<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ವಿಮರ್ಶೆ | Vishva Kannada</title>
	<atom:link href="http://vishvakannada.com/category/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/feed/" rel="self" type="application/rss+xml" />
	<link>http://vishvakannada.com</link>
	<description></description>
	<lastBuildDate>Mon, 25 May 2020 13:48:47 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.3.8</generator>
	<item>
		<title>ಕಡಿಮೆ ವೆಚ್ಚದಲ್ಲಿ ವಿದೇಶ ಪ್ರಯಾಣಕ್ಕೊಂದು ಕೈಪಿಡಿ</title>
		<link>http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%95%e0%b2%a1%e0%b2%bf%e0%b2%ae%e0%b3%86-%e0%b2%b5%e0%b3%86%e0%b2%9a%e0%b3%8d%e0%b2%9a%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b5%e0%b2%bf%e0%b2%a6%e0%b3%87%e0%b2%b6-%e0%b2%aa/</link>
					<comments>http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%95%e0%b2%a1%e0%b2%bf%e0%b2%ae%e0%b3%86-%e0%b2%b5%e0%b3%86%e0%b2%9a%e0%b3%8d%e0%b2%9a%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b5%e0%b2%bf%e0%b2%a6%e0%b3%87%e0%b2%b6-%e0%b2%aa/#respond</comments>
		
		<dc:creator><![CDATA[pavanaja]]></dc:creator>
		<pubDate>Sun, 15 Dec 2019 11:17:44 +0000</pubDate>
				<category><![CDATA[ವಿಮರ್ಶೆ]]></category>
		<category><![CDATA[Shrinidhi Hande]]></category>
		<category><![CDATA[world travel in budget]]></category>
		<category><![CDATA[ಪುಸ್ತಕ ವಿಮರ್ಶೆ]]></category>
		<category><![CDATA[ವಿದೇಶ ಪ್ರವಾಸ]]></category>
		<category><![CDATA[ಶ್ರೀನಿಧಿ ಹಂದೆ]]></category>
		<guid isPermaLink="false">http://vishvakannada.com/?p=1434</guid>

					<description><![CDATA[<p>ಶ್ರೀನಿಧಿ ಹಂದೆಯವರ “ವಿಶ್ವ ದರ್ಶನ, ಬಜೆಟ್‌ನಲ್ಲಿ” ಪುಸ್ತಕ &#160; ಕನ್ನಡದಲ್ಲಿ ಪ್ರವಾಸ ಸಾಹಿತ್ಯ ವಿಪುಲವಾಗಿದೆ. ೧೯ನೆಯ ಶತಮಾನದಲ್ಲೇ ಪ್ರವಾಸಗಳ ಬಗ್ಗೆ ಪುಸ್ತಕಗಳು ಕನ್ನಡದಲ್ಲಿ ಬಂದಿವೆ. ಪುಸ್ತಕಗಳಿಗೆ ಪ್ರಶಸ್ತಿ ನೀಡುವಾಗಲೂ ಪ್ರವಾಸ ಸಾಹಿತ್ಯ ಎಂಬ ಪ್ರತ್ಯೇಕ&#8230;</p>
<p>The post <a href="http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%95%e0%b2%a1%e0%b2%bf%e0%b2%ae%e0%b3%86-%e0%b2%b5%e0%b3%86%e0%b2%9a%e0%b3%8d%e0%b2%9a%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b5%e0%b2%bf%e0%b2%a6%e0%b3%87%e0%b2%b6-%e0%b2%aa/">ಕಡಿಮೆ ವೆಚ್ಚದಲ್ಲಿ ವಿದೇಶ ಪ್ರಯಾಣಕ್ಕೊಂದು ಕೈಪಿಡಿ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<h2><strong>ಶ್ರೀನಿಧಿ ಹಂದೆಯವರ “ವಿಶ್ವ ದರ್ಶನ, ಬಜೆಟ್‌ನಲ್ಲಿ” ಪುಸ್ತಕ<br />
</strong></h2>
<p>&nbsp;</p>
<p>ಕನ್ನಡದಲ್ಲಿ ಪ್ರವಾಸ ಸಾಹಿತ್ಯ ವಿಪುಲವಾಗಿದೆ. ೧೯ನೆಯ ಶತಮಾನದಲ್ಲೇ ಪ್ರವಾಸಗಳ ಬಗ್ಗೆ ಪುಸ್ತಕಗಳು ಕನ್ನಡದಲ್ಲಿ ಬಂದಿವೆ. ಪುಸ್ತಕಗಳಿಗೆ ಪ್ರಶಸ್ತಿ ನೀಡುವಾಗಲೂ ಪ್ರವಾಸ ಸಾಹಿತ್ಯ ಎಂಬ ಪ್ರತ್ಯೇಕ ವಿಭಾಗವನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತಿದೆ. ಅವೆಲ್ಲಾ ಸರಿ. ಅದರೆ ಪ್ರವಾಸ ಮಾಡುವುದು ಹೇಗೆ, ಅದರಲ್ಲೂ ಅತಿ ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡುವುದು ಹೇಗೆ, ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ಅತಿ ಕಡಿಮೆ ಖರ್ಚಿನಲ್ಲಿ ವಿದೇಶ ಪ್ರವಾಸ ಮಾಡುವುದು ಹೇಗೆ ಎಂದು ಯಾರಾದರೂ ಪುಸ್ತಕ ಬರೆದುದು ನನಗೆ ತಿಳಿದಿಲ್ಲ. ಈ ಕೊರತೆಯನ್ನು ಈಗ ಶ್ರೀನಿಧಿ ಹಂದೆ ತುಂಬಿಸಿದ್ದಾರೆ.<a href="http://vishvakannada.com/wp-content/uploads/2019/12/VishvaDarshanaBudgetnalli-01.jpg"><img decoding="async" fetchpriority="high" class="alignright size-medium wp-image-1436" src="http://vishvakannada.com/wp-content/uploads/2019/12/VishvaDarshanaBudgetnalli-01-188x300.jpg" alt="VishvaDarshanaBudgetnalli-01" width="188" height="300" srcset="http://vishvakannada.com/wp-content/uploads/2019/12/VishvaDarshanaBudgetnalli-01-188x300.jpg 188w, http://vishvakannada.com/wp-content/uploads/2019/12/VishvaDarshanaBudgetnalli-01-768x1228.jpg 768w, http://vishvakannada.com/wp-content/uploads/2019/12/VishvaDarshanaBudgetnalli-01-640x1024.jpg 640w" sizes="(max-width: 188px) 100vw, 188px" /></a></p>
<p>&nbsp;</p>
<p>ಶ್ರೀನಿಧಿ ಹಂದೆ ಹೊಸ ತಲೆಮಾರಿನ ಲೇಖಕರು. ಲೇಖಕರು ಅಂದ ತಕ್ಷಣ ಪತ್ರಿಕೆಗಳಲ್ಲಿ ಲೇಖನ ಬರೆಯುವವರು, ಪುಸ್ತಕ ಬರೆಯುವವರು ಎಂದೆಲ್ಲಾ ಆಲೋಚನೆ ಬರುತ್ತದೆ ತಾನೆ? ಆದರೆ ಇವರು ಹಾಗಲ್ಲ. ಇವರ ಲೇಖನಗಳೇನಿದ್ದರೂ ಅಂತರಜಾಲದಲ್ಲಿ ಪ್ರಕಟವಾದವು. ಇ-ಲೋಕದಲ್ಲಿ ಇವರ ಹೆಸರು ಸುಪರಿಚಿತ. ಪ್ರವಾಸದ ಬಗ್ಗೆ ಹಲವು ವರ್ಷಗಳಿಂದ ಬ್ಲಾಗ್ ನಡೆಸಿಕೊಂಡು ಬರುತ್ತಿದ್ದಾರೆ. ಯಾವುದಾದರೊಂದು ದೇಶ ಅಥವಾ ಅಲ್ಲಿಯ ನಗರಕ್ಕೆ ಪ್ರವಾಸ ಹೋಗುವ ಮೊದಲು ಅಂತರಜಾಲದಲ್ಲಿ ಆ ನಗರದ ಬಗ್ಗೆ ಮಾಹಿತಿ ಹುಡುಕಿದರೆ ದೊರೆಯುವ ಜಾಲತಾಣಗಳಲ್ಲಿ ಶ್ರೀನಿಧಿ ಹಂದೆಯವರ ಜಾಲತಾಣವೂ ಇರುತ್ತದೆ. ಇವರ ಬಹುತೇಕ ಬ್ಲಾಗ್‌ಗಳು ಒಂದು ರೀತಿಯಲ್ಲಿ ಓದುಗ ಸ್ನೇಹಿ. ಓದುಗ ಏನನ್ನು ಹುಡುಕುತ್ತಿದ್ದಾನೋ ಅದುವೇ ಇವರ ಬ್ಲಾಗಿನಲ್ಲಿ ಕಂಡು ಬರುತ್ತದೆ. ಹೋಗಬೇಕಾದ ನಗರದಲ್ಲಿ ಕಡಿಮೆ ಖರ್ಚಿನಲ್ಲಿ ವಸತಿ ಹೇಗೆ, ವೀಸಾ ಪಡೆಯುವುದು ಹೇಗೆ, ಅದಕ್ಕೆ ಎಷ್ಟು ಖರ್ಚಾಗುತ್ತದೆ, ಹೀಗೆ ಹಲವು ಹಲವು ಹತ್ತು ಮಾಹಿತಿಗಳು ಇವರ ಬ್ಲಾಗಿನಲ್ಲಿ ದೊರೆಯುತ್ತವೆ. ನಾನೂ ಕೆಲವೊಮ್ಮೆ ಇವರ ಬ್ಲಾಗಿನಿಂದ ಮಾಹಿತಿ ಪಡೆದಿದ್ದೇನೆ. ಉದಾಹರಣೆಗೆ ಶ್ರೀಲಂಕ ಪ್ರವಾಸ ಮಾಡಬೇಕಾದಾಗ.</p>
<p>&nbsp;</p>
<p>ಈ ಎಲ್ಲ ಮಾಹಿತಿಗಳು ಇವರ ಬ್ಲಾಗಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿವೆ. ಮೂಲತಃ ಉಡುಪಿ ಪಕ್ಕದವರಾದ ಶ್ರೀನಿಧಿ ಹಂದೆ ತಮ್ಮ ಮಾತೃಭಾಷೆಯಾದ ಕನ್ನಡದಲ್ಲೂ ಅಷ್ಟೇ ಚೆನ್ನಾಗಿ ಬರೆಯಬಲ್ಲವರು. ಕಂಗ್ಲಿಷಿನಲ್ಲಿ ಬರೆದರೆ ನನಗೆ ನಖಶಿಖಾಂತ ಸಿಟ್ಟು ಬರುತ್ತದೆ ಎಂದು ಗೊತ್ತಿರುವ ಶ್ರೀನಿಧಿ ಹಂದೆ ನನ್ನ ಫೇಸ್‌ಬುಕ್ ಪೋಸ್ಟಿಗೆ ಅಥವಾ ನನ್ನ ಬ್ಲಾಗಿಗೆ ಶುದ್ಧ ಕನ್ನಡದಲ್ಲೇ ಪ್ರತಿಕ್ರಿಯಿಸುತ್ತಾರೆ. ಕೆಲವೊಮ್ಮೆ ಕನ್ನಡದಲ್ಲೇ ಸ್ವಾರಸ್ಯಕರವಾದ ಪೋಸ್ಟ್ ಹಾಕುತ್ತಿರುತ್ತಾರೆ. ಅಂತರಜಾಲದಲ್ಲಿ, ಫೇಸ್‌ಬುಕ್‌ನಲ್ಲಿ, ಬ್ಲಾಗ್ಗ್ ಲೋಕದಲ್ಲಿ ಸಕ್ರಿಯರಾಗಿರುವವರಿಗೆ ಶ್ರೀನಿಧಿ ಹಂದೆ ಚಿರಪರಿಚಿತರು. ಚೆನ್ನಾಗಿ ಕನ್ನಡ ಭಾಷೆಯಲ್ಲಿ ಬರೆಯಬಲ್ಲ ಇವರು ತಮ್ಮ ಬ್ಲಾಗಿನಲ್ಲೇನೋ ಇಂಗ್ಲಿಷ್ ಭಾಷೆಯಲ್ಲಿ ಮಾಹಿತಿ ನೀಡುತ್ತಿರುತ್ತಾರೆ. ಕನ್ನಡಿಗರಿಗೆ ಈ ಎಲ್ಲ ಮಾಹಿತಿ ಪಡೆಯುವ ಭಾಗ್ಯ ಏಕಿಲ್ಲ ಎಂಬ ಪ್ರಶ್ನೆಗೆ ಉತ್ತರ ರೂಪವಾಗಿ ಈಗ ಈ ಪುಸ್ತಕ ಹೊರಬರುತ್ತಿದೆ.</p>
<p>&nbsp;</p>
<p>ಕನ್ನಡದ ಇತರೆ ಪ್ರವಾಸ ಸಾಹಿತ್ಯಕ್ಕೂ ಈ ಪುಸ್ತಕಕ್ಕೂ ಒಂದು ಪ್ರಮುಖ ವ್ಯತ್ಯಾಸವಿದೆ. ಇದು ಪ್ರವಾಸಕಥನವಲ್ಲ. ಪ್ರವಾಸ ಮಾಡುವುದು ಹೇಗೆ ಎಂದು ವಿವರಿಸುವ ಒಂದು ಪುಸ್ತಕ. ಕೈಪಿಡಿ ಎಂದೂ ಕರೆಯಬಹುದು. ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗುವ do it yourself ಮಾದರಿಯ ಪುಸ್ತಕ ಎನ್ನಬಹುದು. ನನಗೆ ತಿಳಿದಂತೆ ಕನ್ನಡದಲ್ಲಿ ಯಾರೂ ಇದು ತನಕ ಇಂತಹ ಪುಸ್ತಕ ಬರೆದಿಲ್ಲ. ಪ್ರವಾಸ ಮಾಡುವುದು ಹೇಗೆ ಎಂಬುದನ್ನು ಮಾತ್ರವಲ್ಲ, ಅತಿ ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡುವುದು ಹೇಗೆ ಎಂಬುದನ್ನು ಶ್ರೀನಿಧಿ ಹಂದೆಯವರು ೩೯ ದೇಶ ಪ್ರವಾಸ ಮಾಡಿದ ತಮ್ಮದೇ ಅನುಭವದ ಆಧಾರದಲ್ಲಿ ವಿವರಿಸುತ್ತಾರೆ. ವೀಸಾ, ವಿಮಾನ ಟಿಕೆಟ್, ವಿದೇಶೀ ವಿನಿಮಯ, ವಸತಿ, ಆಹಾರ, ಇತ್ಯಾದಿ ಎಲ್ಲ ಅಗತ್ಯ ವಿಭಾಗಗಳನ್ನು ಸರಳವಾದ ಮಾತಿನಲ್ಲಿ ಬಿಚ್ಚಿಡುತ್ತಾರೆ. ಪ್ರಕಾಂಡ ಪಂಡಿತರು ಮಾಡುವಂತೆ ತಮ್ಮ ಪಾಂಡಿತ್ಯ ಪ್ರದರ್ಶನ ಇಲ್ಲಿಲ್ಲ. ಹೇಳಬೇಕಾದ ವಿಷಯವನ್ನು ಸರಳವಾಗಿ ಸುಲಭವಾಗಿ ಮನದಟ್ಟು ಮಾಡುವಂತೆ ಬರೆಯಲಾಗಿದೆ.</p>
<p><a href="http://vishvakannada.com/wp-content/uploads/2019/12/VishvaDarshanaBudgetnalli-02.jpg"><img decoding="async" class="alignright size-medium wp-image-1439" src="http://vishvakannada.com/wp-content/uploads/2019/12/VishvaDarshanaBudgetnalli-02-191x300.jpg" alt="VishvaDarshanaBudgetnalli-02" width="191" height="300" srcset="http://vishvakannada.com/wp-content/uploads/2019/12/VishvaDarshanaBudgetnalli-02-191x300.jpg 191w, http://vishvakannada.com/wp-content/uploads/2019/12/VishvaDarshanaBudgetnalli-02-768x1207.jpg 768w, http://vishvakannada.com/wp-content/uploads/2019/12/VishvaDarshanaBudgetnalli-02-652x1024.jpg 652w" sizes="(max-width: 191px) 100vw, 191px" /></a></p>
<p>ಪುಸ್ತಕದ ಸಾಫ್ಟ್‌ಕಾಪಿ ದೊರೆತ ತಕ್ಷಣ ನಾನು ಮೊದಲು  ಲಂಘನ ಮಾಡಿದ್ದು ಆಹಾರ  ಎಂಬ ವಿಭಾಗಕ್ಕೆ. ಇದಕ್ಕೆ ಕಾರಣವಿದೆ. ಶ್ರೀನಿಧಿ ಹಂದೆಯವರು ನನ್ನಂತೆ ಅಪ್ಪಟ ಸಸ್ಯಾಹಾರಿಗಳು. ಭಾರತೀಯರ ಪ್ರಕಾರ ಸಸ್ಯಾಹಾರವೆಂದರೆ ಮೊಟ್ಟೆ ಮೀನು ಎಲ್ಲ ಇಲ್ಲ. ಆದರೆ ಹಲವು ವಿದೇಶೀಯರ ಪ್ರಕಾರ ಮೊಟ್ಟೆ ಮೀನು ಎಲ್ಲ ಮಾಂಸಾಹಾರಗಳಲ್ಲ. ಆದುದರಿಂದ ವಿದೇಶ ಪ್ರಯಾಣ ಮಾಡುವಾಗ, ವಿಮಾನದಲ್ಲಿ, ರೆಸ್ಟಾರೆಂಟುಗಳಲ್ಲಿ ಅಪ್ಪಟ ಸಸ್ಯಾಹಾರ ಪಡೆಯಲು ಸರ್ಕಸ್ ಮಾಡಬೇಕಾಗುತ್ತದೆ. ನನಗೆ ಇದು ಅನುಭವವಾಗಿದೆ. ಆ ಬಗ್ಗೆ ಒಂದು ಲೇಖನವನ್ನೇ ಬರೆದಿದ್ದೆ. ಶ್ರೀನಿಧಿ ಹಂದೆ ಈ ಬಗ್ಗೆ ಏನನ್ನು ಬರೆದಿದ್ದಾರೆ ಎಂದು ಓದುವ ಕುತೂಹಲ. ನಿರಾಸೆಯೇನೂ ಆಗಲಿಲ್ಲ. ಭಾರತೀಯರಿಗೆ, ಅದರಲ್ಲೂ ಸಸ್ಯಾಹಾರಿಗಳಿಗೆ, ವಿದೇಶ ಪ್ರಯಾಣ ಮಾಡುವಾಗ ಆಹಾರದ ಬಗ್ಗೆ ಏನೇನು ಎಚ್ಚರಿಕೆ ತೆಗೆದುಕೊಳ್ಳಬೇಕು, ಸಸ್ಯಾಹಾರ ಹುಡುಕುವುದು, ಪಡೆಯುವುದು ಹೇಗೆ ಎಂದೆಲ್ಲ ವಿವರಿಸಿದ್ದಾರೆ. ಆದರೆ ನಮ್ಮೂರಿನ ಎಂಟಿಆರ್ ಅಥವಾ ಮಯ್ಯಾಸ್‌ನವರ ready to eat ಗಳನ್ನು ಇಲ್ಲಿಂದಲೇ ತೆಗೆದುಕೊಂಡು ಹೋಗುವ ಬಗ್ಗೆ ಈ  ಪುಸ್ತಕದಲ್ಲಿ ಅವರು ಸೇರಿಸಿಲ್ಲ. ಅದಕ್ಕೆ ಪ್ರಮುಖ ಕಾರಣ ಬಹುಶಃ ಇದು ಅತಿ ಕಡಿಮೆ ಖರ್ಚಿನಲ್ಲಿ ಮಾಡುವ ಪ್ರಯಾಣಗಳ ಬಗೆಗೆ ವಿವರಿಸುವ ಪುಸ್ತಕ. ಅಂದರೆ ಸಾದ್ಯವಿದ್ದಷ್ಟು ಚೆಕ್-ಇನ್ ಲಗ್ಗೇಜು ಇಲ್ಲದೆ ಕೇವಲ ಹ್ಯಾಂಡ್‌ಬ್ಯಾಗ್ ಮಾತ್ರವನ್ನೇ ಹಿಡಿದುಕೊಂಡು ಹೋಗುವ ಪ್ರಯಾಣ. ಅಗ ತುಂಬ ಆಹಾರ ತೆಗೆದುಕೊಂಡು ಹೋಗಲು ಆಗುವುದಿಲ್ಲ.</p>
<p>&nbsp;</p>
<p>ಶ್ರೀನಿಧಿ ಹಂದೆಯವರು ತಮ್ಮ ಎಲ್ಲಾ ಪ್ರವಾಸಗಳ ಬಗ್ಗೆ ಬ್ಲಾಗ್ ಬರೆಯುವಾಗ ತಪ್ಪದೆ ಒಂದು ವಿಷಯ ಸೇರಿಸಿರುತ್ತಾರೆ. ಅದೆಂದರೆ ತಾವು ಭೇಟಿ ನೀಡಿದ ದೇಶ, ನಗರದಲ್ಲಿ ಎಳನೀರು ದೊರೆಯುತ್ತದೆಯೇ, ದೊರೆಯುವುದಿದ್ದರೆ ಅದರ ಬೆಲೆ ಎಷ್ಟು, ಎಂದು. ನಾವಂತೂ ಫೇಸ್‌ಬುಕ್‌ನಲ್ಲಿ ಅವರನ್ನು ಎಳನೀರಿನ ಬ್ರ್ಯಾಂಡ್ ಅಂಬಾಸಿಡರ್ ಎಂದು ಗೇಲಿ ಮಾಡುತ್ತೇವೆ. ಈ ಬಗ್ಗೆ ಅವರ ಪುಸ್ತಕದಲ್ಲಿ ಕೇವಲ ಒಂದು ಪ್ಯಾರಾ ಮಾತ್ರ ಬರೆದಿದ್ದಾರೆ. ಹಾಗೆ ನೋಡಿದರೆ ತಮ್ಮ ಅನುಭವಗಳ ಬಗ್ಗೆ ಚಿಕ್ಕದಾಗಿ ಒಂದು ಅಧ್ಯಾಯ ಮಾತ್ರ ಇದೆ. ಬಹುಶಃ ಈ ಅನುಭವಗಳನ್ನೇ ವಿಸ್ತರಿಸಿ ಇನ್ನೊಂದು ಅಥವಾ ಹಲವು ಪುಸ್ತಕಗಳನ್ನು ಮುಂದಕ್ಕೆ ಬರೆಯಬಹುದೇನೋ? ಹಾಗೆ ಮಾಡಿದರೆ ಅದು ಕನ್ನಡಕ್ಕೆ ಉತ್ತಮ ಕೊಡುಗೆಯಾಗಬಹುದು. ಉತ್ತಮ ಬರೆವಣಿಗೆ ಇರುವ ಶ್ರೀನಿಧಿ ಹಂದೆಯವರಿಂದ ನಾವು ಇದನ್ನು ನಿರೀಕ್ಷಿಸಲೂ ಬಹುದು.</p>
<p style="text-align: right;"><strong>&#8211; ಡಾ. ಯು. ಬಿ. ಪವನಜ</strong></p>
<p>ಅಮೆಝಾನ್ ಜಾಲಮಳಿಗೆಯಲ್ಲಿ ಪುಸ್ತಕ ಕೊಳ್ಳಲು <a href="https://amzn.to/2EkuzuW" target="_blank">ಇಲ್ಲಿ ಕ್ಲಿಕ್ ಮಾಡಿ</a>.</p><p>The post <a href="http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%95%e0%b2%a1%e0%b2%bf%e0%b2%ae%e0%b3%86-%e0%b2%b5%e0%b3%86%e0%b2%9a%e0%b3%8d%e0%b2%9a%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b5%e0%b2%bf%e0%b2%a6%e0%b3%87%e0%b2%b6-%e0%b2%aa/">ಕಡಿಮೆ ವೆಚ್ಚದಲ್ಲಿ ವಿದೇಶ ಪ್ರಯಾಣಕ್ಕೊಂದು ಕೈಪಿಡಿ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%95%e0%b2%a1%e0%b2%bf%e0%b2%ae%e0%b3%86-%e0%b2%b5%e0%b3%86%e0%b2%9a%e0%b3%8d%e0%b2%9a%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b5%e0%b2%bf%e0%b2%a6%e0%b3%87%e0%b2%b6-%e0%b2%aa/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಮುಂಬೈ ಅಣುಶಕ್ತಿ ಕೇಂದ್ರದಿಂದ ಕನ್ನಡದ &#034;ಬೆಳಗು&#034;</title>
		<link>http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%ae%e0%b3%81%e0%b2%82%e0%b2%ac%e0%b3%88-%e0%b2%85%e0%b2%a3%e0%b3%81%e0%b2%b6%e0%b2%95%e0%b3%8d%e0%b2%a4%e0%b2%bf-%e0%b2%95%e0%b3%87%e0%b2%82%e0%b2%a6%e0%b3%8d%e0%b2%b0%e0%b2%a6%e0%b2%bf%e0%b2%82/</link>
					<comments>http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%ae%e0%b3%81%e0%b2%82%e0%b2%ac%e0%b3%88-%e0%b2%85%e0%b2%a3%e0%b3%81%e0%b2%b6%e0%b2%95%e0%b3%8d%e0%b2%a4%e0%b2%bf-%e0%b2%95%e0%b3%87%e0%b2%82%e0%b2%a6%e0%b3%8d%e0%b2%b0%e0%b2%a6%e0%b2%bf%e0%b2%82/#comments</comments>
		
		<dc:creator><![CDATA[admin]]></dc:creator>
		<pubDate>Sat, 19 Aug 2006 14:30:59 +0000</pubDate>
				<category><![CDATA[ವಿಮರ್ಶೆ]]></category>
		<guid isPermaLink="false">http://localhost/vishwakannada/?p=278</guid>

					<description><![CDATA[<h3>- ಆರ್. ಜಿ. ಹಳ್ಳಿ ನಾಗರಾಜ್</h3>
<p><img src="http://www.vishvakannada.com/archives/photos/vol5no2/belagu.jpg" align="left">ಮಾಹಿತಿ ತಂತ್ರಜ್ಞಾನದ ಮೂಲಕ ವಿಶ್ವದ ವ್ಯವಹಾರವೆಲ್ಲ ನಡೆಯುತ್ತಿದೆಯೇನೋ ಅನ್ನುವ ಅನುಭವ, ತಿಳಿವಳಿಕೆ ಎಲ್ಲೆಲ್ಲೂ ಮನೆಮಾಡಿದೆ. ತಂತ್ರಜ್ಞಾನದ ಮೂಲಕ ಭಾರತದ ಒಂದೆರಡು ನಗರಗಳು ವಿಶ್ವಭೂಪಟದಲ್ಲಿ ಸ್ಥಾನ ಪಡೆದಿವೆ. ತಂತ್ರಜ್ಞಾನದ ಪ್ರಗತಿ ವಿಜ್ಞಾನದ ದಾಪುಗಾಲಿಗೆ ಮತ್ತೊಂದು ಹೆಸರು. ಮಾಹಿತಿ ತಂತ್ರಜ್ಞಾನದ ಇವೊತ್ತಿನ ಬಹುತೇಕ ಚರ್ಚೆಯನ್ನು ಬದಿಗಿರಿಸಿ, ವಿಜ್ಞಾನದಲ್ಲಿ ಹೊಸ ಪ್ರಯೋಗ, ಸಾಧನೆ ಮಾಡಿರುವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ ಬಾಹ್ಯಾಕಾಶ, ಅಣುಶಕ್ತಿ ಉತ್ಪಾದನೆ, ಅದರ ಸೂಕ್ತ ಬಳಕೆ ಭಾರತದ ಸಾಧನೆ ವಿಶ್ವಗಮನ ಸೆಳೆದದ್ದು ಇತಿಹಾಸ.</p>
<p>The post <a href="http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%ae%e0%b3%81%e0%b2%82%e0%b2%ac%e0%b3%88-%e0%b2%85%e0%b2%a3%e0%b3%81%e0%b2%b6%e0%b2%95%e0%b3%8d%e0%b2%a4%e0%b2%bf-%e0%b2%95%e0%b3%87%e0%b2%82%e0%b2%a6%e0%b3%8d%e0%b2%b0%e0%b2%a6%e0%b2%bf%e0%b2%82/">ಮುಂಬೈ ಅಣುಶಕ್ತಿ ಕೇಂದ್ರದಿಂದ ಕನ್ನಡದ "ಬೆಳಗು"</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p>&#8211; ಆರ್. ಜಿ. ಹಳ್ಳಿ ನಾಗರಾಜ್<br />
<img decoding="async" src="http://www.vishvakannada.com/archives/photos/vol5no2/belagu.jpg" alt="" align="left" />ಮಾಹಿತಿ ತಂತ್ರಜ್ಞಾನದ ಮೂಲಕ ವಿಶ್ವದ ವ್ಯವಹಾರವೆಲ್ಲ ನಡೆಯುತ್ತಿದೆಯೇನೋ ಅನ್ನುವ ಅನುಭವ, ತಿಳಿವಳಿಕೆ ಎಲ್ಲೆಲ್ಲೂ ಮನೆಮಾಡಿದೆ. ತಂತ್ರಜ್ಞಾನದ ಮೂಲಕ ಭಾರತದ ಒಂದೆರಡು ನಗರಗಳು ವಿಶ್ವಭೂಪಟದಲ್ಲಿ ಸ್ಥಾನ ಪಡೆದಿವೆ. ತಂತ್ರಜ್ಞಾನದ ಪ್ರಗತಿ ವಿಜ್ಞಾನದ ದಾಪುಗಾಲಿಗೆ ಮತ್ತೊಂದು ಹೆಸರು. ಮಾಹಿತಿ ತಂತ್ರಜ್ಞಾನದ ಇವೊತ್ತಿನ ಬಹುತೇಕ ಚರ್ಚೆಯನ್ನು ಬದಿಗಿರಿಸಿ, ವಿಜ್ಞಾನದಲ್ಲಿ ಹೊಸ ಪ್ರಯೋಗ, ಸಾಧನೆ ಮಾಡಿರುವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ ಬಾಹ್ಯಾಕಾಶ, ಅಣುಶಕ್ತಿ ಉತ್ಪಾದನೆ, ಅದರ ಸೂಕ್ತ ಬಳಕೆ ಭಾರತದ ಸಾಧನೆ ವಿಶ್ವಗಮನ ಸೆಳೆದದ್ದು ಇತಿಹಾಸ.</p>
<p>ಮುಂಬೈನಲ್ಲಿರುವ ಅಣುಶಕ್ತಿ ಕೇಂದ್ರದ ಸಂಶೋಧನಾಲಯದಲ್ಲಿರುವ ಹದಿನೈದು ಸಾವಿರಕ್ಕೂ ಮಿಕ್ಕಿ ನೌಕರರಲ್ಲಿ ಸಂಶೋಧನೆಗೆ ತೊಡಗಿದವರು ಬಹುಸಂಖ್ಯಾತರು. ಸಂಶೋಧನೆ ಜತೆಜತೆಗೇ ಭಾಷಾಭಿವೃದ್ಧಿ ಹಾಗೂ ಮಾತೃಭಾಷೆಗೆ ಸ್ಥಾನ ಕಲ್ಪಿಸಿಕೊಳ್ಳುವ ದೃಷ್ಟಿಯಿಂದ ಸಂಘಟಿತವಾದ ಭಾಭಾ ಪರಮಾಣು ಸಂಶೋಧನಾ ಕೇಂದ್ರದ ಕನ್ನಡ ಸಂಘ ವೈಜ್ಞಾನಿಕ ಅರಿವಿನ ವಿಚಾರಗಳ ಬೆಳೆ ಬಿತ್ತುವಲ್ಲಿ ಪ್ರಥಮ ಸ್ಥಾನ ಪಡೆದ ಹೆಮ್ಮೆಯ ಸಂಸ್ಥೆ. ಅಲ್ಲಿನ ಕನ್ನಡ ವಿಜ್ಞಾನಿಗಳ ಒಕ್ಕೂಟ ಕನ್ನಡ ಸಂಘ ರಚಿಸಿಕೊಂಡು ಸಾಂಸ್ಕೃತಿಕವಾಗಿ ಬೇರು ಬಿಟ್ಟಿದೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಜೀವಂತವಾಗಿರುವ ಈ ಸಂಘ ನಾಟಕಗಳು, ಭಾವಗೀತೆ, ಚರ್ಚಾಸ್ಪರ್ಧೆ, ಲೇಖನ-ಪ್ರಬಂಧಸ್ಪರ್ಧೆ ಇತ್ಯಾದಿ ನಡೆಸುತ್ತ &#8220;ಬೆಳಗು&#8221; ಎಂಬ ವಿಜ್ಞಾನ ಮಾಹಿತಿ ಒಳಗೊಂಡ ಕನ್ನಡ ಪತ್ರಿಕೆ ಪ್ರಕಟಿಸುತ್ತಾ ಬಂದಿರುವುದು ಪ್ರಶಂಸಾರ್ಹ. ಕನ್ನಡ ಭಾಷೆ ಬಗ್ಗೆ ಈ ಕೇಂದ್ರದ ವಿಜ್ಞಾನಿಗಳಿಗಿರುವ ಭಾಷಾಭಿಮಾನ, ಸ್ವಾಭಿಮಾನ, ಲೇಖನಗಳ ಉತ್ಕೃಷ್ಟತೆ, ವಿಷಯಗಳನ್ನು ನಿರೂಪಿಸುವ ವಿಧಾನ, ಸಾಮಾನ್ಯನಿಗೂ ವಿಜ್ಞಾನ ವಿಚಾರಗಳು ತಿಳಿಯಬೇಕೆಂಬ ಕಾಳಜಿ ಎಲ್ಲಾ ಸಂಚಿಕೆಗಳಲ್ಲೂ ಎದ್ದು ಕಾಣುತ್ತದೆ. ಸಂಪಾದಕ ಮಂಡಳಿಯಲ್ಲಿರುವ ವಿಜ್ಞಾನಿಗಳು ಕನ್ನಡದಲ್ಲಿ ಪ್ರಬುದ್ಧತೆ ಹೊಂದಿರುವರು ಎನ್ನುವುದು ಇಲ್ಲಿ ದಾಖಲಾರ್ಹ. ಡಾ| ವ್ಯಾಸರಾವ್ ನಿಂಜೂರ್, ಸುರೇಶರಾವ್ ಉಡುಪಿ, ಡಾ| ರಾಮಚಂದ್ರಭಟ್, ಡಾ| ಮಧುಕರ ಮುತಾಲಿಕ ದೇಸಾಯಿ, ಡಾ| ಯು. ಬಿ. ಪವನಜ, ಗಣರಾಜ ಬನಾರಿ ಅವರುಗಳು ಹಲವು ವರ್ಷದ ಸಂಪಾದಕ ಮಂಡಳಿಯಲ್ಲಿದ್ದು ವಿಜ್ಞಾನ ವಿಚಾರಗಳನ್ನು `ಬೆಳಗು&#8217; ಮೂಲಕ ಪ್ರಸಾರ ಮಾಡಿದ್ದಾರೆ.</p>
<p><img decoding="async" src="http://www.vishvakannada.com/archives/photos/vol5no2/belagu1.jpg" alt="" align="right" />ಮುಂಬೈನಂಥ ಬಹುಭಾಷಾ ವ್ಯಾವಹಾರಿಕ ನಗರದಲ್ಲಿ ಕನ್ನಡದ ಸ್ಥಾನ ಯಾವೊತ್ತೂ ಮೇಲ್ಗೈ ಪಡೆದಿದೆ. ಅಲ್ಲಿ ನೆಲೆಸಿರುವ ಹಲವಾರು ಸಾಹಿತಿಗಳು, ಕಲಾವಿದರು ಕರ್ನಾಟಕದಲ್ಲಿದ್ದು ಸಾಧಿಸಿದ ಹಲವರಂತೆಯೇ ಪ್ರಶಸ್ತಿ ಗಿಟ್ಟಿಸಿದ್ದಾರೆ. ಅಣುಶಕ್ತಿ ಕೇಂದ್ರ ಕನ್ನಡ ಸಂಘದಂತೆಯೇ ಐದಾರು ಕನ್ನಡ ಸಂಘಗಳು ಸಾಕಷ್ಟು ಕ್ರಿಯಾಶೀಲವಾಗಿವೆ. ಕನ್ನಡ ಸಾಹಿತ್ಯ ಸಂಸ್ಕೃತಿಗೆ ಈ ಸಂಘಗಳು ಆದರ್ಶಪ್ರಾಯವಾಗಿವೆ.<br />
ಕನ್ನಡ ಸಂಘದ `ಬೆಳಗು&#8217; ಹಲವಾರು ವಾರ್ಷಿಕ ವಿಶೇಷಾಂಕಗಳನ್ನು ಹೊರತಂದಿದೆ. ೧೯೮೫ರ ಸಂದರ್ಭದಲ್ಲೇ `ಪರಮಾಣು ಶಕ್ತಿ ವಿಶೇಷಾಂಕ&#8217;ದಲ್ಲಿ, ವಿಕಿರಣದ ಬಗ್ಗೆ ಮಾಹಿತಿ, ಪರಮಾಣು ಶಕ್ತಿ ಕುರಿತ ವಿವರಗಳು, ಆಹಾರ ಸಂರಕ್ಷಣೆಗಾಗಿ ಪರಮಾಣು ವಿಕಿರಣದ ಬಳಕೆ ಕುರಿತು ಉತ್ತಮ ಮಾಹಿತಿ ನೀಡಿದೆ. ಮುಖ್ಯವಾಗಿ ಕರ್ನಾಟಕದ ಕೈಗಾ ಅಣುಸ್ಥಾವರದ ಸ್ಥಾಪನೆಯ ಪ್ರಸ್ತಾಪದ ಹಿನ್ನೆಲೆಯಲ್ಲಿ ಆಗ ಹುಟ್ಟಿದ ಸಂಶಯಗಳಿಗೆ ಇದರಲ್ಲಿ ಹಲವು ಪರಿಹಾರಗಳೂ ಇವೆ.</p>
<p>`ನೀರು&#8217; ಕುರಿತು ನಡೆದ ವಿಚಾರ ಸಂಕಿರಣದ ವಿಶೇಷಾಂಕ, ಲೋಹಗಳು ಮತ್ತು ಸಮಾಜ, ನಿತ್ಯಜೀವನದಲ್ಲಿ ಕಂಪ್ಯೂಟರ್, ಅಸಾಂಕ್ರಾಮಿಕ ರೋಗಗಳು, ಜೀವನ ಶೈಲಿ ಮತ್ತು ಸ್ವಾಸ್ಥ್ಯ ಹಾಗೂ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಕುರಿತ ವಿವರಗಳು ವಿಜ್ಞಾನ ಆಸಕ್ತರಿಗೆ ಹಾಗೂ ವಿಜ್ಞಾನ ಓದಿದವರಿಗೆ ಮಾರ್ಗದರ್ಶಿ ಮಾಹಿತಿ ಒದಗಿಸಿವೆ. ಕನ್ನಡ ವಿಜ್ಞಾನ ಸಾಹಿತ್ಯದ ಬಗ್ಗೆ ಮೂಗು ಮುರಿಯುವವರು ಮುಂಬೈ ಅಣುಶಕ್ತಿ ಕೇಂದ್ರದ ಕನ್ನಡ ಸಂಘದ `ಬೆಳಗು&#8217; ಗಮನಿಸಲೇಬೇಕು.</p>
<p><img decoding="async" src="http://www.vishvakannada.com/archives/photos/vol5no2/belagu3.jpg" alt="" align="left" />ಕನ್ನಡ ಸಂಘ ಆರಂಭವಾದಂದಿನಿಂದಲೂ ಅದಕ್ಕೆ ಒಂದು ಸಮರ್ಪಕವೂ, ಪ್ರಾತಿನಿಧಿಕವೂ ಆದರ ಲಾಂಛನವೊಂದನ್ನು ತಯಾರಿಸಬೇಕೆಂದು ಸದಸ್ಯರೆಲ್ಲರ ಬಯಕೆಯಾಗಿತ್ತು. ಸಂಘದ ಮುಖವಾಣಿಯಾದ `ಬೆಳಗು&#8217; ಪತ್ರಿಕೆಯ ಈ ಲಾಂಛನವನ್ನು ಬಳಸಿದಾಗ, ಈ ಪ್ರತಿನಿಧಿಕ ಲಾಂಛನವು ಹತ್ತು ಹಲವು ಕಡೆ ತಲುಪುವ ಸಾಧ್ಯತೆಯನ್ನು ಸಂಘದ ಸದಸ್ಯರು ಮನಗಂಡರು. ಈ ದಿಸೆಯಲ್ಲಿ ಕಾರ್ಯ ಪ್ರವೃತ್ತವಾಗಿ ಹಲವಾರು ಬಗೆಯ ಕಲಾವಿನ್ಯಾಸಗಳಲ್ಲಿ ಒಂದನ್ನು ಗಣಕದ ಸಹಾಯದಿಂದ ೧೯೯೨ (ಸಂಪುಟ ೧೧, ಸಂ-೧)ರಲ್ಲಿ ರೂಪಿಸಿದವರು ಸಂಘದ ಕಾರ್ಯದರ್ಶಿ ಡಾ| ಯು. ಬಿ. ಪವನಜ ಅವರು. ಮುಂದೆ ಇವರು ಮುಂಬೈ ಬಿಟ್ಟು ಬೆಂಗಳೂರಿನಲ್ಲಿ ನೆಲಸಿ `ವಿಶ್ವಕನ್ನಡ&#8217; ಪ್ರಥಮ ಅಂತರಜಾಲ ಪತ್ರಿಕೆ ನಿಯಮಿತವಾಗಿ ಹೊರತರುತ್ತಿರುವುದು ಇತಿಹಾಸ.</p>
<p><img decoding="async" src="http://www.vishvakannada.com/archives/photos/vol5no2/belagu-logo.jpg" alt="" align="right" />&#8220;ತಿಳಿವು ಬದುಕಿನ ತಿರುಳು&#8221; ಎಂದು ಅರಿವೇ ಗುರುವಿನಂತೆ, ನ ಹಿ ಜ್ಞಾನೇನ ಸದೃಶಂ ಎಂಬಂತೆ ವಿಜ್ಞಾನದ ತಿಳಿವು, ತಿರುಳು ಬೆಳಗುವಿನ ಧ್ಯೇಯವೆಂಬುದು ಲಾಂಛನದಲ್ಲಿದೆ. ಬೆಳಕು ಹತ್ತಿಸಿದ ಹಣತೆಯಲ್ಲಿ ಜ್ಞಾನಕ್ಕಾಗಿ ಪುಸ್ತಕದ ತಿಳಿವು, ಸಾಂಸ್ಕೃತಿಕ ಅರಿವಿಗೆ ವೀಣೆಗಳು ಸಾಂಕೇತಿಕವಾಗಿವೆ. `ಬೆಳಗು&#8217; ಸಂಚಿಕೆಗಳು ಕರ್ನಾಟಕದ ಎಲ್ಲಾ ಸಾರ್ವಜನಿಕ ಗ್ರಂಥಾಲಯ ಹಾಗೂ ಕಾಲೇಜು ಗ್ರಂಥಾಲಯಗಳಲ್ಲಿರಬೇಕು. ವಿದ್ಯಾರ್ಥಿಗಳಿಗೆ ಅಧ್ಯಾಪಕರಿಗೆ ಇದರಿಂದ ಉತ್ತಮ ಮಾಹಿತಿಯ ಅರಿವು ಮೂಡಿದಂತಾಗುತ್ತದೆ.</p>
<p>ಜೊತೆಗೆ ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ ಇಂಥ ಪ್ರಯತ್ನವನ್ನು ಪ್ರೋತ್ಸಾಹಿಸಿ ಪತ್ರಿಕೆ ನಿಯತಕಾಲಿಕವಾಗಿ ಬರಲು ಮುಂಬೈನಲ್ಲಿರುವ ಬೆಳಗು ಬಳಗಕ್ಕೆ ಸಹಕಾರಿ ಆಗಬೇಕು. ಇಷ್ಟು ವರ್ಷ ಕನ್ನಡ ಪತ್ರಿಕೆಯೊಂದನ್ನು ಜೀವಂತವಾಗಿಟ್ಟುಕೊಂಡು ಬಂದ `ಬೆಳಗು&#8217; ಬಳಗಕ್ಕೆ ಅಭಿನಂದನೆಗಳು.</p>
<p>ವಿಳಾಸ: ಸಂಪಾದಕರು, `ಬೆಳಗು&#8217;, ಕನ್ನಡ ಸಂಘ ಅಣುಶಕ್ತಿ ಕೇಂದ್ರ (ರಿ), ಭಾಭಾ ಪರಮಾಣು ಸಂಶೋಧನಾ ಕೇಂದ್ರ, ಮುಂಬಯಿ -೪೦೦೦೮೫.</p>
<p>(೨೦೦೧)</p><p>The post <a href="http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%ae%e0%b3%81%e0%b2%82%e0%b2%ac%e0%b3%88-%e0%b2%85%e0%b2%a3%e0%b3%81%e0%b2%b6%e0%b2%95%e0%b3%8d%e0%b2%a4%e0%b2%bf-%e0%b2%95%e0%b3%87%e0%b2%82%e0%b2%a6%e0%b3%8d%e0%b2%b0%e0%b2%a6%e0%b2%bf%e0%b2%82/">ಮುಂಬೈ ಅಣುಶಕ್ತಿ ಕೇಂದ್ರದಿಂದ ಕನ್ನಡದ "ಬೆಳಗು"</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%ae%e0%b3%81%e0%b2%82%e0%b2%ac%e0%b3%88-%e0%b2%85%e0%b2%a3%e0%b3%81%e0%b2%b6%e0%b2%95%e0%b3%8d%e0%b2%a4%e0%b2%bf-%e0%b2%95%e0%b3%87%e0%b2%82%e0%b2%a6%e0%b3%8d%e0%b2%b0%e0%b2%a6%e0%b2%bf%e0%b2%82/feed/</wfw:commentRss>
			<slash:comments>2</slash:comments>
		
		
			</item>
		<item>
		<title>ಎ ಹಿಸ್ಟಾರಿಕಲ್ ಅಟ್ಲಾಸ್ ಆಫ್ ಕರ್ನಾಟಕ</title>
		<link>http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%8e-%e0%b2%b9%e0%b2%bf%e0%b2%b8%e0%b3%8d%e0%b2%9f%e0%b2%be%e0%b2%b0%e0%b2%bf%e0%b2%95%e0%b2%b2%e0%b3%8d-%e0%b2%85%e0%b2%9f%e0%b3%8d%e0%b2%b2%e0%b2%be%e0%b2%b8%e0%b3%8d-%e0%b2%86%e0%b2%ab/</link>
					<comments>http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%8e-%e0%b2%b9%e0%b2%bf%e0%b2%b8%e0%b3%8d%e0%b2%9f%e0%b2%be%e0%b2%b0%e0%b2%bf%e0%b2%95%e0%b2%b2%e0%b3%8d-%e0%b2%85%e0%b2%9f%e0%b3%8d%e0%b2%b2%e0%b2%be%e0%b2%b8%e0%b3%8d-%e0%b2%86%e0%b2%ab/#respond</comments>
		
		<dc:creator><![CDATA[admin]]></dc:creator>
		<pubDate>Mon, 13 Mar 2006 10:58:13 +0000</pubDate>
				<category><![CDATA[ವಿಮರ್ಶೆ]]></category>
		<guid isPermaLink="false">http://localhost/vishwakannada/?p=193</guid>

					<description><![CDATA[<h3>- ಸ್ವರೂಪ ಭೂಷಣ</h3>
<p>ನಮ್ಮ ನಾಡಿನ ಸಾಂಪ್ರದಾಯಕ ಹೆಸರಾದ "ಕರ್ನಾಟಕ" ಎಲ್ಲಿಂದ ಬಂತು? ಕಪ್ಪು ವರ್ಣದ ಮಣ್ಣಿನ ಸಂಕೇತವಾಗಿ ಬಂದ ಬಿರುದೇ ಇದು? ಅಥವ ಅತಿ ಎತ್ತರವಿರುವ ನಮ್ಮ ಭೂಮಾತೆ, ಕರುನಾಡು ಎಂದು ಕರೆಯಲ್ಪಟ್ಟಿತೆ? ಕರ್ನಾಟಕ ಹಾಗು ಕನ್ನಡಿಗರ ನಿಜ ಸ್ವರೂಪವು ಅವರ ಹಿನ್ನೆಲೆಯಲ್ಲಿಯೇ ಅಡಗಿದೆ. ಈ ಹಿನ್ನೆಲೆಯನ್ನು ಸಚಿತ್ರವಾಗಿ "ಕರ್ನಾಟಕದ ಐತಿಹಾಸಿಕ ಭೂಪಟ ಗ್ರಂಥ" ಯಲ್ಲಿ ಪ್ರಸ್ತುತಿಸಲ್ಪಟ್ಟಿದೆ. ಆಂಗ್ಲ ಭಾಷೆಯಲ್ಲಿರುವ ಈ ಪುಸ್ತಕದ ಹೆಸರು "ಎ ಹಿಸ್ಟಾರಿಕಲ್ ಅಟ್ಲಾಸ್ ಆಫ್ ಕರ್ನಾಟಕ" ಎಂದು.</p>
<p>The post <a href="http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%8e-%e0%b2%b9%e0%b2%bf%e0%b2%b8%e0%b3%8d%e0%b2%9f%e0%b2%be%e0%b2%b0%e0%b2%bf%e0%b2%95%e0%b2%b2%e0%b3%8d-%e0%b2%85%e0%b2%9f%e0%b3%8d%e0%b2%b2%e0%b2%be%e0%b2%b8%e0%b3%8d-%e0%b2%86%e0%b2%ab/">ಎ ಹಿಸ್ಟಾರಿಕಲ್ ಅಟ್ಲಾಸ್ ಆಫ್ ಕರ್ನಾಟಕ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p> ಸ್ವರೂಪ ಭೂಷಣ<br />
ನಮ್ಮ ನಾಡಿನ ಸಾಂಪ್ರದಾಯಕ ಹೆಸರಾದ &#8220;ಕರ್ನಾಟಕ&#8221; ಎಲ್ಲಿಂದ ಬಂತು? ಕಪ್ಪು ವರ್ಣದ ಮಣ್ಣಿನ ಸಂಕೇತವಾಗಿ ಬಂದ ಬಿರುದೇ ಇದು? ಅಥವ ಅತಿ ಎತ್ತರವಿರುವ ನಮ್ಮ ಭೂಮಾತೆ, ಕರುನಾಡು ಎಂದು ಕರೆಯಲ್ಪಟ್ಟಿತೆ? ಕರ್ನಾಟಕ ಹಾಗು ಕನ್ನಡಿಗರ ನಿಜ ಸ್ವರೂಪವು ಅವರ ಹಿನ್ನೆಲೆಯಲ್ಲಿಯೇ ಅಡಗಿದೆ. ಈ ಹಿನ್ನೆಲೆಯನ್ನು ಸಚಿತ್ರವಾಗಿ &#8220;ಕರ್ನಾಟಕದ ಐತಿಹಾಸಿಕ ಭೂಪಟ ಗ್ರಂಥ&#8221; ಯಲ್ಲಿ ಪ್ರಸ್ತುತಿಸಲ್ಪಟ್ಟಿದೆ. ಆಂಗ್ಲ ಭಾಷೆಯಲ್ಲಿರುವ ಈ ಪುಸ್ತಕದ ಹೆಸರು &#8220;ಎ ಹಿಸ್ಟಾರಿಕಲ್ ಅಟ್ಲಾಸ್ ಆಫ್ ಕರ್ನಾಟಕ&#8221; ಎಂದು.</p>
<p><img decoding="async" src="http://vishvakannada.com/files/KarnatakaAtlasHistory.jpg" alt="" align="right" />ಜನಗಣತಿ ಕಾರ್ಯಕ್ರಮಗಳ ನಿರ್ದೇಶನಾಲಯದ (ಡೈರೆಕ್ಟೊರೇಟ್ ಆಫ್ ಸೆನ್ಸಸ್ ಆಪರೇಶನ್ಸ್) ನೇತೃತ್ವದಲ್ಲಿ ಹೊರಬಂದಿರುವ ಈ ಮಾಹಿತಿ ಭಂಡಾರ ಈಗ ಎಲ್ಲ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತಿದೆ. ಐ. ಏ. ಎಸ್. ಶ್ರೀ. ಎಚ್. ಶಶಿಧರ ಹಾಗು ಭೂಗೋಳ ಶಾಸ್ತ್ರಜ್ಞ ಶ್ರೀ. ಎನ್. ಶ್ರೀನಿವಾಸ ಮೂರ್ತಿಗಳ ಸುಮಾರು ಎರಡು ವರ್ಷಗಳ ಈ ಆಳವಾದ ಕೆಲಸದ ಉದ್ದೇಶವು &#8220;ಇತಿಹಾಸ ಒಂದು ಪ್ರದೇಶದ ಸರಹದ್ದುಗಳ ಮೆಲೆ ಬೀರಿದ ಪರಿಣಾಮ&#8221;ವನ್ನು ಎತ್ತಿತೋರಿಸುವುದು.<br />
ಪ್ರಾಚೀನ ಕರ್ನಾಟಕದ ವಿಸ್ತಾರ ಮತ್ತು ಗಡಿಗಳು ಹೇಗಿದ್ದವು? ಇಲ್ಲಿ ನೆಲೆದಂತಹ ಗಿರಿಜನಗಳ ವಂಶಗಳು ಎಲ್ಲಿಂದ ಬಂದವು? ಇಲ್ಲಿ ಉನ್ನತಿ ಅವನತಿ ಪಡೆದ ಮಹಾ ಸಾಮ್ರಾಜ್ಯಗಳ ದೊರೆಗಳು ಎಲ್ಲೆಲ್ಲಿ ಆಳಿದರು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ಪೀಠಿಕೆಯಲ್ಲಿ ಕಾಣಬಹುದು.<br />
ಮುಖ್ಯ ಭಾಗದಲ್ಲಿ ಸಾಮ್ರಾಜ್ಯಗಳ ವಿಶೇಷ ಅಂಶಗಳನ್ನು ಅನುಕ್ರಮವಾಗಿ ಪಟ್ಟಿರೂಪದಲ್ಲಿಟ್ಟಿದ್ದಾರೆ. ಪ್ರತಿಯೊಂದು ಕಾಲದಲ್ಲಿ ನೆಲೆದಿದ್ದ ರಾಜರು, ಅವರ ಆಳುವಿಕೆಯ ವಿಸ್ತಾರ, ಅವರ ಜನರು ಆಡಿದ ಭಾಷೆಗಳು, ಪೂಜಿಸಿದ ದೇವರುಗಳು, ಮುಂತಾದ ಅಮೂಲ್ಯ ಮಾಹಿತಿಗಳನ್ನು ಲೇಖಕರು ಇಲ್ಲಿ ವರ್ಣಿಸಿದ್ದಾರೆ.</p>
<p>ಪ್ರತಿಯೊಂದು ಹಾಳೆಯಲ್ಲು ಎಡ ಭಾಗದಲ್ಲಿ ತಿಪ್ಪಣಿ, ಬಲ ಭಾಗದಲ್ಲಿ ನಕ್ಷೆಯಿರುವ ವಿನ್ಯಾಸದಂತೆ ೨೫೦ ಬಿ. ಸಿ. ದಲ್ಲಿದ್ದ ಶಾತವಾಹನರಿಂದ ಹಿಡಿದು, ಕದಂಬರು, ಗಂಗರು ಮುಂತಾದ ಎಲ್ಲ ಸಾಮ್ರಾಜ್ಯಗಳ ಪ್ರದೇಶಗಳನ್ನು ಕಾಲಸಂಚಾರ ಮಾಡಿ, ೧೯೭೩ ರ &#8220;ಕರ್ನಾಟಕ&#8221;ದ ನಾಮಕರಣದವರೆಗೂ ಸಚಿತ್ರ ವಿವರಗಳನ್ನು ನೀಡಿದ್ದಾರೆ.</p>
<p>&#8216;ಕೊನೆಗೆ ಉಳಿದದ್ದು ಸವಿಯೋಣ&#8217; ಎಂದಂತೆ, ಪುಸ್ತಕದ ಹಿಂದಿನ ಕವಚದೊಂದಿಗೆ ಅಗಲವಾದ ಹಾಳೆಯಲ್ಲಿ ಅಲ್ಲಿಯತನಕ ಕಂಡ ಎಲ್ಲ ನಕ್ಷೆಗಳ ಕಡೆನೋಟವನ್ನು ಒಟ್ಟಿಗೆ ಕಾಣಬಹುದು. ಕರ್ನಾಟಕದ ಹಿನ್ನೆಲೆಯ ವಿಷಯದಲ್ಲಿ ಸಂಶೋಧನೆ ಮಾಡುವವರಿಗೆ, ಅಥವ ನಾಡಿನ ಇತಿಹಾಸದ ಚಿತ್ರೀಕರಣವನ್ನು ನೋಡಬಯಸುವವರಿಗೆ ಈ ಪುಸ್ತಕ ಬಹಳ ತೃಪ್ತಿಕರವಾಗುತ್ತದೆ.</p>
<p>ಬೆಲೆ: ರೂ. ೪೦೦.</p>
<p><input id="gwProxy" type="hidden" /><input id="jsProxy" onclick="jsCall();" type="hidden" /></p><p>The post <a href="http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%8e-%e0%b2%b9%e0%b2%bf%e0%b2%b8%e0%b3%8d%e0%b2%9f%e0%b2%be%e0%b2%b0%e0%b2%bf%e0%b2%95%e0%b2%b2%e0%b3%8d-%e0%b2%85%e0%b2%9f%e0%b3%8d%e0%b2%b2%e0%b2%be%e0%b2%b8%e0%b3%8d-%e0%b2%86%e0%b2%ab/">ಎ ಹಿಸ್ಟಾರಿಕಲ್ ಅಟ್ಲಾಸ್ ಆಫ್ ಕರ್ನಾಟಕ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%8e-%e0%b2%b9%e0%b2%bf%e0%b2%b8%e0%b3%8d%e0%b2%9f%e0%b2%be%e0%b2%b0%e0%b2%bf%e0%b2%95%e0%b2%b2%e0%b3%8d-%e0%b2%85%e0%b2%9f%e0%b3%8d%e0%b2%b2%e0%b2%be%e0%b2%b8%e0%b3%8d-%e0%b2%86%e0%b2%ab/feed/</wfw:commentRss>
			<slash:comments>0</slash:comments>
		
		
			</item>
		<item>
		<title>&#039;ಮಾಯಾಲೋಕ&#039;ದ  ಮೊದಲನೋಟ</title>
		<link>http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%ae%e0%b2%be%e0%b2%af%e0%b2%be%e0%b2%b2%e0%b3%8b%e0%b2%95%e0%b2%a6-%e0%b2%ae%e0%b3%8a%e0%b2%a6%e0%b2%b2%e0%b2%a8%e0%b3%8b%e0%b2%9f/</link>
					<comments>http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%ae%e0%b2%be%e0%b2%af%e0%b2%be%e0%b2%b2%e0%b3%8b%e0%b2%95%e0%b2%a6-%e0%b2%ae%e0%b3%8a%e0%b2%a6%e0%b2%b2%e0%b2%a8%e0%b3%8b%e0%b2%9f/#comments</comments>
		
		<dc:creator><![CDATA[admin]]></dc:creator>
		<pubDate>Tue, 07 Feb 2006 19:36:46 +0000</pubDate>
				<category><![CDATA[ವಿಮರ್ಶೆ]]></category>
		<guid isPermaLink="false">http://localhost/vishwakannada/?p=176</guid>

					<description><![CDATA[<h3>- ಬೇಳೂರು ಸುದರ್ಶನ</h3>
<p>ಹಿರಿಯ ತಲೆಮಾರಿನ ಲೇಖಕರೆಲ್ಲ ಇನ್ನೂ A4 ಹಾಳೆಗಳ ನಡುವೆಯೇ ಬರವಣಿಗೆಯನ್ನು ನಡೆಸುತ್ತಾ ಇರೋ ಕಾಲದಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್‌ಗೂ ಕೈ ಹಾಕಿದ ಸಾಹಿತಿ ನಮ್ಮ ಪ್ರೀತಿಯ ಪೂರ್ಣಚಂದ್ರ ತೇಜಸ್ವಿಯವರು. ಎಲ್ಲರೂ ಕಥೆ ಕಾದಂಬರಿ ಬರೀತಾ ಇದ್ದರೆ ಅವರು ಅದೆಲ್ಲವನ್ನೂ ಬರೆದು ಮಾಹಿತಿ ಸಾಹಿತ್ಯಕ್ಕೂ ಬಂದರು; ಕಿರಗೂರಿನ ಗಯ್ಯಾಳಿಗಳೂ ಬೆದರುವಂಥ ಮಿಲೆನಿಯಮ್ ಬಿರುಗಾಳಿ ಬೀಸಿದರು. ಕಂಪ್ಯೂಟರಿನಲ್ಲಿ ಕನ್ನಡವು ಅರಳಬೇಕೆಂದು ಬೆಂಗಳೂರಿಗೆ ಬಂದು ಪ್ರೆಸ್‌ಮೀಟ್ ಮಾಡಿದರು. ಪಂಪ ಪ್ರಶಸ್ತಿ ಬಂದರೂ ಬನವಾಸಿಯನ್ನು ನೆನೆಯಲಿಲ್ಲ. ಅಪ್ಪನಿಗಿಂತ ಶಿವರಾಮ ಕಾರಂತರೇ ನನ್ನ ಎದುರಿನ ಮಾದರಿ ಎಂದಿದ್ದೂ ಇದೆ.</p>
<p>The post <a href="http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%ae%e0%b2%be%e0%b2%af%e0%b2%be%e0%b2%b2%e0%b3%8b%e0%b2%95%e0%b2%a6-%e0%b2%ae%e0%b3%8a%e0%b2%a6%e0%b2%b2%e0%b2%a8%e0%b3%8b%e0%b2%9f/">'ಮಾಯಾಲೋಕ'ದ  ಮೊದಲನೋಟ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p> ಬೇಳೂರು ಸುದರ್ಶನ<br />
ಹಿರಿಯ ತಲೆಮಾರಿನ ಲೇಖಕರೆಲ್ಲ ಇನ್ನೂ A4 ಹಾಳೆಗಳ ನಡುವೆಯೇ ಬರವಣಿಗೆಯನ್ನು ನಡೆಸುತ್ತಾ ಇರೋ ಕಾಲದಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್‌ಗೂ ಕೈ ಹಾಕಿದ ಸಾಹಿತಿ ನಮ್ಮ ಪ್ರೀತಿಯ ಪೂರ್ಣಚಂದ್ರ ತೇಜಸ್ವಿಯವರು. ಎಲ್ಲರೂ ಕಥೆ ಕಾದಂಬರಿ ಬರೀತಾ ಇದ್ದರೆ ಅವರು ಅದೆಲ್ಲವನ್ನೂ ಬರೆದು ಮಾಹಿತಿ ಸಾಹಿತ್ಯಕ್ಕೂ ಬಂದರು; ಕಿರಗೂರಿನ ಗಯ್ಯಾಳಿಗಳೂ ಬೆದರುವಂಥ ಮಿಲೆನಿಯಮ್ ಬಿರುಗಾಳಿ ಬೀಸಿದರು. ಕಂಪ್ಯೂಟರಿನಲ್ಲಿ ಕನ್ನಡವು ಅರಳಬೇಕೆಂದು ಬೆಂಗಳೂರಿಗೆ ಬಂದು ಪ್ರೆಸ್‌ಮೀಟ್ ಮಾಡಿದರು. ಪಂಪ ಪ್ರಶಸ್ತಿ ಬಂದರೂ ಬನವಾಸಿಯನ್ನು ನೆನೆಯಲಿಲ್ಲ. ಅಪ್ಪನಿಗಿಂತ ಶಿವರಾಮ ಕಾರಂತರೇ ನನ್ನ ಎದುರಿನ ಮಾದರಿ ಎಂದಿದ್ದೂ ಇದೆ.</p>
<p>ಈಗ ಅವರು ಕನ್ನಡದಲ್ಲೇ ವಿನೂತನ ಎನ್ನಬಹುದಾದ `ಇಲ್ಲಸ್ಟ್ರೇಟೆಡ್ ಗ್ರಾಫಿಕ್ ನಾವೆಲ್&#8217; ಎಂದು ಕರೆಯಲಾಗಿರುವ &#8216;ಮಾಯಾಲೋಕ&#8217;ದ ಭಾಗ &#8211; ೧ನ್ನು ಕನ್ನಡಿಗರ ಮುಂದೆ ತಂದಿಟ್ಟಿದ್ದಾರೆ. ಎಂದಿನ ಅಷ್ಟದಳ ಡೆಮಿ,ಕ್ರೌನ್ ಅಳತೆಗಳನ್ನು ಬದಿಗಿಟ್ಟು, ಕ್ರೌನ್ ಚತುರ್ದಳವನ್ನೇ ಅಡ್ಡ ತಿರುಗಿಸಿ (ಲ್ಯಾಂಡ್‌ಸ್ಕೇಪ್ ಎಂದು ಕಂಪ್ಯೂಟರ್ ಭಾಷೆಯಲ್ಲಿ ಕರೆಯುತ್ತಾರೆ. ಆಯತಾಕಾರವಾದ  ಪುಸ್ತಕ,ಅಡ್ಡ ಅಳತೆಯು ಉದ್ದದ ಅಳತೆಗಿಂತ ಕಡಿಮೆ ಇರುತ್ತದೆ) ಮೂರು ಕಾಲಂಗಳಲ್ಲಿ ಪಠ್ಯವನ್ನು ಹರಿಸಿದ್ದಾರೆ. &#8220;ಈ ಕೃತಿಯಲ್ಲಿ ಹಾಸುಹೊಕ್ಕಾಗಿರುವ ಸ್ಕೆಚ್ ಮತ್ತು ರೇಖಾ ಚಿತ್ರಗಳು ಕೃತಿಯ ಸಾಂದರ್ಭಿಕ ವಿವರಣೆಯಾಗಿ ಕೊಟ್ಟಿರುವ ಚಿತ್ರಗಳಲ್ಲ. ಕೆಲವೆಡೆಗಳಲ್ಲಿ ಹಗೆ ಕಂಡುಬಂದರೂ ಅದು ಕೇವಲ ಆಕಸ್ಮಿ. ಇದು ಕೊಲಾಜ್. ಇಲ್ಲಿನ ಕಥಾ ಪ್ರತಿಮೆಗಳೂ, ದೃಶ್ಯಪ್ರತಿಮೆಗಳೂ ಓದುತ್ತ ಹೋದಂತೆ ಒಂದರ ಮೇಲೊಂದು ಸಂಯೋಜನೆಗೊಳ್ಳುತ್ತ ಮಾಯಾಲೋಕವನ್ನು ಸೃಷ್ಟಿಸುತ್ತವೆ&#8221; ಎಂದು ತೇಜಸ್ವಿ ತಮ್ಮ ಮೊದಲ ಮಾತಿನಲ್ಲಿ ಘೋಷಿಸಿದ್ದಾರೆ. ಅಂದರೆ ಇಲ್ಲಿ ಚಿತ್ರಗಳು &#8220;ಹಾಸುಹೊಕ್ಕಾಗಿವೆ&#8221; ಮತ್ತು &#8220;ಇವು ಮಾಯಾಲೋಕವನ್ನು ಸೃಷ್ಟಿಸುತ್ತವೆ&#8221; ಎಂದು ಲೇಖಕರೇ ಹೇಳಿದಂತಾಯಿತು. ಈ ಮಾತುಗಳನ್ನು ಓದಿದ ಮೇಲೆ ಓದುಗ ಮುಂದಿನ ಪುಟಗಳನ್ನು ತಿರುಗಿಸುವಾಗ ಮಾಯಾಲೋಕವನ್ನು ಸೃಷ್ಟಿಸಿಕೊಳ್ಳಲೇಬೇಕಾದ  ಅನಿವಾರ್ಯ ಮಾನಸಿಕತೆಯನ್ನು  ಓದುಗರು ರೂಢಿಸಿಕೊಳ್ಳಬೇಕೆ ಎಂಬ ಪ್ರಶ್ನೆಯನ್ನ ಇಷ್ಟವಿದ್ದವರು ಕೇಳಿಕೊಳ್ಳಬಹುದು!</p>
<p>ಈ ಪುಸ್ತಕದ ಆಕಾರವೇ ಎಲ್ಲರೂ ಕುಳಿತು, ಮೇಜಿನ ಮೇಲೋ, ನೆಲದ ಮೇಲೋ ಪುಸ್ತಕವನ್ನು &#8216;ಅಗಾಲವಾಗಿ&#8217; ತೆರೆದು ಓದಬೇಕಾದ ಸ್ಥಿತಿಯೇ ಮಾಯಾಲೋಕದ ಮೊದಲನೇ ಅನುಭವ. ನಮ್ಮ ವಾರಪತ್ರಿಕೆಗಳನ್ನು ಲಾಗಾಯ್ತಿನಿಂದ ಓದುತ್ತಿರುವವರಿಗೆ ಮೂರು ಕಾಲಂಗಳ ರೂಢಿಗತ ವಿನ್ಯಾಸ ಅರಗಿಸಿಕೊಳ್ಳುವುದು ಸುಲಭ ಬಿಡಿ.</p>
<p>ಪುಸ್ತಕದಲ್ಲಿ ತೇಜಸ್ವಿಯವರ ನಿರೂಪಣೆಯಲ್ಲೇ ಕಥೆಗಳಿವೆ. ಅವರ ಹೆಸರು ನೇರವಾಗಿ ಪ್ರಸ್ತಾವನೆಯಾಗದಿದ್ದರೂ ಅವರ ಹೆಂಡತಿ ಮಕ್ಕಳ ಹೆಸರುಗಳು ಹಾಗೆಯೇ ಬಂದಿವೆ. ಅಷ್ಟಾಗಿಯೂ ಇದು ಗ್ರಾಫಿಕ್ ನಾವೆಲ್  ಎಂದು ಒಪ್ಪುವುದು ತೇಜಸ್ವಿಯವರ ಪಕ್ಷಿಚಟ ಮುಂತಾದ ಖಯಾಲಿಗಳನ್ನು  ತಿಳಿದುಕೊಂಡವರಿಗೆ ಕಷ್ಟ ಆಗಬಹುದು.</p>
<p><img decoding="async" src="http://vishvakannada.com/files/mayaloka lowres.jpg" alt="" /></p>
<p>ಈ ಪುಸ್ತಕವು ಒಂದು ಬ್ಲಾಗ್‌ನಂತಿದೆ ಎಂದು ಇದನ್ನು ಓದಲೆಂದು ಕೊಟ್ಟ ಗೆಳೆಯರು ಹೇಳಿದರು. ಮಾಯಾಲೋಕದ ಸ್ಥಳನಾಮದಲ್ಲಿ ವಾಸಿಸುತ್ತಿರೋರಿಗೆ ಬ್ಲಾಗಿಂಗ್ ಇರಲಿ, ಇಂಟರ್‌ನೆಟ್ ಏನೆಂದರೇ ತಿಳಿದಿರಲಾರದು. ಆದರೆ ತೇಜಸ್ವಿಯವರು ಇದನ್ನೆಲ್ಲ ಬಲ್ಲವರು. ಹೀಗೆ ಮಹಾನಗರಗಳ ಬ್ರಾಡ್‌ಬ್ಯಾಂಡ್ ಬದುಕಿನಲ್ಲಿ ಕಾಣಿಸಿಕೊಳ್ಳುವ ಬ್ಲಾಗ್‌ಗಳ ರೀತಿಯಲ್ಲೇ ಮಾಯಾಲೋಕದ ಕಥೆಯೂ ಇದೆ ಎನ್ನುವುದು ಮಾತ್ರ ವಾಸ್ತವ. ಈ ಉಪಮೆಯನ್ನು ಬ್ಲಾಗ್ ಬಲ್ಲವರು ಮಾತ್ರ ಬಳಸಬಹುದು. ಆದರೆ ನೋಡಿ, ಬ್ಲಾಗ್ ಬಂದಿದ್ದೇ ಇತ್ತೀಚೆಗೆ; ಆದರೆ ತೇಜಸ್ವಿಯವರ ಕಥೆ ಎಷ್ಟೋ ವರ್ಷಗಳಿಂದ ನಡೆಯುತ್ತಲೇ ಇದೆ. ಅದಲ್ಲದೇ ಅವರೇ ಹೇಳುವಂತೆ ನಮ್ಮೆದುರು ಬದಲಾವಣೆಗಳ ಮಹಾಪೂರವೇ ಹರಿಯುತ್ತಿದೆ. ನಾವೀಗ ಹೊಸ ಅಭಿವ್ಯಕ್ತಿ ವಿಧಾನಗಳ ಬಗ್ಗೆ ಗಮನ ಹರಿಸಿ ಹೊಸದಿಗಂತಗಳತ್ತ ಅನ್ವೇಷಣೆ ಹೊರಡಬೇಕಾಗಿದೆ ಎಂದೂ ತೇಜಸ್ವಿಯವರು  ಮೊದಲ ಮಾತಿನಲ್ಲಿ ಹೇಳಿರುವುದೂ ನಿಜವೇ (ಬ್ಲಾಗ್ ಗೊತ್ತಿರೋರಿಗೆ ಮಾತ್ರ ಈ ಪ್ಯಾರಾ ಬರೆದಿರುವೆ).</p>
<p>ಇಷ್ಟಾಗಿಯೂ ಮಾಯಾಲೋಕವನ್ನು ಓದುತ್ತಿದ್ದಂತೆ ಮೂಡಿಗೆರೆಯ ದೃಶ್ಯಗಳೆಲ್ಲ ಕಣ್ಣಿಗೆ ಕಟ್ಟುತ್ತವೆ. ಊರಿನ ಹೆಸರು ಯಾವುದೇ ಇರಲಿ, ಅದರಲ್ಲಿ ಇರೋದೆಲ್ಲ ಮೂಡಿಗೆರೆ ಮತ್ತು ತೇಜಸ್ವಿಯವರ ಸುತ್ತಮುತ್ತಲಿನ ದೃಶ್ಯಗಳು, ಸನ್ನಿವೇಶಗಳು ಎಂಬುದು ಖಚಿತವಾಗುತ್ತದೆ. ಹೀಗಂತ ಅವರು ಬೆಟ್ಟು ಮಾಡಿ ತೋರಿಸದಿದ್ದರೂ ಹಾಗೆ ಅನ್ನಿಸುತ್ತದೆ. ಬಹುಶಃ ತೇಜಸ್ವಿಯವರ  ಬದುಕು, ಮನೆ, ಮೀನು ಹಿಡಿಯುವ  ಹವ್ಯಾಸ, ಹಕ್ಕಿ ಛಾಯಾಗ್ರಹಣ, ಎಲ್ಲವೂ ಅವರ ಸಾಹಿತ್ಯ  ರಚನೆಗಳಂತೆಯೇ ಪ್ರಚುರಗೊಂಡಿರೋದ್ರಿಂದ ಈ ಥರ ಅನ್ನಿಸಿರಬಹುದೇನೋ&#8230; ತೇಜಸ್ವಿಯವರ ಕೃತಿಗಳನ್ನು ಮಾತ್ರ ಓದಿದೋರಿಗೆ ಬೇರೆ ಅನುಭವ ಆಗಬಹುದು ಎಂದು ಇಲ್ಲಿ ಒಪ್ಪಿಕೊಳ್ಳುವೆ. ನಾನು ಮೂಡಿಗೆರೆಯ ಬಸ್‌ನಿಲ್ದಾಣದಲ್ಲಿ ಎಷ್ಟೋ ಗಂಟೆಗಳ ಕಾಲ ಕರಿಮೋಡಗಳನ್ನು ನೋಡುತ್ತ, ಜಡಿಮಳೆಯಲ್ಲಿ ಇಣುಕುತ್ತ ಕಾಲ ಕಳೆದಿರುವುದರಿಂದ ಅವರು ಮೂಡಿಸೋ ಸನ್ನಿವೇಶಗಳು  ದಿಢೀರನೆ ನನ್ನನ್ನು ಅಲ್ಲಿಗೇ ಕರೆದೊಯ್ಯುತ್ತವೆ.</p>
<p>ಮಾಯಾಲೋಕದಲ್ಲಿ ಇರುವುದೆಲ್ಲ ಬಿಡಿ ಬಿಡಿ ಎಂದು ಕಾಣಿಸಿಕೊಳ್ಳುವ ಘಟನೆಗಳು. ಇದೆಲ್ಲವೂ ಕಥಾ ನಿರೂಪಕನಿಗೆ ಕಂಡಂತೆಯೇ ಇವೆ ಎಂದೇನೂ ಇಲ್ಲ. ಹಲವು ಬಾರಿ ಇಲ್ಲಿ ನಿರೂಪಕ ತನ್ನೆದುರಿಗೆ ನಡೆಯದ ಘಟನೆಗಳನ್ನೂ  ವಿವರಿಸಿದ್ದಾನೆ. ಇಲ್ಲಿ ಬರುವ ಕಥಾಪಾತ್ರಗಳಲ್ಲಿ ಕರಾಟೆ ಮಂಜ  ತುಂಬಾ ಇಂಟರೆಸ್ಟಿಂಗ್ ಆಗಿದಾನೆ. ಈತ ತೇಜಸ್ವಿಯವರ ಟ್ರೇಡ್‌ಮಾರ್ಕ್ ಕ್ಯಾರೆಕ್ಟರ್. ಇನ್ನುಳಿದಂತೆ ಅಪ್ಪಣ್ಣಪ್ಪ, ಇಕ್ಬಾಲ್ ಸಾಬಿ, ಪ್ರಕಾಶ, ರುಕ್ಮಿಣಿ ಮುಂತಾದವರು ತಂತಮ್ಮ ಚಹರೆಗಳನ್ನು  ಎಂದಿನ ತೇಜಸ್ವಿ ಶೈಲಿಯಲ್ಲಿ ಅನಾವರಣಗೊಳಿಸಿದ್ದಾರೆ. ಹಾಗೆ ನೋಡಿದರೆ ತೇಜಸ್ವಿಯವರು ಪಾತ್ರಪರಿಚಯ ಹಾಗೂ ನಿರೂಪಣೆಯಲ್ಲಿ ಹೊಸದಿಗಂತದತ್ತ ಸಾಗಿದ್ದಾರೆ ಎಂದೇನೂ ಅನ್ನಿಸಲ್ಲ. ಇಷ್ಟಕ್ಕೂ ಮಾಯಾಲೋಕದ ಭಾಗ ೧ ಮಾತ್ರವೇ ಈಗ ಬಿಡುಗಡೆಯಾಗಿದೆ. ಆದ್ದರಿಂದ ಈ ಬಗ್ಗೆ ಹೆಚ್ಚು ಹೇಳುವುದು ಇಲ್ಲಿ ಸಲ್ಲದು.</p>
<p>ಇನ್ನು ತೇಜಸ್ವಿಯವರು ಹೇಳುವಂತೆ ಪುಸ್ತಕದಲ್ಲಿ ಬಳಕೆಯಾದ ಚಿತ್ರಗಳು ಹಾಸುಹೊಕ್ಕಾಗಿವೆಯೆ ಎಂದು ನೋಡಿದರೆ, ನನಗಂತೂ ಹಾಗನ್ನಿಸಲಿಲ್ಲ. ಅಥವಾ ಪಠ್ಯದ ಜೊತೆಗೇ ಈ ಚಿತ್ರಗಳೂ ಸೇರಿಕೊಂಡು ಮಾಯಾಲೋಕವನ್ನು ಸೃಷ್ಟಿಸಿದ ಹಾಗೂ ನನಗೆ ಅನ್ನಿಸಲಿಲ್ಲ. ಈ ಬಗೆಯ ತಂತ್ರವನ್ನು ನಮ್ಮ ನಡುವಿನ ಅನೇಕ ಆಂಗ್ಲ ಪತ್ರಿಕೆಗಳು ಮಾಡಿವೆ, ಮಾಡುತ್ತಲೂ ಇವೆ. &#8216;ದಿ ಹಿಂದು&#8217; ಪತ್ರಿಕೆಯ ಫೋಲಿಯೋ ಎಂಬ ಪುರವಣಿ ಇದಕ್ಕೆ ತೀರ ಇತ್ತೀಚೆಗಿನ ಉದಾಹರಣೆ (ಅದೀಗ ನಿಂತುಹೋಗಿದೆ). ನಿಂತುಹೋದ ಕನ್ನಡ ಮಾಸಿಕ &#8216;ಭಾವನಾ&#8217;ದಲ್ಲಿ ಕೂಡಾ ಇಂಥ ಮಾಯಾಲೋಕದ ಪ್ರಯತ್ನ ನಡೆದಂತೆ ನೆನಪಾಗುತ್ತಿದೆ. ಅಲ್ಲದೆ ಚಿತ್ರಗಳು ಅಕಸ್ಮಾತ್ ಹೊಂದಿಕೆಯಾದರೂ ಅದು ಆಕಸ್ಮಿಕ ಎಂದು ತೇಜಸ್ವಿಯವರು ಹೇಳಿದ್ದು ನೋಡಿದರೆ ಅವರು ಈ ಚಿತ್ರಗಳನ್ನು ವಿವಿಧ ಪುಟಗಳಲ್ಲಿ ರ್&#x200d;ಯಾಂಡಮ್ ಆಗಿ, ನೋಡದೆಯೇ  ಸೇರಿಸಿದ್ದಾರೆಯೆ ಎಂಬ ಪ್ರಶ್ನೆ ಮೂಡುತ್ತದೆ. ಅಥವಾ ಈ ಬಗಯ ಮಾಯಾಲೋಕವನ್ನು ಸೃಷ್ಟಿಸುವ  ಕಾಯಕಕ್ಕಾಗಿ ಅವರು ಯಾವುದಾದರೂ ಸೂತ್ರವನ್ನು ಅನುಸರಿಸಿದ್ದಾರೆಯೆ  ಎಂದೂ ಅನುಮಾನಿಸಬಹುದು. ಚಿತ್ರಗಳಿಗೆ ಯಾವ ರೀತಿ ಸಂಬಂಧ ಇದೆ ಅಥವಾ ಇಲ್ಲ ಎಂದು ಯೋಚಿಸುವ ಕಸರತ್ತನ್ನು ಓದುಗರು ಮಾಡಿದಷ್ಟೂ ಕಥೆಯ  ಸೊಗಸು ಮಾಸುವ  ಅಪಾಯ ಇದೆ ಎಂದು ನನಗೆ ಅನ್ನಿಸಿತು.<br />
ಮಾಯಾಲೋಕದಲ್ಲೂ ತೇಜಸ್ವಿಯವರ &#8216;ಇನ್‌ಫೋ &#8211; ಡಂಪಿಂಗ್&#8217; ಕೆಲಸ ಮುಂದುವರಿದಿದೆ. ಆದರೆ ತೇಜಸ್ವಿಗೆ ಕಾದಂಬರಿಯಲ್ಲಿ ಹೇಗೆ ಮಾಹಿತಿ ಸಾಹಿತ್ಯವನ್ನು ಮಿಳಿತಗೊಳಿಸುವುದು ಎಂದು ಗೊತ್ತು. ಬಿ ಜಿ ಎಲ್ ಸ್ವಾಮಿಯವರು ಮಾಹಿತಿ ಸಾಹಿತ್ಯದಲ್ಲಿ ಕನ್ನಡ / ತಮಿಳು ಸಾಹಿತ್ಯವನ್ನು ತಂದಂತೆ ಇಲ್ಲಿ ತೇಜಸ್ವಿಯವರು ಕಥೆ ಹೇಳುತ್ತ ಎನ್‌ಸೈಕ್ಲೋಪೀಡಿಕ್ ಮಾಹಿತಿಗಳನ್ನೂ ತಮ್ಮದೇ ಶೈಲಿಯಲ್ಲಿ ಬೆರೆಸಿದ್ದಾರೆ. ಇದು ತೇಜಸ್ವಿಯವರ ಇನ್ನೊಂದು ಟ್ರೇಡ್‌ಮಾರ್ಕ್.</p>
<p>ಕಲೆ ಹಾಕಿದ ಮಾಹಿತಿಗಳೇ ಕಾದಂಬರಿ , ಸಿನಿಮಾ ಆಗುವುದಿಲ್ಲ ಎನ್ನುವುದಕ್ಕೆ  ಒಂದೆರಡು ಉದಾಹರಣೆಗಳನ್ನು ಇಲ್ಲಿ ಕೊಡುವುದು ಸೂಕ್ತ ಎಂದು ಭಾವಿಸಿದ್ದೇನೆ. ಎಸ್. ಎಲ್. ಭೈರಪ್ಪನವರ &#8216;ಸಾರ್ಥ&#8217; ಹಾಗೂ ಎಚ್. ನಾಗವೇಣಿಯವರ &#8216;ಗಾಂಧಿ ಬಂದ&#8217; ಕಾದಂಬರಿಗಳು ಕಾದಂಬರಿಗಳಲ್ಲ, ಡಾಕ್ಯುಂಬರಿಗಳು ಎನ್ನುವುದು ನನ್ನ ವಾದ. ಡಾಕ್ಯುಂಬರಿ ಎಂದರೆ ಯಾವುದೋ ದೇವತೆಯಲ್ಲ. ಡಾಕ್ಯುಮೆಂಟರಿ ಮತ್ತು ಕಾದಂಬರಿಗಳ ನಡುವಣ ಒಂದು ಹೊಸ ಅವತಾರ; ಸಾಹಿತ್ಯ ಪ್ರಕಾರ. ಈ ಎರಡೂ ಕೃತಿಗಳು ಕನ್ನಡದ ಮಟ್ಟಿಗೆ &#8216;ಡಾಕ್ಯುಂಬರಿ&#8217;ಗಳ ಹೊಸ ಪರಂಪರೆಯನ್ನು ಹುಟ್ಟುಹಾಕಿವೆ ಎಂದು ನನಗನ್ನಿಸಿದೆ. ಹಾಗೆಯೇ &#8216;ನಮ್ಮೂರ ಮಂದಾರ ಹೂವೆ&#8217; ಇತ್ಯಾದಿ ಸಿನೆಮಾಗಳು ಜೀವನ ಸಂಸ್ಕೃತಿ ಭಾಗವೊಂದರ ಎಲ್ಲ ಮಾಹಿತಿಗಳನ್ನೂ ಎರಡೂವರೆ ಗಂಟೆಯ ಕಥೆಯಲ್ಲಿ ತುರುಕಿರೋ &#8216;ಫೀಚರ್‌ಮೆಂಟರಿ&#8217;ಗಳನ್ನೂ (ಫೀಚರ್ + ಡಾಕ್ಯುಮೆಂಟರಿ) ನಾವು ನೋಡಬಹುದು. ಇವೆಲ್ಲ ಬೆಳವಣಿಗೆಗಳ ನಡುವೆ ತೇಜಸ್ವಿ ಮಾತ್ರ ತಮ್ಮ ಎಂದಿನ ಹರಟೆ ಶೈಲಿಯನ್ನೇ ಮುಂದುವರಿಸಿದ್ದಾರೆ ಎನ್ನೋದು ಹೊಸದಿಗಂತದತ್ತ ಪಯಣವೆ, ಅಲ್ಲವೆ ಎಂಬ ಚರ್ಚೆ ಮುಕ್ತವಾಗಿದೆ. ಯಾಕೆಂದರೆ ಈ ಲೇಖನ ಮೊದಲ ನೋಟದ, ತತ್‌ಕ್ಷಣದ ಪ್ರತಿಕ್ರಿಯೆ. ಈ ಥರ ಕಾದಂಬರಿಯನ್ನು ಓದಿದ ಕೂಡಲೇ ಅನ್ನಿಸಿದ್ದನ್ನು ಬರೆಯುವುದೂ ಹೊಸ ಅಭಿವ್ಯಕ್ತಿ ವಿಧಾನ ಮತ್ತು ಇನ್‌ಸ್ಟಂಟ್ ವಿಮರ್ಶೆಯ ಒಂದು ನಿದರ್ಶನ ಎಂದು ತೇಜಸ್ವಿಯವರು ಮತ್ತು ಓದುಗರಾದ ತಾವು ಒಪ್ಪಿಕೊಳ್ಳಬೇಕಂದು ನನ್ನ ನಮ್ರ ವಿನಂತಿ.</p>
<p>ಆದರೆ &#8216;ಮಾಯಾಲೋಕ&#8217;ದಲ್ಲಿ ಹರಟೆಯು ಕೆಲವೊಮ್ಮೆ ವಾಚಾಳಿತನದತ್ತ ವಾಲಿದೆ. ಕಥೆಯಲ್ಲಿ ಘಟನೆಗಳ ಚಲನೆ ಎಂಥ ಪರಿಣಾಮವನ್ನು ಬೀರುತ್ತದೆ ಎಂದು ತೇಜಸ್ವಿಯರಿಗೆ ಯಾರೂ ಹೇಳಿಕೊಡಬೇಕಿಲ್ಲ. ಅವರ &#8216;ಜುಗಾರಿ ಕ್ರಾಸ್&#8217; ಓದಿದವರು ಈ ಬಗ್ಗೆ ಪ್ರಮಾಣ ಮಾಡಲೂ ಸಿದ್ಧ.  ಇಲ್ಲಿ ನಡೆವ ಘಟನೆಗಳನ್ನಷ್ಟೇ ನೋಡಿದರೆ ಅವು ಶಾಕ್ ಆಗುವ ಮಟ್ಟದಲ್ಲಿ ಇಲ್ಲ. ಆದರೆ ಯಾರಿಗ್ಗೊತ್ತು, ಅವರು ಹೇಳಿದ ಹಾಗೆ ಬೆಟ್ಟು ತೋರಿಸದೇ ಹೋದ ಸೂಕ್ಷ್ಮಗಳನ್ನು  ನಾನು ಅರಿಯಲಾಗದೇ ಹೋಗಿರಬಹುದು!  ಆದರೆ ಒಂದಂತೂ ಹೇಳಬಲ್ಲೆ: ಮಾಯಾಲೋಕ ಕನ್ನಡದಲ್ಲಿ ಬಂದ ಒಂದು ಅತ್ಯುತ್ತಮ ಪ್ರಯೋಗ. ಹಳ್ಳಿಯ ಬೀದಿಗಳಲ್ಲೂ ಲವಲವಿಕೆಯ ಬದುಕನ್ನು ಕಂಡು ದಾಖಲಿಸುವ, ಅವರ ನಡುವಣ ಸೂಕ್ಷ್ಮ ಡೈಲಾಗ್‌ಗಳನ್ನೂ ಅಂತಂತೇನೇ ಓದುಗರಿಗೆ ಒಪ್ಪಿಸುವ ಚಾಕಚಕ್ಯತೆಯಲ್ಲಿ ತೇಜಸ್ವಿ ಮಿಂಚಿದ್ದಾರೆ.   ಮೂಡಿಗೆರೆಯ/ ಅರ್ಥಾತ್ ಯಾವುದೋ ಹಳ್ಳಿಯೊಂದರ ಲ್ಯಾಂಡ್‌ಸ್ಕೇಪ್‌ನ್ನು ಲ್ಯಾಂಡ್‌ಸ್ಕೇಪ್ ಆಕಾರದಲ್ಲೇ ಕೊಡುವ ಅವರ ಪ್ರಯೋಗಶೀಲತೆ, ಚಟಪಟನೆ ನಡೆಯುವ ಘಟನೆಗಳ ಸಾಂದ್ರತೆ &#8211; ಇವೆಲ್ಲವೂ ಕನ್ನಡ ಸಾಹಿತ್ಯದಲ್ಲಿ ತುಂಬಾ ಅಪರೂಪ, ವಿಶಿಷ್ಟ.</p>
<p>ಬೆಲೆಯ ಬಗ್ಗೆ ಮತ್ತು ಟೈಪೋ ದೋಷಗಳ ಬಗ್ಗೆ ಒಂದಷ್ಟು ಗಮನ ಹರಿಸಿದ್ದರೆ ಮಾಯಾಲೋಕದ ಅನುಭವ ಇನ್ನಷ್ಟು  ರಮ್ಯವಾಗಿರುತ್ತಿತ್ತು.</p>
<p>ಹಾಗಾದರೆ ಮಾಯಾಲೋಕವನ್ನು ಓದಬೇಕ ಬೇಡವಾ ಅಂತ ಕೇಳಿದರೆ ಖಂಡಿತ ಕಡ ತಂದಾದ್ರೂ ಓದಿ ಎಂದು ಖುಷಿಯಾಗಿ ಹೇಳಬಹುದು!  ನಾನು ಓದಿದ್ದೇ ಹಾಗೆ ತಾನೆ? ಪತ್ರಿಕೆಗಳು (ಪ್ರಿಂಟ್ ಮೀಡಿಯಾ)  ಗೌರವ ಪ್ರತಿಗಾಗಿ ಕಾದು, ಅದು ಅಕಸ್ಮಾತ್ ಬಂದರೆ, ಅದೂ ಎರಡು ಪ್ರತಿಗಳಿದ್ದರೆ, ಒಂದನ್ನು  ವಿಮರ್ಶಕರಿಗೆ ಕಳಿಸಿ ಅವರ ವಿಮರ್ಶೆ ಬಂದು ಕಂಪೋಸ್ ಆಗಿ ಪ್ರಕಟವಾಗೋ ಹೊತ್ತಿಗೆ&#8230;. ಈ ಇನ್‌ಸ್ಟಂಟ್ ವಿಮರ್ಶೆನ ತೇಜಸ್ವಿಯವರೂ ಓದಿ ಮುಗಿಸಿ ಮರೆತಿರುತ್ತಾರೆ ಅನ್ನೋ ದೃಢವಿಶ್ವಾಸ ನನಗಿದೆ.</p>
<p>ಮಾಯಾಲೋಕ ಭಾಗ &#8211; ೧<br />
ಕೆ ಪಿ ಪೂರ್ಣಚಂದ್ರ ತೇಜಸ್ವಿ<br />
ಪುಸ್ತಕ ಪ್ರಕಾಶನ, ೨೦೦೬<br />
ಪುಟಗಳು : ೨೫೦<br />
ಬೆಲೆ : ರೂ.೨೨೨</p>
<p><input id="gwProxy" type="hidden" /><input id="jsProxy" onclick="jsCall();" type="hidden" /></p><p>The post <a href="http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%ae%e0%b2%be%e0%b2%af%e0%b2%be%e0%b2%b2%e0%b3%8b%e0%b2%95%e0%b2%a6-%e0%b2%ae%e0%b3%8a%e0%b2%a6%e0%b2%b2%e0%b2%a8%e0%b3%8b%e0%b2%9f/">'ಮಾಯಾಲೋಕ'ದ  ಮೊದಲನೋಟ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%ae%e0%b2%be%e0%b2%af%e0%b2%be%e0%b2%b2%e0%b3%8b%e0%b2%95%e0%b2%a6-%e0%b2%ae%e0%b3%8a%e0%b2%a6%e0%b2%b2%e0%b2%a8%e0%b3%8b%e0%b2%9f/feed/</wfw:commentRss>
			<slash:comments>1</slash:comments>
		
		
			</item>
		<item>
		<title>ಪದ್ಯಕ್ಕೂ ಸೈ. ಗದ್ಯಕ್ಕೂ ಸೈ</title>
		<link>http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%aa%e0%b2%a6%e0%b3%8d%e0%b2%af%e0%b2%95%e0%b3%8d%e0%b2%95%e0%b3%82-%e0%b2%b8%e0%b3%88-%e0%b2%97%e0%b2%a6%e0%b3%8d%e0%b2%af%e0%b2%95%e0%b3%8d%e0%b2%95%e0%b3%82-%e0%b2%b8%e0%b3%88/</link>
					<comments>http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%aa%e0%b2%a6%e0%b3%8d%e0%b2%af%e0%b2%95%e0%b3%8d%e0%b2%95%e0%b3%82-%e0%b2%b8%e0%b3%88-%e0%b2%97%e0%b2%a6%e0%b3%8d%e0%b2%af%e0%b2%95%e0%b3%8d%e0%b2%95%e0%b3%82-%e0%b2%b8%e0%b3%88/#comments</comments>
		
		<dc:creator><![CDATA[admin]]></dc:creator>
		<pubDate>Sun, 18 Dec 2005 19:15:12 +0000</pubDate>
				<category><![CDATA[ವಿಮರ್ಶೆ]]></category>
		<guid isPermaLink="false">http://localhost/vishwakannada/?p=137</guid>

					<description><![CDATA[<h3>- ಡಾ. ಯು. ಬಿ. ಪವನಜ</h3>
<p>ಕವಿತೆ ನೀನೇಕೆ ಪದಗಳಲ್ಲಿ ಅವಿತೆ ಎಂದು ವೈಎನ್‌ಕೆ ತಮ್ಮ ಚುಟುಕವೊಂದರಲ್ಲಿ ಬರೆದಿದ್ದರು. ಕನ್ನಡದಲ್ಲಿ ಚುಟುಕಗಳಿಗೆ ತಮ್ಮದೇ ಆದ ಇತಿಹಾಸ ಪರಂಪರೆ ಇದೆ. ಈ ಸಾಲಿನಲ್ಲಿ ಈಗಿನ ದೊಡ್ಡ ಹೆಸರು ಡುಂಡಿರಾಜ್. ಚಿಕ್ಕ ಕವನಗಳಿಗೆ ದೊಡ್ಡ ಹೆಸರು ಅವರದು. ಡುಂಡಿರಾಜರ ಬೀಸಣಿಗೆಗಳಲ್ಲಿ ನಾನೂ ಒಬ್ಬ. ಡುಂಡಿರಾಜರ ಚುಟುಕಗಳನ್ನು ಪ್ರಕಟಿಸದ ಕನ್ನಡ ಪತ್ರಿಕೆ, ಓದದ ಕನ್ನಡ ಓದುಗ ಇರಲಾರರು. ವಾರಪತ್ರಿಕೆ, ಮಾಸಪತ್ರಿಕೆ, ದೀಪಾವಳಿ, ಯುಗಾದಿ ವಿಶೇಷಾಂಕಗಳಲ್ಲಿ ಚುಟುಕಗಳನ್ನು ಫಿಲ್ಲರ್ ರೀತಿಯಲ್ಲಿ ಬಳಸುವ ಪದ್ಧತಿ ಇದೆಯಾದರೂ ಬಹಳಷ್ಟು ಮಂದಿ ಓದುಗರು ಈ ಚುಟುಕಗಳನ್ನು ಮತ್ತು ನಗೆಹನಿಗಳನ್ನು ಮೊದಲು ಓದಿ ನಂತರ ಇತರೆ ಲೇಖನಗಳನ್ನು ಓದುತ್ತಾರೆ ಎಂಬುದೂ ಸತ್ಯ. ಇಷ್ಟೆಲ್ಲ ಡುಂಡಿರಾಜ್ ಮತ್ತು ಅವರ ಚುಟುಕಗಳ ಬಗ್ಗೆ ಹೇಳಿರುವುದು ನೋಡಿದರೆ ನಾನಿಲ್ಲಿ ಬರೆಯಹೊರಟಿರುವುದು ಅವರ ಇನ್ನೊಂದು ಚುಟುಕಗಳ ಸಂಗ್ರಹದ ಬಗ್ಗೆ ಎಂದುಕೊಳ್ಳುತ್ತೀರೇನೋ. ಆದರೆ ವಸ್ತು ಸ್ಥಿತಿ ಅದಲ್ಲ. ಡುಂಡಿರಾಜ್ ಅವರು ದಿನಪತ್ರಿಕೆಯೊಂದರಲ್ಲಿ “ಮಾತು ಕ(ವಿ)ತೆ” ಎಂಬ ಹೆಸರಿನಲ್ಲಿ ಅಂಕಣ ಬರೆಯುತ್ತಾರೆ. ಇದರಲ್ಲಿ ಗದ್ಯ ಮತ್ತು ಪದ್ಯಗಳ  ಸಮ್ಮಿಶ್ರಣವಿದೆ. ಈ ಅಂಕಣದ ೪೫ ಲೇಖನಗಳನ್ನು ಅಂಕಿತ ಪುಸ್ತಕ ಪ್ರಕಾಶನದವರು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಪುಸ್ತಕದ ಹೆಸರೂ “ಮಾತು ಕ(ವಿ)ತೆ”.</p>
<p>The post <a href="http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%aa%e0%b2%a6%e0%b3%8d%e0%b2%af%e0%b2%95%e0%b3%8d%e0%b2%95%e0%b3%82-%e0%b2%b8%e0%b3%88-%e0%b2%97%e0%b2%a6%e0%b3%8d%e0%b2%af%e0%b2%95%e0%b3%8d%e0%b2%95%e0%b3%82-%e0%b2%b8%e0%b3%88/">ಪದ್ಯಕ್ಕೂ ಸೈ. ಗದ್ಯಕ್ಕೂ ಸೈ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<p> ಡಾ. ಯು. ಬಿ. ಪವನಜ<br />
ಕವಿತೆ ನೀನೇಕೆ ಪದಗಳಲ್ಲಿ ಅವಿತೆ ಎಂದು ವೈಎನ್‌ಕೆ ತಮ್ಮ ಚುಟುಕವೊಂದರಲ್ಲಿ ಬರೆದಿದ್ದರು. ಕನ್ನಡದಲ್ಲಿ ಚುಟುಕಗಳಿಗೆ ತಮ್ಮದೇ ಆದ ಇತಿಹಾಸ ಪರಂಪರೆ ಇದೆ. ಈ ಸಾಲಿನಲ್ಲಿ ಈಗಿನ ದೊಡ್ಡ ಹೆಸರು ಡುಂಡಿರಾಜ್. ಚಿಕ್ಕ ಕವನಗಳಿಗೆ ದೊಡ್ಡ ಹೆಸರು ಅವರದು. ಡುಂಡಿರಾಜರ ಬೀಸಣಿಗೆಗಳಲ್ಲಿ ನಾನೂ ಒಬ್ಬ. ಡುಂಡಿರಾಜರ ಚುಟುಕಗಳನ್ನು ಪ್ರಕಟಿಸದ ಕನ್ನಡ ಪತ್ರಿಕೆ, ಓದದ ಕನ್ನಡ ಓದುಗ ಇರಲಾರರು. ವಾರಪತ್ರಿಕೆ, ಮಾಸಪತ್ರಿಕೆ, ದೀಪಾವಳಿ, ಯುಗಾದಿ ವಿಶೇಷಾಂಕಗಳಲ್ಲಿ ಚುಟುಕಗಳನ್ನು ಫಿಲ್ಲರ್ ರೀತಿಯಲ್ಲಿ ಬಳಸುವ ಪದ್ಧತಿ ಇದೆಯಾದರೂ ಬಹಳಷ್ಟು ಮಂದಿ ಓದುಗರು ಈ ಚುಟುಕಗಳನ್ನು ಮತ್ತು ನಗೆಹನಿಗಳನ್ನು ಮೊದಲು ಓದಿ ನಂತರ ಇತರೆ ಲೇಖನಗಳನ್ನು ಓದುತ್ತಾರೆ ಎಂಬುದೂ ಸತ್ಯ. ಇಷ್ಟೆಲ್ಲ ಡುಂಡಿರಾಜ್ ಮತ್ತು ಅವರ ಚುಟುಕಗಳ ಬಗ್ಗೆ ಹೇಳಿರುವುದು ನೋಡಿದರೆ ನಾನಿಲ್ಲಿ ಬರೆಯಹೊರಟಿರುವುದು ಅವರ ಇನ್ನೊಂದು ಚುಟುಕಗಳ ಸಂಗ್ರಹದ ಬಗ್ಗೆ ಎಂದುಕೊಳ್ಳುತ್ತೀರೇನೋ. ಆದರೆ ವಸ್ತು ಸ್ಥಿತಿ ಅದಲ್ಲ. ಡುಂಡಿರಾಜ್ ಅವರು ದಿನಪತ್ರಿಕೆಯೊಂದರಲ್ಲಿ “ಮಾತು ಕ(ವಿ)ತೆ” ಎಂಬ ಹೆಸರಿನಲ್ಲಿ ಅಂಕಣ ಬರೆಯುತ್ತಾರೆ. ಇದರಲ್ಲಿ ಗದ್ಯ ಮತ್ತು ಪದ್ಯಗಳ  ಸಮ್ಮಿಶ್ರಣವಿದೆ. ಈ ಅಂಕಣದ ೪೫ ಲೇಖನಗಳನ್ನು ಅಂಕಿತ ಪುಸ್ತಕ ಪ್ರಕಾಶನದವರು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಪುಸ್ತಕದ ಹೆಸರೂ “ಮಾತು ಕ(ವಿ)ತೆ”.</p>
<p>ಸುಮಾರು ೨೫-೩೦ ವರ್ಷಗಳಿಂದ ಬರೆಯುತ್ತಿರುವ ಡುಂಡಿರಾಜರ ಲೇಖನಿಯ ಮೊನಚು ಇನ್ನೂ ಹಾಗೆಯೇ ಇದೆ. ನಮ್ಮಲ್ಲಿ ಬಹುಪಾಲು ಲೇಖಕರು ಇಪ್ಪತ್ತು ವರ್ಷಗಳ ಬರೆವಣಿಗೆಯ ನಂತರ ಮೊನಚು ಕಳೆದುಕೊಂಡಿರುತ್ತಾರೆ. ಹಾಸ್ಯ ಲೇಖಕರ ಮಟ್ಟಿಗಂತೂ ಇದು ಬಹುಮಟ್ಟಿಗೆ ಅನ್ವಯವಾಗುತ್ತದೆ. ಆದರೆ ಡುಂಡಿರಾಜ್ ಇದಕ್ಕೆ ಅಪವಾದ. ಅವರ ಇತ್ತೀಚೆಗಿನ ಚುಟುಕದಲ್ಲೂ ಹೊಸತನ, ಸೃಜನಶೀಲತೆ ಇಪ್ಪತ್ತು ವರ್ಷಗಳ ಹಿಂದೆ ಇದ್ದಂತೆಯೇ ಇದೆ. ಅವರ ಗದ್ಯಕ್ಕೂ ಇದು ಅನ್ವಯಿಸುತ್ತದೆ. “ಪರ್ಯಾಯ ಸಮ್ಮೇಳನ ಮುಂದಿನ ವರ್ಷ ನಡೆಯದಿದ್ದುದರಿಂದ ಸಾಹಿತಿಗಳಿಗೆ ಕ.ಸಾ.ಪ. ಸಮ್ಮೇಳನದಲ್ಲಿ ಭಾಗವಹಿಸುವುದಲ್ಲದೆ ಪರ್ಯಾಯ ಮಾರ್ಗವೇ ಇರಲಿಲ್ಲ” ಎಂಬ ವಾಕ್ಯವನ್ನೇ ನೋಡಿ. ಚುಟುಕದಲ್ಲಿ ಡುಂಡಿರಾಜ್ ಮಾಡುವ ಮೋಡಿಯೇ ಇಲ್ಲಿಯೂ ಕಾಣಸಿಗುತ್ತದೆ.</p>
<p>ಲೇಖನದ ಹೆಸರೇ ಹೇಳುವಂತೆ ಇದರಲ್ಲಿ ಗದ್ಯ ಮತ್ತು ಪದ್ಯಗಳ ನವಿರಾದ ಮಿಶ್ರಣವಿದೆ. ಡುಂಡಿರಾಜರು ತಮ್ಮದೇ ಚುಟುಕಗಳನ್ನು ಅಲ್ಲಲ್ಲಿ ಸೂಕ್ತವಾಗಿ ಬಳಸಿರುವುದಲ್ಲದೆ ಇತರೆ ಖ್ಯಾತ ಕವಿಗಳ ಚುಟುಕಗಳನ್ನೂ ಸೇರಿಸಿಕೊಂಡಿದ್ದಾರೆ. ಉದಾಹರಣೆಗೆ ವೈಎನ್‌ಕೆಯವರ “ಸುಲೋಚನೆ ಸುಲೋಚನೆ ಏನು ನಿನ್ನ ಆಲೋಚನೆ”.  ಕೆಲವು ಲೇಖನಗಳ ಶೀರ್ಷಿಕೆಗಳೇ ಕಾವ್ಯಮಯವಾಗಿ ಆಕರ್ಷಕವಾಗಿವೆ. ಉದಾ -“ಯಾವ ಮೋಹನ ಆಳ್ವ ಕರೆದರು ಮೂಡುಬಿದಿರೆಗೆ ಇವರನು”, “ಮರಳಿ ಮಂಗಳೂರಿನ ಮರಳಿಗೆ”. ಪುಸ್ತಕದ ಇನ್ನೊಂದು ಆಕರ್ಷಣೆ ಹರಿಣಿಯವರ ವ್ಯಂಗ್ಯಚಿತ್ರಗಳು.<br />
<img decoding="async" src="http://vishvakannada.com/files/maathukavithe-s.jpg" alt="" align="right" /><br />
ಅಂಕಣ ಬರೆಹಗಾರರು ಆಯಾ ಕಾಲದ ಪ್ರಸ್ತುತ ವಿಷಯಗಳಿಗೆ ಸ್ಪಂದಿಸಿ ತಮ್ಮ ಅಂಕಣದಲ್ಲಿ ಬರೆಯುವ ಪದ್ಧತಿ ಇದೆ. ಡುಂಡಿರಾಜರೂ ಅದನ್ನು  “ನಗಿಸುವವರ ಡೆಮಾಕ್ರಟಿಕ್ ಅಲೆಯನ್ಸ್ (NDA)”  ಲೇಖನದಲ್ಲಿ ಮಾಡಿದ್ದಾರೆ. ಇದನ್ನು ಓದುವಾಗ ನಾವು ಮಾನಸಿಕವಾಗಿ ಆ ಕಾಲಕ್ಕೆ ಹಿಂದಕ್ಕೆ ತೆರಳಿದರೆ ಹೆಚ್ಚು ಸ್ವಾರಸ್ಯವನ್ನು ಅನುಭವಿಸಬಹುದು. ಅಂಕಣ ಬರೆಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವವರಿಗೆ ನನ್ನದೊಂದು ಚಿಕ್ಕ ವಿನಂತಿ. ದಯವಿಟ್ಟು ಲೇಖನದ ಆರಂಭದಲ್ಲಿ ಅಥವಾ ಕೊನೆಯಲ್ಲಿ ಲೇಖನ ಪ್ರಕಟವಾದ ದಿನಾಂಕವನ್ನೂ ನಮೂದಿಸಿ. ಆಯಾ ಕಾಲದ ಪ್ರಸ್ತುತ ವಿಷಯಗಳಿಗೆ ಸ್ಪಂದಿಸಿ ಡುಂಡಿರಾಜರು ಬ್ಯಾಂಕ್ ಚಳವಳಿಯ ಬಗ್ಗೆಯೂ ತಮ್ಮ ಅಂಕಣದಲ್ಲಿ ಬರೆದಿದ್ದರು ಮಾತ್ರವಲ್ಲ ತಾವು ಬ್ಯಾಂಕ್ ಉದ್ಯೋಗಿಯಾಗಿ ಬ್ಯಾಂಕ್ ನೌಕರರ ಚಳವಳಿಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಆ ಲೇಖನವನ್ನು ಈ ಪುಸ್ತಕದಲ್ಲಿ ಸೇರಿಸಿಲ್ಲ.</p>
<p>ಜಯಂತ ಕಾಯ್ಕಿಣಿಯವರು ಮುನ್ನುಡಿಯಲ್ಲಿ ಹೇಳಿರುವಂತೆ ಇವರು ಎಂದೆಂದಿಗೂ ಬಾರಿಸುತ್ತಿರಲಿ ಕನ್ನಡ ಡುಂಡಿಮವ. ಉತ್ತಮ ಪುಸ್ತಕ ನೀಡಿದ ಡುಂಡಿರಾಜರಿಗೆ ನಮ್ಮ  oneದನೆ.</p>
<p>(ಕೃಪೆ: ಉದಯವಾಣಿ, ೧೮-೧೨-೨೦೦೫)</p>
<p>ಪುಸ್ತಕದ ಹೆಸರು: <strong>ಮಾತು ಕ(ವಿ)ತೆ</strong><br />
ಲೇಖಕ: <strong>ಎಚ್. ಡುಂಡಿರಾಜ್</strong><br />
ಪ್ರಕಾಶಕರು: ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು<br />
ಪುಟಗಳು: ೨೦೪ + ೧೦<br />
ಬೆಲೆ: ರೂ.೯೫/-<br />
ಪ್ರಕಟಣೆಯ ವರ್ಷ: ೨೦೦೫ (ಮೊದಲನೆಯ ಮುದ್ರಣ)</p>
<p><input id="gwProxy" type="hidden" /><input id="jsProxy" onclick="jsCall();" type="hidden" />   </p><p>The post <a href="http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%aa%e0%b2%a6%e0%b3%8d%e0%b2%af%e0%b2%95%e0%b3%8d%e0%b2%95%e0%b3%82-%e0%b2%b8%e0%b3%88-%e0%b2%97%e0%b2%a6%e0%b3%8d%e0%b2%af%e0%b2%95%e0%b3%8d%e0%b2%95%e0%b3%82-%e0%b2%b8%e0%b3%88/">ಪದ್ಯಕ್ಕೂ ಸೈ. ಗದ್ಯಕ್ಕೂ ಸೈ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86/%e0%b2%aa%e0%b2%a6%e0%b3%8d%e0%b2%af%e0%b2%95%e0%b3%8d%e0%b2%95%e0%b3%82-%e0%b2%b8%e0%b3%88-%e0%b2%97%e0%b2%a6%e0%b3%8d%e0%b2%af%e0%b2%95%e0%b3%8d%e0%b2%95%e0%b3%82-%e0%b2%b8%e0%b3%88/feed/</wfw:commentRss>
			<slash:comments>1</slash:comments>
		
		
			</item>
	</channel>
</rss>

<!--
Performance optimized by W3 Total Cache. Learn more: https://www.boldgrid.com/w3-total-cache/?utm_source=w3tc&utm_medium=footer_comment&utm_campaign=free_plugin

Page Caching using Disk: Enhanced 

Served from: vishvakannada.com @ 2026-07-11 17:59:37 by W3 Total Cache
-->