನಲ್ಲಿ ವೆಜಿಟೇರಿಯನ್ ಇದೆ. ಆದರೆ ವೆಜಿಟೇರಿಯನ್‌ನಲ್ಲಿ ನಾನ್-ವೆಜಿಟೇರಿಯನ್ ಇಲ್ಲ. ನಾನ್-ವೆಜಿಟೇರಿಯನ್ ಎಂದು ಹೇಳುವಾಗ ಅದು ಕೇಳುಗರ ಕಿವಿಗೆ ನಾನು ವೆಜಿಟೇರಿಯನ್ ಎಂದು ಕೇಳಿಸಿಕೊಂಡು ಅಪಾರ್ಥವಾಗುವ ಸಾಧ್ಯತೆ ಇದೆ. ಆದುದರಿಂದ ಶಾಕಾಹಾರಿ ಅಥವಾ ಸಸ್ಯಾಹಾರಿ ಮತ್ತು ಮಾಂಸಾಹಾರಿ ಎಂದು ಕನ್ನಡದಲ್ಲಿ ಹೇಳುವುದೇ ಸೂಕ್ತ.</p>
<p>ಮುಂಬಯಿಯಲ್ಲಿದ್ದಾಗ ಊಟದ ಮೇಜಿನಲ್ಲಿ ಕುಳಿತುಕೊಂಡು ಯಾರು ಯಾರು  ವೆಜಿಟೇರಿಯನ್ ಮತ್ತು ನಾನ್-ವೆಜಿಟೇರಿಯನ್ ಎಂಬ ಚರ್ಚೆ ಬಂದಾಗ ನನ್ನ ಸಹೋದ್ಯೋಗಿಯೊಬ್ಬರು “ನಾನು ಎಗ್ಗಿಟೇರಿಯನ್” ಎಂದು ಹೇಳುತ್ತಿದ್ದರು. ಹಾಗೆಂದರೇನೆಂದು ಗೊತ್ತಾಗಲಿಲ್ಲವೇ? ಮೊಟ್ಟೆ ಹೊರತು ಪಡಿಸಿ ಯಾವುದೇ ಮಾಂಸಾಹಾರ ಸೇವಿಸದವರು ಸ್ವಾಮಿ. ಅವರೇ ಹೇಳುತ್ತಿದ್ದರು “ನಾನು ಮೊಟ್ಟೆ ತಿನ್ನುತ್ತೇನೆ. ಆದರೆ ಅದರ ಅಪ್ಪ ಅಮ್ಮಂದಿರನ್ನು ತಿನ್ನುವುದಿಲ್ಲ”.</p>
<p>ಈ ಮೊಟ್ಟೆಯ ವಿಷಯ ಬಂದಾಗ ನನಗೆ ಪಂಜೆ ಮಂಗೇಶರಾಯರ ಕನ್ನಡ ವ್ಯಾಕರಣ ಪುಸ್ತಕದಲ್ಲಿರುವ ಒಂದು ನಗೆಹನಿ ಜ್ಞಾಪಕ್ಕೆ ಬರುತ್ತದೆ. ಅದರಲ್ಲಿ ಒಬ್ಬ ಹುಡುಗ ಕೋಳಿಮೊಟ್ಟೆಯನ್ನು ಬಗ್ಗಿ ಆಸಕ್ತಿಯಿಂದ ವೀಕ್ಷಿಸುತ್ತ ಪ್ರಶ್ನೆ ಕೇಳುತ್ತಾನೆ -“ಕೋಳಿ ಮೊಟ್ಟೆಯೊಳಗೆ ಸ್ತ್ರೀಲಿಂಗವೋ ಪುಲ್ಲಿಂಗವೋ?” ಬಹುಶಃ ಪಂಜೆ ಮಂಗೇಶರಾಯರ ಕಾಲದಲ್ಲಿ ಮರಿ ಹೊರಬಾರದ ಮೊಟ್ಟೆಗಳು ಇದ್ದಿರಲಿಲ್ಲವೇನೋ? ಇದ್ದಿದ್ದರೆ ಅವರು ಆ ಕಾರ್ಟೂನು ಬರೆಸುತ್ತಿರಲಿಲ್ಲ. ಈಗಿನ ಬ್ರಾಯ್ಲರ್ ಕೋಳಿ ಮೊಟ್ಟೆಗಳು ನಿಜಕ್ಕೂ ನಪುಂಸಕ ಲಿಂಗಕ್ಕೆ ಉತ್ತಮ ಉದಾಹರಣೆ.</p>
<p>ಸಸ್ಯಾಹಾರಿ ಮಾಂಸಾಹಾರಿ ಎಂದು ಹೇಳಿದೆ ತಾನೆ. ನೀವು ಕರ್ನಾಟಕದಲ್ಲಿ ಹೋಟೆಲುಗಳ ಬೋರ್ಡುಗಳಲ್ಲಿ ಈ ರೀತಿ ಸರಿಯಾದ ಕನ್ನಡದಲ್ಲಿ ಬರೆದಿದ್ದು ಕಂಡಿದ್ದೀರಾ? ಕರ್ನಾಟಕ ಬಿಟ್ಟು ಹೊರಗಡೆ ಕನ್ನಡದ ಬೋರ್ಡು ಎಲ್ಲಿರುತ್ತವೆ ಸ್ವಾಮಿ ಎಂದು ತರ್ಕ ತೆಗೆಯುತ್ತಿದ್ದೀರಾ? ತೆಗೆಯಿರಿ ಸ್ವಾಮಿ. ನನ್ನದೇನೂ ಅಡ್ಡಿಯಿಲ್ಲ. ಈಗ ಹೇಳಿ. ಎಲ್ಲಿಯಾದರೂ ಶುದ್ಧವಾದ ಕನ್ನಡದಲ್ಲಿ ಬರೆದ ಬೋರ್ಡು ನೋಡಿದ್ದೀರಾ? ಕೆಲವು ಉದಾಹರಣೆಗಳನ್ನು ನೋಡೋಣ. ಒಂದು ಕಡೆ ಸಸ್ಯಹಾರಿ ಎಂದು ಬರೆದಿತ್ತು. ಅಂದರೆ ಸಸ್ಯವು ಹಾರುತ್ತಿದೆ ಎಂದಾಯಿತು. ಕೆಲವು ಹೋಟೆಲುಗಳಲ್ಲಿ ಫಲಹಾರ ಮಂದಿರ ಎಂದಿರುತ್ತದೆ. ಹಾಗೆಂದರೆ ಹಣ್ಣುಗಳ ಮಾಲೆ ಎಂದು ಅರ್ಥವಾಗುತ್ತದೆ. ಅಲ್ಲಿ ಹೋದರೆ ನಿಮಗೆ ಹಣ್ಣುಗಳ ಮಾಲೆ ಹಾಕಿ ಕಳುಹಿಸುತ್ತಾರೆ. ಎಚ್ಚರಿಕೆ. ಆಮೇಲೆ ನಿಮಗೆ ಹಕ್ಕಿಗಳ ಕಾಟ ತಪ್ಪಿದ್ದಲ್ಲ. ಇನ್ನೊಂದು ಕಡೆ ಉಪಹಾರ ಗೃಹ ಎಂದಿತ್ತು. ಉಪಹಾರ ಎಂದರೆ ಕಾಣಿಕೆ, ನೈವೇದ್ಯ ಎಂದರ್ಥ. ಅಂದ ಮೇಲೆ ನೀವು ಅಲ್ಲಿ ತಿಂಡಿ ತಿಂದು ದುಡ್ಡು ಕೊಡಬೇಕಿಲ್ಲ ಎಂದಾಯಿತು. ಹೀಗೆ ನೀವು ಅದರ ಮಾಲಿಕರ ಜೊತೆ ವಾದ ಮಾಡಬೇಡಿ ಮತ್ತೆ. ವಾದ ಮಾಡುವುದಿದ್ದರೂ ನನ್ನನ್ನು ಅಲ್ಲಿ ಸಾಕ್ಷಿಗೆ ಕರೆಯಬೇಡಿ. ಮಂಗಳೂರಿನಲ್ಲಂತೂ ಒಂದು ಹೋಟೆಲಿನ ಹೆಸರೇ “ನೈವೇದ್ಯ” ಎಂದಿದೆ. ನಾವು ನೈವೇದ್ಯ ಮಾಡುವುದು ದೇವರಿಗೆ ತಾನೆ. ದೇವರು ತಿನ್ನುವುದಿಲ್ಲ. ಅವನಿಗೆ ನೈವೇದ್ಯ ಎಂದು ಎದುರಿಗಿಟ್ಟು ನಂತರ ನಾವು ತಿನ್ನುತ್ತೇವೆ. ಹಾಗಿದ್ದರೆ “ನೈವೇದ್ಯ” ಹೋಟೆಲಿನಲ್ಲಿ ಏನು ಮಾಡುತ್ತಾರೆ? ನಮ್ಮ ಮುಂದೆ ಊಟ ಇಟ್ಟು ನಮಗೆ ತಿನ್ನಲು ಬಿಡದೆ ವಾಪಾಸು ತೆಗೆದುಕೊಂಡು ಹೋಗುತ್ತಾರೆಯೇ?</p>
<p><img decoding="async" src="http://vishvakannada.com/files/saasyahari.JPG"><br />
ಬೆಂಗಳೂರಿನ ಬಿಟಿಎಂ ಬಡಾವಣೆಯ ಒಂದು ಹೋಟೆಲಿನ ಬೋರ್ಡಿನಲ್ಲಿ “ಸಾಸ್ಯಹರಿ” ಎಂದಿತ್ತು. ಈ ಪದಕ್ಕೆ ಏನು ಅರ್ಥವೋ ನನಗೆ ಗೊತ್ತಿಲ್ಲ. ಸ್ವಲ್ಪ ತಲೆ ಓಡಿಸಿ (ಕೆಡಿಸಿ) ನೋಡೋಣ. ವಸುದೇವನ ಮಗ ವಾಸುದೇವ. ಅದೇ ರೀತಿ ಸಸ್ಯದ ಮಗ ಸಾಸ್ಯ. ಸಾಸ್ಯಹರಿ ಎಂದರೆ? ಇಲ್ಲಿ ಹರಿ ಎಂದರೆ ದೇವರು ಎಂಬರ್ಥದ ನಾಮಪದವನ್ನು ತೆಗೆದುಕೊಳ್ಳಬೇಕೆ ಅಥವಾ ಹರಿ ಎಂಬ ಕ್ರಿಯಾಪದವನ್ನು ತೆಗೆದುಕೊಳ್ಳಬೇಕೆ? ಕ್ರಿಯಾಪದವನ್ನೇ ತೆಗೆದುಕೊಂಡರೆ ಸಸ್ಯದ ಮಗನನ್ನು ಹರಿದು ಹಾಕುವುದು ಎಂದಾಗುತ್ತದೆ. ಅಂದರೆ ಚಿಕ್ಕ ಚಿಕ್ಕ ಗಿಡಗಳನ್ನು ಕೀಳುವುದು ಎಂದು ಅರ್ಥೈಸಬಹುದು.  ನೀವು ಆ ಹೋಟೆಲಿಗೆ ಹೋದರೆ ಕಳೆಗಿಡಗಳನ್ನು ಕೀಳುವ ಕೆಲಸ ಮಾಡಬೇಕಾಗುತ್ತದೆ.</p>
<p>“ಶುದ್ಧಾಶುದ್ಧ ಪದಗಳ ಬಗ್ಗೆ ದೊಡ್ಡ ಕನ್ನಡ ಪಂಡಿತರಂತೆ ಭಾಷಣ ಬಿಗಿಯುತ್ತಿದ್ದೀರಲ್ಲಾ, ಹಾಗಿದ್ದರೆ ಈ ಪದಗಳನ್ನು ಬರೆಯುವ ಸರಿಯಾದ ವಿಧಾನ ಯಾವುದು” ಎಂದು ಕೇಳುತ್ತೀದ್ದೀರಾ? ಸಸ್ಯಾಹಾರ, ಫಲಾಹಾರ, ಉಪಾಹಾರ. ಈ ಎಲ್ಲ ಪದಗಳಲ್ಲಿ ಸವರ್ಣದೀರ್ಘ ಸಂಧಿ ಬಳಕೆಯಾಗಿದೆ. ಇವುಗಳ ಸಂಧಿ ವಿಂಗಡಣೆ ಈ ರೀತಿ ಇದೆ &#8211;<br />
ಸಸ್ಯ + ಆಹಾರ = ಸಸ್ಯಾಹಾರ<br />
ಫಲ + ಆಹಾರ = ಫಲಾಹಾರ<br />
ಉಪ + ಆಹಾರ = ಉಪಾಹಾರ<br />
ಈ ತಪ್ಪು ಒಪ್ಪುಗಳ ಪಟ್ಟಿಯಲ್ಲಿ ನಮ್ಮ ವಿಷಯಕ್ಕೆ ಸಂಬಂಧಿಸಿದ ಒಂದು ಪದವನ್ನು ನಾನು ಉದ್ದೇಶಪೂರ್ವಕವಾಗಿ ಬಿಟ್ಟುಬಿಟ್ಟಿದ್ದೇನೆ. ಅದೇನೆಂದು ಕೊನೆಯಲ್ಲಿ ಹೇಳುತ್ತೇನೆ.</p>
<p>ಈ ಕನ್ನಡ ಪಾಂಡಿತ್ಯ ಪ್ರದರ್ಶನ ಬಿಟ್ಟು ನಮ್ಮ ಮೂಲ ವಿಷಯಕ್ಕೆ ಬರೋಣ. ವಿಮಾನದಲ್ಲಿ ಕೇವಲ vegetarian ಎಂದು ಬರೆಸಿದರೆ ಏನಾಗುತ್ತದೆ ಎಂದು ಹೇಳಿದ್ದೇನೆ. ಈ ವಿಷಯ ಗೊತ್ತಿದ್ದ ನಾನು ಯಾವಾಗಲೂ strictly vegetarian ಎಂದು ಬರೆಸುತ್ತೇನೆ. ಒಮ್ಮೆ ಫ್ರಾಂಕ್‌ಫರ್ಟ್ ಮೂಲಕ ಅಮೇರಿಕಾಕ್ಕೆ ಹೋಗುವಾಗ ಇನ್ನೂ ಹೆಚ್ಚಿಗೆ ಸುರಕ್ಷಿತವಾಗಿರಲಿ ಎಂದುಕೊಂಡು strictly Indian vegetarian ಎಂದು ಬರೆಸಿದ್ದೆ. ಅದರ ಪರಿಣಾಮ ಏನು ಗೊತ್ತೆ? ನನಗೆ ಊಟವೇ ಸಿಗಲಿಲ್ಲ. ಎಲ್ಲರಿಗೆ ಊಟ ಕೊಡುವಾಗ ನನಗೆ vegetarian meal ಎಂದು ಲೇಬಲ್ ಅಂಟಿಸಿದ್ದ ಡಬ್ಬಿ ಬರುತಿತ್ತು. ಅದರೊಳಗಡೆ ಕೆಲವು ಎಲೆ ಮತ್ತು ಚಿಕ್ಕ ಗಿಡಗಳ ಕಾಂಡಗಳು ಇರುತಿದ್ದವು. ಗಿಡಗಳ ಕೊಂಬೆ ರೆಂಬೆಗಳನ್ನೇ ತಿನ್ನಬೇಕಾಯಿತು. ಸಸ್ಯಗಳ ಕೊಂಬೆ ರೆಂಬೆ ಎಲೆಗಳು ಎಂದು ಹೇಳಿದುದನ್ನು ನೆನಪಿಟ್ಟುಕೊಳ್ಳಿ. ಯಾಕೆ ಎಂದು ಕೊನೆಯಲ್ಲಿ ಹೇಳುತ್ತೇನೆ.</p>
<p>ನಮಗೆಲ್ಲ ಹೋಟೆಲಿಗೆ ಹೋದಾಗ ಸಲಾಡ್ ತಿಂದು ಅಭ್ಯಾಸ ಇದೆ ತಾನೆ? ನಮ್ಮ ಪ್ರಕಾರ ಸಲಾಡ್ ಎಂದರೆ ಕತ್ತರಿಸಿದ ಹಸಿ ತರಕಾರಿ. ಆದರೆ ಅಮೇರಿಕಾದಲ್ಲಿ ಸಲಾಡ್ ಎಂದರೆ ನನಗೆ ವಿಮಾನದಲ್ಲಿ ಕೊಟ್ಟಂತಹ ಊಟ. ಅದರಲ್ಲಿ ಯಾವುದೇ ತರಕಾರಿ ಇರುವುದಿಲ್ಲ. ಗಿಡಮರಗಳ ಕೊಂಬೆರೆಂಬೆ ಮತ್ತುಎಲೆಗಳು ಮಾತ್ರ ಇರುತ್ತವೆ. ಸಲಾಡ್ ತಿಂದು ಹೊಟ್ಟೆಯೇನೋ ತುಂಬಬಹುದು. ಆದರೆ ಅದರಲ್ಲಿ ನಿಮ್ಮ ದೇಹವೆಂಬ ಯಂತ್ರವನ್ನು ನಡೆಸಲು ಬೇಕಾಗುವ ಕ್ಯಾಲೊರಿ ಇರುವುದಿಲ್ಲ. ಗುಡಾಣದಂತಹ ದೇಹ ಹೊತ್ತ ಅಮೆರಿಕನರಿಗೆ ಕ್ಯಾಲೊರಿಯಿಲ್ಲದೆ ಕೇವಲ ಹೊಟ್ಟೆ ತುಂಬಿಸಲು ಮಾತ್ರ ಅವರ ಸಲಾಡ್ ಪ್ರಯೋಜನಕಾರಿ. ನಮ್ಮಂತಹ ಶಾಕಾಹಾರಿಗಳಿಗಲ್ಲ.</p>
<p>ನಾನು ಪ್ರಾರಂಭಿಸಿದಲ್ಲಿಗೆ ಅಂದರೆ ತೈವಾನಿಗೆ ಮತ್ತೊಮ್ಮೆ ಹೋಗೋಣ. ನಾನು ಶಾಕಾಹಾರಿ ಎಂದು ತಿಳಿದ ನನ್ನ ಸಹೋದ್ಯೋಗಿಗಳು ಒಂದು ಒಳ್ಳೆಯ ಕೆಲಸ ಮಾಡಿದರು. ನನ್ನ ಪ್ರಯೋಗಾಲಯದಲ್ಲೇ, ನನ್ನ ವಿಭಾಗದಲ್ಲೇ ಎಂಎಸ್‌ಸಿ ಮಾಡುತ್ತಿದ್ದ ಯೀ ಶಿನ್ ಲೀ ಎಂಬ ಒಬ್ಬ ಬೌದ್ಧ ಧರ್ಮದ ಹುಡುಗಿಯನ್ನು ಪರಿಚಯಿಸಿದರು. ನಮ್ಮ ವಿಶ್ವವಿದ್ಯಾಲಯದ ಸುತ್ತಮುತ್ತ ಇರುವ ಎಲ್ಲ ಶಾಕಾಹಾರಿ ಹೋಟೆಲುಗಳನ್ನು ನನಗೆ ಪರಿಚಯಿಸುವ ಕೆಲಸವನ್ನೂ ಆಕೆಗೆ ವಹಿಸಿದರು. ತೈವಾನಿನಲ್ಲಿ ಬೌದ್ಧ ಧರ್ಮೀಯರ ಹೋಟೆಲುಗಳು ತುಂಬ ಇವೆ ಎಂದು ನನಗೆ ಆಗಲೇ ಗೊತ್ತಾದುದು. ಈ ಹೋಟೆಲುಗಳಲ್ಲಿ ಅಪ್ಪಟ ಸಸ್ಯಾಹಾರಿ ಆಹಾರ ಮಾತ್ರ ಸಿಗುತ್ತದೆ. ಎಲ್ಲ ನಮೂನೆಯ ಅಕ್ಕಿ, ತರಕಾರಿ, ಸಸ್ಯಗಳ ಕೊಂಬೆ ರೆಂಬೆ ಎಲೆಗಳನ್ನೆಲ್ಲ ಬೇಯಿಸಿ (ಬೇರೆ ಬೇರೆಯಾಗಿ, ಒಟ್ಟಿಗೆ ಅಲ್ಲ) ಇಟ್ಟಿರುತ್ತಾರೆ. ನಮಗೆ ಬೇಕಾದುದನ್ನು ಬೇಕಾದಷ್ಟು ತಟ್ಟೆಯಲ್ಲಿ ಹಾಕಿಕೊಂಡು ಕೊನೆಗೆ ಕೌಂಟರ್‌ಗೆ ಹೋದಾಗ ಒಂದು ಯಂತ್ರದಲ್ಲಿ ತೂಕ ನೋಡಿ ಬಿಲ್ಲು ಮಾಡುತ್ತಾರೆ. ಎಲ್ಲ ನಮೂನೆಯ ಆಹಾರಕ್ಕೂ ತೂಕ ಪ್ರಕಾರ ಒಂದೇ ಬೆಲೆ! ಸಸ್ಯಗಳ ಕೊಂಬೆ ರೆಂಬೆ ಎಲೆಗಳು ಎಂದು ಹೇಳಿದುದನ್ನು ನೆನಪಿಟ್ಟುಕೊಳ್ಳಿ. ಯಾಕೆ ಎಂದು ಕೊನೆಯಲ್ಲಿ ಹೇಳುತ್ತೇನೆ.</p>
<p>ತೈವಾನಿನ ವಾಸ ಮುಗಿಯುತ್ತ ಬಂದಂತೆ ನನಗೆ ಇನ್ನೊಂದು ಭೋಜನಕೂಟದಲ್ಲಿ ಭಾಗವಹಿಸಬೇಕಾಗಿ ಬಂತು. ಪ್ರಯೋಗಾಲಯದ ಎಲ್ಲರಿಗೂ ನಮ್ಮ ಬಾಸ್ ವರ್ಷಕ್ಕೊಮ್ಮೆ ಪಾರ್ಟಿ ನೀಡುವ ಪದ್ಧತಿ. ಅದರಂತೆ ಭೋಜನಕೂಟ ಇತ್ತು. ಈ ಸಲ ಏನು ನೋಡಬೇಕಾಗುತ್ತೋ ಎಂದು ಹೆದರಿಕೊಂಡೇ ಹೋದೆ. ಸ್ವಾಗತ ಭೋಜನಕೂಟಕ್ಕಿಂತ ಇದ ಭಿನ್ನವಾಗೇನೂ ಇರಲಿಲ್ಲ. ಆದರೆ ಶಾಕಾಹಾರವೂ ಸಿಗುವಂತಹ ಹೋಟೆಲನ್ನು ಆಯ್ದುಕೊಂಡಿದ್ದರು. ಜೊತೆಗೆ ಧೈರ್ಯಕ್ಕೆ ಶುದ್ಧ ಶಾಕಾಹಾರಿಯಾದ ಯೀ ಶಿನ್ ಲೀ ಇದ್ದಳಲ್ಲ. ಆಕೆಯೇ ಒಂದೊಂದಾಗಿ ಶಾಕಾಹಾರಿ ತಿಂಡಿಗಳನ್ನು ನಮ್ಮಿಬ್ಬರಿಗೆ ಆರ್ಡರ್ ಮಾಡಿದಳು. ಅವು ಬಂದಂತೆಲ್ಲ ನಾನು ಅವುಗಳ ಬಗ್ಗೆ ವಿವರಣೆ ಕೇಳುತ್ತಿದ್ದೆ. ಆಕೆ ಹೇಳುತ್ತಿದ್ದಳು. ಮೊದಲಿಗೆ ಬಂದುದರ ಬಗ್ಗೆ ಹೇಳಿದಳು -ಇದು sea weed ಎಂದು. ಹಾಗೆಂದರೆ ಸಮುದ್ರಕಳೆ ಅಥವಾ ಸಮುದ್ರದಲ್ಲಿ ಬೆಳೆಯುವ ಪಾಚಿ, ಜೊಂಡು ಎಂದು ಮೈಸೂರು ವಿಶ್ವವಿದ್ಯಾನಿಲಯದವರು ಪ್ರಕಟಿಸಿದ ನಿಘಂಟುವಿನಲ್ಲಿ ವಿವರಣೆ ನೀಡಲಾಗಿದೆ. ತಂತರ ಬಂದುದು ಬೆತ್ತದ ತುಂಡುಗಳಂತೆ ಇದ್ದವು. ಅವು ಎಳೆ ಬಿದಿರಿನ ಜಾತಿಯ ಸಸ್ಯ ಎಂದು ತಿಳಿಯಿತು. ಹೀಗೆ ಹಲವಾರು ರೀತಿಯ ಸಸ್ಯಗಳ ಕೊಂಬೆ ರೆಂಬೆಗಳನ್ನು ತಿಂದುದಾಯಿತು. ನನ್ನ ಹೊಟ್ಟೆಯ ಜೀರ್ಣಶಕ್ತಿ ಚೆನ್ನಾಗಿಯೇ ಇತ್ತು.</p>
<p>ಈಗ ನಮ್ಮ ಶುದ್ಧಾಶುದ್ಧ ಕನ್ನಡದ ಚರ್ಚೆಯನ್ನು ಮುಂದುವರಿಸೋಣ. ಶಾಕಾಹಾರಿ ಎಂಬ ಪದವನ್ನು ಕೆಲವರು ತಪ್ಪಾಗಿ ಶಾಖಾಹಾರಿ ಎಂದು ಬರೆಯುತ್ತಾರೆ. ಹೋಟೆಲುಗಳ ಬೋರ್ಡುಗಳಲ್ಲೂ ಇದೇ ತಪ್ಪು ಕಾಣಸಿಗುತ್ತದೆ. ಸಂಸ್ಕೃತದಲ್ಲಿ ಶಾಕ ಎಂದರೆ ತರಕಾರಿ, ಕಾಯಿಪಲ್ಯೆ ಎಂದು ಅರ್ಥವಿದೆ. ಶಾಕ + ಆಹಾರ = ಶಾಕಾಹಾರ. ಇದು ಸವರ್ಣದೀರ್ಘ ಸಂಧಿ. ಶಾಖ ಎಂದರೆ ಕೊಂಬೆ ರೆಂಬೆ ಮತ್ತು ಉಷ್ಣ ಎಂಬ ಅರ್ಥಗಳಿವೆ. ಶಾಖಾಹಾರ ಎಂದರೆ ಕೊಂಬೆ ರೆಂಬೆಗಳನ್ನು ಆಹಾರವೆಂದು ತಿನ್ನುವುದು ಎಂಬ ಅರ್ಥ ಬರುತ್ತದೆ. ಈಗ ಹೇಳಿ. ನಾನು ತೈವಾನಿನಲ್ಲಿ ಮತ್ತು ವಿಮಾನಯಾನದಲ್ಲಿ ತಿಂದದ್ದು ಶಾಕಾಹಾರವೋ ಶಾಖಾಹಾರವೋ? ಎರಡೂ ಸರಿಯೆನ್ನುತ್ತೀರಾ?</p><p>The post <a href="http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b6%e0%b2%be%e0%b2%95%e0%b2%be%e0%b2%b9%e0%b2%be%e0%b2%b0%e0%b2%bf%e0%b2%af%e0%b3%8b-%e0%b2%b6%e0%b2%be%e0%b2%96%e0%b2%be%e0%b2%b9%e0%b2%be%e0%b2%b0%e0%b2%bf%e0%b2%af%e0%b3%8b/">ಶಾಕಾಹಾರಿಯೋ ಶಾಖಾಹಾರಿಯೋ?</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%b9%e0%b2%be%e0%b2%b8%e0%b3%8d%e0%b2%af/%e0%b2%b6%e0%b2%be%e0%b2%95%e0%b2%be%e0%b2%b9%e0%b2%be%e0%b2%b0%e0%b2%bf%e0%b2%af%e0%b3%8b-%e0%b2%b6%e0%b2%be%e0%b2%96%e0%b2%be%e0%b2%b9%e0%b2%be%e0%b2%b0%e0%b2%bf%e0%b2%af%e0%b3%8b/feed/</wfw:commentRss>
			<slash:comments>13</slash:comments>
		
		
			</item>
	</channel>
</rss>

<!--
Performance optimized by W3 Total Cache. Learn more: https://www.boldgrid.com/w3-total-cache/?utm_source=w3tc&utm_medium=footer_comment&utm_campaign=free_plugin

Page Caching using Disk: Enhanced 

Served from: vishvakannada.com @ 2026-07-31 13:45:18 by W3 Total Cache
-->