<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಬೇಳೂರು ಸುದರ್ಶನ ಅವರ ಅಂಕಣ | Vishva Kannada</title>
	<atom:link href="http://vishvakannada.com/category/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/feed/" rel="self" type="application/rss+xml" />
	<link>http://vishvakannada.com</link>
	<description></description>
	<lastBuildDate>Tue, 12 Apr 2016 08:19:16 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>
	<item>
		<title>ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?</title>
		<link>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ad%e0%b3%88%e0%b2%b0%e0%b2%aa%e0%b3%8d%e0%b2%aa%e0%b2%a8%e0%b2%b5%e0%b2%b0/</link>
					<comments>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ad%e0%b3%88%e0%b2%b0%e0%b2%aa%e0%b3%8d%e0%b2%aa%e0%b2%a8%e0%b2%b5%e0%b2%b0/#respond</comments>
		
		<dc:creator><![CDATA[admin]]></dc:creator>
		<pubDate>Wed, 02 Dec 2009 12:33:19 +0000</pubDate>
				<category><![CDATA[ಬೇಳೂರು ಸುದರ್ಶನ ಅವರ ಅಂಕಣ]]></category>
		<guid isPermaLink="false">http://vishvakannada.com/?p=650</guid>

					<description><![CDATA[<p>&#8211; [http://mitramaadhyama.co.in&#124;ಬೇಳೂರು ಸುದರ್ಶನ] ಕಾವೇರಿ ವಿಷಯ ತಣ್ಣಗಾದ ಮೇಲೆ `ಆವರಣ’ ದ ಶಾಖ ಹಬ್ಬುವ ಲಕ್ಷಣಗಳು ಗೋಚರಿಸುತ್ತಿವೆ. ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ? ಐದು ವರ್ಷಗಳ ಹಿಂದಿನ ಮಾತು. ನಾನು ಆಗ ದಿನಪತ್ರಿಕೆಯೊಂದರ ಮ್ಯಾಗಜಿನ್‌ಗಾಗಿ&#8230;</p>
<p>The post <a href="http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ad%e0%b3%88%e0%b2%b0%e0%b2%aa%e0%b3%8d%e0%b2%aa%e0%b2%a8%e0%b2%b5%e0%b2%b0/">ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<div>
<h3><span>&#8211; [<a href="http://mitramaadhyama.co.in%7c%e0%b2%ac%e0%b3%87%e0%b2%b3%e0%b3%82%e0%b2%b0%e0%b3%81/">http://mitramaadhyama.co.in|ಬೇಳೂರು</a> ಸುದರ್ಶನ]</span></h3>
<p>ಕಾವೇರಿ ವಿಷಯ ತಣ್ಣಗಾದ ಮೇಲೆ `ಆವರಣ’ ದ ಶಾಖ ಹಬ್ಬುವ ಲಕ್ಷಣಗಳು ಗೋಚರಿಸುತ್ತಿವೆ.</p>
<p>ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?</p>
<p>ಐದು ವರ್ಷಗಳ ಹಿಂದಿನ ಮಾತು. ನಾನು ಆಗ ದಿನಪತ್ರಿಕೆಯೊಂದರ ಮ್ಯಾಗಜಿನ್‌ಗಾಗಿ ಎಸ್.ಎಲ್. ಭೈರಪ್ಪನವರ ಸಂದರ್ಶನ ಮಾಡಲು ಇಬ್ಬರು ಸಹೋದ್ಯೋಗಿಗಳೊಂದಿಗೆ ಮೈಸೂರಿಗೆ ಹೋಗಿದ್ದೆ. ಭೈರಪ್ಪನವರ ಮನೆಯಲ್ಲೇ ಇಡೀ ದಿನ ವಾಸ. ಬೆಳಗ್ಗೆಯಿಂದ ಸಂಜೆವರೆಗೆ ಅವರ ಆತಿಥ್ಯದ ನಡುವೆಯೇ ಸಂದರ್ಶನ. ಇನ್ನಷ್ಟೇ ಬಿಡುಗಡೆಯಾಗಲಿರುವ `ಮಂದ್ರ’ದ ನೆರಳಿನಲ್ಲಿ ಈ ಸಂದರ್ಶನಕ್ಕೆ ವಿಶೇಷ ಮಹತ್ವ ಬಂದಿತ್ತು.</p>
<p>ಸಂದರ್ಶನದ ಪ್ರಶ್ನೆಗಳನ್ನು ಮೊದಲೇ ಕಳಿಸಿದ್ದರಿಂದ ಅವರೂ ಉತ್ತರಗಳನ್ನು ಸಿದ್ಧ ಮಾಡಿ ಉಕ್ತಲೇಖನ ನೀಡಿದ್ದು ವಿಚಿತ್ರ ಅನ್ನಿಸಿದ್ದು ನಿಜ. ಆದರೆ ಪ್ರಶ್ನೆ ಕೇಳಿದ ಕೂಡಲೇ ಬಾಯಿಗೆ ಬಂದ ಹಾಗೆ ಗಳಹುವ, ಮರುದಿನ ಪತ್ರಕರ್ತರೇ ತಮ್ಮನ್ನು ತಪ್ಪಾಗಿ ಉಲ್ಲೇಖಿಸಿದ್ದಾರೆ ಎಂದು ಗೂಬೆ ಕೂರಿಸುವ ವರ್ತನೆಗಳ ಹಿನ್ನೆಲೆಯಲ್ಲಿ ಭೈರಪ್ಪ ಮಾಡಿದ್ದು ಸರಿ ಅನ್ನಿಸಿತ್ತು.</p>
<p>ಔಪಚಾರಿಕ ಸಂದರ್ಶನದ ಕೊನೆಗೆ ಅನೌಪಚಾರಿಕವಾಗಿ ಮಾತು ಹರಿಯಿತು. ಸುದೀರ್ಘ ಉತ್ತರಗಳನ್ನು ಕೊಟ್ಟು ಕೊಂಚ ಬಳಲಿದಂತೆ ಕಂಡ ಭೈರಪ್ಪನವರು ಎಂಥ ಪ್ರಶ್ನೆಗೂಉತ್ತರ ನೀಡಿಯಾರೇ ಎಂಬ ಅನುಮಾನ, ಕುತೂಹಲ ನಮಗಿತ್ತು. ನನ್ನ ಸಹೋದ್ಯೋಗಿ ಪತ್ರಕರ್ತೆ ಕೇಳಿಯೇ ಬಿಟ್ಟಳು: ರಾಮಜನ್ಮ ಭೂಮಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು?</p>
<p>ಈ ಪ್ರಶ್ನೆಯೂ ಅನಿರೀಕ್ಷಿತ; ನಾನೂ ಅನೌಪಚಾರಿಕವಾಗೇ ಉತ್ತರ ನೀಡುತ್ತೇನೆ, ಪ್ರಕಟನೆಗೆ ಅಲ್ಲ ಎಂದು ಭೈರಪ್ಪನವರು ಸುಮಾರು ಮುಕ್ಕಾಲು ತಾಸು ತಾವು ಅಧ್ಯಯನ ಮಾಡಿದ ಸಂಗತಿಗಳನ್ನು ನಮಗೆ ವಿವರಿಸಿದರು. ಮುಸ್ಲಿಮ್ ದಾಳಿಯ ಸಂಗತಿಗಳನ್ನು, ಇಸ್ಲಾಮೀ ಚಿಂತನೆಯ ಕೆಲವು ಸಂಗತಿಗಳನ್ನು ಅವರು ನೇರವಾಗಿ ಗ್ರಂಥಗಳನ್ನು ಉಲ್ಲೇಖಿಸಿಯೇ ವಿವರಿಸಿದರು. ಇದೆಲ್ಲವನ್ನೂ ನೀವು ಬರೆಯಬಾರದು ಎಂದೇನಿಲ್ಲ. ಆದರೆ ಹೀಗೆ ಬರೆಯುವುದರಿಂದ ಸಾಹಿತ್ಯದ ಕುರಿತಾದ ಸಂದರ್ಶನದ ಕೇಂದ್ರಗಮನ ಹೊರಟುಹೋಗುತ್ತದೆ. ಅಲ್ಲದೆ ಇದ್ನೆಲ್ಲ ಸಂಕ್ಷಿಪ್ತವಾಗಿ ಬರೆಯುವುದೂ ಆಗದ ಕೆಲಸ. ಮುಂದೆ ನೋಡೋಣ ಎಂದು ಭೈರಪ್ಪನವರು ಹೇಳಿದರು. ನಾವು ಅವರ ಮಾತನ್ನು ಒಪ್ಪಿದೆವು. ಅವರು ಭಾರತದ ಇತಿಹಾಸದ ಬಗ್ಗೆ ಮಾಡಿದ ಈ ವಿಶೇಷ ಖಾಸಗಿ ಉಪನ್ಯಾಸ ಪ್ರಕಟವಾಗಲಿಲ್ಲ.</p>
<p>ಆದರೆ ಈಗ ಎಸ್.ಎಲ್.ಭೈರಪ್ಪ ಬಂಡೆದ್ದಿದ್ದಾರೆ. ದಶಕಗಳ ಕಾಲ ಅವರು ಕಟ್ಟಿಕೊಂಡು ಬಂದಿದ್ದ ಸಹನೆ ಈಗ ಕಟ್ಟೆ ಒಡೆದಿದೆ. ಅವರೇ ತಮ್ಮ ಸುತ್ತ ಕಟ್ಟಿಕೊಂಡಿದ್ದ ಆವರಣದ ಗೋಡೆಗಳು ಕುಸಿದು ಬಿದ್ದಿವೆ.<br />
`ಆವರಣ’ ಕಾದಂಬರಿಯ ಮೂಲಕ ಭೈರಪ್ಪನವರು ಕಲಾತ್ಮಕತೆಯನ್ನಾದರೂ ಬಲಿಕೊಟ್ಟು ಇತಿಹಾಸದ ಬಗ್ಗೆ ತಾನು ಕಂಡ ಸತ್ಯವನ್ನು ಹೇಳಿಬಿಡಬೇಕು ಎಂದು ಹಟ ತೊಟ್ಟು ಹೆಜ್ಜೆ ಇಟ್ಟಿದ್ದಾರೆ. ಅಧ್ಯಯನದ ಸಂಗತಿಗಳನ್ನು ಕಾದಂಬರಿಯ ರೂಪದಲ್ಲಿ ನೀಡುವಾಗ ಇರುವ ತೊಡಕುಗಳನ್ನು ಅವರು ಎದುರಿಸಿದ್ದಾರೆ. `ಸಾರ್ಥ’ದಲ್ಲಿ ಕೇವಲ ಐತಿಹಾಸಿಕ ಕಥೆ ಹರಿದಿದ್ದರೆ ಇಲ್ಲಿ ಸಮಕಾಲೀನ ಪಾತ್ರಗಳ ಮೂಲಕ ಇಂದಿನ ಕಥೆ, ಹಿಂದಿನ ಕಥೆ – ಎಲ್ಲವೂ ಅನಾವರಣಗೊಳ್ಳುತ್ತವೆ.</p>
<p>ಇಸ್ಲಾಮೀ ಆಕ್ರಮಣದ ಪ್ರಮುಖ ಹೆಜ್ಜೆಗುರುತುಗಳನ್ನು ಅವರು ಸಮಕಾಲೀನ ಪಾತ್ರವೊಂದರ ಮೂಲಕ ಹೇಳಿಸಿದ್ದಾರೆ. `ಆವರಣ’ ನಿಷೇಧಕ್ಕೆ ಒಳಗಾದರೂ ಆದೀತು ಎಂಬ ಅನುಮಾನದಿಂದಲೋ ಏನೋ, ಅದನ್ನು ನ್ಯಾ|| ಎಂ. ರಾಮಾಜೋಯಿಸರು, ಹಾರ್&#x200d;ನಹಳ್ಳಿ ಅಶೋಕ್ ಈ ಕಾದಂಬರಿಯನ್ನು ಓದಿದ್ದಾರೆ ಎಂದು ಮುನ್ನುಡಿಯಲ್ಲೇ ಉಲ್ಲೇಖಿಸಿ `ಸಾಮಾಜಿಕ ಕೇವಿಯಟ್’ ಪಡೆದಿದ್ದಾರೆ. ಕಾದಂಬರಿಯ ಕೊನೆಯಲ್ಲಿ ಕಥಾ ನಾಯಕಿಯಿಂದಲೇ ಉಲ್ಲೇಖಿತ ಗ್ರಂಥಗಳ ಪಟ್ಟಿಯನ್ನೂ ದಾಖಲಿಸಿದ್ದಾರೆ. ಕಾದಂಬರಿಯು ನಿಷೇಧವಾಗುವ ಬಗ್ಗೆಯೂ ಕಥೆಯಲ್ಲೇ ದೃಶ್ಯವೊಂದನ್ನು ಕಾಣಿಸಿದ್ದಾರೆ.</p>
<p>ಕಾದಂಬರಿಯ ಒಂದು ಪಾತ್ರದಲ್ಲಿ ದೇಶದ ಟಿಪಿಕಲ್ ಬುದ್ಧಿಜೀವಿ ಸಾಹಿತಿಯೊಬ್ಬರನ್ನು ಬೇಕಾಬಿಟ್ಟಿ ಅಣಕಿಸಿದ್ದಾರೆ. ಬಹುಶಃ ತಮ್ಮ ಆತ್ಮಕಥೆ `ಭಿತ್ತಿ’ಯಲ್ಲಿಹೇಳಲಾಗದ ಮತ್ತು ಆನಂತರ ನಡೆದ ಸಂಗತಿಗಳನ್ನು ಅವರು ಕಾದಂಬರಿಯಲ್ಲಿ ಹೆಣೆದಿದ್ದಾರೆ ಎಂದೇ ಅನಿಸುತ್ತದೆ. ಔರಂಗಜೇಬನ ಚರಿತ್ರೆಯನ್ನು ಯಾವ ಎಗ್ಗೂ ಇಲ್ಲದೆ, ಪದಬಳಕೆಯ ಸಂಯಮವನ್ನೂ ಅಲ್ಲಲ್ಲಿ ಮೀರಿ ಬಿಡಿಸಿಟ್ಟಿದ್ದಾರೆ. ಸಂಘಪರಿವಾರವು ಸದಾ ಹೇಳಿಕೊಂಡು ಬಂದಿರುವ ಸಂಗತಿಗಳನ್ನು ಅವರು ಕಥೆಯಲ್ಲಿ ವ್ಯಾಪಕವಾಗಿ ಚೆದುರಿಸಿ ದಾಖಲಿಸಿದ್ದಾರೆ.</p>
<p>`ಈಗ ನನ್ನನ್ನು ಏನು ಬೇಕಾದರೂ ಮಾಡಿಕೊಳ್ಳಿ’ ಎಂದು ಭೈರಪ್ಪನವರು ಸವಾಲು ಎಸೆದು ನಿಂತಹಾಗೆ ಕಾಣಿಸುತ್ತದೆ. ಕಮ್ಯುನಿಸ್ಟ್ ಸಿದ್ಧಾಂತಿಗಳು, ಸೆಕ್ಯುಲರಿಸ್ಟ್ ಎಂಬ ಹಣೆಪಟ್ಟಿ ಹಚ್ಚಿಕೊಂಡ ಬುದ್ಧಿಜೀವಿಗಳು, ಯಾರೋ ಬರೆದ ಇತಿಹಾಸವನ್ನೇ ಮತ್ತೆ ಗಿಣಿಪಾಠದ ಹಾಗೆ ಪಠ್ಯಗಳಲ್ಲಿ ಸೇರಿಸುವ ಸರ್ಕಾರ – ಎಲ್ಲವನ್ನೂ ಒಮ್ಮೆಗೇ ತರಾಟೆಗೆ ತೆಗೆದುಕೊಂಡಿದ್ದಾರೆ. ಅದಕ್ಕೇ ಹೇಳಿದ್ದು…</p>
<p>`ಅವರೇನು? ಎರಡು ದಿನ ಅಧ್ಯಯನ ಮಾಡಿಬಿಟ್ಟರೆ ಸಾಕಾ?’ ಎಂದು ಗಿರೀಶ್ ಕಾರ್ನಾಡ್ ಗೇಲಿ ಮಾಡಿದ್ದರು, ತೀರಾ ಇತ್ತೀಚೆಗೆ. ಟಿಪ್ಪು ಸುಲ್ತಾನ್ ವಿಷಯದ ಗದ್ದಲ ಎದ್ದಾಗ ಭೈರಪ್ಪನವರು ಒಂದು ಪುಟದ ಪ್ರತಿಕ್ರಿಯೆಯನ್ನು ಬರೆದು ತಮ್ಮ ಅಧ್ಯಯನಶೀಲತೆಯನ್ನು ಕಾರ್ನಾಡ್ ಮುಖಕ್ಕೆ ರಾಚಿದ್ದರು. ಆಗಲೇ ಭೈರಪ್ಪ ಯಾಕೋ ಬದಲಾಗಿದ್ದಾರೆ ಅನ್ನಿಸಿತ್ತು. ಈಗ ‘ಆವರಣ’ದೊಂದಿಗೆ ಭೈರಪ್ಪನವರ ಪಾತ್ರಪ್ರವೇಶ ಬಹುತೇಕ ಸಂಪೂರ್ಣವಾಗಿದೆ. ಸದ್ದಿಲ್ಲದೆ ಬರೆಯುತ್ತ ಸಾರ್ವಜನಿಕ ಬದುಕಿನಲ್ಲಿ ಇಂಥ ಸಂಗತಿಗಳ ಬಗ್ಗೆ ಹೆಚ್ಚಿಗೇನೂ ಹೇಳದೇ ಇದ್ದ ಭೈರಪ್ಪ ಈಗ ಯಾಕೆ ಆಕ್ರೋಶಭರಿತರಾಗಿದ್ದಾರೆ? ಅವರ ಬರವಣಿಗೆಯ ಶೈಲಿಯಲ್ಲಿ ಯಾಕೆ ಕ್ರೌರ್ಯವೂ ಸೇರಿಕೊಂಡಿದೆ? `ಆವರಣ’ದ ಕೆಲವು ಸನ್ನಿವೇಶಗಳು ಭಯ ಹುಟ್ಟಿಸುವುದರ ಜೊತೆಗೆ ನಾಲ್ಕು ದಿನ ನಿದ್ದೆಯನ್ನೂ ಕೆಡಿಸುತ್ತದೆ.<br />
`ಈ ಬಗ್ಗೆ ನಾನು ಖುದ್ದಾಗಿ ದಿಲ್ಲಿಯಲ್ಲಿ ಮೂಲಗ್ರಂಥಗಳನ್ನು ಹುಡುಕಿ ಸಾವಿರಾರು ರೂಪಾಯಿ ಖರ್ಚು ಮಾಡಿ ತಂದು ಓದುತ್ತಿದ್ದೇನೆ. ಆದ್ದರಿಂದ ಇಲ್ಲಿ ನಾನು ಹೇಳಿದ್ದೆಲ್ಲವೂ ಈಗ್ರಂಥಗಳ ಉಲ್ಲೇಖಗಳೇ ಹೊರತು ಬೇರೇನಲ್ಲ′ ಎಂದು ಭೈರಪ್ಪ ಅಂದು ನಮಗೆ ಹೇಳಿದ್ದರು. ಅವರು ಹೇಳಿದ ಆ ಭಯಾನಕ ವಿವರಣೆಗಳೂ `ಆವರಣ’ದಲ್ಲಿ ದಾಖಲಾಗಿವೆ.</p>
<p>ಸರ್ಕಾರ `ಆವರಣ’ವನ್ನು ಬ್ಯಾನ್ ಮಾಡುತ್ತದೆ ಎಂಬ ಹಿನ್ನೆಲೆಯಲ್ಲಿ ಪುಸ್ತಕದ ಸಾವಿರಾರು ಪ್ರತಿಗಳು ನೇಪಥ್ಯದಲ್ಲೇ ಮಾರಾಟವಾಗಿವೆ. ಬಿಡುಗಡೆಯೇ ಆಗದ ಈ ಪುಸ್ತಕ ಈಗ ಮರುಮುದ್ರಣ ಕಾಣುತ್ತಿದೆ.<br />
ಮುಂದೇನು? ಕಾವೇರಿ ವಿಷಯ ತಣ್ಣಗಾದ ಮೇಲೆ `ಆವರಣ’ ದ ಶಾಖ ಹಬ್ಬುವ ಲಕ್ಷಣಗಳು ಗೋಚರಿಸುತ್ತಿವೆ.</p></div>
<p><input id="gwProxy" type="hidden" /><input id="jsProxy" onclick="jsCall();" type="hidden" /></p><p>The post <a href="http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ad%e0%b3%88%e0%b2%b0%e0%b2%aa%e0%b3%8d%e0%b2%aa%e0%b2%a8%e0%b2%b5%e0%b2%b0/">ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ad%e0%b3%88%e0%b2%b0%e0%b2%aa%e0%b3%8d%e0%b2%aa%e0%b2%a8%e0%b2%b5%e0%b2%b0/feed/</wfw:commentRss>
			<slash:comments>0</slash:comments>
		
		
			</item>
		<item>
		<title>ವೈ ಫೈ ಯುಗಕ್ಕೆ ಕಾಲಿಟ್ಟ ಟಿಬೆಟ್ – ಚೀನಾ ಸಂಘರ್ಷ</title>
		<link>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%b5%e0%b3%88-%e0%b2%ab%e0%b3%88/</link>
		
		<dc:creator><![CDATA[admin]]></dc:creator>
		<pubDate>Wed, 02 Dec 2009 12:16:08 +0000</pubDate>
				<category><![CDATA[ಬೇಳೂರು ಸುದರ್ಶನ ಅವರ ಅಂಕಣ]]></category>
		<guid isPermaLink="false">http://vishvakannada.com/?p=643</guid>

					<description><![CDATA[<p>&#8211; ಬೇಳೂರು ಸುದರ್ಶನ ಅಲ್ಲಿ ಯಾವಾಗಲೂ ವಿದ್ಯುತ್ ಕಡಿತ. ದೂರವಾಣಿ ಸಂಪರ್ಕಕ್ಕೂ ತತ್ವಾರ. ಮೊಬೈಲ್ ಇದ್ದರೂ ನೆಟ್ವರ್ಕ್ ಇರೋದೇ ಇಲ್ಲ. ಆದರೂ ಇಲ್ಲಿ ಇಂಟರ್ನೆಟ್ ಕೆಲಸ ಮಾಡುತ್ತಿದೆ! ಟಿಬೆಟ್ನ ದಶಭ್ರಷ್ಟ ಸರ್ಕಾರದ ಜೊತೆಗೆ ನೂರಾರು&#8230;</p>
<p>The post <a href="http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%b5%e0%b3%88-%e0%b2%ab%e0%b3%88/">ವೈ ಫೈ ಯುಗಕ್ಕೆ ಕಾಲಿಟ್ಟ ಟಿಬೆಟ್ – ಚೀನಾ ಸಂಘರ್ಷ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<div>
<h3>&#8211; ಬೇಳೂರು ಸುದರ್ಶನ</h3>
<p>ಅಲ್ಲಿ ಯಾವಾಗಲೂ ವಿದ್ಯುತ್ ಕಡಿತ. ದೂರವಾಣಿ ಸಂಪರ್ಕಕ್ಕೂ ತತ್ವಾರ. ಮೊಬೈಲ್ ಇದ್ದರೂ ನೆಟ್ವರ್ಕ್ ಇರೋದೇ ಇಲ್ಲ. ಆದರೂ ಇಲ್ಲಿ ಇಂಟರ್ನೆಟ್ ಕೆಲಸ ಮಾಡುತ್ತಿದೆ!</p>
<p>ಟಿಬೆಟ್ನ ದಶಭ್ರಷ್ಟ ಸರ್ಕಾರದ ಜೊತೆಗೆ ನೂರಾರು ಟಿಬೆಟನ್ ಕುಟುಂಬಗಳೂ ಇರುವ ಧರ್ಮಶಾಲೆಯಲ್ಲಿ ಈ ಮಾಹಿತಿ ತಂತ್ರeನದ ಪವಾಡ ನಡೆದಿದೆ. ಟಿಬೆಟ್ನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಭೂಗತ ಸುರಕ್ಷತಾ ಪಡೆಯ ಕಾರ್ಯಕರ್ತರು ಈ ವಿಶಿಷ್ಟ ವೈ ಫೈ (ವೈರ್ಲೆಸ್ ಫಿಡೆಲಿಟಿ) ಇಂಟರ್ನೆಟ್ ಜಾಲವನ್ನು ಸ್ಥಳೀಯ ಪರಿಕರಗಳನ್ನೇ ಬಳಸಿ ರೂಪಿಸಿದ್ದಾರೆ.</p>
<p>ಎಸೆದ ಎಲೆಕ್ಟ್ರಾನಿಕ್ ಪರಿಕರಗಳು, ಸೌರಶಕ್ತಿ, ಮುಕ್ತ ತಂತ್ರಾಂಶಗಳು (ಎರಡು ವಾರಗಳ ಹಿಂದೆ `ಹೊಸದಿಗಂತದಲ್ಲಿ ಪ್ರಕಟವಾದ ಸುದ್ದಿ ಓದಿದ್ದೀರಾ?) ಮತ್ತು ಸ್ಥಳೀಯ ತಿಳಿವಳಿಕೆಯನ್ನೇ ಬಳಸಿ ಈ ವೈರ್ಲೆಸ್ ಜಾಲ ಇಡೀ ಧರ್ಮಶಾಲೆಯನ್ನು ಸುತ್ತಿಕೊಂಡಿದೆ. ಟಿಬೆಟನ್ ಸರ್ಕಾರದ ಪ್ರಧಾನಮಂತ್ರಿ ಶಾಮ್ದೊಂಗ್ ರಿಂಪೊಶೆಯವರೇ ಈ ತಂತ್ರಜ್ಞಾನ ಕ್ರಾಂತಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ.</p>
<p>ಚೀನಾವು ಸಂಪೂರ್ಣವಾಗಿ ಕಬಳಿಸಿದ ಟಿಬೆಟನ್ನು ಮತ್ತೆ ಮುಕ್ತಗೊಳಿಸಬೇಕೆಂಬ ಅದಮ್ಯ ಆಸೆಯಿಂದ ವಿಶ್ವದೆಲ್ಲೆಡೆ ಟಿಬೆಟನ್ನರು ಕಾರ್ಯನಿರತರಾಗಿದ್ದಾರೆ. ಕಾರ್ಯಪಡೆಯ ನಾಯಕ ಯಾಹೆಲ್ ಬೆನ್ ಡೇವಿಡ್ ಸಾಮಾನ್ಯನಲ್ಲ. ಇಸ್ರೇಲಿನ ಮಿಲಿಟರಿಯಿಂದ ಗುಡ್ಡ-ಬೆಟ್ಟ ಕಾರ್ಯಾಚರಣೆಯ ತರಬೇತಿ ಪಡೆದಿರುವ ಹುರುಪಿನ ವ್ಯಕ್ತಿ.<br />
ಈತ ವೈರ್ಲೆಸ್ ಜಾಲವನ್ನು ಸರಿಯಾಗಿಡಲು ಗೋಪುರಗಳನ್ನು ಹತ್ತುತ್ತಾನೆ; ದೂರದೂರದ ಆಂಟೆನ್ನಾಗಳನ್ನು ಸರಿಪಡಿಸಲು ಕಣಿವೆಯಿಂದ ಕಣಿವೆಗೆ ಜಿಗಿಯುತ್ತಾನೆ. ಯಾಕೆಂದರೆ ಇಲ್ಲಿ ಗೊರಿಲ್ಲಾ ಗಾತ್ರದ ಮಂಗಗಳೂ ಅವರ ಜೊತೆಗೇ ಜಿಗಿಯುತ್ತವೆ; ಆಂಟೆನ್ನಾಗಳನ್ನು ಹಿಡಿದೇ ಜೋಕಾಲಿಯಾಡುತ್ತವೆ. ಆದ್ದರಿಂದ ಮಂಕೀ ಪ್ರೂಫ್ ಆಂಟೆನ್ನಾಗಳನ್ನು ತಯಾರಿಸುವುದೇ ದೊಡ್ಡ ಕೆಲಸ. ಈಗಾಗಲೇ ಆಕಾಶದಿಂದ ಗ್ರಹಿಸಿದ ತರಂಗಗಳನ್ನು ಕೆಳಗಡೆಯ ಕಚೇರಿಗಳಿಗೆ ರವಾನಿಸುವ ವೈರ್ಲೆಸ್ ಜಾಲದ ತಂತಿಗಳನ್ನು ಈ ಮಂಗಗಳು ಕಿತ್ತು ಹಾಕಿದ್ದೂ ಇದೆ.<br />
ಡೇವಿಡ್ಗೆ ಜೊತೆಗಾರನಾಗಿ ನಿರ್ವಹಣೆ ನೋಡಿಕೊಳ್ಳುತ್ತಿರುವ ಫುನ್ಸ್ತೂಕ್ದೋರ್ಜೀ ಹುಟ್ಟಿದ್ದೇ ದೇಶಭ್ರಷ್ಟನಾಗಿ. ಅದಮೇಲೆ ದೇಶಭಕ್ತಿಯನ್ನು ಕೇಳಬೇಕೆ? ಟಿಬೆಟನ್ ಹ್ಯಾಕರ್ಗಳು, ಸ್ಥಳೀಯ ಟಿಬೆಟನ್ ನಾಯಕರು ಮತ್ತು ದಲಾಯಿ ಲಾಮಾರವರ ಕಚೇರಿ ನಡುವೆ ಸದಾ ಸಮನ್ವಯ ಸಾಧಿಸುವುದು ಈತನ ಮುಖ್ಯ ಹೊಣೆ.</p>
<p>ಇಂಟರ್ನೆಟ್ ಎಂದರೆ ದಿಢೀರ್ ದೂರವಾಣಿಯೇ ತಾನೆ? ಸ್ಕೈಪ್ ತಂತ್ರಾಂಶವನ್ನು ಬಳಲ್ಲರೂ ಜಗತ್ತಿನ ಮೂಲೆಮೂಲೆಯಲ್ಲಿ ಇರುವವರೊಂದಿಗೆ ಮಾತಾಡುತ್ತಾರೆ. ಇಲ್ಲಿ ಟಿಬೆಟನ್ ಕೀಲಿಮಣೆಯೂ ಇಲ್ಲ. ಟಿಬೆಟನ್ ಭಾಷೆಯಲ್ಲಿ ಎಸ್ ಎಂ ಎಸ್ (ಸಮೊಸ: ಸರಳಮೊಬೈಲ್ ಸಂದೇಶ) ಕಳಿಸುವುದೂ ಕಷ್ಟ.<br />
ಇಲ್ಲಿರುವ ವೈ ಫೈ ಜಾಲಕ್ಕೆ ಬಿ ಎಸ್ ಎನ್ ಎಲ್ನ ವೈರ್ಲೆಸ್ ಸಂಪರ್ಕ ಸೇವೆ ಸಿಕ್ಕಿದೆ. ಇಲ್ಲಿನ ಬಳಕೆದ</p>
</div><p>The post <a href="http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%b5%e0%b3%88-%e0%b2%ab%e0%b3%88/">ವೈ ಫೈ ಯುಗಕ್ಕೆ ಕಾಲಿಟ್ಟ ಟಿಬೆಟ್ – ಚೀನಾ ಸಂಘರ್ಷ</a> first appeared on <a href="http://vishvakannada.com">Vishva Kannada</a>.</p>]]></content:encoded>
					
		
		
			</item>
		<item>
		<title>ಮರೆಯೋದಂದ್ರ ಹ್ಯಾಂಗ… ಮಾವೋ ತ್ಸೆ ತುಂಗ !… ಹೀಂಗ….</title>
		<link>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ae%e0%b2%b0%e0%b3%86%e0%b2%af%e0%b3%8b%e0%b2%a6%e0%b2%82%e0%b2%a6%e0%b3%8d%e0%b2%b0/</link>
					<comments>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ae%e0%b2%b0%e0%b3%86%e0%b2%af%e0%b3%8b%e0%b2%a6%e0%b2%82%e0%b2%a6%e0%b3%8d%e0%b2%b0/#respond</comments>
		
		<dc:creator><![CDATA[admin]]></dc:creator>
		<pubDate>Wed, 02 Dec 2009 12:10:05 +0000</pubDate>
				<category><![CDATA[ಬೇಳೂರು ಸುದರ್ಶನ ಅವರ ಅಂಕಣ]]></category>
		<guid isPermaLink="false">http://vishvakannada.com/?p=637</guid>

					<description><![CDATA[<p>&#8211; ಬೇಳೂರು ಸುದರ್ಶನ ಚಂದ್ರಶೇಖರ ಕಂಬಾರರು ಬರೆದುಹಾಡಿದ ಸಾಲುಗಳನ್ನು ಹೀಗೆಲ್ಲ ತಿರುಚಬಹುದೆ ಎಂದು ಕೇಳಬಹುದೇನೋ. ಆದರೆ ಚೀನಾದಲ್ಲೇ ಈ ಹಾಡನ್ನು ಹೇಳುತ್ತಿದ್ದಾರಂತೆ…. ಹಾಗಂತ ಜೋಸೆಫ್ ಕಾಹ್ನ್ ಬರೆದಿದ್ದಾನೆ, `ನೂಯಾರ್ಕ್ ಟೈಮ್ಸ್’ ದಿನಪತ್ರಿಕೆಯಲ್ಲಿ. ಈ ವರ್ಷ&#8230;</p>
<p>The post <a href="http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ae%e0%b2%b0%e0%b3%86%e0%b2%af%e0%b3%8b%e0%b2%a6%e0%b2%82%e0%b2%a6%e0%b3%8d%e0%b2%b0/">ಮರೆಯೋದಂದ್ರ ಹ್ಯಾಂಗ… ಮಾವೋ ತ್ಸೆ ತುಂಗ !… ಹೀಂಗ….</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<div>
<h3>&#8211; ಬೇಳೂರು ಸುದರ್ಶನ</h3>
<p>ಚಂದ್ರಶೇಖರ ಕಂಬಾರರು  ಬರೆದುಹಾಡಿದ ಸಾಲುಗಳನ್ನು ಹೀಗೆಲ್ಲ ತಿರುಚಬಹುದೆ ಎಂದು ಕೇಳಬಹುದೇನೋ. ಆದರೆ ಚೀನಾದಲ್ಲೇ  ಈ ಹಾಡನ್ನು ಹೇಳುತ್ತಿದ್ದಾರಂತೆ….</p>
<p>ಹಾಗಂತ ಜೋಸೆಫ್ ಕಾಹ್ನ್ ಬರೆದಿದ್ದಾನೆ, `ನೂಯಾರ್ಕ್ ಟೈಮ್ಸ್’ ದಿನಪತ್ರಿಕೆಯಲ್ಲಿ. ಈ ವರ್ಷ ಪ್ರೌಢಶಾಲೆಗೆ ಹೋಗುವ ಮಕ್ಕಳಿಗೆ ಇಂಥದ್ದೊಂದು ಅಚ್ಚರಿ ಕಾದಿರುತ್ತೆ ಎಂದು ಜೋಸೆಫ್ ಉದ್ದುದ್ದ ಬರೆದಿದ್ದಾನೆ.<br />
ಈ ಹೊಸ ಪಠ್ಯಗಳಲ್ಲಿ ಯುದ್ಧಗಳ ಕಥೆಯಿಲ್ಲ, ಮನೆತನಗಳ ಪ್ರವರವಿಲ್ಲ; ಕಮ್ಯುನಿಸ್ಟ್ ಹೋರಾಟಗಳ ರಗಳೆಯೂಇಲ್ಲವಂತೆ. ಅರ್ಥಶಾಸ್ತ್ರ, ತಂತ್ರeನ, ಸಾಮಾಜಿಕ ಕಟ್ಟುಪಾಡುಗಳು, ಜಾಗತೀಕರಣ – ಹೀಗೆ ಹೊಸ ವಿಷಯಗಳನ್ನು ಸೇರಿಸಲಾಗಿದೆಯಂತೆ. ಸಮಾಜವಾದವು ಒಂದೇ ಪುಟ್ಟ ಅಧ್ಯಾಯವಾಗಿ ಕಮರಿಹೋಗಿದೆಯಂತೆ. ೧೯೭೯ಕ್ಕಿಂತ ಮುಂಚಿನ ಕಮ್ಯುನಿಸ್ಟ್ ಆಂದೋಳನವು ಒಂದೇ ವಾಕ್ಯದಲ್ಲಿ ಮುಗಿದುಹೋಗಿದೆಯಂತೆ.</p>
<p>ಆಮೇಲೆ, ವಿಷಯ ಏನಪ್ಪಾ ಅಂದರೆ, ಚೀನಾ ದೇಶದ ಮಹಾನ್ ಸರ್ವಾಕಾರಿ ಮಾವೋ ಝೆಡಾಂಗ್ (ಚೀನೀ ಉಚ್ಚರಣೆಯಲ್ಲಿ ಮಾವೋತ್ಸೆ ತುಂಗ ಎಂಬುದು ಝೆಡಾಂಗ್ ಆಗುತ್ತದೆಯಂತೆ) ಹೆಸರು ಒಂದೇ ಒಂದು ಸಲ, ಅದೂ ನಡತೆ ಕುರಿತ ವಿಷಯಕ್ಕೆ ಬಂದಾಗ ಉಲ್ಲೇಖವಾಗಿದೆಯಂತೆ.</p>
<p>ತನ್ನ ಅಕೃತ ಸಿದ್ಧಾಂತವನ್ನೆಲ್ಲಬದಿಗೊತ್ತಿದ ಚೀನಾ ಸರ್ಕಾರ ಇನ್ನೇನು ತಾನೆ ಮಾಡೀತು ಎಂದು ಜೋಸೆಫ್ ಹೇಳುತ್ತಾನೆ. ಚೀನಾದ ಜನ ಭೂತಕಾಲವನ್ನು ಬಿಟ್ಟುಭವಿಷ್ಯತ್ತಿನ ಕಡೆಗೆ ಮೊಗ ಮಾಡಿ ಬದುಕುವುದನ್ನು ಕಲಿಯಬೇಕೆಂಬ ಇರಾದೆಯೇ ಈ ಬದಲಾವಣೆಗಳಿಗೆ ಕಾರಣವಂತೆ.</p>
<p>ಉದಾಹರಣೆಗೆ, ಈ ಪಠ್ಯಗಳಲ್ಲಿ ಈಗ ಜೆ.ಪಿ. ಮೋರ್ಗನ್ ಇದ್ದಾನೆ;ಬಿಲ್‌ಗೇಟ್ಸ್ ಇದ್ದಾನೆ; ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ಇದೆ; ಸ್ಪೇಸ್ ಶಟಲ್ ಇದೆ; ಜಪಾನಿನ ಬುಲೆಟ್ ಟ್ರೈನ್ ಇದೆ. ಕೊರಳಿಗೆ ಕಟ್ಟುವ ಟೈ ಬಗ್ಗೆ ಪಾಠವಿದೆ. ಫ್ರೆಂಚ್, ಬೋಲ್‌ಶೆವಿಕ್ ಕ್ರಾಂತಿಗಳು ಮೂಲೆಗುಂಪಾಗಿವೆ. ನಾನ್‌ಝಿಂಗ್ ಅತ್ಯಾಚಾರ (ಜಪಾನೀಯರಿಂದ), ವಸಾಹತುಶಾಹಿ ಶೋಷಣೆ, ಮಾವೋ, ಅವನ ಸುದೀರ್ಘ ಯಾತ್ರೆ – ಎಲ್ಲವೂ ಅಂಗೈಯಗಲದ ಸುದ್ದಿಗಳಾಗಿ ಮಾಧ್ಯಮಿಕ ಶಾಲೆಗಳಲ್ಲಿ ಮಾತ್ರ ಇದೆಯಂತೆ.</p>
<p>ಹೌದು. ಚೀನಾ ಬದಲಾಗುತ್ತಿದೆ. ನೀವು ಚೀನಾ ಆಕ್ರಮಿತ ಟಿಬೆಟನ್ನು ನೋಡಿದರೆ, ಅದೂ ಬದಲಾಗುತ್ತಿದೆ. ಟಿಬೆಟಿನ ರಾಜಧಾನಿ, ಟಿಬೆಟನ್ ಧರ್ಮಗುರು ದಲಾಯಿ ಲಾಮಾರವರ ಕೇಂದ್ರವಾಗಿದ್ದ ಲ್ಹಾಸಾ ಈಗ ಒಂದು ಜಾಗತಿಕ ಕಾಸ್ಮೋ – ಟೂರಿಸಮ್ ಕೇಂದ್ರವಾಗಿದೆ. ಲ್ಹಾಸಾಗೆ ಹೊಸ ರೈಲು ಬಂದಮೇಲಂತೂ ಇಲ್ಲಿಗೆ ಇನ್ನೂ ೪೦೦೦ ಹೆಚ್ಚು ಜನರು ಪ್ರವಾಸ ಮಾಡುತ್ತಿದ್ದಾರೆ. ಟಿಬೆಟನ್ನು ಚೀನಾದಲ್ಲಿ ಕರಗಿಸಲು ೨೫ ಸಾವಿರ ಕಿಲೋಮೀಟರುಗಳಷ್ಟು ರಸ್ತೆಗಳನ್ನು ನಿರ್ಮಿಸಲಾಗಿದೆ. ಈಗ ಲ್ಹಾಸಾದಲ್ಲಿ ಪಬ್‌ಗಳು, ಫ್ಯಾಶನ್ ಶಾಪಿಂಗ್ ಮಾಲ್‌ಗಳು ಬಂದಿವೆ. ಇಂಟರ್‌ನೆಟ್ ಈಗ ಲ್ಹಾಸಾದ ರಸ್ತೆಗಳಲ್ಲಿ ಹಾದುಹೋಗಿದೆ. ಟಿಬೆಟನ್ನರೆಲ್ಲ ಸಾಮಾನ್ಯವಾಗಿ ಕೆಳಹಂತದ ಕೆಲಸಗಾರರಾಗಿ ದುಡಿಯುತ್ತಿದ್ದಾರೆ. ಚೀನಾದಿಂದ ಬಂದವರೇ ಬಹುತೇಕ ಎಲ್ಲ ಅಂಗಡಿಗಳನ್ನು ನಡೆಸುತ್ತಿದ್ದಾರೆ. ನಮ್ಮ ಚಹರೆಯೇ ಮಾಯವಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಟಿಬೆಟನ್ ಪಾಶ್ಚಾತ್ಯ ಪತ್ರಕರ್ತನೆದುರು ಕಣ್ಣೀರಿಡುತ್ತಾನೆ.</p>
<p>ಒಂದು ವಿಷಯದಲ್ಲಿ ಮಾತ್ರ ಚೀನಾ ಬದಲಾಗಿಲ್ಲ. ಅಲ್ಲಿ ಇನ್ನೂ ಬಲವಂತದ ಕಾರ್ಮಿಕ ಶಿಬಿರಗಳು ಇವೆ. ಲಾಗೋಯ್ ಎಂದು ಕರೆಯುವ ಈ ಶಿಬಿರಗಳಲ್ಲಿ ೬೦ ಲಕ್ಷ ಚೀನೀಯರಿದ್ದಾರೆ. ಲಾಗೋಯ್‌ಗಳಲ್ಲಿ ಇರುವವರು ೧೮ ತಾಸು ದುಡಿದ ಮೇಲೆ ಎಲ್ಲರೂ ಸಾಲಾಗಿ ಕೂತು ಕೊಟ್ಟಿದ್ದನ್ನು ಮುಕ್ಕುತ್ತಾರೆ. ಸಾಲು ಹಾಸಿಗೆಗಳ ಇಕ್ಕಟ್ಟಾದ ಕೋಣೆಗಳಲ್ಲಿ ಒರಗುತ್ತಾರೆ ; ದಿನಗಳ ಲೆಕ್ಕವಿಲ್ಲದೆ, ವರ್ಷಗಳ ಖುಷಿಯಿಲ್ಲದೆ. ಈ ಬಲಹೀನ ಮನುಷ್ಯರನ್ನು ಕಟ್ಟೆಚ್ಚರದಿಂದ ಕಾಯಲಾಗುತ್ತದೆ. ಲಾಗೋಯ್‌ಗಳ ಸುತ್ತಮುತ್ತ ತಂತಿಬೇಲಿ ಇದೆ. ಅವುಗಳಿಗೆ ವಿದ್ಯುತ್ ಹಾಯಿಸಲಾಗಿದೆ. ಜೀವಂತ ಹೆಣಗಳಿಗೆ ಭಾರೀ ಭದ್ರತೆ!</p>
<p>ಅದಕ್ಕೇ  ವಿಶ್ವದ ಎಲ್ಲ  ರೋಗಿಗಳು ಈಗ ಚೀನಾಕ್ಕೇ ಮುತ್ತಿಗೆ ಹಾಕಿದ್ದಾರೆ.</p>
<p>೧೪ ವರ್ಷಗಳಿಂದ ಚೀನಾ ದೇಶವು ೬೦ ಸಾವಿರ ಮೂತ್ರಪಿಂಡಗಳನ್ನು , ೬ ಸಾವಿರ ಪಿತ್ತಜನಕಾಂಗಳನ್ನು, ೨೫೦ ಹೃದಯಗಳನ್ನು ಅವು ಬೇಕಾಗಿದ್ದ ರೋಗಿಗಳಲ್ಲಿ ಸ್ಥಾಪಿಸಿದೆ. ಚೀನಾ ದೇಶದಲ್ಲಿ ಒದು ಮೂತ್ರಪಿಂಡಕ್ಕೆ ೩೫೦೦ ಪೌಂಡ್ ಅಂದರೆ ಸುಮಾರು ಎರಡೂವರೆ ಲಕ್ಷ ರೂಪಾಯಿ ಖರ್ಚಾಗುತ್ತದೆ. ಪಿತ್ತ ಜನಕಾಂಗಕ್ಕೆ ೧೨ ಲಕ್ಷ ರೂ. ; ವಿದೇಶಿಯರಿಗೆ ೧೬ ಲಕ್ಷ ರೂಪಾಯಿ. ಮೆದುಳನ್ನೇ ಖರ್ಚು ಮಾಡದೆ ಯಂತ್ರಗಳ ಹಾಗೆ ದುಡಿಯುವ ಕಾರ್ಮಿಕರೇ ಈ ಅಂಗಾಂಗಗಳನ್ನು ನೀಡುವ ದಾನಿಗಳು! ಯಾಕೆಂದರೆ ವರ್ಷಕ್ಕೆ ೬೦೦೦ ಜನರನ್ನು ನೇಣಿಗೆ ಹಾಕುವ `ನ್ಯಾಯ’ದಾನವೂ ಚೀನಾದಲ್ಲಿದೆ. ಚೀನಾದ ಎಲ್ಲಾ ರಾಜ್ಯಗಳಲ್ಲೂ ಲಾಗೋಯ್‌ಗಳಿವೆ. ಇವುಗಳ ಒಟ್ಟು ಸಂಖ್ಯೆ ೧೦೦೦ ಇರಬಹುದು ಎಂದು ಲಾಗೋಯ್ ಸಂಶೋಧನಾ ಪ್ರತಿಷ್ಠಾನ ಲೆಕ್ಕ ಹಾಕಿದೆ.</p>
<p>ಎಲ್ಲ ಬದಲಾವಣೆಗಳಿಗೆ ಸಾಕ್ಷಿಯಾಗಿ ಚೀನಾದ ಮಹಾಗೋಡೆ ನಿಂತಿದೆ.</p>
<p>ಪಠ್ಯಪುಸ್ತಕಗಳಲ್ಲಿ ಮಾವೋ ಮರೆಯಾಗಬಹುದು; ವಿಶ್ವದ ಬಹುದೊಡ್ಡ ಆರ್ಥಿಕ ಹುಲಿಯಾಗಿ ಚೀನಾ ಮೂಡುತ್ತಿರಬಹುದು; ಆದರೆ ಲಾಗೋಯ್‌ಗಳ ಬಗ್ಗೆ ಒಂದು ಪಾಠವೂ ಎಂದೆಂದೂ ಚೀನಾದ ಮಕ್ಕಳಿಗೆ ಇರುವುದಿಲ್ಲ.</p>
<p>ನಾವು?  ಲಾಗೋಯ್ ಯಾತನಾಶಿಬಿರಗಳನ್ನು  ನೋಡಿಯೂ ಪಾಠ ಕಲಿಯುವುದಿಲ್ಲ.</p>
<p>(ಕೃಪೆ: ಹೊಸದಿಗಂತ)</p></div>
<p><input id="gwProxy" type="hidden" /><input id="jsProxy" onclick="jsCall();" type="hidden" /></p><p>The post <a href="http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ae%e0%b2%b0%e0%b3%86%e0%b2%af%e0%b3%8b%e0%b2%a6%e0%b2%82%e0%b2%a6%e0%b3%8d%e0%b2%b0/">ಮರೆಯೋದಂದ್ರ ಹ್ಯಾಂಗ… ಮಾವೋ ತ್ಸೆ ತುಂಗ !… ಹೀಂಗ….</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ae%e0%b2%b0%e0%b3%86%e0%b2%af%e0%b3%8b%e0%b2%a6%e0%b2%82%e0%b2%a6%e0%b3%8d%e0%b2%b0/feed/</wfw:commentRss>
			<slash:comments>0</slash:comments>
		
		
			</item>
		<item>
		<title>ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’ ಸ್ಕಾಲರ್ ‌ಶಿಪ್</title>
		<link>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%b5%e0%b2%b0%e0%b3%8d%e0%b2%a3%e0%b2%ad%e0%b3%87%e0%b2%a6%e2%80%99/</link>
					<comments>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%b5%e0%b2%b0%e0%b3%8d%e0%b2%a3%e0%b2%ad%e0%b3%87%e0%b2%a6%e2%80%99/#respond</comments>
		
		<dc:creator><![CDATA[admin]]></dc:creator>
		<pubDate>Wed, 02 Dec 2009 11:39:09 +0000</pubDate>
				<category><![CDATA[ಬೇಳೂರು ಸುದರ್ಶನ ಅವರ ಅಂಕಣ]]></category>
		<guid isPermaLink="false">http://vishvakannada.com/?p=632</guid>

					<description><![CDATA[<p>&#8211; [http://mitramaadhyama.co.in&#124;ಬೇಳೂರು ಸುದರ್ಶನ] ಅವನಿಗೆ ಬ್ರಿಟಿಶರೆಂದರೆ ಪಂಚಪ್ರಾಣ. ಆಂಗ್ಲೋ ಸ್ಯಾಕ್ಸನ್ ಜನಾಂಗವೇ ವಿಶ್ವದಲ್ಲೆಲ್ಲ ಶ್ರೇಷ್ಠ ಎಂದು ಆತ ಭಾವಿಸಿದ್ದ. ಹಿಟ್ಲರನಿಗಿಂತ ಮೊದಲೇ ಆತ ಜರ್ಮನರನ್ನೂ ಶ್ರೇಷ್ಠ ಜನಾಂಗವೆಂದು ಹೊಗಳಿದ್ದ. ಇಡೀ ವಿಶ್ವವೇ ಬ್ರಿಟಿಶರ ಅಡಿಯಾಳಾಗಬೇಕೆಂದು&#8230;</p>
<p>The post <a href="http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%b5%e0%b2%b0%e0%b3%8d%e0%b2%a3%e0%b2%ad%e0%b3%87%e0%b2%a6%e2%80%99/">ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’ ಸ್ಕಾಲರ್ ‌ಶಿಪ್</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<div>
<h3><span>&#8211; [<a href="http://mitramaadhyama.co.in%7c%e0%b2%ac%e0%b3%87%e0%b2%b3%e0%b3%82%e0%b2%b0%e0%b3%81/">http://mitramaadhyama.co.in|ಬೇಳೂರು</a> ಸುದರ್ಶನ]</span></h3>
<p>ಅವನಿಗೆ ಬ್ರಿಟಿಶರೆಂದರೆ ಪಂಚಪ್ರಾಣ. ಆಂಗ್ಲೋ ಸ್ಯಾಕ್ಸನ್ ಜನಾಂಗವೇ ವಿಶ್ವದಲ್ಲೆಲ್ಲ ಶ್ರೇಷ್ಠ ಎಂದು ಆತ ಭಾವಿಸಿದ್ದ. ಹಿಟ್ಲರನಿಗಿಂತ ಮೊದಲೇ ಆತ ಜರ್ಮನರನ್ನೂ ಶ್ರೇಷ್ಠ ಜನಾಂಗವೆಂದು ಹೊಗಳಿದ್ದ. ಇಡೀ ವಿಶ್ವವೇ ಬ್ರಿಟಿಶರ ಅಡಿಯಾಳಾಗಬೇಕೆಂದು ಬಯಸಿ ಒಂದು ರಹಸ್ಯ ಸಮಾಜವನ್ನೇ ಸೃಷ್ಟಿಸಬೇಕು ಎಂದು ನಿರ್ಧರಿಸಿ ಅದಕ್ಕೆಂದೇ ತನ್ನ ಉಯಿಲಿನಲ್ಲಿ ಭಾರೀ ಪ್ರಮಾಣದ ಹಣವನ್ನು ತೆಗೆದಿರಿಸಿದ್ದ.</p>
<p>ಆದರೆ ಆತ ಸತ್ತಮೇಲೆ ಅವನ ಆಸೆಗಳನ್ನು ಪೂರೈಸಲೆಂದೇ, ಅದೇ ಹಣದಿಂದ ಒಂದು ಸ್ಕಾಲರ್‌ಶಿಪ್ ಸ್ಥಾಪಿಸಲಾಯಿತು. ಅದೇ ರೋಡ್ಸ್ ಸ್ಕಾಲರ್‌ಶಿಪ್. ನಮ್ಮ ಜ್ಞಾನಪೀಠ ಪುರಸ್ಕೃತ ಲೇಖಕ ಗಿರೀಶ್ ಕಾರ್ನಾಡರು ಈ `ಪ್ರತಿಷ್ಠಿತ’ ಸ್ಕಾಲರ್‌ಶಿಪ್ ಪಡೆದವರಲ್ಲಿ ಒಬ್ಬರು. ಮಾಜಿ ಅಥವಾ ಹಾಲಿ ಬ್ರಿಟಿಶ್ ವಸಾಹತುಗಳು, ಅಮೆರಿಕಾ, ಜರ್ಮನಿಯ ವಿದ್ಯಾರ್ಥಿಗಳು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದುವುದಕ್ಕೆಂದೇ ಈ ಸ್ಕಾಲರ್‌ಶಿಪ್ ಸ್ಥಾಪನೆಯಾಗಿದೆ.</p>
<p>೧೮೫೩ರಲ್ಲಿ ಹುಟ್ಟಿ ೧೯೦೨ರಲ್ಲಿ ವಿಶ್ವದ ಅತಿ ಶ್ರೀಮಂತ ವ್ಯಕ್ತಿಯಾಗಿ ಸತ್ತ ಸಸಿಲ್ ಜಾನ್ ರೋಡ್ಸ್ ಇಂದು ಪ್ರತಿಷ್ಠಿತ ಸ್ಕಾಲರ್‌ಶಿಪ್‌ನ ಮೂಲಕ ಬದುಕಿದ್ದಾನೆ. ತನ್ನದೇ ಹೆಸರಿನಲ್ಲಿ ಒಂದು ದೇಶವನ್ನೇ ನಿರ್ಮಿಸಿದ ರೋಡ್ಸ್ ಇಂದು ವಿಶ್ವವಿಖ್ಯಾತವಾಗಿರುವ ಡಿ ಬೀರ್ಸ್ ವಜ್ರಾಭರಣ ಸಂಸ್ಥೆಯ ಸ್ಥಾಪಕ. ಈ ಸಂಸ್ಥೆಯೇ ಈಗಲೂ ವಿಶ್ವದ ಶೇ. ೬೦ರಷ್ಟು ವಜ್ರ ಮಾರುಕಟ್ಟೆಯನ್ನು ವ್ಯಾಪಿಸಿದೆ.</p>
<p>ರೋಡ್ಸ್ ಒಬ್ಬ ವಸಾಹತುಶಾಹಿ. ತನ್ನದೇ ವಸಾಹತು ಮಾಡಿಕೊಂಡು ಸೇನೆಯನ್ನೂ ಕಟ್ಟಿಕೊಂಡು ಯುದ್ಧಗಳನ್ನೂ ಮಾಡಿದ. ಅವನ ದೇಶಕ್ಕೆ ಮೊದಲು ರೊಡೀಶಿಯಾ ಎಂಬ ಹೆಸರಿತ್ತು. ಆಮೇಲೆ ಅದು ಝಾಂಬಿಯಾ ಆಗಿ ಈಗ… ಝಿಂಬಾಬ್ವೆ ಆಗಿದೆ.</p>
<p>ಅವನ ವಸಾಹತುಶಾಹಿ ಧೋರಣೆಗಳು ಎಷ್ಟು ಪ್ರಬಲವಾಗಿದ್ದವು ಎಂದರೆ ವರ್ಣಬೇಧ ನೀತಿ ಎಂದು ಕೇಳಿದ್ದೀರಲ್ಲ… ಅದನ್ನು ರೂಪಿಸಿದವನೇ ರೋಡ್ಸ್. ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಶರು ರೂಪಿಸಿಕೊಂಡ ಸಾಮ್ರಾಜ್ಯಶಾಹಿ ವ್ಯವಸ್ಥೆಯಲ್ಲಿ ರೋಡ್ಸ್ ನದೇ ಚಿಂತನೆಗಳು ತುಂಬಿಕೊಂಡಿವೆ. ಕೇಪ್ ಕಾಲೋನಿಯ ಮುಖ್ಯಮಂತ್ರಿಯಾಗಿದ್ದ ರೋಡ್ಸ್ ಒಮ್ಮೆ ಟ್ರಾನ್ಸ್‌ವಾಲ್ ಸರ್ಕಾರದ ವಿರುದ್ಧ ಯುದ್ಧ ಮಾಡಿ ಕೈ ಸುಟ್ಟುಕೊಂಡಿದ್ದೂ ಇದೆ. ಇದು ನಡೆದಿದ್ದು ೧೮೯೫ರಲ್ಲಿ.</p>
<p>ಆಫ್ರಿಕನ್ನರನ್ನು ಅತ್ಯಂತ ಕೀಳು ಪದಗಳಲ್ಲಿ ಜರೆಯುವುದು, ಅವರನ್ನು ಹಿಗ್ಗಾಮುಗ್ಗಾ ಅವಮಾನಿಸುವುದು ಇವೆಲ್ಲವೂ ರೋಡ್ಸ್‌ನ ಸಹಜ ವರ್ತನೆಗಳಾಗಿದ್ದವು. ಎಂದೂ ಆತ ತನ್ನ ವಸಾಹತು ಕನಸುಗಳನ್ನು ಬಿಟ್ಟುಕೊಡಲಿಲ್ಲ. ಮತಬೆಲೆ ಬುಡಕಟ್ಟಿನ ಜನರು ಆತನ ಸಂಸ್ಥೆಯ ವಿರುದ್ಧ ದಂಗೆ ಎದ್ದಾಗ ಅವರಿಗೆ ಸ್ವಾತಂತ್ರ್ಯ ಕೊಡುವ ಬದಲು ಮಾತುಕತೆ ನಡೆಸಿದ ರೋಡ್ಸ್ ಒಬ್ಬ ಜಾಣ ವ್ಯವಹಾರಸ್ಥನಾಗಿದ್ದ.</p>
<p>ರೋಡ್ಸ್ ಸ್ಕಾಲರ್‌ಶಿಪ್ ನಿಜಕ್ಕೂ ಪ್ರತಿಷ್ಠೆಯದೇ. ಅದನ್ನು ಪಡೆದವರೆಲ್ಲ ದೊಡ್ಡ ದೊಡ್ಡ ವ್ಯಕ್ತಿಗಳೇ. ಆದರೆ ಈ ಸ್ಕಾಲರ್‌ಶಿಪ್ ಹಿಂದೆ ಇರುವ ಆಫ್ರಿಕಾದ ಶೋಷಣೆ, ವರ್ಣಭೇದ ನೀತಿಯ ಕಲ್ಪನೆ, ವಸಾಹತುಶಾಹಿ ಇತಿಹಾಸ – ಯಾವುದಾದರೂ ನೆನಪಾಗಬೇಕಲ್ಲ?</p>
<p>ಅರೆ, ನೊಬೆಲ್ ಪ್ರಶಸ್ತಿಯ ಕಥೆ ಇನ್ನೇನು ಸ್ವಾಮಿ, ಡೈನಮೈಟ್‌ಗಳನ್ನು ಸಂಶೋಸಿ ಮಾರಿ ಬಂದ ಹಣವೇ ಅಲ್ಲವೆ ಎಂದು ನೀವು ಕೇಳಬಹುದು. ಅದೂ ನಿಜ. ಆತ ಸಾಯುವ ಮುನ್ನವೇ ಫ್ರೆಂಚ್ ಪತ್ರಿಕೆಯೊಂದು `ಸಾವಿನ ಸರದಾರ ಸತ್ತ’ ಎಂದು ಬರೆಯಿತಲ್ಲದೆ `ಹಿಂದೆಂದಿಗಿಂತ ಹೆಚ್ಚು ಬೇಗ ಹೆಚ್ಚು ಜನರನ್ನು ಕೊಲ್ಲುವ ಮಾರ್ಗ ಹುಡುಕಿದ ಡಾ|| ಆಲ್ರೆಡ್ ನೊಬೆಲ್ ನಿನ್ನೆ ಸತ್ತ’ ಎಂದು ಬಣ್ಣಿಸಿತು. ಈ ಸುಳ್ಳುಸುದ್ದಿಯೇ ನೊಬೆಲ್‌ಗೆ ತಾನು ಸತ್ತ ಮೇಲೂ ಎಲ್ಲರೂ ತನ್ನನ್ನು ನೆನಪಿಸಿಕೊಳ್ಳಬೇಕು ಅನಿಸಿತಂತೆ. ಅದಕ್ಕೇ ಆತ ತನ್ನೆಲ್ಲ ಹಣವನ್ನೂ ನೊಬೆಲ್ ಪ್ರಶಸ್ತಿಗಾಗಿ ಮೀಸಲಿಟ್ಟ ಕಥೆ ಈಗ ೧೦೫ ವರ್ಷ ಹಳೆಯದು.</p>
<p>ನಮ್ಮ ದೇಶದಲ್ಲೂ ಅನೇಕ ಉದ್ಯಮಿಗಳು, ವರ್ತಕರು ಪ್ರಶಸ್ತಿಗಳನ್ನು, ದತ್ತಿನಿಗಳನ್ನು ಸ್ಥಾಪಿಸಿದ್ದಾರೆ. ಅವುಗಳನ್ನು ಪಡೆದು ವಿದ್ಯಾವಂತರಾಗುವುದು ಒಳ್ಳೆಯದೋ, ಅಥವಾ ಅವರ ಇತಿಹಾಸವನ್ನೆಲ್ಲ ಕೆದಕುವುದೋ ಎಂಬ ಪ್ರಶ್ನೆ ಬರಬಹುದು. ಈ ಪ್ರಶ್ನೆ ಈವರೆಗೆ ಯಾಕೆ ಬರಲಿಲ್ಲ ? ನಮಗೆ ತಿಳಿವಳಿಕೆ ಬಂದಮೇಲಾದರೂ ಈ ಪ್ರಶ್ನೆ ಕೇಳಿಕೊಳ್ಳಬೇಕಲ್ಲವೆ? ಏನಾದರೂ ಮಾಡಿ ಬಂದ ಹಣದಿಂದ ಸ್ಕಾಲರ್‌ಶಿಪ್ ಸ್ಥಾಪಿಸುವುದಾದರೆ ನಾಳೆ ದಾವೂದ್ ಇಬ್ರಾಹಿಂ ವಿಶ್ವಶಾಂತಿಪ್ರಶಸ್ತಿಯನ್ನೂ ನಾವು ಕಾಣಬಹುದು.</p>
<p>ಶಸ್ತ್ರ ಝಳಪಿಸುತ್ತಿದ್ದ ಭಯೋತ್ಪಾದಕರಿಂದ ಹಲವು ಜನರ ಜೀವ ಉಳಿಸಿ ಕೊನೆಯಿಸಿರೆಳೆದ ನೀರ್ಜಾ ಭಾನೋಟ್ ನೆನಪಾಗುತ್ತಿದ್ದಾಳೆ. ೧೯೮೬ರ ಆ ದಿನ ಸಫಾರಿನಿ ಮತ್ತು ಆತನ ಸಹ ಭಯೋತ್ಪಾದಕರು ಪ್ಯಾನ್ ಆಮ್ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಮುಗಿಸಿಬಿಡಲು ಗ್ರೆನೇಡ್ ಎಸೆದು ಗುಂಡಿನ ದಾಳಿ ಶರು ಮಾಡಿದ್ದರು. ಆದರೆ ನೀರ್ಜಾ ಭಾನೋಟ್ ವಿಮಾನದ ಒಂದು ಬಾಗಿಲನ್ನು ತೆರೆದು ಪ್ರಯಾಣಿಕರನ್ನು ಹೊರಗೆ ತಳ್ಳಿದಳು. ಗುಂಡಿನದಾಳಿಗೆ ತಾನೇ ಅಡ್ಡ ನಿಂತಳು. ೧೭ ತಾಸುಗಳ ಅವಳ ಸಹನೆ, ಶೌರ್ಯ, ನಸುನಗು – ಎಲ್ಲವೂ ೭೬ ಅಮೆರಿಕನ್‌ ಪ್ರಯಾಣಿಕರ ನೆನಪಿನಿಂದ ಮಾಸಿಲ್ಲ. ಅವಳ ಅಪ್ಪ ಹರೀಶ್ ಭಾನೋಟ್ ಈಗ ನೀರ್ಜಾ ಭಾನೋಟ್ ಪ್ಯಾನ್ ಆಮ್ ಶೌರ್ಯ ಪ್ರಶಸ್ತಿ ಕೊಡುತ್ತಿದ್ದಾರೆ. ೨೨ರ ವಯಸ್ಸಿನಲ್ಲಿ, ಜನ್ಮದಿನಕ್ಕೆ ಇನ್ನೆರಡೇ ದಿನವಿದ್ದ ಗಳಿಗೆಯಲ್ಲಿ ಕರ್ತವ್ಯಪ್ರಜ್ಞೆ ಮೆರೆದ ಪ್ರೀತಿಯ ಮಗಳ ನೆನಪಿಗೆ. ದೌರ್ಜನ್ಯದ ವಿರುದ್ಧ ಎದ್ದುನಿಲ್ಲುವ ವ್ಯಕ್ತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ೨೦೦೧ರಲ್ಲಿ ಈ ಪ್ರಶಸ್ತಿಯನ್ನು ತಮಿಳುನಾಡಿನ ಯಶೋದಾ ಪಡೆದಿದ್ದರು.<br />
ಅವರು &#x200d;ಯಾರೂ ಅರುಂಧತಿ ರಾಯ್ ಥರವೋ, ಗಿರೀಶ್ ಕಾರ್ನಾಡ್ ಥರವೋ ಪ್ರಚಾರಕ್ಕೆ ಎಳಸಿದ್ದರೆ, ಕಂಡ ಕಂಡ ಸಮಸ್ಯೆಗಳಿಗೆಲ್ಲ ಹೇಳಿಕೆ ನೀಡುತ್ತಿದ್ದಾರೆ ಎಂಬ ಮಾಹಿತಿ ನನಗಂತೂ ಇಲ್ಲ.</p>
<p>(ಕೃಪೆ: ಹೊಸದಿಗಂತ)</p></div>
<p><input id="gwProxy" type="hidden" /><input id="jsProxy" onclick="jsCall();" type="hidden" /></p><p>The post <a href="http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%b5%e0%b2%b0%e0%b3%8d%e0%b2%a3%e0%b2%ad%e0%b3%87%e0%b2%a6%e2%80%99/">ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’ ಸ್ಕಾಲರ್ ‌ಶಿಪ್</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%b5%e0%b2%b0%e0%b3%8d%e0%b2%a3%e0%b2%ad%e0%b3%87%e0%b2%a6%e2%80%99/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಬ್ರಿಟನ್ನಿಗರ ಖಾಸಗಿ ಮಾಹಿತಿಯೂ ಅಮೆರಿಕಾದ ಕೈಯಲ್ಲಿ!</title>
		<link>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ac%e0%b3%8d%e0%b2%b0%e0%b2%bf%e0%b2%9f%e0%b2%a8%e0%b3%8d%e0%b2%a8%e0%b2%bf%e0%b2%97%e0%b2%b0-%e0%b2%96%e0%b2%be%e0%b2%b8%e0%b2%97%e0%b2%bf-%e0%b2%ae%e0%b2%be%e0%b2%b9%e0%b2%bf%e0%b2%a4%e0%b2%bf/</link>
					<comments>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ac%e0%b3%8d%e0%b2%b0%e0%b2%bf%e0%b2%9f%e0%b2%a8%e0%b3%8d%e0%b2%a8%e0%b2%bf%e0%b2%97%e0%b2%b0-%e0%b2%96%e0%b2%be%e0%b2%b8%e0%b2%97%e0%b2%bf-%e0%b2%ae%e0%b2%be%e0%b2%b9%e0%b2%bf%e0%b2%a4%e0%b2%bf/#respond</comments>
		
		<dc:creator><![CDATA[admin]]></dc:creator>
		<pubDate>Wed, 10 Jan 2007 12:38:34 +0000</pubDate>
				<category><![CDATA[ಬೇಳೂರು ಸುದರ್ಶನ ಅವರ ಅಂಕಣ]]></category>
		<guid isPermaLink="false">http://localhost/vishwakannada/?p=344</guid>

					<description><![CDATA[<h3>-<a href="http://mitramaadhyama.co.in">ಬೇಳೂರು ಸುದರ್ಶನ</a></h3>
<p>ಬ್ರಿಟನ್ನಿನಿನಿಂದ ಅಮೆರಿಕಾಗೆ ಹೋಗುವ ಎಲ್ಲ ವಿಮಾನಯಾನಿಗಳ ಕ್ರೆಡಿಟ್ ಕಾರ್ಡ್ ಮತ್ತು ಈ ಮೈಲ್ ಪತ್ರವ್ಯವಹಾರಗಳನ್ನು  ಆಮೂಲಾಗ್ರವಾಗಿ ಪರಿಶೀಲಿಸುವ ಹಕ್ಕನ್ನು ಅಮೆರಿಕಾವು ಪಡಕೊಳ್ಳುವುದರೊಂದಿಗೆ ಈ ದೇಶಗಳ ನಡುವಣ ಮೈತ್ರಿ ಇನ್ನಷ್ಟು ಕಾವು ಪಡೆದಿದೆ!</p>
<p>The post <a href="http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ac%e0%b3%8d%e0%b2%b0%e0%b2%bf%e0%b2%9f%e0%b2%a8%e0%b3%8d%e0%b2%a8%e0%b2%bf%e0%b2%97%e0%b2%b0-%e0%b2%96%e0%b2%be%e0%b2%b8%e0%b2%97%e0%b2%bf-%e0%b2%ae%e0%b2%be%e0%b2%b9%e0%b2%bf%e0%b2%a4%e0%b2%bf/">ಬ್ರಿಟನ್ನಿಗರ ಖಾಸಗಿ ಮಾಹಿತಿಯೂ ಅಮೆರಿಕಾದ ಕೈಯಲ್ಲಿ!</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<h3>-[http://mitramaadhyama.co.in|ಬೇಳೂರು ಸುದರ್ಶನ]</h3>
<p>ಬ್ರಿಟನ್ನಿನಿನಿಂದ ಅಮೆರಿಕಾಗೆ ಹೋಗುವ ಎಲ್ಲ ವಿಮಾನಯಾನಿಗಳ ಕ್ರೆಡಿಟ್ ಕಾರ್ಡ್ ಮತ್ತು ಈ ಮೈಲ್ ಪತ್ರವ್ಯವಹಾರಗಳನ್ನು  ಆಮೂಲಾಗ್ರವಾಗಿ ಪರಿಶೀಲಿಸುವ ಹಕ್ಕನ್ನು ಅಮೆರಿಕಾವು ಪಡಕೊಳ್ಳುವುದರೊಂದಿಗೆ ಈ ದೇಶಗಳ ನಡುವಣ ಮೈತ್ರಿ ಇನ್ನಷ್ಟು ಕಾವು ಪಡೆದಿದೆ!</p>
<p>ಅಲ್ಲದೆ ಇನ್ನುಮುಂದೆ ಇಂಥ ಎಲ್ಲ ಪ್ರಯಾಣಿಕರ  ಹತ್ತೂ ಕೈಬೆರಳುಗಳ ಮುದ್ರೆಗಳನ್ನು ಇತರೆ ಕ್ರಿಮಿನಲ್‌ಗಳೊಂದಿಗೆ  ಸೇರಿಸಿ ಪರೀಕ್ಷಿಸಲಾಗುವುದು ಎಂದೂ ಬ್ರಿಟನ್ ಸರ್ಕಾರ ಪ್ರಕಟಿಸಿದೆ. ಈ ಬೆರಳಚ್ಚುಗಳನ್ನು  ಅಮೆರಿಕಾದ ಫೆಡೆರಲ್‌ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಸದಾ ಕಣ್ಣಲ್ಲಿ ಕಣ್ಣಿಟ್ಟು ನೋಡಲಿದೆ.  ಈ ಬೆ ರಳಚ್ಚುಗಳನ್ನೂ ಅಮೆರಿಕಾವು ಯಾವುದೇ ದೇಶಕ್ಕಾದರೂ ನೀಡುವ ಹಕ್ಕನ್ನು ಹೊಂದಿದೆ.<br />
ಬ್ರಿಟನ್ನಿನಿಂದ ಅಮೆರಿಕಾಗೆ ಪ್ರತಿವರ್ಷ ನಲವತ್ತು ಲಕ್ಷ ಜನ ಪ್ರಯಾಣಿಸುತ್ತಾರೆ.</p>
<p>ಈಗ ಬ್ರಿಟನ್ನಿನಿಂದ ಅಮೆರಿಕಾಗೆ ಹೋಗುವಾಗ ಈ ಎಲ್ಲ ಮಾಹಿತಿಗಳೂ ಅಮೆರಿಕಾದ ಭದ್ರತಾ ಸಿಬ್ಬಂದಿಗಳ  ಕೈಗೆ ಹೋಗುತ್ತವೆ. ಈಗಾಗಲೇ ಜನವರಿ ೧ರಿಂದ ನೀಡಲಾಗುವ ಎಲ್ಲ ಪಾಸ್ ಪೋರ್ಟ್‌ಗಳಲ್ಲಿ ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ ಮುದ್ರಿಕೆಯನ್ನು  (ಆರ್ ಎಫ್ ಐ ಡಿ) ಅಂಟಿಸಲಾಗುವುದು ಎಂದು ಅಮೆರಿಕಾ ಪ್ರಕಟಿಸಿದೆ. ಇದರಿಂದಾಗಿ ವಿಮಾನಯಾನಿಗಳು ನಿಲ್ದಾಣದೊಳಕ್ಕೆ ಬರುತ್ತಲೇ ಅವರ ಎಲ್ಲ ವಿವರಗಳೂ ಭದ್ರತಾ ಸಿಬ್ಬಂದಿಗಳಿಗೆ ಗೊತ್ತಾಗಿಹೋಗುತ್ತದೆ.</p>
<p>ಅಮೆರಿಕಾದ ಈ ಕ್ರಮಗಳನ್ನು ನಾಗರಿಕ ಹಕ್ಕು ವೇದಿಕೆಗಳು ಬಲವಾಗಿ ಪ್ರತಿಭಟಿಸಿವೆ. ಭಯೋತ್ಪಾದನೆಯನ್ನು ಇಂಥ ಕ್ರಮಗಳಿಂದ ತಡೆಯಬಹುದು ಎನ್ನುವುದು ಮೂರ್ಖತನ ಎಂದು ಬ್ರಿಟನ್ನಿನ `ಲಿಬರ್ಟಿ&#8217; ಸಂಸ್ಥೆ ಹೇಳಿದೆ. `ಇದು ನಮ್ಮ ಎಲ್ಲರ ಮಾಹಿತಿಗಳನ್ನು ಅಮೆರಿಕಾಗೆ ಮಾರಿಕೊಂಡ ಸ್ಥಿತಿ ಅಷ್ಟೆ&#8217; ಎಂದು ಲಿಬರ್ಟಿ ಸಂಸ್ಥೆಯ ನಿರ್ದೇಶಕ ಶಮಿ ಚಕ್ರವರ್ತಿ ಹೇಳುತ್ತಾರೆ. ಸಾವಿರಾರು ಅಮಾಯಕ ಬ್ರಿಟನ್ನರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವುದು ತಪ್ಪು ಎಂದು ಪ್ರೈವಸಿ ಇಂಟರ್‌ನ್ಯಾಶನಲ್‌ನ ಸೈಮನ್ ಡೇವೀಸ್ ಹೇಳುತ್ತಾರೆ.  ಈಗ ಇರುವ ಬೆರಳಚ್ಚು ದಾಖಲೆಯ ೧೫ ಪ್ರಮುಖ ಬಯೋಮೆಟ್ರಿಕ್ ಯಂತ್ರಗಳ ಪಕಿ ೧೧ ಯಂತ್ರಗಳು ಮೋಸಹೋಗಿವೆ ಎಂಬ ಅಂಕಿ ಅಂಶವನ್ನು `ಸ್ಟೇಟ್ ವಾಚ್&#8217; ಎಂಬ ಸಂಸ್ಥೆ ಜಪಾನಿನಲ್ಲಿ ನಡೆಸಿದ ಪ್ರಯೋಗದಿಂದ ಕಂಡುಕೊಂಡಿದೆ.</p>
<p>ಆದರೂ ಈ ಕ್ರಮಗಳಿಗೆ ಯಾವುದೇ ತಡೆ ಸಿಕ್ಕಿಲ್ಲ. ಭಯೋತ್ಪಾದನೆಯ ಭೀಕರ ಕನಸುಗಳಿಂದ  ಇನ್ನೂ ಚೇತರಿಸಿಕೊಳ್ಳದ ಅಮೆರಿಕಾದ ಈ ಹೆಜ್ಜೆಗಳಿಗೆ ಸದ್ದಾಂ ಹುಸೇನ್‌ನ ಸಾವೇ ಕಾರಣವೇ ಎಂಬುದು ಇನ್ನಷ್ಟೇ ಖಚಿತವಾಗಬೇಕಷ್ಟೆ.</p>
<p>ಪ್ರಯಾಣಿಕರ ಈ ಮೈಲ್ &#8211; ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆಯುವುದಕ್ಕಾಗಿ ಅಮೆರಿಕಾವು ಐರೋಪ್ಯ ಸಮುದಾಯದೊಂದಿಗೇ ಒಪ್ಪಂದ ಮಾಡಿಕೊಂಡಿದೆ.  ಇದನ್ನು ಐರೋಪ್ಯ ಸಾರಿಗೆ ಇಲಾಖೆಯು  ಮಾಹಿತಿ ಹಕ್ಕಿನ ಅಡಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ಪ್ರಕಟಿಸಿದೆ.</p>
<p>ಈ ಎಲ್ಲ ನಿಯಮಗಳನ್ನು ಅನುಸರಿಸುವುದು ಎಲ್ಲ  ವಿಮಾನ ಸಂಸ್ಥೆಗಳಿಗೆ ಕಡ್ಡಾಯವಾಗಿದೆ. ಅದಿಲ್ಲವಾದರೆ ಅವುಗಳ ಅನುಮತಿಯೇ ರದ್ದಾಗಲಿದೆ ಎಂದೂ ಅಮೆರಿಕಾ ಹೇಳಿದೆ.</p>
<p>ಪ್ಯಾಸೆಂಜರ್ ನೇಮ್ ರೆಕಾರ್ಡ್ (ಪಿ ಎನ್ ಆರ್) ಎಂಬ ಪ್ರಾಥಮಿಕ ಮಾಹಿತಿಗಳ ಆಧಾರದಲ್ಲಿಯೇ ತನಿಖೆ ನಡೆಸಿ ಆಮೇಲೆ ಕಾನೂನಿನ ಮಾರ್ಗಗಳನ್ನು  ಅನುಸರಿಸಿ ಈ ಮೈಲ್ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆಯಲಾಗುವುದು ಎಂದೂ ಅಮೆರಿಕಾ ಹೇಳಿದೆ.  ಅಂದರೆ ಹೀಗೆ ಹೆಚ್ಚಿನ ಮಾಹಿತಿ ಪಡೆಯುವುದಕ್ಕೆ ಅಮೆರಿಕಾದ ಭದ್ರತಾ ಅಧಿಕಾರಿಗಳು ನ್ಯಾಯಾಲಯದ ಮೂಲಕ ಆದೇಶ ಪಡೆಯಬೇಕು. ಆದರೆ ಇದು ಎಷ್ಟು ಕಾರ್ಯಸಾಧ್ಯ ಎಂದು ಅಮೆರಿಕಾದ ಕಾನೂನು ತಜ್ಞರು ಹುಬ್ಬೇರಿಸಿದ್ದಾರೆ. ಅಮೆರಿಕಾದಲ್ಲಿ ಇಂಥ ಒಂದು ಪ್ರಕರಣ ದಾಖಲಾದರೂ, ದೂರು ಎದುರಿಸುವ ಪ್ರಯಾಣಿಕ ಅಮೆರಿಕಾದಲ್ಲೇ ವಕೀಲನನ್ನು ನೇಮಿಸಿಕೊಳ್ಳಬೇಕು!</p>
<p>ಆರ್ ಎಫ್ ಐ ಡಿ ಮುದ್ರಿಕೆಗಳನ್ನು ಮೆತ್ತಗೆ ಸುತ್ತಿಗೆಯಿಂದ ಜಜ್ಜಿದರೆ ಭದ್ರತಾ ಸಿಬ್ಬಂದಿಗಳು ಏನೂ ಮಾಡಲು ಬರುವುದಿಲ್ಲ ಎಂದು ಒಂದು ಜಾಲತಾಣದಲ್ಲಿ ಉಚಿತ ಸಲಹೆಯನ್ನು ನೀಡಲಾಗಿದೆ.  ಆದರೆ ಅಕಸ್ಮಾತ್ ಹೀಗೆ ಉದ್ದೇಶಪೂರ್ವಕವಾಗಿಯೇ ಮಾಹಿತಿ ನಾಶ ಮಾಡಿದ ಬಗ್ಗೆ ಖಚಿತವಾದರೆ ೨೫ ವರ್ಷಗಳ ಸೆರೆಮನೆವಾಸ ತಪ್ಪಿದ್ದಲ್ಲ!</p>
<p>ಅಮೆರಿಕಾ &#8211; ಬ್ರಿಟನ್ &#8211; ಐರೋಪ್ಯ ಸಮುದಾಯದ ಈ ಕ್ರಮಗಳು ಮುಂದೆ ಇತರೆ ದೇಶಗಳಿಗೂ ವ್ಯಾಪಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.</p>
<p>(ಕೃಪೆ: ಹೊಸದಿಗಂತ)</p><p>The post <a href="http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ac%e0%b3%8d%e0%b2%b0%e0%b2%bf%e0%b2%9f%e0%b2%a8%e0%b3%8d%e0%b2%a8%e0%b2%bf%e0%b2%97%e0%b2%b0-%e0%b2%96%e0%b2%be%e0%b2%b8%e0%b2%97%e0%b2%bf-%e0%b2%ae%e0%b2%be%e0%b2%b9%e0%b2%bf%e0%b2%a4%e0%b2%bf/">ಬ್ರಿಟನ್ನಿಗರ ಖಾಸಗಿ ಮಾಹಿತಿಯೂ ಅಮೆರಿಕಾದ ಕೈಯಲ್ಲಿ!</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ac%e0%b3%8d%e0%b2%b0%e0%b2%bf%e0%b2%9f%e0%b2%a8%e0%b3%8d%e0%b2%a8%e0%b2%bf%e0%b2%97%e0%b2%b0-%e0%b2%96%e0%b2%be%e0%b2%b8%e0%b2%97%e0%b2%bf-%e0%b2%ae%e0%b2%be%e0%b2%b9%e0%b2%bf%e0%b2%a4%e0%b2%bf/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಮೊಬೈಲ್ ಸಂಖ್ಯೆ ಕದಿಯುವ ಬ್ಯಾಂಕುಗಳಿಂದ ಬೇಷರತ್ ಕ್ಷಮಾ</title>
		<link>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ae%e0%b3%8a%e0%b2%ac%e0%b3%88%e0%b2%b2%e0%b3%8d-%e0%b2%b8%e0%b2%82%e0%b2%96%e0%b3%8d%e0%b2%af%e0%b3%86-%e0%b2%95%e0%b2%a6%e0%b2%bf%e0%b2%af%e0%b3%81%e0%b2%b5-%e0%b2%ac%e0%b3%8d%e0%b2%af/</link>
					<comments>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ae%e0%b3%8a%e0%b2%ac%e0%b3%88%e0%b2%b2%e0%b3%8d-%e0%b2%b8%e0%b2%82%e0%b2%96%e0%b3%8d%e0%b2%af%e0%b3%86-%e0%b2%95%e0%b2%a6%e0%b2%bf%e0%b2%af%e0%b3%81%e0%b2%b5-%e0%b2%ac%e0%b3%8d%e0%b2%af/#respond</comments>
		
		<dc:creator><![CDATA[admin]]></dc:creator>
		<pubDate>Tue, 12 Dec 2006 13:02:23 +0000</pubDate>
				<category><![CDATA[ಬೇಳೂರು ಸುದರ್ಶನ ಅವರ ಅಂಕಣ]]></category>
		<guid isPermaLink="false">http://localhost/vishwakannada/?p=335</guid>

					<description><![CDATA[<h3>- <a href="http://mitramaadhyama.co.in">ಬೇಳೂರು ಸುದರ್ಶನ</a></h3>
<p>ನೀವು ಹೊಸದಾಗಿ ಒಂದು ಮೊಬೈಲ್ ಕೊಳ್ಳುತ್ತೀರಿ. ಯಾವುದೋ ಮೊಬೈಲ್ ಕಂಪನಿಯ ಯಾವುದೋ ಸಂಖ್ಯೆ ನಿಮ್ಮದಾಗುತ್ತದೆ. ನಿಮ್ಮ ಗೆಳೆಯರು, ಬಂಧುಗಳಿಗೆ ಆ ಸಂಖ್ಯೆಯನ್ನು ಹೇಳಿ  ಅವರಿಂದ ಕರೆ ಬರಲಿ ಎಂದು ನಿರೀಕ್ಷಿಸುತ್ತೀರಿ. ನಿಮ್ಮ ವ್ಯವಹಾರ ವೃದ್ಧಿಯಾಗಲಿ ಎಂದು ಬಯಸುತ್ತೀರಿ. ನೀವು ಈ ಮೊಬೈಲ್ ಖರೀದಿಗೆ ನಿಮ್ಮದೇ ಕ್ರೆಡಿಟ್ / ಡೆಬಿಟ್ ಕಾರ್ಡನ್ನು ಬಳಸಿರಲೂಬಹುದು.</p>
<p>The post <a href="http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ae%e0%b3%8a%e0%b2%ac%e0%b3%88%e0%b2%b2%e0%b3%8d-%e0%b2%b8%e0%b2%82%e0%b2%96%e0%b3%8d%e0%b2%af%e0%b3%86-%e0%b2%95%e0%b2%a6%e0%b2%bf%e0%b2%af%e0%b3%81%e0%b2%b5-%e0%b2%ac%e0%b3%8d%e0%b2%af/">ಮೊಬೈಲ್ ಸಂಖ್ಯೆ ಕದಿಯುವ ಬ್ಯಾಂಕುಗಳಿಂದ ಬೇಷರತ್ ಕ್ಷಮಾ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<h3>&#8211; [http://mitramaadhyama.co.in|ಬೇಳೂರು ಸುದರ್ಶನ]</h3>
<p>ನೀವು ಹೊಸದಾಗಿ ಒಂದು ಮೊಬೈಲ್ ಕೊಳ್ಳುತ್ತೀರಿ. ಯಾವುದೋ ಮೊಬೈಲ್ ಕಂಪನಿಯ ಯಾವುದೋ ಸಂಖ್ಯೆ ನಿಮ್ಮದಾಗುತ್ತದೆ. ನಿಮ್ಮ ಗೆಳೆಯರು, ಬಂಧುಗಳಿಗೆ ಆ ಸಂಖ್ಯೆಯನ್ನು ಹೇಳಿ  ಅವರಿಂದ ಕರೆ ಬರಲಿ ಎಂದು ನಿರೀಕ್ಷಿಸುತ್ತೀರಿ. ನಿಮ್ಮ ವ್ಯವಹಾರ ವೃದ್ಧಿಯಾಗಲಿ ಎಂದು ಬಯಸುತ್ತೀರಿ. ನೀವು ಈ ಮೊಬೈಲ್ ಖರೀದಿಗೆ ನಿಮ್ಮದೇ ಕ್ರೆಡಿಟ್ / ಡೆಬಿಟ್ ಕಾರ್ಡನ್ನು ಬಳಸಿರಲೂಬಹುದು.</p>
<p>ಆದರೂ, ನಿಮಗೆ ಆಗಾಗ್ಗೆ ಒಂದು ಕರೆ ಬರುತ್ತಲೇ ಇರುತ್ತದೆ.  `ನಾನು &#8230;.. ಬ್ಯಾಂಕಿನಿಂದ ಫೋನ್ ಮಾಡ್ತಾ ಇದೀನಿ. ನಿಮಗೆ ಕ್ರೆಡಿಟ್ ಕಾರ್ಡ್ ಬೇಕಾ? ನಿಮಗೆ ಮನೆ ಸಾಲ ಬೇಕಾ? ನಿಮಗೆ ವೆಹಿಕಲ್ ಲೋನ್ ಬೇಕಾ?&#8217; ಹೀಗೆ ಯಾವುದೋ ಬ್ಯಾಂಕಿನ ಯಾವುದೋ ಸೇವೆಯನ್ನು ಯಾವುದೋ ಯುವತಿ ನಿಮಗಾಗಿ ಬಾಯಿಪಾಠ ಮಾಡಿದಂತೆ ಉಲಿಯುತ್ತಾಳೆ.</p>
<p>ನೀವೇನು ಮಾಡುತ್ತೀರಿ? `ಇಲ್ಲಾರೀ, ನನ್ನ ಹತ್ರ ಪ್ಲಾಸ್ಟಿಕ್ ಕಾರ್ಡ್ ಇದೆ, ಈಗ ಬೇಡ, ಆಮೇಲೆ ಕರೆ ಮಾಡಿ&#8217; ಏನೋ ಒಂದು ಕಾರಣ ಹೇಳಿ ಕರೆಯನ್ನು ಮುಗಿಸಬಯಸುತ್ತೀರಿ. ನೀವು ಮಾತುಕತೆ ಮುಂದುವರಿಸಿದಿರೋ, ಸರಿ, ನಿಮ್ಮ ಎಲ್ಲ ಮಾಹಿತಿಗಳನ್ನೂ ಕೇಳಿ ನಿಮ್ಮ ಮನೆ / ಕಚೇರಿಗೇ ಯಾರೋ ಬಂದು ಈ ಬಗ್ಗೆ ಹೆಚ್ಚಿನ ಮಾಹಿತಿ ಕೊಡುತ್ತಾರೆಂದೂ, ನಿಮ್ಮ ಅನುಕೂಲದ ಸಮಯ ನೋಡಿಕೊಂಡೇ ಬರುತ್ತೇವೆ ಎಂದೂ ಆ ಯುವತಿ ಮೆಲ್ಲಗೆ ಹೇಳುತ್ತಾಳೆ.</p>
<p>ಆದರೆ ಈ ಕರೆ ಮಾಡಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಅವರಿಗೆ ನೀಡಿದವರು ಯಾರು ಎಂದು ಯಾವತ್ತಾದರೂ ಕೇಳಿದ್ದೀರಾ? ಒಂದು ಸಲ ಕೇಳಿ ನೋಡಿ. ಯಾರೂ ಹೇಳುವುದಿಲ್ಲ. `ನಮಗೆ ಡಾಟಾಬೇಸ್ನಿಂದ ಸಿಕ್ಕಿದೆ&#8217; ಎಂಬ ಯಾಂತ್ರಿಕ, ಜಾರಿಕೆಯ ಉತ್ತರ ಬರುತ್ತದೆ. ಡಾಟಾಬೇಸ್ ಎಂದಕೂಡಲೇ ಅಕೃತ ಮಾಹಿತಿಕೋಶ ಎಂದು ಸಾರ್ವಜನಿಕರು ತಪ್ಪು ತಿಳಿಯುವುದೇ ಹೆಚ್ಚು.  ಅಂದರೆ ಕರೆಗೆ ಕಾರಣವಾದ ದೂರವಾಣಿ ಸಂಖ್ಯೆಯನ್ನು ಪಡೆದ ಮಾಹಿತಿಮೂಲವನ್ನು ಈ  ಕರೆ ಮಾಡುವ ಯುವತಿಯರಾಗಲೀ, ಅವರ ಮುಖ್ಯಸ್ಥರಾಗಲೀ, ಅಥವಾ ಸದರಿ ಬ್ಯಾಂಕಿನ ಮುಖ್ಯಸ್ಥರಾಗಲೀ ಹೇಳುವುದಿಲ್ಲ. ಆದರೆ ಅಂಥ ಮಾಹಿತಿಯನ್ನು ಪಡೆಯುವುದು ನಿಮ್ಮ ಹಕ್ಕು.<br />
ಕಳೆದ ಒಂದು ವರ್ಷದಿಂದ ಇಂಥ ಕರೆಗಳನ್ನು ಮಾಡಿದವರನ್ನೇ ಮಾಹಿತಿಮೂಲದ ಬಗ್ಗೆ ಪ್ರಶ್ನಿಸಿದ  ಈ ಲೇಖಕನ ಅನುಭವ ಹೀಗಿದೆ:</p>
<p>೧) ಎ ಬಿ ಎನ್ ಆಮ್ರೋ ಬ್ಯಾಂಕ್: ಈ ಪ್ರತಿಷ್ಠಿತ ವಿದೇಶಿ ಬ್ಯಾಂಕಿನ ಕಾಲ್ಸೆಂಟರಿನಿಂದ ಕರೆಬಂದ ಸಂಖ್ಯೆಯನ್ನು, ಕರೆಯ ಸಮಯ ಎಲ್ಲವನ್ನೂ ಉಲ್ಲೇಖಿಸಿ  ಬ್ಯಾಂಕಿನ ವಿಳಾಸವನ್ನು ಪತ್ತೆ ಹಚ್ಚಿ (ಯಾಕೆಂದರೆ ಕರೆ ಮಾಡಿದವರು ಬ್ಯಾಂಕಿನ ವಿಳಾಸ ಕೊಡುವುದಿಲ್ಲ) ಪತ್ರ ಬರೆದೆ. ಮೊದಲು ಹಾರಿಕೆಯ ಉತ್ತರ. ಆಮೇಲೆ ನಾವು ಡಾಟಾಬೇಸ್ ಯಾವುದು ಎಂದು ಹೇಳುವುದಿಲ್ಲ ಎಂಬ ವಾದ.  ಜೊತೆಗೆ ವಿಷಾದಿಸುತ್ತೇವೆ ಎಂಬ ಮಾತು. ನಮ್ಮ ಅಮೂಲ್ಯ ಗ್ರಾಹಕರಾದ ತಮಗೆ ಹೀಗಾಗಿದ್ದಕ್ಕೆ ಬೇಸರಿಸಬೇಡಿ ಎಂಬ ಅನುನಯ. ಆದರೆ ನಾನು ಬ್ಯಾಂಕಿನ ಗ್ರಾಹಕನೇ ಅಲ್ಲವಲ್ಲ ಎಂದಾಗ ನಿರುತ್ತರ. ಆಮೇಲೆ ಭಾರತೀಯ ರಿಸರ್ವ್ ಬ್ಯಾಂಕಿಗೆ ದೂರು ಕೊಟ್ಟ ಮೇಲೆ ರಿಸರ್ವ್ ಬ್ಯಾಂಕಿನಿಂದಲೂ ಉತ್ತರ ಕೇಳಿ ಪತ್ರ ಹೋದಮೇಲೆ ಬೇಷರತ್ ಕ್ಷಮೆ.  ಹಾಗಾದರೆ ನನ್ನ ದೂರವಾಣಿ ಸಂಖ್ಯೆ ಸಿಕ್ಕಿದ್ಛ್ದು ಹೇಗೆ? &#8230;&#8230;. ಸಂಸ್ಥೆಯ ಡಾಟಾಬೇಸ್ನಿಂದ ಪಡೆದಿದ್ದೇವೆ, ಆದರೆ ಯಾರು ಈ ಮಾಹಿತಿ ಕೊಟ್ಟರು ಎಂದು ಹೇಳುವುದಿಲ್ಲ ಎಂಬ ವಾದ.</p>
<p>೨) ಸಿಂಡಿಕೇಟ್ ಬ್ಯಾಂಕಿನಿಂದ ಕರೆ. ಆದರೆ ನಾನು ಬ್ಯಾಂಕಿನ ಗ್ರಾಹಕನೂ ಹೌದು, ನನ್ನ ಬಳಿ ಇಂಥ ಕಾರ್ಡ್ ಇರುವುದೂ ನಿಮಗೆ ಗೊತ್ತಿಲ್ಲವೆ ಎಂದು ಪ್ರಶ್ನಿಸಿದರೆ `ಹೌದ? ಸರಿ ಬಿಡಿ&#8217; ಎಂಬ ಉಡಾಫೆಯ ಮಾತು. ಆದರೆ ನನ್ನ ದೂರವಾಣಿ ಸಂಖ್ಯೆ ನಿಮಗೆ ಸಿಕ್ಕಿದ್ದಾದರೂ ಹೇಗೆ ಎಂದಾಗ ಉತ್ತರವೇ ಇಲ್ಲ. ಲಿಖಿತ ದೂರು ಸಲ್ಲಿಸಿದಾಗ ಅವರಿಂದಲೂ ಬೇಷರತ್ ಕ್ಷಮೆಯಾಚನೆಯ ಪತ್ರ.</p>
<p>೩) ಇದೀಗ ಐ ಸಿ ಐ ಸಿ ಐ ಬ್ಯಾಂಕಿನಿಂದಲೂ ಅಂಥದೇ ಕರೆ ಬಂದಾಗ ಮತ್ತೆ ಸೀದಾ ಭಾರತೀಯ ರಿಸರ್ವ್ ಬ್ಯಾಂಕಿಗೆ ದೂರು. ಅವರಿಂದ ಈಗ ಸದರಿಬ್ಯಾಂಕಿಗೆ ಉತ್ತರ ಕೇಳಿ ಪತ್ರ ಹೋಗಿದೆ. ಇನ್ನು ಹದಿನೈದು ದಿನಗಳಲ್ಲಿ ಉತ್ತರ ಬರಬೇಕಿದೆ. ಬೇಷರತ್ ಕ್ಷಮೆ ಕೇಳುವ ನಿರೀಕ್ಷೆ ಹೆಚ್ಚಾಗಿದೆ!</p>
<p>ಗೊತ್ತಾಯಿತಲ್ಲ? ಈ ಬ್ಯಾಂಕುಗಳು ಮೊಬೈಲ್ ದೂರವಾಣಿ ಸೇವಾಸಂಸ್ಥೆಗಳಿಂದಲೇ  ನಮ್ಮೆಲ್ಲರ ದೂರವಾಣಿ ಸಂಖ್ಯೆಗಳನ್ನು ಪಡೆಯುತ್ತಾರೆ. ಹೀಗೆ ಮಾಹಿತಿಗಳನ್ನು ಮಾರಿಕೊಳ್ಳುವ ಬಗ್ಗೆ ಮೊಬೈಲ್ ಸಂಸ್ಥೆಯು ನಿಮ್ಮೊಂದಿಗೆ ಒಪ್ಪಂದವನ್ನೇನೂ ಮಾಡಿಕೊಂಡಿರುವುದಿಲ್ಲ ಎಂದೇನೂ ತಿಳಿಯಬೇಡಿ. ಕೆಲವೊಮ್ಮೆ ಕಣ್ಣಿಗೆ ಕಾಣದ (ಫೈನ್ಪ್ರಿಂಟ್ ಎನ್ನುತ್ತಾರೆ) ಪದಗಳಿರುವ ಒಪ್ಪಂದಕ್ಕೆ ನಾವು ಕಣ್ಣುಮುಚ್ಚಿ ಸಹಿ ಹಾಕಿರುತ್ತೇವೆ. ಇಷ್ಟಾಗಿಯೂ ನಮಗೆ ಮಾಹಿತಿಮೂಲವನ್ನು ತಿಳಿದುಕೊಳ್ಳುವ ಹಕ್ಕು ಇದ್ದೇ ಇದೆ.</p>
<p>ಅಲ್ಲಾರೀ, ನಾವು ಮಾಹಿತಿ ಪಡೆಯುವ ಹಕ್ಕು ಕಾಯ್ದೆಯನ್ನು ಬಳಸಬಹುದಲ್ಲ ಎಂದು ನೀವು ಕೇಳಬಹುದು. ಅದೇನೇ ಇದ್ದರೂ ಸಾರ್ವಜನಿಕ ಬಳಕೆಗೆ ಮಾತ್ರ. ಅಲ್ಲದೆ ನಮ್ಮ ದೇಶದಲ್ಲಿ ಮಾಹಿತಿ ಸಂರಕ್ಷಣೆ ಕಾಯ್ದೆಯೇ ಇಲ್ಲ ಎಂಬುದು ಇನ್ನೊಂದು ಕಟು ವಾಸ್ತವ. ಅಂದರೆ ನಮ್ಮ ಮಾಹಿತಿಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಯಾವುದೇ ಕಾಯ್ದೆಯೂ ಈವರೆಗೂ ಇಲ್ಲ. ಈಗ ದೇಶದ ವಿವಿಧ ನ್ಯಾಯಾಶರು, ನ್ಯಾಯವಾದಿಗಳು ಈ ಬಗ್ಗೆ ಯೋಚಿಸುತ್ತಿದ್ದಾರಂತೆ.<br />
ಇನ್ನು ಇಂಥ ಕರೆಗಳನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಕೂಡಾ ಕ್ರಮಗಳನ್ನು ತೆಗೆದುಕೊಂಡಿದೆ. ಅದು ೨೦೦೫ರ ನವೆಂಬರಿನಲ್ಲೇ `ಡು ನಾಟ್ ಕಾಲ್ ರಿಜಿಸ್ಟ್ರಿಯನ್ನು&#8217; (ಕರೆ ಮಾಡಬೇಡಿ ಎಂದು ಗಹಕರು ನೋಂದಣಿ ಮಾಡಿಕೊಳ್ಳುವ ಪುಸ್ತಕ) ಎಲ್ಲ ಬ್ಯಾಂಕುಗಳೂ ತೆರೆಯಬೇಕು; ಈ ಬಗ್ಗೆ ತಂತಮ್ಮ ಜಾಲತಾಣಗಳಲ್ಲಿ ಗ್ರಾಹಕರು `ನನಗೆ ಇಂಥ ಕರೆ ಮಾಡಬೇಡಿ&#8217; ಎಂದು ತಿಳಿಸುವುದಕ್ಕೆ ಅವಕಾಶ ಇರಬೇಕು ಎಂದು  ಸೂಚಿಸಿತ್ತು. ಆದರೆ ಈಗಲೂ ನನ್ನಂಥ ಗ್ರಾಹಕರಲ್ಲದವರಿಗೂ ಈ ಕರೆಗಳು ಬರುತ್ತಲೇ ಇವೆ. ಡು ನಾಟ್ ಕಾಲ್ ರಿಜಿಸ್ಟ್ರಿಯಂತೂ  ಯಾವ ಜಾಲತಾಣದಲ್ಲೂ ಕಂಡುಬಂದಿಲ್ಲ. ಅಲ್ಲದೆ ಕರೆ ಬಂದ ಬ್ಯಾಂಕಿನಿಂದಲೇ ಮತ್ತೆ ಮತ್ತೆ ಬೇರೆ ಬೇರೆ ಕಾಲ್ ಸೆಂಟರ್ಗಳಿಂದ ಕರೆ ಬರುತ್ತಲೇ ಇರುತ್ತದೆ.</p>
<p>ಹಾಗಾದರೆ ನಿಮಗೆ ಇನ್ನುಮುಂದೆ ಇಂಥ ಕರೆ ಬಂದರೆ ಏನು ಮಾಡಬೇಕು?</p>
<p>ಮೊದಲು ಈ ಕರೆ ಯಾವ ದೂರವಾಣಿ ಸಂಖ್ಯೆಯಿಂದ ಬಂತು ಎಂದು ಟಿಪ್ಪಣಿ ಮಾಡಿಕೊಳ್ಳಿ. ಆಮೇಲೆ ಕರೆ ಮಾಡಿದವರಿಗೆ `ನೀವು ಯಾರು, ನಿಮ್ಮ ಹೆಸರೇನು. ನಿಮ್ಮ ಕಚೇರಿ ಮುಖ್ಯಸ್ಥರ ಹೆಸರೇನು, ಅವರ ದೂರವಾಣಿ ಸಂಖ್ಯೆಯೇನು&#8217; ಈ ಕನಿಷ್ಠ ಮಾಹಿತಿಗಳನ್ನು ಪಡೆದುಕೊಳ್ಳಿ. ಅಷ್ಟುಹೊತ್ತಿಗೆ ಅವರು ಈ  ಆಸಾಮಿ ಬಡಪೆಟ್ಟಿಗೆ ಬಗ್ಗುವುದಿಲ್ಲ ಎಂದು ಸುಮ್ಮನೆ ರಿಸೀವರ್ ಇಟ್ಟುಬಿಡುತ್ತಾರೆ.</p>
<p>ಆಮೇಲೆ ಸದರಿ ಬ್ಯಾಂಕಿನ ಮುಖ್ಯಕಚೇರಿಗೆ ಲಿಖಿತ ದೂರು ಸಲ್ಲಿಸಿ. ಇದರಲ್ಲಿ ಕೇವಲ ಖಾಸಗಿ ವಲಯವನ್ನು ಉಲ್ಲಂಘಿಸಿದ್ದಕ್ಕಷ್ಟೇ ಅಲ್ಲ, ಮಾಹಿತಿ ಮೂಲ ಯಾವುದೆಂದು ತಿಳಿಸಿ ಎಂದು ಒತ್ತಾಯಿಸಿ.</p>
<p>ಸಾಮಾನ್ಯವಾಗಿ ಇಂಥ ದೂರಿಗೆ ಜಾರಿಕೆಯ ಉತ್ತರ ಬರುತ್ತದೆ. ಬೇಷರತ್ ಕ್ಷಮೆ ಬರುವುದೇ ಇಲ್ಲ. ಇಂಥ ಸಂದರ್ಭದಲ್ಲಿ ಈ ವಲ್ ಬಳಸಿ  <a href="mailto:rdbangalore@rbi.org.in">rdbangalore@rbi.org.in</a>  ಇವರಿಗೆ  ದೂರು ಸಲ್ಲಿಸಿ.  ಆಗ ಅಲ್ಲಿಂದಲೂ ಬ್ಯಾಂಕಿಗೆ ವಿವರಣೆ ಕೇಳಿ ಪತ್ರ  ಹೋಗುತ್ತದೆ. ಸಾಮಾನ್ಯವಾಗಿ ಈ ಹೊತ್ತಿಗೆ ಬ್ಯಾಂಕಿನ ಅಕಾರಿಗಳು ಎಚ್ಚೆತ್ತುಕೊಂಡು ಬೇಷರತ್ ಕ್ಷಮೆಯ ಪತ್ರವನ್ನು ಬರೆಯುತ್ತಾರೆ.</p>
<p>ಇಷ್ಟಾಗಿಯೂ ಮತ್ತೆ ಅದೇ ಬ್ಯಾಂಕಿನಿಂದ ಅಂಥದೇ ಕರೆ ಬಂದರೆ ಅದನ್ನು ಉಲ್ಲೇಖಿಸಿ ಮತ್ತೆ ಭಾರತೀಯ ರಿಸರ್ವ್ ಬ್ಯಾಂಕಿಗೆ ಕಾಗದ ಬರೆದು&#8230;.</p>
<p>ಹೌದು. ಗ್ರಾಹಕ ಜಾಗೃತಿ ಎಂದರೆ ಕಾಗದ ಬರೆಯುವುದು, ಒತ್ತಾಯಿಸುವುದು, ವಿವರಣೆ ಕೇಳುವುದು&#8230;&#8230;. ಇದು ಕೊಂಚ ಸಹನೆ ಬೇಡುವ ಹಾದಿ. ಆದರೆ ಈ ಹಾದಿಯಲ್ಲಿ ಹೋದರೆ ಉತ್ತರ ಸಿಗುವ ಸಾಧ್ಯತೆ ಹಚ್ಚು. ಇಂಥ ಪ್ರಕರಣಗಳು ಹೆಚ್ಚಾಗಿ ಗ್ರಾಹಕೇತರರು ದೂರು ಸಲ್ಲಿಸುತ್ತ ಹೋದರೆ ಭಾರತೀಯ ರಿಸರ್ವ್ ಬ್ಯಾಂಕು ಇವರ ಮಾಹಿತಿ ರಕ್ಷಣೆಗೂ ಒಂದು ನಿಯಮ ರೂಪಿಸಬಹುದು.</p>
<p>(ಈ ಬಗ್ಗೆ ಹೆಚ್ಚಿನ ನೆರವು, ಮಾಹಿತಿ ಬೇಕಿದ್ದರೆ ನನಗೆ <a href="mailto:beluru@gmail.com">beluru@gmail.com</a> ಈ ಈ ಮೈಲ್ಗೆ ಪತ್ರ ಬರೆಯಲು ಹಾರ್ದಿಕ ಸ್ವಾಗತ.)</p>
<p>[ಕೃಪೆ: ಹೊಸದಿಗಂತ]</p>
<p>ಬೇಳೂರು ಸುದರ್ಶನರ  ಇತರೆ ಲೇಖನಗಳು, ಬರೆಹಗಳನ್ನು  [http://mitramaadhyama.co.in|mitramaadhyama.co.in] ಈ ಜಾಲತಾಣದಲ್ಲಿ ನೋಡಬಹುದು.</p><p>The post <a href="http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ae%e0%b3%8a%e0%b2%ac%e0%b3%88%e0%b2%b2%e0%b3%8d-%e0%b2%b8%e0%b2%82%e0%b2%96%e0%b3%8d%e0%b2%af%e0%b3%86-%e0%b2%95%e0%b2%a6%e0%b2%bf%e0%b2%af%e0%b3%81%e0%b2%b5-%e0%b2%ac%e0%b3%8d%e0%b2%af/">ಮೊಬೈಲ್ ಸಂಖ್ಯೆ ಕದಿಯುವ ಬ್ಯಾಂಕುಗಳಿಂದ ಬೇಷರತ್ ಕ್ಷಮಾ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ae%e0%b3%8a%e0%b2%ac%e0%b3%88%e0%b2%b2%e0%b3%8d-%e0%b2%b8%e0%b2%82%e0%b2%96%e0%b3%8d%e0%b2%af%e0%b3%86-%e0%b2%95%e0%b2%a6%e0%b2%bf%e0%b2%af%e0%b3%81%e0%b2%b5-%e0%b2%ac%e0%b3%8d%e0%b2%af/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಭರ್ಜರಿ ಪ್ರಶಸ್ತಿ, ಮಾನವ ಹಕ್ಕು ಮತ್ತು ಒಂದಷ್ಟು ಬೆವರು</title>
		<link>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ad%e0%b2%b0%e0%b3%8d%e0%b2%9c%e0%b2%b0%e0%b2%bf-%e0%b2%aa%e0%b3%8d%e0%b2%b0%e0%b2%b6%e0%b2%b8%e0%b3%8d%e0%b2%a4%e0%b2%bf-%e0%b2%ae%e0%b2%be%e0%b2%a8%e0%b2%b5-%e0%b2%b9%e0%b2%95%e0%b3%8d/</link>
					<comments>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ad%e0%b2%b0%e0%b3%8d%e0%b2%9c%e0%b2%b0%e0%b2%bf-%e0%b2%aa%e0%b3%8d%e0%b2%b0%e0%b2%b6%e0%b2%b8%e0%b3%8d%e0%b2%a4%e0%b2%bf-%e0%b2%ae%e0%b2%be%e0%b2%a8%e0%b2%b5-%e0%b2%b9%e0%b2%95%e0%b3%8d/#respond</comments>
		
		<dc:creator><![CDATA[admin]]></dc:creator>
		<pubDate>Fri, 17 Nov 2006 11:36:47 +0000</pubDate>
				<category><![CDATA[ಬೇಳೂರು ಸುದರ್ಶನ ಅವರ ಅಂಕಣ]]></category>
		<guid isPermaLink="false">http://localhost/vishwakannada/?p=324</guid>

					<description><![CDATA[<h2>ಬೂಕರ್ ಪ್ರಶಸ್ತಿಯ ಹಿಂದೆ ತಣ್ಣಗೆ ಜೀವ ಕಳೆದುಕೊಂಡವರೂ ಇದ್ದಾರೆ</h2>
<h3>- <a href="http://mitramaadhyama.co.in">ಬೇಳೂರು ಸುದರ್ಶನ</a></h3>
<p>The post <a href="http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ad%e0%b2%b0%e0%b3%8d%e0%b2%9c%e0%b2%b0%e0%b2%bf-%e0%b2%aa%e0%b3%8d%e0%b2%b0%e0%b2%b6%e0%b2%b8%e0%b3%8d%e0%b2%a4%e0%b2%bf-%e0%b2%ae%e0%b2%be%e0%b2%a8%e0%b2%b5-%e0%b2%b9%e0%b2%95%e0%b3%8d/">ಭರ್ಜರಿ ಪ್ರಶಸ್ತಿ, ಮಾನವ ಹಕ್ಕು ಮತ್ತು ಒಂದಷ್ಟು ಬೆವರು</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<h2>ಬೂಕರ್ ಪ್ರಶಸ್ತಿಯ ಹಿಂದೆ ತಣ್ಣಗೆ ಜೀವ ಕಳೆದುಕೊಂಡವರೂ ಇದ್ದಾರೆ</h2>
<h3>&#8211; [http://mitramaadhyama.co.in|ಬೇಳೂರು ಸುದರ್ಶನ]</h3>
<p>ಇತಿಹಾಸವನ್ನು ಮರೆಯಬೇಕು ಎಂದು ನಮ್ಮ ದೇಶದ ಹಲವು ಬುದ್ಧಿಜೀವಿಗಳು ಹೇಳುತ್ತಾರೆ. ರಾಮಜನ್ಮಭೂಮಿ? ಛೆ , ಛೆ ಅದನ್ನು ಟಾಯ್ಲೆಟ್  ಮಾಡಿಬಿಡಿ ಎನ್ನುತ್ತಾರೆ. ಸಂಸತ್ ಆಕ್ರಮಣಕ್ಕೆ ಮುಂದಾದ ಅಫ್ಜಲ್  ಗುರು? ಛೆ, ಎಲ್ಲಾದ್ರೂ ಉಂಟೆ&#8230;. ಕ್ಷಮಿಸಿಬಿಡಿ ಎನ್ನುತ್ತಾರೆ. ಮಾನನವಹಕ್ಕುಗಳ ದಮನ ಮಾಡಿದ ಕೇಂದ್ರ ಸರ್ಕಾರದ ಅಕಾಡೆಮಿ ಪ್ರಶಸ್ತಿಯನ್ನು ಅರುಂಧತಿ ರಾಯ್ ನಿರಾಕರಿಸುತ್ತಾರೆ.</p>
<p>ಅವರು ಹೇಳುವುದಕ್ಕೆ  ಕಾರಣ ಇಲ್ಲಿದೆ:</p>
<p>೨೦೦೨ ಅಕ್ಟೋಬರ್ ತಿಂಗಳಿನಲ್ಲಿ ಇಂಗ್ಲೆಂಡಿನ ಬಿಗ್ ಫುಡ್ ಗ್ರೂಪ್ ಎಂಬ ದೈತ್ಯ ಸಂಸ್ಥೆಯು ಪುಟ್ಟ ಗಯಾನಾ ದೇಶದ ಮೇಲೆ ಒಂದು ಒತ್ತಡ ಹೇರಿತು: ೧೯೭೬ರಲ್ಲಿ ಅದು ಆ ದೇಶಕ್ಕೆ ನೀಡಿದ ಸಾಲವನ್ನು ಬಡ್ಡಿ ಸಹಿತ ಮರುಪಾವತಿ ಮಾಡಬೇಕೆಂದು ಸಂಸ್ಥೆಯು ಗಯಾನಾ ಸರ್ಕಾರವನ್ನು ಕೇಳಿತು. ಅದು ಕೇಳಿದ ಮೊತ್ತ: ೧೨ ದಶಲಕ್ಷ ಪೌಂಡ್.  ಗಯಾನಾ ಸರ್ಕಾರವು ಸಕ್ಕರೆ ಉದ್ಯಮವನ್ನು ರಾಷ್ಟ್ರೀಕರಣ ಮಾಡಿದ್ದಕ್ಕೆ ಈ  ಪರಿಹಾರ ಕೊಡಬೇಕಿತ್ತು. ಮೊದಲು ಇದ್ದ ೧೩ ದಶಲಕ್ಷ ಪೌಂಡ್ಗಳಲ್ಲಿ  ೬ ದಶಲಕ್ಷ ಪೌಂಡ್ಗಳನ್ನು ಗಯಾನಾ ದೇಶ ಕಕ್ಕಿದ ಮೇಲೆ, ೧೯೮೯ರಿಂದ ಸಾಲ ಪಾವತಿ ಮಾಡಲಾಗಲಿಲ್ಲ. ಅದೇ ಬಡ್ಡಿಸಮೇತ ೧೨ ದಶಲಕ್ಷ ಪೌಂಡ್ ಆಗಿತ್ತು ಅನ್ನಿ&#8230;</p>
<p>ಗಯಾನಾ ದೇಶದ ಆಂತರಿಕ ಉತ್ಪನ್ನ ೨.೧೫ ಬಿಲಿಯ ಪೌಂಡ್. ಬಿಗ್ ಫುಡ್ ಸಂಸ್ಥೆಯದು ೫.೨ ಬಿಲಿಯ ಪೌಂಡ್. ಈ ದೇಶದ ಒಟ್ಟು ವಾರ್ಷಿಕ ಆದಾಯವೇ ೧೨೦ ದಶಲಕ್ಷ ಪೌಂಡ್. ಅಂದರೆ ಅದರ ಶೇ. ೧೦ರಷ್ಟನ್ನು ಬಿಗ್ಫುಡ್ ಕೇಳಿದೆ. ಈ ವಿಷಯ ಕೊನೆಗೆ  ವಿಶ್ವಬ್ಯಾಂಕಿನ ನ್ಯಾಯಾಲಯದ ಕಟಕಟೆ ಹತ್ತಿತು. ಆದರೆ ಜಾಗತಿಕ ಮಟ್ಟದಲ್ಲಿ ಗಯಾನಾ ದೇಶದ  ಪರವಾಗಿ ವರ್ಲ್ಡ್ ಡೆವಲಪ್ಮೆಂಟ್ ಮೂವ್ಮೆಂಟ್ ಮತ್ತು ಜ್ಯುಬಿಲೀ ರಿಸರ್ಚ್ ಸಂಸ್ಥೆಗಳು  ದನಿ ಎತ್ತಿದವು. ಜನಾಭಿಪ್ರಾಯ ರೂಪಿಸಿದವು.  ಕೊನೆಗೆ, ೨೦೦೩ರಲ್ಲಿ ಬಿಗ್ ಫುಡ್ ಸಂಸ್ಥೆಯು ಸಾಲವನ್ನು ಮನ್ನಾ  ಮಾಡಬೇಕಾಯಿತು. ಗಯಾನಾದಲ್ಲಿ ಈ ಸಂಸ್ಥೆಯು ಖರೀದಿಸಿದ ಸಂಸ್ಥೆಯ ಹೆಸರು &#8230;.. ಬೂಕರ್.  ಗಯಾನಾ ದೇಶಕ್ಕೆ ಕ್ಷಮಾದಾನ ನೀಡಿ ಸಾಲ ಮನ್ನಾ ಮಾಡುವ ಯಾವ ಮಾತೂ ಸಂಸ್ಥೆಯಿಂದ ಉದುರಲಿಲ್ಲ.</p>
<p>ಹೌದು. ಬೂಕರ್ ಪ್ರಶಸ್ತಿ ಇದೆಯಲ್ಲ, ಇದರ ಹಿಂದೆ ಇರುವ ಬೂಕರ್ ಹೆಸರಿನ ವ್ಯಕ್ತಿಯ ಒಡೆತನದ ಬೂಕರ್ ಮ್ಯಾಕ್ ಕೊನೆಲ್ ಸಂಸ್ಥೆಯು ೧೯೭೦ರ ದಶಕದಲ್ಲಿ ಗಯಾನಾದ  ಆಂತರಿಕ ಉತ್ಪನ್ನದ ಮೂರನೇ ಒಂದು ಭಾಗದಷ್ಟನ್ನು ಹೊಂದಿದ್ದ ದೈತ್ಯ ಸಂಸ್ಥೆಯಾಗಿತ್ತು. ಈ ಸಂಸ್ಥೆಯಷ್ಟೇ ಅಲ್ಲ, ದೆಮೆರಾರಾ ಬಾಕ್ಸೈಟ್ ಕಂಪನಿ, ರೇನಾಲ್ಡ್ಸ್ ಬಾಕ್ಸೈಟ್ ಕಂಪನಿ,  &#8211; ಇವೆರಡೇ ದೇಶದ ಶೇ. ೪೫ರಷ್ಟು ವಿದೇಶಿ ವಿನಿಮಯದ ಪಾಲನ್ನು ಹೊಂದಿದ್ದವು.<br />
೧೮೩೪ರಲ್ಲಿ ಸ್ಥಾಪನೆಯಾದ ಬೂಕರ್ ಮ್ಯಾಕ್ ಕೊನೆಲ್ ಸಂಸ್ಥೆಯು ಮಾಡಿದ್ದಿಷ್ಟೆ: ಭಾರತ ಮತ್ತು ಆಫ್ರಿಕಾದ  ಜನರನ್ನು ಗುಲಾಮಗಿರಿಗೆ ದೂಡಿ ಸಕ್ಕರೆ ಉದ್ಯಮದಲ್ಲಿ ದುಡ್ಡು ಮಾಡಿದ್ದು!  ೧೮೩೮ರಿಂದ  ೧೯೧೭ ರವರೆಗೆ  ಗಯಾನಾ ದೇಶಕ್ಕೆ ಮಾರಾಟವಾಗಿ ಬಂದ ಗುಲಾಮರ ಸಂಖ್ಯೆ ೨,೪೦,೦೦೦.</p>
<p>೭೦ರ ದಶಕದಲ್ಲೇ ಗಯಾನಾ ದೇಶದ ಶೇ. ೮೦ರಷ್ಟು ಆರ್ಥಿಕತೆಯನ್ನು ಈ ಸಂಸ್ಥೆ ಬಗಲಿಗೆ ಹಾಕಿಕೊಂಡಿತ್ತು.  ಗಯಾನಾದ ಶೇ. ೧೩ರಷ್ಟು ಜನ ಈ ಸಂಸ್ಥೆಯಲ್ಲಿ ದುಡಿಯುತ್ತಿದ್ದರು. ಈ ದಮನಕಾರಿ ನೀತಿಯಲ್ಲೇ ಸಂಸ್ಥೆಯು ಬೆಳೆದು ೯೦ರ ದಶಕದ ಕೊನೆಗೆ  ಸಂಸ್ಥೆಯು ೨೦ ಸಾವಿರ ಜನರ ದೊಡ್ಡ ಸಂಸ್ಥೆಯಾಗಿ ಬೆಳೆಯಿತು ಎಂದು ಫ್ಲಿಂಡರ್ಸ್ ವಿಶ್ವವಿದ್ಯಾಲಯದ ಅಮೆಂಡಾ ಮ್ಯೂಲರ್ ಪ್ರಬಂಧವೊಂದರಲ್ಲಿ ಹೇಳುತ್ತಾರೆ.</p>
<p>೨೦೦೨ದಲ್ಲಿ ಬೂಕರ್ ಸಂಸ್ಥೆಯು ಬಿಗ್ಫುಡ್ ಸಂಸ್ಥೆಯೊಂದಿಗೆ ವಿಲೀನವಾದ ಮೇಲೆ  ಬೂಕರ್ ಪ್ರಶಸ್ತಿಗೆ ಹಣ ಕೊಡಲಾಗದು ಎಂದಿತು. ಅಲ್ಲಿಯವರೆಗೆ ಬೂಕರ್ ಸಂಸ್ಥೆಯೇ ಈ ಪ್ರಶಸ್ತಿಯನ್ನು ನೀಡುತ್ತಿತ್ತು. ಈಗ ಮ್ಯಾನ್ ಸಮೂಹ  ಇದನ್ನು ಪ್ರಾಯೋಜಿಸಿದ್ದರಿಂದ ಇದಕ್ಕೆ ಮ್ಯಾನ್ ಬೂಕರ್ ಅನ್ನೋ ಹಸರು ಬಂದಿದೆ.</p>
<p>ಆದ್ದರಿಂದ ಇತಿಹಾಸವನ್ನು ಮರೆಯಬೇಕು ಎಂದು ಅರುಂಧತಿ ರಾಯ್ ಹೇಳಿದ್ದರೆ ಸರಿಯೇ!!  ಲಕ್ಷಾಂತರ ಜನರ ಗುಲಾಮಗಿರಿಯ ಮೂಲಕ ಬೆಳೆದ ಬೂಕರ್ ಸಂಸ್ಥೆಯ ಹಣವನ್ನು ಬಹುಮಾನವಾಗಿ ಪಡೆದ ಮೇಲೆ ಅಂಥ ಕ್ರೌರ್ಯದ ಹಿನ್ನೆಲೆಯ ಹಣದ ಇತಿಹಾಸವನ್ನು ನಾವೆಲ್ಲ ಮರೆಯಬೇಕು ತಾನೆ?</p>
<p>ಬಹುಮಾನದ ಹಣವನ್ನು ಸಮಾಜಸೇವೆಗೆ ನೀಡಿರಬಹುದು; ಆದರೆ ಈ ಹಣದ, ಈ ಪ್ರಶಸ್ತಿಯ ಹಿಂದೆ ಇರುವ ಅಮಾನುಷ ಇತಿಹಾಸ ಮಾಸಿಹೋಗುತ್ತದೆಯೆ? ೧೯೭೬ರಲ್ಲಿ ಬರಬೇಕಾಗಿದ್ದ ಹಣವನ್ನು ದಿವಾಳಿಯ ಅಂಚಿನಲ್ಲಿದ್ದ ದೇಶದಿಂದ ಬಡ್ಡಿ ಸಮೇತ ವಸೂಲಿ ಮಾಡಹೊರಟಿದ್ದ ಸಂಸ್ಥೆಯನ್ನು ಯಾಕೆ ಅರುಂಧತಿರಾಯ್ ಮನ್ನಿಸುತ್ತಾರೆ? ಗಯಾನಾದ ಜನರಿಗೆ ಜೀವ ಇಲ್ಲವೆ?</p>
<p>ಈ ವರ್ಷ  ಬೂಕರ್ ಪ್ರಶಸ್ತಿಯನ್ನು ಭಾರತೀಯ  ಲೇಖಕಿ ಅನಿತಾ ದೇಸಾಯಿ  ಪಡೆದಿದ್ದಾರೆ ಎಂದು ನಾವು ಖುಷಿ ಪಡೋಣವೆ?  ಪ್ರತಿವರ್ಷವೂ ಬೂಕರ್ ಪ್ರಶಸ್ತಿಯ ಬಗ್ಗೆ  ಮಾಧ್ಯಮಗಳು ಹೊಂದುವ ವಿಪರೀತ ಸಡಗರವನ್ನು  ನೆನಪಿಸಿಕೊಳ್ಳಿ&#8230;.  ಹಾಗೆಯೇ ಸರಿಸುಮಾರು ಒಂದೂವರೆ ಶತಮಾನದ ಕಾಲ ಬೂಕರ್ ಸಂಸ್ಥೆಗಾಗಿ ಬೆವರು ಹರಿಸಿದ `ಗುಲಾಮರನ್ನು&#8217;, ಖಾಸಗಿ ಸಂಸ್ಥೆಗೆ ತಮ್ಮ ದೇಶದ ಸಂಪತ್ತನ್ನೆಲ್ಲ ಕೊಟ್ಟುಬಿಟ್ಟ ಗಯಾನಾದ ಮೂಲ ಪ್ರಜೆಗಳನ್ನು, ಅವರೊಂದಿಗೆ ಬದುಕಲು ಹೆಣಗಿದ ಹೊರದೇಶಗಳ ಗುಲಾಮರನ್ನು ನೆನಪಿಸಿಕೊಳ್ಳಿ.<br />
ಮುಂದಿನ ವರ್ಷವೂ ಯಾವುದೋ ಕಾದಂಬರಿಗೆ ಬೂಕರ್ ಪ್ರಶಸ್ತಿ ಬಂದಾಗ ಒಂದು ಕ್ಷಣ ಇವರನ್ನು ಸ್ಮರಿಸಿಕೊಳ್ಳುವ ಪ್ರಯತ್ನವನ್ನಾದರೂ ಮಾಡಬಹುದೆ?</p>
<p>(ಕೃಪೆ: ಹೊಸದಿಗಂತ)</p><p>The post <a href="http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ad%e0%b2%b0%e0%b3%8d%e0%b2%9c%e0%b2%b0%e0%b2%bf-%e0%b2%aa%e0%b3%8d%e0%b2%b0%e0%b2%b6%e0%b2%b8%e0%b3%8d%e0%b2%a4%e0%b2%bf-%e0%b2%ae%e0%b2%be%e0%b2%a8%e0%b2%b5-%e0%b2%b9%e0%b2%95%e0%b3%8d/">ಭರ್ಜರಿ ಪ್ರಶಸ್ತಿ, ಮಾನವ ಹಕ್ಕು ಮತ್ತು ಒಂದಷ್ಟು ಬೆವರು</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ad%e0%b2%b0%e0%b3%8d%e0%b2%9c%e0%b2%b0%e0%b2%bf-%e0%b2%aa%e0%b3%8d%e0%b2%b0%e0%b2%b6%e0%b2%b8%e0%b3%8d%e0%b2%a4%e0%b2%bf-%e0%b2%ae%e0%b2%be%e0%b2%a8%e0%b2%b5-%e0%b2%b9%e0%b2%95%e0%b3%8d/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಅಮೆರಿಕಾದ್ದು ಗಗನನೀತಿಯಲ್ಲ, ವಿಶ್ವಭೀತಿ !</title>
		<link>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%85%e0%b2%ae%e0%b3%86%e0%b2%b0%e0%b2%bf%e0%b2%95%e0%b2%be%e0%b2%a6%e0%b3%8d%e0%b2%a6%e0%b3%81-%e0%b2%97%e0%b2%97%e0%b2%a8%e0%b2%a8%e0%b3%80%e0%b2%a4%e0%b2%bf%e0%b2%af%e0%b2%b2%e0%b3%8d%e0%b2%b2/</link>
					<comments>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%85%e0%b2%ae%e0%b3%86%e0%b2%b0%e0%b2%bf%e0%b2%95%e0%b2%be%e0%b2%a6%e0%b3%8d%e0%b2%a6%e0%b3%81-%e0%b2%97%e0%b2%97%e0%b2%a8%e0%b2%a8%e0%b3%80%e0%b2%a4%e0%b2%bf%e0%b2%af%e0%b2%b2%e0%b3%8d%e0%b2%b2/#respond</comments>
		
		<dc:creator><![CDATA[admin]]></dc:creator>
		<pubDate>Tue, 24 Oct 2006 19:36:08 +0000</pubDate>
				<category><![CDATA[ಬೇಳೂರು ಸುದರ್ಶನ ಅವರ ಅಂಕಣ]]></category>
		<guid isPermaLink="false">http://localhost/vishwakannada/?p=315</guid>

					<description><![CDATA[<h3>- ಬೇಳೂರು ಸುದರ್ಶನ</h3>
<p>ಆಕಾಶವೂ ನನ್ನದೇ ಎಂದು ಅಮೆರಿಕಾ ಈಗಷ್ಟೇ ಘೋಷಿಸಿಕೊಂಡಿದೆ. ಉತ್ತರ ಕೊರಿಯಾದ ಪರಮಾಣು ಪರೀಕ್ಷೆ, ಚೀನಾದ ತೋಳೇರಿಸುವ ಪರಿ, ಮುಸ್ಲಿಮ್ ದೇಶಗಳಲ್ಲಿ ಅಮೆರಿಕಾದ ವಿರುದ್ಧ ಎದ್ದಿರುವ ದನಿ, ಭಾರತದಂಥ ಹಲವು ಶಾಂತಿಪ್ರಿಯ ದೇಶಗಳು ವಿeನ - ತಂತ್ರಜ್ಞಾನದಲ್ಲಿ ಮುನ್ನುಗ್ಗುತ್ತಿರುವ  ವೇಗವನ್ನು ನೋಡಿ ತತ್ತರಿಸಿದ ಅಮೆರಿಕಾ ಈಗ ತನ್ನ ಆಕಾಶನೀತಿಯನ್ನು ಪರಾಮರ್ಶಿಸಿಕೊಂಡು, ಆಕಾಶ ನನ್ನದೇ ಎಂದು  ಘೋಷಿಸಿಕೊಂಡಿದೆ.</p>
<p>The post <a href="http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%85%e0%b2%ae%e0%b3%86%e0%b2%b0%e0%b2%bf%e0%b2%95%e0%b2%be%e0%b2%a6%e0%b3%8d%e0%b2%a6%e0%b3%81-%e0%b2%97%e0%b2%97%e0%b2%a8%e0%b2%a8%e0%b3%80%e0%b2%a4%e0%b2%bf%e0%b2%af%e0%b2%b2%e0%b3%8d%e0%b2%b2/">ಅಮೆರಿಕಾದ್ದು ಗಗನನೀತಿಯಲ್ಲ, ವಿಶ್ವಭೀತಿ !</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<h3>&#8211; ಬೇಳೂರು ಸುದರ್ಶನ</h3>
<p>ಆಕಾಶವೂ ನನ್ನದೇ ಎಂದು ಅಮೆರಿಕಾ ಈಗಷ್ಟೇ ಘೋಷಿಸಿಕೊಂಡಿದೆ. ಉತ್ತರ ಕೊರಿಯಾದ ಪರಮಾಣು ಪರೀಕ್ಷೆ, ಚೀನಾದ ತೋಳೇರಿಸುವ ಪರಿ, ಮುಸ್ಲಿಮ್ ದೇಶಗಳಲ್ಲಿ ಅಮೆರಿಕಾದ ವಿರುದ್ಧ ಎದ್ದಿರುವ ದನಿ, ಭಾರತದಂಥ ಹಲವು ಶಾಂತಿಪ್ರಿಯ ದೇಶಗಳು ವಿeನ &#8211; ತಂತ್ರಜ್ಞಾನದಲ್ಲಿ ಮುನ್ನುಗ್ಗುತ್ತಿರುವ  ವೇಗವನ್ನು ನೋಡಿ ತತ್ತರಿಸಿದ ಅಮೆರಿಕಾ ಈಗ ತನ್ನ ಆಕಾಶನೀತಿಯನ್ನು ಪರಾಮರ್ಶಿಸಿಕೊಂಡು, ಆಕಾಶ ನನ್ನದೇ ಎಂದು  ಘೋಷಿಸಿಕೊಂಡಿದೆ.<br />
ವಾಯುಶಕ್ತಿ, ಜಲಶಕ್ತಿಯಷ್ಟೇ ಆಕಾಶ ಶಕ್ತಿಯೂ ಮುಖ್ಯ ಎಂದು ಹೇಳಿಕೊಳ್ಳುತ್ತ ಇನ್ನುಮುಂದೆ ತನ್ನ `ವಿರೋಧಿಗಳಿಗೆ&#8217; ತನ್ನ ವಿರುದ್ಧ ಆಕಾಶವನ್ನು ಬಳಸಿಕೊಳ್ಳುವುದಕ್ಕೆ ಖಂಡಿತಾ ಬಿಡುವುದಿಲ್ಲ ಎಂದು ಪ್ರಕಟಿಸಿದೆ. ಆದರೆ ಈ ವಿರೋಧಿಗಳಾರು ಎಂದು ಮಾತ್ರ ಬಾಯಿಬಿಟ್ಟಿಲ್ಲ.</p>
<p>`ಜಗತ್ತಿನ ಎಲ್ಲಾ ದೇಶಗಳೂ ಆಕಾಶವನ್ನು ಶಾಂತಿಯ ಉದ್ದೇಶಗಳಿಗಾಗಿ,  ಇಡೀ ಮನುಕುಲದ ಏಳಿಗೆಗಾಗಿ ಬಳಸಿಕೊಳ್ಳುವುದನ್ನು ನಾವು ಬೆಂಬಲಿಸುತ್ತೇವೆ&#8217; ಎಂದು ಒಂದು ಉಸಿರಿನಲ್ಲಿ ಹೇಳಿರುವ ಅಮೆರಿಕಾ ಇನ್ನೊಂದು ಉಸಿರಿನಲ್ಲಿ ಗಗನ ಶಸ್ತ್ರಗಳನ್ನು ನಿಷೇಧಿಸುವ ಯಾವುದೇ ಯತ್ನಗಳನ್ನು ಖಡಾಖಂಡಿತವಾಗಿ ವಿರೋಧಿಸುತ್ತೇವೆ ಎಂದೂ ಪ್ರಕಟಿಸಿದೆ. ನೀವೆಲ್ಲರೂ ಶಾಂತಿಮಂತ್ರ ಪಠಿಸಿ, ನಾನು ಮಾತ್ರ ಬಂದೂಕು ತಯಾರಿಸುವೆ ಎಂದು ಅಮೆರಿಕಾ ನಾಚಿಕೆಯ ಲವಲೇಶವೂ ಇಲ್ಲದೆ ಹೇಳಿದೆ.</p>
<p>ಆಕಾಶದಿಂದ ಯಾವುದೇ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ತನಗೆ ಇರುವ ಯಾವುದೇ ಸ್ವಾತಂತ್ರ್ಯವನ್ನೂ ಯಾವುದೇ ದೇಶವೂ ಕಸಿದುಕೊಳ್ಳಲಾಗದು ಎಂಬ ಧಿಮಾಕಿನ ಮಾತೂ ಅಮೆರಿಕಾವು ಆಗಸ್ಟ್ ೩೧ರಂದು [http://www.ostp.gov/html/US%20National%20Space%20Policy.pdf|ಪ್ರಕಟಿಸಿದ ಗಗನನೀತಿ]ಯಲ್ಲಿ ದಾಖಲಾಗಿದೆ. ಅಷ್ಟೆ ಅಲ್ಲ&#8230;</p>
<p>ಇಡೀ ಜಗತ್ತಿನ ಶಾಂತಿಗಾಗಿ ಗಗನಸಂಶೋಧನೆ ಮುಂತಾದ ಯತ್ನಗಳನ್ನು ಅಮೆರಿಕಾ ಬೆಂಬಲಿಸುತ್ತದೆ.  ಆದರೆ ತನ್ನ ಗಗನ ಸಂಶೋಧನೆಗೆ ಯಾರೂ ಅಡ್ಡಿಬರಬಾರದು.  ಈ ಶಾಂತಿಯ ಪ್ರಯತ್ನಗಳಲ್ಲಿ ಅಮೆರಿಕಾವು ತನ್ನ ಹಿತಕ್ಕಾಗಿ ನಡೆಸುವ ರಕ್ಷಣಾ ಮತ್ತು ಗೂಢಚರ್ಯೆ ಸಂಬಂಧಿತ ಚಟುವಟಿಕೆಗಳು ಸೇರಿಕೊಳ್ಳುತ್ತವೆ.  ಅಂದರೆ ಅಮೆರಿಕಾ ರಕ್ಷಣಾ ಸಂಶೋಧನೆಯಲ್ಲಿ ತೊಡಗಬಹುದು. ಉಳಿದೆಲ್ಲ ದೇಶಗಳೂ ತೆಪ್ಪಗೆ ಕುಳಿತಿರಬೇಕು.</p>
<p>ಅಮೆರಿಕಾವು ಹೀಗೆ ಗಗನವನ್ನು ಬಳಸಿಕೊಳ್ಳುವ ಹಕ್ಕನ್ನು ಮಿತಿಗೊಳಿಸುವ ಯಾವುದೇ ದೇಶದ ಯಾವುದೇ ಕಾನೂನು ಕ್ರಮಗಳನ್ನೂ ಅಮೆರಿಕವು ಬಲವಾಗಿ ವಿರೋಧಿಸುತ್ತದೆ.  ಈಗ ಜಗತ್ತಿನಲ್ಲಿ ಇರುವ ಶಸ್ತ್ರಾಸ್ತ್ರ ನಿರ್ಬಂಧ ಒಪ್ಪಂದಗಳು ಅಮೆರಿಕಾದ ಈ ಗಗನಮುಖಿ ರಕ್ಷಣಾ ಸಂಶೋಧನೆಗಳನ್ನು ತಡೆಯಲಾಗದು.  ಇಲ್ಲಿ ರಕ್ಷಣಾ ಸಾಧನಗಳ ಸಂಶೋಧನೆ, ಪರೀಕ್ಷೆ ಮತ್ತು ಕಾರ್ಯಾಚರಣೆಗಳನ್ನು ಅಮೆರಿಕಾವು ತನ್ನ ರಾಷ್ಟ್ರೀಯ ಹಿತದ ಹಿನ್ನೆಲೆಯಲ್ಲಿ ನಡೆಸುತ್ತದೆ. ಇವುಗಳಿಗೆ ಈಗಿರುವ ಯಾವುದೇ ಒಪ್ಪಂದಗಳೂ ಅಡ್ಡಿ ಬರುವುದಿಲ್ಲ.  ವಾಣಿಜ್ಯಿಕ ಗಗನ ಸಂಶೋಧನೆಗಳಿಗೆ, ಪ್ರಯೋಗಗಳಿಗೆ ತಾನು ಎಲ್ಲ ಬಗೆಯ ಬೆಂಬಲವನ್ನೂ ನೀಡುವುದಾಗಿ ಅಮೆರಿಕಾವು ಈ ನೀತಿಯನ್ನು ತನ್ನ ದೇಶದ ಉದ್ಯಮಿಗಳಿಗೆ ಹೇಳಿದೆ.</p>
<p>ಹೀಗೆ ಹತ್ತು ಪುಟಗಳ ರಾಷ್ಟ್ರೀಯ ಗಗನನೀತಿಯನ್ನು  ಪ್ರಕಟಿಸಿರುವ ಅಮೆರಿಕಾ ಮತ್ತೆ ತಾನೇ ಜಗತ್ತಿನ ತಳವಾರ ಎಂದು ಹೇಳಿಕೊಳ್ಳಲು ಮುಂದಾಗಿದೆ! ಈ ನೀತಿ ಪ್ರಕಟವಾಗಿ ಒಂದೂವರೆ ತಿಂಗಳುಗಳೇ ಕಳೆದಿದ್ದರೂ ಅದು ಪ್ರಕಟವಾಗಿದ್ದು  ಇತ್ತೀಚೆಗೆ. ಬಿಬಿಸಿಯಲ್ಲೇ ಈ ಸುದ್ದಿ ಪ್ರಕಟವಾಗಿದ್ದು ಅಕ್ಟೋಬರ್ ೧೮ರಂದು. ಈಗ ನಿಧಾನವಾಗಿ ಈ ನೀತಿಯ ಹಿಂದಿನ ಕುಟಿಲನೀತಿ ಅರ್ಥವಾಗುತ್ತಿದೆ.</p>
<p>ಶೀತಲಸಮರದ ಸಂದರ್ಭದಲ್ಲಿ ಅಮೆರಿಕಾದ ಆಗಿನ  ಅಧ್ಯಕ್ಷ ರೋನಾಲ್ಡ್ ರೀಗನ್ `ತಾರಾ ಸಮರ&#8217; ಎಂಬ ಹೊಸ ನೀತಿಯನ್ನು ಪ್ರಕಟಿಸಿದ್ದರೂ ಅದು ವಿಫಲವಾಗಿತ್ತು. ಆಮೇಲೆ ೧೯೯೬ರಲ್ಲಿ ಅಮೆರಿಕಾದ ಗಗನನೀತಿ ಪ್ರಕಟವಾಗಿತ್ತು. ಈಗಷ್ಟೇ ಅದು ಮತ್ತೆ ಅಮೆರಿಕಾದ ಎಲ್ಲ  ಸರ್ವಾಕಾರಿ ಧೋರಣೆಗಳನ್ನು ಹೊತ್ತುಕೊಂಡು ರೂಪಾಂತರಗೊಂಡಿದೆ.<br />
ಗಗನದಲ್ಲಿ ಉಪಗ್ರಹಗಳ ಮೂಲಕ ಸಮರ ಕಾರ್ಯಾಚರಣೆಗಳನ್ನು ನಡೆಸಬಲ್ಲ ಸಾಮರ್ಥ್ಯ ಇರುವ ಏಕೈಕ ದೇಶ ಅಮೆರಿಕಾ ಎಂಬುದು ಯಾರಿಗೆ ಗೊತ್ತಿಲ್ಲ? ಈಗ ಚೀನಾ ದೇಶವೂ ಇಂಥ ಸಾಮರ್ಥ್ಯವನ್ನು ಪಡೆಯುತ್ತಿದೆ ಎಂದೇ ಅಮೆರಿಕಾ ಈ ನೀತಿಯನ್ನು ಪ್ರಕಟಿಸಿದೆ ಎನ್ನುತ್ತಾರೆ ಬ್ರೂಕಿಂಗ್ಸ್ ಸಂಸ್ಥೆಯ ಸಂಶೋಧಕ ಮೈಖೇಲ್ ಓ ಹ್ಯಾನ್ಲಾನ್. `ಚೀನಾ ಮತ್ತು ರಶಿಯಾ ದೇಶಗಳು ಗಗನಶಸ್ತ್ರ ನಿಷೇಧದತ್ತ ಮುಖ ಮಾಡಿದ್ದರೂ, ಅಮೆರಿಕಾವನ್ನು ಹೇಗಾದರೂ ಮಣಿಸಬೇಕು ಎಂದು  ಚೀನಾವು ಗಂಭೀರ ಪ್ರಯತ್ನ ಮಾಡುತ್ತಿದೆ&#8217; ಎಂದು ಅವರು ಹೇಳುತ್ತಾರೆ.</p>
<p>ಬಹುಶಃ ಮುಂದಿನ ದಿನಗಳಲ್ಲಿ ವಿಶ್ವವು ಎದುರಿಸಲಿರುವ ಮುಖ್ಯ ಸವಾಲುಗಳಲ್ಲಿ ಅಮೆರಿಕಾದ ಗಗನನೀತಿಯೂ ಒಂದು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.</p>
<p>ಆಕಾಶ ಎಂದರೆ ಬರೀ ಗಾಳಿಯಲ್ಲ, ಜಾಗವೂ ಅಲ್ಲ, ಅಲ್ಲಿ ತರಂಗಗಳಿವೆ. ಗಗನದಕೆಳಗೆ ಇಡೀ ವಸುಂಧರೆಯೇ ಇದೆ. ಅಮೆರಿಕಾವೆಂಬ ತುಂಡನ್ನು ಬಿಟ್ಟರೂ ಈ ಗಗನದ ಕೆಳಗೆ ನೂರಾರು ದೇಶಗಳು ಬಾಳುತ್ತಿವೆ. ಉಳಿದೆಲ್ಲ ದೇಶಗಳ ಮೇಲೆ ಸವಾರಿ ಮಾಡುವ ಗಗನನೀತಿಯನ್ನು ಅಮೆರಿಕಾ ಜಾರಿ ಮಾಡಿದರೆ ಭಾರತದಂಥ ದೇಶವೂ ಸುಮ್ಮನಿರುವುದು ಮಾತ್ರ ವಿಚಿತ್ರ. ಅಣುನೀತಿಯಲ್ಲಿ ಅಮೆರಿಕಾವನ್ನು ಬಗ್ಗಿಸಿಬಿಟ್ಟೆವು ಎಂಬ ಗರ್ವವೇನಾದರೂ ಇದ್ದರೆ ಭಾರತದ ಸರ್ಕಾರವು ಎಚ್ಚರಗೊಳ್ಳುವುದು ಒಳ್ಳೆಯದು. ಯಾಕೆಂದರೆ ನಾಳೆ ಬೆಳಗಾದರೆ ಆಕಾಶದಲ್ಲಿ ಜಾರ್ಜ್ ಬುಶ್ ತಮ್ಮ ವಕ್ರನಗೆ ಬೀರುತ್ತ ನಮ್ಮನ್ನು ನೋಡುತ್ತಾರೆ.</p>
<p>ವಿಜ್ಞಾನದ ಪ್ರಗತಿ, ಅಣುಶಕ್ತಿಯ ಭಂಡಾರ, ಇಂಟರ್‌ನೆಟ್ ಮೇಲಿನ ಸಂಪೂರ್ಣ ಅಧಿಕಾರ, &#8211; ಹೀಗೆ  ಎಲ್ಲ ರಂಗಗಳಲ್ಲೂ ಹೆಜ್ಜೆ ಬಲಪಡಿಸಿಕೊಳ್ಳುತ್ತ ಸಾಗಿರುವ  ಅಮೆರಿಕಾಕ್ಕೆ ಇದೂ ಒಂದು ರಾಷ್ಟ್ರೀಯ ಹಿತದ ಹೆಜ್ಜೆ. ಆದರೆ  ಇದು ಖಂಡಿತವಾಗಿಯೂ ನಿಸರ್ಗದ ನಿಯಮವನ್ನು ಮುರಿವ ಕ್ರೌರ್ಯ.</p>
<p>ಕಾಲದ ಲೆಕ್ಕಾಚಾರದಲ್ಲಿ, ಮನುಕುಲದ ಏಳಿಗೆಯ ಚಿಂತನೆಯ ಪರಂಪರೆಯ ಮಾನದಂಡದಲ್ಲಿ ನೋಡಿದರೆ ನಿನ್ನೆ ಮೊನ್ನೆಯಷ್ಟೇ ಹುಟ್ಟಿರುವ ಅಮೆರಿಕಾಗೆ ಭಾರತದಂಥ ಹಿರಿಯಜ್ಜನೇ ಪಾಠ ಕಲಿಸಬೇಕಾಗುತ್ತದೆ. ಆದರೆ ಭಾರತದ ರಾಜಕಾರಣಿಗಳು ಮಾತ್ರ ಅಂಥ ರಾಜಕೀಯ ದೃಢತೆಯನ್ನು ತೋರಿಸುವುದೇ ಇಲ್ಲವಲ್ಲ?</p>
<p>(ಕೃಪೆ: ಹೊಸದಿಗಂತ)</p><p>The post <a href="http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%85%e0%b2%ae%e0%b3%86%e0%b2%b0%e0%b2%bf%e0%b2%95%e0%b2%be%e0%b2%a6%e0%b3%8d%e0%b2%a6%e0%b3%81-%e0%b2%97%e0%b2%97%e0%b2%a8%e0%b2%a8%e0%b3%80%e0%b2%a4%e0%b2%bf%e0%b2%af%e0%b2%b2%e0%b3%8d%e0%b2%b2/">ಅಮೆರಿಕಾದ್ದು ಗಗನನೀತಿಯಲ್ಲ, ವಿಶ್ವಭೀತಿ !</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%85%e0%b2%ae%e0%b3%86%e0%b2%b0%e0%b2%bf%e0%b2%95%e0%b2%be%e0%b2%a6%e0%b3%8d%e0%b2%a6%e0%b3%81-%e0%b2%97%e0%b2%97%e0%b2%a8%e0%b2%a8%e0%b3%80%e0%b2%a4%e0%b2%bf%e0%b2%af%e0%b2%b2%e0%b3%8d%e0%b2%b2/feed/</wfw:commentRss>
			<slash:comments>0</slash:comments>
		
		
			</item>
		<item>
		<title>ದೇಶದ ಹಿರಿಮೆ ಸಾರಲು ವೆಂಕಟೇಶ್ ಬ್ಲಾಗ್</title>
		<link>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%a6%e0%b3%87%e0%b2%b6%e0%b2%a6-%e0%b2%b9%e0%b2%bf%e0%b2%b0%e0%b2%bf%e0%b2%ae%e0%b3%86-%e0%b2%b8%e0%b2%be%e0%b2%b0%e0%b2%b2%e0%b3%81-%e0%b2%b5%e0%b3%86%e0%b2%82%e0%b2%95%e0%b2%9f%e0%b3%87/</link>
					<comments>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%a6%e0%b3%87%e0%b2%b6%e0%b2%a6-%e0%b2%b9%e0%b2%bf%e0%b2%b0%e0%b2%bf%e0%b2%ae%e0%b3%86-%e0%b2%b8%e0%b2%be%e0%b2%b0%e0%b2%b2%e0%b3%81-%e0%b2%b5%e0%b3%86%e0%b2%82%e0%b2%95%e0%b2%9f%e0%b3%87/#respond</comments>
		
		<dc:creator><![CDATA[admin]]></dc:creator>
		<pubDate>Wed, 18 Oct 2006 15:51:44 +0000</pubDate>
				<category><![CDATA[ಬೇಳೂರು ಸುದರ್ಶನ ಅವರ ಅಂಕಣ]]></category>
		<guid isPermaLink="false">http://localhost/vishwakannada/?p=311</guid>

					<description><![CDATA[<h3>- ಬೇಳೂರು ಸುದರ್ಶನ</h3>
<p><b>ಕೇವಲ ಒಳ್ಳೆಯ ಸುದ್ದಿಗಳನ್ನೇ ಓದಬೇಕೆಂದರೆ ನೀವು <a href="http://venkatesh.blogspot.com">venkatesh.blogspot.com</a> -ಇಲ್ಲಿಗೆ ಬನ್ನಿ.</b></p>
<p>The post <a href="http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%a6%e0%b3%87%e0%b2%b6%e0%b2%a6-%e0%b2%b9%e0%b2%bf%e0%b2%b0%e0%b2%bf%e0%b2%ae%e0%b3%86-%e0%b2%b8%e0%b2%be%e0%b2%b0%e0%b2%b2%e0%b3%81-%e0%b2%b5%e0%b3%86%e0%b2%82%e0%b2%95%e0%b2%9f%e0%b3%87/">ದೇಶದ ಹಿರಿಮೆ ಸಾರಲು ವೆಂಕಟೇಶ್ ಬ್ಲಾಗ್</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<h3>&#8211; ಬೇಳೂರು ಸುದರ್ಶನ</h3>
<p><b>ಕೇವಲ ಒಳ್ಳೆಯ ಸುದ್ದಿಗಳನ್ನೇ ಓದಬೇಕೆಂದರೆ ನೀವು [http://venkatesh.blogspot.com|venkatesh.blogspot.com] -ಇಲ್ಲಿಗೆ ಬನ್ನಿ.</b></p>
<p>೧೫ನೇ ಶತಮಾನದ ರಶಿಯನ್  ವ್ಯಾಪಾರಿ ಅಫನಾಸಿ ನಿಕಿತಿನ್ ದಕ್ಷಿಣ ಭಾರತದವರೆಗೂ ಬಂದಿದ್ದ.ರಶಿಯಾ, ಜಾರ್ಜಿಯಾ, ಅರ್ಮೇನಿಯಾ,  ಇರಾನ್, ಮುಂಬಯಿ &#8211; ಹೀಗೆ ಈ ಪ್ರವಾಸಿಯ ಮಾರ್ಗದಲ್ಲೇ ಈಗ ಒಂದು ಅತ್ಯಾಧುನಿಕ ಸಲಕರಣೆಗಳನ್ನು ಹೊತ್ತ ಅಂತಾರಾಷ್ಟ್ರೀಯ ತಂಡವೊಂದು ಪ್ರವಾಸ ಕೈಗೊಂಡಿದೆ. ಈ ಸುದ್ದಿ  ತೆಲುಗುಪೋರ್ಟಲ್ ಜಾಲತಾಣದಲ್ಲಿ ಬಂದಿದೆ.</p>
<p>ಮುಂಬಯಿ ಮೂಲದ ಅನೀಶ್ ಕಪೂರ್ ಈಗ ವಿಶ್ವದ ೧೦೦ ಅತಿಪ್ರಭಾವಿ ಕಲಾವಿದರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ಈ ಸುದ್ದಿ ಹಿಂದುಸ್ತಾನ್ ಟೈಮ್ಸ್ನಲ್ಲಿ ಪ್ರಕಟವಾಗಿದೆ.</p>
<p>ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ರಾಯಿಟರ್ ಇನ್ಸ್ಟಿಟ್ಯೂಟ್ ಆಫ್  ಸ್ಟಡಿ ಆಫ್ ಜರ್ನಲಿಸಮ್ ನ ನಿರ್ದೇಶಕಿಯಾಗಿ ಭಾರತೀ &#8211; ಅಮೆರಿಕಾ ಸಂಜಾತೆ ಶರ್ಮಿಲಾ ಬೋಸ್ ನೇಮಕವಾಗಿದ್ದಾರೆ. ಆಕೆಯ ಸಾಧನೆಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೀವು ಐ ಬಿ ಎನ್ ಲೈವ್ ಜಾಲತಾಣದಲ್ಲಿ  ಪಡೆಯಬಹುದು.</p>
<p>೧೯೯೩ರ  ಗಲಭೆಗಳಲ್ಲಿ ಆಸಿಡ್ ದಾಳಿಗೆ ತುತ್ತಾದ ನಿತೀಶ್ ಸೋನಾವಣೆ ಮತ್ತೆ ಬದುಕನ್ನು ಕಟಿಕೊಂಡ ಸುದ್ದಿಯನ್ನು ಡಿ ಎನ್ ಎ ಇಂಡಿಯಾ ಜಾಲತಾಣದಲ್ಲಿ ನೀವು ಕಾಣಬಹುದು. ಆಂಧ್ರಪ್ರದೇಶದ ವಿಜಿಯನಗರಂ ಜಿಲ್ಲೆಯ ಭೀಮಾವರಂ ಎಂಬ ಹಳ್ಳಿಯಲ್ಲಿ ೭೦೦ಕ್ಕೂ ಹೆಚ್ಚು ಜನರು ನೇತ್ರದಾನ ಮಾಡಿದ ಸುದ್ದಿಯನ್ನು ನೀವು ಝೀ ನ್ಯೂಸ್ ಜಾಲತಾಣದಲ್ಲಿ  ನೋಡಬಹುದು. ವಿದೇಶೀಯರಿಗೆ ಭಾರತವು ಹೆಚ್ಚು ಅರ್ಥವಾಗುವ ಹಾಗೆ ಮಾಡುವ ಗ್ಲೋಬಲ್ ಅಡ್ಜಸ್ಟ್ಮೆಂಟ್  ಸಂಸ್ಥೆಯ ಮುಖ್ಯಸ್ಥೆ ರಂಜಿನಿಯ ಸುದ್ದಿಯನ್ನು, ಫಾರ್ವರ್ಡ್ ಬಹುಮಾನ ಪಡೆದ ತಿಶಾನಿ ದೋಶಿಯ ಸುದ್ದಿಯನ್ನು, ದಿನಕ್ಕೊಂದು ಒಳ್ಳೆಯ ಕೆಲಸ ಮಾಡುವ ಚೆನ್ನೈನ ಶ್ರೀ ಕೃಷ್ಣ ಸ್ವೀಟ್ಸ್ ಕಥೆಯನ್ನು,  ಭಾರತೀಯ ತಿಂಡಿ ತಿನಿಸುಗಳ ಪುಸ್ತಕ ಬರೆದು ಪ್ರಖ್ಯಾತವಾದ ವಿಕ್ರಂ ವಿಜ್ ಪರಿಚಯವನ್ನು, ವೆಸ್ಟ್ ಮಿನಿಸ್ಟರ್ ವಿಶ್ವವಿದ್ಯಾಲಯದ ಪ್ರಥಮ ಚಾನ್ಸೆಲರ್ ಆದ ಸ್ವರಾಜ್ಪಾಲ್ ಗಾಥೆಯನ್ನು, ನ್ಯೂಯಾರ್ಕ್ನಲ್ಲಿ ಸಭಿಕರ ಮನಗೆದ್ದ ಬಿರ್ಜು ಮಹಾರಾಜ್ರ ನೃತ್ಯವೈಭವವದ ಸುದ್ದಿಯನ್ನು&#8230;..</p>
<p>ಎಲ್ಲವನ್ನೂ ನೀವು ಎಲ್ಲಿ ನೋಡಬಹುದು? ವೆಂಕಟೇಶ್ರವರ ಬ್ಲಾಗ್ಸ್ಪಾಟ್ನಲ್ಲಿ ಮೇಲೆ ತಿಳಿಸಿದ ಎಲ್ಲ ಸುದ್ದಿಗಳನ್ನೂ ಓದಬಹುದು.</p>
<p>ಸಿನಿಮಾ, ಸೆಕ್ಸ್, ಕ್ರೈಮ್ ಮತ್ತು ಪಾಲಿಟಿಕ್ಸ್ &#8211; ಇವುಗಳಿಂದ ಹೊರತಾದ ಅಭ್ಯುದಯ ಪತ್ರಿಕೋದ್ಯಮವನ್ನು ನಾವು ರೂಪಿಸೋಣ ಎಂದು ಹಿರಿಯ ಫ್ರೀಲ್ಯಾನ್ಸ್ ಪತ್ರಕರ್ತ  `ಶ್ರೀ&#8217; ಪಡ್ರೆ ಹೇಳುತ್ತಿರುತ್ತಾರೆ (ಅವರೀಗ `ಅಡಿಕೆ ಪತ್ರಿಕೆಗೆ ಮರಳಿದ್ದಾರೆ, ಶುಭಾಶಯಗಳು). `ಶ್ರೀ&#8217; ಪಡ್ರೆಯವರೂ `ಇಂಡಿಯಾ ಟುಗೆದರ್&#8217; ಎಂಬ ಜಾಲತಾಣದಲ್ಲಿ ಒಳ್ಳೆಯ ಸುದ್ದಿಚಿತ್ರಗಳನ್ನು ನೀಡುತ್ತಿದ್ದಾರೆ. ಈ ಹಾದಿಯಲ್ಲಿ  ಜಗತ್ತಿನ ವಿವಿಧ ಪತ್ರಿಕೆಗಳಲ್ಲಿ ಬಂದ ಭಾರತದ ಬಗೆಗಿನ ಒಳ್ಳೆಯ ಮತ್ತು ಖುಷಿಕೊಡುವ ಸುದ್ದಿಗಳನ್ನು ಮಾತ್ರ ನೀಡುವ ಯತ್ನ ವೆಂಕಟೇಶ್ರದು.</p>
<p>ಮೊದಲೇ ಹೇಳಿದ ಹಾಗೆ ಇದೊಂದು ಬ್ಲಾಗ್. ಆಂದರೆ ವೆಂಕಟೇಶ್ರವರ ವೈಯಕ್ತಿಕ ಆಸಕ್ತಿಯ ಅಭಿವ್ಯಕ್ತಿ. ಸತ್ಯಂ ಸಂಸ್ಥೆಯ ಸಿಫಿ (sifys)ಯಲ್ಲಿ ಹಿರಿಯ ಪತ್ರಕರ್ತರಾಗಿರುವ ವೆಂಕಟೇಶ್ಗೆ ಇದೊಂದು ಕ್ರೇಝ್. `ಎಲ್ಲಾ ಪತ್ರಿಕೆಗಳಲ್ಲೂ ಒಳ್ಳೆಯ ಸುದ್ದಿಗಳು ಬರುತ್ತವೆ. ಆದರೆ ಅವೆಲ್ಲವನ್ನೂ ಎಲ್ಲೆಲ್ಲೋ ಹಾಕುತ್ತಾರೆ. ಅವೆಲ್ಲವನ್ನೂ ಜೋಡಿಸಿ ಓದುಗರಿಗೆ ನೀಡುವುದಕ್ಕೆಂದೇ ಈ ಬ್ಲಾಗ್ ಶುರು ಮಾಡಿದ್ದೇನೆ&#8217; ಎಂದು ವೆಂಕಟೇಶ್ ಹೇಳುತ್ತಾರೆ.</p>
<p>`ಭಾರತದಲ್ಲಿ ಅನೇಕ ಸಾಮಾನ್ಯರು ಯಾವುದೇ ಸಿದ್ಧಾಂತಗಳ ಬೆಂಬಲವಿಲ್ಲದೇ ಅಪಾರ ಸಾಧನೆಯ ಬದುಕನ್ನು ನಡೆಸುತ್ತಿದ್ದಾರೆ. ಅವರಲ್ಲದೆ ಪ್ರಚಾರವೇ ಇಲ್ಲದ ಹಲವು ಭಾರತೀಯರೂ ನಮ್ಮ ನಡುವೆ ಇದ್ದಾರೆ. ಅದಕ್ಕೇ ಈ ಯಾವ ಭೇದವೂ ಇಲ್ಲದೆ ಎಲ್ಲ ಭಾರತೀಯರ ಸಾಧನೆಗಳನ್ನು ದಾಖಲಿಸುವ ಯತ್ನ ನಡೆಸಿದ್ದೇನೆ&#8217; ಎಂದು ವೆಂಕಟೇಶ್ ಚೆನ್ನೈನಿಂದಲೇ ಈ ಲೇಖಕನಿಗೆ ತಿಳಿಸಿದರು.</p>
<p>ಮೂಲತಃ ಎಡಪಂಥೀಯ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟುಕೊಂಡು ಅನೇಕ ಚಳವಳಿಗಳಲ್ಲಿ ಪಾಲ್ಗೊಂಡ ವೆಂಕಟೇಶ್ ಕೊನೆಗೆ `ಭಾರತದಂಥ ದೇಶದಲ್ಲಿ ಇಂಥ ಸಿದ್ಧಾಂತಗಳಿಗೆ ಅವಕಾಶವಿಲ್ಲ&#8217; ಎಂಬ ನಿಲುವನ್ನು ಅನುಭವದಿಂದ ಪಡೆದುಕೊಂಡರು. ಸದಾ ದೇಶದ ರಾಜಕೀಯ ವರ್ತಮಾನಗಳ ಕಡೆಗೆ ವಾರೆನೋಟ ಇಟ್ಟುಕೊಂಡಿರುವ ವೆಂಕಟೇಶ್ ಕಳೆದ ಜೂನ್ ತಿಂಗಳಿನಿಂದ ಈ ಕಾಯಕದಲ್ಲಿ ನಿರತರು.</p>
<p>ಮುಂದೆ ಇದೇ ಹಾದಿಯನ್ನು ಬೆಳೆಸಿ ಸ್ವಂತ ಸುದ್ದಿಗಳೂ ಇರುವ ಜಾಲತಾಣವೊಂದನ್ನು ರೂಪಿಸುವುದು ಅವರ ಕನಸು. ಆಮೇಲೆ ಮುದ್ರಣಮಾಧ್ಯಮದಲ್ಲ ಇಂಥದ್ದೊಂದು ಮ್ಯಾಗಜಿನ್  ತರುವುದೂ ಅವರ ಕಾರ್ಯಸೂಚಿಯಲ್ಲಿದೆ.<br />
ದಿನವೂ ಹೊಸ ಒಳ್ಳೆ ಸುದ್ದಿಗಳನ್ನು ಓದುಗರಿಗಾಗಿ ಹುಡುಕಿಕೊಡಲು ವೆಂಕಟೇಶ್ ಸಾಕಷ್ಟು ಶ್ರಮ ವಹಿಸಿದ್ದಾರೆ. ಈವರೆಗೆ ೨೦೦ ಇಂಥ ಸುದ್ದಿಗಳನ್ನು  ಅವರು ಪ್ರಕಟಿಸಿದ್ದಾರೆ.</p>
<p>(ಕೃಪೆ: ಹೊಸದಿಗಂತ)</p><p>The post <a href="http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%a6%e0%b3%87%e0%b2%b6%e0%b2%a6-%e0%b2%b9%e0%b2%bf%e0%b2%b0%e0%b2%bf%e0%b2%ae%e0%b3%86-%e0%b2%b8%e0%b2%be%e0%b2%b0%e0%b2%b2%e0%b3%81-%e0%b2%b5%e0%b3%86%e0%b2%82%e0%b2%95%e0%b2%9f%e0%b3%87/">ದೇಶದ ಹಿರಿಮೆ ಸಾರಲು ವೆಂಕಟೇಶ್ ಬ್ಲಾಗ್</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%a6%e0%b3%87%e0%b2%b6%e0%b2%a6-%e0%b2%b9%e0%b2%bf%e0%b2%b0%e0%b2%bf%e0%b2%ae%e0%b3%86-%e0%b2%b8%e0%b2%be%e0%b2%b0%e0%b2%b2%e0%b3%81-%e0%b2%b5%e0%b3%86%e0%b2%82%e0%b2%95%e0%b2%9f%e0%b3%87/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಬೇಕು: ಸಮಾನ ರಸ್ತೆ ಬಳಕೆ ಕಾಯ್ದೆ</title>
		<link>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ac%e0%b3%87%e0%b2%95%e0%b3%81-%e0%b2%b8%e0%b2%ae%e0%b2%be%e0%b2%a8-%e0%b2%b0%e0%b2%b8%e0%b3%8d%e0%b2%a4%e0%b3%86-%e0%b2%ac%e0%b2%b3%e0%b2%95%e0%b3%86-%e0%b2%95%e0%b2%be%e0%b2%af%e0%b3%8d/</link>
					<comments>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ac%e0%b3%87%e0%b2%95%e0%b3%81-%e0%b2%b8%e0%b2%ae%e0%b2%be%e0%b2%a8-%e0%b2%b0%e0%b2%b8%e0%b3%8d%e0%b2%a4%e0%b3%86-%e0%b2%ac%e0%b2%b3%e0%b2%95%e0%b3%86-%e0%b2%95%e0%b2%be%e0%b2%af%e0%b3%8d/#respond</comments>
		
		<dc:creator><![CDATA[admin]]></dc:creator>
		<pubDate>Thu, 12 Oct 2006 15:43:43 +0000</pubDate>
				<category><![CDATA[ಬೇಳೂರು ಸುದರ್ಶನ ಅವರ ಅಂಕಣ]]></category>
		<guid isPermaLink="false">http://localhost/vishwakannada/?p=308</guid>

					<description><![CDATA[<h3>- ಬೇಳೂರು ಸುದರ್ಶನ</h3>
<p>ರಸ್ತೆಗಳು ಕೇವಲ ಪೆಟ್ರೋಲ್ ಚಾಲಿತ ವಾಹನಗಳ ಆಸ್ತಿಯಲ್ಲ ಎಂಬುದನ್ನು ಕಾನೂನೂ ಮರೆತಿದೆ!</p>
<p>The post <a href="http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ac%e0%b3%87%e0%b2%95%e0%b3%81-%e0%b2%b8%e0%b2%ae%e0%b2%be%e0%b2%a8-%e0%b2%b0%e0%b2%b8%e0%b3%8d%e0%b2%a4%e0%b3%86-%e0%b2%ac%e0%b2%b3%e0%b2%95%e0%b3%86-%e0%b2%95%e0%b2%be%e0%b2%af%e0%b3%8d/">ಬೇಕು: ಸಮಾನ ರಸ್ತೆ ಬಳಕೆ ಕಾಯ್ದೆ</a> first appeared on <a href="http://vishvakannada.com">Vishva Kannada</a>.</p>]]></description>
										<content:encoded><![CDATA[<h3>&#8211; ಬೇಳೂರು ಸುದರ್ಶನ</h3>
<p>ರಸ್ತೆಗಳು ಕೇವಲ ಪೆಟ್ರೋಲ್ ಚಾಲಿತ ವಾಹನಗಳ ಆಸ್ತಿಯಲ್ಲ ಎಂಬುದನ್ನು ಕಾನೂನೂ ಮರೆತಿದೆ!<br />
ಅಕ್ಟೋಬರ್ ೪ರಂದು ಕರ್ನಾಟಕ ಬಂದ್ ಆಗಿದ್ದಾಗ ಪತ್ರಿಕೆಗಳಲ್ಲಿ  ಟಾಂಗಾ ಸವಾರಿಯ ಚಿತ್ರಗಳು ರಾರಾಜಿಸಿದವು. ನಾಗರಿಕರಿಗೆ ಟಾಂಗಾಗಳು ಎಷ್ಟು ನೆರವಾದವು ಎಂದು ಪ್ಯಾರಾಗಟ್ಟಳೆ ಬರೆದವು. ಟೆಲಿವಿಜನ್ ವಾಹಿನಿಗಳಲ್ಲೂ ಟಾಂಗಾಗಳು ಕಾಣಿಸಿಕೊಂಡವು.</p>
<p>ಮತ್ತೆ ಈ ಟಾಂಗಾಗಳು ಕಾಣಿಸಿಕೊಳ್ಳುವುದು ಮುಂದಿನ ಬಂದ್ ಹೊತ್ತಿಗೇ. ಅಲ್ಲಿಯವರೆಗೆ ಅವು ಮತ್ತೆ ಬಸ್ಸು, ಕಾರು, ಲಾರಿ, ಬೈಕುಗಳ ಅಬ್ಬರದಲ್ಲಿ ಹೇಗೋ ಜಾಗ ಮಾಡಿಕೊಂಡು ಸಾಗಬೇಕು. ಟಾಂಗಾ ಬಾಡಿಗೆಯನ್ನಷ್ಟೇ ನೀಡುವ `ಖರೀದಿ ಸಾಮರ್ಥ್ಯ&#8217; ಇರುವವರು ಮಾತ್ರವೇ  ಟಾಂಗಾಗಳಲ್ಲಿ  ಸಂಚರಿಸುತ್ತಾರೆ. ಬೆಂಗಳೂರಿನಲ್ಲಿ ತರಕಾರಿಯಿಂದ ಹಿಡಿದು, ಉದ್ದುದ್ದದ ಕಬ್ಬಿಣದ ಕಂಬಿಗಳವರೆಗೆ ಹಲವು ಸರಕುಗಳನ್ನು  ಸಾಗಿಸಲು ಟಾಂಗಾ ಬಳಸುತ್ತಾರೆ. ಉಳಿದಂತೆ ಟಾಂಗಾಗಳದ್ದು ನೀರಸ ಬದುಕು.</p>
<p>ನಿನ್ನೆಯಷ್ಟೇ `ದಿ ಹಿಂದೂ&#8217; ಪತ್ರಿಕೆಯಲ್ಲಿ ದಿಲ್ಲಿಯ ಟಾಂಗಾವಾಲಾಗಳ ಬಗ್ಗೆ ಮನ ಕರಗುವ ಲೇಖನ ಬಂದಿದೆ. ಟಾಂಗಾವಾಲಾಗಳು ಹೇಗೆ ಲಂಚ ಕೊಟ್ಟೂ ದಂಡವನ್ನೂ ಕಕ್ಕುತ್ತಾರೆ ಎಂಬ ಚಿತ್ರಣ ಈ ಲೇಖನದಲ್ಲಿದೆ.<br />
ಅದಿರಲಿ, ಈಗ ಬೆಂಗಳೂರಿನಲ್ಲಿ ಆಟೋರಿಕ್ಷಾಗಳಿಗೆ ಎಡ ಬದಿಯಲ್ಲಿ (ಒನ್ವೇಗಳಲ್ಲಿ ಎರಡೂ ಬದಿಗಳಲ್ಲಿ) ಪ್ರತ್ಯೇಕ ಸಾಲುಗಳನ್ನು ಮಾಡಲಾಗಿದೆ. ಸಂಜೆಯಾಯಿತೆಂದರೆ ಪೊಲೀಸರು ಈ ಸಾಲುಗಳಿಗೆ ಆಟೋರಿಕ್ಷಾಗಳನ್ನು ದಬ್ಬುತ್ತಿರುವ ದೃಶ್ಯ ಸಾಮಾನ್ಯ. ಆಟೋ ಚಾಲಕರು ಯಾವುದೋ ಅಪರಾಧ ಮಾಡಿದವರ ಹಾಗೆ ಕಮಕ್ ಕಿಮಕ್ ಎನ್ನದೆ ಈ ಸಾಲುಗಳಲ್ಲಿ ಸೇರಿಹೋಗುತ್ತಾರೆ. ಮುಂದಿನ ಆಟೋರಿಕ್ಷಾದ ವೇಗ ಆಮೆಗತಿಯಲ್ಲಿದ್ದರಂತೂ ಮುಗಿದೇ ಹೋಯಿತು. ಬೇಗ ಬಸ್ಸು  &#8211; ರೈಲು ಹಿಡಿಯುವುದಕ್ಕೆ ಆಟೋದಲ್ಲಿ ಕುಳಿತವರು ಮೈ ಪರಚಿಕೊಳ್ಳಬೇಕು. ಆಸ್ಪತ್ರೆಗೆ, ಶಾಲೆಗೆ ಹೋಗುವವರು,  ಎಲ್ಲರೂ ಹೀಗೆ ಆಟೋ ಸಾಲು ನಿರ್ಬಂಧಕ್ಕೆ ತುತ್ತಾಗುತ್ತಿರುವ ಪ್ರಜೆಗಳು.</p>
<p>ಕೆಲ ವರ್ಷಗಳ ಹಿಂದೆ ಬೈಸಿಕಲ್  ಓಡಿಸುವವರಿಗೆಂದೇ ಪ್ರತ್ಯೇಕ ಸಾಲುಗಳನ್ನು ಆಗಿನ ಅಧಿಕಾರಿ ಸಾಂಗ್ಲಿಯಾನಾ ರೂಪಿಸಿದ್ದರು.  ಕೆಲವೆಡೆ ಬೈಸಿಕಲ್ಗಳನ್ನೇ ನಿಷೇಧಿಸಿದ್ದರು! ಈಗ ಆಟೋಗಳಿಗೆ ಪ್ರತ್ಯೇಕ ಸಾಲಿನ ನೂತನ ಯೋಜನೆ ಜಾರಿಗೆ ಬಂದಿದೆ.  ಎಲ್ಲರಿಗೂ ಸಾಧನೆಯ ಗರಿ ಸಿಕ್ಕಿಸಿಕೊಳ್ಳುವ ತವಕ. ಸಾಮಾನ್ಯರು ಬೇಕಾದರೆ ನೆಗೆದುಬೀಳಲಿ ಎಂಬ ಧಿಮಾಕು.</p>
<p>ನೀವು  ಕೆ.ಆರ್. ಮಾರುಕಟ್ಟೆಗೆ ಹೋದರೆ ಆಟೋ, ಟಾಂಗಾ, ಟ್ರಕ್ಕುಗಳು, ಸಿಟಿಬಸ್ಸುಗಳ ವೈವಿಧ್ಯಮಯ  ಮಿಶ್ರಣದಲ್ಲಿ ಸಿಕ್ಕಿಕೊಳ್ಳುತ್ತೀರಿ. ನಿಜಭಾರತ ಇರುವುದು ಇಲ್ಲೇ ಎಂಬುದು ಅರಿವಾಗುತ್ತದೆ.  ಇಂಥ ಬಹುವಾಹನಗಳನ್ನು ಹೊರುವ ಸಾಮರ್ಥ್ಯ ರಸ್ತೆಗೆ ಇಲ್ಲವೇ ಇಲ್ಲ. ಈ ರಸ್ತೆಗಳಂತೂ ನಿಜವಾಗಿಯೂ ದರಿದ್ರವಾಗಿವೆ.  ಯಾಕೆಂದರೆ ರಸ್ತೆಗಳನ್ನು ನಿರ್ಮಿಸುವುದು ಟಯರುಗಳ ಒತ್ತಡದ ಮತ್ತು ತಿಕ್ಕಾಟದ (ಫ್ರಿಕ್ಷನ್) ಆಧಾರದ ಮೇಲೆಯೇ ಹೊರತು, ಎತ್ತಿನ ಬಂಡಿಯ ಕಬ್ಬಿಣದ ಗಾಲಿಯನ್ನಲ್ಲ!</p>
<p>ಟಾಂಗಾ, ಆಟೋರಿಕ್ಷಾ ಮತ್ತು ಬೈಸಿಕಲ್ಗಳು ಎಂದರೆ  ಎರಡನೇ ದರ್ಜೆಯ ನಾಗರಿಕರ ಸಾಧನಗಳು ಎಂಬಂತೆ ನಮ್ಮ ಪೊಲೀಸರು ವರ್ತಿಸುತ್ತಾರೆ. ಇನ್ನು ಸಿಲಿಕಾನ್ ಸಿಟಿಯ ಬೈಕ್ ಸವಾರರಂತೂ ಫುಟ್ಪಾತ್ನಿಂದ ಹಿಡಿದು ಎಲ್ಲ ಖಾಲಿ ಜಾಗದಲ್ಲೂ  ತೂರಿಕೊಳ್ಳುತ್ತ ತಮ್ಮ ಶಿಕ್ಷಣಮಟ್ಟವನ್ನು ತೋರಿಸಿಕೊಳ್ಳುತ್ತಿದ್ದಾರೆ.   ರಸ್ತೆ ತುಂಬಿ ಫುಟ್ಪಾತ್ಗೂ ಚೆಲ್ಲಿಕೊಳ್ಳುವ ಈ ವಾಹನದಟ್ಟಣೆಯಲ್ಲಿ ನಡೆದಾಡುವ ನಾಗರಿಕರಂತೂ ಜೀವವನ್ನು ಕೈಯಲ್ಲೇ ಹಿಡಿದುಕೊಳ್ಳಬೇಕಿದೆ.<br />
ಅದಕ್ಕೇ ಈಗ ಬೇಕಿದೆ, ಸಮಾನ ರಸ್ತೆ ಹಕ್ಕಿನ  ಕಾಯ್ದೆ. ಪರಂಪರಾಗತ ಎತ್ತಿನ ಬಂಡಿಗಳಿಂದ ಹಿಡಿದು ಇಂದಿನ ಮಧ್ಯಮವರ್ಗಕ್ಕೆ ಎಟಕುವ ಆಟೋರಿಕ್ಷಾದವರೆಗೆ ಎಲ್ಲವೂ  ಸಂಚಾರದ ವಿವಿಧ ಮಾಧ್ಯಮಗಳೇ. ಅವುಗಳಲ್ಲಿ ಕಡಿಮೆ ವೇಗದ್ದು, ಅತಿವೇಗದ್ದು ಎಂದು ವಿಂಗಡಿಸುವ ಕಾನೂನೇ ತಪ್ಪು. ದಟ್ಟಣೆ ಇರುವಾಗ ವೋಲ್ವೋ ಕೂಡಾ ವೇಗಮಿತಿಯಲ್ಲಿ ಸಾಗುವುದಿಲ್ಲವೆ? ರಸ್ತೆಗಳಲ್ಲಿ ಎಲ್ಲ ಬಗೆಯ ವಾಹನಗಳಿಗೂ ಸಮಾನ ಅವಕಾಶ ಇರಬೇಕು. ಕೇವಲ ಕಾರಿನಲ್ಲಿ ಹೋಗುವವರಿಗೆ ಮಾತ್ರವೇ ಅಲ್ಲ, ಆಟೋದಲ್ಲಿ ಹೋಗುವರಿಗೂ  ತುರ್ತು ಇರುತ್ತದೆ.  ಸೈಕಲ್ ತುಳಿಯುವವನಿಗೂ ಅವನದ್ದೇ ಆದ ತುರ್ತು ಕೆಲಸ ಇರುತ್ತದೆ.</p>
<p>ವಿದೇಶಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಬೈಸಿಕಲ್ ಓಡಿಸುವವರಿಗೆ  ಮತ್ತು ಎಲ್ಲ ಬಗೆಯ ವಾಹನಗಳನ್ನು ಬಳಸುವವರಿಗೆ ರಸ್ತೆಯ ಮೇಲೆ ಸಮಾನ ಹಕ್ಕುಗಳಿವೆ ಇವೆ ಎಂದು ಕಾನ್ಸಾಸ್ನ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.  ಬೈಸಿಕಲ್ ಸವಾರರಿಗೂ ಸಮಾನ ಅವಕಾಶ ಕೊಡಿ ಎಂದು ಫ್ಲೋರಿಡಾದ ಪೊಲೀಸರು ನಾಗರಿಕರಿಗೆ ಮನವಿ ಮಾಡಿಕೊಂಡಿದ್ದಾರೆ. ಸ್ಕಾಟ್ಲ್ಯಾಂಡಿನಲ್ಲಂತೂ ಬೈಸಿಕಲ್ ಸವಾರರು ಹಾಗೂ ಉಳಿದೆಲ್ಲ ವಾಹನ ಬಳಕೆದಾರರ ಬಗ್ಗೆ ದೊಡ್ಡ ಸಮೀಕ್ಷೆಯೇ ನಡೆದಿದೆ. ಈ ವರದಿಯಲ್ಲೂ ಕಡಿಮೆ ವೇಗದ ವಾಹನಗಳಿಗೆ ಕೂಡಾ ರಸ್ತೆಯ ಮೇಲೆ ಹಕ್ಕಿದೆ ಎಂಬ ಮಾತು ಖಚಿತವಾಗಿ ಮೂಡಿದೆ.</p>
<p>ನಮ್ಮ ದೇಶದಲ್ಲಿ ಸ್ವರ್ಣಚತುಷ್ಕೋನದ ಹೆಸರಿನಲ್ಲಿ ದೇಶದ ಮಹಾನಗರಗಳನ್ನು ಜೋಡಿಸುವ ಯೋಜನೆ ಆರಂಭವಾಗಿ ಯು ಪಿ ಎ ಸರ್ಕಾರಕ್ಕೆ ಸಿಕ್ಕಿಕೊಂಡು ನಲುಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಯಾವಾಗಲೂ ಚರ್ಚೆಯಾಗುತ್ತದೆ. ರೈಲುಮಾರ್ಗಗಳೇ ಇಲ್ಲದ ಬಗ್ಗೆ ಸಾಕಷ್ಟು ಚರ್ಚೆಯೂ ನಡೆಯುತ್ತದೆ. ಡೆಕ್ಕನ್ ಏರ್ವೇಸ್ ಪ್ರಯಾಣಿಕರು  ಪರದಾಡಿದ ಬಗ್ಗೆ ಮುಖಪುಟದಲ್ಲಿ ಬಾಕ್ಸ್ ಐಟಂ ಬರುತ್ತದೆ. ಮೆಟ್ರೋ ಬೇಕೇ ಬೇಡವೇಎಂಬ ಬಗ್ಗೆ ಅಂಗಡಿ ಮಾಲೀಕರು ನಡೆಸಿದ ಮುಷ್ಕರ, ಮಲ್ಲೇಶ್ವರ ಅಂಡರ್ಪಾಸ್ನ ಔಚಿತ್ಯದ ಬಗ್ಗೆ ನಡೆಯುವ ಧರಣಿ ಎಲ್ಲವೂ ಸಾಕಷ್ಟು ಪ್ರಚಾರ ಪಡೆಯುತ್ತವೆ. ಶಾಸಕರು, ಸಂಸತ್ ಸದಸ್ಯರು ಈ ಬಗ್ಗೆ ನೂರಾರು ಹೇಳಿಕೆಗಳನ್ನು ನೀಡಿದ್ದಾರೆ.<br />
ಆದರೆ ಮಲ್ಲೇಶ್ವರದ ಟಾಂಗಾ ಸ್ಟಾಂಡಿನಲ್ಲಿ ಕಂದಿಹೋದ ಮುಖಗಳನ್ನು ಗಮನಿಸುವವರಾರು? ಆಟೋದಲ್ಲಿ ದುಗುಡ ಹೊತ್ತು ಕುಳಿತಿರುವವರ ಬಗ್ಗೆ ಹೋರಾಡುವುದಿರಲಿ, ಬರೆಯುವವರಾರು? ಬೈಸಿಕಲ್ ಸವಾರಿ ಮಾಡುವುದೇ  ಅವಮಾನಕರ ಎಂಬಂತೆ ಬೈಕ್ ಸವಾರರು ದುರುಗುಟ್ಟಿ ನೋಡುವ ವರ್ತನೆಯನ್ನು ಖಂಡಿಸುವವರಾರು? ಫುಟ್ಪಾತಿನ ಮೇಲೆ ಬೇಕಾಬಿಟ್ಟಿ ಹಾಯುವ ಶಿಕ್ಷಿತರನ್ನು ಶಿಕ್ಷಿಸುವವರಾರು?</p>
<p>(ಕೃಪೆ: ಹೊಸದಿಗಂತ)</p><p>The post <a href="http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ac%e0%b3%87%e0%b2%95%e0%b3%81-%e0%b2%b8%e0%b2%ae%e0%b2%be%e0%b2%a8-%e0%b2%b0%e0%b2%b8%e0%b3%8d%e0%b2%a4%e0%b3%86-%e0%b2%ac%e0%b2%b3%e0%b2%95%e0%b3%86-%e0%b2%95%e0%b2%be%e0%b2%af%e0%b3%8d/">ಬೇಕು: ಸಮಾನ ರಸ್ತೆ ಬಳಕೆ ಕಾಯ್ದೆ</a> first appeared on <a href="http://vishvakannada.com">Vishva Kannada</a>.</p>]]></content:encoded>
					
					<wfw:commentRss>http://vishvakannada.com/%e0%b2%ac%e0%b3%87%e0%b2%b3%e0%b3%82%e0%b2%b0%e0%b3%81-%e0%b2%b8%e0%b3%81%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%b5%e0%b2%b0-%e0%b2%85%e0%b2%82%e0%b2%95%e0%b2%a3/%e0%b2%ac%e0%b3%87%e0%b2%95%e0%b3%81-%e0%b2%b8%e0%b2%ae%e0%b2%be%e0%b2%a8-%e0%b2%b0%e0%b2%b8%e0%b3%8d%e0%b2%a4%e0%b3%86-%e0%b2%ac%e0%b2%b3%e0%b2%95%e0%b3%86-%e0%b2%95%e0%b2%be%e0%b2%af%e0%b3%8d/feed/</wfw:commentRss>
			<slash:comments>0</slash:comments>
		
		
			</item>
	</channel>
</rss>

<!--
Performance optimized by W3 Total Cache. Learn more: https://www.boldgrid.com/w3-total-cache/?utm_source=w3tc&utm_medium=footer_comment&utm_campaign=free_plugin

Page Caching using Disk: Enhanced 

Served from: vishvakannada.com @ 2026-07-30 07:50:34 by W3 Total Cache
-->