Press "Enter" to skip to content

Posts published in July 2007

ನಾವೂ ಹೀಗೆ ಮಾಡಬೇಕು

ಚೀನಾದಲ್ಲಿ ಒಬ್ಬ ಲಾಯರ್‍ ಮೆಕ್‌ಡೊನಾಲ್ಡ್ ಕಂಪೆನಿಯ ಮೇಲೆ ಕೇಸು ಹಾಕಿರುವುದು ವರದಿಯಾಗಿದೆ. ಮೆಕ್‌ಡೊನಾಲ್ಡ್‌ನವರು ಬಿಸಿಯಾದ ಕಾಫಿ ನೀಡುವುದರ ವಿರುದ್ಧ, ಪ್ರಾಣಿ ಮಾಂಸದಿಂದ ತಯಾರಿಸಿದ ಎಣ್ಣೆಯನ್ನು ಬಳಸುವುದರ ವಿರುದ್ಧ ಎಲ್ಲ ಈ ಹಿಂದೆ ಕೇಸುಗಳು ದಾಖಲಾಗಿದ್ದವು. ಆದರೆ ಈ ಕೇಸು ಸ್ವಲ್ಪ ವಿಶೇಷವಾಗಿದೆ. ಚೀನಾದ ಭಾಷೆಯನ್ನು ಬಳಸದಿರುವುದರ ವಿರುದ್ಧ ಈ ಕೇಸು ಹಾಕಲಾಗಿದೆ.

ಅವಳ ನೆನಪು

- ಗುರುಮೂರ್ತಿ ಬಬ್ಬಿಗದ್ದೆ, ಹಾಂಗ್ ಕಾಂಗ್

ಬಿಟ್ಟು ಬಂದೆ ಬಿಟ್ಟು ಬಂದೆ ನಮ್ಮ ನೆಲವನು

ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

ಬೆಂಗಳೂರು, ಜುಲೈ ೨೦- ‘ಮುಂಗಾರುಮಳೆ’ ೨೦೦೬-೦೭ನೇ ಸಾಲಿನ ರಾಜ್ಯ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಹಿರಿಯ ನಟಿ ಶ್ರೀಮತಿ ಎಂ.ಎನ್. ಲಕ್ಷ್ಮೀದೇವಿ ಅವರು ೨೦೦೬-೦೭ನೇ ಸಾಲಿನ ಡಾ. ರಾಜ್‌ಕುಮಾರ್ ಪ್ರಶಸ್ತಿಗೆ ಭಾಜನರಾಗಿ’ದ್ದಾರೆ.

ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ

ಬೀದರ್‌ನಲ್ಲಿ ಆಗಸ್ಟ್ ೩ ರಿಂದ ೯ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ ಪ್ರಾರಂಭ

ಬೆಂಗಳೂರು, ಜುಲೈ ೧೩:- ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ೯ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೆಳನವನ್ನು ಬಿ.ವಿ.ಬಿ. ಮಹಾವಿದ್ಯಾಲಯ ಬೀದರ್‌ನಲ್ಲಿ ಬೀದರ್ ವಿಜ್ಞಾನ ಕೇಂದ್ರದ ಸ್ಥಳೀಯ ಸಂಘಟನೆಯಲ್ಲಿ ಆಗಸ್ಟ್ ೩ ರಿಂದ ೫ ರವರೆಗೆ ಏರ್ಪಡಿಸಲಾಗಿದೆ.

ಸ್ಫೂರ್ತಿವನ: ಹೊಸ ಬಗೆಯ ಸಾಫ್ಟ್‌ವೇರ್ ಪಾರ್ಕ್?

- ನಾಗೇಶ ಹೆಗಡೆ

ಬೆಂಗಳೂರಿನಲ್ಲಿ ಒಂದು ‘ನೆನಪಿನ ವನ’ ಸೃಷ್ಟಿಯಾಗುತ್ತಿದೆ. ವಿಸ್ತೀರ್ಣದಲ್ಲಿ ಲಾಲ್‌ಬಾಗನ್ನೂ ಮೀರಿಸುವ ಇದು ಜನರೇ ನಿರ್ಮಿಸುವ ಉದ್ಯಾನವಾಗಲಿದೆ. ಬೆಂಗಳೂರಿನ ಪರಿಸರ ಹದಗೆಡಲು ಸಾಫ್ಟ್‌ವೇರ್ ಕಂಪನಿಗಳೇ ಕಾರಣ ಎಂಬ ಆಪಾದನೆಯನ್ನು ತುಸು ಮಟ್ಟಿಗಾದರೂ ತೊಡದು ಹಾಕುವ ನಿಟ್ಟಿನಲ್ಲಿ ಖ್ಯಾತ ಸಾಫ್ಟ್‌ವೇರ್ ಕಂಪನಿಯೊಂದರ ಉದ್ಯೋಗಿಗಳು ಸ್ವಯಂಸ್ಫೂರ್ತಿಯಿಂದ ಇಲ್ಲಿ ಗಿಡ ನೆಡಲು ಬಂದಿದ್ದಾರೆ. ಈ ಯತ್ನದ ಹಿಂದಿರುವ ಈಶ್ವರ್ ಪ್ರಸಾದ್ ಎಂಬ ಒಬ್ಬ ವ್ಯಕ್ತಿ, ಒಂದು ಶಕ್ತಿಯ ಪರಿಚಯ ಇಲ್ಲಿದೆ.