Press "Enter" to skip to content

Posts published in “ಕಥೆ”

ಕಥೆ, ನೀಳ್ಗತೆ, ಚಿಕ್ಕ ಕಥೆ, ಇತ್ಯಾದಿ

ಶರಣಾಗತ

- ಕೆ. ತ್ರಿವೇಣಿ ಶ್ರೀನಿವಾಸ ರಾವ್

ಮಧ್ಯಾಹ್ನದ ಸುಡು ಸುಡು ಬಿಸಿಲು ಭೂಮಿಯನ್ನು ನಿರ್ದಯವಾಗಿ ಸುಡುತ್ತಿತ್ತು. ಕೊರಳಿನ ಸುತ್ತ ಹರಿಯುತ್ತಿದ್ದ ಬೆವರನ್ನು ಕರವಸ್ತ್ರದಿಂದ ಒರೆಸಿಕೊಳ್ಳುತ್ತಾ ಗೇಟು ತೆರೆದು ಕಾಂಪೊಂಡಿನೊಳಗೆ ಪ್ರವೇಶಿಸಿದ ರಾಜೀವ.

ಒಂದು ಆರ್ಡಿನರಿ ಲವ್‌ಸ್ಟೋರಿ

- ಬೇಳೂರು ಸುದರ್ಶನ

ಸೀಟಿಲ್ವಾ ಎಂದು ಆವಳು ನನ್ನ ಕೇಳುವ ಹೊತ್ತಿಗಾಗಲೇ ನಾನು ಆ ಬಸ್ಸಿನ ಡ್ರೈವರ್ ಬಾಗಿಲಿನ ಮೂಲಕ ಒಳಗೆ ಬಂದು ಇಂಜಿನ್ ಬಳಿ ಇದ್ದ ಖಾಲಿ ಸೀಟಿನಲ್ಲಿ ಬ್ಯಾಗು ಬಿಸಾಕಿದ್ದೆ. ಬಳ್ಳಾರಿಯ ಆ ತಣ್ಣನೆ ರಾತ್ರಿಯಲ್ಲಿ ಜನ ಪುತುಪುತು ಬಸ್ಸಿನೊಳಗೆ ಹೊರಗೆ ಅಡ್ಡಾಡುತ್ತ ಗಾಳಿಯನ್ನು ಬಿಸಿ ಮಾಡುತ್ತಿದ್ದರು. ಇಲ್ಲಿ ಅವಳು ತನ್ನೊಳಗೇ ಏನೋ ಯೋಚಿಸುತ್ತ ವಿಮನಸ್ಕಳಾಗಿ ನಿಂತಿದ್ದಳು. ನಾನು ಅವಳ ಕೈ ಹಿಡಿದು ಒಳಗೆ ಎಳೆದುಕೊಂಡೆ. ಇಡೀ ದಿನ ಅತ್ತು ಅತ್ತು ಅವಳ ಕಣ್ಣುಗಳು ಊದಿಕೊಂಡಿದ್ದರೂ ಎಷ್ಟೆಲ್ಲ ಛಂದ ಇದ್ದಾಳಲ್ಲ ಎಂದೆನ್ನಿಸಿ ನನಗೆ ಅವಳನ್ನು ಅಲ್ಲೇ ಭುಜಕ್ಕೆ ಒರಗಿಸಿಕೊಳ್ಳಬೇಕು ಎನಿಸಿತು. ಆದರೆ ಕೊಳಕು ಕಾಡ್ರಾ ಧರಿಸಿ ಅಂಡಲೆಯುವ ನಾನು ಯಾರು, ಡಿಗ್ರಿ ಮುಗಿಸಿ ಇಲ್ಲಿ ಅವನನ್ನು ಪ್ರೀತಿಸುತ್ತ ಇರೋ ಅವಳೆಲ್ಲಿ .....

ನಿರ್ಧಾರ

- ಗಿರೀಶ್ ಜಮದಗ್ನಿ

ಊರಿನ ಪ್ರಮುಖ ಬಡಾವಣೆ. ರಾತ್ರಿ ಸಮಯ ಹನ್ನೊಂದು ಘಂಟೆ. ಅಮಾವಾಸ್ಯೆಗೆ ಹತ್ತಿರದ ದಿನಗಳು. ನಕ್ಷತ್ರಗಳೂ ಕೂಡ ಮೋಡಗಳ ಹಿಂದೆ ಕಣ್ಮರೆಯಾಗಿದ್ದ ರಾತ್ರಿ. ಬೀದಿ ನಾಯಿಗಳೂ ಸಹ ಬೊಗೊಳೋದು ಬಿಟ್ಟು ಎಲ್ಲೋ ಓಡಿ ಹೋಗಿದ್ದವು. ಬೀದಿ ದೀಪದ ಕಂಬಗಳೂ ಕೂಡ ಎಂದಿನಂತೆ ಬೆಳಕು ನೀಡದೆ ಬೆತ್ತಲೆಯಾಗಿ ನಿಂತಿದ್ದವು. ಎಲ್ಲ ಕಡೆ ಕತ್ತಲೆ. ಊರಿನ ಬೀದಿಯಲ್ಲಿ, ಸ್ಮಶಾನ ಮೌನ.

ಮಾಟಗಾತಿ

ಆನಂದ
[ನ್ನಡ ಸಾಹಿತ್ಯ ಪರಂಪರೆಯಲ್ಲಿ ಸಣ್ಣ ಕತೆಗೊಂದು ಮಹತ್ವ ತಂದಕೊಟ್ಟವರಲ್ಲಿ ಆನಂದ ಕೂಡ ಒಬ್ಬರು. ೧೯೩೦ರ ಸಂದರ್ಭದಲ್ಲೇ ಕಥಾಲಹರಿ ಹರಿಸಿದ್ದ ಆನಂದರ ನಿಜ ಹೆಸರು ಅಜ್ಜಂಪುರದ ಸೀತಾರಾಮ. `ನಾನು ಕೊಂದ ಹುಡುಗಿ' ಅವರ ಜನಪ್ರಿಯತೆಗೆ ಸಾಕ್ಷಿಯಾದ ಕತೆ. `ಮಾಟಗಾತಿ' ಮತ್ತೊಂದು ಅಂಥ ಹಾದಿಯಲ್ಲಿನ ಕತೆ. ಮಾಸ್ತಿ ಅವರು ಆನಂದರನ್ನು ಕುರಿತು ``----ದೂರದ ಗುರಿಯ ಮೇಲೆ ಕಣ್ಣಿಟ್ಟು ದೊಡ್ಡ ರೀತಿಯಲ್ಲಿ ಮುಂದೆ ನಡೆಯಿರಿ---" ಎಂದಿದ್ದರು. ಅಂತೇ ದೂರದ ಗುರಿಯನ್ನು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೈ ಆಡಿಸುತ್ತ ಸಮೀಪಿಸಿದರು. ಏಳು ಕಥಾ ಸಂಕಲನ, ಮೂರು ನಾಟಕಗಳು, ಏಳು ಅನುವಾದಿತ ಕೃತಿಗಳು ಹಾಗು ಇತರ ನಾಲ್ಕು ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದ ಆನಂದರು ಮುಖ್ಯವಾಗಿ ಕತೆಗಾರರಾಗಿ ನಮ್ಮ ನೆನಪಲ್ಲಿ ಉಳಿದಿದ್ದಾರೆ. ಹಿರಿ ಕತೆಗಾರರ ಅತ್ಯುತ್ತಮ ಕತೆಗಳನ್ನು ಓದುಕರು ಪ್ರಕಟಿಸಿ ಎಂದು ಕೇಳಿದ್ದಾರೆ. ಆನಂದರ `ನಾನು ಕೊಂದ ಹುಡುಗಿ' ಸಾಕಷ್ಟು ದೀರ್ಘವಾದ ಕತೆ ಆದ್ದರಿಂದ ಅದನ್ನು ಇಲ್ಲಿ ಪ್ರಕಟಿಸದೆ ಅಷ್ಟೇ ಮಹತ್ವದ `ಮಾಟಗಾತಿ' ಕೊಡುತ್ತಿದ್ದೇವೆ. ಇದು ನಿಮಗೆ ಪ್ರಿಯವಾಗಬಹುದೆಂದು ಭಾವಿಸುತ್ತೇವೆ. -ಸಂಪಾದಕ]

ಡಿಲೇವಿಷನ್

ನಾಗೇಶ ಹೆಗಡೆ


ದೈತ್ಯಾಕಾರದ ಸಿಲಿಕೇಟ್ ಪದರಗಳಲ್ಲಿ ತಲೆ ಸಿಲುಕಿಕೊಂಡು ಬೆಳಕಿನ ಪರಿವಹನವನ್ನು ವೀಕ್ಷಿಸುತ್ತಿದ್ದಾಗಲೇ ಡೆಸ್ಕಿನ ಮೇಲಿದ್ದ ಫೋನ್ ಕಿರುಚಲಾರಂಭಿಸಿತ್ತು. ಒಸರುತ್ತಿದ್ದ ಬೆವರೊರೆಸಿಕೊಳ್ಳುತ್ತ ಡಾಕ್ಟರ್ ಶೇಖರ್ ರಿಸೀವರಿಗೆ ಕಿವಿಕೊಟ್ಟು ಹಲೋ ಎಂದ.