ದೇಶದ ಹೆಸರಾಂತ ಕೃಷಿ ಚಿಂತಕ ಪ್ರೊ. ದೇವೀಂದ್ರ ಶರ್ಮಾ ಈಚೆಗೆ ಬೆಂಗಳೂರಿನ ಕೃಷಿ ಎಂಜಿನಿಯರ್ಗಳ ಸಂಸ್ಥೆಯಲ್ಲಿ ಹೇಳಿದ ಮಾತುಗಳನ್ನು ಇಲ್ಲಿ ಕೊಡಲಾಗುತ್ತಿದೆ. ಇದು ಶಬ್ದಶಃ ತರ್ಜುಮೆಯಲ್ಲ. ಅವರ ಭಾಷಣದ ಸಂದರ್ಭದಲ್ಲಿ ಬರೆದಿಟ್ಟುಕೊಂಡ ಟಿಪ್ಪಣಿಯನ್ನು ಆಧರಿಸಿ ಅಂಕಿ ಅಂಶ ಕುರಿತು ಸಂಶಯ ಎದ್ದಾಗ ಶರ್ಮಾರ ಪ್ರಕಟಿತ ಲೇಖನಗಳನ್ನು ರೆಫರ್ ಮಾಡಿ (ಉದಾ: www.countercurrents.org/glo-crop.htm) ಸಿದ್ಧಪಡಿಸಿದ ಕನ್ನಡ ಲೇಖನ ಇದು. ಪಾಶ್ಚಾತ್ಯ ತಜ್ಞರು ಹೇಳಿದ್ದೇ ವೇದವಾಕ್ಯ ಎಂಬಂತೆ ನಮ್ಮ ತಜ್ಞರು ನಮಗೆ ಅದನ್ನೇ ಬೋಧಿಸುತ್ತ ನಮ್ಮ ರೈತರ ಹಿತವನ್ನು ಹೇಗೆ ಬಲಿಗೊಡುತ್ತಿದ್ದಾರೆ ಎಂಬ ವಿಚಾರ ಈ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದ ಚಿಂತನೆಗೆ ಸೂಕ್ತವಾದೀತು.
ಬೆಂಗಳೂರು, ಆಗಸ್ಟ್ ೨, ೨೦೦೭: ಸರಕಾರೇತರ ಸಂಸ್ಥೆ ಪರಿಸರದ ಈಶ್ವರಪ್ರಸಾದರಿಗೆ ಕೆಂಪೇಗೌಡ ಪ್ರಶಸ್ತಿ-೨೦೦೭ ನೀಡಲಾಯಿತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಪ್ರಶಸ್ತಿಯನ್ನು ಹಲವು ವರ್ಷಗಳಿಂದ ನೀಡುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಈಶ್ವರಪ್ರಸಾದರಿಗೆ ಈ ವರ್ಷ ಪರಿಸರ ವಿಭಾಗದಲ್ಲಿ ಈ ಪ್ರಶಸ್ತಿ ನೀಡಲಾಗಿದೆ.